Homeಅಂಕಣಗಳುಚುನಾವಣಾ ಆಯೋಗವು ಬೊಗಳುವುದನ್ನು ನಿಲ್ಲಿಸಿ ಕಚ್ಚುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು

ಚುನಾವಣಾ ಆಯೋಗವು ಬೊಗಳುವುದನ್ನು ನಿಲ್ಲಿಸಿ ಕಚ್ಚುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು

- Advertisement -
- Advertisement -

 ಎಚ್.ಎಸ್ ದೊರೆಸ್ವಾಮಿ |
ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ನ್ಯಾ.ರಂಜನ್‍ಗೊಗಾಯ್ ಅವರು ಚುನಾವಣಾ ಆಯೋಗದ ಮುಖ್ಯಸ್ಥರಿಗೆ ಪತ್ರ ಬರೆದು “ನೀವು ಚುನಾವಣಾ ಆಯೋಗ ಹಲ್ಲಿಲ್ಲದ ಅಧಿಕಾರವಿಲ್ಲದ ಸಂಸ್ಥೆ ಎಂದು ಒಪ್ಪಿಕೊಂಡಂತೆ ಆಯಿತು. ದ್ವೇಷದ ಭಾಷಣಗಳ ವಿರುದ್ಧ ಮೌನ ತಾಳಿದ್ದೀರಿ. ನೀವು ಕೊನೆಯ ಪಕ್ಷ ಆ ರೀತಿ ಮಾತನಾಡುವವರಿಗೆ ಒಂದು ನೋಟಿಸ್ ಕಳುಹಿಸಬಹುದಾಗಿತ್ತು. ಈ ನೋಟಿಸಿಗೆ ಉತ್ತರ ಬಂದರೆ ನೀವು ಅವರಿಗೆ ಸರಿಯಾಗಿ ನಡೆದುಕೊಳ್ಳುವಂತೆ ಸಲಹೆ ನೀಡಬಹುದಾಗಿತ್ತು. ಈ ರೀತಿ ತಿಳಿವಳಿಕೆ ನೀಡಿದ ಮೇಲೂ ಅವರು ಮಾಡಲ್ ಕೋಡ್ ಆಫ್ ಕಂಡಕ್ಟ್ ಮೀರಿ ನಡೆಯುವುದಾದರೆ ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಬಹುದಾಗಿತ್ತು. ಇದು ನಿಮಗಿರುವ ಅಧಿಕಾರ. ನೀವು ಈ ಅಧಿಕಾರವನ್ನು ಚಲಾಯಿಸಬೇಕಾದದ್ದು ನಿಮ್ಮ ಕರ್ತವ್ಯ. ಚುನಾವಣೆ ದಿನ ಹತ್ತಿರವಾಗುತ್ತಿದೆ. ಕೂಡಲೇ ನೀವು ಕಾರ್ಯೋನ್ಮುಖರಾಗಬೇಕು. ಈ ನಿಮ್ಮ ನಿಲುವು ಫಲಪ್ರದವೋ ಅಲ್ಲವೋ ಅದು ಬೇರೆ ಮಾತು. ನೀವು ಕೂಡಲೇ ಕಾರ್ಯತತ್ಪರರಾಗಬೇಕು.
ಚುನಾವಣಾ ಆಯೋಗಕ್ಕಿರುವ ಅಧಿಕಾರ ಮಾಡೆಲ್ ಕೋಡ್ ಆಫ್ ಕಂಡಕ್ಟ್ ಪ್ರಕಟಿಸುವುದು. ಅಭ್ಯರ್ಥಿಗಳು ಕೆಲವು ಮಾರ್ಗದರ್ಶಿ ಸೂಚನೆಗಳನ್ನು ಧಿಕ್ಕರಿಸಿ ನಡೆದುಕೊಂಡಿದ್ದಾರೆಂದು ಚುನಾವಣಾ ಆಯೋಗಕ್ಕೆ ಮನವರಿಕೆಯಾದರೆ ಚುನಾವಣೆ ಪ್ರಕ್ರಿಯೆ ಮುಗಿದ ಮೇಲೆ ಅಂತಹವರನ್ನು ಸದಸ್ಯರಾಗಿರುವುದಕ್ಕೆ ಅನರ್ಹರನ್ನಾಗಿ ಪರಿಗಣಿಸಿ ಎಂದು ಶಿಫಾರಸು ಮಾಡಬಹುದು.
ಶೇಷನ್ ಮಾಡಿದ್ದೇನು?
ಟಿ.ಎನ್.ಶೇಷನ್ ಚುನಾವಣಾ ಆಯೋಗದ ಏಕೈಕ ಸದಸ್ಯರಾಗಿ 1990ರಲ್ಲಿ ಆಯ್ಕೆಯಾಗಿ ಅವರು 6 ವರ್ಷಗಳ ಕಾಲ ಅಧಿಕಾರದಲ್ಲಿದ್ದರು. ಭಾರತದ ರಾಜಕಾರಣಿಗಳು ಆಗ ಹೆದರುತ್ತಿದ್ದುದ್ದು ದೇವರು ಮತ್ತು ಶೇಷನ್‍ರವರಿಗೆ ಮಾತ್ರ. ಅವರು ಮುಲಾಜಿಲ್ಲದೇ ತಪ್ಪು ಮಾಡಿದ ಎಲ್ಲರನ್ನು ದಂಡಿಸುತ್ತಿದ್ದರು. ಆ ದಿನಗಳಲ್ಲಿ ಎಲ್ಲ ಪಕ್ಷಗಳವರೂ ಶೇಷನ್ ವಿರುದ್ಧ ದಾಳಿ ಮಾಡಿದರು. ಮಾಡಲ್ ಕೋಡ್ ಆಫ್ ಕಂಡಕ್ಟ್ ಅನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಏಕೈಕ ವ್ಯಕ್ತಿ ಟಿ.ಎನ್.ಶೇಷನ್ ಅವರು ನೀತಿಸಂಹಿತೆಯನ್ನು ಮೀರಿದ ಎಲ್ಲಾ ಅಭ್ಯರ್ಥಿಗಳ ಮೇಲೂ ಕೇಸುಗಳನ್ನು ಹಾಕಿದರು, ಬಂಧಿಸಲು ಸೂಚನೆ ನೀಡಿದರು. ಹಣಬಲ ಮತ್ತು ತೋಳ್ಬಲ ತೋರಿದವರಿಗೆ ಸಿಂಹಸ್ವಪ್ನವಾಗಿದ್ದರು. ಉಮೇದುವಾರರ ಪರ ವಹಿಸಿದ ಅಧಿಕಾರಿಗಳನ್ನು ಅಮಾನತಿನಲ್ಲಿಟ್ಟರು. ಶೇಷನ್ ಅಧಿಕಾರ ವಹಿಸಿಕೊಳ್ಳುವವರೆಗೂ ಚುನಾವಣಾ ಆಯೋಗದಲ್ಲಿ ಆಯೋಗದ ಮುಖ್ಯಸ್ಥರು ಮಾತ್ರ ಇದ್ದರು. ಶೇಷನ್‍ರವರು ಕಟ್ಟುನಿಟ್ಟಾಗಿ ನೀತಿಸಂಹಿತೆಯನ್ನು ಎತ್ತಿ ಹಿಡಿಯಲು ಹೋದರಾಗಿ ಅವರನ್ನು ಕಟ್ಟಿ ಹಾಕಲು ಇನ್ನಿಬ್ಬರನ್ನು ಆಯೋಗದ ಸದಸ್ಯರನ್ನಾಗಿ ಕೇಂದ್ರ ಸರ್ಕಾರ ನೇಮಿಸಿತು. ಶೇಷನ್ ನಿವೃತ್ತರಾಗಿ ದಶಕಗಳು ಕಳೆದವು. ಅವರ ನಂತರ ಬಂದ ಚುನಾವಣಾ ಕಮಿಷನರುಗಳು ಚುನಾವಣಾ ಆಯೋಗವನ್ನು ಹಂತಹಂತವಾಗಿ ದುರ್ಬಲಗೊಳಿಸುತ್ತಾ ಹೋಗಿದ್ದಾರೆ. ಆಡಳಿತ ನಡೆಸುವವರ ಆಜ್ಞಾಪಾಲಕರಂತೆ ವರ್ತಿಸುತ್ತಾರೆ. ಚುನಾವಣಾ ಆಯೋಗದ ಬಗೆಗೆ ಜನತೆಗೆ ನಂಬಿಕೆ ಕಳೆದುಹೋಗುತ್ತಿದೆ. ಈ ಕಾರಣಕ್ಕಾಗಿಯೇ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು, ಇಂದಿನ ಚುನಾವಣಾ ಆಯೋಗಕ್ಕೆ ಅವರ ನಿಷ್ಕ್ರಿಯತೆ ಬಗೆಗೆ ಪತ್ರ ಬರೆದು ಎಚ್ಚರಿಸಿರುವುದು. ಪಾರ್ಲಿಮೆಂಟನ್ನು ಪ್ರಜಾತಂತ್ರ ವ್ಯವಸ್ಥೆಯನ್ನು ಬಲಗೊಳಿಸಲು ರಚಿಸಿದ್ದರೆ, ಭಾರತದ ಚುನಾವಣಾ ಆಯೋಗವನ್ನು ರಾಜಕೀಯ ನೈತಿಕತೆಯನ್ನು ಎತ್ತಿ ಹಿಡಿಯಲು ರಚಿಸಲಾಗಿದೆ ಎಂದು ಚುನಾವಣಾ ಆಯೋಗಕ್ಕೆ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ನೆನಪು ಮಾಡಿಕೊಟ್ಟಿದ್ದಾರೆ.
ಮೋದಿಯವರನ್ನು ಕುರಿತ ಒಂದು ಚಲನಚಿತ್ರವನ್ನು ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ ಪ್ರದರ್ಶಿಸುವ ಹುನ್ನಾರ ನಡೆಯಿತು. ನ್ಯಾ.ಗೊಗಾಯಿರವರ ಪತ್ರ ತಲುಪಿದ ಕಾರಣದಿಂದ ಚುನಾವಣಾ ಆಯೋಗ ಈ ಚಿತ್ರವನ್ನು ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಪ್ರದರ್ಶಿಸುವಂತಿಲ್ಲ ಎಂದು ಘೋಷಿಸಿತು. ಈ ಸಾರಿ ಚುನಾವಣಾ ನೀತಿಸಂಹಿತೆಯ ಉಲ್ಲಂಘನೆಗೆ ಮಿತಿಯೂ ಇಲ್ಲ. ಈ ಪರಿಸ್ಥಿತಿ ಮುಂದುವರೆಯುವುದಾದರೆ ಇದನ್ನು ತಡೆಗಟ್ಟಲು ಇಚ್ಛಾಶಕ್ತಿ ಇಲ್ಲದ ಚುನಾವಣಾ ಆಯೋಗ ಏಕೆ ಬೇಕು ಎಂದು ಕೇಳಬೇಕಾದೀತು. ಮೋದಿ ಸರ್ಕಾರ ಕಪ್ಪು ಹಣದ ಹಾವಳಿಯನ್ನು ತಡೆಗಟ್ಟುವುದಾಗಿ ಘೋಷಣೆ ಮಾಡಿದೆ. ಚುನಾವಣೆ ಸಮಯದಲ್ಲಿ ಕಪ್ಪುಹಣ ಹೇಗೆ ಬಳಸಲಾಗುತ್ತಿದೆ ಎಂಬುದು ಸರ್ವರಿಗೂ ತಿಳಿದಿರುವ ವಿಚಾರ. ಭಾರತದಲ್ಲಿ ಚುನಾವಣೆ ನಡೆಯುತ್ತಿರುವ ಈ ವೇಳೆಯಲ್ಲಿ ಒಂದು ಬಿಲಿಯನ್‍ಗೂ ಮೀರಿ ಅಕ್ರಮವಾಗಿ ಸಾಗಿಸುತ್ತಿದ್ದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. 2014ರ ಪಾರ್ಲಿಮೆಂಟ್ ಚುನಾವಣೆಯ ವೇಳೆಯಲ್ಲಿ ವಶಪಡಿಸಿಕೊಳ್ಳಲಾದ ಹಣಕ್ಕೆ ಎರಡರಷ್ಟು 2019ರ ಈ ಚುನಾವಣೆ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿದೆ.
ದೊಡ್ಡದಾಗಿ ವ್ಯಾಪಾರ ದಂಧೆ ಮಾಡುವವರು ಎಲ್ಲ ರಾಜಕೀಯ ಪಕ್ಷಗಳನ್ನೂ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹಾತೊರೆಯುತ್ತಾರೆ. ಆದರೆ ಆಡಳಿತ ಪಕ್ಷಕ್ಕೆ ಮಿಕ್ಕೆಲ್ಲದ್ದಕ್ಕಿಂತ ಹೆಚ್ಚಿಗೆ ವಂತಿಗೆ ನೀಡುವುದು ಗೋಪ್ಯವಾದ ವಿಷಯವೇನಲ್ಲ. ಆದರೆ ಮೋದಿ ಸರ್ಕಾರ ಜಾರಿಗೆ ತಂದ ಎಲೆಕ್ಷನ್ ಬಾಂಡ್ ಒಂದು ರಹಸ್ಯವನ್ನು ಒಳಗೊಂಡಿದೆ. ಅದರ ಗುಟ್ಟು ಸರ್ಕಾರ ನಡೆಸುವವರಿಗೆ ಮಾತ್ರ ಗೊತ್ತು. ಈ ಬಾಂಡ್ ಕೊಂಡವರು ಯಾವ ಪಾರ್ಟಿಗೆ ಕೊಟ್ಟಿದ್ದಾರೆ ಎಂಬುದು ಬ್ಯಾಂಕ್‍ಗಳಿಗೆ ಮಾತ್ರ ಗೊತ್ತು. ಯಾವ ದೊಡ್ಡ ಉದ್ಯಮಿಯೂ ಅದನ್ನು ಬೇರೆ ಪಕ್ಷಗಳಿಗೆ ಕೊಡುವಷ್ಟು ದಡ್ಡನಲ್ಲ.
ಚುನಾವಣಾ ಆಯೋಗ ಕೇಂದ್ರದ ಅಧೀನ ಸಂಸ್ಥೆ ಅಲ್ಲ. ಅದು ರಾಜ್ಯಾಂಗದ ಆಶಯಗಳಿಗೆ ಅನುಗುಣವಾಗಿ ರಚಿತವಾದ ಸ್ವಾಯತ್ತ ಸಂಸ್ಥೆ. ಅದು ಕಲ್ಯಾಣ್‍ಸಿಂಗ್ ವಿರುದ್ಧ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಾಗಿತ್ತು. ಈ ಕಂಪನಿಗಳಿಂದ ಹಣ ಪಡೆದಿರುವ ಎಲ್ಲಾ ರಾಜಕೀಯ ಪಕ್ಷಗಳೂ ತಮಗೆ ದೇಣಿಗೆ ನೀಡಿದವರ ಪಟ್ಟಿಯನ್ನು, ದೇಣಿಗೆ ಮೊತ್ತವನ್ನು ಒಂದು ಸೀಲಾದ ಕವರಿನಲ್ಲಿಟ್ಟು ಚುನಾವಣಾ ಆಯೋಗಕ್ಕೆ ನೀಡಬೇಕೆಂದು ಹೇಳಿದೆ. ಈ ವಿಚಾರದಲ್ಲಿ ಅನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿಯೂ ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಆದರೆ ಆಗಬಾರದ ಅನಾಹುತ ಆಗಿಹೋಗಿದೆ.
ಅದರಂತೆಯೇ, ಮಾದರಿ ಚುನಾವಣಾ ನೀತಿಯನ್ನು ಎಲ್ಲ ಪಕ್ಷಗಳವರೂ ಒಂದಲ್ಲ, ಹತ್ತು ಸಾರಿ ಗಾಳಿಗೆ ತೂರಿದ್ದಾರೆ. ಕಲ್ಯಾಣಸಿಂಗ್ ಹಿಂದೆ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದವರು. ನರಸಿಂಹರಾವ್ ಸರ್ಕಾರ, ಪೊಲೀಸ್ ಮತ್ತು ಮಿಲಿಟರಿಯನ್ನು ಮುಖ್ಯಮಂತ್ರಿಗಳ ಆಜ್ಞೆ ಪಾಲಿಸಲು ಹೇಳಿ ಬಾಬ್ರಿ ಮಸೀದಿ ಒಡೆಯುವುದನ್ನು ತಡೆಗಟ್ಟಲು ಕಳಿಸಿಕೊಟ್ಟಿದ್ದರು. ಕಲ್ಯಾಣಸಿಂಗ್ ಅದನ್ನು ಬಳಸಿಕೊಳ್ಳದೇ ತಟಸ್ಥರಾಗಿದ್ದು, ಬಾಬ್ರಿ ಮಸೀದಿ ಒಡೆಯಲು ಸಹಕಾರ ನೀಡಿದರು. ಅವರೀಗ ರಾಜಸ್ತಾನ ರಾಜ್ಯಪಾಲರಾಗಿದ್ದಾರೆ. ಇತ್ತೀಚೆಗೆ ರಾಜಸ್ತಾನ ವಿಧಾನಸಭೆ ಚುನಾವಣೆ ನಡೆದಾಗ ಗೌರ್ನರ್ ಕಲ್ಯಾಣಸಿಂಗ್ ಬಿಜೆಪಿಗೆ ಮತ ನೀಡುವಂತೆ ಹೇಳಿಕೆ ನೀಡಿದ್ದರು. ಮೋದಿ ಸರ್ಕಾರವಾಗಲೀ, ಚುನಾವಣಾ ಆಯೋಗವಾಗಲೀ ಶಿಸ್ತಿನ ಕ್ರಮ ಕೈಗೊಳ್ಳಲಿಲ್ಲ. ರಾಷ್ಟ್ರಾಧ್ಯಕ್ಷರಿಗೆ ಈ ಬಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದಾಗ ರಾಷ್ಟ್ರಾಧ್ಯಕ್ಷರು ಆ ಅರ್ಜಿಯನ್ನು ಪ್ರಧಾನಿ ಮೋದಿ ಅವರಿಗೆ ರವಾನಿಸಿ ಕೈ ತೊಳೆದುಕೊಂಡರು. ನ್ಯಾಯವಾಗಿ ಚುನಾವಣಾ ಆಯೋಗವು ರಾಷ್ಟ್ರಾಧ್ಯಕ್ಷರಿಗೆ ಕಲ್ಯಾಣ್‍ಸಿಂಗ್ ಮೇಲೆ ಕ್ರಮ ಕೈಗೊಳ್ಳಲು ದೂರು ನೀಡಬೇಕಾಗಿತ್ತು. ಚುನಾವಣಾ ಆಯೋಗವು ಬೊಗಳುವುದನ್ನು ನಿಲ್ಲಿಸಿ ಕಚ್ಚುವುದನ್ನು ಅಭ್ಯಾಸ ಮಾಡಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...