ಮಧ್ಯಪ್ರದೇಶ ಹೈಕೋರ್ಟಿನ ‘ರಾಖಿ-ಜಾಮೀನು’ ಆದೇಶವನ್ನು ಬದಿಗೆ ಸರಿಸಿದ ಸುಪ್ರೀಂ ಕೋರ್ಟ್, ಲೈಂಗಿಕ ಅಪರಾಧಗಳಲ್ಲಿ ನ್ಯಾಯಾಲಯಗಳು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ವಿವರಿಸಿದೆ ಎಂದು ಲೈವ್ಲಾ ವರದಿ ಮಾಡಿದೆ.
‘ಜಾಮೀನು ನೀಡಲು ರಾಖಿ ಕಟ್ಟುವುದನ್ನು ಒಂದು ನಿರ್ಬಂಧವಾಗಿ ಮಾಡಿದರೆ, ಕಿರುಕುಳ ನೀಡಿದ ವ್ಯಕ್ತಿ ಸಹೋದರನಾಗಿ ಪರಿವರ್ತನೆ ಆಗುತ್ತಾನೆ. ಇದು ಸಂಪೂರ್ಣವಾಗಿ ಸಮ್ಮತವಲ್ಲ. ಇದು ಲೈಂಗಿಕಸ ದೌರ್ಜನ್ಯದ ಪ್ರಕರಣವನ್ನು ನಾಶ ಮಾಡುತ್ತದೆ ಅಥವಾ ದುರ್ಬಲಗೊಳಿಸುತ್ತದೆ. ಇದು ಸಂತ್ರಸ್ತರಿಗೆ ಅನ್ಯಾಯ ಮಾಡುತ್ತದೆ. ಕ್ಷಮೆ ಯಾಚಿಸುವಿಕೆ, ಸಮುದಾಯ ಸೇವೆಯ ಆಶ್ವಾಸನೆ, ರಾಖಿ ಕಟ್ಟುವುದು, ಸಂತ್ರಸ್ತೆಗೆ ಕಾಣಿಕೆ ನೀಡುವುದು ಅಥವಾ ಮದುವೆಯಾಗುವುದಾಗಿ ಒಪ್ಪಿಕೊಳ್ಳುವುದು-ಇವು ಯಾವುದರ ಮೂಲಕವೂ ಅಪರಾಧವನ್ನು ನಗಣ್ಯ ಮಾಡುವ ಹಾಗಿಲ್ಲ. ಈ ಕಾನೂನು ಸಂತ್ರಸ್ತ ಮಹಿಳೆಗೆ ನ್ಯಾಯ ಒದಗಿಸದು’ ಎಂದು ನ್ಯಾಯಾಧೀಶರಾದ ರವೀಂದ್ರಭಟ್ ಮತ್ತು ಖಾನ್ವಿಲ್ಕರ್ ಅವರ ಪೀಠ ತೀರ್ಪು ನೀಡಿದೆ.
“ಅಪರಾಧವನ್ನು ಕಡಿಮೆ ಮಾಡುವ ಮತ್ತು ಸಂತ್ರಸ್ತರನ್ನು ಕ್ಷುಲ್ಲಕಗೊಳಿಸುವ ಪ್ರವೃತ್ತಿಯ ತಾರ್ಕಿಕ / ಭಾಷೆಯ ಬಳಕೆಯನ್ನು ಎಲ್ಲಾ ಸಂದರ್ಭಗಳ ಅಡಿಯಲ್ಲಿ ತಪ್ಪಿಸಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
‘ಈ ಮೊದಲು ಸಂತ್ರಸ್ತ ಮಹಿಳೆ ಇತರರ ಜೊತೆ ಸಲುಗೆ ಹೊಂದಿದ್ದಳು ಎಂಬುದಾಗಲಿ, ಆರೋಪಿಗೆ ತನ್ನ ಉಡುಪು ಧರಿಸುವಿಕೆ ಮೂಲಕ ಪ್ರಚೋದಿಸಿದ್ದಳು ಎಂಬುದಾಗಲಿ ಇಲ್ಲಿ ಪರಿಗಣನೆ ಆಗಕೂಡದು ಎಂದು ತೀರ್ಪು ಹೇಳಿದೆ. ಆಕೆ ‘ಭಾರತೀಯ’ ಮಹಿಳೆಯಂತೆ ವರ್ತಿಸಲಿಲ್ಲ ಎಂಬುದೂ ಅಸಂಬದ್ಧ ಎಂದು ಪೀಠ ಹೇಳಿದೆ.
‘ಅಂತಹ ವರ್ತನೆಗಳು ನ್ಯಾಯಾಂಗೀಯ ವ್ಯಾಪ್ತಿಯಲ್ಲಿ ಪರಿಗಣನೆ ಆಗುವುದಿಲ್ಲ ಮತ್ತು ಆರೋಪಿಗೆ ಜಾಮೀನು ನೀಡಲು ಇವನ್ನು ಕಾರಣವಾಗಿ ಗಣನೆಗೆ ತೆಗೆದುಕೊಳ್ಳಲು ಆಗುವುದಿಲ್ಲ’ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
‘ಮೇಲೆ ಉಲ್ಲೇಖಿಸಲಾದ ಸಂದರ್ಭಗಳ ಮೂಲಕ ಸಂತ್ರಸ್ತೆಯನ್ನು ಒಪ್ಪಿಕೊಳ್ಳುವಂತೆ ಮಾಡುವ ಪ್ರಕ್ರಿಯೆಯೂ ನ್ಯಾಯಬದ್ಧವಲ್ಲ’ ಎಂದು ತೀರ್ಪು ಹೇಳಿದೆ.
ನ್ಯಾಯಾಲಯವು ಈ ಕೆಳಗಿನ ಮಾರ್ಗಸೂಚಿಗಳನ್ನು ಹೊರಡಿಸಿದೆ:
(ಎ) ಜಾಮೀನು ಷರತ್ತುಗಳು ಆರೋಪಿ ಮತ್ತು ಸಂತ್ರಸ್ತರ ನಡುವೆ ಸಂಪರ್ಕವಿತ್ತು ಎಂಬುದನ್ನು ಕಡ್ಡಾಯಗೊಳಿಸಬಾರದು. ಅದು ಅಗತ್ಯವಿಲ್ಲ ಅಥವಾ ಅನುಮತಿಸಬಾರದು. ಅಂತಹ ಷರತ್ತುಗಳು ದೂರುದಾರರನ್ನು ಯಾವುದೇ ಕಿರುಕುಳದಿಂದ ರಕ್ಷಿಸಲು ಪ್ರಯತ್ನಿಸಬೇಕು.
ಬಿ) ಸಂತ್ರಸ್ತೆಗೆ ಕಿರುಕುಳದ ಸಂಭವನೀಯ ಬೆದರಿಕೆ ಇರಬಹುದು ಎಂದು ನ್ಯಾಯಾಲಯವು ನಂಬುವ ಸಂದರ್ಭಗಳು ಅಸ್ತಿತ್ವದಲ್ಲಿವೆ, ಅಥವಾ ಆತಂಕ ವ್ಯಕ್ತಪಡಿಸಿದ ನಂತರ, ಪೊಲೀಸರಿಂದ ವರದಿಗಳನ್ನು ಪಡೆದ ನಂತರ, ರಕ್ಷಣೆಯ ಸ್ವರೂಪವನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ. ಇದರ ಆಧಾರದ ಮೇಲೆ ಸೂಕ್ತ ಆದೇಶವನ್ನು ಮಾಡಬೇಕು. ಸಂತ್ರಸ್ತೆಯೊಂದಿಗೆ ಯಾವುದೇ ಸಂಪರ್ಕವನ್ನು ಮಾಡದಂತೆ ಆರೋಪಿಗೆ ನಿರ್ದೇಶನ ನೀಡಬೇಕು.
ಸಿ) ಜಾಮೀನು ಮಂಜೂರು ಮಾಡಿದ ಎಲ್ಲಾ ಪ್ರಕರಣಗಳಲ್ಲಿ, ಎರಡು ದಿನಗಳೊಳಗೆ ಆರೋಪಿಗೆ ಜಾಮೀನು ನೀಡಲಾಗಿದೆ ಎಂದು ದೂರುದಾರರಿಗೆ ತಕ್ಷಣ ತಿಳಿಸಬೇಕು.
ಡಿ) ಜಾಮೀನು ಪರಿಸ್ಥಿತಿಗಳು ಮತ್ತು ಆದೇಶಗಳು ಮಹಿಳೆಯರ ಬಗ್ಗೆ ಮತ್ತು ಸಮಾಜದಲ್ಲಿ ಅವರ ಸ್ಥಾನದ ಬಗ್ಗೆ ರೂಢಿಗತ ಅಥವಾ ಪಿತೃಪ್ರಭುತ್ವದ ಕಲ್ಪನೆಗಳನ್ನು ಪ್ರತಿಬಿಂಬಿಸುವುದನ್ನು ತಪ್ಪಿಸಬೇಕು. ಇದೆಲ್ಲ ಸಿಆರ್ಪಿಸಿ ಸೆಕ್ಷನ್ ಅವಶ್ಯಕತೆಗಳಿಗೆ ಅನುಗುಣವಾಗಿ ಕಟ್ಟುನಿಟ್ಟಾಗಿರಬೇಕು. ಬೇರೆ ರೀತಿಯಲ್ಲಿ ಹೇಳುವುದಾದರೆ, ಸಂತ್ರಸ್ತರ ಉಡುಗೆ, ನಡವಳಿಕೆ ಅಥವಾ ಹಿಂದಿನ “ನಡವಳಿಕೆ” ಅಥವಾ “ನೈತಿಕತೆಗಳ” ಬಗೆಗಿನ ಚರ್ಚೆ, ಇವೆಲ್ಲ ಜಾಮೀನು ನೀಡುವ ತೀರ್ಪಿನಲ್ಲಿ ನಮೂದಿತವಾಗಬಾರದು.
(ಕೃಪೆ: ಲೈವ್ ಲಾ)
ಇದನ್ನೂ ಓದಿ; ಚುನಾವಣೆಯಿಂದ ಹಿಂದೆ ಸರಿಯದ ಅಭ್ಯರ್ಥಿಯ ಮಗಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ದುಷ್ಕರ್ಮಿಗಳು



ಇದು ಸ್ವಾಗತಾರ್ಹ