Homeಅಂಕಣಗಳುಮಾತು ಮರೆತ ಭಾರತ-32; ಕಾಶ್ಮೀರಿ-ದಲಿತ್ ಫೈಲ್: ದಲಿತರ ಜೀವಕ್ಕಿಲ್ಲಿ ಬೆಲೆ ಇಲ್ಲ

ಮಾತು ಮರೆತ ಭಾರತ-32; ಕಾಶ್ಮೀರಿ-ದಲಿತ್ ಫೈಲ್: ದಲಿತರ ಜೀವಕ್ಕಿಲ್ಲಿ ಬೆಲೆ ಇಲ್ಲ

- Advertisement -
- Advertisement -

ಡಿಸೆಂಬರ್ 16, 2022ರ ಬೆಳ್ಳಂಬೆಳಗ್ಗೆ ಫಲಿಯಾನ ಗ್ರಾಮದ ರಜೌರಿ ಸೇನಾ ನೆಲೆಯ ಮುಂದೆಯೇ ಇಬ್ಬರು ದಲಿತರ ಮೃತ ದೇಹಗಳು ಪತ್ತೆಯಾದವು. ಈ ಘಟನೆಗೆ ಕಾರಣ ಉಗ್ರಗಾಮಿಗಳೆಂದು ಸೇನೆಯು ಹೇಳಿತು. ಆದರೆ ಅಲ್ಲಿನ ಗ್ರಾಮಸ್ಥರು ಮತ್ತು ದಲಿತ ಕುಟುಂಬಗಳು ಈ ಕೊಲೆಗೆ ಕಾರಣ ಸೇನೆಯೇ ಆಗಿದೆ ಎಂದು ಆರೋಪಿಸಿವೆ. ಉಗ್ರಗಾಮಿಗಳೆಂದು ಭಾವಿಸಿ ನಡೆಯುವ ವಿಚಾರಣಾ ರಹಿತ ಎನ್‌ಕೌಂಟರ್‌ಗಳ ಮಾದರಿಯಲ್ಲಿಯೇ ತಪ್ಪಾಗಿ ನಮ್ಮ ಮಕ್ಕಳನ್ನು ಸೇನೆ ಬಲಿ ಪಡೆದಿದೆ ಎಂಬುದೇ ಅವರ ಆರೋಪ. ಈ ಆರೋಪ ನೂರಕ್ಕೆ ನೂರು ಸುಳ್ಳಲ್ಲ ಎನ್ನುವುದು ಜಗಜ್ಜಾಹೀರಾಗಿದೆ. ಜಮ್ಮು ಕಾಶ್ಮೀರದಲ್ಲಿ ಮುಸ್ಲಿಮರಿಗೆ ಉಗ್ರಗಾಮಿಗಳೆಂಬ ಹಣೆಪಟ್ಟಿ ಕಟ್ಟಿ ಎನ್‌ಕೌಂಟರ್ ಮಾಡಿ ದೇಹವನ್ನೇ ನಾಪತ್ತೆಯಾಗಿಸುವ ತಂತ್ರ ಇಂದು ನಿನ್ನೆಯದಲ್ಲ. ಈ ಬಗ್ಗೆ ಹಲವು ಆಪಾದನೆಗಳಿಗೆ ಮತ್ತು ಕೆಲವು ಪ್ರಕರಣಗಳು ವಿಚಾರಣೆ ಕಂಡು ತಪ್ಪಿತಸ್ಥರಿಗೆ ಶಿಕ್ಷೆಯೂ ಆಗಿದೆ. ಭಾರತ ಸರ್ಕಾರ ಈ ದಲಿತ ಯುವಕರ ಹತ್ಯೆಯನ್ನು ತನಿಖೆ ಮಾಡಲು ತಂಡವನ್ನು ರಚಿಸಿದೆ. ತನಿಖೆ ನಡೆಯುತ್ತಿದೆ. ಸತ್ಯ ಆದಷ್ಟು ಬೇಗ ಬೆಳಕಿಗೆ ಬರಬಹುದೇ? ಕಾದು ನೋಡಬೇಕಾಗಿದೆ.

ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ವಾಸವಿರುವ ಹಿಂದೂ-ಮುಸ್ಲಿಮರು ಕಾಶ್ಮೀರಿಯತ್ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬರುತ್ತಿದ್ದಾರಾದರೂ ಆಳುವ ಇಚ್ಛೆ ಇರುವ ಸರ್ಕಾರಗಳಿಗೆ ಅವರ ಒಗ್ಗಟ್ಟು ಮುಳುವಾಗಿದೆ. ಹಾಗಾಗಿ ಹಿಂದೂ ವರ್ಸಸ್ ಮುಸ್ಲಿಂ ಮಾಡಲು ಶತಾಯಗತಾಯ ಎರಡೂ ಕಡೆಯ ಕುತಂತ್ರ ರಾಜಕಾರಣಿಗಳು ಶ್ರಮ ಪಡುತ್ತಿದ್ದಾರೆ. ಅದಿರಲಿ, ಇಲ್ಲಿ ಮುಖ್ಯವಾದ ಮತ್ತೊಂದು ಅಂಶವೆಂದರೆ ಸೇನೆಗೆ ಹಾಗೂ ಸೇನಾ ಮುಖ್ಯಸ್ಥರಿಗೆ ಹಿಂದೂ ಮೇಲ್ಜಾತಿ ಹಾಗೂ ದಲಿತರ ಜೀವಗಳು ಒಂದೇ ಎಂಬ ಭಾವನೆ ಇಲ್ಲದಿರುವುದು. ಭಾರತೀಯರಿಗೆ ಜಾತಿ ಪದ್ಧತಿ ಆಚರಣೆಯು ಸಹಜವಲ್ಲವೇ? ಅದು ಸೇನಾ ಮುಖ್ಯಸ್ಥರಾದರೇನು? ನ್ಯಾಯಾಧೀಶರಾದರೇನು? ಸರ್ಕಾರದ ಮಂತ್ರಿಯಾದರೇನು? ಎಲ್ಲರೂ ಇರುವೆಗಳೇ – ಜಾತಿ ಎಂಬ ಸಿಹಿಗೆ.

ಈಗಾಗಲೇ ಉಲ್ಲೇಖಿಸಿದಂತೆ ಡಿಸೆಂಬರ್ 16ನೇ ತಾರೀಕು ಜಮ್ಮುವಿನ ರಜೌರಿ ಬಳಿಯ ಫಲಿಯಾನ ಗ್ರಾಮದ ಸೇನಾ ಕ್ಯಾಂಪ್ ಮುಂಭಾಗ ಸುರೇಂದರ್ ಕುಮಾರ್ ಮತ್ತು ಕಮಲ್ ಕಿಶೋರ್ ಎಂಬ ಇಬ್ಬರು ದಲಿತ ಯುವಕರ ಮೃತದೇಹಗಳು ಬಿದ್ದಿದ್ದವು. ಆ ಎರಡು ದೇಹಗಳ ಮೇಲೆ ಗುಂಡಿನ ದಾಳಿಯಾಗಿತ್ತು. ಸೇನೆಯ ಡೆಪ್ಯುಟಿ ಕಮಿಷನರ್ ಆ ಇಬ್ಬರ ಕುಟುಂಬಕ್ಕೆ ತಲಾ 1 ಲಕ್ಷ ರೂಪಾಯಿ ಘೋಷಿಸಿದರು. ದಲಿತರ ಹೋರಾಟದಿಂದಾಗಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ 5 ಲಕ್ಷ ರೂಪಾಯಿಗಳ ಪರಿಹಾರವನ್ನು ಪ್ರತಿ ದಲಿತ ಕುಟುಂಬಕ್ಕೆ ಹೆಚ್ಚುವರಿಯಾಗಿ ಘೋಷಿಸಿದರು. ಒಟ್ಟು ಆ ಎರಡು ದಲಿತ ಜೀವಗಳ ಬದಲಿಗೆ ತಲಾ 6 ಲಕ್ಷ ರೂಪಾಯಿ ಪರಿಹಾರ ನೀಡಲಾಯಿತು. ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವ ಭರವಸೆಯನ್ನೂ ನೀಡಿದರು. ಇದು ದೇಶಾದ್ಯಂತ ಮಾಧ್ಯಮಗಳಲ್ಲಿ ಒಂದು ಕ್ಷಣವೂ ಬಿತ್ತರಗೊಳ್ಳಲಿಲ್ಲ.

ಈ ಘಟನೆಯಾದ 15 ದಿನಗಳ ನಂತರ ಅಂದರೆ, ಜನವರಿ 1, 2023ರಂದು ಅದೇ ರಜೌರಿಯಿಂದ ಕೇವಲ 7 ಕಿಲೋಮೀಟರ್ ದೂರದಲ್ಲಿದ್ದ ಧಂಗ್ರಿ ಎಂಬ ಹಳ್ಳಿಯೊಂದರಲ್ಲಿ 6 ಜನರ ಕೊಲೆಯಾಗಿತ್ತು. ಉಗ್ರಗಾಮಿ ಸಂಘಟನೆಯೊಂದು ಅವರನ್ನು ಅಮಾನವೀಯವಾಗಿ ಕೊಂದಿತ್ತು. ಹೊಸ ವರ್ಷದ ದಿನದಂದೇ ನಡೆದ ಈ ಘಟನೆಯಲ್ಲಿ ಪರಸ್ಪರ ಸಂಬಂಧಿಕರಾದ ವಿಹಾನ್ ಶರ್ಮ, ಸಮೀಕ್ಷ ಶರ್ಮ, ಸತೀಶ್ ಕುಮಾರ್, ದೀಪಕ್ ಕುಮಾರ್, ಪ್ರೀತಮ್ ಲಾಲ್ ಮತ್ತು ಶಿಶುಪಾಲ್ ಕೊಲೆಗೀಡಾಗಿದ್ದರು. ಮಾಧ್ಯಮಗಳು ಎಂದಿನಂತೆ ನಮ್ಮಲ್ಲೇ ಮೊದಲು ಎಂದು ಮುಗಿಬಿದ್ದು ಸುದ್ದಿ ಮಾಡಿದವು. ಖಂಡಿತಾ ಮಾಡಲೇಬೇಕು. ಎಲ್ಲರ ಜೀವಕ್ಕೂ ಬೆಲೆ ಇದೆ. ಈ ಘಟನೆ ಆದ ತಕ್ಷಣ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಆ ಹಳ್ಳಿಗೆ ಬೇಟಿ ನೀಡಿದರು. ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಜೊತೆಗೆ ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವ ಭರವಸೆ ನೀಡಿದರು.

ಇದನ್ನೂ ಓದಿ: ಮಾತು ಮರೆತ ಭಾರತ-32; ಲಾಕ್‌ಡೌನ್ ಫೈಲ್ಸ್: ಪ್ರೀತಿಯನ್ನು ಮಣಿಸಿದ ಜಾತಿ

ಈ ಮೇಲಿನ ಎರಡೂ ಘಟನೆಗಳನ್ನು ಮೇಲ್ನೋಟಕ್ಕೆ ಗಮನಿಸಿದರೆ ಸಾಕು, ಭಾರತದ ಸೇನೆಯಲ್ಲೂ ಜಾತಿಪದ್ಧತಿ ಅದೆಷ್ಟು ಆಳವಾಗಿ ಬೇರು ಬಿಟ್ಟಿದೆ ಎಂದು ಮನದಟ್ಟಾಗುತ್ತದೆ. ಲೆಫ್ಟಿನೆಂಟ್ ಗವರ್ನರ್ 6 ಜನರು ಮೃತರಾದ ಹಳ್ಳಿಗೆ ದೌಡಾಯಿಸಿದ ಮುಖ್ಯ ಕಾರಣ ಅವರೆಲ್ಲರೂ ಬ್ರಾಹ್ಮಣ ಕುಟುಂಬದವರಾಗಿದ್ದರು ಎಂಬುವುದಾಗಿತ್ತು. ಆದರೆ ಕಜೌರಿಯಲ್ಲಿ ಮೃತಪಟ್ಟವರು ದಲಿತರಾದ ಕಾರಣ ಗವರ್ನರ್ ಅವರಿಗೆ ಅಷ್ಟು ಪುರುಸೊತ್ತು ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಮನಸ್ಸಾಗಲಿಲ್ಲ. ಪರಿಹಾರ ಘೋಷಿಸುವಲ್ಲಿಯೂ ಸೇನಾ ಮುಖ್ಯಸ್ಥರು ತಾರತಮ್ಯವೆಸಗಿದ್ದಾರೆ. ಬ್ರಾಹ್ಮಣರಿಗೆ 10 ಲಕ್ಷ ರೂ, ದಲಿತರಿಗೆ 6 ಲಕ್ಷ ರೂ. ಅದೂ ಹೋರಾಟ ಮಾಡಿದರೆ ಮಾತ್ರ! ಸೇನಾ ನೆಲೆಯ ಮುಂದೆಯೇ ಹೆಣವಾದ ದಲಿತರು ಸುದ್ದಿಯಾಗುವುದೇ ಇಲ್ಲ. ಸೇನಾ ನೆಲೆಯಿಂದ 7 ಕಿಲೋಮೀಟರ್ ದೂರದಲ್ಲಿ ನಡೆದ ಶೂಟೌಟ್ ಸುದ್ದಿಯಾಗುತ್ತದೆ. ಎರಡೂ ಘಟನೆಯೂ ನಡೆಯಬಾರದಿತ್ತು. ಎರಡೂ ಘಟನೆಯನ್ನು ಮನುಷ್ಯರಾದವರು ಖಂಡಿಸಬೇಕು. ಸಮಾನ ಆದ್ಯತೆ ನೀಡಬೇಕು. ಆದರೆ ಇಲ್ಲಿ ಆಗಿರುವುದೇ ಬೇರೆ. ದಲಿತರಿಗೆ ಬದುಕಿದ್ದಾಗಲೂ ಸಮಾನ ಸ್ಥಾನವಿಲ್ಲ. ಸತ್ತ ಮೇಲೂ ಸಮಾನ ಸ್ಥಾನವಿಲ್ಲ ಎನ್ನುತ್ತಾರೆ ಕಜೌರಿಯ ಗ್ರಾಮಪಂಚಾಯತ್ ಅಧ್ಯಕ್ಷರು.

ಮನೋಜ್ ಸಿನ್ಹಾ

ಈ ಎರಡು ಘಟನೆಗೆ ಸಂಬಂಧಿಸಿದಂತೆ ಮೋದಿ ನೇತೃತ್ವದ ಒಕ್ಕೂಟ ಸರ್ಕಾರದ ನಿಲುವು ಸಹ ಬಹಿರಂಗಗೊಂಡಿದೆ. ಒಕ್ಕೂಟ ಸರ್ಕಾರದ ಗೃಹ ಮಂತ್ರಿಯಾದ ಅಮಿತ್ ಶಾ ಜನವರಿ 13, 2023ರಂದು 6 ಬ್ರಾಹ್ಮಣರನ್ನು ಕೊಂದಿದ್ದ ಧಂಗ್ರಿ ಗ್ರಾಮಕ್ಕೆ ಬೇಟಿ ನೀಡಿ ಆ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ವೇಳಾಪಟ್ಟಿ ನಿಗದಿಪಡಿಸಿಕೊಂಡಿದ್ದರು. ವಾಯುಗುಣ ಸರಿ ಇಲ್ಲದ ಕಾರಣ ಹವಾಮಾನ ಇಲಾಖೆಯು ಪ್ರಯಾಣವನ್ನು ರದ್ದುಗೊಳಿಸಿದ್ದರಿಂದಾಗಿ ನೊಂದುಕೊಂಡ ಅಮಿತ್ ಶಾ ಫೋನ್ ಮೂಲಕವೇ 6 ಸಂತ್ರಸ್ತ ಕುಟುಂಬದವರೊಟ್ಟಿಗೆ ಮಾತನಾಡಿ ಅವರಿಗೆ ಧೈರ್ಯ ತುಂಬಿದರು. ನಿಮ್ಮೊಟ್ಟಿಗೆ ನಮ್ಮ ಸರ್ಕಾರವಿದೆ ಎಂಬ ಭರವಸೆ ನೀಡಿದರು. ನಿಜಕ್ಕೂ ಈ ಬೆಳವಣಿಗೆ ಸ್ವಾಗತಾರ್ಹ. ಪ್ರತಿಯೊಬ್ಬ ಭಾರತೀಯರ ನೋವಿಗೆ ದನಿಯಾಗಬೇಕಿರುವುದು ಪ್ರಗತಿಪರ ಸರ್ಕಾರದ ಹೊಣೆಯಾಗಿರುತ್ತದೆ. ಆದರೆ ಅಮಿತ್ ಶಾ ಅವರಿಗೆ ಕಜೌರಿಯಲ್ಲಿ ಕೊಲೆಯಾದ 2 ದಲಿತ ಯುವಕರ ಕುಟುಂಬ ನೆನಪಾಗಲಿಲ್ಲವಲ್ಲ ಏಕೆ? ಅವರ ಮನೆಗೆ ಭೇಟಿ ನೀಡುವುದಿರಲಿ, ಕನಿಷ್ಠ ಪಕ್ಷ ಫೋನ್ ಮಾಡಿ ವಿಚಾರಿಸಿಕೊಳ್ಳಲಿಲ್ಲವೇಕೆ? ದಲಿತ ಕುಟುಂಬಗಳಿಗೇನು ಸಾಂತ್ವನ ಮಾಡುವ ಅವಶ್ಯಕತೆ ಇಲ್ಲವೆಂಬುದು ಅಮಿತ್ ಶಾ ಹಾಗೂ ಮೋದಿಯವರ ಸರ್ಕಾರದ ನಿಲುವೇ? ಈ ಎಲ್ಲಾ ಪ್ರಶ್ನೆಗಳನ್ನು ಮೃತ ದಲಿತ ಯುವಕರ ಕುಟುಂಬಸ್ಥರು ಕೇಳುತ್ತಿದ್ದಾರೆ. ಆದರೆ ಈ ಎರಡು ಬಡಪಾಯಿ ದಲಿತ ಕುಟುಂಬದ ಪರವಾಗಿ ನಿಲ್ಲುವವರಾರು? ದಪ್ಪ ಚರ್ಮದ ಸರ್ಕಾರದ ಬಾಯಿ ಬಿಡಿಸುವವರಾರು?

ಈ ರೀತಿಯ ಬಹಿರಂಗ ತಾರತಮ್ಯಗಳು, ದಲಿತರನ್ನು ಈ ಸರ್ಕಾರ ಎರಡನೇ ದರ್ಜೆಯ ನಾಗರಿಕರನ್ನಾಗಿ ಪದೇಪದೇ ಕಾಣುತ್ತಿರುವುದನ್ನು ಸಾಬೀತುಪಡಿಸುತ್ತಿದೆ. ಈ ಸರ್ಕಾರದಲ್ಲಿ ಕಾಶ್ಮೀರಿ ಪಂಡಿತರು ಹಾಗೂ ಕಾಶ್ಮೀರಿ ದಲಿತರು ಒಂದೇ ಅಲ್ಲ. ಕಾಶ್ಮೀರಿ ಪಂಡಿತರಿಗಿರುವ ಬೆಲೆ ದಲಿತರಿಗಿಲ್ಲ. ವಿಪರ್ಯಾಸ ಹಾಗೂ ದುರಂತವೆಂದರೆ, ಮೋದಿ ನೇತೃತ್ವದ ಒಕ್ಕೂಟ ಸರ್ಕಾರಕ್ಕೆ ಕಾಶ್ಮೀರಿ ಪಂಡಿತರ ಮೇಲೆಯೂ ಪ್ರಾಮಾಣಿಕ ಪ್ರೀತಿ ಇಲ್ಲ. ಹಿಂದೂ-ಮುಸ್ಲಿಂ ಎಂದು ಒಡೆದು ಆಳುತ್ತಾ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಾತ್ರ ಪಂಡಿತರು ಬೇಕಾಗಿದ್ದಾರೆ. ಅವರಿಗೆ ವಸತಿ, ಮೂಲಸೌಕರ್ಯ, ಭದ್ರತೆ ಕೊಡುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಹೀಗೆ ಪಂಡಿತರ ಸ್ಥಿತಿಯೇ ಚಿಂತಾಜನಕವಾಗಿರುವಾಗ ದಲಿತರ ಸ್ಥಿತಿ ಕೇಳುವವರಾರು? ಕೇಳಬೇಕೆಂದರೆ ದಲಿತರು ಏನು ಮಾಡಬೇಕು? ಖಂಡಿತವಾಗಿಯೂ ಇದಕ್ಕೆ ಭಾರತ ಉತ್ತರಿಸಲೇಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...