Homeಮುಖಪುಟಪ್ಲೇಗ್ ಹಾಗೂ ಕೋವಿಡ್ 19 ನಡುವೆ ಕೆಲವು ಹೋಲಿಕೆಗಳು

ಪ್ಲೇಗ್ ಹಾಗೂ ಕೋವಿಡ್ 19 ನಡುವೆ ಕೆಲವು ಹೋಲಿಕೆಗಳು

ಕಳೆದ ಶತಮಾನದಲ್ಲಿ ಕೋಟಿಗಟ್ಟಲೆ ಜನರನ್ನ ಬಲಿ ತೆಗೆದುಕೊಂಡಿದ್ದ ಪ್ಲೇಗ್‌ ಮತ್ತು ಇದೀಗ ಅಂತಹುದೇ ಹೆದರಿಕೆ ಹುಟ್ಟಿಸಿರುವ ಕೊರೊನಾ ನಡುವಿನ ಒಂದು ತುಲನೆ. ಮೂಲ ಲೇಖನ ʼದಿ ಹಿಂದುʼ ಪತ್ರಿಕೆಯದ್ದು.

- Advertisement -
- Advertisement -

ಅನುವಾದ: ನಿಝಾಮ್ ಅನ್ಸಾರಿ ಕಲ್ಲಡ್ಕ

ಕೃಪೆ : ದಿ ಹಿಂದೂ (ಮಾರ್ಚ್27)

ಸುಮಾರು 20 ಮಿಲಿಯನ್ ಯುರೋಪ್ಯನ್ ಜನತೆಯನ್ನು ಆಹುತಿ ತೆಗೆದುಕೊಂಡ ಪ್ಲೇಗ್ (ಬ್ಲಾಕ್ ಡೆತ್) ಮಹಾ ದುರಂತ ಸಂಭವಿಸಿದ್ದೂ ಇಟಲಿಯಲ್ಲೇ ಆಗಿತ್ತು. 700 ವರ್ಷಗಳ ಹಿಂದೆ ಹರಡಿದ ಈ ಮಹಾಮಾರಿ ಅತಿ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದ್ದು ಫ್ಲೋರನ್ಸ್ ನಲ್ಲಿ.  ಅಂದಿನ ಸಾಮಾಜಿಕ ಅಂತರ (ಸೋಶೀಯಲ್ ಡಿಸ್ಟೆನ್ಸಿಂಗ್), ಏಕಾಂತ ವಾಸ (ಕ್ವಾರಂಟೈನ್) ಇತ್ಯಾದಿಗಳನ್ನು ನಂತರ ಅನೇಕರು ಅಧ್ಯಯನ ವಿಷಯವನ್ನಾಗಿಸಿದರು.

2011 ರಲ್ಲಿ ಅಂತರರಾಷ್ಟ್ರೀಯ ವಿಜ್ಞಾನಿಗಳ ಸಮಿತಿಯೊಂದು ‘ನೇಚರ್’ ಎಂಬ ಜರ್ನಲ್‌ನಲ್ಲಿ  ಮಧ್ಯಯುಗದಲ್ಲಿ ಸಂಭವಿಸಿದ ಮಹಾಮಾರಿಗೆ ಕಾರಣವಾದ ‘ಯೆರ್ಸಿನಿಯ ಪೆಸ್ಟಿಸ್’ ಎಂಬ ಬ್ಯಾಕ್ಟೀರಿಯಾದ ಕುರಿತು ಒಂದು ಪತ್ರವನ್ನು ಹೊರಡಿಸಿದರು. ‘ಪ್ಯೂಬೋನಿಕ್ ಪ್ಲೇಗ್’ ಎಂದಾಗಿತ್ತು ಆ ರೋಗದ ಹೆಸರು. ಅವರ ಪರಿಶೋಧನೆಯಲ್ಲಿ ಈ ಬ್ಯಾಕ್ಟೀರಿಯ ಬಂದಿದ್ದು ಚೀನಾದಿಂದಲೋ ಅಥವಾ ಸಮೀಪ ಪ್ರದೇಶಗಳಿಂದಲೋ ಎಂದಾಗಿತ್ತು. ಅವರು ಇಂದಿನ ಸಿಲ್ಕ್ ರೋಡ್ ಮತ್ತು ಇತರ ಲ್ಯಾಂಡ್ ಟ್ರೇಡ್ ರೂಟ್‍ಗಳ ನೀಲನಕ್ಷೆ ತಯಾರಿಸಿದರು. ಅಂತಿಮವಾಗಿ, ಅದು ಸಮುದ್ರ ಹಾದಿಯಾಗಿ, ಇಟಲಿಯನ್ ಬಂದರು ಪ್ರದೇಶವಾದ ಮೆಸ್ಸಿನಗೆ ಬಂದು ತಲುಪಿತು. ಅಂದೂ ಅದರ ಹುಟ್ಟು ಪ್ರಾಣಿಗಳಿಂದ ಮನುಷ್ಯನಿಗೆ ಹರಡುವುದೇ ಆಗಿತ್ತು. ಇಲಿ, ಅಳಿಲು, ಹಾವು ಇತ್ಯಾದಿ ಜೀವಿಗಳಿಂದ ಬಂದಿದ್ದು ಎಂದು ಅಂದು ಹೇಳಲಾಗಿತ್ತು. ಭಯ, ಆತಂಕ ಹಾಗೂ ನಿರೀಕ್ಷೆಯೇ ಆಗಿತ್ತು ಇಂದಿನಂತೆಯೇ ಅಂದಿನ ಜನರ ಮನಸ್ಥಿತಿ. ’ನಮಗೇನಾಗುತ್ತಿದೆ’ ಎಂಬುದೇ ಅಲ್ಲಿ ಕೇಳುತ್ತಿದ್ದುದು. ಏಕಾಂತತೆ (ಐಸೊಲೇಶನ್) ಮಾತ್ರವಾಗಿತ್ತು ಪ್ರತಿರೋಧದ ಔಷಧ. ಅಂದು ಬ್ಯಾಕ್ಟೀರಿಯ ಇಂದು ವೈರಸ್, ಸಾರ್ಸ್, ಕೋವಿಡ್ 19 (ಕೋವ್2) ಎಂಬ ಈ ಎರಡೂ ಕೂಡಾ ಶರೀರದ ಶ್ವಾಸ ವ್ಯವಸ್ಥೆಯನ್ನು ಬಾಧಿಸುವುದಾಗಿತ್ತು, 1916-20 ಗಳಲ್ಲಿ ಬಂದ ‘ಸ್ಪ್ಯಾನಿಶ್ ಫ್ಲೂ’ ವಿಗೂ ಇದಕ್ಕೂ ಸಮಾನ ಹೋಲಿಕೆಗಳಿವೆ.

ತರತಮಗಳಿಲ್ಲದೆ ಸಮಾಧಾನ ಶಾಂತಿ ತುಂಬಿ ತುಳುಕುತ್ತಿದ್ದ ಸಮಯದಲ್ಲೇ ಯುರೋಪನ್ನು ‘ಬ್ಲಾಕ್ ಡೆತ್’ ಆವರಿಸಿದ್ದು. ರಕ್ತಸಿಕ್ತವಾದ ಶಿಲುಬೆ ಯುದ್ಧ ನಡೆದು ಒಂದು ಶತಮಾನದ ನಂತರ, ಇಂದಿಗೂ ಅದೇ ತರತಮ, ತುಲನೆಗಳಿಲ್ಲದ ಶಾಂತಿ ನೆಲೆಗೊಳ್ಳುವ (ಆಪೇಕ್ಷಿತ ಮಾತ್ರ) ಕಾಲದಲ್ಲಿ ಕೊರೋನಾ ಬಂದು ಬಿಟ್ಟಿದೆ. ಬ್ಲಾಕ್ ಡೆತ್ ನಂತೆ ಇದರಿಂದ ಉಂಟಾಗಬುಹುದಾದಂತಹ ಆರ್ಥಿಕ ಮುಗ್ಗಟ್ಟು ಗುರುತರವಾದದ್ದು. ಎಲ್ಲೆಡೆ ಆವರಿಸಬಹುದಾದ ಬಡತನ, ದಾರಿದ್ರ್ಯ, ಹಸಿವು, ಸಂಘರ್ಷ ಎಂಬಿತ್ಯಾದಿಗಳು ಇದನ್ನು ಎದುರಿಸುವ ಭಾಗವಾಗಿ ಉಂಟಾಗುತ್ತವೆ. ಮಕಾಡೆ ಮಲಗಿರುವ ಜಾಗತಿಕ ಆರ್ಥಿಕತೆ ಮೇಲೇಳಲು ಶತಮಾನವೊಂದು ಬೇಕಾದೀತು ಎಂದು ಬ್ಲಾಕ್ ಡೆತ್ ಇಂಪ್ಯಾಕ್ಟ್ ಹೇಳುತ್ತವೆ.

ಅಂದಿನ ಮಕ್ಕಳ ಬಾಯಿಂದ ಕೇಳಿ ಬರುತ್ತಿದ್ದ ಹಾಡು ಇದಾಗಿತ್ತು.

“Ring a Ringa roses…..all fall down”

ಇದರಲ್ಲಿ ರೋಸಸ್ ಎಂಬುದು ಬಾಧಿತರ ಶರೀರದಲ್ಲಿರುವ ಬ್ಲೂಬೋಸ್ ಅನ್ನು ಸೂಚಿಸಿದರೆ, ‘ಆಲ್ ಫಾಲ್ ಡೌನ್’ ಎಂಬುದು ಸಾಮೂಹಿಕ ಮರಣದೆಡೆಗೆ ಬೊಟ್ಟು ಮಾಡುತ್ತದೆ. ಆದರೆ, ಅಂದಿನ ಅಷ್ಟೊಂದು ಸಾಹಿತ್ಯಗಳು ಇಂತಹ ರೋಗಗಳ ಹಿನ್ನೆಲೆಯಲ್ಲಿ 20,21 ಶತಮಾನಗಳಲ್ಲಿ ಬರೆಯಲ್ಪಟ್ಟಿಲ್ಲ.
ಬೊಕೊಚಿಯೊ ಅವರ ಮಾಸ್ಟರ್ ಪೀಸ್ ಕೃತಿಯಾಗಿ ಗುರುತಿಸಲ್ಪಡುವ ‘ದಿ ಡೆಕಾಮರೂನ್’ ಆ ಕಾಲದಲ್ಲಿ ಬರೆಯಲ್ಪಟ್ಟ ಬಹುದೊಡ್ಡ ಸಾಹಿತ್ಯ ಕೃತಿಯಾಗಿದೆ. ಬ್ಲಾಕ್ ಡೆತ್‍ನ ಹಿನ್ನೆಲೆಯಲ್ಲಿ ಅಂದಿನ ಸಾಹಿತ್ಯದ ಮೇರು ಪರ್ವತವೆಂದೇ ಖ್ಯಾತನಾಮರಾಗಿದ್ದ ಬೊಕಾಚಿಯೊ ಏಕಾಂತ ಬಂಧನದಲ್ಲಿದ್ದ ರೋಗಿಗಳ ಕತೆಗಳನ್ನು ದಾಖಲಿಸಿ ‘ಡೆಕಾಮರೂನ್’ ಬರೆದು ಮುಗಿಸಿದ್ದು. ಸೆಲ್ಫ್ ಕ್ವಾರಂಟೈನ್‍ನಲ್ಲಿದ್ದ ಮೂರು ಪುರುಷರ ಹಾಗೂ ಏಳು ಸ್ರೀಯರ ಕಥೆಗಳು ಇದರಲ್ಲಿವೆ.

ಮೆಡಿಕೇಶನ್, ಡ್ರಗ್ಸ್, ಜನಟಿಕ್ಸ್, ಎಪ್ಪಿಡಮಾಲಜಿ, ಡಬ್ಲ್ಯೂ.ಎಚ್.ಒ ಮುಂತಾದ ಹೆಸರುಗಳ  ಬಗ್ಗೆ ಚಿಂತಿಸುವುದಕ್ಕೂ ಕೂಡಾ ಆಗದ ಕಾಲವದು. ಶೇಕ್ಸ್‍ಪಿಯರ್ ಮತ್ತು ಗಲಿಲಿಯೋ ಅವರಿಗಿಂತ 200 ವರ್ಷಗಳ ಹಿಂದೆ ಸಾಗಿ ಹೋದ ಪ್ಲೇಗ್‍ಗೆ, ‘ಡಕಾಮರೂನ್’ ನಂತಹ ಒಂದು ಕಾಲಾತೀತ ಸಾಹಿತ್ಯ ಕೃತಿಗೆ ಜನ್ಮ ಕೊಡಲು ಅಂದು ಸಾಧ್ಯವಾಯಿತು. ಆಧುನಿಕತೆ ಮತ್ತು ಯುಕ್ತಿಯಾಧಾರಿತ ಶಾಸ್ತ್ರವು ಆಗಿನ್ನೂ ರಂಗ ಪ್ರವೇಶ ಮಾಡದ ಹೊತ್ತಲ್ಲಿ, ಮಾನವೀಯತೆಯ ಹರಿಕಾರರಾದ ಡಾನ್‍ರೆ ಮತ್ತು ಬೊಕೊಚಿಯೊರಂತಹ ಸಾಹಿತ್ಯಕಾರರು ಜನ್ಮತಾಳಿದ್ದು.

ಬ್ಲಾಕ್ ಡೆತ್‍ನ ನಂತರವೇ ಆಗಿತ್ತು ಯುರೋಪಿನಲ್ಲಿ ನವೋತ್ಥಾನ ಆರಂಭಗೊಂಡಿರುವುದು.“Revival in arts and letters” ಅನ್ನೋದು ಒಂದು ಮಹಾ ಲಿಬರೇಶನ್ ಆಗಿತ್ತು. ಅದರ ಪರವಾಗಿ ಮತ್ತು ವಿರುದ್ಧವಾಗಿ ವಿಶ್ಲೇಷಣೆಗಳು, ವಿವರಣೆಗಳಿದ್ದರೂ, ಪ್ರಪಂಚಕ್ಕೆ ಹಲವಾರು ತಿರುವುಗಳನ್ನು ನೀಡಿದೆ. ಈ ಕೊರೋನಾ ಕಾಲವೂ ಕೂಡಾ ಬಹುಶಃ ಒಂದು ಮಹಾ ನವೋತ್ಥಾನಕ್ಕೆ ಕಾರಣವಾಗಲಿ ಎಂದು ನಾವು ಆಶಿಸಬಹುದು. ಈ ಕ್ವಾರಂಟೈನ್ ನಮ್ಮ ವ್ಯಕ್ತಿ ಜೀವನದಲ್ಲೂ, ಸಾಮಾಜಿಕ, ರಾಜಕೀಯ, ಸಾಹಿತ್ಯ ವಲಯಗಳಲ್ಲೂ ಮಂಗಳಕರವಾದ ಬೆಳವಣಿಗೆಗಳನ್ನುಂಟು ಮಾಡಲಿದೆ ಎಂದು ನಿರೀಕ್ಷಿಸೋಣ…

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR | ಸೆಕ್ಸ್ ವರ್ಕರ್ಸ್, ಅವರ ಮಕ್ಕಳ ಬಳಿ ದಾಖಲೆಗಳಿಲ್ಲ : ಮಹಾರಾಷ್ಟ್ರ ಸಿಇಒಗೆ ಪತ್ರ ಬರೆದ ರಾಷ್ಟ್ರೀಯ ಸಂಸ್ಥೆ

ದಾಖಲಾತಿ ಮತ್ತು ಪರಿಶೀಲನೆ ಅಗತ್ಯತೆಗಳ ಕಾರಣದಿಂದಾಗಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಿಂದ ಲೈಂಗಿಕ ಕಾರ್ಯಕರ್ತೆಯರು ಮತ್ತು ಅವರ ಮಕ್ಕಳನ್ನು ಹೊರಗಿಡದಂತೆ ನೋಡಿಕೊಳ್ಳಲು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕೆಂದು...

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...