Homeಮುಖಪುಟಕೊರೊನಾ ಎರಡನೆ ಅಲೆಗೆ ವೇದಿಕೆ ಒದಗಿಸಿದ್ದು ಮೋದಿ ಸರ್ಕಾರದ ಅಪಕ್ವ ನಿರ್ಧಾರಗಳು, ಕಣ್ಕಟ್ಟು ಅಂಕಿಅಂಶಗಳು ಮತ್ತು...

ಕೊರೊನಾ ಎರಡನೆ ಅಲೆಗೆ ವೇದಿಕೆ ಒದಗಿಸಿದ್ದು ಮೋದಿ ಸರ್ಕಾರದ ಅಪಕ್ವ ನಿರ್ಧಾರಗಳು, ಕಣ್ಕಟ್ಟು ಅಂಕಿಅಂಶಗಳು ಮತ್ತು ಬೇಜವಾಬ್ದಾರಿ!

- Advertisement -
- Advertisement -

ಕೊರೊನಾ ಎರಡನೆ ಅಲೆಗೆ ಕಾರಣವೇನೆಂದು ದಿ ಪ್ರಿಂಟ್ ಪೋರ್ಟಲ್ ಪ್ರಕಟಿಸಿದ ಈ ವಿಶ್ಲೇಷಣಾತ್ಮಕ ವರದಿಯನ್ನು ನಾನುಗೌರಿ ಓದುಗರಿಗಾಗಿ ಅನುವಾದಿಸಿ ಕೊಡುತ್ತಿದ್ದೇವೆ. ಸುನಂದಾ ಜಯನ್ ಮೂರು ಭಾಗಗಳಲ್ಲಿ ಸಂಪಾದಿಸಿದ ಈ ವಿಶ್ಲೇಷಣೆಯ ಎರಡನೇ ಭಾಗವಿದು.

ಮೊದಲ ಕೋವಿಡ್ ಪ್ರಕರಣಗಳು ಪತ್ತೆಯಾದ ನಂತರ ಕಳೆದ 16 ತಿಂಗಳುಗಳಲ್ಲಿ, ಭಾರತವು “ಎಲ್ಲವೂ ಚೆನ್ನಾಗಿದೆ” ಎಂಬ ಧ್ಯೇಯವಾಕ್ಯದಿಂದ ಬದುಕುತ್ತ ಬಂದಿದೆ. ಇದು ಮಿತಿಗಳ ಕಾರಣದಿಂದ ಕಾರ್ಯತಂತ್ರ ರೂಪಿಸುವಾಗ ಅಡ್ಡ ದಾರಿ ಹಿಡಿದ ರಾಜಕೀಯ ನಡೆಗೆ ಸಾಕ್ಷಿಯಾಗಿದೆ ಮತ್ತು ಎರಡನೇ ಅಲೆಗೆ ಇದು ವೇದಿಕೆ ಒದಗಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ‘ಟೆಸ್ಟ್ ಟೆಸ್ಟ್ ಟೆಸ್ಟ್’ ಎಂಬ ಪಾಲಿಸಿ ಮೊರೆ ಹೋಗಿ ಅಂದಾಗ ಇಲ್ಲಿ “ಐಸೊಲೇಟ್ ಐಸೋಲೇಟ್ ಐಸೊಲೇಟ್” ಅನ್ನು ಕೌಂಟರ್ ಎಂಬಂತೆ ಬಳಸಲಾಗಿತು. ಸಾಂಕ್ರಾಮಿಕ ರೋಗದ ಆರಂಭದಲ್ಲಿ, ಪರೀಕ್ಷಾ ಕಿಟ್‌ಗಳು ಕಡಿಮೆ ಪೂರೈಕೆಯಲ್ಲಿದ್ದಾಗ ಈ ತಂತ್ರ ಅನುಸರಿಸಲಾಯಿತು.

ಪ್ರತಿ ವಾರವೂ ತನ್ನ ಕೋವಿಡ್ ಬ್ರೀಫಿಂಗ್‌ಗಳಲ್ಲಿ, ಸರ್ಕಾರವು ಭಾರತದ ಪ್ರಕರಣಗಳು ಮತ್ತು ಸಾವುಗಳನ್ನು ಸಂಪೂರ್ಣ (ansolute) ಸಂಖ್ಯೆಯ ಬದಲು ಒಂದು ಮಿಲಿಯನ್ (10 ಲಕ್ಷ) ಜನಸಂಖ್ಯೆಗೆ ದರಗಳಾಗಿ ಪ್ರಸ್ತುತಪಡಿಸಿತು. ದೇಶದ ಸೋಂಕು ಮತ್ತು ಸಾವಿನ ಪ್ರಮಾಣವು ವಿಶ್ವದಲ್ಲೇ ಅತ್ಯಂತ ಕಡಿಮೆ ಎಂದು ಒತ್ತಿಹೇಳುವ ಉದ್ದೇಶ ಇದಾಗಿತ್ತು.

ಅದೇ ಸಮಯದಲ್ಲಿ, ವರದಿ ಕಾರ್ಡ್ ಉತ್ತಮವಾಗಿ ಕಾಣುವಂತೆ ಮಾಡಲು ಟೆಸ್ಟ್‌ಗಳ ಸಂಖ್ಯೆ ಮತ್ತು (ಈಗ ವ್ಯಾಕ್ಸಿನೇಷನ್) ಅಂಕಿಅಂಶಗಳನ್ನು ಸಂಪೂರ್ಣವಾಗಿ ನಿಖರವಾಗಿ ನೀಡಲಾಯಿತು. ವ್ಯಾಕ್ಸಿನೇಷನ್ ಅಂಕಿಅಂಶಗಳನ್ನು ಜನಸಂಖ್ಯೆಯ ಶೇಕಡಾವಾರು ಪ್ರಮಾಣದಲ್ಲಿ ಹಂಚಿಕೊಂಡಿದ್ದರೆ, ಭಾರತವು ಇಸ್ರೇಲ್, ಅಮೆರಿಕ ಮತ್ತು ಬ್ರೆಜಿಲ್‌ನಂತಹ ರಾಷ್ಟ್ರಗಳಿಗಿಂತ ಹಿಂದುಳಿದಿದೆ ಎಂಬುದು ಜನರಿಗೆ ತಿಳಿಯುತ್ತಿತ್ತು.

ಭಾರತವು ಇಲ್ಲಿಯವರೆಗೆ ತನ್ನ ಕೆಟ್ಟ ದೈನಂದಿನ ಪ್ರಕರಣಗಳ ಸಂಖ್ಯೆಯನ್ನು ನೋಂದಾಯಿಸುತ್ತಿದ್ದರೂ, ರೂಪಾಂತರಿತ ತಳಿಗಳಿಗೆ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಭಾರತ ಸರ್ಕಾರ ನಿರಾಕರಿಸಿದೆ. ತಜ್ಞರು ಅನ್ಯಥಾ ಹೇಳಿಕೊಂಡರೂ ಸಹ, ವೈರಸ್‌ನ “ಭಾರತೀಯ” ತಳಿಯಿದೆ ಎಂಬುದನ್ನು ಅದು ನಿರಾಕರಿಸುತ್ತದೆ.

ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹೇಳುತ್ತಾರೆ, ಮೇಲೆ ಉಲ್ಲೇಖಿಸಿದ ಎಲ್ಲ ಕಾರಣಗಳು “ಭಾರತ ವಿಶೇಷ” ಎಂಬ ಕಲ್ಪನೆಯನ್ನು ಸೃಷ್ಟಿಸಿದೆ ಮತ್ತು ಎತ್ತಿಹಿಡಿದಿದೆ, ಮತ್ತು ಭಾಗಶಃ ಈ ಸುಳ್ಳು ವಿಶ್ವಾಸವು ಕೋವಿಡ್-ಸೂಕ್ತವಾದ ಮಾರ್ಗಸೂಚಿಯ ಉಲ್ಲಂಘನೆಗೆ ಕಾರಣವಾಗಿದೆ.

ಇತ್ತೀಚಿನ ತಿಂಗಳುಗಳಲ್ಲಿ, ಕೋವಿಡ್ ಹರಡುವಿಕೆಗೆ ಸಾರ್ವಜನಿಕರ ಬೇಜವಾಬ್ದಾರಿ ವರ್ತನೆ – ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಪಾಡದಿರುವುದು – ಮುಂತಾದ ತಡೆಗಟ್ಟುವ ಕ್ರಮಗಳನ್ನು ದೂರವಿಡುವುದನ್ನು ಸರ್ಕಾರ ದೂಷಿಸಿದೆ.

ತಜ್ಞರು ಹೇಳುವಂತೆ ಇದು ಸಾರ್ವಜನಿಕರು ಸಾಂಕ್ರಾಮಿಕ ರೋಗವನ್ನು ಕಡಿಮೆ ಅಂದಾಜು ಮಾಡಲು ಸರ್ಕಾರದ ಆಶಾವಾದಿ ಸಂವಹನಗಳೇ ಕಾರಣವಾಗಿವೆ. ಸರ್ಕಾರ ಸೃಷ್ಟಿಸಿದ ಈ ಹುಸಿ ಆಶಾಭಾವನೆಯೇ ಹೊಸ ಕೋವಿಡ್ ಅಲೆಗೆ ವೇದಿಕೆ ಕಲ್ಪಿಸಿದೆ. ಇದು ಗುರುವಾರ ಮತ್ತು ಶುಕ್ರವಾರ ಸತತ ಎರಡು ದಿನಗಳವರೆಗೆ 2 ಲಕ್ಷ ಪ್ರಕರಣಗಳಲ್ಲಿ ‘ಫಲಿತಾಂಶ’ವನ್ನು ಕಂಡುಕೊಂಡಿದೆ.

ಗೋಲ್‌ಪೋಸ್ಟ್‌ಗಳ ಸ್ಥಳಾಂತರ (ಗುರಿ-ಉದ್ದೇಶಗಳ ಬದಲಾವಣೆ) ಒಂದು ಹಂತದಲ್ಲಿ ಪ್ರಸರಣ ಸರಪಳಿಯನ್ನು ಮುರಿಯುವುದರಿಂದ, ಇನ್ನೊಂದರಲ್ಲಿ ದ್ವಿಗುಣಗೊಳಿಸುವ ಸಮಯವನ್ನು ಹೆಚ್ಚಿಸುವವರೆಗೆ – ಈ ಎರಡರಲ್ಲೂ ಸಹ ಸಹಾಯ ಮಾಡಿಲ್ಲ ಎನ್ನುವ ತಜ್ಞರು, ಕಾಲಾಂತರದಲ್ಲಿ ಇದು ಕೋವಿಡ್ ಕುರಿತ ಸರ್ಕಾರಿ ಸಂದೇಶಗಳ ಮೇಲೆ ಸಾರ್ವಜನಿಕರು ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ.

ಸಂಖ್ಯೆಗಳ ಕಣ್ಕಟ್ಟು

ಭಾರತವು ಕಳೆದ ಹಲವು ತಿಂಗಳುಗಳಿಂದ ತನ್ನ ಕೋವಿಡ್ -19 ಹೊರೆಯನ್ನು ಸುಮಾರು 138 ಕೋಟಿ ಜನಸಂಖ್ಯೆಯ ಮಸೂರದ ಮೂಲಕ ನೋಡಿದೆ. ಸಾವು ಮತ್ತು ಸೋಂಕುಗಳನ್ನು ಪ್ರತಿ ಮಿಲಿಯನ್‌ಗೆ ದರ ಎಂದು ಲೆಕ್ಕಹಾಕುತ್ತಾ, ಭಾರತವು ಇತರ ದೇಶಗಳಿಗಿಂತ ಗಮನಾರ್ಹವಾಗಿ ಕಡಿಮೆ ಸಂಖ್ಯೆ ಪ್ರಕರಣ ಹೊಂದಿ ಉತ್ತಮ ಸ್ಥಿತಿಯಲ್ಲಿದೆ ಎಂದು ಬಿಂಬಿಸುತ್ತ ಬರಲಾಗಿತ್ತು.
ಭಾರತವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸೂಚಿಸಲು ಈ ಅಂಕಿಅಂಶಗಳನ್ನು ಸರ್ಕಾರದ ಸಾಪ್ತಾಹಿಕ ಕೋವಿಡ್ ಮಾಧ್ಯಮ ಬ್ರೀಫಿಂಗ್‌ನಲ್ಲಿ ಪ್ರಸ್ತುತಪಡಿಸಲಾಯಿತು.
ದೈನಂದಿನ ಪಾಸಿಟಿವ್ ಸಂಖ್ಯೆ 2 ಲಕ್ಷವನ್ನು ಮೀರಿದ ಸಮಯದಲ್ಲಿ ಸಹ, ಭಾರತದ ಪ್ರಕರಣಗಳು-ಪ್ರತಿ ಮಿಲಿಯನ್ ಅಂಕಿಅಂಶಗಳ ಆಧಾರದಲ್ಲಿ 9,977 ರಷ್ಟಿದ್ದು, ಜಾಗತಿಕ ಸರಾಸರಿ 17,711 ರಷ್ಟಿದೆ. ಪ್ರತಿ ಮಿಲಿಯನ್‌ಗೆ ಸಾವುಗಳು ಜಾಗತಿಕ ಸರಾಸರಿ 381.4 ರ ವಿರುದ್ಧ 124 ರಷ್ಟಿದೆ ಎಂದು ಅಂಕಿಸಂಖ್ಯೆಗಳ ಕಣ್ಕಟ್ಟು ಮಾಡುತ್ತ ನಡೆದಿದೆ ಸರ್ಕಾರ.

ಏಪ್ರಿಲ್ 16 ರ ಹೊತ್ತಿಗೆ ಭಾರತವು 1,74,308 ಕೋವಿಡ್ -19 ಸಾವುಗಳನ್ನು ದಾಖಲಿಸಿದೆ.
ದೇಶದಲ್ಲಿ ಸಾವಿನ ವರದಿಯ ಸತ್ಯಾಸತ್ಯತೆಯ ಬಗ್ಗೆ ಸಂದೇಹವಿರುವುದರಿಂದ ಈ ಅಂಕಿ ಅಂಶವೇ ಪ್ರಶ್ನಾರ್ಹವಾಗಿದೆ. ವಿವಿಧ ರಾಜ್ಯಗಳು “ಕೋವಿಡ್ ಡೆತ್” ಎಂದರೇನು ಎಂಬುದರ ಬಗ್ಗೆ ತಮ್ಮದೇ ಆದ ಮಾನದಂಡಗಳನ್ನು ನಿರ್ಧರಿಸುತ್ತಿವೆ: ಹೃದಯ ರೋಗಿಯು ಸತ್ತರೆ ಅದು ಕೋವಿಡ್ ಸಾವು ಅಲ್ಲವೆ? ಏಕೆಂದರೆ ಕೊರೋನಾ ಸೋಂಕು ಅವರ ಅಸ್ತಿತ್ವದಲ್ಲಿರುವ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆಯೇ? – ಹೀಗೆ ವಿವಿಧ ಗೊಂದಲಗಳು ಇನ್ನೂ ಇವೆ.

ಟೆಸ್ಟ್ ಮತ್ತು ಲಸಿಕಾಯಣ

ಟೆಸ್ಟ್ ಮತ್ತು ವ್ಯಾಕ್ಸಿನೇಷನ್ ಸಂಖ್ಯೆಗಳಿಗೆ ಸಂಪೂರ್ಣವಾಗಿ ವಿಭಿನ್ನವಾದ ಗಜಕಡ್ಡಿಗಳನ್ನು ಅಂದರೆ ಮಾನದಂಡಗಳನ್ನು ಬಳಸಲಾಗಿದೆ. ಈ ಅಂಕಿಅಂಶಗಳನ್ನು ನೇರವಾಗಿ ನೀಡಲಾಗಿದೆ. ಇಲ್ಲೂ ಮಿಲಿಯನ್‌ಗೆ ಇಷ್ಟು ಟೆಸ್ಟ್ ಅಥವಾ ಇಷ್ಟು ಲಸಿಕೆ ಎಂದು ಹೇಳಿದ್ದರೆ ಅದು ಈಗ ಬಿಂಬಿತವಾದ ಚಿತ್ರವನ್ನು ತಲೆಕೆಳಗು ಮಾಡುತ್ತಿತ್ತು!

ವಾಸ್ತವ ಹೀಗಿದೆ: ಪ್ರತಿ 10 ಲಕ್ಷ ಜನಸಂಖ್ಯೆಗೆ 1,89,459 ಟೆಸ್ಟಿಂಗ್ (ಏಪ್ರಿಲ್ 16 ರಂತೆ) ನಡೆದಿವೆ. ಈ ಲೆಕ್ಕದಲ್ಲಿ ಭಾರತವು ಯುಎಸ್, ಫ್ರಾನ್ಸ್, ಯುಕೆ, ರಷ್ಯಾ, ಟರ್ಕಿ ಮತ್ತು ಇತರ ಹಲವು ದೇಶಗಳಿಗಿಂತ ಬಹಳ ಹಿಂದಿದೆ.

ಅಂದಾಜು ಶೇ. 7.27 ರಷ್ಟು ಭಾರತೀಯರು ಈವರೆಗೆ ಎರಡು-ಡೋಸ್ ಕೋವಿಡ್ -19 ಲಸಿಕೆಗಳಲ್ಲಿ ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ. ಹೋಲಿಸಬಹುದಾದ ಸಂಖ್ಯೆಗಳು ಇಲ್ಲಿವೆ ನೋಡಿ: ಇಸ್ರೇಲ್ 61.47, ಬ್ರಿಟನ್ 47.42, ಅಮೆರಿಕಾ 35.65, ಜರ್ಮನಿಯಲ್ಲಿ 15.80, ಟರ್ಕಿಯಲ್ಲಿ 12.93 ಮತ್ತು ಬ್ರೆಜಿಲ್‌ನಲ್ಲಿ ಶೇ 9.72.

“ನಾವು ಇಡೀ ದೇಶದ ಒಂದು ಸಮಗ್ರ ವಿಧಾನದಲ್ಲಿದ್ದೇವೆ ಎಂದು ನಾನು ಭಾವಿಸುವುದಿಲ್ಲ. ಆದರೆ ಸಂದೇಶ ಕಳುಹಿಸುವಿಕೆಯು ಅಸಮಂಜಸವಾಗಿದೆ. ಅದು ರಾಷ್ಟ್ರೀಯವಾಗಿರಬೇಕು. ಇದು ಗಂಭೀರ ರೋಗವೇ ಅಥವಾ ಅಲ್ಲವೇ?’ ಎಂಬುದು ರಾಷ್ಟ್ರೀಯವಾಗಿ ಸ್ಪಷ್ಟವಾಗುವಂತೆ ಒಂದು ದೃಢ ಸಂದೇಶದ ಅಗತ್ಯವಿದೆ ಎಂದು ಸಾರ್ವಜನಿಕ ಆರೋಗ್ಯ ಸಂಶೋಧನಾ ಸಂಸ್ಥೆಯಾದ ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಎಕನಾಮಿಕ್ಸ್ & ಪಾಲಿಸಿಯ ಅಂಗಸಂಸ್ಥೆ ಪ್ರಾಧ್ಯಾಪಕ, ಜಾಗತಿಕ ಆರೋಗ್ಯ ನಿರ್ದೇಶಕ ರಮಣನ್ ಲಕ್ಷ್ಮೀ ನಾರಾಯಣ್ ಹೇಳಿದರು.

“ನಾವು ರೋಗದ ತೀವ್ರತೆ ಮತ್ತು ಮರಣ ಪ್ರಮಾಣವನ್ನು ತಪ್ಪಾಗಿ ಪ್ರಕಟಣೆ ಮಾಡಿದರೆ, ಬೀದಿಯಲ್ಲಿರುವ ವ್ಯಕ್ತಿ ಮಾಸ್ಕ್ ಮತ್ತು ಸುರಕ್ಷಿತ ದೂರವನ್ನು ಅನುಸರಿಸುವುದಿಲ್ಲ ಎಂಬುದು ಸಹಜ. ಅದು ಜನಸಾಮಾನ್ಯನ ತಪ್ಪಲ್ಲ. ನಾವು ಭಯ ಮತ್ತು ತೃಪ್ತಿಯ ನಡುವೆ ಆ ಕಡೆ ಈ ಕಡೆ ಜೋಕಾಲಿ ಆಡುತ್ತಿದ್ದೇವೆ. ಇದು ಸರಿಯಾದ ವಿಧಾನವೂ ಅಲ್ಲ. ಇಲ್ಲಿ ಒಂದು ಸ್ಪಷ್ಟತೆ ಬೇಕು” ಎಂದು ಅವರು ಎಚ್ಚರಿಸಿದ್ದಾರೆ.

ಗೋಲ್‌ಪೋಸ್ಟ್‌ಗಳನ್ನು ಬದಲಾಯಿಸಲಾಗುತ್ತಿದೆ

ಭಾರತವು ತನ್ನ ಸಾಂಕ್ರಾಮಿಕದ ವಿರುದ್ಧದ ಪ್ರಯಾಣವನ್ನು ಅಬ್ಬರದಿಂದ ಪ್ರಾರಂಭಿಸಿತು. ಇದು “ಪ್ರಸರಣ ಸರಪಳಿಯನ್ನು ಮುರಿಯಲು” ಹೇರಿದ ಒಂದು ಅವಾಸ್ತವಿಕ ಲಾಕ್‌ಡೌನ್ ಆಗಿತ್ತು. ಒಂದು ತಿಂಗಳಿಗಿಂತಲೂ ಕಡಿಮೆ ಅವಧಿಯಲ್ಲಿ, ಗುರಿ ಬದಲಾಗಿತ್ತು. ದೇಶವು “ದ್ವಿಗುಣಗೊಳಿಸುವ ಸಮಯವನ್ನು” ಹೆಚ್ಚಿಸುವಲ್ಲಿ ತನ್ನ “ಯಶಸ್ಸನ್ನು” ಆನಂದಿಸಿತು. (ಸೋಂಕುಗಳ ಸಂಖ್ಯೆ ದ್ವಿಗುಣಗೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದರ ಲೆಕ್ಕಾಚಾರ) ಆದರೆ ವಾಸ್ತವ ಬೇರೆಯೇ ಇತ್ತು. ವಾಸ್ತವ ಸಂಖ್ಯೆಗಳು ಕಠೋರವಾಗಿ ಕಾಣುತ್ತಿರುವಾಗ, ಜವಾಬ್ದಾರಿ ಮೊದಲು ರಾಜ್ಯಗಳ ಮೇಲೆ ಬಿತ್ತು ಮತ್ತು ನಂತರ “ಬೇಜವಾಬ್ದಾರಿತನ”ದ ಕೇಂದದ ನಿಲುವುಗಳತ್ತ ತಿರುಗಿತು.

ಪರೀಕ್ಷಾ ಕಿಟ್‌ಗಳ ಪೂರೈಕೆ ಸರಾಗವಾಗಿದ್ದರಿಂದ ಪರೀಕ್ಷೆಯ ಬಗ್ಗೆ ಭಾರತದ ದೃಷ್ಟಿಕೋನವು ಈಗ ವಿಕಸನಗೊಂಡಿದೆ. ಆದರೂ, ಮಾರ್ಚ್ 2020 ಕ್ಕೆ ಹಿಂತಿರುಗಿ ನೋಡಿ ಆಗ ದೃಶ್ಯ ವಿಭಿನ್ನವಾಗಿತ್ತು.. ವೈರಸ್ ಅನ್ನು ಸೋಲಿಸಲು ವಿಶ್ವ ಆರೋಗ್ಯ ಸಂಸ್ಥೆಯ “ಟೆಸ್ಟ್ ಟೆಸ್ಟ್ ಟೆಸ್ಟ್” ಪ್ರತಿಪಾದನೆಗೆ ಪ್ರತಿಕ್ರಿಯಿಸಿದ ಭಾರತ, ಕ್ವಾರಂಟೈನ್ ಕ್ವಾರಂಟೈನ್ ಕ್ವಾರಂಟೈನ್’ ಎಂಬ ಹಾದಿ ಹಿಡಿದಿತ್ತು..

ನಂತರದಲ್ಲಿ ಸರ್ಕಾರವೇ ಜನರು ಪರೀಕ್ಷೆಗೆ ಒಳಗಾಗುವಂತೆ ಮನವಿ ಮಾಡಿದರೂ ಸಹ, ಹಿಂಜರಿಕೆ, ಆತಂಕಗಳು ಸಹ ಇದ್ದವು. ಇದು ಕೂಡ ಸರ್ಕಾರ ಟೆಸ್ಟಿಂಗ್ ಬಗ್ಗೆ ಆರಂಭದಲ್ಲಿ ತಳೆದ ಧೋರಣೆಯ ಫಲವಾಗಿತ್ತು.

“ಈ ಸಾಂಕ್ರಾಮಿಕದಾದ್ಯಂತ ಮಿಶ್ರ ಸಂದೇಶ ಕಳುಹಿಸುವುದು, ನಾವು ಏನೂ ಇಲ್ಲದಿದ್ದಾಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳುವುದು ನಿರಂತರ ಸಮಸ್ಯೆಯಾಗಿದೆ. ಆ ಸಂದೇಶಗಳನ್ನು ನಂಬದ ಹೊರತು ಜನರು ಸಾರ್ವಜನಿಕ ಆರೋಗ್ಯ ಸಂದೇಶವನ್ನು ಕೇಳುವುದಿಲ್ಲ. ಅದು ಇಲ್ಲಿಯೇ ಸಂಭವಿಸಿದೆ ಎಂದು ತೋರುತ್ತದೆ” ಎಂದು ಅಶೋಕ ವಿಶ್ವವಿದ್ಯಾಲಯದ ತ್ರಿವೇದಿ ಸ್ಕೂಲ್ ಆಫ್ ಬಯೋಸೈನ್ಸ್ನ ನಿರ್ದೇಶಕ ವೈರಾಲಜಿಸ್ಟ್ ಡಾ.ಶಾಹಿದ್ ಜಮೀಲ್ ಹೇಳಿದ್ದಾರೆ.

ಸಮುದಾಯ ಪ್ರಸರಣ

ಸಮುದಾಯ ಪ್ರಸರಣವನ್ನು ನಿರಾಕರಿಸಲು ಸರ್ಕಾರವು ಹೆಚ್ಚಿನ ಪ್ರಯತ್ನಗಳನ್ನು ಮಾಡಿದೆ, ಹೊಸ ಮತ್ತು ಉದಯೋನ್ಮುಖ ಸೋಂಕುಗಳ ಮೂಲವು ಇನ್ನು ಮುಂದೆ ತಿಳಿದಿಲ್ಲ ಮತ್ತು ಸಂವಹನವು ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ವ್ಯವಸ್ಥೆಯಿಲ್ಲದೆ ಸಮುದಾಯದಲ್ಲಿ ವೈರಸ್ ಸಡಿಲವಾಗಿ ಹೊಕ್ಕಿದೆ.

ತಂತ್ರಜ್ಞರು, ಆಫ್-ದಿ-ರೆಕಾರ್ಡ್ ಸಂಭಾಷಣೆಗಳಲ್ಲಿ, ಅದನ್ನು “ಭ್ರಮೆ” ಎಂದು ನಗಿಸಿದರೂ ನಿರಾಕರಣೆ ಮುಂದುವರಿಯುತ್ತದೆ.

ಸಮುದಾಯ ಪ್ರಸರಣವಿಲ್ಲದಿದ್ದರೆ, ನಾವು ಫೆಬ್ರವರಿಯಿಂದ ಏಪ್ರಿಲ್‌ನಲ್ಲಿ ಗರಿಷ್ಠ ಮಟ್ಟಕ್ಕೆ ಹೇಗೆ ಬಂದೆವು? ನಾವು ಸೋಂಕನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂಬುದು ಇದಕ್ಕೆ ಕಾರಣ. ಪರೀಕ್ಷೆ ಮತ್ತು ಟ್ರ‍್ಯಾಕಿಂಗ್ ಬಗ್ಗೆ ನಾವು ಇನ್ನೂ ಅರ್ಥಹೀನವಾಗಿ ಮಾತನಾಡುತ್ತಿರುವುದು ಆ ನಿರಾಕರಣೆಯಾಗಿದೆ” ಎಂದು ಸಾಂಕ್ರಾಮಿಕ ನಿಯಂತ್ರಣ ತಂತ್ರದ ಚೌಕಟ್ಟಿನೊಂದಿಗೆ ನಿಕಟ ಸಂಬಂಧ ಹೊಂದಿರುವ ಸರ್ಕಾರಿ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹೇಳಿದರು.

“ರೂಪಾಂತರವು ನೈಸರ್ಗಿಕ ಪ್ರಕ್ರಿಯೆ. ನಾವು 13 ಮಿಲಿಯನ್ ಸೋಂಕುಗಳನ್ನು ಹೊಂದಿರುವಾಗ ವೈರಸ್ ರೂಪಾಂತರಗೊಂಡಿಲ್ಲ ಎಂದು ಭಾವಿಸುವುದು ಮೂರ್ಖತನ. ಈ ಸಮಯದಲ್ಲಿ, ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದೆ – ದೆಹಲಿಯಲ್ಲಿ, ನಾವು ಕೆಲವು ಅಧ್ಯಯನಗಳನ್ನು ಮಾಡಿದ್ದೇವೆ, ಅದು ಶೇಕಡಾ 50 ರಷ್ಟು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ತೋರಿಸುತ್ತದೆ ” ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಜಮೀಲ್ ಹೇಳಿದರು.

“ಭಾರತೀಯ ರೂಪಾಂತರವಿದೆ ಎಂದು ಸಹ ಉತ್ತಮವಾಗಿ ದಾಖಲಿಸಲಾಗಿದೆ. ಯುಕೆ ರೂಪಾಂತರವಿದೆ, ಬ್ರೆಜಿಲ್ ರೂಪಾಂತರವಿದೆ, ಏಕೆ ಭಾರತೀಯ ರೂಪಾಂತರ ಇರಬಾರದು? ನಮ್ಮ ಬಗ್ಗೆ ಏನು ವಿಶೇಷ?’ ಎಂದು ಜಮೀಲ್ ಕೇಳುತ್ತಾರೆ.

ಈಗಲೂ ನೋಡಿ, ಪ್ರಧಾನಿ, ಗೃಹ ಸಚಿವರಿಗೆ ಚುನಾವಣೆ ರ‍್ಯಾಲಿ ಮತ್ತು ಕುಂಭಮೇಳ ಮುಖ್ಯವಾಗಿವೆ ಹೊರತು ದೇಶವನ್ನು ತೀವ್ರವಾಗಿ ಕಾಡುತ್ತಿರುವ ಕೊರೋನಾ ಎರಡನೇ ಅಲೆ ಅಲ್ಲ!

ಕೃಪೆ: ದಿ ಪ್ರಿಂಟ್


ಇದನ್ನೂ ಓದಿ: ಆಕ್ಸಿಜನ್ ಕೊರತೆ ಕುರಿತು ಪ್ರಧಾನಿಗೆ ಕರೆ ಮಾಡಿದ ಉದ್ಧವ್ ಠಾಕ್ರೆ: ಬಂಗಾಳ ಚುನಾವಣಾ ಪ್ರಚಾರದಲ್ಲಿದ್ದಾರೆ ಎಂದ ಪಿಎಂಒ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...