Homeಮುಖಪುಟಕೊರೊನಾ ತಡೆಯಲು ಪಣ: ಭಾರತೀಯರು ಈಗಲೂ ಪ್ರಜ್ಞಾವಂತರಂತೆ ನಡೆದುಕೊಳ್ಳದಿದ್ದರೆ ಇನ್ಯಾವಾಗ?

ಕೊರೊನಾ ತಡೆಯಲು ಪಣ: ಭಾರತೀಯರು ಈಗಲೂ ಪ್ರಜ್ಞಾವಂತರಂತೆ ನಡೆದುಕೊಳ್ಳದಿದ್ದರೆ ಇನ್ಯಾವಾಗ?

- Advertisement -
- Advertisement -

ದಶಕಗಳ ಹಿಂದೆಯೇ ಭಾರತ ದೇಶ ಪ್ಲೇಗ್, ಕಾಲರಾ, ಕ್ಷಯ, ಮಲೇರಿಯಾದಂತಹ ಮಾರಕ ಖಾಯಿಲೆಗಳ ವಿರುದ್ಧ ಹೋರಾಡಿ ಗೆಲುವು ಸಾಧಿಸಿದೆ. ಮಲೆನಾಡಿನ ಭಾಗದಲ್ಲಿ ಈಗಲೂ ಮಂಗನ ಖಾಯಿಲೆ ವಿರುದ್ಧ ನಿರಂತರ ಹೋರಾಟ ನಡೆಯುತ್ತಲೇ ಇದೆ. ಆದರೆ, ಇದೀಗ ಆವರಿಸಿರುವ ಕೊರೊನಾ ಇದೆಲ್ಲಕ್ಕಿಂತ ಅತ್ಯಂತ ಅಪಾಯಕಾರಿ.

ಎರಡು ತಿಂಗಳ ಹಿಂದೆ ಈ ಮಾರಣಾಂತಿಕ ಸೋಂಕು ಚೀನಾದಲ್ಲಿ ಸಾಲು ಸಾಲು ಬಲಿ ಪಡೆಯುತ್ತಿದ್ದ ಸಂದರ್ಭದಲ್ಲೇ ಭಾರತದಲ್ಲಿ ಅನೇಕ ಪ್ರಜ್ಞಾವಂತರು ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದರು. ಆದರೆ, ಈ ಸೋಂಕು ಭಾರತಕ್ಕೆ ಬಾರದು ಎಂದೇ ಭಾವಿಸಿದ್ದ ಸರ್ಕಾರ ಕುಂಬಕರ್ಣ ನಿದ್ದಿಗೆ ಜಾರಿತ್ತು. ಆದರೆ, ಇದರ ನಿಜವಾದ ಬಿಸಿ ಯಾವಾಗ ತಟ್ಟಿತ್ತೋ ಇದೀಗ ಮೆಲ್ಲನೆ ನಿದ್ದೆಯಿಂದ ಜಾಗೃತರಾಗುತ್ತಿದೆ.

ಈ ಸೋಂಕು ಮನುಕುಲದ ಮುಂದಿಟ್ಟಿರುವ ಭೀತಿ ಅಷ್ಟಿಷ್ಟಲ್ಲ. ಚೀನಾದಲ್ಲಿ 3700 ಬಲಿ ಪಡೆದ ಈ ಮಹಾಮಾರಿ ಇಟಲಿಯಲ್ಲಿ ದಿನನಿತ್ಯ ಮರಣಮೃದಂಗ ಬಾರಿಸುತ್ತಿದೆ. ಈವರೆಗೆ 4,000 ಕ್ಕೂ ಅಧಿಕ ಜೀವಗಳ ಬಲಿ ಪಡೆದಿದೆ. ಭಾರತದಲ್ಲೂ 10 ಜನ ಬಲಿಯಾಗಿದ್ದಾರೆ. ವಿಶ್ವದಾದ್ಯಂತ ಒಟ್ಟಾರೆ ಮೃತಪಟ್ಟವರ ಸಂಖ್ಯೆ 14,000 ದಾಟಿದ್ದು, 2 ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದೆ.

ಇಲ್ಲಿ ಗಮನಿಸಬೇಕಾದ ಅಗತ್ಯ ಅಂಶ ಎಂದರೆ ಸರ್ಕಾರದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಸೋಂಕಿತರ ಸಂಖ್ಯೆ ಕೇವಲ 500 ಎಂದು ಹೇಳಲಾಗುತ್ತಿದೆ. ಅಂದರೆ ಸರ್ಕಾರ ಈವರೆಗೆ ವಿದೇಶದಿಂದ ಆಗಮಿಸಿದವರು ಮತ್ತು ಅವರ ಕುಟುಂಬಸ್ಥರನ್ನು ಮಾತ್ರ ಪರೀಕ್ಷೆಗೆ ಒಳಪಡಿಸಿದೆ. ಆದರೆ, 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ನಮ್ಮ-ನಿಮ್ಮಂತಹ ಸಾಮಾನ್ಯ ಜನ ಈವರೆಗೆ ಯಾವುದೇ ಪರೀಕ್ಷೆಗೆ ಒಳಪಟ್ಟಿಲ್ಲ. ಹೀಗಾಗಿ ಸೋಂಕಿತರ ಸಂಖ್ಯೆ ಇದರ ನೂರು ಪಟ್ಟು ಅಧಿಕ ಇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದು ಕೇವಲ ಇಂದು ಊಹೆಯಾಗಿದ್ದು ಒಂದು ವೇಳೆ ನಿಜವಾದರೆ ಭಾರತದಲ್ಲಿ 50 ರಿಂದ 80 ಮಿಲಿಯನ್ ಜನರಿಗೆ ಈ ಸೋಂಕು ವ್ಯಾಪಿಸುವ ಸಾಧ್ಯತೆ ಇದೆ. ಈ ಪೈಕಿ ಕನಿಷ್ಟ ಶೇ.2 ರಷ್ಟು ಜನ ಸಾವನ್ನಪ್ಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲದೆ, ಇಷ್ಟು ಜನರಿಗೆ ವೆಂಟಿಲೇಟರ್ ಸೇರಿದಂತೆ ಆರೋಗ್ಯ ವ್ಯವಸ್ಥೆಯನ್ನು ಅಗತ್ಯ ಸಲಕರಣೆ-ಸೌಲಭ್ಯಗಳನ್ನು ಕಲ್ಪಿಸುವುದು ಯಾವುದೇ ಸರ್ಕಾರಕ್ಕೂ ಸವಾಲಿನ ಕೆಲಸವೇ ಸರಿ. ಇದೇ ಕಾರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾರಣಾಂತಿಕ ಸೋಂಕು ಹರಡದಂತೆ ತಡೆಯುವ ಸಲುವಾಗಿ ಇಡೀ ದೇಶದಾದ್ಯಂತ ಲಾಕ್‌ಡೌನ್‌ ಘೋಷಿಸಿರುವುದು.

ಲಾಕ್‌ಡೌನ್‌ ಎಂದರೆ ಶಂಕ ಜಾಗಟೆ ಬಾರಿಸುವುದಲ್ಲ!

ಕೊರೋನಾ ಸೋಂಕಿಗೆ ಯಾವುದೇ ಔಷಧ ಈವರೆಗೆ ಕಂಡುಹಿಡಿದಿಲ್ಲ. ಹೀಗಾಗಿ ಇಡೀ ರಾಷ್ಟ್ರದಾದ್ಯಂತ ಈ ಸೋಂಕು ವ್ಯಾಪಿಸದಂತೆ ತಡೆಯಲು ನಮ್ಮ ಮುಂದಿರುವ ಏಕೈಕ ಸಾಧನ ಎಂದರೆ ಸುರಕ್ಷಿತವಾಗಿ ಮನೆಯಲ್ಲಿರುವುದು. ಇದರ ಹೊರತಾಗಿ ಬೇರಾವುದೇ ಮಾರ್ಗ ತೋಚುತ್ತಿಲ್ಲ.

ಇದೇ ಕಾರಣಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 22 ರಂದು ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಬೆಳಗ್ಗೆ 6 ರಿಂದ 9ರ ವರೆಗೆ ಜನಸಾಮಾನ್ಯರು ಮನೆಯಿಂದ ಆಚೆ ಬರದಂತೆ ಕರೆ ನೀಡಿದ್ದರು. ಜನ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಕರೆ ನೀಡಿದ್ದರು. ಪ್ರಾಯೋಗಿಕವಾಗಿ ಇದೊಂದು ಉತ್ತಮ ನಡೆಯೇ ಸರಿ. ಆದರೆ, ಅವರು ಅದೊಂದು ಕರೆ ನೀಡಬಾರದಿತ್ತು.

ರಾತ್ರಿ 8 ಗಂಟೆಯ ಮನ್ ಕಿ ಬಾತ್‌ನ ಮಾತಿನ ನಡುವೆ ಪ್ರಧಾನಿ ಮೋದಿ ಕೊರೋನಾ ಭೀತಿಯ ನಡುವೆಯೂ ನಮಗಾಗಿ ಹಗಲಿರುಳು ದುಡಿಯುವ ವೈದ್ಯರು, ಪೌರ ಕಾರ್ಮಿಕರು, ಸೈನಿಕರು ಮತ್ತು ಪೊಲೀಸರಿಗಾಗಿ ಸಂಜೆ 5 ಗಂಟೆಯ ಮನೆಯ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಲು ಹೇಳಿದರಷ್ಟೆ.

ಆದರೆ, ಪ್ರಧಾನಿಯ ಮಾತನ್ನು ನಾವು ಶಿರಸಾವಹಿಸಿ ಪಾಲಿಸುತ್ತೇವೆ ಎಂಬ ಭ್ರಮೆಯಲ್ಲೋ? ಭಕ್ತಿಯಲ್ಲೋ? ಒಂದಷ್ಟು ಜನ ದೇಶದಾದ್ಯಂತ ಅಲ್ಲಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾಮೂಹಿಕವಾಗಿ ಸೇರಿದ್ದಾರೆ. ಅಲ್ಲದೆ, ಅತಿರೇಕಕ್ಕೆ ಹೋದ ಅಭಿಮಾನದಿಂದಾಗಿ ಶಂಕ ಜಾಗಟೆ ಬಾರಿಸಿ ಪ್ರಧಾನಿಯ ಕರೆಗೆ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂಬ ಪ್ರಧಾನಿಯ ಮನವಿಗೆ ಎಳ್ಳುನೀರು ಬಿಟ್ಟಿದ್ದಾರೆ.

ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ವೈರಲ್ಗೆ ಒಳಗಾದವು. ಇದು ನಿಜಕ್ಕೂ ಜವಾಬ್ದಾರಿಯುತ ಜನ ಸಮೂಹ ಮಾಡುವ ಕೆಲಸವಾಗಿರಲಿಲ್ಲ. ಅದರಲ್ಲೂ ಭಾರತ ವಿಶ್ವಗುರು ಎಂದು ಹೇಳಿಕೊಂಡು ಬೀಗುವ ಸಮಾಜದ ನಡುವೆ ಈ ಸನ್ನಿವೇಶ ವಿಶ್ವ ಮಟ್ಟದಲ್ಲಿ ಭಾರತವನ್ನು ನಗೆಪಾಟಲಿಗೆ ಈಡಾಗಿಸಿದ್ದು ಸುಳ್ಳಲ್ಲ.

ಆದರೆ, ನಿನ್ನೆಯವರೆಗೆ ಮನವಿಯಾಗಿದ್ದ ಲಾಕ್‌ಡೌನ್‌ ಇಂದು ಸರ್ಕಾರದ ಅಧಿಕೃತ ಆದೇಶವಾಗಿಯೇ ಹೊರಬಿದ್ದಿದೆ. ಜನ ಅನಗತ್ಯವಾಗಿ ಮನೆಯಿಂದ ಹೊರ ಬಂದರೆ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ. ಇದೇ ಕಾರಣಕ್ಕೆ ಇಂದು ಸರ್ಕಾರ ವಲಯದಿಂದ ಖಾಸಗಿ ವಲಯದ ವರೆಗೆ ಎಲ್ಲಾ ವಲಯದಲ್ಲೂ work from home ಅಂದರೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಲಾಗಿದೆ. ಐಟಿಬಿಟಿ ಕಂಪೆನಿಗಳೂ ಸಹ ತಿಂಗಳ ಹಿಂದೆಯೇ ತಮ್ಮ ಉದ್ಯೋಗಿಗಳ ಸುರಕ್ಷತೆಯ ದೃಷ್ಟಿಯಿಂದ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಿದೆ.

ಹೀಗಾಗಿ ಜನ ಮನೆಯಲ್ಲೇ ಸುರಕ್ಷಿತವಾಗಿ ಕೆಲಸ ಮಾಡುವುದು ಒಳಿತು. ಅನಗತ್ಯವಾಗಿ ಒಂದೆಡೆ ಸೇರದೆ, ಜನ ಸಮೂಹ ಇರುವ ಸ್ಥಳಗಳಿಂದ ದೂರ ಇದ್ದಷ್ಟು ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯ ಕಾಪಾಡಲ್ಪಡುತ್ತದೆ. ಅಲ್ಲದೆ, ಭಾರತೀಯರು ನಿಜಕ್ಕೂ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಮೂಲಕ ಮಾದರಿಯಾಗುವ ಕಾಲ ಇದಾಗಿದೆ. ಅಂದಹಾಗೆ ಈಗಲೂ ನಾವು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದರೆ ಮತ್ತೆ ಇನ್ಯಾವಾಗ? ಎಂಬುದು ಪ್ರಶ್ನೆ. ಹೀಗಾಗಿ ಮನೆಯಲ್ಲೇ ಇರಿ ಸುರಕ್ಷಿತವಾಗಿರಿ ಎಂಬುದು ನಾನು ಗೌರಿ ತಂಡದ ಆಶಯ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...