Homeಮುಖಪುಟರಸ್ತೆ ಅಪಘಾತದ ಸಾವುಗಳಿಗೆ ಸಂಜೀವಿನಿಯಾಗಿ ಸಾವಿರಾರು ಪ್ರಾಣಗಳನ್ನು ಉಳಿಸಿದ ಡಿ.ರಂಗಸ್ವಾಮಿ..

ರಸ್ತೆ ಅಪಘಾತದ ಸಾವುಗಳಿಗೆ ಸಂಜೀವಿನಿಯಾಗಿ ಸಾವಿರಾರು ಪ್ರಾಣಗಳನ್ನು ಉಳಿಸಿದ ಡಿ.ರಂಗಸ್ವಾಮಿ..

ಮೇಲುಜಾತಿಗಳಿಂದ ಮುಟ್ಟಿಸಿಕೊಳ್ಳದ ದಲಿತ ಸಮುದಾಯಕ್ಕೆ ಸೇರಿದ ರಂಗಸ್ವಾಮಿ ಸ್ವತಃ ಸಾವಿರಾರು ಜನರನ್ನು ಮುಟ್ಟಿ ಅವರುಗಳ ಜೀವ ಉಳಿಸಲು ಶ್ರಮಿಸುತ್ತಿರುವುದು ಜಾತಿವಾದಿ ರೋಗಿಷ್ಠ ಸಮಾಜಕ್ಕೆ ಮದ್ದಿನಂತೆ ಕಾಣುತ್ತದೆ.

- Advertisement -
- Advertisement -

ಎಲೆಮರೆ-18

-ಅರುಣ್ ಜೋಳದ ಕೂಡ್ಲಿಗಿ

ಆಗಿನ್ನೂ ಬಾಲಕ. ಊರಿಗೆ ಎದುರಾಗಿ ಹೈವೆ. ದಿನ ಬೆಳಗಾದರೆ ವಾಹನಗಳ ಓಡಾಟದ ಗದ್ದಲ, ರಾತ್ರಿಯ ಕನಸಿಗೆ ಹಿನ್ನೆಲೆ ಸಂಗೀತದಂತೆ ಹೈವೆಯ ಸದ್ದು. ಹೀಗಿರುವಾಗ `ಆಕ್ಸಿಡೆಂಟ್’ ಎಂಬ ಶಬ್ದ ಕಿವಿಗೆ ಬಿದ್ದಾಕ್ಷಣ ಊರವರು ರನ್ನಿಂಗ್ ರೇಸ್‌ನ ಸ್ಪರ್ಧಿಗಳಂತೆ ಓಡುತ್ತಿದ್ದರು. ಬಾಲಕನೂ ದಮ್ಮಿಡಿದು ಆಕ್ಸಿಡೆಂಟ್ ಸ್ಥಳಕ್ಕೆ ಧಾವಿಸುತ್ತಿದ್ದ. ಅದೊಂದು ಭಯಾನಕ ಆಕ್ಸಿಡೆಂಟ್. ಎರಡು ಲಾರಿಗಳು ಎದುರಾಬದುರು ಗುದ್ದಿಕೊಂಡು ನುಜ್ಜಾಗಿವೆ. ಒಂದು ಲಾರಿಯಲ್ಲಿ ಟ್ಯಾಂಕರ್ ಹೊಡೆದು ಹಾಲು ಸೋರುತ್ತಿದೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಡ್ರೈವರ್ ಕ್ಲೀನರುಗಳನ್ನು ಕಣ್ಣೆತ್ತಿಯೂ ನೋಡದ ಜನರು, ಟ್ಯಾಂಕರಿನಿಂದ ಸುರಿಯುತ್ತಿದ್ದ ಹಾಲನ್ನು ಕ್ಯಾನು ಪಾತ್ರೆ ಚೆಂಬುಗಳಲ್ಲಿ ತುಂಬಿಸಿಕೊಳ್ಳುವುದರಲ್ಲಿ ಬ್ಯುಜಿಯಾಗಿದ್ದರು.

ಈ ಹುಡುಗ ರಕ್ತದ ಮಡುವಲ್ಲಿ ಸಾವಿನ ಕದ ತಟ್ಟುತ್ತಿದ್ದ ಡ್ರೈವರನನ್ನು ನೋಡುತ್ತಾ ಬಿಕ್ಕಳಿಸಿ ಅಳುತ್ತಿದ್ದ… ಇಂತಹದ್ದೇ ನೂರಾರು ಘಟನೆಗಳಿಗೆ ಸಾಕ್ಷಿಯಾದ ಈ ಹುಡುಗನ ಮನಸ್ಸಲ್ಲಿ ಒಂದು ಪ್ರಶ್ನೆ ಮೊಳೆಯಿತು. `ಆಕ್ಸಿಡೆಂಟ್ ಆದಾಗ ಸಾವಿನೊಂದಿಗೆ ಹೋರಾಡುತ್ತಿರುವ ಜೀವಗಳ ಉಳಿಸಲು ಯಾಕೆ ಜನರು ಮುಂದಾಗುವುದಿಲ್ಲ?’ ಈ ಹುಡುಗ ಹೈಸ್ಕೂಲ್ ದಾಟಿ ಪಿಯುಗೆ ಬರುತ್ತಾನೆ. ತನ್ನೊಳಗೆ ಮೊಳೆತ ಪ್ರಶ್ನೆ ಗಿಡದಿಂದ ಮರವಾಗುತ್ತದೆ. ಕೊನೆಗೆ ಈ ಪ್ರಶ್ನೆಗೆ ತಾನೆ ಉತ್ತರವಾಗಲು ಅಣಿಯಾಗುತ್ತಾನೆ. ಆ ಹುಡುಗನೆ ಚಿತ್ರದುರ್ಗ ತಾಲೂಕಿನ ಇಂಗಳದಾಳು ಎಂಬ ಹಳ್ಳಿಯ ಜಂಗ್ಲಿ ರಂಗಪ್ಪರ ದೇವೇಂದ್ರಪ್ಪ ಮತ್ತು ಸರೋಜಮ್ಮನ ಮಗ ರಾಮಸ್ವಾಮಿ. ಇದೀಗ ಬಿಇಡಿ ಮುಗಿಸಿ ಸ್ನಾತಕೋತ್ತರ ಪದವಿ ಮಾಡುವ ಕನಸೊತ್ತಿದ್ದಾನೆ.

ರಸ್ತೆ ಅಪಘಾತಗಳು ಸಂಭವಿಸಿದ ಸ್ಥಳಗಳಿಗೆ ತತ್‌ಕ್ಷಣಕ್ಕೆ ಭೇಟಿ ನೀಡಿ ಅಪಘಾತಕ್ಕೆ ಒಳಗಾದವರನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಿ, ಸಾಧ್ಯವಾದಷ್ಟು ಜೀವ ಉಳಿಸಲು ಪ್ರಯತ್ನಿಸುವ ಕೆಲಸವನ್ನು ರಂಗಸ್ವಾಮಿ 2013 ರಿಂದ ಮಾಡುತ್ತಾ ಬಂದಿದ್ದಾನೆ. ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಇಂಗಳದಾಳುವಿನ ಈ ಹುಡುಗನ ಕೆಲಸ ಆರಂಭಕ್ಕೆ ಅಪಾಯಕಾರಿಯಾಗಿ ಕಂಡಿತು. ಪೊಲೀಸರು ಈ ಹುಡುಗನನ್ನು ಸಾಕ್ಷಿಯಾಗಿಸಿದರೆ ಕೋರ್ಟಿಗೆ ಅಲೆಯಬೇಕಾಗುತ್ತದೆ ಎಂದು ಊರವರು ಬುದ್ಧಿವಾದ ಹೇಳಿದರು. ಯಾರು ಯಾರದೋ ರಕ್ತಕ ಕಲೆ ಮಾಡಿಕೊಂಡು ಬರುವ ಈತನನ್ನು ಮನೆಯವರು ಬೈದರು. ಆರಂಭಕ್ಕೆ ಬಣ್ಣದ ಡಬ್ಬಿ ಹಿಡಿದು ಹಸಿಕಡ್ಡಿಯ ತುದಿ ಜಜ್ಜಿಕೊಂಡು ಅಪಘಾತ ವಲಯಗಳಿರುವೆಡೆ ’ಎಚ್ಚರಿಕೆ ಅಪಘಾತ ವಲಯ ನಿಧಾನಕ್ಕೆ ಚಲಿಸಿ’ ಎಂದು ರಸ್ತೆಬದಿಯ ಗೋಡೆಗಳಿಗೆ ಬರೆಯುತ್ತಿದ್ದ ಈ ಯುವಕ ಜನರಿಗೆ ತಲೆಕೆಟ್ಟವನಂತೆ ಕಂಡಿದ್ದ. ಇದೀಗ ಚಿತ್ರದುರ್ಗ ಜಿಲ್ಲೆಯಾದ್ಯಂತ ತಿರುಗಾಡಿ ರಂಗಸ್ವಾಮಿ ಗೆಳೆಯರ ನೆರವಿನೊಂದಿಗೆ ಇಂತಹ 400 ಕ್ಕಿಂತ ಹೆಚ್ಚಿನ ಸೂಚನಾಫಕಲಗಳನ್ನು ಬರೆದಿದ್ದಾನೆ. ನಂತರದಲ್ಲಿ ಕೆಲವು ಕಲಾವಿದರು ರಂಗಸ್ವಾಮಿಯ ಕೆಲಸಕ್ಕೆ ಜೊತೆಯಾಗಿದ್ದಾರೆ.

ನಿಧಾನಕ್ಕೆ ಜೀವ ಉಳಿಸುವ ಈ ಕೆಲಸಕ್ಕೆ ಆಡಿಕೊಂಡ ಜನರಿಂದಲೆ ಮೆಚ್ಚುಗೆ ಬರತೊಡಗಿತು. ರಂಗಸ್ವಾಮಿಯ ಸ್ನೇಹಿತರೂ ತನ್ನ ಕೆಲಸಕ್ಕೆ ಜೊತೆಯಾಗತೊಡಗಿದರು. ಈ ಸಂಖ್ಯೆ ಹೆಚ್ಚಾದಂತೆ `ಸಂಜೀವಿನಿ’ ಎಂಬ ವಾಟ್ಸಪ್ ಗ್ರೂಪ್ ರಚನೆಯಾಯಿತು. ಇದೀಗ ಮೂರು ವಾಟ್ಸಪ್ ಗ್ರೂಪಲ್ಲಿ ಏಳುನೂರ ಐವತ್ತು ಜನರು ಸಂಜೀವಿನಿಯ ಜತೆ ಗುರುತಿಸಿಕೊಳ್ಳುತ್ತಾರೆ. ನೂರಕ್ಕಿಂತ ಹೆಚ್ಚಿನ ಮಹಿಳೆಯರದೇ ಒಂದು ಪ್ರತ್ಯೇಕ ಗುಂಪಿದೆ. ಅದರಲ್ಲಿ ಶಾಲಾ ಶಿಕ್ಷಕಿಯರು ಹೆಚ್ಚಿದ್ದಾರೆ. ಅವರೆಲ್ಲಾ ಶಾಲೆಗಳಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ.

ಚಿತ್ರದುರ್ಗ ಜಿಲ್ಲೆಯ ಯಾವುದೇ ರಸ್ತೆಯಲ್ಲಿ ಅಪಘಾತವಾದರೂ ತತ್‌ಕ್ಷಣಕ್ಕೆ ವಾಟ್ಸಪ್ ಗ್ರೂಪಲ್ಲಿ ಫೋಟೋ ಮಾಹಿತಿ ಹಂಚಿಕೆಯಾಗುತ್ತದೆ. ರಂಗಸ್ವಾಮಿ ಆಯಾ ಭಾಗದ ಸಂಜೀವಿನಿ ಸದಸ್ಯರಿಗೆ ಫೋನಾಯಿಸಿ ವಿಚಾರಿಸುತ್ತಾರೆ. ಆಗ ಆ ಭಾಗದ ಸಂಜೀವಿನಿ ಸಂಗಾತಿಗಳು ಅಪಘಾತದ ಸ್ಥಳಕ್ಕೆ ಭೇಟಿ ನೀಡಿ, ಅಪಘಾತಕ್ಕೆ ಒಳಗಾದವರ ರಕ್ಷಿಸಿ ಮೊದಲು ಆಂಬುಲೆನ್ಸ್‌ಗೆ ಫೋನಾಯಿಸುತ್ತಾರೆ. ಅಂಬುಲೆನ್ಸ್ ಅಲಭ್ಯವಾದಲ್ಲಿ ಬೈಕ್, ಆಟೋ, ಟೆಂಪೋ ಯಾವುದನ್ನಾದರೂ ಹಿಡಿದು ಮೊದಲು ಅಪಘಾತಕ್ಕೆ ಒಳಗಾದವರನ್ನು ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆಗೆ ಅಣಿ ಮಾಡುತ್ತಾರೆ. ನಂತರ ಅಪಘಾತಕ್ಕೆ ಒಳಗಾದವರ ಮನೆಯವರಿಗೆ ಮಾಹಿತಿ ಮುಟ್ಟಿಸಿ, ತದನಂತರ ಪೊಲೀಸ್ ಮತ್ತು ಮಾಧ್ಯಮದವರಿಗೆ ಹೇಳುತ್ತಾರೆ. ಇದು ಸಂಜೀವಿನಿಯ ಕೆಲಸದ ಸ್ವರೂಪ.

ಇದೀಗ ಸಾವಿರಕ್ಕಿಂತ ಹೆಚ್ಚಿನ ಜನರಿಗೆ ಸಂಜೀವಿನಿ ಬಳಗ ನೆರವಾಗಿದೆ. ಪೊಲಿಸ್ ಇಲಾಖೆಯೂ ಸಂಜೀವಿನಿ ಬಳಗದ ಸದಸ್ಯರನ್ನು ಅಪಘಾತಕ್ಕೆ ಸಾಕ್ಷಿಯಾಗಿಸದೆ ಬೆಂಬಲಿಸಿದ್ದಾರೆ. ಅಪಘಾತಕ್ಕೆ ಒಳಗಾಗಿ ಸಂಜೀವಿನಿ ನೆರವಿನಿಂದ ಬದುಕುಳಿದವರೂ ಈ ಗುಂಪಿನ ಸಕ್ರಿಯ ಸದಸ್ಯರಾಗಿದ್ದಾರೆ. ಸಂಜೀವಿನಿ ಬಳಗದ ಬಗ್ಗೆ ಪತ್ರಿಕೆ ಟಿವಿಗಳಲ್ಲಿ ಪ್ರಚಾರ ನೋಡಿ ಕೆಲವರು ಸ್ವಆಸಕ್ತಿಯಿಂದ ಸಂಜೀವಿನಿ ಬಳಗಕ್ಕೆ ಸ್ಪಂದಿಸಿದ್ದಾರೆ. ಇದೀಗ ಸಾರಿಗೆ ಇಲಾಖೆಯು ತನ್ನ ರಸ್ತೆ ಸಪ್ತಾಹದಂತಹ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ರಂಗಸ್ವಾಮಿಯನ್ನು ಅತಿಥಿಯಾಗಿ ಕರೆದು, ತನ್ನ ಅನುಭವ ಹಂಚಿಕೊಳ್ಳಲು ಅನುವು ಮಾಡಿಕೊಟ್ಟಿದೆ. 2018 ರಲ್ಲಿ ಚಿತ್ರದುರ್ಗದ ಬಿಇಓ ನಾಗಭೂಷಣ ಅವರು ಶಾಲೆಗಳಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ರಂಗಸ್ವಾಮಿ ಮತ್ತವರ ತಂಡಕ್ಕೆ ಅನುಮತಿ ನೀಡಿದ್ದರು. ಹಾಗಾಗಿ ಪ್ರಾಥಮಿಕ ಶಾಲೆಗಳಲ್ಲಿಯೂ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಕಾಲೇಜು ವಿದ್ಯಾರ್ಥಿಗಳ ನೆರವಿನಿಂದ ಈತನಕ ಎಂಬತ್ತು ಕಾಲೇಜುಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.

ಇದೀಗ ರಂಗಸ್ವಾಮಿಯನ್ನು ಚಿತ್ರದುರ್ಗ ಜಿಲ್ಲೆಯ ರಸ್ತೆ ಸುರಕ್ಷತೆಯ ಪ್ರಚಾರದ ರಾಯಭಾರಿಯಾಗಿಯನ್ನಾಗಿ ಆಯ್ಕೆ ಮಾಡಲು ಆರ್.ಟಿ.ಓ ಮತ್ತು ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ. 2019 ರ ಆರ್.ಟಿ.ಓ ವರದಿಯ ಪ್ರಕಾರ ಚಿತ್ರದುರ್ಗ ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದರೂ, ಸಾವಿನ ಸಂಖ್ಯೆ ಕಡಿಮೆಯಾಗಿದೆ. ಇದು ಸಂಜೀವಿನಿ ಬಳಗದ ಪರಿಣಾಮ ಎಂದು ರಂಗಸ್ವಾಮಿ ಹೇಳುತ್ತಾರೆ. ರಸ್ತೆಗಳಲ್ಲಿ ಜನರು ಓಡಾಡಿದ ಕಾಲುದಾರಿಗಳಿರುತ್ತವೆ. ಹೈವೆ ರಸ್ತೆಗಳನ್ನು ಮಾಡುವಾಗ ಹೀಗೆ ಜನರು ಓಡಾಡುವ ಕಾಲುದಾರಿಗಳಲ್ಲೆ ರಸ್ತೆ ದಾಟುವ ಮಾರ್ಗಗಳನ್ನಾಗಿಸಬೇಕು. ಆದರೆ ಹೈವೇ ಅಥಾರಿಟಿ ಇವುಗಳನ್ನು ಗಮನಿಸುವುದಿಲ್ಲ. ಇದರಿಂದಾಗಿ ಜನರು ಓಡಾಡಿದ ಹಳೆಯ ದಾರಿಗಳಲ್ಲೆ ರಸ್ತೆ ದಾಟಲು ಪ್ರಯತ್ನಿಸುತ್ತಾರೆ. ಇದು ಕೂಡ ಅಪಘಾತಕ್ಕೆ ಕಾರಣ ಎಂದು ರಂಗಸ್ವಾಮಿ ತನ್ನದೇ ಅನುಭವದಿಂದ ಸಮಸ್ಯೆಗಳನ್ನು ಗುರುತಿಸುತ್ತಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಸಂಜೀವಿನಿ ಬಳಗ ಸೂಚಿಸಿದ 96 ಅಪಘಾತ ಸಂಭವದ ಸ್ಥಳಗಳನ್ನು ಸಾರಿಗೆ ಇಲಾಖೆಯವರೂ ಮಾನ್ಯಮಾಡಿದೆ. ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ಅಣ್ಣ ಶಾಂತಕುಮಾರ್, ಬಿಇಡಿ ಮುಗಿಸಿದ ತಂಗಿ ಮತ್ತು ಅಪ್ಪ ಅಮ್ಮ ಇರುವ ಪುಟ್ಟ ಕುಟುಂಬ ರಾಮಸ್ವಾಮಿಯ ಕೆಲಸಕ್ಕೆ ಇದೀಗ ಬೆಂಬಲವಾಗಿದ್ದಾರೆ. ರಾಮಸ್ವಾಮಿಯ ನೂರಾರು ಗೆಳೆಯರ ಸ್ನೇಹಬಳಗ ಸಂಜೀವಿನಿಯನ್ನು ಜೀವಂತವಾಗಿಟ್ಟಿದೆ.

ಮುಂದೆ ಒಂದು ಟ್ರಸ್ಟ್ ಮಾಡಿ ರಾಜ್ಯವ್ಯಾಪಿ ಸಂಜೀವಿನಿ ಬಳಗವನ್ನು ವಿಸ್ತರಿಸುವ ಕನಸು ರಂಗಸ್ವಾಮಿಯದು. ಪ್ರಜಾವಾಣಿ 2020 ರ ಯುವ ಸಾಧಕರನ್ನು ಗುರುತಿಸುವಾಗ ರಂಗಸ್ವಾಮಿಯನ್ನು ಗುರುತಿಸಿ ಗೌರವಿಸಲಾಗಿದೆ. ಹಲವು ಸಂಘಸಂಸ್ಥೆಗಳು ರಂಗಸ್ವಾಮಿಯ ಕೆಲಸವನ್ನು ಮೆಚ್ಚಿ ಬೆಂಬಲಿಸಿವೆ. ಮೇಲುಜಾತಿಗಳಿಂದ ಮುಟ್ಟಿಸಿಕೊಳ್ಳದ ದಲಿತ ಸಮುದಾಯಕ್ಕೆ ಸೇರಿದ ರಂಗಸ್ವಾಮಿ ಸ್ವತಃ ಸಾವಿರಾರು ಜನರನ್ನು ಮುಟ್ಟಿ ಅವರುಗಳ ಜೀವ ಉಳಿಸಲು ಶ್ರಮಿಸುತ್ತಿರುವುದು ಜಾತಿವಾದಿ ರೋಗಿಷ್ಠ ಸಮಾಜಕ್ಕೆ ಮದ್ದಿನಂತೆ ಕಾಣುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...