Homeಅಂಕಣಗಳುಮಾತು ಮರೆತ ಭಾರತ-32; ಕಾಶ್ಮೀರಿ-ದಲಿತ್ ಫೈಲ್: ದಲಿತರ ಜೀವಕ್ಕಿಲ್ಲಿ ಬೆಲೆ ಇಲ್ಲ

ಮಾತು ಮರೆತ ಭಾರತ-32; ಕಾಶ್ಮೀರಿ-ದಲಿತ್ ಫೈಲ್: ದಲಿತರ ಜೀವಕ್ಕಿಲ್ಲಿ ಬೆಲೆ ಇಲ್ಲ

- Advertisement -
- Advertisement -

ಡಿಸೆಂಬರ್ 16, 2022ರ ಬೆಳ್ಳಂಬೆಳಗ್ಗೆ ಫಲಿಯಾನ ಗ್ರಾಮದ ರಜೌರಿ ಸೇನಾ ನೆಲೆಯ ಮುಂದೆಯೇ ಇಬ್ಬರು ದಲಿತರ ಮೃತ ದೇಹಗಳು ಪತ್ತೆಯಾದವು. ಈ ಘಟನೆಗೆ ಕಾರಣ ಉಗ್ರಗಾಮಿಗಳೆಂದು ಸೇನೆಯು ಹೇಳಿತು. ಆದರೆ ಅಲ್ಲಿನ ಗ್ರಾಮಸ್ಥರು ಮತ್ತು ದಲಿತ ಕುಟುಂಬಗಳು ಈ ಕೊಲೆಗೆ ಕಾರಣ ಸೇನೆಯೇ ಆಗಿದೆ ಎಂದು ಆರೋಪಿಸಿವೆ. ಉಗ್ರಗಾಮಿಗಳೆಂದು ಭಾವಿಸಿ ನಡೆಯುವ ವಿಚಾರಣಾ ರಹಿತ ಎನ್‌ಕೌಂಟರ್‌ಗಳ ಮಾದರಿಯಲ್ಲಿಯೇ ತಪ್ಪಾಗಿ ನಮ್ಮ ಮಕ್ಕಳನ್ನು ಸೇನೆ ಬಲಿ ಪಡೆದಿದೆ ಎಂಬುದೇ ಅವರ ಆರೋಪ. ಈ ಆರೋಪ ನೂರಕ್ಕೆ ನೂರು ಸುಳ್ಳಲ್ಲ ಎನ್ನುವುದು ಜಗಜ್ಜಾಹೀರಾಗಿದೆ. ಜಮ್ಮು ಕಾಶ್ಮೀರದಲ್ಲಿ ಮುಸ್ಲಿಮರಿಗೆ ಉಗ್ರಗಾಮಿಗಳೆಂಬ ಹಣೆಪಟ್ಟಿ ಕಟ್ಟಿ ಎನ್‌ಕೌಂಟರ್ ಮಾಡಿ ದೇಹವನ್ನೇ ನಾಪತ್ತೆಯಾಗಿಸುವ ತಂತ್ರ ಇಂದು ನಿನ್ನೆಯದಲ್ಲ. ಈ ಬಗ್ಗೆ ಹಲವು ಆಪಾದನೆಗಳಿಗೆ ಮತ್ತು ಕೆಲವು ಪ್ರಕರಣಗಳು ವಿಚಾರಣೆ ಕಂಡು ತಪ್ಪಿತಸ್ಥರಿಗೆ ಶಿಕ್ಷೆಯೂ ಆಗಿದೆ. ಭಾರತ ಸರ್ಕಾರ ಈ ದಲಿತ ಯುವಕರ ಹತ್ಯೆಯನ್ನು ತನಿಖೆ ಮಾಡಲು ತಂಡವನ್ನು ರಚಿಸಿದೆ. ತನಿಖೆ ನಡೆಯುತ್ತಿದೆ. ಸತ್ಯ ಆದಷ್ಟು ಬೇಗ ಬೆಳಕಿಗೆ ಬರಬಹುದೇ? ಕಾದು ನೋಡಬೇಕಾಗಿದೆ.

ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ವಾಸವಿರುವ ಹಿಂದೂ-ಮುಸ್ಲಿಮರು ಕಾಶ್ಮೀರಿಯತ್ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬರುತ್ತಿದ್ದಾರಾದರೂ ಆಳುವ ಇಚ್ಛೆ ಇರುವ ಸರ್ಕಾರಗಳಿಗೆ ಅವರ ಒಗ್ಗಟ್ಟು ಮುಳುವಾಗಿದೆ. ಹಾಗಾಗಿ ಹಿಂದೂ ವರ್ಸಸ್ ಮುಸ್ಲಿಂ ಮಾಡಲು ಶತಾಯಗತಾಯ ಎರಡೂ ಕಡೆಯ ಕುತಂತ್ರ ರಾಜಕಾರಣಿಗಳು ಶ್ರಮ ಪಡುತ್ತಿದ್ದಾರೆ. ಅದಿರಲಿ, ಇಲ್ಲಿ ಮುಖ್ಯವಾದ ಮತ್ತೊಂದು ಅಂಶವೆಂದರೆ ಸೇನೆಗೆ ಹಾಗೂ ಸೇನಾ ಮುಖ್ಯಸ್ಥರಿಗೆ ಹಿಂದೂ ಮೇಲ್ಜಾತಿ ಹಾಗೂ ದಲಿತರ ಜೀವಗಳು ಒಂದೇ ಎಂಬ ಭಾವನೆ ಇಲ್ಲದಿರುವುದು. ಭಾರತೀಯರಿಗೆ ಜಾತಿ ಪದ್ಧತಿ ಆಚರಣೆಯು ಸಹಜವಲ್ಲವೇ? ಅದು ಸೇನಾ ಮುಖ್ಯಸ್ಥರಾದರೇನು? ನ್ಯಾಯಾಧೀಶರಾದರೇನು? ಸರ್ಕಾರದ ಮಂತ್ರಿಯಾದರೇನು? ಎಲ್ಲರೂ ಇರುವೆಗಳೇ – ಜಾತಿ ಎಂಬ ಸಿಹಿಗೆ.

ಈಗಾಗಲೇ ಉಲ್ಲೇಖಿಸಿದಂತೆ ಡಿಸೆಂಬರ್ 16ನೇ ತಾರೀಕು ಜಮ್ಮುವಿನ ರಜೌರಿ ಬಳಿಯ ಫಲಿಯಾನ ಗ್ರಾಮದ ಸೇನಾ ಕ್ಯಾಂಪ್ ಮುಂಭಾಗ ಸುರೇಂದರ್ ಕುಮಾರ್ ಮತ್ತು ಕಮಲ್ ಕಿಶೋರ್ ಎಂಬ ಇಬ್ಬರು ದಲಿತ ಯುವಕರ ಮೃತದೇಹಗಳು ಬಿದ್ದಿದ್ದವು. ಆ ಎರಡು ದೇಹಗಳ ಮೇಲೆ ಗುಂಡಿನ ದಾಳಿಯಾಗಿತ್ತು. ಸೇನೆಯ ಡೆಪ್ಯುಟಿ ಕಮಿಷನರ್ ಆ ಇಬ್ಬರ ಕುಟುಂಬಕ್ಕೆ ತಲಾ 1 ಲಕ್ಷ ರೂಪಾಯಿ ಘೋಷಿಸಿದರು. ದಲಿತರ ಹೋರಾಟದಿಂದಾಗಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ 5 ಲಕ್ಷ ರೂಪಾಯಿಗಳ ಪರಿಹಾರವನ್ನು ಪ್ರತಿ ದಲಿತ ಕುಟುಂಬಕ್ಕೆ ಹೆಚ್ಚುವರಿಯಾಗಿ ಘೋಷಿಸಿದರು. ಒಟ್ಟು ಆ ಎರಡು ದಲಿತ ಜೀವಗಳ ಬದಲಿಗೆ ತಲಾ 6 ಲಕ್ಷ ರೂಪಾಯಿ ಪರಿಹಾರ ನೀಡಲಾಯಿತು. ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವ ಭರವಸೆಯನ್ನೂ ನೀಡಿದರು. ಇದು ದೇಶಾದ್ಯಂತ ಮಾಧ್ಯಮಗಳಲ್ಲಿ ಒಂದು ಕ್ಷಣವೂ ಬಿತ್ತರಗೊಳ್ಳಲಿಲ್ಲ.

ಈ ಘಟನೆಯಾದ 15 ದಿನಗಳ ನಂತರ ಅಂದರೆ, ಜನವರಿ 1, 2023ರಂದು ಅದೇ ರಜೌರಿಯಿಂದ ಕೇವಲ 7 ಕಿಲೋಮೀಟರ್ ದೂರದಲ್ಲಿದ್ದ ಧಂಗ್ರಿ ಎಂಬ ಹಳ್ಳಿಯೊಂದರಲ್ಲಿ 6 ಜನರ ಕೊಲೆಯಾಗಿತ್ತು. ಉಗ್ರಗಾಮಿ ಸಂಘಟನೆಯೊಂದು ಅವರನ್ನು ಅಮಾನವೀಯವಾಗಿ ಕೊಂದಿತ್ತು. ಹೊಸ ವರ್ಷದ ದಿನದಂದೇ ನಡೆದ ಈ ಘಟನೆಯಲ್ಲಿ ಪರಸ್ಪರ ಸಂಬಂಧಿಕರಾದ ವಿಹಾನ್ ಶರ್ಮ, ಸಮೀಕ್ಷ ಶರ್ಮ, ಸತೀಶ್ ಕುಮಾರ್, ದೀಪಕ್ ಕುಮಾರ್, ಪ್ರೀತಮ್ ಲಾಲ್ ಮತ್ತು ಶಿಶುಪಾಲ್ ಕೊಲೆಗೀಡಾಗಿದ್ದರು. ಮಾಧ್ಯಮಗಳು ಎಂದಿನಂತೆ ನಮ್ಮಲ್ಲೇ ಮೊದಲು ಎಂದು ಮುಗಿಬಿದ್ದು ಸುದ್ದಿ ಮಾಡಿದವು. ಖಂಡಿತಾ ಮಾಡಲೇಬೇಕು. ಎಲ್ಲರ ಜೀವಕ್ಕೂ ಬೆಲೆ ಇದೆ. ಈ ಘಟನೆ ಆದ ತಕ್ಷಣ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಆ ಹಳ್ಳಿಗೆ ಬೇಟಿ ನೀಡಿದರು. ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಜೊತೆಗೆ ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವ ಭರವಸೆ ನೀಡಿದರು.

ಇದನ್ನೂ ಓದಿ: ಮಾತು ಮರೆತ ಭಾರತ-32; ಲಾಕ್‌ಡೌನ್ ಫೈಲ್ಸ್: ಪ್ರೀತಿಯನ್ನು ಮಣಿಸಿದ ಜಾತಿ

ಈ ಮೇಲಿನ ಎರಡೂ ಘಟನೆಗಳನ್ನು ಮೇಲ್ನೋಟಕ್ಕೆ ಗಮನಿಸಿದರೆ ಸಾಕು, ಭಾರತದ ಸೇನೆಯಲ್ಲೂ ಜಾತಿಪದ್ಧತಿ ಅದೆಷ್ಟು ಆಳವಾಗಿ ಬೇರು ಬಿಟ್ಟಿದೆ ಎಂದು ಮನದಟ್ಟಾಗುತ್ತದೆ. ಲೆಫ್ಟಿನೆಂಟ್ ಗವರ್ನರ್ 6 ಜನರು ಮೃತರಾದ ಹಳ್ಳಿಗೆ ದೌಡಾಯಿಸಿದ ಮುಖ್ಯ ಕಾರಣ ಅವರೆಲ್ಲರೂ ಬ್ರಾಹ್ಮಣ ಕುಟುಂಬದವರಾಗಿದ್ದರು ಎಂಬುವುದಾಗಿತ್ತು. ಆದರೆ ಕಜೌರಿಯಲ್ಲಿ ಮೃತಪಟ್ಟವರು ದಲಿತರಾದ ಕಾರಣ ಗವರ್ನರ್ ಅವರಿಗೆ ಅಷ್ಟು ಪುರುಸೊತ್ತು ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಮನಸ್ಸಾಗಲಿಲ್ಲ. ಪರಿಹಾರ ಘೋಷಿಸುವಲ್ಲಿಯೂ ಸೇನಾ ಮುಖ್ಯಸ್ಥರು ತಾರತಮ್ಯವೆಸಗಿದ್ದಾರೆ. ಬ್ರಾಹ್ಮಣರಿಗೆ 10 ಲಕ್ಷ ರೂ, ದಲಿತರಿಗೆ 6 ಲಕ್ಷ ರೂ. ಅದೂ ಹೋರಾಟ ಮಾಡಿದರೆ ಮಾತ್ರ! ಸೇನಾ ನೆಲೆಯ ಮುಂದೆಯೇ ಹೆಣವಾದ ದಲಿತರು ಸುದ್ದಿಯಾಗುವುದೇ ಇಲ್ಲ. ಸೇನಾ ನೆಲೆಯಿಂದ 7 ಕಿಲೋಮೀಟರ್ ದೂರದಲ್ಲಿ ನಡೆದ ಶೂಟೌಟ್ ಸುದ್ದಿಯಾಗುತ್ತದೆ. ಎರಡೂ ಘಟನೆಯೂ ನಡೆಯಬಾರದಿತ್ತು. ಎರಡೂ ಘಟನೆಯನ್ನು ಮನುಷ್ಯರಾದವರು ಖಂಡಿಸಬೇಕು. ಸಮಾನ ಆದ್ಯತೆ ನೀಡಬೇಕು. ಆದರೆ ಇಲ್ಲಿ ಆಗಿರುವುದೇ ಬೇರೆ. ದಲಿತರಿಗೆ ಬದುಕಿದ್ದಾಗಲೂ ಸಮಾನ ಸ್ಥಾನವಿಲ್ಲ. ಸತ್ತ ಮೇಲೂ ಸಮಾನ ಸ್ಥಾನವಿಲ್ಲ ಎನ್ನುತ್ತಾರೆ ಕಜೌರಿಯ ಗ್ರಾಮಪಂಚಾಯತ್ ಅಧ್ಯಕ್ಷರು.

ಮನೋಜ್ ಸಿನ್ಹಾ

ಈ ಎರಡು ಘಟನೆಗೆ ಸಂಬಂಧಿಸಿದಂತೆ ಮೋದಿ ನೇತೃತ್ವದ ಒಕ್ಕೂಟ ಸರ್ಕಾರದ ನಿಲುವು ಸಹ ಬಹಿರಂಗಗೊಂಡಿದೆ. ಒಕ್ಕೂಟ ಸರ್ಕಾರದ ಗೃಹ ಮಂತ್ರಿಯಾದ ಅಮಿತ್ ಶಾ ಜನವರಿ 13, 2023ರಂದು 6 ಬ್ರಾಹ್ಮಣರನ್ನು ಕೊಂದಿದ್ದ ಧಂಗ್ರಿ ಗ್ರಾಮಕ್ಕೆ ಬೇಟಿ ನೀಡಿ ಆ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ವೇಳಾಪಟ್ಟಿ ನಿಗದಿಪಡಿಸಿಕೊಂಡಿದ್ದರು. ವಾಯುಗುಣ ಸರಿ ಇಲ್ಲದ ಕಾರಣ ಹವಾಮಾನ ಇಲಾಖೆಯು ಪ್ರಯಾಣವನ್ನು ರದ್ದುಗೊಳಿಸಿದ್ದರಿಂದಾಗಿ ನೊಂದುಕೊಂಡ ಅಮಿತ್ ಶಾ ಫೋನ್ ಮೂಲಕವೇ 6 ಸಂತ್ರಸ್ತ ಕುಟುಂಬದವರೊಟ್ಟಿಗೆ ಮಾತನಾಡಿ ಅವರಿಗೆ ಧೈರ್ಯ ತುಂಬಿದರು. ನಿಮ್ಮೊಟ್ಟಿಗೆ ನಮ್ಮ ಸರ್ಕಾರವಿದೆ ಎಂಬ ಭರವಸೆ ನೀಡಿದರು. ನಿಜಕ್ಕೂ ಈ ಬೆಳವಣಿಗೆ ಸ್ವಾಗತಾರ್ಹ. ಪ್ರತಿಯೊಬ್ಬ ಭಾರತೀಯರ ನೋವಿಗೆ ದನಿಯಾಗಬೇಕಿರುವುದು ಪ್ರಗತಿಪರ ಸರ್ಕಾರದ ಹೊಣೆಯಾಗಿರುತ್ತದೆ. ಆದರೆ ಅಮಿತ್ ಶಾ ಅವರಿಗೆ ಕಜೌರಿಯಲ್ಲಿ ಕೊಲೆಯಾದ 2 ದಲಿತ ಯುವಕರ ಕುಟುಂಬ ನೆನಪಾಗಲಿಲ್ಲವಲ್ಲ ಏಕೆ? ಅವರ ಮನೆಗೆ ಭೇಟಿ ನೀಡುವುದಿರಲಿ, ಕನಿಷ್ಠ ಪಕ್ಷ ಫೋನ್ ಮಾಡಿ ವಿಚಾರಿಸಿಕೊಳ್ಳಲಿಲ್ಲವೇಕೆ? ದಲಿತ ಕುಟುಂಬಗಳಿಗೇನು ಸಾಂತ್ವನ ಮಾಡುವ ಅವಶ್ಯಕತೆ ಇಲ್ಲವೆಂಬುದು ಅಮಿತ್ ಶಾ ಹಾಗೂ ಮೋದಿಯವರ ಸರ್ಕಾರದ ನಿಲುವೇ? ಈ ಎಲ್ಲಾ ಪ್ರಶ್ನೆಗಳನ್ನು ಮೃತ ದಲಿತ ಯುವಕರ ಕುಟುಂಬಸ್ಥರು ಕೇಳುತ್ತಿದ್ದಾರೆ. ಆದರೆ ಈ ಎರಡು ಬಡಪಾಯಿ ದಲಿತ ಕುಟುಂಬದ ಪರವಾಗಿ ನಿಲ್ಲುವವರಾರು? ದಪ್ಪ ಚರ್ಮದ ಸರ್ಕಾರದ ಬಾಯಿ ಬಿಡಿಸುವವರಾರು?

ಈ ರೀತಿಯ ಬಹಿರಂಗ ತಾರತಮ್ಯಗಳು, ದಲಿತರನ್ನು ಈ ಸರ್ಕಾರ ಎರಡನೇ ದರ್ಜೆಯ ನಾಗರಿಕರನ್ನಾಗಿ ಪದೇಪದೇ ಕಾಣುತ್ತಿರುವುದನ್ನು ಸಾಬೀತುಪಡಿಸುತ್ತಿದೆ. ಈ ಸರ್ಕಾರದಲ್ಲಿ ಕಾಶ್ಮೀರಿ ಪಂಡಿತರು ಹಾಗೂ ಕಾಶ್ಮೀರಿ ದಲಿತರು ಒಂದೇ ಅಲ್ಲ. ಕಾಶ್ಮೀರಿ ಪಂಡಿತರಿಗಿರುವ ಬೆಲೆ ದಲಿತರಿಗಿಲ್ಲ. ವಿಪರ್ಯಾಸ ಹಾಗೂ ದುರಂತವೆಂದರೆ, ಮೋದಿ ನೇತೃತ್ವದ ಒಕ್ಕೂಟ ಸರ್ಕಾರಕ್ಕೆ ಕಾಶ್ಮೀರಿ ಪಂಡಿತರ ಮೇಲೆಯೂ ಪ್ರಾಮಾಣಿಕ ಪ್ರೀತಿ ಇಲ್ಲ. ಹಿಂದೂ-ಮುಸ್ಲಿಂ ಎಂದು ಒಡೆದು ಆಳುತ್ತಾ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಾತ್ರ ಪಂಡಿತರು ಬೇಕಾಗಿದ್ದಾರೆ. ಅವರಿಗೆ ವಸತಿ, ಮೂಲಸೌಕರ್ಯ, ಭದ್ರತೆ ಕೊಡುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಹೀಗೆ ಪಂಡಿತರ ಸ್ಥಿತಿಯೇ ಚಿಂತಾಜನಕವಾಗಿರುವಾಗ ದಲಿತರ ಸ್ಥಿತಿ ಕೇಳುವವರಾರು? ಕೇಳಬೇಕೆಂದರೆ ದಲಿತರು ಏನು ಮಾಡಬೇಕು? ಖಂಡಿತವಾಗಿಯೂ ಇದಕ್ಕೆ ಭಾರತ ಉತ್ತರಿಸಲೇಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...