Homeಕರ್ನಾಟಕಮಾಧ್ಯಮ ಲೋಕಕ್ಕೆ ಬೀಸುತ್ತಿರುವ ಕೊರೊನಾ ಬಿರುಗಾಳಿ

ಮಾಧ್ಯಮ ಲೋಕಕ್ಕೆ ಬೀಸುತ್ತಿರುವ ಕೊರೊನಾ ಬಿರುಗಾಳಿ

- Advertisement -
- Advertisement -

ಕರೋನಾ ವೈರಸ್ ಜಗತ್ತಿಗೆ ತಂದೊಡ್ಡಿದ ಆತಂಕ ಅಂತಿಂತಹುದಲ್ಲ. ಇದು ವೈರಸ್ ಸೃಷ್ಟಿಸಿದ ಆತಂಕವೋ, ಇಲ್ಲ ಕೃತಕವಾಗಿ ಮಾನವ ನಿರ್ಮಿತ ಕರ್ಮಕಾಂಡವೋ ಗೊತ್ತಿಲ್ಲ. ಒಂದಂತೂ ಸತ್ಯ. ಯಾರೇ ಸೃಷ್ಟಿ ಮಾಡಿದ್ದರು ಕೂಡಾ ಸಂಪೂರ್ಣ ಮಾನವ ಕುಲ ಸಂಕಷ್ಟದಲ್ಲಿ ಸಿಲುಕಿದೆ.. ವೈರಸ್ ಎಷ್ಟು ವೇಗವಾಗಿ ಜನರ ಜೀವವನ್ನು ಆಪೋಶನ ತೆಗೆದುಕೊಳ್ಳುತ್ತಿದೆಯೋ, ಅದಕ್ಕಿಂತ ವೇಗವಾಗಿ ಕೆಟ್ಟಿರುವ ಆರ್ಥಿಕ ವ್ಯವಸ್ಥೆಯ ಕಬಂಧ ಬಾಹುವಿನಲ್ಲಿ ಸಾಮಾನ್ಯ ಜನರ ಬದುಕನ್ನು ಸೆಳೆದುಕೊಳ್ಳುತ್ತಿದೆ..

ಸಮಾಜದ ಎಲ್ಲ ಕ್ಷೇತ್ರದ ಜನ ಕರೋನಾ, ಕರೋನಾ ಎಂದು ಜಪಿಸುವಂತೆ ಮಾದಿರುವ ಈ ಮಹಾಮಾಯ ಹೊಡೆತಕ್ಕೆ ಸಿಲುಕಿ ನರಳದ ಘಟಕಗಳಿಲ್ಲ.. ಇದಕ್ಕೆ ಮಾಧ್ಯಮ ಕ್ಷೇತ್ರ ಹೊರತಾಗಿಲ್ಲ. ಇವತ್ತಿನ ಸ್ಥಿತಿ ಎಂತಹ ಮಟ್ಟಕ್ಕೆ ತಲುಪಿದೆಯೆಂದರೆ ಕೇವಲ ಮಾಧ್ಯಮ ಲೋಕದಲ್ಲಿ ಮಾತ್ರವಲ್ಲ, ಜಗತ್ತಿನೆಲ್ಲೆಡೆ ಎಲ್ಲ ಕ್ಷೇತ್ರಗಳಲ್ಲೂ ಯಾವ ಹೊತ್ತಿನಲ್ಲಿ ಯಾರು ಬಾಗಿಲು ಹಾಕುತ್ತಾರೋ, ಯಾರು ಕೆಲಸ ಕಳೆದುಕೊಳ್ಳುತ್ತಾರೋ, ಯಾರ ಮನೆಯ ಒಲೆಯ ಕಿಚ್ಚು ಆರಿ ಹೋಗುತ್ತದೋ… ಎಂದು ಯಾರಿಗೂ ಅರ್ಥವಾಗುತ್ತಿಲ್ಲ. ಇದು ಮನುಕುಲದ ಪಾಲಿಗೆನೇ ಅತ್ಯಂತ ಆತಂಕದ ಕ್ಷಣ.

ಇದು ಕೇವಲ ತಮಾಷೆಯ ವಿಷಯವಲ್ಲ. ಕೊರೊನಾದಿಂದಾಗಿ ಜಾಗತಿಕ ನೆಲೆಯಲ್ಲಿ ಹಲವು ಉದ್ಯಮಗಳು ತಳ ಹಿಡಿಯುವುದಂತೂ ಖಚಿತತವಾಗಿ ಬಿಟ್ಟಿದೆ. ಆ ಪೈಕಿ ಆಟೊಮೊಬೈಲ್, ಏವಿಯೇಷನ್‍ನಂತೆಯೇ ಮಾಧ್ಯಮ ಕೂಡ ಒಂದಾಗಿದೆ. ಜಗತ್ತಿನೆಲ್ಲೆಡೆ ಎಲ್ಲ ಮಾಧ್ಯಮ ಸಂಸ್ಥೆಗಳೂ ಜಾಹೀರಾತು ರೆವಿನ್ಯೂ ಇಲ್ಲದೇ ಸೋತು-ಸೊರಗಿ ಹೋಗಿವೆ. ಆ ಪೈಕಿ ಹಲವು ಸಂಸ್ಥೆಗಳು ಮುಚ್ಚಿ ಹೋದರೂ ಹೋಗಬಹುದು.

ಉಳಿದೆಲ್ಲ ಉದ್ಯಮಗಳ ಮೇಲೆ ಆದಂತೆಯೇ ಕೊರೊನಾ ಲಾಕ್‍ಡೌನ್ ಪರಿಣಾಮ ಪತ್ರಿಕೋದ್ಯಮದ ಮೇಲೂ ಆಗಿ ಹೋಗಿದೆ. ಆಡಳಿತ ಮಂಡಳಿಗಳು ಅಪಾರ ಮಟ್ಟದ ನಷ್ಟ ಅನುಭವಿಸುತ್ತಿವೆ. ಪರಿಣಾಮ ಕೊರೊನಾ ಪೂರ್ವ ಮತ್ತು ಕೊರೊನಾ ನಂತರದ ಮಾಧ್ಯಮ ಲೋಕಕ್ಕೆ ಹೋಲಿಸಿದರೆ ಅಪಾರ ವ್ಯತ್ಯಾಸಗಳು ಕಾಣಲಿವೆ.

ಒಂದು ಅಂದಾಜಿನ ಪ್ರಕಾರ ಕೊರೊನೋತ್ತರದಲ್ಲಿ ಮಾಧ್ಯಮ ಲೋಕದಲ್ಲಿರುವ ಶೇಕಡಾ 30-40ರಷ್ಟು ಪತ್ರಕರ್ತರು ಅವರ ಕೆಲಸ ಕಳೆದುಕೊಳ್ಳಲಿದ್ದಾರೆ. ತಂತ್ರಜ್ಞಾನ ಅಳವಡಿಕೆ, ಬದಲಾದ ವೃತ್ತಿಲೋಕದ ಸಂಸ್ಕೃತಿ, ಕಾಸ್ಟ್ ಕಟ್ಟಿಂಗ್… ಕಾರಣ ಬೇರೆ, ಬೇರೆ. ಕೆಲಸ ಹೋಗುವುದಂತೂ ಗ್ಯಾರಂಟಿ. ಇದು ಜಾಗತಿಕವಾದ ವಿದ್ಯಮಾನವಾಗಿರಲಿದೆ ಎಂಬುದೂ ಗ್ಯಾರಂಟಿ.

ಇದಕ್ಕೆ ಸಣ್ಣ ಅಥವಾ ದೊಡ್ಡ ಸಂಸ್ಥೆಯೆಂಬ ಬೇದಭಾವವಿಲ್ಲ; ಇದರ ಹೊಡೆತಕ್ಕೆ ದೇಶದ ನಂಬರ್ ಒನ್ ಇಂಗ್ಲಿಷ್ ಪತ್ರಿಕೆ ಟೈಂಸ್ ಆಫ್ ಇಂಡಿಯಾ ಕೂಡಾ ಹೊರತಾಗಿಲ್ಲ. ಅದು ತನ್ನ ಭಾನುವಾರದ ಪುರವಣಿಯ ಇಡೀ ತಂಡವನ್ನೇ ಕೆಲಸದಿಂದ ತೆಗೆದುಹಾಕಿದೆ. ಆ ಪುರವಣಿಯ ಸಂಪಾದಕಿ 24 ವರ್ಷಗಳ ಕಾಲ ಆ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು ಎನ್ನುವ ಮಾಹಿತಿಯನ್ನೂ ಇಲ್ಲಿ ಕೊಡಬೇಕು.

ಈ ಲಾಕ್‍ಡೌನ್, ಸೀಲ್‍ಡೌನ್, ಸ್ಮಾರ್ಟ್ ಲಾಕ್‍ಡೌನ್, ಸೂಪರ್ ಸ್ಮಾರ್ಟ್ ಲಾಕ್‍ಡೌನ್…. ಆಗುವುದಕ್ಕಿಂತ ಮೊದಲೇ ರಾಜ್ಯದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯೇ ಕನಿಷ್ಠ ಮೂವತ್ತು ಹಿರಿಯ ಪತ್ರಕರ್ತರನ್ನು ಮನೆಗೆ ಕಳುಹಿಸಲು ತೀರ್ಮಾನ ಮಾಡಿತ್ತು. ಅದೂ ಅತ್ಯಂತ ಹಳೆಯ ಮತ್ತು ಸಂಪ್ರದಾಯದ ನೆಲೆಯಲ್ಲಿ ಗಟ್ಟಿಯಾಗಿದ್ದ ಸಂಸ್ಥೆ. ಒಂದು ಕಾಲದಲ್ಲಿ ಆ ಸಂಸ್ಥೆಯಲ್ಲಿ ಉದ್ಯೋಗ ಸಿಕ್ಕಿದರೆ ಬದುಕೇ ಬೆಳಗಿ ಹೋಯಿತು ಎಂಬ ಭಾವನೆ ಇತ್ತು. ಅಂತಹ ಸಂಸ್ಥೆಯೇ ಇಂದು ಬೇಡವೆಂದವರನ್ನೆಲ್ಲಾ ಹೊರಗೆ ಹಾಕುತ್ತಿದೆ. ಪರಿಸ್ಥಿತಿ ಆ ಹಂತ ತಲುಪಿರುವಾಗ ಬೇರೆ ಸಂಸ್ಥೆಗಳ ಉದ್ಯೋಗಿಗಳ ಪಾಡೇನು?

ಪತ್ರಿಕೆಯ ಈ ಸಂಚಿಕೆ ಅಂತಿಮಗೊಳ್ಳುತ್ತಿರುವ ಹೊತ್ತಿನಲ್ಲಿ ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕೆಲಸ ಕಳೆದುಕೊಳ್ಳುತ್ತಿರುವ

ಮಾಧ್ಯಮ ಸಂಸ್ಥೆಗಳ ನೌಕರರ ವಿವರ ಹೀಗಿದೆ.

1. ಇಂಡಿಯನ್ ಎಕ್ಸ್‍ಪ್ರೆಸ್ ಮತ್ತು ಬಿಸಿನೆಸ್ ಸ್ಟ್ಯಾಂಡರ್ಡ್ ಸಿಬ್ಬಂದಿ ವೇತನ ಕಡಿತವನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡಿದೆ. ಇಂಡಿಯನ್ ಎಕ್ಸ್‍ಪ್ರೆಸ್ HR ಪತ್ರದ ಸಾರಾಂಶ ಹೀಗಿದೆ.

ಮೊದಲ ಹೆಜ್ಜೆಯಾಗಿ, ನಾವೆಲ್ಲರೂ ಇಂದಿನಿಂದ ತಾತ್ಕಾಲಿಕ ವೇತನ ಕಡಿತವನ್ನು ತೆಗೆದುಕೊಳ್ಳಲು ಒಪ್ಪಿಕೊಳ್ಳುವ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ನೀವೆಲ್ಲರೂ ನನ್ನೊಂದಿಗಿದ್ದೀರಿ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ.

ಮುಖ್ಯ ಸಂಪಾದಕ ರಾಜ್ ಕಮಲ ಜಾ ಮತ್ತು ವರ್ಗೀಸ್ ಅವರು ಶೇ.100ರಷ್ಟು ವೇತನ ಪಡೆಯದಿರಲು ನಿರ್ಧರಿಸಿದ್ದಾರೆ. ಅಧ್ಯಕ್ಷರು ಮತ್ತು ಅನಂತ್ ಕೂಡ ಶೇ.100ರಷ್ಟು ವೇತನ ಕಡಿತವನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಪರಿಸ್ಥಿತಿ ಸುಧಾರಿಸದಿದ್ದರೆ ನನಗೆ ಬೇರೆ ಆಯ್ಕೆ ಇರುವುದಿಲ್ಲ. ಆದರೆ ಹೆಚ್ಚಿನ ತ್ಯಾಗ ಮಾಡಲು ನಿಮ್ಮೆಲ್ಲರನ್ನೂ ವಿನಂತಿಸುತ್ತೇನೆ.

2. ಔಟ್‍ಲುಕ್ ಮುದ್ರಣ ಪ್ರಕಟಣೆಯನ್ನು ನಿಲ್ಲಿಸಿದೆ.

3. ನ್ಯೂಸ್‍ನೇಷನ್ ಇಂಗ್ಲಿಷ್ ಡಿಜಿಟಲ್ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದ 16 ಉದ್ಯೋಗಿಗಳನ್ನು ಕಡಿತಗೊಳಿಸಿದೆ.

4. ಕ್ವಿಂಟ್ ತಂಡದ ಅರ್ಧದಷ್ಟು ಜನರು ವೇತನವಿಲ್ಲದೆ ರಜೆ ಹೋಗಲು ಕೇಳಿಕೊಳ್ಳಲಾಗಿದೆ. ಜೊತೆಗೆ ಕ್ವಿಂಟ್ ತನ್ನ ಟೆಕ್ ಮತ್ತು ಆಟೋ ವಿಭಾಗವನ್ನು ಮುಚ್ಚಿದೆ

5. ಇಂಡಿಯಾ ಟುಡೆ 46 ವರದಿಗಾರರು, 6 ಕ್ಯಾಮೆರಾಮೆನ್ ಮತ್ತು 17 ಕಾರ್ಯಕ್ರಮ ನಿರ್ಮಾಪಕರನ್ನು ಮನೆಗೆ ಕಳುಹಿಸಿದೆ..

6. ಅಮರ್ ಉಜಲಾದಲ್ಲಿ 50% ಸಂಬಳ ಕಡಿತ ಮಾಡಿದೆ..

7. ಪಿಟಿಐ 60% ವೇತನವನ್ನು ಮಾತ್ರ ಬಿಡುಗಡೆ ಮಾಡಿದೆ?

8. ನಯೀ ದುನಿಯಾ (ಉರ್ದು) ಮತ್ತು ಸ್ಟಾರ್ ಆಫ್ ಮೈಸೂರು ಪ್ರಕಟಣೆಯನ್ನು ಸ್ಥಗಿತಗೊಳಿಸಿದೆ.

9. ಬಿಸಿನೆಸ್ ಸ್ಟ್ಯಾಂಡರ್ಡ್ ಎಚ್‍ಆರ್‍ನಿಂದ ಪ್ರತಿಯೊಬ್ಬ ಉದ್ಯೋಗಿಗೂ ಮೇಲ್ ಹೊಗಿದೆ.. ಇಮೇಲ್ ಸಾರಾಂಶ ಹೀಗಿದೆ.. ಮೇ ತಿಂಗಳಿನಿಂದ ಸಂಬಳ ಕಡಿತವನ್ನು ಯೋಜಿಸಲಾಗಿದೆ. 10 ರಿಂದ 15 ಲಕ್ಷ ವಾರ್ಷಿಕ ವೇತನ ಪಡೆಯುತ್ತಿರುವವರಿಗೆ ಶೇ 10, ಹೆಚ್ಚಿನ ಸಂಬಳ ಪಡೆಯುತ್ತಿರುವವರಿಗೆ ಶೇ.30 ಸಂಬಳ ಕಡಿತಗೊಳಿಸಲು ನಿರ್ಧರಿಸಲಾಗಿದೆ.

ಇದು ರಾಷ್ಟ್ರೀಯ ಸಂಸ್ಥೆಗಳ ಕಥೆಯಾದರೆ, ಕನ್ನಡ ಮಾಧ್ಯಮ ಲೋಕವನ್ನೇ ತೆಗೆದುಕೊಂಡರೆ, 8 ಸಾವಿರದಿಂದ 10 ಸಾವಿರ ಉದ್ಯೋಗಿಗಳು ಕೆಲಸ ಮಾಡಿತ್ತಿದ್ದಾರೆ. ಈ ಪೈಕಿ ಜೀವನ ಭದ್ರ ಮಾಡಿಕೊಂಡಿರುವವರ ಸಂಖ್ಯೆ ಎಷ್ಟಿರಬಹುದು. ಹೆಚ್ಚೆಂದರೆ ನೂರಿನ್ನೂರು ಜನರು. ಉಳಿದಂತೆ ಶೇ.95ರಷ್ಟು ಪತ್ರಕರ್ತರು ಈವತ್ತೂ ಹೋರಾಟದ ಹಾದಿಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಇಂತಹವರಿಗೆ ಒಂದು ತಿಂಗಳು ಸಂಬಳ ಬರದೇ ಹೋದರೆ ಬದುಕು ಮೂರಾಬಟ್ಟೆಯಾಗಿ ಹೋಗುತ್ತದೆ.

ಅದರಲ್ಲಂತೂ ಕೂಗು ಮಾರಿಗಳಾಗಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಕನ್ನಡದ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡುವ ಪತ್ರಕರ್ತರ ಪೈಕಿ ಕೆಲವೇ ಕೆಲವರನ್ನು ಬಿಟ್ಟರೆ ಉಳಿದವರ ಸ್ಥಿತಿ ಹೇಳಿಕೊಳ್ಳುವ ಹಾಗಿಲ್ಲ. ಆರ್ಥಿಕ ಕುಸಿತದಿಂದ ಮೊದಲೇ ಏದುಸಿರುಬಿಡುತ್ತಿದ್ದ ಮಾಧ್ಯಮಗಳಿಗೆ ಕೊರೊನಾ ಬಿಕ್ಕಟ್ಟು ಕಡೆಯ ಮೊಳೆ ಹೊಡೆಯುತ್ತಿದೆಯೇ ಎಂಬ ಪರಿಸ್ಥಿತಿ ತಲೆದೋರಿದೆ. ಸಂಪೂರ್ಣ ಚಿತ್ರಣವು ತೆರೆದುಕೊಳ್ಳುವುದು ಇನ್ನೂ ಮೂರ್ನಾಲ್ಕು ತಿಂಗಳ ನಂತರವೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಚ್ಚು ಮೀಡಿಯಾ ಗೆ ಹೆಚ್ಚು ಒಡೆತ ಬೀಳಲಿದೆ. Online, social mediaಗಳ ಒಡೆತದಿಂದ ಮೊದಲೇ ಹಿನ್ನಡೆಯನ್ನು ಕಂಡಿದ್ದ ಅಚ್ಚು ಒಯ್ಯುಗೆ ಮತ್ತಶ್ಟು ಮುಗ್ಗರಿಸಲಿದೆ. ಹೊತ್ತಿಗೆ ತಕ್ಕಂತೆ ಬದಲಾಗುವುದೊಂದೇ ಉಳಿದಿರುವ ದಾರಿ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...