Homeಮುಖಪುಟಲಾಕ್‌ಡೌನ್‌: ಎರಡು ವಾರದಿಂದ ಸಿಗದ ಕೂಲಿ, ತುಮಕೂರಿನ ಟೆಂಟ್‌ಗಳಲ್ಲಿ ವಲಸೆ ಕೂಲಿ ಕಾರ್ಮಿಕರ ಬವಣೆ..

ಲಾಕ್‌ಡೌನ್‌: ಎರಡು ವಾರದಿಂದ ಸಿಗದ ಕೂಲಿ, ತುಮಕೂರಿನ ಟೆಂಟ್‌ಗಳಲ್ಲಿ ವಲಸೆ ಕೂಲಿ ಕಾರ್ಮಿಕರ ಬವಣೆ..

ಕೊರೊನ ಬಂದು ನಮ್ ಕೆಲಸ ಕಸ್ಕೊತ್ರಿ. ಅಂಗಡಿ ಬಂದ್ ಆಗೇವ. ರೊಕ್ಕನೂ ಇಲ್ಲ, ಅಕ್ಕಿನೂ ಇಲ್ಲ. ನೋಡ್ರಿ ಈ ಟೆಂಟ್ ಒಳಗ ನಿದ್ದಿ ಮಾಡೋಣ ಅಂದ್ರ ನಿದ್ದಿ ಬರೋದಿಲ್ರಿ, ಸ್ಯಾನ ಕಷ್ಟ ಆಗೇತ್ರಿ ಎನ್ನುತ್ತಾರೆ ಅಲ್ಲಿನ ಮಹಿಳೆಯರು.

- Advertisement -
- Advertisement -

ಕೊರೊನ ಸೋಂಕು ಹರಡುತ್ತಿರುವ  ಹಿನ್ನೆಲೆಯಲ್ಲಿ ಮಾಡಲಾದ ಲಾಕ್‌ಡೌನ್‌‌ನಿಂದಾಗಿ ದಿನಗೂಲಿ ಕಾರ್ಮಿಕರ ಪಾಡು ಹೇಳತೀರದಾಗಿದೆ. ಕೊರೊನ ಬಂದು ಅವರ ಕೆಲಸ ಕಿತ್ತುಕೊಂಡು ಮೂಲೆಗೆ ಕೂರಿಸಿದೆ. ಇತ್ತ ಕೆಲಸವೂ ಇಲ್ಲ, ಅತ್ತ ಹಳ್ಳಿಗೂ  ಹೋಗುವಂತಿಲ್ಲ ಪ್ಲಾಸ್ಟಿಕ್ ಹಾಳೆಯಿಂದ ನಿರ್ಮಿಸಿಕೊಂಡಿರುವ ಟೆಂಟ್‌ಗಳಲ್ಲಿ ಕೆಲಸವಿಲ್ಲದ ಕೂರುವುದೆಂದರೆ ಬೇಸರ. ಸುಡುಬೆಂಕಿ ಬಿಸಲಿಲ್ಲ ಗುಡಾರಗಳಲ್ಲಿ ಕುಳಿತುಕೊಂಡರೆ ಹಾಳಾದ ಧಗೆ. ಕ್ಷಣಮಾತ್ರದಲ್ಲಿ ಬೆವರಿನ ಸ್ನಾನವೂ ಆಗಿಹೋಗುತ್ತದೆ. ಇಂತಹ ಯಾತನಾಮಯ ಸನ್ನಿವೇಶದಲ್ಲಿ ಕೆಲಸ ಮಾಡಿಸಿಕೊಂಡಿರುವ ಗುತ್ತಿಗೆದಾರರು ಕೂಲಿಯನ್ನೂ ನೀಡಿಲ್ಲ. ಅಕ್ಕಿ ಕೊಳ್ಳಲು ದುಡ್ಡಿಲ್ಲ. ಅಕ್ಕಿ ತರೋಣವೆಂದರೆ ಅಂಗಡಿ ತೆಗೆಯುತ್ತಿಲ್ಲ. ಒಲೆ ಹಚ್ಚುವುದು ಹೇಗೆಂಬ ಚಿಂತೆಯಲ್ಲಿ ದಿನಕೂಲಿ ಕಾರ್ಮಿಕರು ಬದುಕು ಸವೆಸುವಂತಹ ಬಿಕ್ಕಟ್ಟಿನ ಪರಿಸ್ಥಿತಿ ತುಮಕೂರಿನಲ್ಲಿ ನಿರ್ಮಾಣವಾಗಿದೆ.

ಹೌದು, ಇದು ತುಮಕೂರಿಗೆ ಉತ್ತರ ಕರ್ನಾಟಕದಿಂದ ಬಂದಿರುವ ದಿನಗೂಲಿ ಕಾರ್ಮಿಕರ ದುಸ್ಥಿತಿ. ಕೇವಲ ರಾಯಚೂರು ಜಿಲ್ಲೆಯೊಂದರಿಂದಲೇ ಒಂದು ಸಾವಿರಕ್ಕೂ ಹೆಚ್ಚು ಕುಟುಂಬಗಳು ತುಮಕೂರಿಗೆ ಬಂದಿವೆ. ನಗರದ ಒಳಗೆ ಮತ್ತು ಹೊರಗೆ 50 ಕ್ಯಾಂಪ್‌ಗಳಲ್ಲಿ ಟೆಂಟ್ ಹಾಕಿಕೊಂಡು ಜೀವಿಸುತ್ತಿವೆ. ದೊಡ್ಡ ಕ್ಯಾಂಪ್ ಅಂದ್ರೆ ಸೋಮೇಶ್ವರಪುರಂ ಕೊನೆಯಲ್ಲಿ ರಾಧಾಕೃಷ್ಣ ರಸ್ತೆಯಲ್ಲಿರುವ ಕ್ಯಾಂಪ್. ಒಂದೇ ಕಡೆ 40ಕ್ಕೂ ಹೆಚ್ಚು ಕುಟುಂಬಗಳು ಟೆಂಟ್ ನಿರ್ಮಿಸಿಕೊಂಡು ಕಾಲದೂಡುತ್ತಿದ್ದಾರೆ. ಹಾಲುಕುಡಿಯುವ ಹಸುಳೆಯರು, ಅಪ್ರಾಪ್ತ ಬಾಲಕ ಬಾಲಕಿಯರು, ಹೆಂಗಸರು ಮತ್ತು ಪುರುಷರು ಕ್ಯಾಂಪ್‌ಗಳಲ್ಲಿ ಇದ್ದಾರೆ.

ಈಗ  ಕೊರನಾ ಸೋಂಕು ಹರಡುವ ಭೀತಿಯಿಂದ ಈ ಕೂಲಿಕಾರ್ಮಿಕರಿಗೆ ರಜೆ ನೀಡಲಾಗಿದೆ. ಹೀಗಾಗಿ ಕೆಲಸವಿಲ್ಲ. ಊರಿಗೆ ಹೋಗಬೇಕೆಂದರೆ ಬಸ್ ವ್ಯವಸ್ಥೆ ಇಲ್ಲ. ಇಲ್ಲಿರಲು ನೆಲೆ ಇಲ್ಲ. ಎರಡು ವಾರದಿಂದಲೂ ಮೇಸ್ತ್ರಿ ಕೂಲಿಹಣ ನೀಡಿಲ್ಲ. ಹೀಗಾಗಿ ಕೂಲಿಕಾರ್ಮಿಕರ ಪರಿಸ್ಥಿತಿ ಯಾರಿಗೂ ಹೇಳಿಕೊಳ್ಳುವಂತಿಲ್ಲ. ಇವರೆಲ್ಲ ತುಮಕೂರು ಸ್ಮಾರ್ಟಿಸಿಟಿಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿದ್ದವರು. ಕುಡಿಯುವ ನೀರು ಪೈಪ್ ಅಳವಡಿಸುವುದು, ಮಲ್ಟಿಟ್ರ್ಯಾಕ್ ಪೈಪ್ ಲೈನ್‌ಗಾಗಿ ರಸ್ತೆ ಬದಿಯಲ್ಲಿ ಗುಂಡಿ ತೋಡುತ್ತಿದ್ದರು. ಗ್ಯಾಸ್ ಪೈಪ್ ಲೈನ್, ಚರಂಡಿಗಾಗಿ ಭೂಮಿ ಅಗೆಯುವ ಕೆಲಸ ಮಾಡುತ್ತಿದ್ದರು. ನಗರವನ್ನು ಕಟ್ಟುವಲ್ಲಿ ಇವರ ಪಾತ್ರ ಬಹುಮುಖ್ಯವಾದುದು. ಆದರೂ ಈ ಕೂಲಿ ಕಾರ್ಮಿಕರ ಬದುಕು ಕೊರೊನ ಮತ್ತು ಬಿಸಿಲ ಬೇಗೆಗೆ  ಬೆಂದು ಹೋಗಿದೆ.

ನಮ್ದು ರಾಯಚೂರ್ ರೀ. ನಮಗ ರೊಕ್ಕ ಕೊಟ್ಟು ಎರಡ್ ವಾರ ಆತ್ರಿ. ಊರಿಗೆ ಹೋಗೋಣ ಅಂದ್ರ ಬಸ್ ಇಲ್ರಿ. ಕೆಲಸಕ್ಕೆ ರಜೆ ಕೊಟ್ಟಾರ್ರೀ. ನಾವು ಏನೋ ಮಾಡೋದು ತಿಳಿತಿಲ್ರಿ, ಕೊರೊನ ಬಂದು ನಮ್ ಕೆಲಸ ಕಸ್ಕೊತ್ರಿ. ಅಂಗಡಿ ಬಂದ್ ಆಗೇವ. ರೊಕ್ಕನೂ ಇಲ್ಲ, ಅಕ್ಕಿನೂ ಇಲ್ಲ. ನೋಡ್ರಿ ಈ ಟೆಂಟ್ ಒಳಗ ನಿದ್ದಿ ಮಾಡೋಣ ಅಂದ್ರ ನಿದ್ದಿ ಬರೋದಿಲ್ರಿ, ಸ್ಯಾನ ಕಷ್ಟ ಆಗೇತ್ರಿ. ನಮಗೆ ರೊಕ್ಕ ಕೊಟ್ರ ಅಕ್ಕಿ, ಬೇಳಿ ಬೇರೆ ಬೇರೆ ಸಾಮಾನ ತರಬೌದ್ರಿ. ರೊಕ್ಕ ಕೊಡ್ತಾರ ಅಂತ ಎದುರು ನೋಡ್ತಾ ಇದ್ದೇವ್ರಿ. ನಾವ್ ಎಲ್ಲಿಗು ಹೋಕಾಗದಿಲ್ಲ. ಒಂದೇ ಕಡಿ ಕೂರ್ಬೇಕಂದ್ರ ಭಾಳ ತ್ರಾಸ ಆಗೇತ್ರಿ ಎಂದು ಅಲ್ಲಿನ ಮಹಿಳೆಯರು ನೋವು ತೋಡಿಕೊಂಡರು.

ಬಿಸಿಲಿನ ಧಗೆಗೆ ಮಕ್ಕಳ ಕಣ್ಣುಮುಚ್ಚಿದ್ದವು. ಪುರುಷರು ಮತ್ತು ಮಹಿಳೆಯರು ಟೆಂಟ್‌ಗಳಲ್ಲಿ ನಿದ್ದೆ ಬಾರದೆ ಹೊರಳಾಡುತ್ತಿದ್ದರು. ಇಡೀ ಟೆಂಟ್‌ಗಳು ನಿಶ್ಯಬ್ದವಾಗಿದ್ದವು. ಮಾತು ಇಲ್ಲ, ಕಥೆಯೂ ಇಲ್ಲ. ಅವರವರ ಪಾಡಿಗೆ ಅವರಿದ್ದರು. ನಾವು ಅಲ್ಲಿಗೆ ಹೋಗುತ್ತಿದ್ದಂತೆಯೇ ಒಬ್ಬೊಬ್ಬರೇ ಎದ್ದು ಬಂದರು. ಮೇಸ್ತ್ರಿಗೆ ಮೊಬೈಲ್ ಕರೆ ಮಾಡಿ ಕೇಳಿದರು. ಸ್ಮಾರ್ಟ್ ಸಿಟಿ ಕಾಮಗಾರಿ ಮಾಡಿಸುವ ಗುತ್ತಿಗೆದಾರರು ಪ್ರತಿವಾರವೂ ಕೂಲಿಹಣ ಬಟವಾಡೆ ಮಾಡಿಸಬೇಕಿತ್ತು. ಆದರೆ ಈ ಬಾರಿ ಹಾಗೆ ಮಾಡಿಲ್ಲ. ಗುತ್ತಿಗೆದಾರರು ಹಣ ಕೊಡದೆ ವಿಳಂಬ ಮಾಡಿರುವುದು ತಿಳಿದುಬಂತು. ಕೋಟಿಕೋಟಿ ಹಣ ಬಂದಿದ್ದರೂ ಸರಿಯಾಗಿ ಹಣ ಬಟವಾಡೆ ಮಾಡದಿರುವುದಕ್ಕೆ ಕೆಲವರು ಬೇಸರ ವ್ಯಕ್ತಪಡಿಸಿದರು.

ಕುಣಿಗಲ್ ರಸ್ತೆಯಲ್ಲಿ ಬಳ್ಳಾರಿಯ ಜಿಲ್ಲೆಯ ನಾಲ್ಕು ಕುಟುಂಬಗಳು ಅದೇ ತಾನೆ ಟೆಂಟ್ ನಿರ್ಮಾಣಕ್ಕೆ ಸಿದ್ದತೆ ನಡೆಸುತ್ತಿದ್ದವು. ಕೆಲಸವಿಲ್ಲದೆ ತೊಂದರೆಯಾಗಿದೆ. ಸಣ್ಣ ಮಕ್ಕಳು ಇದ್ದಾವೆ. ಅವುಗಳನ್ನು ಕಟ್ಟಿಕೊಂಡು ಊರಿಗೆ ಹೋಗೋಕೆ ಆಗೊಲ್ಲ. ಬಸ್, ಲಾರಿ ಯಾವ ವ್ಯವಸ್ಥೆಯೂ ಇಲ್ಲ. ಗುತ್ತಿಗೆದಾರರನ್ನು ಕೇಳಿದ್ದೀವಿ. ಇಲ್ಲೇ ಟೆಂಟ್ ಹಾಕಿಕೊಳ್ಳಿ ಎಂದು ಹೇಳಿದ್ದಾರೆ ಎಂದು ಎರಡು ದಬ್ಬೆಗಳನ್ನು ಜೋಡಿಸಿ ಮೊಳೆ ಹೊಡೆಯುತ್ತಿದ್ದರು. ಮಕ್ಕಳು ಮರದ ನೆರಳಿನಲ್ಲಿ ಆಡಿಕೊಳ್ಳುತ್ತಿದ್ದರು. ಬಿಸಿಲು ಕುಣಿಯುತ್ತಿತ್ತು. ಜನಜೀವನ ಅಸ್ತವ್ಯಸ್ತಗೊಂಡಿತ್ತು.

ತುಮಕೂರಿನಲ್ಲಿ ಉತ್ತರ ಕರ್ನಾಟದ ಜಿಲ್ಲೆಗಳಿಗೆ ಕೆಲಸಕ್ಕಾಗಿ ಅರಸಿ ಬಂದವರು ಇಂದು ಕೆಲಸವಿಲ್ಲದೆ, ಊರಿಗೂ ಹೋಗಲಾರದಂತಹ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಸಾವಿರಾರು ಕುಟುಂಬಗಳಿಗೆ ಗುತ್ತಿಗೆದಾರರು ನೀಡುವ ಹಣದಿಂದ ದವಸಧಾನ್ಯ ಖರೀದಿ ಮಾಡಿ ತುತ್ತಿನಚೀಲ ತುಂಬಿಸಿಕೊಳ್ಳಬೇಕಾಗಿದೆ. ಕೆಲಸದಲ್ಲಿ ಗಂಡಾಳಿಗೆ 450 ರೂಪಾಯಿ ಕೂಲಿ ನೀಡಿದರೆ ಹೆಣ್ಣಾಳಿಗೆ 300 ರೂಪಾಯಿ ನೀಡಿ ಕೂಲಿಯಲ್ಲೂ ತಾರತಮ್ಯ ಮಾಡಲಾಗುತ್ತಿದೆ.  ನಗರದ ರಸ್ತೆ, ಚರಂಡಿ, ಪೈಪ್ ಲೈನ್ ಮೊದಲಾದ ಜನೋಪಯೋಗಿ ಕೆಲಸ ಮಾಡುವ ಈ ಕೂಲಿಕಾರ್ಮಿಕರ ಬದುಕು ಅತಂತ್ರವಾಗಿದೆ. ನಗರವನ್ನೇ ನಿರ್ಮಿಸುವ ಇವರ ಬದುಕು ಹಸನಾಗುವುದೆಂತು?

ಕೂಡಲೇ ತುಮಕೂರು ಜಿಲ್ಲಾಡಳಿತ ಇವರ ನೆರವಿಗೆ ಬರಬೇಕಿದೆ. ಕೂಲಿ ಕೊಡುವುದರ ಜೊತೆಗೆ ಆಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕಿದೆ. ಇವರನ್ನು ನಿರ್ಮಾಣ ಕಾರ್ಮಿಕರ ಅಡಿಯಲ್ಲಿ ತಂದು ಪ್ರೋತ್ಸಾಹ ಧನ ನೀಡಬೇಕಿದೆ. ಈ ಕುರಿತು ಪ್ರಜ್ಞಾವಂತರು ಸರ್ಕಾರವನ್ನು ಒತ್ತಾಯಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...