Homeಮುಖಪುಟಪ್ಲೇಗ್ ಹಾಗೂ ಕೋವಿಡ್ 19 ನಡುವೆ ಕೆಲವು ಹೋಲಿಕೆಗಳು

ಪ್ಲೇಗ್ ಹಾಗೂ ಕೋವಿಡ್ 19 ನಡುವೆ ಕೆಲವು ಹೋಲಿಕೆಗಳು

ಕಳೆದ ಶತಮಾನದಲ್ಲಿ ಕೋಟಿಗಟ್ಟಲೆ ಜನರನ್ನ ಬಲಿ ತೆಗೆದುಕೊಂಡಿದ್ದ ಪ್ಲೇಗ್‌ ಮತ್ತು ಇದೀಗ ಅಂತಹುದೇ ಹೆದರಿಕೆ ಹುಟ್ಟಿಸಿರುವ ಕೊರೊನಾ ನಡುವಿನ ಒಂದು ತುಲನೆ. ಮೂಲ ಲೇಖನ ʼದಿ ಹಿಂದುʼ ಪತ್ರಿಕೆಯದ್ದು.

- Advertisement -
- Advertisement -

ಅನುವಾದ: ನಿಝಾಮ್ ಅನ್ಸಾರಿ ಕಲ್ಲಡ್ಕ

ಕೃಪೆ : ದಿ ಹಿಂದೂ (ಮಾರ್ಚ್27)

ಸುಮಾರು 20 ಮಿಲಿಯನ್ ಯುರೋಪ್ಯನ್ ಜನತೆಯನ್ನು ಆಹುತಿ ತೆಗೆದುಕೊಂಡ ಪ್ಲೇಗ್ (ಬ್ಲಾಕ್ ಡೆತ್) ಮಹಾ ದುರಂತ ಸಂಭವಿಸಿದ್ದೂ ಇಟಲಿಯಲ್ಲೇ ಆಗಿತ್ತು. 700 ವರ್ಷಗಳ ಹಿಂದೆ ಹರಡಿದ ಈ ಮಹಾಮಾರಿ ಅತಿ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದ್ದು ಫ್ಲೋರನ್ಸ್ ನಲ್ಲಿ.  ಅಂದಿನ ಸಾಮಾಜಿಕ ಅಂತರ (ಸೋಶೀಯಲ್ ಡಿಸ್ಟೆನ್ಸಿಂಗ್), ಏಕಾಂತ ವಾಸ (ಕ್ವಾರಂಟೈನ್) ಇತ್ಯಾದಿಗಳನ್ನು ನಂತರ ಅನೇಕರು ಅಧ್ಯಯನ ವಿಷಯವನ್ನಾಗಿಸಿದರು.

2011 ರಲ್ಲಿ ಅಂತರರಾಷ್ಟ್ರೀಯ ವಿಜ್ಞಾನಿಗಳ ಸಮಿತಿಯೊಂದು ‘ನೇಚರ್’ ಎಂಬ ಜರ್ನಲ್‌ನಲ್ಲಿ  ಮಧ್ಯಯುಗದಲ್ಲಿ ಸಂಭವಿಸಿದ ಮಹಾಮಾರಿಗೆ ಕಾರಣವಾದ ‘ಯೆರ್ಸಿನಿಯ ಪೆಸ್ಟಿಸ್’ ಎಂಬ ಬ್ಯಾಕ್ಟೀರಿಯಾದ ಕುರಿತು ಒಂದು ಪತ್ರವನ್ನು ಹೊರಡಿಸಿದರು. ‘ಪ್ಯೂಬೋನಿಕ್ ಪ್ಲೇಗ್’ ಎಂದಾಗಿತ್ತು ಆ ರೋಗದ ಹೆಸರು. ಅವರ ಪರಿಶೋಧನೆಯಲ್ಲಿ ಈ ಬ್ಯಾಕ್ಟೀರಿಯ ಬಂದಿದ್ದು ಚೀನಾದಿಂದಲೋ ಅಥವಾ ಸಮೀಪ ಪ್ರದೇಶಗಳಿಂದಲೋ ಎಂದಾಗಿತ್ತು. ಅವರು ಇಂದಿನ ಸಿಲ್ಕ್ ರೋಡ್ ಮತ್ತು ಇತರ ಲ್ಯಾಂಡ್ ಟ್ರೇಡ್ ರೂಟ್‍ಗಳ ನೀಲನಕ್ಷೆ ತಯಾರಿಸಿದರು. ಅಂತಿಮವಾಗಿ, ಅದು ಸಮುದ್ರ ಹಾದಿಯಾಗಿ, ಇಟಲಿಯನ್ ಬಂದರು ಪ್ರದೇಶವಾದ ಮೆಸ್ಸಿನಗೆ ಬಂದು ತಲುಪಿತು. ಅಂದೂ ಅದರ ಹುಟ್ಟು ಪ್ರಾಣಿಗಳಿಂದ ಮನುಷ್ಯನಿಗೆ ಹರಡುವುದೇ ಆಗಿತ್ತು. ಇಲಿ, ಅಳಿಲು, ಹಾವು ಇತ್ಯಾದಿ ಜೀವಿಗಳಿಂದ ಬಂದಿದ್ದು ಎಂದು ಅಂದು ಹೇಳಲಾಗಿತ್ತು. ಭಯ, ಆತಂಕ ಹಾಗೂ ನಿರೀಕ್ಷೆಯೇ ಆಗಿತ್ತು ಇಂದಿನಂತೆಯೇ ಅಂದಿನ ಜನರ ಮನಸ್ಥಿತಿ. ’ನಮಗೇನಾಗುತ್ತಿದೆ’ ಎಂಬುದೇ ಅಲ್ಲಿ ಕೇಳುತ್ತಿದ್ದುದು. ಏಕಾಂತತೆ (ಐಸೊಲೇಶನ್) ಮಾತ್ರವಾಗಿತ್ತು ಪ್ರತಿರೋಧದ ಔಷಧ. ಅಂದು ಬ್ಯಾಕ್ಟೀರಿಯ ಇಂದು ವೈರಸ್, ಸಾರ್ಸ್, ಕೋವಿಡ್ 19 (ಕೋವ್2) ಎಂಬ ಈ ಎರಡೂ ಕೂಡಾ ಶರೀರದ ಶ್ವಾಸ ವ್ಯವಸ್ಥೆಯನ್ನು ಬಾಧಿಸುವುದಾಗಿತ್ತು, 1916-20 ಗಳಲ್ಲಿ ಬಂದ ‘ಸ್ಪ್ಯಾನಿಶ್ ಫ್ಲೂ’ ವಿಗೂ ಇದಕ್ಕೂ ಸಮಾನ ಹೋಲಿಕೆಗಳಿವೆ.

ತರತಮಗಳಿಲ್ಲದೆ ಸಮಾಧಾನ ಶಾಂತಿ ತುಂಬಿ ತುಳುಕುತ್ತಿದ್ದ ಸಮಯದಲ್ಲೇ ಯುರೋಪನ್ನು ‘ಬ್ಲಾಕ್ ಡೆತ್’ ಆವರಿಸಿದ್ದು. ರಕ್ತಸಿಕ್ತವಾದ ಶಿಲುಬೆ ಯುದ್ಧ ನಡೆದು ಒಂದು ಶತಮಾನದ ನಂತರ, ಇಂದಿಗೂ ಅದೇ ತರತಮ, ತುಲನೆಗಳಿಲ್ಲದ ಶಾಂತಿ ನೆಲೆಗೊಳ್ಳುವ (ಆಪೇಕ್ಷಿತ ಮಾತ್ರ) ಕಾಲದಲ್ಲಿ ಕೊರೋನಾ ಬಂದು ಬಿಟ್ಟಿದೆ. ಬ್ಲಾಕ್ ಡೆತ್ ನಂತೆ ಇದರಿಂದ ಉಂಟಾಗಬುಹುದಾದಂತಹ ಆರ್ಥಿಕ ಮುಗ್ಗಟ್ಟು ಗುರುತರವಾದದ್ದು. ಎಲ್ಲೆಡೆ ಆವರಿಸಬಹುದಾದ ಬಡತನ, ದಾರಿದ್ರ್ಯ, ಹಸಿವು, ಸಂಘರ್ಷ ಎಂಬಿತ್ಯಾದಿಗಳು ಇದನ್ನು ಎದುರಿಸುವ ಭಾಗವಾಗಿ ಉಂಟಾಗುತ್ತವೆ. ಮಕಾಡೆ ಮಲಗಿರುವ ಜಾಗತಿಕ ಆರ್ಥಿಕತೆ ಮೇಲೇಳಲು ಶತಮಾನವೊಂದು ಬೇಕಾದೀತು ಎಂದು ಬ್ಲಾಕ್ ಡೆತ್ ಇಂಪ್ಯಾಕ್ಟ್ ಹೇಳುತ್ತವೆ.

ಅಂದಿನ ಮಕ್ಕಳ ಬಾಯಿಂದ ಕೇಳಿ ಬರುತ್ತಿದ್ದ ಹಾಡು ಇದಾಗಿತ್ತು.

“Ring a Ringa roses…..all fall down”

ಇದರಲ್ಲಿ ರೋಸಸ್ ಎಂಬುದು ಬಾಧಿತರ ಶರೀರದಲ್ಲಿರುವ ಬ್ಲೂಬೋಸ್ ಅನ್ನು ಸೂಚಿಸಿದರೆ, ‘ಆಲ್ ಫಾಲ್ ಡೌನ್’ ಎಂಬುದು ಸಾಮೂಹಿಕ ಮರಣದೆಡೆಗೆ ಬೊಟ್ಟು ಮಾಡುತ್ತದೆ. ಆದರೆ, ಅಂದಿನ ಅಷ್ಟೊಂದು ಸಾಹಿತ್ಯಗಳು ಇಂತಹ ರೋಗಗಳ ಹಿನ್ನೆಲೆಯಲ್ಲಿ 20,21 ಶತಮಾನಗಳಲ್ಲಿ ಬರೆಯಲ್ಪಟ್ಟಿಲ್ಲ.
ಬೊಕೊಚಿಯೊ ಅವರ ಮಾಸ್ಟರ್ ಪೀಸ್ ಕೃತಿಯಾಗಿ ಗುರುತಿಸಲ್ಪಡುವ ‘ದಿ ಡೆಕಾಮರೂನ್’ ಆ ಕಾಲದಲ್ಲಿ ಬರೆಯಲ್ಪಟ್ಟ ಬಹುದೊಡ್ಡ ಸಾಹಿತ್ಯ ಕೃತಿಯಾಗಿದೆ. ಬ್ಲಾಕ್ ಡೆತ್‍ನ ಹಿನ್ನೆಲೆಯಲ್ಲಿ ಅಂದಿನ ಸಾಹಿತ್ಯದ ಮೇರು ಪರ್ವತವೆಂದೇ ಖ್ಯಾತನಾಮರಾಗಿದ್ದ ಬೊಕಾಚಿಯೊ ಏಕಾಂತ ಬಂಧನದಲ್ಲಿದ್ದ ರೋಗಿಗಳ ಕತೆಗಳನ್ನು ದಾಖಲಿಸಿ ‘ಡೆಕಾಮರೂನ್’ ಬರೆದು ಮುಗಿಸಿದ್ದು. ಸೆಲ್ಫ್ ಕ್ವಾರಂಟೈನ್‍ನಲ್ಲಿದ್ದ ಮೂರು ಪುರುಷರ ಹಾಗೂ ಏಳು ಸ್ರೀಯರ ಕಥೆಗಳು ಇದರಲ್ಲಿವೆ.

ಮೆಡಿಕೇಶನ್, ಡ್ರಗ್ಸ್, ಜನಟಿಕ್ಸ್, ಎಪ್ಪಿಡಮಾಲಜಿ, ಡಬ್ಲ್ಯೂ.ಎಚ್.ಒ ಮುಂತಾದ ಹೆಸರುಗಳ  ಬಗ್ಗೆ ಚಿಂತಿಸುವುದಕ್ಕೂ ಕೂಡಾ ಆಗದ ಕಾಲವದು. ಶೇಕ್ಸ್‍ಪಿಯರ್ ಮತ್ತು ಗಲಿಲಿಯೋ ಅವರಿಗಿಂತ 200 ವರ್ಷಗಳ ಹಿಂದೆ ಸಾಗಿ ಹೋದ ಪ್ಲೇಗ್‍ಗೆ, ‘ಡಕಾಮರೂನ್’ ನಂತಹ ಒಂದು ಕಾಲಾತೀತ ಸಾಹಿತ್ಯ ಕೃತಿಗೆ ಜನ್ಮ ಕೊಡಲು ಅಂದು ಸಾಧ್ಯವಾಯಿತು. ಆಧುನಿಕತೆ ಮತ್ತು ಯುಕ್ತಿಯಾಧಾರಿತ ಶಾಸ್ತ್ರವು ಆಗಿನ್ನೂ ರಂಗ ಪ್ರವೇಶ ಮಾಡದ ಹೊತ್ತಲ್ಲಿ, ಮಾನವೀಯತೆಯ ಹರಿಕಾರರಾದ ಡಾನ್‍ರೆ ಮತ್ತು ಬೊಕೊಚಿಯೊರಂತಹ ಸಾಹಿತ್ಯಕಾರರು ಜನ್ಮತಾಳಿದ್ದು.

ಬ್ಲಾಕ್ ಡೆತ್‍ನ ನಂತರವೇ ಆಗಿತ್ತು ಯುರೋಪಿನಲ್ಲಿ ನವೋತ್ಥಾನ ಆರಂಭಗೊಂಡಿರುವುದು.“Revival in arts and letters” ಅನ್ನೋದು ಒಂದು ಮಹಾ ಲಿಬರೇಶನ್ ಆಗಿತ್ತು. ಅದರ ಪರವಾಗಿ ಮತ್ತು ವಿರುದ್ಧವಾಗಿ ವಿಶ್ಲೇಷಣೆಗಳು, ವಿವರಣೆಗಳಿದ್ದರೂ, ಪ್ರಪಂಚಕ್ಕೆ ಹಲವಾರು ತಿರುವುಗಳನ್ನು ನೀಡಿದೆ. ಈ ಕೊರೋನಾ ಕಾಲವೂ ಕೂಡಾ ಬಹುಶಃ ಒಂದು ಮಹಾ ನವೋತ್ಥಾನಕ್ಕೆ ಕಾರಣವಾಗಲಿ ಎಂದು ನಾವು ಆಶಿಸಬಹುದು. ಈ ಕ್ವಾರಂಟೈನ್ ನಮ್ಮ ವ್ಯಕ್ತಿ ಜೀವನದಲ್ಲೂ, ಸಾಮಾಜಿಕ, ರಾಜಕೀಯ, ಸಾಹಿತ್ಯ ವಲಯಗಳಲ್ಲೂ ಮಂಗಳಕರವಾದ ಬೆಳವಣಿಗೆಗಳನ್ನುಂಟು ಮಾಡಲಿದೆ ಎಂದು ನಿರೀಕ್ಷಿಸೋಣ…

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...