Homeಅಂಕಣಗಳುಚುನಾವಣಾ ಆಯೋಗವು ಬೊಗಳುವುದನ್ನು ನಿಲ್ಲಿಸಿ ಕಚ್ಚುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು

ಚುನಾವಣಾ ಆಯೋಗವು ಬೊಗಳುವುದನ್ನು ನಿಲ್ಲಿಸಿ ಕಚ್ಚುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು

- Advertisement -
- Advertisement -

 ಎಚ್.ಎಸ್ ದೊರೆಸ್ವಾಮಿ |
ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ನ್ಯಾ.ರಂಜನ್‍ಗೊಗಾಯ್ ಅವರು ಚುನಾವಣಾ ಆಯೋಗದ ಮುಖ್ಯಸ್ಥರಿಗೆ ಪತ್ರ ಬರೆದು “ನೀವು ಚುನಾವಣಾ ಆಯೋಗ ಹಲ್ಲಿಲ್ಲದ ಅಧಿಕಾರವಿಲ್ಲದ ಸಂಸ್ಥೆ ಎಂದು ಒಪ್ಪಿಕೊಂಡಂತೆ ಆಯಿತು. ದ್ವೇಷದ ಭಾಷಣಗಳ ವಿರುದ್ಧ ಮೌನ ತಾಳಿದ್ದೀರಿ. ನೀವು ಕೊನೆಯ ಪಕ್ಷ ಆ ರೀತಿ ಮಾತನಾಡುವವರಿಗೆ ಒಂದು ನೋಟಿಸ್ ಕಳುಹಿಸಬಹುದಾಗಿತ್ತು. ಈ ನೋಟಿಸಿಗೆ ಉತ್ತರ ಬಂದರೆ ನೀವು ಅವರಿಗೆ ಸರಿಯಾಗಿ ನಡೆದುಕೊಳ್ಳುವಂತೆ ಸಲಹೆ ನೀಡಬಹುದಾಗಿತ್ತು. ಈ ರೀತಿ ತಿಳಿವಳಿಕೆ ನೀಡಿದ ಮೇಲೂ ಅವರು ಮಾಡಲ್ ಕೋಡ್ ಆಫ್ ಕಂಡಕ್ಟ್ ಮೀರಿ ನಡೆಯುವುದಾದರೆ ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಬಹುದಾಗಿತ್ತು. ಇದು ನಿಮಗಿರುವ ಅಧಿಕಾರ. ನೀವು ಈ ಅಧಿಕಾರವನ್ನು ಚಲಾಯಿಸಬೇಕಾದದ್ದು ನಿಮ್ಮ ಕರ್ತವ್ಯ. ಚುನಾವಣೆ ದಿನ ಹತ್ತಿರವಾಗುತ್ತಿದೆ. ಕೂಡಲೇ ನೀವು ಕಾರ್ಯೋನ್ಮುಖರಾಗಬೇಕು. ಈ ನಿಮ್ಮ ನಿಲುವು ಫಲಪ್ರದವೋ ಅಲ್ಲವೋ ಅದು ಬೇರೆ ಮಾತು. ನೀವು ಕೂಡಲೇ ಕಾರ್ಯತತ್ಪರರಾಗಬೇಕು.
ಚುನಾವಣಾ ಆಯೋಗಕ್ಕಿರುವ ಅಧಿಕಾರ ಮಾಡೆಲ್ ಕೋಡ್ ಆಫ್ ಕಂಡಕ್ಟ್ ಪ್ರಕಟಿಸುವುದು. ಅಭ್ಯರ್ಥಿಗಳು ಕೆಲವು ಮಾರ್ಗದರ್ಶಿ ಸೂಚನೆಗಳನ್ನು ಧಿಕ್ಕರಿಸಿ ನಡೆದುಕೊಂಡಿದ್ದಾರೆಂದು ಚುನಾವಣಾ ಆಯೋಗಕ್ಕೆ ಮನವರಿಕೆಯಾದರೆ ಚುನಾವಣೆ ಪ್ರಕ್ರಿಯೆ ಮುಗಿದ ಮೇಲೆ ಅಂತಹವರನ್ನು ಸದಸ್ಯರಾಗಿರುವುದಕ್ಕೆ ಅನರ್ಹರನ್ನಾಗಿ ಪರಿಗಣಿಸಿ ಎಂದು ಶಿಫಾರಸು ಮಾಡಬಹುದು.
ಶೇಷನ್ ಮಾಡಿದ್ದೇನು?
ಟಿ.ಎನ್.ಶೇಷನ್ ಚುನಾವಣಾ ಆಯೋಗದ ಏಕೈಕ ಸದಸ್ಯರಾಗಿ 1990ರಲ್ಲಿ ಆಯ್ಕೆಯಾಗಿ ಅವರು 6 ವರ್ಷಗಳ ಕಾಲ ಅಧಿಕಾರದಲ್ಲಿದ್ದರು. ಭಾರತದ ರಾಜಕಾರಣಿಗಳು ಆಗ ಹೆದರುತ್ತಿದ್ದುದ್ದು ದೇವರು ಮತ್ತು ಶೇಷನ್‍ರವರಿಗೆ ಮಾತ್ರ. ಅವರು ಮುಲಾಜಿಲ್ಲದೇ ತಪ್ಪು ಮಾಡಿದ ಎಲ್ಲರನ್ನು ದಂಡಿಸುತ್ತಿದ್ದರು. ಆ ದಿನಗಳಲ್ಲಿ ಎಲ್ಲ ಪಕ್ಷಗಳವರೂ ಶೇಷನ್ ವಿರುದ್ಧ ದಾಳಿ ಮಾಡಿದರು. ಮಾಡಲ್ ಕೋಡ್ ಆಫ್ ಕಂಡಕ್ಟ್ ಅನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಏಕೈಕ ವ್ಯಕ್ತಿ ಟಿ.ಎನ್.ಶೇಷನ್ ಅವರು ನೀತಿಸಂಹಿತೆಯನ್ನು ಮೀರಿದ ಎಲ್ಲಾ ಅಭ್ಯರ್ಥಿಗಳ ಮೇಲೂ ಕೇಸುಗಳನ್ನು ಹಾಕಿದರು, ಬಂಧಿಸಲು ಸೂಚನೆ ನೀಡಿದರು. ಹಣಬಲ ಮತ್ತು ತೋಳ್ಬಲ ತೋರಿದವರಿಗೆ ಸಿಂಹಸ್ವಪ್ನವಾಗಿದ್ದರು. ಉಮೇದುವಾರರ ಪರ ವಹಿಸಿದ ಅಧಿಕಾರಿಗಳನ್ನು ಅಮಾನತಿನಲ್ಲಿಟ್ಟರು. ಶೇಷನ್ ಅಧಿಕಾರ ವಹಿಸಿಕೊಳ್ಳುವವರೆಗೂ ಚುನಾವಣಾ ಆಯೋಗದಲ್ಲಿ ಆಯೋಗದ ಮುಖ್ಯಸ್ಥರು ಮಾತ್ರ ಇದ್ದರು. ಶೇಷನ್‍ರವರು ಕಟ್ಟುನಿಟ್ಟಾಗಿ ನೀತಿಸಂಹಿತೆಯನ್ನು ಎತ್ತಿ ಹಿಡಿಯಲು ಹೋದರಾಗಿ ಅವರನ್ನು ಕಟ್ಟಿ ಹಾಕಲು ಇನ್ನಿಬ್ಬರನ್ನು ಆಯೋಗದ ಸದಸ್ಯರನ್ನಾಗಿ ಕೇಂದ್ರ ಸರ್ಕಾರ ನೇಮಿಸಿತು. ಶೇಷನ್ ನಿವೃತ್ತರಾಗಿ ದಶಕಗಳು ಕಳೆದವು. ಅವರ ನಂತರ ಬಂದ ಚುನಾವಣಾ ಕಮಿಷನರುಗಳು ಚುನಾವಣಾ ಆಯೋಗವನ್ನು ಹಂತಹಂತವಾಗಿ ದುರ್ಬಲಗೊಳಿಸುತ್ತಾ ಹೋಗಿದ್ದಾರೆ. ಆಡಳಿತ ನಡೆಸುವವರ ಆಜ್ಞಾಪಾಲಕರಂತೆ ವರ್ತಿಸುತ್ತಾರೆ. ಚುನಾವಣಾ ಆಯೋಗದ ಬಗೆಗೆ ಜನತೆಗೆ ನಂಬಿಕೆ ಕಳೆದುಹೋಗುತ್ತಿದೆ. ಈ ಕಾರಣಕ್ಕಾಗಿಯೇ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು, ಇಂದಿನ ಚುನಾವಣಾ ಆಯೋಗಕ್ಕೆ ಅವರ ನಿಷ್ಕ್ರಿಯತೆ ಬಗೆಗೆ ಪತ್ರ ಬರೆದು ಎಚ್ಚರಿಸಿರುವುದು. ಪಾರ್ಲಿಮೆಂಟನ್ನು ಪ್ರಜಾತಂತ್ರ ವ್ಯವಸ್ಥೆಯನ್ನು ಬಲಗೊಳಿಸಲು ರಚಿಸಿದ್ದರೆ, ಭಾರತದ ಚುನಾವಣಾ ಆಯೋಗವನ್ನು ರಾಜಕೀಯ ನೈತಿಕತೆಯನ್ನು ಎತ್ತಿ ಹಿಡಿಯಲು ರಚಿಸಲಾಗಿದೆ ಎಂದು ಚುನಾವಣಾ ಆಯೋಗಕ್ಕೆ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ನೆನಪು ಮಾಡಿಕೊಟ್ಟಿದ್ದಾರೆ.
ಮೋದಿಯವರನ್ನು ಕುರಿತ ಒಂದು ಚಲನಚಿತ್ರವನ್ನು ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ ಪ್ರದರ್ಶಿಸುವ ಹುನ್ನಾರ ನಡೆಯಿತು. ನ್ಯಾ.ಗೊಗಾಯಿರವರ ಪತ್ರ ತಲುಪಿದ ಕಾರಣದಿಂದ ಚುನಾವಣಾ ಆಯೋಗ ಈ ಚಿತ್ರವನ್ನು ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಪ್ರದರ್ಶಿಸುವಂತಿಲ್ಲ ಎಂದು ಘೋಷಿಸಿತು. ಈ ಸಾರಿ ಚುನಾವಣಾ ನೀತಿಸಂಹಿತೆಯ ಉಲ್ಲಂಘನೆಗೆ ಮಿತಿಯೂ ಇಲ್ಲ. ಈ ಪರಿಸ್ಥಿತಿ ಮುಂದುವರೆಯುವುದಾದರೆ ಇದನ್ನು ತಡೆಗಟ್ಟಲು ಇಚ್ಛಾಶಕ್ತಿ ಇಲ್ಲದ ಚುನಾವಣಾ ಆಯೋಗ ಏಕೆ ಬೇಕು ಎಂದು ಕೇಳಬೇಕಾದೀತು. ಮೋದಿ ಸರ್ಕಾರ ಕಪ್ಪು ಹಣದ ಹಾವಳಿಯನ್ನು ತಡೆಗಟ್ಟುವುದಾಗಿ ಘೋಷಣೆ ಮಾಡಿದೆ. ಚುನಾವಣೆ ಸಮಯದಲ್ಲಿ ಕಪ್ಪುಹಣ ಹೇಗೆ ಬಳಸಲಾಗುತ್ತಿದೆ ಎಂಬುದು ಸರ್ವರಿಗೂ ತಿಳಿದಿರುವ ವಿಚಾರ. ಭಾರತದಲ್ಲಿ ಚುನಾವಣೆ ನಡೆಯುತ್ತಿರುವ ಈ ವೇಳೆಯಲ್ಲಿ ಒಂದು ಬಿಲಿಯನ್‍ಗೂ ಮೀರಿ ಅಕ್ರಮವಾಗಿ ಸಾಗಿಸುತ್ತಿದ್ದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. 2014ರ ಪಾರ್ಲಿಮೆಂಟ್ ಚುನಾವಣೆಯ ವೇಳೆಯಲ್ಲಿ ವಶಪಡಿಸಿಕೊಳ್ಳಲಾದ ಹಣಕ್ಕೆ ಎರಡರಷ್ಟು 2019ರ ಈ ಚುನಾವಣೆ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿದೆ.
ದೊಡ್ಡದಾಗಿ ವ್ಯಾಪಾರ ದಂಧೆ ಮಾಡುವವರು ಎಲ್ಲ ರಾಜಕೀಯ ಪಕ್ಷಗಳನ್ನೂ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹಾತೊರೆಯುತ್ತಾರೆ. ಆದರೆ ಆಡಳಿತ ಪಕ್ಷಕ್ಕೆ ಮಿಕ್ಕೆಲ್ಲದ್ದಕ್ಕಿಂತ ಹೆಚ್ಚಿಗೆ ವಂತಿಗೆ ನೀಡುವುದು ಗೋಪ್ಯವಾದ ವಿಷಯವೇನಲ್ಲ. ಆದರೆ ಮೋದಿ ಸರ್ಕಾರ ಜಾರಿಗೆ ತಂದ ಎಲೆಕ್ಷನ್ ಬಾಂಡ್ ಒಂದು ರಹಸ್ಯವನ್ನು ಒಳಗೊಂಡಿದೆ. ಅದರ ಗುಟ್ಟು ಸರ್ಕಾರ ನಡೆಸುವವರಿಗೆ ಮಾತ್ರ ಗೊತ್ತು. ಈ ಬಾಂಡ್ ಕೊಂಡವರು ಯಾವ ಪಾರ್ಟಿಗೆ ಕೊಟ್ಟಿದ್ದಾರೆ ಎಂಬುದು ಬ್ಯಾಂಕ್‍ಗಳಿಗೆ ಮಾತ್ರ ಗೊತ್ತು. ಯಾವ ದೊಡ್ಡ ಉದ್ಯಮಿಯೂ ಅದನ್ನು ಬೇರೆ ಪಕ್ಷಗಳಿಗೆ ಕೊಡುವಷ್ಟು ದಡ್ಡನಲ್ಲ.
ಚುನಾವಣಾ ಆಯೋಗ ಕೇಂದ್ರದ ಅಧೀನ ಸಂಸ್ಥೆ ಅಲ್ಲ. ಅದು ರಾಜ್ಯಾಂಗದ ಆಶಯಗಳಿಗೆ ಅನುಗುಣವಾಗಿ ರಚಿತವಾದ ಸ್ವಾಯತ್ತ ಸಂಸ್ಥೆ. ಅದು ಕಲ್ಯಾಣ್‍ಸಿಂಗ್ ವಿರುದ್ಧ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಾಗಿತ್ತು. ಈ ಕಂಪನಿಗಳಿಂದ ಹಣ ಪಡೆದಿರುವ ಎಲ್ಲಾ ರಾಜಕೀಯ ಪಕ್ಷಗಳೂ ತಮಗೆ ದೇಣಿಗೆ ನೀಡಿದವರ ಪಟ್ಟಿಯನ್ನು, ದೇಣಿಗೆ ಮೊತ್ತವನ್ನು ಒಂದು ಸೀಲಾದ ಕವರಿನಲ್ಲಿಟ್ಟು ಚುನಾವಣಾ ಆಯೋಗಕ್ಕೆ ನೀಡಬೇಕೆಂದು ಹೇಳಿದೆ. ಈ ವಿಚಾರದಲ್ಲಿ ಅನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿಯೂ ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಆದರೆ ಆಗಬಾರದ ಅನಾಹುತ ಆಗಿಹೋಗಿದೆ.
ಅದರಂತೆಯೇ, ಮಾದರಿ ಚುನಾವಣಾ ನೀತಿಯನ್ನು ಎಲ್ಲ ಪಕ್ಷಗಳವರೂ ಒಂದಲ್ಲ, ಹತ್ತು ಸಾರಿ ಗಾಳಿಗೆ ತೂರಿದ್ದಾರೆ. ಕಲ್ಯಾಣಸಿಂಗ್ ಹಿಂದೆ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದವರು. ನರಸಿಂಹರಾವ್ ಸರ್ಕಾರ, ಪೊಲೀಸ್ ಮತ್ತು ಮಿಲಿಟರಿಯನ್ನು ಮುಖ್ಯಮಂತ್ರಿಗಳ ಆಜ್ಞೆ ಪಾಲಿಸಲು ಹೇಳಿ ಬಾಬ್ರಿ ಮಸೀದಿ ಒಡೆಯುವುದನ್ನು ತಡೆಗಟ್ಟಲು ಕಳಿಸಿಕೊಟ್ಟಿದ್ದರು. ಕಲ್ಯಾಣಸಿಂಗ್ ಅದನ್ನು ಬಳಸಿಕೊಳ್ಳದೇ ತಟಸ್ಥರಾಗಿದ್ದು, ಬಾಬ್ರಿ ಮಸೀದಿ ಒಡೆಯಲು ಸಹಕಾರ ನೀಡಿದರು. ಅವರೀಗ ರಾಜಸ್ತಾನ ರಾಜ್ಯಪಾಲರಾಗಿದ್ದಾರೆ. ಇತ್ತೀಚೆಗೆ ರಾಜಸ್ತಾನ ವಿಧಾನಸಭೆ ಚುನಾವಣೆ ನಡೆದಾಗ ಗೌರ್ನರ್ ಕಲ್ಯಾಣಸಿಂಗ್ ಬಿಜೆಪಿಗೆ ಮತ ನೀಡುವಂತೆ ಹೇಳಿಕೆ ನೀಡಿದ್ದರು. ಮೋದಿ ಸರ್ಕಾರವಾಗಲೀ, ಚುನಾವಣಾ ಆಯೋಗವಾಗಲೀ ಶಿಸ್ತಿನ ಕ್ರಮ ಕೈಗೊಳ್ಳಲಿಲ್ಲ. ರಾಷ್ಟ್ರಾಧ್ಯಕ್ಷರಿಗೆ ಈ ಬಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದಾಗ ರಾಷ್ಟ್ರಾಧ್ಯಕ್ಷರು ಆ ಅರ್ಜಿಯನ್ನು ಪ್ರಧಾನಿ ಮೋದಿ ಅವರಿಗೆ ರವಾನಿಸಿ ಕೈ ತೊಳೆದುಕೊಂಡರು. ನ್ಯಾಯವಾಗಿ ಚುನಾವಣಾ ಆಯೋಗವು ರಾಷ್ಟ್ರಾಧ್ಯಕ್ಷರಿಗೆ ಕಲ್ಯಾಣ್‍ಸಿಂಗ್ ಮೇಲೆ ಕ್ರಮ ಕೈಗೊಳ್ಳಲು ದೂರು ನೀಡಬೇಕಾಗಿತ್ತು. ಚುನಾವಣಾ ಆಯೋಗವು ಬೊಗಳುವುದನ್ನು ನಿಲ್ಲಿಸಿ ಕಚ್ಚುವುದನ್ನು ಅಭ್ಯಾಸ ಮಾಡಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....