Homeಕರ್ನಾಟಕಮಾಧ್ಯಮ ಲೋಕಕ್ಕೆ ಬೀಸುತ್ತಿರುವ ಕೊರೊನಾ ಬಿರುಗಾಳಿ

ಮಾಧ್ಯಮ ಲೋಕಕ್ಕೆ ಬೀಸುತ್ತಿರುವ ಕೊರೊನಾ ಬಿರುಗಾಳಿ

- Advertisement -
- Advertisement -

ಕರೋನಾ ವೈರಸ್ ಜಗತ್ತಿಗೆ ತಂದೊಡ್ಡಿದ ಆತಂಕ ಅಂತಿಂತಹುದಲ್ಲ. ಇದು ವೈರಸ್ ಸೃಷ್ಟಿಸಿದ ಆತಂಕವೋ, ಇಲ್ಲ ಕೃತಕವಾಗಿ ಮಾನವ ನಿರ್ಮಿತ ಕರ್ಮಕಾಂಡವೋ ಗೊತ್ತಿಲ್ಲ. ಒಂದಂತೂ ಸತ್ಯ. ಯಾರೇ ಸೃಷ್ಟಿ ಮಾಡಿದ್ದರು ಕೂಡಾ ಸಂಪೂರ್ಣ ಮಾನವ ಕುಲ ಸಂಕಷ್ಟದಲ್ಲಿ ಸಿಲುಕಿದೆ.. ವೈರಸ್ ಎಷ್ಟು ವೇಗವಾಗಿ ಜನರ ಜೀವವನ್ನು ಆಪೋಶನ ತೆಗೆದುಕೊಳ್ಳುತ್ತಿದೆಯೋ, ಅದಕ್ಕಿಂತ ವೇಗವಾಗಿ ಕೆಟ್ಟಿರುವ ಆರ್ಥಿಕ ವ್ಯವಸ್ಥೆಯ ಕಬಂಧ ಬಾಹುವಿನಲ್ಲಿ ಸಾಮಾನ್ಯ ಜನರ ಬದುಕನ್ನು ಸೆಳೆದುಕೊಳ್ಳುತ್ತಿದೆ..

ಸಮಾಜದ ಎಲ್ಲ ಕ್ಷೇತ್ರದ ಜನ ಕರೋನಾ, ಕರೋನಾ ಎಂದು ಜಪಿಸುವಂತೆ ಮಾದಿರುವ ಈ ಮಹಾಮಾಯ ಹೊಡೆತಕ್ಕೆ ಸಿಲುಕಿ ನರಳದ ಘಟಕಗಳಿಲ್ಲ.. ಇದಕ್ಕೆ ಮಾಧ್ಯಮ ಕ್ಷೇತ್ರ ಹೊರತಾಗಿಲ್ಲ. ಇವತ್ತಿನ ಸ್ಥಿತಿ ಎಂತಹ ಮಟ್ಟಕ್ಕೆ ತಲುಪಿದೆಯೆಂದರೆ ಕೇವಲ ಮಾಧ್ಯಮ ಲೋಕದಲ್ಲಿ ಮಾತ್ರವಲ್ಲ, ಜಗತ್ತಿನೆಲ್ಲೆಡೆ ಎಲ್ಲ ಕ್ಷೇತ್ರಗಳಲ್ಲೂ ಯಾವ ಹೊತ್ತಿನಲ್ಲಿ ಯಾರು ಬಾಗಿಲು ಹಾಕುತ್ತಾರೋ, ಯಾರು ಕೆಲಸ ಕಳೆದುಕೊಳ್ಳುತ್ತಾರೋ, ಯಾರ ಮನೆಯ ಒಲೆಯ ಕಿಚ್ಚು ಆರಿ ಹೋಗುತ್ತದೋ… ಎಂದು ಯಾರಿಗೂ ಅರ್ಥವಾಗುತ್ತಿಲ್ಲ. ಇದು ಮನುಕುಲದ ಪಾಲಿಗೆನೇ ಅತ್ಯಂತ ಆತಂಕದ ಕ್ಷಣ.

ಇದು ಕೇವಲ ತಮಾಷೆಯ ವಿಷಯವಲ್ಲ. ಕೊರೊನಾದಿಂದಾಗಿ ಜಾಗತಿಕ ನೆಲೆಯಲ್ಲಿ ಹಲವು ಉದ್ಯಮಗಳು ತಳ ಹಿಡಿಯುವುದಂತೂ ಖಚಿತತವಾಗಿ ಬಿಟ್ಟಿದೆ. ಆ ಪೈಕಿ ಆಟೊಮೊಬೈಲ್, ಏವಿಯೇಷನ್‍ನಂತೆಯೇ ಮಾಧ್ಯಮ ಕೂಡ ಒಂದಾಗಿದೆ. ಜಗತ್ತಿನೆಲ್ಲೆಡೆ ಎಲ್ಲ ಮಾಧ್ಯಮ ಸಂಸ್ಥೆಗಳೂ ಜಾಹೀರಾತು ರೆವಿನ್ಯೂ ಇಲ್ಲದೇ ಸೋತು-ಸೊರಗಿ ಹೋಗಿವೆ. ಆ ಪೈಕಿ ಹಲವು ಸಂಸ್ಥೆಗಳು ಮುಚ್ಚಿ ಹೋದರೂ ಹೋಗಬಹುದು.

ಉಳಿದೆಲ್ಲ ಉದ್ಯಮಗಳ ಮೇಲೆ ಆದಂತೆಯೇ ಕೊರೊನಾ ಲಾಕ್‍ಡೌನ್ ಪರಿಣಾಮ ಪತ್ರಿಕೋದ್ಯಮದ ಮೇಲೂ ಆಗಿ ಹೋಗಿದೆ. ಆಡಳಿತ ಮಂಡಳಿಗಳು ಅಪಾರ ಮಟ್ಟದ ನಷ್ಟ ಅನುಭವಿಸುತ್ತಿವೆ. ಪರಿಣಾಮ ಕೊರೊನಾ ಪೂರ್ವ ಮತ್ತು ಕೊರೊನಾ ನಂತರದ ಮಾಧ್ಯಮ ಲೋಕಕ್ಕೆ ಹೋಲಿಸಿದರೆ ಅಪಾರ ವ್ಯತ್ಯಾಸಗಳು ಕಾಣಲಿವೆ.

ಒಂದು ಅಂದಾಜಿನ ಪ್ರಕಾರ ಕೊರೊನೋತ್ತರದಲ್ಲಿ ಮಾಧ್ಯಮ ಲೋಕದಲ್ಲಿರುವ ಶೇಕಡಾ 30-40ರಷ್ಟು ಪತ್ರಕರ್ತರು ಅವರ ಕೆಲಸ ಕಳೆದುಕೊಳ್ಳಲಿದ್ದಾರೆ. ತಂತ್ರಜ್ಞಾನ ಅಳವಡಿಕೆ, ಬದಲಾದ ವೃತ್ತಿಲೋಕದ ಸಂಸ್ಕೃತಿ, ಕಾಸ್ಟ್ ಕಟ್ಟಿಂಗ್… ಕಾರಣ ಬೇರೆ, ಬೇರೆ. ಕೆಲಸ ಹೋಗುವುದಂತೂ ಗ್ಯಾರಂಟಿ. ಇದು ಜಾಗತಿಕವಾದ ವಿದ್ಯಮಾನವಾಗಿರಲಿದೆ ಎಂಬುದೂ ಗ್ಯಾರಂಟಿ.

ಇದಕ್ಕೆ ಸಣ್ಣ ಅಥವಾ ದೊಡ್ಡ ಸಂಸ್ಥೆಯೆಂಬ ಬೇದಭಾವವಿಲ್ಲ; ಇದರ ಹೊಡೆತಕ್ಕೆ ದೇಶದ ನಂಬರ್ ಒನ್ ಇಂಗ್ಲಿಷ್ ಪತ್ರಿಕೆ ಟೈಂಸ್ ಆಫ್ ಇಂಡಿಯಾ ಕೂಡಾ ಹೊರತಾಗಿಲ್ಲ. ಅದು ತನ್ನ ಭಾನುವಾರದ ಪುರವಣಿಯ ಇಡೀ ತಂಡವನ್ನೇ ಕೆಲಸದಿಂದ ತೆಗೆದುಹಾಕಿದೆ. ಆ ಪುರವಣಿಯ ಸಂಪಾದಕಿ 24 ವರ್ಷಗಳ ಕಾಲ ಆ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು ಎನ್ನುವ ಮಾಹಿತಿಯನ್ನೂ ಇಲ್ಲಿ ಕೊಡಬೇಕು.

ಈ ಲಾಕ್‍ಡೌನ್, ಸೀಲ್‍ಡೌನ್, ಸ್ಮಾರ್ಟ್ ಲಾಕ್‍ಡೌನ್, ಸೂಪರ್ ಸ್ಮಾರ್ಟ್ ಲಾಕ್‍ಡೌನ್…. ಆಗುವುದಕ್ಕಿಂತ ಮೊದಲೇ ರಾಜ್ಯದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯೇ ಕನಿಷ್ಠ ಮೂವತ್ತು ಹಿರಿಯ ಪತ್ರಕರ್ತರನ್ನು ಮನೆಗೆ ಕಳುಹಿಸಲು ತೀರ್ಮಾನ ಮಾಡಿತ್ತು. ಅದೂ ಅತ್ಯಂತ ಹಳೆಯ ಮತ್ತು ಸಂಪ್ರದಾಯದ ನೆಲೆಯಲ್ಲಿ ಗಟ್ಟಿಯಾಗಿದ್ದ ಸಂಸ್ಥೆ. ಒಂದು ಕಾಲದಲ್ಲಿ ಆ ಸಂಸ್ಥೆಯಲ್ಲಿ ಉದ್ಯೋಗ ಸಿಕ್ಕಿದರೆ ಬದುಕೇ ಬೆಳಗಿ ಹೋಯಿತು ಎಂಬ ಭಾವನೆ ಇತ್ತು. ಅಂತಹ ಸಂಸ್ಥೆಯೇ ಇಂದು ಬೇಡವೆಂದವರನ್ನೆಲ್ಲಾ ಹೊರಗೆ ಹಾಕುತ್ತಿದೆ. ಪರಿಸ್ಥಿತಿ ಆ ಹಂತ ತಲುಪಿರುವಾಗ ಬೇರೆ ಸಂಸ್ಥೆಗಳ ಉದ್ಯೋಗಿಗಳ ಪಾಡೇನು?

ಪತ್ರಿಕೆಯ ಈ ಸಂಚಿಕೆ ಅಂತಿಮಗೊಳ್ಳುತ್ತಿರುವ ಹೊತ್ತಿನಲ್ಲಿ ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕೆಲಸ ಕಳೆದುಕೊಳ್ಳುತ್ತಿರುವ

ಮಾಧ್ಯಮ ಸಂಸ್ಥೆಗಳ ನೌಕರರ ವಿವರ ಹೀಗಿದೆ.

1. ಇಂಡಿಯನ್ ಎಕ್ಸ್‍ಪ್ರೆಸ್ ಮತ್ತು ಬಿಸಿನೆಸ್ ಸ್ಟ್ಯಾಂಡರ್ಡ್ ಸಿಬ್ಬಂದಿ ವೇತನ ಕಡಿತವನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡಿದೆ. ಇಂಡಿಯನ್ ಎಕ್ಸ್‍ಪ್ರೆಸ್ HR ಪತ್ರದ ಸಾರಾಂಶ ಹೀಗಿದೆ.

ಮೊದಲ ಹೆಜ್ಜೆಯಾಗಿ, ನಾವೆಲ್ಲರೂ ಇಂದಿನಿಂದ ತಾತ್ಕಾಲಿಕ ವೇತನ ಕಡಿತವನ್ನು ತೆಗೆದುಕೊಳ್ಳಲು ಒಪ್ಪಿಕೊಳ್ಳುವ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ನೀವೆಲ್ಲರೂ ನನ್ನೊಂದಿಗಿದ್ದೀರಿ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ.

ಮುಖ್ಯ ಸಂಪಾದಕ ರಾಜ್ ಕಮಲ ಜಾ ಮತ್ತು ವರ್ಗೀಸ್ ಅವರು ಶೇ.100ರಷ್ಟು ವೇತನ ಪಡೆಯದಿರಲು ನಿರ್ಧರಿಸಿದ್ದಾರೆ. ಅಧ್ಯಕ್ಷರು ಮತ್ತು ಅನಂತ್ ಕೂಡ ಶೇ.100ರಷ್ಟು ವೇತನ ಕಡಿತವನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಪರಿಸ್ಥಿತಿ ಸುಧಾರಿಸದಿದ್ದರೆ ನನಗೆ ಬೇರೆ ಆಯ್ಕೆ ಇರುವುದಿಲ್ಲ. ಆದರೆ ಹೆಚ್ಚಿನ ತ್ಯಾಗ ಮಾಡಲು ನಿಮ್ಮೆಲ್ಲರನ್ನೂ ವಿನಂತಿಸುತ್ತೇನೆ.

2. ಔಟ್‍ಲುಕ್ ಮುದ್ರಣ ಪ್ರಕಟಣೆಯನ್ನು ನಿಲ್ಲಿಸಿದೆ.

3. ನ್ಯೂಸ್‍ನೇಷನ್ ಇಂಗ್ಲಿಷ್ ಡಿಜಿಟಲ್ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದ 16 ಉದ್ಯೋಗಿಗಳನ್ನು ಕಡಿತಗೊಳಿಸಿದೆ.

4. ಕ್ವಿಂಟ್ ತಂಡದ ಅರ್ಧದಷ್ಟು ಜನರು ವೇತನವಿಲ್ಲದೆ ರಜೆ ಹೋಗಲು ಕೇಳಿಕೊಳ್ಳಲಾಗಿದೆ. ಜೊತೆಗೆ ಕ್ವಿಂಟ್ ತನ್ನ ಟೆಕ್ ಮತ್ತು ಆಟೋ ವಿಭಾಗವನ್ನು ಮುಚ್ಚಿದೆ

5. ಇಂಡಿಯಾ ಟುಡೆ 46 ವರದಿಗಾರರು, 6 ಕ್ಯಾಮೆರಾಮೆನ್ ಮತ್ತು 17 ಕಾರ್ಯಕ್ರಮ ನಿರ್ಮಾಪಕರನ್ನು ಮನೆಗೆ ಕಳುಹಿಸಿದೆ..

6. ಅಮರ್ ಉಜಲಾದಲ್ಲಿ 50% ಸಂಬಳ ಕಡಿತ ಮಾಡಿದೆ..

7. ಪಿಟಿಐ 60% ವೇತನವನ್ನು ಮಾತ್ರ ಬಿಡುಗಡೆ ಮಾಡಿದೆ?

8. ನಯೀ ದುನಿಯಾ (ಉರ್ದು) ಮತ್ತು ಸ್ಟಾರ್ ಆಫ್ ಮೈಸೂರು ಪ್ರಕಟಣೆಯನ್ನು ಸ್ಥಗಿತಗೊಳಿಸಿದೆ.

9. ಬಿಸಿನೆಸ್ ಸ್ಟ್ಯಾಂಡರ್ಡ್ ಎಚ್‍ಆರ್‍ನಿಂದ ಪ್ರತಿಯೊಬ್ಬ ಉದ್ಯೋಗಿಗೂ ಮೇಲ್ ಹೊಗಿದೆ.. ಇಮೇಲ್ ಸಾರಾಂಶ ಹೀಗಿದೆ.. ಮೇ ತಿಂಗಳಿನಿಂದ ಸಂಬಳ ಕಡಿತವನ್ನು ಯೋಜಿಸಲಾಗಿದೆ. 10 ರಿಂದ 15 ಲಕ್ಷ ವಾರ್ಷಿಕ ವೇತನ ಪಡೆಯುತ್ತಿರುವವರಿಗೆ ಶೇ 10, ಹೆಚ್ಚಿನ ಸಂಬಳ ಪಡೆಯುತ್ತಿರುವವರಿಗೆ ಶೇ.30 ಸಂಬಳ ಕಡಿತಗೊಳಿಸಲು ನಿರ್ಧರಿಸಲಾಗಿದೆ.

ಇದು ರಾಷ್ಟ್ರೀಯ ಸಂಸ್ಥೆಗಳ ಕಥೆಯಾದರೆ, ಕನ್ನಡ ಮಾಧ್ಯಮ ಲೋಕವನ್ನೇ ತೆಗೆದುಕೊಂಡರೆ, 8 ಸಾವಿರದಿಂದ 10 ಸಾವಿರ ಉದ್ಯೋಗಿಗಳು ಕೆಲಸ ಮಾಡಿತ್ತಿದ್ದಾರೆ. ಈ ಪೈಕಿ ಜೀವನ ಭದ್ರ ಮಾಡಿಕೊಂಡಿರುವವರ ಸಂಖ್ಯೆ ಎಷ್ಟಿರಬಹುದು. ಹೆಚ್ಚೆಂದರೆ ನೂರಿನ್ನೂರು ಜನರು. ಉಳಿದಂತೆ ಶೇ.95ರಷ್ಟು ಪತ್ರಕರ್ತರು ಈವತ್ತೂ ಹೋರಾಟದ ಹಾದಿಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಇಂತಹವರಿಗೆ ಒಂದು ತಿಂಗಳು ಸಂಬಳ ಬರದೇ ಹೋದರೆ ಬದುಕು ಮೂರಾಬಟ್ಟೆಯಾಗಿ ಹೋಗುತ್ತದೆ.

ಅದರಲ್ಲಂತೂ ಕೂಗು ಮಾರಿಗಳಾಗಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಕನ್ನಡದ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡುವ ಪತ್ರಕರ್ತರ ಪೈಕಿ ಕೆಲವೇ ಕೆಲವರನ್ನು ಬಿಟ್ಟರೆ ಉಳಿದವರ ಸ್ಥಿತಿ ಹೇಳಿಕೊಳ್ಳುವ ಹಾಗಿಲ್ಲ. ಆರ್ಥಿಕ ಕುಸಿತದಿಂದ ಮೊದಲೇ ಏದುಸಿರುಬಿಡುತ್ತಿದ್ದ ಮಾಧ್ಯಮಗಳಿಗೆ ಕೊರೊನಾ ಬಿಕ್ಕಟ್ಟು ಕಡೆಯ ಮೊಳೆ ಹೊಡೆಯುತ್ತಿದೆಯೇ ಎಂಬ ಪರಿಸ್ಥಿತಿ ತಲೆದೋರಿದೆ. ಸಂಪೂರ್ಣ ಚಿತ್ರಣವು ತೆರೆದುಕೊಳ್ಳುವುದು ಇನ್ನೂ ಮೂರ್ನಾಲ್ಕು ತಿಂಗಳ ನಂತರವೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಚ್ಚು ಮೀಡಿಯಾ ಗೆ ಹೆಚ್ಚು ಒಡೆತ ಬೀಳಲಿದೆ. Online, social mediaಗಳ ಒಡೆತದಿಂದ ಮೊದಲೇ ಹಿನ್ನಡೆಯನ್ನು ಕಂಡಿದ್ದ ಅಚ್ಚು ಒಯ್ಯುಗೆ ಮತ್ತಶ್ಟು ಮುಗ್ಗರಿಸಲಿದೆ. ಹೊತ್ತಿಗೆ ತಕ್ಕಂತೆ ಬದಲಾಗುವುದೊಂದೇ ಉಳಿದಿರುವ ದಾರಿ.

LEAVE A REPLY

Please enter your comment!
Please enter your name here

- Advertisment -

ಕಾಂಗ್ರೆಸ್ ನಿಂದ ಏಪ್ರಿಲ್ 12ರಂದು ‘ರನ್ ಫಾರ್ ಅಂಬೇಡ್ಕರ್, ರನ್ ಫಾರ್ ಕಾನ್ಸ್ಟಿಟ್ಯೂಷನ್’ ಮ್ಯಾರಥಾನ್ ಆಯೋಜನೆ

ನವದೆಹಲಿ: ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಭಾನುವಾರ 'ಅಂಬೇಡ್ಕರ್‌ಗಾಗಿ ಓಟ, ಸಂವಿಧಾನಕ್ಕಾಗಿ ಓಟ' ಮ್ಯಾರಥಾನ್ ಆಯೋಜಿಸಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿನ ಮಂಡಿ ಹೌಸ್‌ನಿಂದ ಮ್ಯಾರಥಾನ್‌ಗೆ...

ಮುಖ್ಯವಾಹಿನಿಗೆ ಬಂದ 42 ಕೇಡರ್‌ಗಳು; ರಾಜ್ಯದಲ್ಲಿ’ಮಾವೋವಾದಿ ಕಾರ್ಯಾಚರಣೆ’ ಅಂತ್ಯವಾಗಿದೆ ಎಂದ ತೆಲಂಗಾಣ ಪೊಲೀಸರು

ರಾಜ್ಯದಲ್ಲಿ ಸಿಪಿಐ (ಮಾವೋವಾದಿ) ಸಂಘಟನೆಯ ಕಾರ್ಯಚರಣೆ ಅಂತಿಮವಾಗಿದೆ ಎಂದು ತೆಲಂಗಾಣ ಪೊಲೀಸರು ಘೋಷಣೆ ಮಾಡಿದ್ದಾರೆ. ಬೆಟಾಲಿಯನ್ ಕಮಾಂಡರ್ ಮತ್ತು ಎರಡು ಪ್ರಮುಖ ಗುಂಪುಗಳ ಹಿರಿಯ ನಾಯಕತ್ವ ಸೇರಿದಂತೆ ನಿಷೇಧಿತ ಸಂಘಟನೆಯ 42 ಕೇಡರ್‌ಗಳು...

‘ಹಿಂದಿ ನಿರ್ಮೂಲನೆ ಮಾಡುತ್ತೇವೆ’ ಎಂದು ಸಚಿವರು ಹೇಳಿಲ್ಲ; ಹಿಂದಿ ಪರ ಅರ್ಜಿ ವಜಾ; ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳ ಮೌಲ್ಯಮಾಪನ ಸಂಬಂಧ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನೀಡಿದ ಹೇಳಿಕೆಯ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಕರ್ನಾಟಕ...

ದೆಹಲಿ| ಮುಸ್ಲಿಮರ ಮೇಲಿನ ದ್ವೇಷಕ್ಕೆ ಜೀವಂತ ಹಂದಿಗಳನ್ನು ಪೂಜಿಸುತ್ತಿರುವ ಹಿಂದೂಗಳು

ಹಳೆಯ ದೆಹಲಿಯ ಹಿಂದೂ-ಮುಸ್ಲಿಂ ಜನರು ವಾಸಿಸುವ ತ್ರನಗರದ ನೆರೆಹೊರೆಯಲ್ಲಿ ಹಿಂದೂ ಕುಟುಂಬಗಳು ಜೀವಂತ ಹಂದಿಗಳನ್ನು ಪೂಜಿಸುತ್ತಿದ್ದಾರೆ. ಮುಸ್ಲಿಮರ ಮೇಲಿನ ದ್ವೇಷಕ್ಕೆ ಮನೆಯ ಮುಂಭಾಗ ಅಲಂಕೃತ ಹಂದಿ (ವರಹಾಸ್ವಾಮಿ) ಚಿತ್ರಗಳನ್ನು ಅಳವಡಿಸಿದ್ದಾರೆ ಎಂದು 'ದಿ...

ಪ. ಬಂಗಾಳ: ಮಹಿಳೆಯರಿಗೆ ₹3,000 ರಿಂದ 6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಸೇರಿದಂತೆ ಹಲವು ಭರವಸೆ ನೀಡಿದ ಬಿಜೆಪಿ 

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಪ್ರಚಾರ ಆರಂಭವಾಗಿದ್ದು, ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪಶ್ಚಿಮ ಬಂಗಾಳದ ಬಿಜೆಪಿ...

ಹಾಸನ| ರೈತ ಮುಖಂಡ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ; ದುಷ್ಕರ್ಮಿಗಳ ಬಂಧನಕ್ಕೆ ಕೆಪಿಆರ್‌ಎಸ್‌ ಆಗ್ರಹ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ಕಾರ್ಯದರ್ಶಿ ಹಾಗೂ ಕಲ್ಕೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ-ದೌರ್ಜನ್ಯ ನಡೆಸಿರುವ ಗೂಂಡಾಗಳನ್ನು...

ಉತ್ತರ ಪ್ರದೇಶ| ಡಿಜಿಟಲ್ ಬಂಧನದಿಂದ ಪೋಷಕರನ್ನು ರಕ್ಷಿಸಿದ 8ನೇ ತರಗತಿ ವಿದ್ಯಾರ್ಥಿ

ಸುಮಾರು 10 ಗಂಟೆಗಳ ಕಾಲ ವೀಡಿಯೊ ಕರೆ ಮೂಲಕ ಡಿಜಿಟಲ್ ಬಂಧನಕ್ಕೆ ಒಳಗಾಗಿದ್ದ ತನ್ನ ಹೆತ್ತವರು ಹಣ ಕಳೆದುಕೊಳ್ಳದಂತೆ 8ನೇ ತರಗತಿಯ ಬಾಲಕನೊಬ್ಬ ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ...

ಅಸ್ಸಾಂ: ಪವನ್ ಖೇರಾ ವಿರುದ್ಧದ ಪ್ರಕರಣದಲ್ಲಿ ಒಂದು ವಾರದ ನಿರೀಕ್ಷಣ ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಸಲ್ಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಒಂದು ವಾರದ...

ನಿವಾಸದಲ್ಲಿ ನಗದು ಪತ್ತೆ ಪ್ರಕರಣದಲ್ಲಿ ಸಿಲುಕಿದ್ದ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ

ತಮ್ಮ ನಿವಾಸದಲ್ಲಿ ನಗದು ಪತ್ತೆ ಆರೋಪದ ಕೇಂದ್ರಬಿಂದುವಾಗಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಕಳೆದ ವರ್ಷ ಏಪ್ರಿಲ್ 5...

ಆಂಧ್ರಪ್ರದೇಶ: ಬೇಸಿಗೆ ವಿಹಾರಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಮುಳುಗಿ ಸಾವು 

ಅನಂತಗಿರಿ: ಬೇಸಿಗೆ ವಿಹಾಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಜಲಪಾತಕ್ಕೆ ಇಳಿದು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲೂರಿ ಸೀತಾರಾಮರಾಜು ಮೂಲಗುಮ್ಮಿ ಗ್ರಾಮದಲ್ಲಿ ನಾಲ್ವರು...