Homeಅಂಕಣಗಳುಮಾತು ಮರೆತ ಭಾರತ-32; ಕಾಶ್ಮೀರಿ-ದಲಿತ್ ಫೈಲ್: ದಲಿತರ ಜೀವಕ್ಕಿಲ್ಲಿ ಬೆಲೆ ಇಲ್ಲ

ಮಾತು ಮರೆತ ಭಾರತ-32; ಕಾಶ್ಮೀರಿ-ದಲಿತ್ ಫೈಲ್: ದಲಿತರ ಜೀವಕ್ಕಿಲ್ಲಿ ಬೆಲೆ ಇಲ್ಲ

- Advertisement -
- Advertisement -

ಡಿಸೆಂಬರ್ 16, 2022ರ ಬೆಳ್ಳಂಬೆಳಗ್ಗೆ ಫಲಿಯಾನ ಗ್ರಾಮದ ರಜೌರಿ ಸೇನಾ ನೆಲೆಯ ಮುಂದೆಯೇ ಇಬ್ಬರು ದಲಿತರ ಮೃತ ದೇಹಗಳು ಪತ್ತೆಯಾದವು. ಈ ಘಟನೆಗೆ ಕಾರಣ ಉಗ್ರಗಾಮಿಗಳೆಂದು ಸೇನೆಯು ಹೇಳಿತು. ಆದರೆ ಅಲ್ಲಿನ ಗ್ರಾಮಸ್ಥರು ಮತ್ತು ದಲಿತ ಕುಟುಂಬಗಳು ಈ ಕೊಲೆಗೆ ಕಾರಣ ಸೇನೆಯೇ ಆಗಿದೆ ಎಂದು ಆರೋಪಿಸಿವೆ. ಉಗ್ರಗಾಮಿಗಳೆಂದು ಭಾವಿಸಿ ನಡೆಯುವ ವಿಚಾರಣಾ ರಹಿತ ಎನ್‌ಕೌಂಟರ್‌ಗಳ ಮಾದರಿಯಲ್ಲಿಯೇ ತಪ್ಪಾಗಿ ನಮ್ಮ ಮಕ್ಕಳನ್ನು ಸೇನೆ ಬಲಿ ಪಡೆದಿದೆ ಎಂಬುದೇ ಅವರ ಆರೋಪ. ಈ ಆರೋಪ ನೂರಕ್ಕೆ ನೂರು ಸುಳ್ಳಲ್ಲ ಎನ್ನುವುದು ಜಗಜ್ಜಾಹೀರಾಗಿದೆ. ಜಮ್ಮು ಕಾಶ್ಮೀರದಲ್ಲಿ ಮುಸ್ಲಿಮರಿಗೆ ಉಗ್ರಗಾಮಿಗಳೆಂಬ ಹಣೆಪಟ್ಟಿ ಕಟ್ಟಿ ಎನ್‌ಕೌಂಟರ್ ಮಾಡಿ ದೇಹವನ್ನೇ ನಾಪತ್ತೆಯಾಗಿಸುವ ತಂತ್ರ ಇಂದು ನಿನ್ನೆಯದಲ್ಲ. ಈ ಬಗ್ಗೆ ಹಲವು ಆಪಾದನೆಗಳಿಗೆ ಮತ್ತು ಕೆಲವು ಪ್ರಕರಣಗಳು ವಿಚಾರಣೆ ಕಂಡು ತಪ್ಪಿತಸ್ಥರಿಗೆ ಶಿಕ್ಷೆಯೂ ಆಗಿದೆ. ಭಾರತ ಸರ್ಕಾರ ಈ ದಲಿತ ಯುವಕರ ಹತ್ಯೆಯನ್ನು ತನಿಖೆ ಮಾಡಲು ತಂಡವನ್ನು ರಚಿಸಿದೆ. ತನಿಖೆ ನಡೆಯುತ್ತಿದೆ. ಸತ್ಯ ಆದಷ್ಟು ಬೇಗ ಬೆಳಕಿಗೆ ಬರಬಹುದೇ? ಕಾದು ನೋಡಬೇಕಾಗಿದೆ.

ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ವಾಸವಿರುವ ಹಿಂದೂ-ಮುಸ್ಲಿಮರು ಕಾಶ್ಮೀರಿಯತ್ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬರುತ್ತಿದ್ದಾರಾದರೂ ಆಳುವ ಇಚ್ಛೆ ಇರುವ ಸರ್ಕಾರಗಳಿಗೆ ಅವರ ಒಗ್ಗಟ್ಟು ಮುಳುವಾಗಿದೆ. ಹಾಗಾಗಿ ಹಿಂದೂ ವರ್ಸಸ್ ಮುಸ್ಲಿಂ ಮಾಡಲು ಶತಾಯಗತಾಯ ಎರಡೂ ಕಡೆಯ ಕುತಂತ್ರ ರಾಜಕಾರಣಿಗಳು ಶ್ರಮ ಪಡುತ್ತಿದ್ದಾರೆ. ಅದಿರಲಿ, ಇಲ್ಲಿ ಮುಖ್ಯವಾದ ಮತ್ತೊಂದು ಅಂಶವೆಂದರೆ ಸೇನೆಗೆ ಹಾಗೂ ಸೇನಾ ಮುಖ್ಯಸ್ಥರಿಗೆ ಹಿಂದೂ ಮೇಲ್ಜಾತಿ ಹಾಗೂ ದಲಿತರ ಜೀವಗಳು ಒಂದೇ ಎಂಬ ಭಾವನೆ ಇಲ್ಲದಿರುವುದು. ಭಾರತೀಯರಿಗೆ ಜಾತಿ ಪದ್ಧತಿ ಆಚರಣೆಯು ಸಹಜವಲ್ಲವೇ? ಅದು ಸೇನಾ ಮುಖ್ಯಸ್ಥರಾದರೇನು? ನ್ಯಾಯಾಧೀಶರಾದರೇನು? ಸರ್ಕಾರದ ಮಂತ್ರಿಯಾದರೇನು? ಎಲ್ಲರೂ ಇರುವೆಗಳೇ – ಜಾತಿ ಎಂಬ ಸಿಹಿಗೆ.

ಈಗಾಗಲೇ ಉಲ್ಲೇಖಿಸಿದಂತೆ ಡಿಸೆಂಬರ್ 16ನೇ ತಾರೀಕು ಜಮ್ಮುವಿನ ರಜೌರಿ ಬಳಿಯ ಫಲಿಯಾನ ಗ್ರಾಮದ ಸೇನಾ ಕ್ಯಾಂಪ್ ಮುಂಭಾಗ ಸುರೇಂದರ್ ಕುಮಾರ್ ಮತ್ತು ಕಮಲ್ ಕಿಶೋರ್ ಎಂಬ ಇಬ್ಬರು ದಲಿತ ಯುವಕರ ಮೃತದೇಹಗಳು ಬಿದ್ದಿದ್ದವು. ಆ ಎರಡು ದೇಹಗಳ ಮೇಲೆ ಗುಂಡಿನ ದಾಳಿಯಾಗಿತ್ತು. ಸೇನೆಯ ಡೆಪ್ಯುಟಿ ಕಮಿಷನರ್ ಆ ಇಬ್ಬರ ಕುಟುಂಬಕ್ಕೆ ತಲಾ 1 ಲಕ್ಷ ರೂಪಾಯಿ ಘೋಷಿಸಿದರು. ದಲಿತರ ಹೋರಾಟದಿಂದಾಗಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ 5 ಲಕ್ಷ ರೂಪಾಯಿಗಳ ಪರಿಹಾರವನ್ನು ಪ್ರತಿ ದಲಿತ ಕುಟುಂಬಕ್ಕೆ ಹೆಚ್ಚುವರಿಯಾಗಿ ಘೋಷಿಸಿದರು. ಒಟ್ಟು ಆ ಎರಡು ದಲಿತ ಜೀವಗಳ ಬದಲಿಗೆ ತಲಾ 6 ಲಕ್ಷ ರೂಪಾಯಿ ಪರಿಹಾರ ನೀಡಲಾಯಿತು. ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವ ಭರವಸೆಯನ್ನೂ ನೀಡಿದರು. ಇದು ದೇಶಾದ್ಯಂತ ಮಾಧ್ಯಮಗಳಲ್ಲಿ ಒಂದು ಕ್ಷಣವೂ ಬಿತ್ತರಗೊಳ್ಳಲಿಲ್ಲ.

ಈ ಘಟನೆಯಾದ 15 ದಿನಗಳ ನಂತರ ಅಂದರೆ, ಜನವರಿ 1, 2023ರಂದು ಅದೇ ರಜೌರಿಯಿಂದ ಕೇವಲ 7 ಕಿಲೋಮೀಟರ್ ದೂರದಲ್ಲಿದ್ದ ಧಂಗ್ರಿ ಎಂಬ ಹಳ್ಳಿಯೊಂದರಲ್ಲಿ 6 ಜನರ ಕೊಲೆಯಾಗಿತ್ತು. ಉಗ್ರಗಾಮಿ ಸಂಘಟನೆಯೊಂದು ಅವರನ್ನು ಅಮಾನವೀಯವಾಗಿ ಕೊಂದಿತ್ತು. ಹೊಸ ವರ್ಷದ ದಿನದಂದೇ ನಡೆದ ಈ ಘಟನೆಯಲ್ಲಿ ಪರಸ್ಪರ ಸಂಬಂಧಿಕರಾದ ವಿಹಾನ್ ಶರ್ಮ, ಸಮೀಕ್ಷ ಶರ್ಮ, ಸತೀಶ್ ಕುಮಾರ್, ದೀಪಕ್ ಕುಮಾರ್, ಪ್ರೀತಮ್ ಲಾಲ್ ಮತ್ತು ಶಿಶುಪಾಲ್ ಕೊಲೆಗೀಡಾಗಿದ್ದರು. ಮಾಧ್ಯಮಗಳು ಎಂದಿನಂತೆ ನಮ್ಮಲ್ಲೇ ಮೊದಲು ಎಂದು ಮುಗಿಬಿದ್ದು ಸುದ್ದಿ ಮಾಡಿದವು. ಖಂಡಿತಾ ಮಾಡಲೇಬೇಕು. ಎಲ್ಲರ ಜೀವಕ್ಕೂ ಬೆಲೆ ಇದೆ. ಈ ಘಟನೆ ಆದ ತಕ್ಷಣ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಆ ಹಳ್ಳಿಗೆ ಬೇಟಿ ನೀಡಿದರು. ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಜೊತೆಗೆ ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವ ಭರವಸೆ ನೀಡಿದರು.

ಇದನ್ನೂ ಓದಿ: ಮಾತು ಮರೆತ ಭಾರತ-32; ಲಾಕ್‌ಡೌನ್ ಫೈಲ್ಸ್: ಪ್ರೀತಿಯನ್ನು ಮಣಿಸಿದ ಜಾತಿ

ಈ ಮೇಲಿನ ಎರಡೂ ಘಟನೆಗಳನ್ನು ಮೇಲ್ನೋಟಕ್ಕೆ ಗಮನಿಸಿದರೆ ಸಾಕು, ಭಾರತದ ಸೇನೆಯಲ್ಲೂ ಜಾತಿಪದ್ಧತಿ ಅದೆಷ್ಟು ಆಳವಾಗಿ ಬೇರು ಬಿಟ್ಟಿದೆ ಎಂದು ಮನದಟ್ಟಾಗುತ್ತದೆ. ಲೆಫ್ಟಿನೆಂಟ್ ಗವರ್ನರ್ 6 ಜನರು ಮೃತರಾದ ಹಳ್ಳಿಗೆ ದೌಡಾಯಿಸಿದ ಮುಖ್ಯ ಕಾರಣ ಅವರೆಲ್ಲರೂ ಬ್ರಾಹ್ಮಣ ಕುಟುಂಬದವರಾಗಿದ್ದರು ಎಂಬುವುದಾಗಿತ್ತು. ಆದರೆ ಕಜೌರಿಯಲ್ಲಿ ಮೃತಪಟ್ಟವರು ದಲಿತರಾದ ಕಾರಣ ಗವರ್ನರ್ ಅವರಿಗೆ ಅಷ್ಟು ಪುರುಸೊತ್ತು ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಮನಸ್ಸಾಗಲಿಲ್ಲ. ಪರಿಹಾರ ಘೋಷಿಸುವಲ್ಲಿಯೂ ಸೇನಾ ಮುಖ್ಯಸ್ಥರು ತಾರತಮ್ಯವೆಸಗಿದ್ದಾರೆ. ಬ್ರಾಹ್ಮಣರಿಗೆ 10 ಲಕ್ಷ ರೂ, ದಲಿತರಿಗೆ 6 ಲಕ್ಷ ರೂ. ಅದೂ ಹೋರಾಟ ಮಾಡಿದರೆ ಮಾತ್ರ! ಸೇನಾ ನೆಲೆಯ ಮುಂದೆಯೇ ಹೆಣವಾದ ದಲಿತರು ಸುದ್ದಿಯಾಗುವುದೇ ಇಲ್ಲ. ಸೇನಾ ನೆಲೆಯಿಂದ 7 ಕಿಲೋಮೀಟರ್ ದೂರದಲ್ಲಿ ನಡೆದ ಶೂಟೌಟ್ ಸುದ್ದಿಯಾಗುತ್ತದೆ. ಎರಡೂ ಘಟನೆಯೂ ನಡೆಯಬಾರದಿತ್ತು. ಎರಡೂ ಘಟನೆಯನ್ನು ಮನುಷ್ಯರಾದವರು ಖಂಡಿಸಬೇಕು. ಸಮಾನ ಆದ್ಯತೆ ನೀಡಬೇಕು. ಆದರೆ ಇಲ್ಲಿ ಆಗಿರುವುದೇ ಬೇರೆ. ದಲಿತರಿಗೆ ಬದುಕಿದ್ದಾಗಲೂ ಸಮಾನ ಸ್ಥಾನವಿಲ್ಲ. ಸತ್ತ ಮೇಲೂ ಸಮಾನ ಸ್ಥಾನವಿಲ್ಲ ಎನ್ನುತ್ತಾರೆ ಕಜೌರಿಯ ಗ್ರಾಮಪಂಚಾಯತ್ ಅಧ್ಯಕ್ಷರು.

ಮನೋಜ್ ಸಿನ್ಹಾ

ಈ ಎರಡು ಘಟನೆಗೆ ಸಂಬಂಧಿಸಿದಂತೆ ಮೋದಿ ನೇತೃತ್ವದ ಒಕ್ಕೂಟ ಸರ್ಕಾರದ ನಿಲುವು ಸಹ ಬಹಿರಂಗಗೊಂಡಿದೆ. ಒಕ್ಕೂಟ ಸರ್ಕಾರದ ಗೃಹ ಮಂತ್ರಿಯಾದ ಅಮಿತ್ ಶಾ ಜನವರಿ 13, 2023ರಂದು 6 ಬ್ರಾಹ್ಮಣರನ್ನು ಕೊಂದಿದ್ದ ಧಂಗ್ರಿ ಗ್ರಾಮಕ್ಕೆ ಬೇಟಿ ನೀಡಿ ಆ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ವೇಳಾಪಟ್ಟಿ ನಿಗದಿಪಡಿಸಿಕೊಂಡಿದ್ದರು. ವಾಯುಗುಣ ಸರಿ ಇಲ್ಲದ ಕಾರಣ ಹವಾಮಾನ ಇಲಾಖೆಯು ಪ್ರಯಾಣವನ್ನು ರದ್ದುಗೊಳಿಸಿದ್ದರಿಂದಾಗಿ ನೊಂದುಕೊಂಡ ಅಮಿತ್ ಶಾ ಫೋನ್ ಮೂಲಕವೇ 6 ಸಂತ್ರಸ್ತ ಕುಟುಂಬದವರೊಟ್ಟಿಗೆ ಮಾತನಾಡಿ ಅವರಿಗೆ ಧೈರ್ಯ ತುಂಬಿದರು. ನಿಮ್ಮೊಟ್ಟಿಗೆ ನಮ್ಮ ಸರ್ಕಾರವಿದೆ ಎಂಬ ಭರವಸೆ ನೀಡಿದರು. ನಿಜಕ್ಕೂ ಈ ಬೆಳವಣಿಗೆ ಸ್ವಾಗತಾರ್ಹ. ಪ್ರತಿಯೊಬ್ಬ ಭಾರತೀಯರ ನೋವಿಗೆ ದನಿಯಾಗಬೇಕಿರುವುದು ಪ್ರಗತಿಪರ ಸರ್ಕಾರದ ಹೊಣೆಯಾಗಿರುತ್ತದೆ. ಆದರೆ ಅಮಿತ್ ಶಾ ಅವರಿಗೆ ಕಜೌರಿಯಲ್ಲಿ ಕೊಲೆಯಾದ 2 ದಲಿತ ಯುವಕರ ಕುಟುಂಬ ನೆನಪಾಗಲಿಲ್ಲವಲ್ಲ ಏಕೆ? ಅವರ ಮನೆಗೆ ಭೇಟಿ ನೀಡುವುದಿರಲಿ, ಕನಿಷ್ಠ ಪಕ್ಷ ಫೋನ್ ಮಾಡಿ ವಿಚಾರಿಸಿಕೊಳ್ಳಲಿಲ್ಲವೇಕೆ? ದಲಿತ ಕುಟುಂಬಗಳಿಗೇನು ಸಾಂತ್ವನ ಮಾಡುವ ಅವಶ್ಯಕತೆ ಇಲ್ಲವೆಂಬುದು ಅಮಿತ್ ಶಾ ಹಾಗೂ ಮೋದಿಯವರ ಸರ್ಕಾರದ ನಿಲುವೇ? ಈ ಎಲ್ಲಾ ಪ್ರಶ್ನೆಗಳನ್ನು ಮೃತ ದಲಿತ ಯುವಕರ ಕುಟುಂಬಸ್ಥರು ಕೇಳುತ್ತಿದ್ದಾರೆ. ಆದರೆ ಈ ಎರಡು ಬಡಪಾಯಿ ದಲಿತ ಕುಟುಂಬದ ಪರವಾಗಿ ನಿಲ್ಲುವವರಾರು? ದಪ್ಪ ಚರ್ಮದ ಸರ್ಕಾರದ ಬಾಯಿ ಬಿಡಿಸುವವರಾರು?

ಈ ರೀತಿಯ ಬಹಿರಂಗ ತಾರತಮ್ಯಗಳು, ದಲಿತರನ್ನು ಈ ಸರ್ಕಾರ ಎರಡನೇ ದರ್ಜೆಯ ನಾಗರಿಕರನ್ನಾಗಿ ಪದೇಪದೇ ಕಾಣುತ್ತಿರುವುದನ್ನು ಸಾಬೀತುಪಡಿಸುತ್ತಿದೆ. ಈ ಸರ್ಕಾರದಲ್ಲಿ ಕಾಶ್ಮೀರಿ ಪಂಡಿತರು ಹಾಗೂ ಕಾಶ್ಮೀರಿ ದಲಿತರು ಒಂದೇ ಅಲ್ಲ. ಕಾಶ್ಮೀರಿ ಪಂಡಿತರಿಗಿರುವ ಬೆಲೆ ದಲಿತರಿಗಿಲ್ಲ. ವಿಪರ್ಯಾಸ ಹಾಗೂ ದುರಂತವೆಂದರೆ, ಮೋದಿ ನೇತೃತ್ವದ ಒಕ್ಕೂಟ ಸರ್ಕಾರಕ್ಕೆ ಕಾಶ್ಮೀರಿ ಪಂಡಿತರ ಮೇಲೆಯೂ ಪ್ರಾಮಾಣಿಕ ಪ್ರೀತಿ ಇಲ್ಲ. ಹಿಂದೂ-ಮುಸ್ಲಿಂ ಎಂದು ಒಡೆದು ಆಳುತ್ತಾ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಾತ್ರ ಪಂಡಿತರು ಬೇಕಾಗಿದ್ದಾರೆ. ಅವರಿಗೆ ವಸತಿ, ಮೂಲಸೌಕರ್ಯ, ಭದ್ರತೆ ಕೊಡುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಹೀಗೆ ಪಂಡಿತರ ಸ್ಥಿತಿಯೇ ಚಿಂತಾಜನಕವಾಗಿರುವಾಗ ದಲಿತರ ಸ್ಥಿತಿ ಕೇಳುವವರಾರು? ಕೇಳಬೇಕೆಂದರೆ ದಲಿತರು ಏನು ಮಾಡಬೇಕು? ಖಂಡಿತವಾಗಿಯೂ ಇದಕ್ಕೆ ಭಾರತ ಉತ್ತರಿಸಲೇಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...