Homeಮುಖಪುಟ‘ಕೋರ್ಟುಗಳು ಮಹಿಳೆಯರ ಕುರಿತ ರೂಢಿಗತ ಅಪವಾದ ಪರಿಗಣಿಸಬಾರದು’: ಸುಪ್ರೀಂ ಕೋರ್ಟ್

‘ಕೋರ್ಟುಗಳು ಮಹಿಳೆಯರ ಕುರಿತ ರೂಢಿಗತ ಅಪವಾದ ಪರಿಗಣಿಸಬಾರದು’: ಸುಪ್ರೀಂ ಕೋರ್ಟ್

- Advertisement -
- Advertisement -

ಮಧ್ಯಪ್ರದೇಶ ಹೈಕೋರ್ಟಿನ ‘ರಾಖಿ-ಜಾಮೀನು’ ಆದೇಶವನ್ನು ಬದಿಗೆ ಸರಿಸಿದ ಸುಪ್ರೀಂ ಕೋರ್ಟ್, ಲೈಂಗಿಕ ಅಪರಾಧಗಳಲ್ಲಿ ನ್ಯಾಯಾಲಯಗಳು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ವಿವರಿಸಿದೆ ಎಂದು ಲೈವ್‌ಲಾ ವರದಿ ಮಾಡಿದೆ.

‘ಜಾಮೀನು ನೀಡಲು ರಾಖಿ ಕಟ್ಟುವುದನ್ನು ಒಂದು ನಿರ್ಬಂಧವಾಗಿ ಮಾಡಿದರೆ, ಕಿರುಕುಳ ನೀಡಿದ ವ್ಯಕ್ತಿ ಸಹೋದರನಾಗಿ ಪರಿವರ್ತನೆ ಆಗುತ್ತಾನೆ. ಇದು ಸಂಪೂರ್ಣವಾಗಿ ಸಮ್ಮತವಲ್ಲ. ಇದು ಲೈಂಗಿಕಸ ದೌರ್ಜನ್ಯದ ಪ್ರಕರಣವನ್ನು ನಾಶ ಮಾಡುತ್ತದೆ ಅಥವಾ ದುರ್ಬಲಗೊಳಿಸುತ್ತದೆ. ಇದು ಸಂತ್ರಸ್ತರಿಗೆ ಅನ್ಯಾಯ ಮಾಡುತ್ತದೆ. ಕ್ಷಮೆ ಯಾಚಿಸುವಿಕೆ, ಸಮುದಾಯ ಸೇವೆಯ ಆಶ್ವಾಸನೆ, ರಾಖಿ ಕಟ್ಟುವುದು, ಸಂತ್ರಸ್ತೆಗೆ ಕಾಣಿಕೆ ನೀಡುವುದು ಅಥವಾ ಮದುವೆಯಾಗುವುದಾಗಿ ಒಪ್ಪಿಕೊಳ್ಳುವುದು-ಇವು ಯಾವುದರ ಮೂಲಕವೂ ಅಪರಾಧವನ್ನು ನಗಣ್ಯ ಮಾಡುವ ಹಾಗಿಲ್ಲ. ಈ ಕಾನೂನು ಸಂತ್ರಸ್ತ ಮಹಿಳೆಗೆ ನ್ಯಾಯ ಒದಗಿಸದು’ ಎಂದು ನ್ಯಾಯಾಧೀಶರಾದ ರವೀಂದ್ರಭಟ್ ಮತ್ತು ಖಾನ್ವಿಲ್ಕರ್ ಅವರ ಪೀಠ ತೀರ್ಪು ನೀಡಿದೆ.

“ಅಪರಾಧವನ್ನು ಕಡಿಮೆ ಮಾಡುವ ಮತ್ತು ಸಂತ್ರಸ್ತರನ್ನು ಕ್ಷುಲ್ಲಕಗೊಳಿಸುವ ಪ್ರವೃತ್ತಿಯ ತಾರ್ಕಿಕ / ಭಾಷೆಯ ಬಳಕೆಯನ್ನು ಎಲ್ಲಾ ಸಂದರ್ಭಗಳ ಅಡಿಯಲ್ಲಿ ತಪ್ಪಿಸಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

‘ಈ ಮೊದಲು ಸಂತ್ರಸ್ತ ಮಹಿಳೆ ಇತರರ ಜೊತೆ ಸಲುಗೆ ಹೊಂದಿದ್ದಳು ಎಂಬುದಾಗಲಿ, ಆರೋಪಿಗೆ ತನ್ನ ಉಡುಪು ಧರಿಸುವಿಕೆ ಮೂಲಕ ಪ್ರಚೋದಿಸಿದ್ದಳು ಎಂಬುದಾಗಲಿ ಇಲ್ಲಿ ಪರಿಗಣನೆ ಆಗಕೂಡದು ಎಂದು ತೀರ್ಪು ಹೇಳಿದೆ. ಆಕೆ ‘ಭಾರತೀಯ’ ಮಹಿಳೆಯಂತೆ ವರ್ತಿಸಲಿಲ್ಲ ಎಂಬುದೂ ಅಸಂಬದ್ಧ ಎಂದು ಪೀಠ ಹೇಳಿದೆ.

‘ಅಂತಹ ವರ್ತನೆಗಳು ನ್ಯಾಯಾಂಗೀಯ ವ್ಯಾಪ್ತಿಯಲ್ಲಿ ಪರಿಗಣನೆ ಆಗುವುದಿಲ್ಲ ಮತ್ತು ಆರೋಪಿಗೆ ಜಾಮೀನು ನೀಡಲು ಇವನ್ನು ಕಾರಣವಾಗಿ ಗಣನೆಗೆ ತೆಗೆದುಕೊಳ್ಳಲು ಆಗುವುದಿಲ್ಲ’ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

‘ಮೇಲೆ ಉಲ್ಲೇಖಿಸಲಾದ ಸಂದರ್ಭಗಳ ಮೂಲಕ ಸಂತ್ರಸ್ತೆಯನ್ನು ಒಪ್ಪಿಕೊಳ್ಳುವಂತೆ ಮಾಡುವ ಪ್ರಕ್ರಿಯೆಯೂ ನ್ಯಾಯಬದ್ಧವಲ್ಲ’ ಎಂದು ತೀರ್ಪು ಹೇಳಿದೆ.

ನ್ಯಾಯಾಲಯವು ಈ ಕೆಳಗಿನ ಮಾರ್ಗಸೂಚಿಗಳನ್ನು ಹೊರಡಿಸಿದೆ:

(ಎ) ಜಾಮೀನು ಷರತ್ತುಗಳು ಆರೋಪಿ ಮತ್ತು ಸಂತ್ರಸ್ತರ ನಡುವೆ ಸಂಪರ್ಕವಿತ್ತು ಎಂಬುದನ್ನು ಕಡ್ಡಾಯಗೊಳಿಸಬಾರದು. ಅದು ಅಗತ್ಯವಿಲ್ಲ ಅಥವಾ ಅನುಮತಿಸಬಾರದು. ಅಂತಹ ಷರತ್ತುಗಳು ದೂರುದಾರರನ್ನು ಯಾವುದೇ ಕಿರುಕುಳದಿಂದ ರಕ್ಷಿಸಲು ಪ್ರಯತ್ನಿಸಬೇಕು.

ಬಿ) ಸಂತ್ರಸ್ತೆಗೆ ಕಿರುಕುಳದ ಸಂಭವನೀಯ ಬೆದರಿಕೆ ಇರಬಹುದು ಎಂದು ನ್ಯಾಯಾಲಯವು ನಂಬುವ ಸಂದರ್ಭಗಳು ಅಸ್ತಿತ್ವದಲ್ಲಿವೆ, ಅಥವಾ ಆತಂಕ ವ್ಯಕ್ತಪಡಿಸಿದ ನಂತರ, ಪೊಲೀಸರಿಂದ ವರದಿಗಳನ್ನು ಪಡೆದ ನಂತರ, ರಕ್ಷಣೆಯ ಸ್ವರೂಪವನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ. ಇದರ ಆಧಾರದ ಮೇಲೆ ಸೂಕ್ತ ಆದೇಶವನ್ನು ಮಾಡಬೇಕು. ಸಂತ್ರಸ್ತೆಯೊಂದಿಗೆ ಯಾವುದೇ ಸಂಪರ್ಕವನ್ನು ಮಾಡದಂತೆ ಆರೋಪಿಗೆ ನಿರ್ದೇಶನ ನೀಡಬೇಕು.

ಸಿ) ಜಾಮೀನು ಮಂಜೂರು ಮಾಡಿದ ಎಲ್ಲಾ ಪ್ರಕರಣಗಳಲ್ಲಿ, ಎರಡು ದಿನಗಳೊಳಗೆ ಆರೋಪಿಗೆ ಜಾಮೀನು ನೀಡಲಾಗಿದೆ ಎಂದು ದೂರುದಾರರಿಗೆ ತಕ್ಷಣ ತಿಳಿಸಬೇಕು.

ಡಿ) ಜಾಮೀನು ಪರಿಸ್ಥಿತಿಗಳು ಮತ್ತು ಆದೇಶಗಳು ಮಹಿಳೆಯರ ಬಗ್ಗೆ ಮತ್ತು ಸಮಾಜದಲ್ಲಿ ಅವರ ಸ್ಥಾನದ ಬಗ್ಗೆ ರೂಢಿಗತ ಅಥವಾ ಪಿತೃಪ್ರಭುತ್ವದ ಕಲ್ಪನೆಗಳನ್ನು ಪ್ರತಿಬಿಂಬಿಸುವುದನ್ನು ತಪ್ಪಿಸಬೇಕು. ಇದೆಲ್ಲ ಸಿಆರ್‌ಪಿಸಿ ಸೆಕ್ಷನ್ ಅವಶ್ಯಕತೆಗಳಿಗೆ ಅನುಗುಣವಾಗಿ ಕಟ್ಟುನಿಟ್ಟಾಗಿರಬೇಕು. ಬೇರೆ ರೀತಿಯಲ್ಲಿ ಹೇಳುವುದಾದರೆ, ಸಂತ್ರಸ್ತರ ಉಡುಗೆ, ನಡವಳಿಕೆ ಅಥವಾ ಹಿಂದಿನ “ನಡವಳಿಕೆ” ಅಥವಾ “ನೈತಿಕತೆಗಳ” ಬಗೆಗಿನ ಚರ್ಚೆ, ಇವೆಲ್ಲ ಜಾಮೀನು ನೀಡುವ ತೀರ್ಪಿನಲ್ಲಿ ನಮೂದಿತವಾಗಬಾರದು.

(ಕೃಪೆ: ಲೈವ್ ಲಾ)


ಇದನ್ನೂ ಓದಿ; ಚುನಾವಣೆಯಿಂದ ಹಿಂದೆ ಸರಿಯದ ಅಭ್ಯರ್ಥಿಯ ಮಗಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ದುಷ್ಕರ್ಮಿಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ‘ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್’: ಸಿಎಂ ಸಿದ್ದರಾಮಯ್ಯ

‘ಮೋದಿ ಸರ್ಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ, ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತ ಈ 2026 ಬಜೆಟ್’ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.  ಕಲಬುರಗಿ ವಿಮಾನ...

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...