Homeಮುಖಪುಟಮಂಕುತಿಮ್ಮನ ಕಗ್ಗ ಡಿ. ವಿ .ಗುಂಡಪ್ಪ

ಮಂಕುತಿಮ್ಮನ ಕಗ್ಗ ಡಿ. ವಿ .ಗುಂಡಪ್ಪ

- Advertisement -
- Advertisement -

ಅಕ್ಕಿಯೊಳಗನ್ನವನು ಮೊದಲಾರು ಕಂಡವನು
ಅಕ್ಕರದ ಬರಹಕ್ಕೆ ಮೊದಲಿಗನದಾರು?
ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ
ದಕ್ಕುವುದೇ ನಿನಗೆ ಜಸ ಮಂಕುತಿಮ್ಮ.

ಮಂಕುತಿಮ್ಮ ಎಂದು ದಡ್ಡನೊಬ್ಬನಿಗೆ ಅನ್ನುವಂತಹ ಮಾತೊಂದನ್ನು ಡಿವಿಜಿ ಜೀವರೂಪಕವನ್ನಾಗಿ ಆರಿಸಿಕೊಂಡಿದ್ದು ಆಕಸ್ಮಿಕವೂ ಅಲ್ಲ, ವಿಡಂಬನೆಯೂ ಅಲ್ಲ. ಜೀವಿ ಎಂಬ ಸೀಮಿತ ಭೌತಿಕ ಅಸ್ತಿತ್ವವು ಜೀವನ ಎಂಬ ಅನಂತ ಅಸ್ತಿತ್ವದ ಭಾಗವಾಗಿದ್ದು, ಅದನ್ನು ಅರಿಯಲು ತನ್ನ ತಾತ್ವಿಕತೆಯ ದೃಷ್ಟಿಯನ್ನು ವಿಸ್ತಾರಗೊಳಿಸಿಕೊಳ್ಳಲು ಮಂಕುತಿಮ್ಮ ಇಲ್ಲಿ ಮಾನುಷ ರೂಪಕವಾಗಿದ್ದಾನೆ.

ತಿಳಿದಿದ್ದೇನೆ ಎನ್ನುವ ಅಹಮಿನ ಭಾವಕ್ಕೆ ತಿಳಿಯದ ಅನಂತ ವಿಚಾರಗಳು, ಅಚ್ಚರಿಗಳು, ಗುಟ್ಟುಗಳು, ದಾರಿಗಳು, ನೋಟಗಳೆಲ್ಲಾ ಇದ್ದು, ತನಗೆ ಹೇಳಿಕೊಂಡರೆ ತಾನು, ನಿನಗೆ ಹೇಳಿದರೆ ನೀನು ಎನ್ನುವ ಹಾಗೆ ಮಂಕುತಿಮ್ಮ ಆತ್ಮಾವಲೋಕನಕ್ಕೂ ರೂಪಕವಾಗುತ್ತಾನೆ. ಎದುರಿಗೆ ಸಂವಾದಿಸುತ್ತಾ ಬೋಧನೆಯನ್ನು ಸ್ವೀಕರಿಸುತ್ತಿರುವ ವ್ಯಕ್ತಿಯಾಗಿಯೂ ಸಂಕೇತವಾಗುತ್ತಾನೆ. ಒಟ್ಟಾರೆ ಒಂದು ಮಾನುಷ ಪರಿಮಿತಿಯ ಗ್ರಹಿಕೆ ಮತ್ತು ಅರಿವನ್ನು ಪರಸ್ಪರ ಹಂಚಿಕೊಳ್ಳುವ ಪ್ರತಿಮೆ ಮಂಕುತಿಮ್ಮ.

“ಕಲೆಗಳಲಿ ಪರಮ ಕಲೆ ಜೀವನದ ಲಲಿತಕಲೆ” ಎನ್ನುವ ಮಂಕುತಿಮ್ಮ ತನ್ನೆಲ್ಲಾ ತಾತ್ವಿಕ, ನೈತಿಕ, ಪಾರಮಾರ್ಥಿಕ ಹುಡುಕಾಟಗಳನ್ನೆಲ್ಲಾ ತನ್ನ ವರ್ತನೆ, ದರ್ಶನ, ಕ್ರಿಯೆ, ಪ್ರತಿಕ್ರಿಯೆ, ಗಮನ, ವಿಚಾರದ ಪ್ರಕ್ರಿಯೆಗಳಲ್ಲಿ ಅಲ್ಲಲ್ಲಿಗೆ ಒಳನೋಟಗಳನ್ನು ಕಂಡುಕೊಳ್ಳುತ್ತಿರುತ್ತಾನೆ. ಅದು ಧೈರ್ಯ, ಶಾಂತಿ, ಸಮಾಧಾನ, ದೃಷ್ಟಿಯಾಗುತ್ತದೆ, ಊರುಗೋಲಾಗುತ್ತದೆ, ಹರಿಗೋಲಾಗುತ್ತದೆ.

ಸತ್ತೆನೆಂದೆನಬೇಡ ಸೋತೆನೆಂದೆನಬೇಡ
ಬತ್ತಿತೆನ್ನೊಳು ಸತ್ವದೂಟೆ ಎನಬೇಡ
ಮೃತ್ಯುವೆಂಬುದು ಒಂದು ತೆರೆಯಿಳಿತ ತೆರೆಯೇರು
ಮತ್ತೆ ತೋರ್ಪುದು ನಾಳೆ ಮಂಕುತಿಮ್ಮ.

ಹೀಗೆ ಸಾವನ್ನೂ ಎದುರಿಸುವಂತಹ ಸ್ಥೈರ್ಯ ಕೊಡಲು ಅಥವಾ ತಂದುಕೊಳ್ಳಲು ಮಂಕುತಿಮ್ಮ ಮುಂದಾಗುತ್ತಾನೆ.

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ.

ಈ ಕಗ್ಗ ನೇರವಾಗಿ ವಿಷಯವನ್ನು ತಿಳಿಸಿದಂತೆ ಎಲ್ಲಾ ಕಗ್ಗಗಳೂ ಸುಲಭವೇನಲ್ಲ. ಪದಪದಗಳು ಒಂದರಲ್ಲೊಂದು ಹೆಣೆದುಕೊಂಡು ಜಟಿಲವಾದ ಅಥವಾ ಕೇಳದಿರುವ ಪದಗಳಂತೆ ತೋರುವುದುಂಟು. ತತ್ಸಮ ತತ್ಭವ ಪದಗಳ ಅರಿವಿರಬೇಕು.

ಬದುಕೊಂದು ಕದನವೆಂದಂಜಿ ಬಿಟ್ಟೋಡುವನು
ಬಿದಿಯ ಬಾಯಿಗೆ ಕವಳವಾಗದುಳಿಯುವನೆ?

ಎಂದಾಗ ಕದನವು ಎಂದು ಅಂಜಿ ಎಂಬ ಪದಗಳಲ್ಲಿ ಸಂಧಿಕಾರ್ಯವಾಗಿರುವ ಅರಿವಿರಬೇಕು. ಬಿದಿ ಎಂಬುದು ವಿಧಿಯ ತತ್ಭವ ರೂಪ ಎಂದೂ ತಿಳಿದಿರಬೇಕು. ಹೀಗಾಗಿ ಕಗ್ಗ ಬಹುಜನಕ್ಕೆ ಕಬ್ಬಿಣದ ಕಡಲೆಯಾಗಿ ಚೆನ್ನಾಗಿ ಭಾಷೆ ಬಲ್ಲವರು ನಾಲಿಗೆಯನ್ನು ಹೊರಳಾಡಿಸುತ್ತಾ ಹೇಳುವಾಗ ಕೆಲವರಿಗೆ ಯಾವುದೋ ಮಂತ್ರವನ್ನು ಅಥವಾ ಟಂಗ್ ಟ್ವಿಸ್ಟರ್ ಕೇಳುತ್ತಿರುವಂತೆ ಅನ್ನಿಸಿದರೆ ಆಶ್ಚರ್ಯವೇನಿಲ್ಲ.

ಎಲ್ಲಾ ಕಗ್ಗಗಳೂ ಒಂದೇ ದೃಷ್ಟಿಕೋನವನ್ನು ಹೊಂದಿರುವುದಿಲ್ಲ. ಸಾಂದರ್ಭಿಕವಾಗಿ ಅವುಗಳು ಧ್ವನಿಸುತ್ತವೆ. ಎದೆಯನುಕ್ಕಾಗಿಸುತ ಮತಿಗದೆಯ ಪಿಡಿದು ನೀನೆದುರು ನಿಲೆ ಬಿದಿಯೊಲಿವ, ಅಂದರೆ ಮನಸ್ಸನ್ನು ಗಟ್ಟಿ ಮಾಡಿಕೊಂಡು ಕುಶಲತೆಯಿಂದ ನಿನಗೆ ಎದುರಾಗಿರುವ ವಿಧಿಯನ್ನು ಗೆಲ್ಲು ಎಂದು ಆತ್ಮಶಕ್ತಿಯ ಧೈರ್ಯ ಹೇಳುವ ಮಂಕುತಿಮ್ಮ, ಬದುಕು ಜಟಕಾಬಂಡಿ ವಿಧಿಯದರ ಸಾಹೇಬ ಮದುವೆಗೋ ಮಸಣಕೋ ಹೋಗೆಂದಕಡೆಗೋಡುತ್ತಿರಬೇಕು ಎನ್ನುವ ಹಣೆಬರಹವನ್ನು ಹಳಿಯಲಾರದ ಜಿಗುಪ್ಸೆಯೂ ಇದೆ. ಇವು ವಿರೋಧಾಭಾಸಗಳೇನಲ್ಲ. ಮಂಕುತಿಮ್ಮನ ಕಗ್ಗ ಒಂದು ವಿಚಾರಧಾರೆಯನ್ನು ಪ್ರತಿಪಾದಿಸಲು ಇಡೀ ಕೃತಿ ಕಟ್ಟಿಕೊಂಡಿರುವುದೇನಲ್ಲ.

ಒಂದು ಜೀವ, ಜೀವನದ ಪಥದಲ್ಲಿ ಎದುರಾಗುವ ಎಲ್ಲವನ್ನೂ ಹಾದು ಹೋಗುವುದು ಅನಿವಾರ್ಯವಾದ್ದರಿಂದ ಸಂದರ್ಭಾನುಸಾರ ಪ್ರಶ್ನೆಗಳಿಗೂ ಸಾಂದರ್ಭಿಕ ಉತ್ತರಗಳನ್ನು ಪಡೆದುಕೊಳ್ಳುತ್ತಾ ಹೋಗುವನು ಈ ಮಂಕುತಿಮ್ಮ.
ಒಂದು ಎಚ್ಚರಿಕೆ; ಮಂಕುತಿಮ್ಮನ ಕಗ್ಗವನ್ನು ಓದುವಾಗ ಪದಗಳು ಉಲ್ಲನ್ ಉಂಡೆ ಸಿಕ್ಕಾದಂತೆ ಕಂಡರೂ ಯಾರಾದರೂ ಕೊಟ್ಟಿರುವ ವಿವರಣೆಗಳನ್ನು ಮಾತ್ರ ಓದಬೇಡಿ. ಎಷ್ಟೋ ಬಾರಿ ಕೊಟ್ಟಿರುವ ವಿವರಣೆಗಳು ಕಗ್ಗದ ಅರ್ಥವನ್ನೇ ಸಂಕುಚಿತಗೊ ಳಿಸಿಬಿಟ್ಟಿರುತ್ತವೆ, ಉತ್ಪ್ರೇಕ್ಷೆಯಿಂದ ಕೂಡಿರುತ್ತವೆ, ಅರ್ಥ ವ್ಯತ್ಯಾಸವಾಗಿರುತ್ತದೆ. ವಿರೋಧಾರ್ಥಗಳು ಇರುವುದೂ ಉಂಟು. ಹಲಸನ್ನು ಬಿಡಿಸಿದಂತೆ ವಾಕ್ಯಗಳಲ್ಲಿರುವ ಪದಗಳನ್ನು ಬಿಡಿಸಿಕೊಂಡರೆ ಅರ್ಥವಾಗುವುದು. ಅರ್ಥವಾಗದಿದ್ದರೂ ಪರವಾಗಿಲ್ಲ, ತಾತ್ಪರ್ಯಗಳನ್ನು ಓದಿ ಅಪಾರ್ಥ ಮಾಡಿಕೊಳ್ಳಬಾರದೆಂಬುದಷ್ಟೇ ನನ್ನ ಕಾಳಜಿ.

ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು
ಹೊಟ್ಟೆ ಜೀರ್ಣಿಸುವಷ್ಟೇ; ಮಿಕ್ಕುದೆಲ್ಲ ಕಸ
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು ?
ಮುಷ್ಟಿ ಪಿಷ್ಟವು ತಾನೇ? ಮಂಕುತಿಮ್ಮ.

ಮಂಕುತಿಮ್ಮನ ಕಗ್ಗವನ್ನು ಮೊದಲಿನಿಂದ ಪ್ರಾರಂಭಿಸಿ ಕೊನೆಗೆ ಮುಗಿಸಬೇಕೆಂದೇನಿಲ್ಲ. ಮಧ್ಯೆಮಧ್ಯೆ ತೆರೆದು ಕಂಡಿದ್ದನ್ನು ಓದಬಹುದು. ಅದು ನಮ್ಮರಿವಿಗೆ ಒದಗುವುದು. ಎಲ್ಲಾ ಒಪ್ಪಬೇಕೆಂದಿಲ್ಲ. ಬೇಕಾದ ಕಾಳುಗಳ ಆಯ್ದಾಯ್ದುಕೊಳ್ಳಬಹುದು. ಹೊಟ್ಟು ಮತ್ತು ಪೊಳ್ಳುಗಳಲ್ಲಿ ಗಟ್ಟಿ ಕಾಳುಗಳು ಇವೆ ಎಂಬುದಂತೂ ಸತ್ಯ. ಕಳೆದು ಹೋಗಿರುವ ಆ ತಲೆಮಾರಿನ ಬೇರುಗಳು ನಮ್ಮಲ್ಲಿ ಚಿಗುರನ್ನು ಮೂಡಿಸಲಾರವೇ?

ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು
ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ
ಜಸವು ಜನಜೀವನಕೆ ಮಂಕುತಿಮ್ಮ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...