Homeಮುಖಪುಟಪ್ಲೇಗ್ ಹಾಗೂ ಕೋವಿಡ್ 19 ನಡುವೆ ಕೆಲವು ಹೋಲಿಕೆಗಳು

ಪ್ಲೇಗ್ ಹಾಗೂ ಕೋವಿಡ್ 19 ನಡುವೆ ಕೆಲವು ಹೋಲಿಕೆಗಳು

ಕಳೆದ ಶತಮಾನದಲ್ಲಿ ಕೋಟಿಗಟ್ಟಲೆ ಜನರನ್ನ ಬಲಿ ತೆಗೆದುಕೊಂಡಿದ್ದ ಪ್ಲೇಗ್‌ ಮತ್ತು ಇದೀಗ ಅಂತಹುದೇ ಹೆದರಿಕೆ ಹುಟ್ಟಿಸಿರುವ ಕೊರೊನಾ ನಡುವಿನ ಒಂದು ತುಲನೆ. ಮೂಲ ಲೇಖನ ʼದಿ ಹಿಂದುʼ ಪತ್ರಿಕೆಯದ್ದು.

- Advertisement -
- Advertisement -

ಅನುವಾದ: ನಿಝಾಮ್ ಅನ್ಸಾರಿ ಕಲ್ಲಡ್ಕ

ಕೃಪೆ : ದಿ ಹಿಂದೂ (ಮಾರ್ಚ್27)

ಸುಮಾರು 20 ಮಿಲಿಯನ್ ಯುರೋಪ್ಯನ್ ಜನತೆಯನ್ನು ಆಹುತಿ ತೆಗೆದುಕೊಂಡ ಪ್ಲೇಗ್ (ಬ್ಲಾಕ್ ಡೆತ್) ಮಹಾ ದುರಂತ ಸಂಭವಿಸಿದ್ದೂ ಇಟಲಿಯಲ್ಲೇ ಆಗಿತ್ತು. 700 ವರ್ಷಗಳ ಹಿಂದೆ ಹರಡಿದ ಈ ಮಹಾಮಾರಿ ಅತಿ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದ್ದು ಫ್ಲೋರನ್ಸ್ ನಲ್ಲಿ.  ಅಂದಿನ ಸಾಮಾಜಿಕ ಅಂತರ (ಸೋಶೀಯಲ್ ಡಿಸ್ಟೆನ್ಸಿಂಗ್), ಏಕಾಂತ ವಾಸ (ಕ್ವಾರಂಟೈನ್) ಇತ್ಯಾದಿಗಳನ್ನು ನಂತರ ಅನೇಕರು ಅಧ್ಯಯನ ವಿಷಯವನ್ನಾಗಿಸಿದರು.

2011 ರಲ್ಲಿ ಅಂತರರಾಷ್ಟ್ರೀಯ ವಿಜ್ಞಾನಿಗಳ ಸಮಿತಿಯೊಂದು ‘ನೇಚರ್’ ಎಂಬ ಜರ್ನಲ್‌ನಲ್ಲಿ  ಮಧ್ಯಯುಗದಲ್ಲಿ ಸಂಭವಿಸಿದ ಮಹಾಮಾರಿಗೆ ಕಾರಣವಾದ ‘ಯೆರ್ಸಿನಿಯ ಪೆಸ್ಟಿಸ್’ ಎಂಬ ಬ್ಯಾಕ್ಟೀರಿಯಾದ ಕುರಿತು ಒಂದು ಪತ್ರವನ್ನು ಹೊರಡಿಸಿದರು. ‘ಪ್ಯೂಬೋನಿಕ್ ಪ್ಲೇಗ್’ ಎಂದಾಗಿತ್ತು ಆ ರೋಗದ ಹೆಸರು. ಅವರ ಪರಿಶೋಧನೆಯಲ್ಲಿ ಈ ಬ್ಯಾಕ್ಟೀರಿಯ ಬಂದಿದ್ದು ಚೀನಾದಿಂದಲೋ ಅಥವಾ ಸಮೀಪ ಪ್ರದೇಶಗಳಿಂದಲೋ ಎಂದಾಗಿತ್ತು. ಅವರು ಇಂದಿನ ಸಿಲ್ಕ್ ರೋಡ್ ಮತ್ತು ಇತರ ಲ್ಯಾಂಡ್ ಟ್ರೇಡ್ ರೂಟ್‍ಗಳ ನೀಲನಕ್ಷೆ ತಯಾರಿಸಿದರು. ಅಂತಿಮವಾಗಿ, ಅದು ಸಮುದ್ರ ಹಾದಿಯಾಗಿ, ಇಟಲಿಯನ್ ಬಂದರು ಪ್ರದೇಶವಾದ ಮೆಸ್ಸಿನಗೆ ಬಂದು ತಲುಪಿತು. ಅಂದೂ ಅದರ ಹುಟ್ಟು ಪ್ರಾಣಿಗಳಿಂದ ಮನುಷ್ಯನಿಗೆ ಹರಡುವುದೇ ಆಗಿತ್ತು. ಇಲಿ, ಅಳಿಲು, ಹಾವು ಇತ್ಯಾದಿ ಜೀವಿಗಳಿಂದ ಬಂದಿದ್ದು ಎಂದು ಅಂದು ಹೇಳಲಾಗಿತ್ತು. ಭಯ, ಆತಂಕ ಹಾಗೂ ನಿರೀಕ್ಷೆಯೇ ಆಗಿತ್ತು ಇಂದಿನಂತೆಯೇ ಅಂದಿನ ಜನರ ಮನಸ್ಥಿತಿ. ’ನಮಗೇನಾಗುತ್ತಿದೆ’ ಎಂಬುದೇ ಅಲ್ಲಿ ಕೇಳುತ್ತಿದ್ದುದು. ಏಕಾಂತತೆ (ಐಸೊಲೇಶನ್) ಮಾತ್ರವಾಗಿತ್ತು ಪ್ರತಿರೋಧದ ಔಷಧ. ಅಂದು ಬ್ಯಾಕ್ಟೀರಿಯ ಇಂದು ವೈರಸ್, ಸಾರ್ಸ್, ಕೋವಿಡ್ 19 (ಕೋವ್2) ಎಂಬ ಈ ಎರಡೂ ಕೂಡಾ ಶರೀರದ ಶ್ವಾಸ ವ್ಯವಸ್ಥೆಯನ್ನು ಬಾಧಿಸುವುದಾಗಿತ್ತು, 1916-20 ಗಳಲ್ಲಿ ಬಂದ ‘ಸ್ಪ್ಯಾನಿಶ್ ಫ್ಲೂ’ ವಿಗೂ ಇದಕ್ಕೂ ಸಮಾನ ಹೋಲಿಕೆಗಳಿವೆ.

ತರತಮಗಳಿಲ್ಲದೆ ಸಮಾಧಾನ ಶಾಂತಿ ತುಂಬಿ ತುಳುಕುತ್ತಿದ್ದ ಸಮಯದಲ್ಲೇ ಯುರೋಪನ್ನು ‘ಬ್ಲಾಕ್ ಡೆತ್’ ಆವರಿಸಿದ್ದು. ರಕ್ತಸಿಕ್ತವಾದ ಶಿಲುಬೆ ಯುದ್ಧ ನಡೆದು ಒಂದು ಶತಮಾನದ ನಂತರ, ಇಂದಿಗೂ ಅದೇ ತರತಮ, ತುಲನೆಗಳಿಲ್ಲದ ಶಾಂತಿ ನೆಲೆಗೊಳ್ಳುವ (ಆಪೇಕ್ಷಿತ ಮಾತ್ರ) ಕಾಲದಲ್ಲಿ ಕೊರೋನಾ ಬಂದು ಬಿಟ್ಟಿದೆ. ಬ್ಲಾಕ್ ಡೆತ್ ನಂತೆ ಇದರಿಂದ ಉಂಟಾಗಬುಹುದಾದಂತಹ ಆರ್ಥಿಕ ಮುಗ್ಗಟ್ಟು ಗುರುತರವಾದದ್ದು. ಎಲ್ಲೆಡೆ ಆವರಿಸಬಹುದಾದ ಬಡತನ, ದಾರಿದ್ರ್ಯ, ಹಸಿವು, ಸಂಘರ್ಷ ಎಂಬಿತ್ಯಾದಿಗಳು ಇದನ್ನು ಎದುರಿಸುವ ಭಾಗವಾಗಿ ಉಂಟಾಗುತ್ತವೆ. ಮಕಾಡೆ ಮಲಗಿರುವ ಜಾಗತಿಕ ಆರ್ಥಿಕತೆ ಮೇಲೇಳಲು ಶತಮಾನವೊಂದು ಬೇಕಾದೀತು ಎಂದು ಬ್ಲಾಕ್ ಡೆತ್ ಇಂಪ್ಯಾಕ್ಟ್ ಹೇಳುತ್ತವೆ.

ಅಂದಿನ ಮಕ್ಕಳ ಬಾಯಿಂದ ಕೇಳಿ ಬರುತ್ತಿದ್ದ ಹಾಡು ಇದಾಗಿತ್ತು.

“Ring a Ringa roses…..all fall down”

ಇದರಲ್ಲಿ ರೋಸಸ್ ಎಂಬುದು ಬಾಧಿತರ ಶರೀರದಲ್ಲಿರುವ ಬ್ಲೂಬೋಸ್ ಅನ್ನು ಸೂಚಿಸಿದರೆ, ‘ಆಲ್ ಫಾಲ್ ಡೌನ್’ ಎಂಬುದು ಸಾಮೂಹಿಕ ಮರಣದೆಡೆಗೆ ಬೊಟ್ಟು ಮಾಡುತ್ತದೆ. ಆದರೆ, ಅಂದಿನ ಅಷ್ಟೊಂದು ಸಾಹಿತ್ಯಗಳು ಇಂತಹ ರೋಗಗಳ ಹಿನ್ನೆಲೆಯಲ್ಲಿ 20,21 ಶತಮಾನಗಳಲ್ಲಿ ಬರೆಯಲ್ಪಟ್ಟಿಲ್ಲ.
ಬೊಕೊಚಿಯೊ ಅವರ ಮಾಸ್ಟರ್ ಪೀಸ್ ಕೃತಿಯಾಗಿ ಗುರುತಿಸಲ್ಪಡುವ ‘ದಿ ಡೆಕಾಮರೂನ್’ ಆ ಕಾಲದಲ್ಲಿ ಬರೆಯಲ್ಪಟ್ಟ ಬಹುದೊಡ್ಡ ಸಾಹಿತ್ಯ ಕೃತಿಯಾಗಿದೆ. ಬ್ಲಾಕ್ ಡೆತ್‍ನ ಹಿನ್ನೆಲೆಯಲ್ಲಿ ಅಂದಿನ ಸಾಹಿತ್ಯದ ಮೇರು ಪರ್ವತವೆಂದೇ ಖ್ಯಾತನಾಮರಾಗಿದ್ದ ಬೊಕಾಚಿಯೊ ಏಕಾಂತ ಬಂಧನದಲ್ಲಿದ್ದ ರೋಗಿಗಳ ಕತೆಗಳನ್ನು ದಾಖಲಿಸಿ ‘ಡೆಕಾಮರೂನ್’ ಬರೆದು ಮುಗಿಸಿದ್ದು. ಸೆಲ್ಫ್ ಕ್ವಾರಂಟೈನ್‍ನಲ್ಲಿದ್ದ ಮೂರು ಪುರುಷರ ಹಾಗೂ ಏಳು ಸ್ರೀಯರ ಕಥೆಗಳು ಇದರಲ್ಲಿವೆ.

ಮೆಡಿಕೇಶನ್, ಡ್ರಗ್ಸ್, ಜನಟಿಕ್ಸ್, ಎಪ್ಪಿಡಮಾಲಜಿ, ಡಬ್ಲ್ಯೂ.ಎಚ್.ಒ ಮುಂತಾದ ಹೆಸರುಗಳ  ಬಗ್ಗೆ ಚಿಂತಿಸುವುದಕ್ಕೂ ಕೂಡಾ ಆಗದ ಕಾಲವದು. ಶೇಕ್ಸ್‍ಪಿಯರ್ ಮತ್ತು ಗಲಿಲಿಯೋ ಅವರಿಗಿಂತ 200 ವರ್ಷಗಳ ಹಿಂದೆ ಸಾಗಿ ಹೋದ ಪ್ಲೇಗ್‍ಗೆ, ‘ಡಕಾಮರೂನ್’ ನಂತಹ ಒಂದು ಕಾಲಾತೀತ ಸಾಹಿತ್ಯ ಕೃತಿಗೆ ಜನ್ಮ ಕೊಡಲು ಅಂದು ಸಾಧ್ಯವಾಯಿತು. ಆಧುನಿಕತೆ ಮತ್ತು ಯುಕ್ತಿಯಾಧಾರಿತ ಶಾಸ್ತ್ರವು ಆಗಿನ್ನೂ ರಂಗ ಪ್ರವೇಶ ಮಾಡದ ಹೊತ್ತಲ್ಲಿ, ಮಾನವೀಯತೆಯ ಹರಿಕಾರರಾದ ಡಾನ್‍ರೆ ಮತ್ತು ಬೊಕೊಚಿಯೊರಂತಹ ಸಾಹಿತ್ಯಕಾರರು ಜನ್ಮತಾಳಿದ್ದು.

ಬ್ಲಾಕ್ ಡೆತ್‍ನ ನಂತರವೇ ಆಗಿತ್ತು ಯುರೋಪಿನಲ್ಲಿ ನವೋತ್ಥಾನ ಆರಂಭಗೊಂಡಿರುವುದು.“Revival in arts and letters” ಅನ್ನೋದು ಒಂದು ಮಹಾ ಲಿಬರೇಶನ್ ಆಗಿತ್ತು. ಅದರ ಪರವಾಗಿ ಮತ್ತು ವಿರುದ್ಧವಾಗಿ ವಿಶ್ಲೇಷಣೆಗಳು, ವಿವರಣೆಗಳಿದ್ದರೂ, ಪ್ರಪಂಚಕ್ಕೆ ಹಲವಾರು ತಿರುವುಗಳನ್ನು ನೀಡಿದೆ. ಈ ಕೊರೋನಾ ಕಾಲವೂ ಕೂಡಾ ಬಹುಶಃ ಒಂದು ಮಹಾ ನವೋತ್ಥಾನಕ್ಕೆ ಕಾರಣವಾಗಲಿ ಎಂದು ನಾವು ಆಶಿಸಬಹುದು. ಈ ಕ್ವಾರಂಟೈನ್ ನಮ್ಮ ವ್ಯಕ್ತಿ ಜೀವನದಲ್ಲೂ, ಸಾಮಾಜಿಕ, ರಾಜಕೀಯ, ಸಾಹಿತ್ಯ ವಲಯಗಳಲ್ಲೂ ಮಂಗಳಕರವಾದ ಬೆಳವಣಿಗೆಗಳನ್ನುಂಟು ಮಾಡಲಿದೆ ಎಂದು ನಿರೀಕ್ಷಿಸೋಣ…

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...