Homeಮುಖಪುಟಬಡವರ ಪರವೆಂಬ ಮುಖವಾಡ ಕಳಚಿ ಮೇಲ್ಜಾತಿ, ಮಧ್ಯಮವರ್ಗ, ನಗರ ಬೇರುಗಳಿಗೆ ಮರಳಿದ ಬಿಜೆಪಿ.

ಬಡವರ ಪರವೆಂಬ ಮುಖವಾಡ ಕಳಚಿ ಮೇಲ್ಜಾತಿ, ಮಧ್ಯಮವರ್ಗ, ನಗರ ಬೇರುಗಳಿಗೆ ಮರಳಿದ ಬಿಜೆಪಿ.

ಬಡವರ ವಿರೋಧಿ ಲಾಕ್‌ಡೌನ್ ಮೂಲಕ ತನ್ನ ಮೇಲ್ಜಾತಿ, ಮಧ್ಯಮವರ್ಗ, ನಗರ ಬೇರುಗಳಿಗೆ ಬಿಜೆಪಿ ಮರಳಿದೆ. ಜನಸಾಮಾನ್ಯರಿಗೆ ಆದ ಭಾರೀ ತೊಂದರೆಯ ಹೊರತಾಗಿಯೂ, ನೋಟು ಅಮಾನ್ಯೀಕರಣದ ರಾಜಕೀಯ ಲಾಭವೆಂದರೆ, ಬಿಜೆಪಿಯನ್ನು ಬಡವರ ಪರ ಪಕ್ಷವೆಂದು ಬ್ರಾಂಡ್ ಮಾಡುವುದಾಗಿತ್ತು. ಅತ್ಯಂತ ಕೆಟ್ಟದಾಗಿ ಅನುಷ್ಟಾನಗೊಳಿಸಲಾದ ಕೊರೋನ ವೈರಸ್ ಲಾಕ್‌ಡೌನ್ ಈ ಚಿತ್ರವನ್ನು ಮಸುಕಾಗಿಸುತ್ತಿದೆ.

- Advertisement -
- Advertisement -

ಶಿವಂ ವಿಜ್

ಅನುವಾದ: ನಿಖಿಲ್ ಕೋಲ್ಪೆ

ಕೃಪೆ: ದಿ ಪ್ರಿಂಟ್‌

ಒಂದು ನಿರ್ದಿಷ್ಟ ದಿನದ ರಾತ್ರಿ 8.00 ಗಂಟೆಗೆ ಮಾಡಿದ “ರಾಷ್ಟ್ರವನ್ನುದ್ದೇಶಿಸಿ ಭಾಷಣ”ದ ಮೂಲಕ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಜನತಾ ಪಕ್ಷದ ಇಮೇಜನ್ನು ಬದಲಿಸಿದರು. ಒಂದು ಕಾಲದಲ್ಲಿ ಭಾರತದ ಪೇಟೆ ಚೌಕದ “ಬ್ರಾಹ್ಮಣ-ಬನಿಯಾ (ವ್ಯಾಪಾರಿ)” ಪಕ್ಷ ಎಂದು ಕಾಣಲಾಗುತ್ತಿದ್ದ ಪಕ್ಷವೊಂದು ಆಗ, ಇಂದಿರಾ ಗಾಂಧಿಯವರಂತೆ ಶ್ರೀಮಂತರನ್ನು ಸಂಶಯದಿಂದ ನೋಡುವ “ಬಡಜನರ ಪರ” ಪಕ್ಷವಾಗಿ ಬದಲಾಗಿತ್ತು.

ಅದೊಂದು ಅಪಾಯಕಾರಿ ಜೂಜಾಗಿದ್ದು, ಭಾರೀ ಲಾಭ ತಂದುಕೊಟ್ಟಿತ್ತು. ಬಿಜೆಪಿಯ ಹಿಂದೂ ಮೇಲ್ಜಾತಿ, ಮಧ್ಯಮವರ್ಗ ಮತ್ತು ನಗರ ಮತಗಳ ಲೆಕ್ಕಾಚಾರ ಸರಿಯೆಂದು ಸಾಬೀತಾಯಿತು. ಏಕೆಂದರೆ, ಅವರಿಗೆ ಬೇರೆ ಬದಲಿ ಆಯ್ಕೆಗಳಿರಲಿಲ್ಲ.

ನಾಲ್ಕು ವರ್ಷಗಳ ನಂತರ, ಇನ್ನೊಂದು 8.00 ಗಂಟೆಯ “ರಾಷ್ಟ್ರವನ್ನುದ್ದೇಶಿಸಿ ಭಾಷಣ”ದ ಮೂಲಕ ಬಹಳ ಜಾಗರೂಕತೆಯಿಂದ ಕಟ್ಟಿದ ತನ್ನ ಪಕ್ಷದ ಬಡವರ ಪರ ಇಮೇಜನ್ನು ಮೋದಿ ಅಪಾಯಕ್ಕೆ ಒಡ್ಡಿದ್ದಾರೆ. ಅಗತ್ಯವಾಗಿದ್ದರೂ, ಭಯಾನಕ ರೀತಿಯಲ್ಲಿ ಅನುಷ್ಟಾನಗೊಳಿಸಲಾಗುತ್ತಿರುವ 21 ದಿನಗಳ ರಾಷ್ಟ್ರವ್ಯಾಪಿ ಕೊರೋನ ವೈರಸ್ ಲಾಕ್‌ಡೌನ್, ಬಿಜೆಪಿಯ ಬಡವರ ಪರ ಇಮೇಜನ್ನು ಕಳಚಿಹಾಕಿದ್ದು, ಸ್ವಭಾವತಃ ಅದು ಹಿಂದೂ ಮೇಲ್ಜಾತಿ, ಮಧ್ಯಮವರ್ಗ ಮತ್ತು ನಗರ ಪಕ್ಷ ಎಂಬುದನ್ನು ಅನಾವರಣಗೊಳಿಸಿದೆ. ಕೆಲವೊಮ್ಮೆ ಅದು ಮತದಾರರನ್ನು ಓಲೈಸಲು ಬೇರೆ ರೀತಿಯಲ್ಲಿ ವರ್ತಿಸಿದರೂ ಅದು ಅದೇ ರೀತಿಯಲ್ಲಿ ಯೋಚನೆ ಮಾಡುತ್ತದೆ.

ಈ ಲಾಕ್‌ಡೌನ್ ಎಂಬುದು ದಿನಗೂಲಿಯ ವಲಸೆ ಕಾರ್ಮಿಕರು ‌ನೂರಾರು ಕಿ.ಮೀ. ನಡೆದಾದರೂ ತಮ್ಮ ಮನೆಗಳಿಗೆ ಮರಳುವುದನ್ನು ಅನಿವಾರ್ಯಗೊಳಿಸುತ್ತದೆ ಎಂದು ಮೋದಿ ಸರಕಾರ ಯೋಚಿಸಿರಲೇ ಇಲ್ಲ ಎಂಬುದು ಸ್ಪಷ್ಟ. ಇಂತಹಾ ಒಂದು ಪ್ರಮಾದವು ವಾಸ್ತವವಾಗಿ ಅಸ್ತಿತ್ವದಲ್ಲಿರುವ ಭಾರತ ಮತ್ತು ‘7, ಲೋಕ್‌ ಕಲ್ಯಾಣ್ ಮಾರ್ಗ್‌’ನ ಕಲ್ಪನೆಯ ಭಾರತದ ನಡುವಿನ ಕಳಚಿದ ಕೊಂಡಿಯನ್ನು ತೋರಿಸುತ್ತದೆ.

“ನೋಟ್ ಬಂಧಿ” ಮತ್ತು “ಘರ್ ಬಂಧಿ” ನಡುವಿನ ವ್ಯತ್ಯಾಸಗಳೇನು? ಅನೇಕರು ನೋಟ್ ಬಂಧಿ ಮತ್ತು ಘರ್ ಬಂಧಿಗಳ- ಅಂದರೆ, ಅಮಾನ್ಯೀಕರಣ ಮತ್ತು ಲಾಕ್‌ಡೌನ್ ನಡುವೆ ಅನೇಕ ಕಣ್ಣಿಗೆ ರಾಚುವ ಸಾಮ್ಯತೆಗಳನ್ನು ಗುರುತಿಸಿದ್ದಾರೆ. ಉತ್ತಮ ಉದ್ದೇಶ, ಹಠಾತ್ ಘೋಷಣೆ, ನಾಲ್ಕು ಗಂಟೆಗಳ ಕಾಲಾವಧಿ, ಜನರ ಸಾವು, ಆದೇಶಗಳ ದಿನವಹಿ ಬದಲಾವಣೆ, ಎಡೆಬಿಡಂಗಿತನ… ಇತ್ಯಾದಿ ಇತ್ಯಾದಿ. ಆದರೆ ಇಲ್ಲಿ ದೊಡ್ಡ ವ್ಯತ್ಯಾಸವಿದೆ. ಅಮಾನ್ಯೀಕರಣವು ಬಡಜನರ ಪರ, ಶ್ರೀಮಂತರ ವಿರುದ್ಧ ಎಂದು ಭಾವಿಸಲಾಯಿತು. (ಕಪ್ಪುಹಣ, ಸ್ವಿಸ್ ಬ್ಯಾಂಕ್, 15 ಲಕ್ಷ ಖಾತೆಗೆ ಹಣ, ಭಯೋತ್ಪಾದನೆಯ ಬೆನ್ನುಮೂಳೆ ಇತ್ಯಾದಿ ಬೊಗಳೆಗಳ ಕಾರಣದಿಂದ). ಆದರೆ, ಕೊರೋನ ವೈರಸ್ ಲಾಕ್‌ಡೌನ್ ಇದಕ್ಕೆ ತದ್ವಿರುದ್ಧವಾಗಿದೆ.

ಲಾಕ್‌ಡೌನ್ ಅಗತ್ಯವಾಗಿತ್ತು ಮತ್ತು ಅದು ಸೋಂಕಿನ ಹರಡುವಿಕೆಯನ್ನು ನಿಧಾನಗೊಳಿಸುತ್ತದೆ; “ನಕ್ಷೆಯಲ್ಲಿನ ತಿರುವನ್ನು ಸಪಾಟುಗೊಳಿಸುತ್ತದೆ” ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಲಾಕ್‌ಡೌನ್ ನಿರಂತರ ಮುಂದುವರಿಸದ ಹೊರತಾಗಿ ಪ್ರಕರಣಗಳ ಸಂಖ್ಯೆ ಏರುವುದಿಲ್ಲ ಎಂದು ಸೂಚಿಸುವಂತದ್ದು ಏನೂ ಇಲ್ಲ. ಹಾಗೆ ಮಾಡುವುದು ಸಾಧ್ಯವೇ ಇಲ್ಲ.

ಆದರೆ, ಬಡಜನರು ಪ್ರಪಂಚದಲ್ಲಿಯೇ ಅತ್ಯಂತ ಕಠಿಣವಾದ ಲಾಕ್‌ಡೌನ್‌ನಿಂದ ಈಗಾಗಲೇ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಜನರ ಲಾಕ್‌ಡೌನ್ ಸಂಕಷ್ಟ ಪರಿಹಾರಕ್ಕೆ ಟಿವಿಯಲ್ಲಿ ರಾಮಾಯಣ, ಮಹಾಭಾರತ ನೋಡಿ ಎಂದು ಮಧ್ಯಮ ವರ್ಗದ ಮನಸ್ಥಿತಿ ಇರುವ ಸರಕಾರವಷ್ಟೇ ಫರ್ಮಾನು ಹೊರಡಿಸಲು ಸಾಧ್ಯ. ಏಕೆಂದರೆ, ಲಾಕ್‌ಡೌನ್‌ನಿಂದ ಜನರಿಗೆ ಮನೆಯಲ್ಲಿ ಕುಳಿತು ಬೋರಾಗುತ್ತದೆ ಎಂದಷ್ಟೇ ಸರಕಾರ ಭಾವಿಸಿದೆ. ಆದರೆ, ಬಡವರ ಚಿಂತೆ ಬೋರಾಗುವುದು ಅಲ್ಲ. ಅವರು ಇನ್ನೂ- ಕೆಲಸವಿಲ್ಲ, ಹೊಟ್ಟೆಗಿಲ್ಲ, ಮನೆಯಿಲ್ಲ, ಮುಂದೇನು ಮುಂತಾದ ಚಿಂತೆಗಳಲ್ಲಿ ಮುಳುಗಿದ್ದಾರೆ.

ಮನೆ ಸೇರರಲು ಪರದಾಡುತ್ತಿರುವ ಪ್ರಜೆಗಳಿಗೆ “ಮನೆಯಲ್ಲಿ ಕುಳಿತು ರಾಮಾಯಣ ನೋಡಿ” ಎಂದ ಮೋದಿ ಸರಕಾರ.

ಪ್ರಜೆಗಳಲ್ಲ; ಕೇವಲ ವಸ್ತುಗಳು!

ಇದೇವೇಳೆಗೆ, ಪೊಲೀಸರು ಅವರನ್ನು ಥಳಿಸುತ್ತಿದ್ದು, ಅವರು ಮಾನವರಲ್ಲ; ಕೇವಲ ವಸ್ತುಗಳು ಎಂಬಂತೆ ನಡೆಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಅವರೇ ವೈರಸ್‌ಗಳು ಎಂಬಂತೆ ಅವರನ್ನು ಮಂದೆ ಸೇರಿಸಿ, ರಾಸಾಯನಿಕಗಳನ್ನು ಸಿಂಪಡಿಸುತ್ತಿದ್ದಾರೆ, ಅವರಿಗೆ ಹೊಡೆಯುತ್ತಿದ್ದಾರೆ, ಅವಮಾನಕಾರಿ ಶಿಕ್ಷೆಗಳನ್ನು ಕೊಡುತ್ತಿದ್ದಾರೆ. ಇವೆಲ್ಲವೂ ನಡೆದ ಬಳಿಕ ಅವರು ಭಾರತ ಸರಕಾರದ ಬಗ್ಗೆ ಯಾವ ಅಭಿಪ್ರಾಯ ತಳೆದಿರಬಹುದು? ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಅತ್ಯಂತ ಕೆಟ್ಟಸ್ಥಿತಿಯಲ್ಲಿರುವುದು ಗೋವಾ. ಅಲ್ಲಿನ ಅತಿರೇಕಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಜನರಿಗೆ ಹಾಲು ಮತ್ತು ಬ್ರೆಡ್ ಕೊಳ್ಳಲೂ ಬಿಡುತ್ತಿಲ್ಲ. ಜನರು ದೂರದರ್ಶನವನ್ನೇ ತಿನ್ನಲಿ ಎಂದಾತ ಯೋಚಿಸಿದಂತಿದೆ.

ಪ್ರಜೆಗಳ ಆತ್ಮಗೌರವವನ್ನೇ ಮುರಿಯುವ ಅವಮಾನಕಾರಿ ಶಿಕ್ಷೆಗಳು

ವಲಸಿಗರು ಮನೆತಲಪುವುದು ಹೇಗೆ ಎಂದು ಚಿಂತಿಸುತ್ತಿರುವಾಗ ಸಾರ್ವಜನಿಕ ರಂಗದ ದೂರದರ್ಶನ ಜನರು ತಾವು ಮನೆಯಲ್ಲಿ ಕುಳಿತು ರಾಮಾಯಣ ನೋಡುತ್ತಿರುವ ಚಿತ್ರಗಳನ್ನು ಕಳುಹಿಸುವಂತೆ ಕೇಳಿಕೊಳ್ಳುತ್ತಿದೆ. ಇಲ್ಲಿ ತಿಳಿದೂ ತಿಳಿದೂ ಬಿಜೆಪಿಯು ನಿಜವಾಗಿಯೂ ಏನಾಗಿದೆಯೋ ಅದರ ಪರವಾಗಿಯೇ ತಾರತಮ್ಯವನ್ನು ತೋರಲಾಗುತ್ತಿದೆ. ಬಿಜೆಪಿ ನಿಜವಾಗಿಯೂ ಏನೆಂದರೆ, ಅದೊಂದು ನಗರವಾಸಿ ಮಧ್ಯಮ ವರ್ಗ ಮತ್ತು ಮೇಲ್ಜಾತಿಗಳ ಪಕ್ಷ.

ಹೊಡಿಬಡಿ ಪೊಲೀಸರು

ಅದು ಕಾಲಾಂತರದಲ್ಲಿ ಈ ಇಮೇಜನ್ನು ಸ್ವಲ್ಪ ಮಟ್ಟಿಗೆ ಕಳಚಿಕೊಳ್ಳುವುದರ ಮೂಲಕ ಈಗ ಭಯಹುಟ್ಟಿಸುವ ರಾಷ್ಟ್ರೀಯ ಪ್ರಾಬಲ್ಯ ಪಡೆದಿದೆ. ಅದು ಸ್ಮಾರ್ಟ್ ಗ್ರಾಮಗಳ ಬದಲಿಗೆ ಸ್ಮಾರ್ಟ್‌ಸಿಟಿಗಳ ಬಗ್ಗೆ ಯೋಚಿಸಿತು. ಹಣದುಬ್ಬರವನ್ನು ಕೆಳಮಟ್ಟದಲ್ಲಿ ಇರಿಸುವಲ್ಲಿ ರೈತರ ಪಾತ್ರವನ್ನು ಕಡೆಗಣಿಸಿತು… ಇತ್ಯಾದಿ. ಇದರಿಂದ ಬರಬಹುದಾದ ಹಿಂಬಡಿತವನ್ನು ಶೌಚಾಲಯ, ಎಲ್‌ಪಿಜಿ ಸಿಲಿಂಡರ್‌ಗಳು, ಅಗ್ಗದ ಮನೆಗಳು ಇತ್ಯಾದಿ ಕಣ್ಕಟ್ಟುಗಳ ಮೂಲಕ ನಿಭಾಯಿಸಿತು.

ಡಿಸೆಂಬರ್ 2018ರಲ್ಲಿ ಹಿಂದಿ ಬೆಲ್ಟಿನ ಮೂರು ರಾಜ್ಯಗಳನ್ನು ಕಳೆದುಕೊಂಡ ಬಳಿಕ ರೈತರಿಗೆ ನಗದು ಹಣದ ಭರವಸೆ ನೀಡುವುದು ಬಿಜೆಪಿಗೆ ಅನಿವಾರ್ಯವಾಯಿತು. ಆದರೆ, ಈ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಅದು ತನ್ನ ನಿಜರೂಪವನ್ನು ಅನಾವರಣಗೊಳಿಸಿದೆ. ಈ ಕೂಲಿ ಕಾರ್ಮಿಕರು ಏಕೆ ರಸ್ತೆಯಲ್ಲಿದ್ದಾರೆ? ಎಲ್ಲಿದ್ದರೋ ಅಲ್ಲಿಯೇ ಉಳಿದಿರಲು ಆವರಿಗೇನು ದಾಡಿ? ಸಾಮಾಜಿಕ ಜಾಲತಣಗಳಲ್ಲಿ ಮೋದಿ ಭಕ್ತರಿಂದ ನಾವು ನೋಡುತ್ತಿರುವ ಪ್ರತಿಕ್ರಿಯೆಗಳು ಈ ರೀತಿಯವು.

ಕನಿಷ್ಟ 22 ಮಂದಿ ಮನೆಗೆ ಮರಳುವಾಗ ಹೆದ್ದಾರಿ ಅವಘಡಗಳಲ್ಲಿ ಮೃತಪಟ್ಟಿದ್ದಾರೆ. ಅಪಘಾತದ ಸಾವುಗಳು ಯಾವಾಗಲೂ ನಡೆಯುತ್ತಲೇ ಇರುತ್ತವೆ. ಆದರೆ, ಜನರು ಹೆದ್ದಾರಿಗಳಲ್ಲಿ ನಡೆಯುತ್ತಾರೆಂದು ವಾಹನ ಚಾಲಕರಿಗಾಗಲೀ, ಲಾಕ್‌ಡೌನ್ ಸಂದರ್ಭದಲ್ಲಿ ವಾಹನಗಳು ಹೆದ್ದಾರಿಯಲ್ಲಿ ಓಡುತ್ತವೆ ಎಂದು ವಲಸಿಗರಾಗಲೀ ಊಹಿಸಿರಲಾರರು.

ಬಡತನ ಕಂಡವರಾರು? 

ನರೇಂದ್ರ ಮೋದಿ ಬಟ್ಟಲು ಜಾಗಟೆ ಬಡಿಯಲು ಜನರಿಗೆ ಮತ್ತು ಶಕ್ತಿಪ್ರದರ್ಶನ ಮಾಡಲು ಬಿಜೆಪಿಗೆ ಮೂರು ದಿನಗಳ ಕಾಲಾವಕಾಶ ಕೊಟ್ಟರು. ಆದರೆ, ಲಾಕ್‌ಡೌನ್‌ಗೆ ಆತ ಕೊಟ್ಟದ್ದು ಕೇವಲ ನಾಲ್ಕು ಗಂಟೆಗಳಿಗೂ ಕಡಿಮೆ ಅವಕಾಶ. ಅಗತ್ಯ ವಸ್ತುಗಳೂ ಸೇರಿದಂತೆ ಸರಕುಗಳನ್ನು ಹೊತ್ತ ಲಾರಿಗಳನ್ನು ರಾಜ್ಯಗಳ ಗಡಿಯಲ್ಲಿ ನಿಲ್ಲಿಸಲಾಯಿತು. ಈ ಲಾರಿಗಳ ಚಾಲಕರು ಹೇಗೆ ಮನೆ ತಲಪಬೇಕು? ಹೇಗೆ ಉಣ್ಣಬೇಕು? ಇಂತಹಾ ಪ್ರಶ್ನೆಗಳನ್ನು ಕುರಿತು ಯೋಚನೆಯನ್ನೇ ಮಾಡಿರಲಿಲ್ಲ. ಏಕೆಂದರೆ, ಬಿಜೆಪಿಯ ಮನಸ್ಥಿತಿಯು ಯಾವುದೇ ಚಿಂತೆಯಿಲ್ಲದೇ ಕೆಲವು ದಿನಗಳ ಕಾಲ ರಜೆ ತೆಗೆದುಕೊಂಡು, ಮನೆಯಲ್ಲಿ ಕುಳಿತು ರಾಮಾಯಣ, ಮಹಾಭಾರತ ನೋಡುವ ತಾಕತ್ತಿರುವ ಮೇಲ್ಜಾತಿಯ ಶ್ರೀಮಂತ ವರ್ತಕ ಮತ್ತು ಮಧ್ಯಮ ವರ್ಗದ್ದಾಗಿದೆ.

ರಾಜ್ಯ ಗಡಿಗಳಲ್ಲಿ ನಿಲ್ಲಿಸಲಾದ ಅಗತ್ಯವಸ್ತು ಪೂರೈಕೆ ಲಾರಿಗಳು

ಅಗತ್ಯ ಸೇವೆಗಳಲ್ಲಿ ಇರುವ ಜನರಿಗೆ ಪ್ರಯಾಣದ ಅವಕಾಶ ಒದಗಿಸಲಾಯಿತು. ಆದರೆ, ಅವರಿಗೂ ಪೊಲೀಸರು ಕಿರುಕುಳ ನೀಡಿ, ಲಾಠಿ ಪ್ರಹಾರ ಮಾಡಿದರು. ಸಾರ್ವಜನಿಕ ಸಾರಿಗೆ ಸಂಪೂರ್ಣ ಮುಚ್ಚಿದೆ. ಒಬ್ಬ ಸ್ವಚ್ಛತಾ ಕಾರ್ಮಿಕ ತನ್ನ ಕೆಲಸಕ್ಕಾಗಿ ಸುತ್ತಾಡುವುದು ಹೇಗೆ? ಆಸ್ಪತ್ರೆಗಳ ಸ್ವಚ್ಛತಾ ಸಿಬ್ಬಂದಿ ಕೆಲಸಕ್ಕೆ ಹೋಗುವುದಾದರೂ ಹೇಗೆ? ರಾಷ್ಟ್ರೀಯ ಲಾಕ್‌ಡೌನ್ ನಡುವೆ ಆಸ್ಪತ್ರೆಗೆಳು ಅವರಿಗೆ ಸಾರಿಗೆ ಒದಗಿಸುವುದಾದರೂ ಹೇಗೆ? ಅವರು ಪ್ರತೀದಿನ ಹಲವಾರು ಕಿ.ಮೀ.ಗಳಷ್ಟು ನಡೆಯಬೇಕಾಗಿದೆ. ಬಿಜೆಪಿ ಈ ಕುರಿತು ಯೋಚಿಸಲೇ ಇಲ್ಲ. ಅದರ ಚಿಂತನೆಯ ಪ್ರಕಾರ ಪ್ರತಿಯೊಬ್ಬರ ಬಳಿ ಕಾರಿದೆ. ಅದಕ್ಕೆ ಗೊತ್ತಿರುವ ಎಲ್ಲರ ಬಳಿಯೂ ಇದೆ.


ಇದನ್ನೂ ಓದಿ: ನಮ್ಮೆಲ್ಲರ ಆತ್ಮಸಾಕ್ಷಿಯನ್ನು ಶಾಶ್ವತವಾಗಿ ಕಾಡಲಿರುವ ಮತ್ತೊಂದು ವಿಭಜನೆಯ ಚಿತ್ರ :ಎ.ನಾರಾಯಣ್


ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮ್ ತಡವಾಗಿ ಘೋಷಿಸಿರುವ ಪ್ಯಾಕೇಜ್ ಒಂದು ಕಣ್ಕಟ್ಟಾಗಿದ್ದು, ಅದು ಅತ್ಯಗತ್ಯವಾಗಿ ಬೇಕಾಗಿರುವವರಿಗೆ, ಮುಖ್ಯವಾಗಿ ವಲಸೆ ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ, ಅತೀ ಸಣ್ಣ ರೈತರಿಗೆ ಯಾವುದೇ ತುರ್ತು ಅಥವಾ ತಕ್ಷಣದ ಪರಿಹಾರ ಒದಗಿಸುವುದಿಲ್ಲ.

ನರೇಂದ್ರ ಮೋದಿ- “ಗರೀಬಿ ದೇಖಿ ಹೈ ಮೈನೇ” (ಬಡತನ ನೋಡಿದ್ದೇನೆ ನಾನು) ಎಂದು ಹೇಳಿ ಮರುಳು ಮಾಡಬಹುದಾದ ಕಾಲ ಇದಲ್ಲ. ಈ ಲಾಕ್‌ಡೌನ್ ಬಳಿಕ ಈ ಪ್ರಧಾನಿಗೆ ಬಡತನ ಏನೆಂದು ಗೊತ್ತು ಎಂದು ಹೇಳುವುದೂ, ನಂಬುವುದೂ ಕಷ್ಟ!


ನಾನುಗೌರಿ ಯೂಟ್ಯೂಬ್‌ ಚಾನೆಲ್‌ಗೆ ಸಬ್‌ಸ್ಕ್ರೈಬ್‌ ಆಗಲು ಇಲ್ಲಿ ಕ್ಲಿಕ್‌ ಮಾಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...