Homeಮುಖಪುಟಪ್ಲೇಗ್ ಹಾಗೂ ಕೋವಿಡ್ 19 ನಡುವೆ ಕೆಲವು ಹೋಲಿಕೆಗಳು

ಪ್ಲೇಗ್ ಹಾಗೂ ಕೋವಿಡ್ 19 ನಡುವೆ ಕೆಲವು ಹೋಲಿಕೆಗಳು

ಕಳೆದ ಶತಮಾನದಲ್ಲಿ ಕೋಟಿಗಟ್ಟಲೆ ಜನರನ್ನ ಬಲಿ ತೆಗೆದುಕೊಂಡಿದ್ದ ಪ್ಲೇಗ್‌ ಮತ್ತು ಇದೀಗ ಅಂತಹುದೇ ಹೆದರಿಕೆ ಹುಟ್ಟಿಸಿರುವ ಕೊರೊನಾ ನಡುವಿನ ಒಂದು ತುಲನೆ. ಮೂಲ ಲೇಖನ ʼದಿ ಹಿಂದುʼ ಪತ್ರಿಕೆಯದ್ದು.

- Advertisement -
- Advertisement -

ಅನುವಾದ: ನಿಝಾಮ್ ಅನ್ಸಾರಿ ಕಲ್ಲಡ್ಕ

ಕೃಪೆ : ದಿ ಹಿಂದೂ (ಮಾರ್ಚ್27)

ಸುಮಾರು 20 ಮಿಲಿಯನ್ ಯುರೋಪ್ಯನ್ ಜನತೆಯನ್ನು ಆಹುತಿ ತೆಗೆದುಕೊಂಡ ಪ್ಲೇಗ್ (ಬ್ಲಾಕ್ ಡೆತ್) ಮಹಾ ದುರಂತ ಸಂಭವಿಸಿದ್ದೂ ಇಟಲಿಯಲ್ಲೇ ಆಗಿತ್ತು. 700 ವರ್ಷಗಳ ಹಿಂದೆ ಹರಡಿದ ಈ ಮಹಾಮಾರಿ ಅತಿ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದ್ದು ಫ್ಲೋರನ್ಸ್ ನಲ್ಲಿ.  ಅಂದಿನ ಸಾಮಾಜಿಕ ಅಂತರ (ಸೋಶೀಯಲ್ ಡಿಸ್ಟೆನ್ಸಿಂಗ್), ಏಕಾಂತ ವಾಸ (ಕ್ವಾರಂಟೈನ್) ಇತ್ಯಾದಿಗಳನ್ನು ನಂತರ ಅನೇಕರು ಅಧ್ಯಯನ ವಿಷಯವನ್ನಾಗಿಸಿದರು.

2011 ರಲ್ಲಿ ಅಂತರರಾಷ್ಟ್ರೀಯ ವಿಜ್ಞಾನಿಗಳ ಸಮಿತಿಯೊಂದು ‘ನೇಚರ್’ ಎಂಬ ಜರ್ನಲ್‌ನಲ್ಲಿ  ಮಧ್ಯಯುಗದಲ್ಲಿ ಸಂಭವಿಸಿದ ಮಹಾಮಾರಿಗೆ ಕಾರಣವಾದ ‘ಯೆರ್ಸಿನಿಯ ಪೆಸ್ಟಿಸ್’ ಎಂಬ ಬ್ಯಾಕ್ಟೀರಿಯಾದ ಕುರಿತು ಒಂದು ಪತ್ರವನ್ನು ಹೊರಡಿಸಿದರು. ‘ಪ್ಯೂಬೋನಿಕ್ ಪ್ಲೇಗ್’ ಎಂದಾಗಿತ್ತು ಆ ರೋಗದ ಹೆಸರು. ಅವರ ಪರಿಶೋಧನೆಯಲ್ಲಿ ಈ ಬ್ಯಾಕ್ಟೀರಿಯ ಬಂದಿದ್ದು ಚೀನಾದಿಂದಲೋ ಅಥವಾ ಸಮೀಪ ಪ್ರದೇಶಗಳಿಂದಲೋ ಎಂದಾಗಿತ್ತು. ಅವರು ಇಂದಿನ ಸಿಲ್ಕ್ ರೋಡ್ ಮತ್ತು ಇತರ ಲ್ಯಾಂಡ್ ಟ್ರೇಡ್ ರೂಟ್‍ಗಳ ನೀಲನಕ್ಷೆ ತಯಾರಿಸಿದರು. ಅಂತಿಮವಾಗಿ, ಅದು ಸಮುದ್ರ ಹಾದಿಯಾಗಿ, ಇಟಲಿಯನ್ ಬಂದರು ಪ್ರದೇಶವಾದ ಮೆಸ್ಸಿನಗೆ ಬಂದು ತಲುಪಿತು. ಅಂದೂ ಅದರ ಹುಟ್ಟು ಪ್ರಾಣಿಗಳಿಂದ ಮನುಷ್ಯನಿಗೆ ಹರಡುವುದೇ ಆಗಿತ್ತು. ಇಲಿ, ಅಳಿಲು, ಹಾವು ಇತ್ಯಾದಿ ಜೀವಿಗಳಿಂದ ಬಂದಿದ್ದು ಎಂದು ಅಂದು ಹೇಳಲಾಗಿತ್ತು. ಭಯ, ಆತಂಕ ಹಾಗೂ ನಿರೀಕ್ಷೆಯೇ ಆಗಿತ್ತು ಇಂದಿನಂತೆಯೇ ಅಂದಿನ ಜನರ ಮನಸ್ಥಿತಿ. ’ನಮಗೇನಾಗುತ್ತಿದೆ’ ಎಂಬುದೇ ಅಲ್ಲಿ ಕೇಳುತ್ತಿದ್ದುದು. ಏಕಾಂತತೆ (ಐಸೊಲೇಶನ್) ಮಾತ್ರವಾಗಿತ್ತು ಪ್ರತಿರೋಧದ ಔಷಧ. ಅಂದು ಬ್ಯಾಕ್ಟೀರಿಯ ಇಂದು ವೈರಸ್, ಸಾರ್ಸ್, ಕೋವಿಡ್ 19 (ಕೋವ್2) ಎಂಬ ಈ ಎರಡೂ ಕೂಡಾ ಶರೀರದ ಶ್ವಾಸ ವ್ಯವಸ್ಥೆಯನ್ನು ಬಾಧಿಸುವುದಾಗಿತ್ತು, 1916-20 ಗಳಲ್ಲಿ ಬಂದ ‘ಸ್ಪ್ಯಾನಿಶ್ ಫ್ಲೂ’ ವಿಗೂ ಇದಕ್ಕೂ ಸಮಾನ ಹೋಲಿಕೆಗಳಿವೆ.

ತರತಮಗಳಿಲ್ಲದೆ ಸಮಾಧಾನ ಶಾಂತಿ ತುಂಬಿ ತುಳುಕುತ್ತಿದ್ದ ಸಮಯದಲ್ಲೇ ಯುರೋಪನ್ನು ‘ಬ್ಲಾಕ್ ಡೆತ್’ ಆವರಿಸಿದ್ದು. ರಕ್ತಸಿಕ್ತವಾದ ಶಿಲುಬೆ ಯುದ್ಧ ನಡೆದು ಒಂದು ಶತಮಾನದ ನಂತರ, ಇಂದಿಗೂ ಅದೇ ತರತಮ, ತುಲನೆಗಳಿಲ್ಲದ ಶಾಂತಿ ನೆಲೆಗೊಳ್ಳುವ (ಆಪೇಕ್ಷಿತ ಮಾತ್ರ) ಕಾಲದಲ್ಲಿ ಕೊರೋನಾ ಬಂದು ಬಿಟ್ಟಿದೆ. ಬ್ಲಾಕ್ ಡೆತ್ ನಂತೆ ಇದರಿಂದ ಉಂಟಾಗಬುಹುದಾದಂತಹ ಆರ್ಥಿಕ ಮುಗ್ಗಟ್ಟು ಗುರುತರವಾದದ್ದು. ಎಲ್ಲೆಡೆ ಆವರಿಸಬಹುದಾದ ಬಡತನ, ದಾರಿದ್ರ್ಯ, ಹಸಿವು, ಸಂಘರ್ಷ ಎಂಬಿತ್ಯಾದಿಗಳು ಇದನ್ನು ಎದುರಿಸುವ ಭಾಗವಾಗಿ ಉಂಟಾಗುತ್ತವೆ. ಮಕಾಡೆ ಮಲಗಿರುವ ಜಾಗತಿಕ ಆರ್ಥಿಕತೆ ಮೇಲೇಳಲು ಶತಮಾನವೊಂದು ಬೇಕಾದೀತು ಎಂದು ಬ್ಲಾಕ್ ಡೆತ್ ಇಂಪ್ಯಾಕ್ಟ್ ಹೇಳುತ್ತವೆ.

ಅಂದಿನ ಮಕ್ಕಳ ಬಾಯಿಂದ ಕೇಳಿ ಬರುತ್ತಿದ್ದ ಹಾಡು ಇದಾಗಿತ್ತು.

“Ring a Ringa roses…..all fall down”

ಇದರಲ್ಲಿ ರೋಸಸ್ ಎಂಬುದು ಬಾಧಿತರ ಶರೀರದಲ್ಲಿರುವ ಬ್ಲೂಬೋಸ್ ಅನ್ನು ಸೂಚಿಸಿದರೆ, ‘ಆಲ್ ಫಾಲ್ ಡೌನ್’ ಎಂಬುದು ಸಾಮೂಹಿಕ ಮರಣದೆಡೆಗೆ ಬೊಟ್ಟು ಮಾಡುತ್ತದೆ. ಆದರೆ, ಅಂದಿನ ಅಷ್ಟೊಂದು ಸಾಹಿತ್ಯಗಳು ಇಂತಹ ರೋಗಗಳ ಹಿನ್ನೆಲೆಯಲ್ಲಿ 20,21 ಶತಮಾನಗಳಲ್ಲಿ ಬರೆಯಲ್ಪಟ್ಟಿಲ್ಲ.
ಬೊಕೊಚಿಯೊ ಅವರ ಮಾಸ್ಟರ್ ಪೀಸ್ ಕೃತಿಯಾಗಿ ಗುರುತಿಸಲ್ಪಡುವ ‘ದಿ ಡೆಕಾಮರೂನ್’ ಆ ಕಾಲದಲ್ಲಿ ಬರೆಯಲ್ಪಟ್ಟ ಬಹುದೊಡ್ಡ ಸಾಹಿತ್ಯ ಕೃತಿಯಾಗಿದೆ. ಬ್ಲಾಕ್ ಡೆತ್‍ನ ಹಿನ್ನೆಲೆಯಲ್ಲಿ ಅಂದಿನ ಸಾಹಿತ್ಯದ ಮೇರು ಪರ್ವತವೆಂದೇ ಖ್ಯಾತನಾಮರಾಗಿದ್ದ ಬೊಕಾಚಿಯೊ ಏಕಾಂತ ಬಂಧನದಲ್ಲಿದ್ದ ರೋಗಿಗಳ ಕತೆಗಳನ್ನು ದಾಖಲಿಸಿ ‘ಡೆಕಾಮರೂನ್’ ಬರೆದು ಮುಗಿಸಿದ್ದು. ಸೆಲ್ಫ್ ಕ್ವಾರಂಟೈನ್‍ನಲ್ಲಿದ್ದ ಮೂರು ಪುರುಷರ ಹಾಗೂ ಏಳು ಸ್ರೀಯರ ಕಥೆಗಳು ಇದರಲ್ಲಿವೆ.

ಮೆಡಿಕೇಶನ್, ಡ್ರಗ್ಸ್, ಜನಟಿಕ್ಸ್, ಎಪ್ಪಿಡಮಾಲಜಿ, ಡಬ್ಲ್ಯೂ.ಎಚ್.ಒ ಮುಂತಾದ ಹೆಸರುಗಳ  ಬಗ್ಗೆ ಚಿಂತಿಸುವುದಕ್ಕೂ ಕೂಡಾ ಆಗದ ಕಾಲವದು. ಶೇಕ್ಸ್‍ಪಿಯರ್ ಮತ್ತು ಗಲಿಲಿಯೋ ಅವರಿಗಿಂತ 200 ವರ್ಷಗಳ ಹಿಂದೆ ಸಾಗಿ ಹೋದ ಪ್ಲೇಗ್‍ಗೆ, ‘ಡಕಾಮರೂನ್’ ನಂತಹ ಒಂದು ಕಾಲಾತೀತ ಸಾಹಿತ್ಯ ಕೃತಿಗೆ ಜನ್ಮ ಕೊಡಲು ಅಂದು ಸಾಧ್ಯವಾಯಿತು. ಆಧುನಿಕತೆ ಮತ್ತು ಯುಕ್ತಿಯಾಧಾರಿತ ಶಾಸ್ತ್ರವು ಆಗಿನ್ನೂ ರಂಗ ಪ್ರವೇಶ ಮಾಡದ ಹೊತ್ತಲ್ಲಿ, ಮಾನವೀಯತೆಯ ಹರಿಕಾರರಾದ ಡಾನ್‍ರೆ ಮತ್ತು ಬೊಕೊಚಿಯೊರಂತಹ ಸಾಹಿತ್ಯಕಾರರು ಜನ್ಮತಾಳಿದ್ದು.

ಬ್ಲಾಕ್ ಡೆತ್‍ನ ನಂತರವೇ ಆಗಿತ್ತು ಯುರೋಪಿನಲ್ಲಿ ನವೋತ್ಥಾನ ಆರಂಭಗೊಂಡಿರುವುದು.“Revival in arts and letters” ಅನ್ನೋದು ಒಂದು ಮಹಾ ಲಿಬರೇಶನ್ ಆಗಿತ್ತು. ಅದರ ಪರವಾಗಿ ಮತ್ತು ವಿರುದ್ಧವಾಗಿ ವಿಶ್ಲೇಷಣೆಗಳು, ವಿವರಣೆಗಳಿದ್ದರೂ, ಪ್ರಪಂಚಕ್ಕೆ ಹಲವಾರು ತಿರುವುಗಳನ್ನು ನೀಡಿದೆ. ಈ ಕೊರೋನಾ ಕಾಲವೂ ಕೂಡಾ ಬಹುಶಃ ಒಂದು ಮಹಾ ನವೋತ್ಥಾನಕ್ಕೆ ಕಾರಣವಾಗಲಿ ಎಂದು ನಾವು ಆಶಿಸಬಹುದು. ಈ ಕ್ವಾರಂಟೈನ್ ನಮ್ಮ ವ್ಯಕ್ತಿ ಜೀವನದಲ್ಲೂ, ಸಾಮಾಜಿಕ, ರಾಜಕೀಯ, ಸಾಹಿತ್ಯ ವಲಯಗಳಲ್ಲೂ ಮಂಗಳಕರವಾದ ಬೆಳವಣಿಗೆಗಳನ್ನುಂಟು ಮಾಡಲಿದೆ ಎಂದು ನಿರೀಕ್ಷಿಸೋಣ…

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...