HomeUncategorizedದೇಶಪಾಂಡೆಯ ದ್ರೋಹ ಕೈಗೆ ಅರ್ಥವಾಗುತ್ತಿಲ್ಲ ಯಾಕೆ?

ದೇಶಪಾಂಡೆಯ ದ್ರೋಹ ಕೈಗೆ ಅರ್ಥವಾಗುತ್ತಿಲ್ಲ ಯಾಕೆ?

- Advertisement -
- Advertisement -

ನಹುಷ |

ದೇಶಪಾಂಡೆಗೆ ವಯಸ್ಸಾಗಿದೆ… ದೀರ್ಘಕಾಲ ಅಧಿಕಾರ ಅನುಭವಿಸಿಯೂ ಆಗಿದೆ….. ಅವ್ರು ಶಿವರಾಮ ಹೆಬ್ಬಾರ್‍ಗೆ ಮಂತ್ರಿಗಿರಿ ಬಿಟ್ಟುಕೊಡೋದು ಚಲೋ… ಕಿರಿಯರಿಗೆ ಪ್ರೋತ್ಸಾಹಿಸುಬೇಕವ್ರು….” ಎಂದು ಮೂರ್ನಾಲ್ಕು ತಿಂಗಳ ಹಿಂದೊಂದು ದೇಶಾವರಿ ಹೇಳಿಕೆ ಒಗಾಯಿಸಿದ್ದರು ಆನಂದ ಅಸ್ನೋಟಿಕರ್. ಆಪರೇಷನ್ ಕಮಲದ ಸೆಳೆತಕ್ಕೆ ಸಿಲುಕಿ ಹೆಬ್ಬಾರ್ ತಕಧಿಮಿ ಕುಣಿಯುತ್ತಿದ್ದ ಕಾಲವದು.
ಈ ಪ್ರಹಸನದ ಬೆನ್ನಿಗೇ- ಅಂದರೆ ಲೋಕಸಭೆ ಇಲೆಕ್ಷನ್ ಘೋಷಣೆ ಒಂದೂವರೆ ವಾರವಷ್ಟೇ ಇದ್ದ ಹೊತ್ತಲ್ಲಿ ಬಿಜೆಪಿಯ ಅನಂತ್ಮಾಣಿ, ದೇಶಪಾಂಡೆಯೇ ತನ್ನ ಎದುರಾಳಿ ಆಗಬಹುದೆಂಬ ಆತಂಕದಲ್ಲಿ “ಮಂತ್ರಿ ದೇಶಪಾಂಡೆ ಅಂದ್ರೆ ಪರ್ಸೆಂಟೇಜ್ ಪಾಂಡೆ ಕಣ್ರೀ… ಹಳ್ಳೀಲಿ ಸರ್ಕಾರಿ ಬಾವಿ ತೆಗೆದ್ರೂ ಅದರ ಪರ್ಸೆಂಜೇಜು ದೇಶಪಾಂಡೆಗೆ ಹೋಗ್ತದೆ….!” ಎಂದು ಗಂಭೀರ ಆರೋಪ ಮಾಡಿದ್ದ.
ಈ ಇಬ್ಬರ ಟೀಕೆಯಲ್ಲಿ ದೇಶಪಾಂಡೆಯನ್ನು ಅಪಮಾನಕ್ಕೀಡು ಮಾಡುವಂಥದ್ದು ಯಾವುದು? ಸಾಕ್ಷಾತ್ ದೇಶಪಾಂಡೆ ಸಾಹೇಬರ ಪ್ರಕಾರ ಅಸ್ನೋಟಿಕರ್‍ನದೇ ಅಕ್ಷಮ್ಯ ಅಪರಾಧ. ಮುಗಿದ ಪಾರ್ಲಿಮೆಂಟ್ ಇಲೆಕ್ಷನ್‍ನಲ್ಲಿ ಅಸ್ನೋಟಿಕರ್‍ನ ಈ ಮಾತುಗಳನ್ನೇ ನೆಪಮಾಡಿಕೊಂಡು ಮೈತ್ರಿಕೂಟದ ಸೋಲಿಗೆ ಏನೆಲ್ಲಾ ಮಾಡಬಹುದೋ ಅದೆಲ್ಲಾ ದೇಶಪಾಂಡೆ ಮಾಡಿದ್ದಾರೆ. ಅಲ್ಲಿಗೆ ಸಮಯ ಸಾಧಕತನವನ್ನೇ ಸಿದ್ಧಾಂತ ಮಾಡಿಕೊಂಡಿರುವ ದೇಶಪಾಂಡೆಯ ದ್ರೋಹ-ದೋಖಾ ಬುದ್ಧಿ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ದಾಖಲಾಗಿ ಹೋಗಿದೆ!!
ಈ ಬಾರಿ ಕೈ ಸಿಂಬಾಲ್‍ನಲ್ಲಿ ಹರಿಪ್ರಸಾದ್, ಮ್ಯಾಗಿ, ಕೆ.ಎಚ್.ಗೌಡ, ಭೀಮಣ್ಣನಾಯ್ಕ… ಹೀಗೆ ಯಾರೇ ನಿಂತರೂ ಗೆಲ್ಲುವ ಅವಕಾಶ ಹೆಚ್ಚಿತ್ತು. ದೇಶಪಾಂಡೆ ಮತ್ತವನ ಮಗನ ಬಿಟ್ಟು ಕಾಂಗ್ರೆಸ್‍ನ ಎರಡನೇ ಸಾಲಿನ ಲೀಡರ್ ಯಾರಿಗಾದರೂ ಅಭ್ಯರ್ಥಿ ಮಾಡಿ, ದೇಶಪಾಂಡೆಯನ್ನು ಕಿತಾಪತಿ ಮಾಡದಂತೆ ಮೂಗುದಾರ ಹಾಕಿ ಕೂಡ್ರಿಸಿದ್ದರೆ ಅನಂತ್ಮಾಣಿಯನ್ನ ಸುಲಭವಾಗಿ ಮಾಜಿ ಮಾಡಬಹುದಿತ್ತು. ಅಷ್ಟೂ ದೊಡ್ಡಮಟ್ಟದಲ್ಲಿ ಮಾಣಿ ಬಗ್ಗೆ ಬೇಸರ-ಹೇಸಿಗೆ ಕ್ಷೇತ್ರದಲ್ಲಿ ಹೆಪ್ಪುಗಟ್ಟಿತ್ತು! ಆದರೆ ಹಾವು ಮುಂಗುಸಿಯಂತೆ ಕಿತ್ತಾಡುವ ಮ್ಯಾಗಿ-ದೇಶಪಾಂಡೆ ಒಂದಾಗಿ ನೆಲೆ-ಬೆಲೆಯೇ ಜಿಲ್ಲೆಯಲ್ಲಿ ಇಲ್ಲದ ಜೆಡಿಎಸ್‍ಗೆ ಕ್ಷೇತ್ರವನ್ನು ತಟ್ಟೆಯಲ್ಲಿಟ್ಟು ಕೊಟ್ಟಿದ್ದರು.
ಮ್ಯಾಗಿ ಮೈತ್ರಿಕೂಟದ ಪ್ರಚಾರಕ್ಕೆಂದು ಜಿಲ್ಲೆಗೆ ಒಂದು ಸಲವೂ ಬರಲಿಲ್ಲ. ದೇಶಪಾಂಡೆ ಮತದಾನಕ್ಕೆ ವಾರವಿರುವಾಗ ಕಾಟಾಚಾರಕ್ಕೆ ಬಂದವರು, ನಾಲ್ಕುದಿನ ಮೊದಲೇ ನಾಪತ್ತೆಯಾಗಿ ಹೋದರು. ಹೋದಲ್ಲೆಲ್ಲ ತನ್ನ ಶಿಷ್ಯರನ್ನು ರಹಸ್ಯವಾಗಿ ಕರೆದು ಅಸ್ನೋಟಿಕರ್ ಸೋಲಿಸಲು ‘ಆದೇಶ’ ಕೊಟ್ಟರು.
ಏಐಸಿಸಿ ಮಟ್ಟದಲ್ಲಿ ಪ್ರಭಾವವಿರುವ ಬಿ.ಕೆ.ಹರಿಪ್ರಸಾದ್, ಮಾರ್ಗರೆಟ್ ಆಳ್ವ, ಸಿದ್ದರಾಮಯ್ಯನಂಥವರೇ ಅದ್ಯಾಕೋ ದೇಶಪಾಂಡೆಯ ಈ ಸ್ವಭಾವ ಕಂಡೂ ಕಾಣದಂತಿದ್ದಾರೆ. ಬಸವರಾಜ ಹೊರಟ್ಟಿ ಹತ್ತಿರವೇ “ನಂಗೆ ರಾಜಕೀಯ ಸಾಕಾಗಿದೆ… ಪಕ್ಷ, ಸರ್ಕಾರ ನನ್ನ ಮೇಲೆ ಕ್ರಮ ಕೈಗೊಂಡರೂ ಬೇಜಾರಿಲ್ಲ… ನಾನು ರೀಟೈರ್ ಆಗ್ತೀನೋ ಹೊರತು ಆ ಅಧಿಕ ಪ್ರಸಂಗಿ ಅಸ್ನೋಟಿಕರ್ ಪರ ಕೆಲಸ ಮಾಡೋದಿಲ್ಲ…” ಎಂದು ಖಡಾಖಂಡಿತವಾಗೇ ಹೇಳಿದ್ದರು ಎನ್ನಲಾಗುತ್ತಿದೆ.
ಖಾನಾಪುರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಪ್ರಾಮಾಣಿಕವಾಗಿ ಪ್ರಬಲವಾಗಿ ಆಸ್ನೋಟಿಕರ್ ಪರ ಕೆಲಸ ಮಾಡುತ್ತಿದ್ದರು. ಇದನ್ನು ಕಂಡು ಸಿಡಿಮಿಡಿಗೊಂಡ ದೇಶಪಾಂಡೆ ಆಕೆಯನ್ನು ಕರೆದು “ನೋಡಮ್ಮಾ… ನೀನು ಈಗ ಜೆಡಿಎಸ್ ಪರ ಹೀಗೆಲ್ಲ ಕೆಲ್ಸ ಮಾಡಿದ್ರೆ ಮುಂದಿನ ಅಸೆಂಬ್ಲಿ ಇಲೆಕ್ಷನ್‍ದಾಗೆ ತೊಂದ್ರೆ ಅಕ್ಕೇತಿ… ನಿಂಗ ಕಳ್ದಬಾರಿ ಠಕ್ಕರ್ ಕೊಟ್ಟಿದ್ದ ಜೆಡಿಎಸ್‍ನ ನಾಸೀರ್ ಭಾಗವನ್‍ಗೆ ಹೆಲ್ಪ್ ಆಕ್ಕೇತಿ… ನೋಡ್ ಸ್ವಲ್ಪ ವಿಚಾರ ಮಾಡ್…” ಎಂದು ಹೆದರಿಸಿ ಆಕೆಯ ವೇಗಕ್ಕೆ ಕಡಿವಾಣ ಹಾಕಿದ್ದಾರೆ.
ಅಸ್ನೋಟಿಕರ್ ಮಾಣಿ ಮೇಲೆ ದಾಳಿ ಮಾಡುತ್ತಿದ್ದ ಪರಿ ನೋಡಿದರೆ ಬಿಜೆಪಿಗೆ ಡ್ಯಾಮೇಜು ಆಗುತ್ತದೆ, ಮೈತ್ರಿ ಕೂಟ ಬಲಗೊಳಿಸುತ್ತದೆಂದು ದೇಶಪಾಂಡೆ ಜೆಡಿಎಸ್‍ನ ಬಸವರಾಜ ಹೊರಟ್ಟಿಯನ್ನು ಬಳಸಿಕೊಂಡರು. ಅಸ್ನೋಟಿಕರ್‍ಗೆ ಆಕ್ರಮಣಶೀಲತೆ ಕಮ್ಮಿ ಮಾಡುವಂತೆ ಹೊರಟ್ಟಿಯಿಂದ “ಬುದ್ಧಿ” ಹೇಳಿಸಿದರು. ಹೊರಟ್ಟಿ ಸಂಚು ಅರಿಯದ ಅಸ್ನೋಟಿಕರ್ ಕೊನೆಕೊನೆಯಲ್ಲಿ ಜೋಶ್ ಕಳಕೊಂಡರು. ಇದು ಆತನಿಗೆ ದೊಡ್ಡ ಹೊಡೆತವನ್ನೇ ಕೊಟ್ಟಿದೆ!!
ಇಷ್ಟೆಲ್ಲಾ ಎಡರುತೊಡರು ಎದುರಾದರೂ ಅಸ್ನೋಟಿಕರ್ ತೀರಾ ದುರ್ಬಲವಾಗಿಲ್ಲ. ದೇಶಪಾಂಡೆ ತಲೆಕಂಡರಾಗದ ಕಾಂಗ್ರೆಸ್‍ನ ಹಳಿಯಾಳದ ಎಮ್ಮೆಲ್ಸಿ ಘೋಟನೇಕರ್, ಶಾಸಕ ಹೆಬ್ಬಾರ್, ಮಾಜಿ ಶಾಸಕರಾದ ಸತೀಶ್ ಸೈಲ್, ಮಂಕಾಳ ವೈದ್ಯ, ಆರ್.ಎನ್.ನಾಯ್ಕ, ಜೆ.ಡಿ.ನಾಯ್ಕ ಒಂದು ಹಂತದವರೆಗೆ ಮೈತ್ರಿಕೂಟದ ಗೆಲುವಿಗೆ ಪ್ರಯತ್ನ ಪಟ್ಟಿದ್ದಾರೆ. ಕಿತ್ತೂರು, ಖಾನಾಪುರದಲ್ಲಿ ಮಾಣಿಗೆ ಹಿನ್ನಡೆಯಾಗಿದೆ. ಕರಾವಳಿಯಲ್ಲಿ ಮೈತ್ರಿಕೂಟ ಏದುಸಿರುಬಿಡುತ್ತಿದೆ. ಘಟ್ಟದ ಮೇಲೆ ಸಮಬಲ ಇರುವಂತಿದೆ. ಎತ್ತಿಂದೆತ್ತ ಲೆಕ್ಕಹಾಕಿ ತಾಳೆ ಹಾಕಿದರೂ ಎದುರು ಹಿಂದುತ್ವ, ಬ್ರಾಹ್ಮಣಿಕೆ ಮಸಲತ್ತುಗಳು ಮೇಲುಗೈ ಸಾಧಿಸಿರುವುದು ಕಾಣಿಸುತ್ತದೆ.
ಕೇಸರಿ-ಭಜರಂಗಿ ಪಡೆಯ ಲೆಕ್ಕಾಚಾರದಂತೆ ಮಾಣಿ ಎರಡು ಲಕ್ಷ ಅಂತರದಲ್ಲಿ ಗೆಲ್ಲುತ್ತಾನೆ. ಅಷ್ಟು ಸರಳ ಸಮೀಕರಣ ಕ್ಷೇತ್ರದಲ್ಲಿಲ್ಲ. ಮಾಣಿ ವಿರುದ್ಧ ಅಂಡರ್ ಕರಂಟ್ ಕ್ಷೇತ್ರಾದಾದ್ಯಂತ ಹರಿದಾಡಿರುವುದಂತೂ ಖರೆ. ಹೀಗಾಗಿ ಅಸ್ನೋಟಿಕರ್ ಹೋರಾಟ ಕೊಟ್ಟಿದ್ದಾನೆ. ಹೀಗಾಗಿ ಅಸ್ನೋಟಿಕರ್ ಸೋತರೂ ಸಣ್ಣ ಅಂತರದಲ್ಲಷ್ಟೇ ಎಂಬ ವಿಶ್ಲೇಷಣೆಯೂ ನಡೆದಿದೆ.
ಅನಂತ್ಮಾಣಿ ಗೆದ್ದರೂ ಅದು ಅಪಮಾನದ ಗೆಲುವು; ದೇಶಪಾಂಡೆಯ ಪಕ್ಷ ದ್ರೋಹದ ಫಲ. ಕಾಂಗ್ರೆಸ್ ಹೈಕಮಾಂಡ್ ದೇಶಪಾಂಡೆ ವಿರುದ್ಧ ಕ್ರಮಕ್ಕೆ ಯೋಚಿಸಬೇಕಾದ ಕಾಲವಿದು. ಆತನನ್ನು ಪಕ್ಷದಿಂದ ಹೊರಹಾಕಿದರೆ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ದಲಿತರು ಒಂದಾಗಿ ಕಾಂಗ್ರೆಸ್ ಬೆಂಬಲಿಸುವುದು ನಿಸ್ಸಂಶಯ. ಅಂದಹಾಗೆ, ಆಪರೇಷನ್ ಕಮಲದ ಹುಮ್ಮಸ್ಸಿನಲ್ಲಿರುವ ಬಿಜೆಪಿಯ ಟಾರ್ಗೆಟ್ ಪಟ್ಟಿಯಲ್ಲೂ ದೇಶಪಾಂಡೆಯ ಹೆಸರಿಲ್ಲ. ಯಾಕೆಂದರೆ ಆತ ಬಿಜೆಪಿ ಸೇರಿದರೆ ಆ ಪಾರ್ಟಿಗೆ ಲಾಭಕ್ಕಿಂತ ಲುಕ್ಸಾನೇ ಜಾಸ್ತಿ ಎಂಬುದು ಅವರಿಗೂ ಗೊತ್ತು. ಆತ ಕಾಂಗ್ರೆಸಲ್ಲೇ ಇದ್ದರೆ ಬಿಜೆಪಿಗೆ ಲಾಭ ಜಾಸ್ತಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...