ಕಳೆದ ಎರಡು ದಿನಗಳಲ್ಲಿ ದೇಶದ ಎರಡು ಕಡೆಗಳಲ್ಲಿ ನಡೆದ ಘೋರ ದುರಂತಗಳಲ್ಲಿ ಒಟ್ಟು 17 ಬಡ ಕಾರ್ಮಿಕರು ಮೃತಪಟ್ಟಿದ್ದಾರೆ. ಸುಮಾರು 200ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ದುರಂತ -1: ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಭೀಕರ ಸ್ಪೋಟದಲ್ಲಿ ಒಟ್ಟು 11 ಕಾರ್ಮಿಕರು ಸಜೀವ ದಹನವಾಗಿದ್ದಾರೆ. 200ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
#WATCH | Aerial visuals of the firecracker factory in Harda, Madhya Pradesh where a massive explosion took place today.
Six people have died and 59 others are injured in the incident. pic.twitter.com/4s1tgz7kKY
— ANI (@ANI) February 6, 2024
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಘಟನೆಯ ಬಳಿಕ ತುರ್ತು ಸಭೆ ನಡೆಸಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದ್ದಾರೆ.
ಘಟನೆ ಸಂಬಂಧ ಪಟಾಕಿ ಕಾರ್ಖಾನೆಯ ಮಾಲೀಕರು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಖಾನೆಯ ಮಾಲೀಕರಾದ ಇಬ್ಬರು ಸಹೋದರರು ರಾಜೇಶ್ ಮತ್ತು ಸೋಮೇಶ್ ಅಗರ್ವಾಲ್ ಹಾಗೂ ಮ್ಯಾನೇಜರ್ ರಫೀಕ್ ಖಾನ್ ಬಂಧಿತರು.
ಈ ಪೈಕಿ ರಾಜೇಶ್ 2015ರಲ್ಲಿ ಕಾರ್ಖಾನೆಯಲ್ಲಿ ಸ್ಪೋಟ ಸಂಭವಿಸಿ ಇಬ್ಬರು ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ 2021ರಲ್ಲಿ 10 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ. ಬಳಿಕ ಆತ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ಜಾಮೀನು ಪಡೆದಿದ್ದ.
ದುರಂತ -2: ಇಂದು (ಫೆ.7) ತಮಿಳುನಾಡಿನ ಊಟಿ ಅಥವಾ ಉದಕಮಂಡಲದಲ್ಲಿ ನಿರ್ಮಾಣ ಹಂತದ ಕಟ್ಟಡದ ಪಕ್ಕದ ಮನೆಯೊಂದು ಕುಸಿದ ಪರಿಣಾಮ 6 ಮಂದಿ ಮಹಿಳಾ ಕಾರ್ಮಿಕರು ಜೀವಂತ ಸಮಾಧಿಯಾಗಿದ್ದಾರೆ.
#WATCH | Six construction workers died on the spot while undergoing house construction work at Lovedale, near Ooty in Tamil Nadu
"Two workers with serious injuries taken to Ooty Government Hospital, one worker missing under the debris, rescue operations underway, say Police. pic.twitter.com/NkrUFxw0TU
— ANI (@ANI) February 7, 2024
ಶಕೀಲಾ (30), ಸಂಗೀತಾ (35), ಭಾಗ್ಯಾ (36), ಮುತ್ತುಲಕ್ಷಿ (36) ಹಾಗೂ ರಾಧಾ (38) ಮೃತರು. ಸಂಜೆ 6:30ವರೆಗೆ ಲಭ್ಯವಾದ ಮಾಹಿತಿ ಪ್ರಕಾರ 6 ಮಂದಿ ಮೃತಪಟ್ಟಿದ್ದಾರೆ. ಕಟ್ಟಡಗಳ ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚು ಜೀವ ಹಾನಿಯಾಗಿರುವ ಮೇಲಿನ ಘಟನೆಗಳ ಜೊತೆಗೆ ದೇಶದ ವಿವಿದೆಡೆ ಕಳೆದ ಎರಡು ದಿನಗಳಲ್ಲಿ ಹಲವು ದುರಂತಗಳು ಸಂಭವಿಸಿವೆ.
ಈ ಪೈಕಿ ಮಂಗಳವಾರ ಸಂಜೆ ಮುಂಬೈನ ಉಪನಗರ ಬಾಂದ್ರಾದಲ್ಲಿನ ಸ್ಕ್ರ್ಯಾಪ್ ಯಾರ್ಡ್ನಲ್ಲಿ ಸಂಭವಿಸಿದ ಅಗ್ನಿ ದುರಂತವೂ ಒಂದು. ಈ ಅವಘಡದಲ್ಲಿ ಸುಮಾರು 150 ವಾಹನಗಳು ಬೆಂಕಿಗೆ ಆಹುತಿಯಾಗಿವೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಇದನ್ನೂ ಓದಿ : ಮ್ಯಾನುವಲ್ ಸ್ಕ್ಯಾವೆಂಜಿಂಗ್ ಪ್ರಕರಣದಲ್ಲಿ ಮೃತರ ಕುಟುಂಬಕ್ಕೆ 30 ಲಕ್ಷ ಪರಿಹಾರಕ್ಕೆ ಹೈಕೋರ್ಟ್ ಸೂಚನೆ