Homeಕರ್ನಾಟಕದಲಿತನೆಂಬ ಕಾರಣಕ್ಕೆ ಸಂಸದರಿಗೇ ಗೊಲ್ಲರಹಟ್ಟಿ ಗ್ರಾಮ ಪ್ರವೇಶಕ್ಕೆ ನಿರಾಕರಣೆ: ಎಲ್ಲೆಡೆ ತೀವ್ರ ಆಕ್ರೋಶ..

ದಲಿತನೆಂಬ ಕಾರಣಕ್ಕೆ ಸಂಸದರಿಗೇ ಗೊಲ್ಲರಹಟ್ಟಿ ಗ್ರಾಮ ಪ್ರವೇಶಕ್ಕೆ ನಿರಾಕರಣೆ: ಎಲ್ಲೆಡೆ ತೀವ್ರ ಆಕ್ರೋಶ..

- Advertisement -
- Advertisement -

ಚಿತ್ರದುರ್ಗದ ಸಂಸದರಾದ ಎ.ನಾರಾಯಣಸ್ವಾಮಿಯವರನ್ನು ದಲಿತರೆಂಬ ಕಾರಣಕ್ಕೆ ಪಾವಗಡದ ಪೆಮ್ಮನಹಳ್ಳಿಯ ಗೊಲ್ಲರಹಟ್ಟಿಯ ಪ್ರವೇಶ ನಿರಾಕರಿಸಿರುವ ಘಟನೆಗೆ ಎಲ್ಲೆಡೆ ತೀವ್ರ ಆಕ್ರೋಶ, ಟೀಕೆ ವ್ಯಕ್ತವಾಗಿದೆ. ಇದನ್ನು ಅಸ್ಪೃಶ್ಯತೆ ಅನ್ನದೇ ಮತ್ತೆ ಏನನ್ನಬೇಕು ಎಂದು ಜನ ತರಾಟೆಗೆ ತೆಗೆದುಕೊಂಡಿದ್ದಾರೆ.

ನಮ್ಮ ದೇಶದ ಪ್ರಜೆಗಳು ಜಾತಿಯ ವಿಚಾರದಲ್ಲಿ ಎಷ್ಟು ವಿಷ ರಕ್ತ ಹೊಂದಿದ್ದಾರೆ ಎಂಬುದನ್ನು ಸೂಚಿಸುತ್ತದೆ .
ಒಬ್ಬ ಸಂಸದರಿಗೆ ಗ್ರಾಮದ ಒಳಗೆ ಪ್ರವೇಶ ನಿರಾಕರಣೆ ಮಾಡಿದರೆ ಇನ್ನು ಸಾಮಾನ್ಯ ಪ್ರಜೆಗಳ ಸ್ಥಿತಿ ಹೇಗೆ ಊಹಿಸಲು ಸಾದ್ಯವಿಲ್ಲ !!! ಎಂದು ಹನುಮಂತ ನಂದಿಹಾಳ್ ರವರು ಪ್ರತಿಕ್ರಿಯಿಸಿದ್ದಾರೆ.

ವಿಕಾಸ್ ಆರ್.ಮೌರ್ಯ ರವರು ಫೇಸ್ ಬುಕ್ ನಲ್ಲಿ ಹೀಗೆ ಬರೆದಿದ್ದಾರೆ.

ಇದಕ್ಕೇ #ಪೂನಾ_ಪ್ಯಾಕ್ಟ್ ದಲಿತರ ಬದುಕನ್ನೇ ಕಿತ್ತುಕೊಂಡಿತು ಎನ್ನುವುದು

ಸಂಸದ ನಾರಾಯಣಸ್ವಾಮಿಯವರನ್ನು ಗೊಲ್ಲರು ತಮ್ಮ ಹಟ್ಟಿಗೆ ಬಿಟ್ಟುಕೊಳ್ಳದೆ ಸಂಸದರು ಅಂಗಲಾಚಿದರೂ ಒಪ್ಪದೇ ಹಟ್ಟಿಯಿಂದ ಹೊರಗೇ ಎಲ್ಲವನ್ನು ವಿಚಾರಿಸಿ ಅಟ್ಟಿದ್ದಾರೆ. ಸಂವಿಧಾನದ ಕಲಂ 17 ಅಸ್ಪೃಶ್ಯತೆ ನಿಷೇಧಿಸಲಾಗಿದೆ ಎನ್ನುತ್ತದೆ. ಆದರೆ ಈ ಘಟನೆಯಲ್ಲಿ ಕಾನೂನು ನಯಾಪೈಸೆಯ ಕೆಲಸ ಮಾಡಿಲ್ಲ, ಮಾಡಲ್ಲ. ಇದು ನಿಜ ಭಾರತದ ಸ್ಥಿತಿ. ಇರಲಿ. ಇಲ್ಲಿ ಸಂಸದರು ಆ ಅಮಾನವೀಯ ಜನರ ವಿರುದ್ಧ ಕ್ರಮ ಏಕೆ ಕೈಗೊಳ್ಳಲಿಲ್ಲ? ಅದಕ್ಕೆ ಕಾರಣ ಅವರೇ ಹೇಳಿದ್ದಾರೆ. ಶೇ. 80 ಗೊಲ್ಲ ಸಮುದಾಯ ಅವರಿಗೆ ಮತ ನೀಡಿ ಗೆಲ್ಲಿಸಿದೆ. ಹೀಗಿರುವಾಗ ಸಂಸದರೇನಾದರೂ ಕಾನೂನು ರೀತಿಯ ಕ್ರಮ ಕೈಗೊಂಡರೆ ಮುಂದಿನ ಬಾರಿ ಅವರು ಸೋಲುವುದು ಖಚಿತ.

ಈ ಕಾರಣಕ್ಕಾಗಿಯೇ ಅಂಬೇಡ್ಕರರು 1933 ರ ಪೂನಾ ಒಪ್ಪಂದವನ್ನು ಕಂಠಮಟ್ಟ ವಿರೋಧಿಸಿದ್ದು. ಏಕೆಂದರೆ ದುಂಡು ಮೇಜಿನ ಸಭೆಯಲ್ಲಿ ದಲಿತರಿಗೆ ಎರಡು ಓಟು ನೀಡುವ ಹಕ್ಕು ಸಿಕ್ಕಿತ್ತು. ಆಂದರೆ ದಲಿತ ಮೀಸಲು ಕ್ಷೇತ್ರಗಳಲ್ಲಿ ದಲಿತರಿಂದ ದಲಿತರಿಗಾಗಿ ದಲಿತರಿಗೋಸ್ಕರ ಆರಿಸಿ ಬರುವ ದಲಿತರನ್ನು ಅಯ್ಕೆ ಮಾಡಲು ಒಂದು ಓಟು. ಅದೇ ಕ್ಷೇತ್ರದಲ್ಲಿ ದಲಿತೇತರರನ್ನು ಆಯ್ಕೆ ಮಾಡಲು ಒಂದು ಓಟು. ಇದನ್ನೇ ಪ್ರತ್ಯೇಕ ಮತಕ್ಷೇತ್ರವೆನ್ನುವರು. ಇವತ್ತು ಸಿಖ್ ಜನಾಂಗ ಬಲಿಷ್ಟವಾಗಿರುವುದಕ್ಕೆ ಕಾರಣ ಅವರಿಗೆ ದಕ್ಕಿದ ಪ್ರತ್ಯೇಕ ಮತಕ್ಷೇತ್ರವೇ ಆಗಿದೆ. ಆದರೆ ಇದು ದಲಿತರಿಗೆ ಸಿಗಲಿಲ್ಲ. ಇದಕ್ಕೆ ನೇರವಾಗಿ ಗಾಂಧಿಯವರನ್ನು ನಾವು ಹೊಣೆ ಮಾಡುತ್ತೇವೆ. ಅದು ಸತ್ಯವಾದರೂ ಅವರಷ್ಟೇ ಹೊಣೆಗಾರರು ಅವರಿಗೆ ಬೇಷರತ್ ಬೆಂಬಲ ನೀಡಿದ ಅಖಿಲ ಭಾರತ ಹಿಂದೂ ಮಹಾಸಭಾ, ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ಗಾಂಧಿವಾದಿ ದಲಿತರು.

ಅಂಬೇಡ್ಕರರು ಜುಲೈ 1947 ರವರೆಗೂ ಹಾಗೂ ಸಂವಿಧಾನ ಸಭೆಯಲ್ಲೂ ಮತ್ತೆ ದಲಿತರಿಗೆ ಪ್ರತ್ಯೇಕ ಮತಕ್ಷೇತ್ರ ಸಿಗಬೇಕೆಂದು ಹೋರಾಡಿದರು. ಆದರೆ ಗಾಂಧಿವಾದಿ ದಲಿತರು ಹಾಗೂ ಕಾಂಗ್ರೆಸ್ ಅದನ್ನು ಕಂಠಮಟ್ಟ ವಿರೋಧಿಸಿ ಮೂಲೆಗುಂಪು ಮಾಡಿದರು. ಅವರ ಮುಂದೆ ಅಂಬೇಡ್ಕರ್ ಸೋಲೊಪ್ಪಲೇಬೇಕಾಯಿತು.

ಇಂದು ಯಾವುದೇ ದಲಿತ ಜನಪ್ರತಿನಿದಿ ಲೋಕಸಭೆಗೆ ಅಗಲೀ, ವಿಧಾನಸಭೆಗೆ ಆಗಲೀ ಆರಿಸಿ ಬರುತ್ತಿರುವುದು ದಲಿತೇತರರ ಓಟಿನಿಂದ. ದಲಿತರ ಓಟುಗಳಿಗೆ ಇಲ್ಲಿ ಬಿಡಿಗಾಸಿನ ಬೆಲೆಯಿಲ್ಲ. ಯಾವ ದಲಿತ ಅಥವಾ ಯಾವ ಜಾತಿಯ ದಲಿತ, ಶಾಸಕ ಅಥವಾ ಸಂಸದ ಆಗಬೇಕೆನ್ನುವುದನ್ನು ತೀರ್ಮಾನ ಮಾಡುವವರು ದಲಿತೇತರರೇ ಆಗಿರುವಾಗ ಯಾವ ದಲಿತ ರಾಜಕೀಯ ನಾಯಕ ತಾನೇ ದಲಿತೇತರರ ಓಟೆಂಬ ಭಿಕ್ಷೆಯ ವಿರುದ್ಧ ನಿಲ್ಲುತ್ತಾನೆ? ತನ್ನ ಸ್ವಾಭಿಮಾನವನ್ನು ತಾನೇ ಕೊಲೆ ಮಾಡಿಕೊಂಡು ಶಾಸಕ, ಸಂಸದನಾಗುತ್ತಾನೆ. ಅಷ್ಟೆ.

“ನನ್ನ ಮುತ್ತಾತಂದಿರು ಮತಾಂತರ ಆದದ್ದಕ್ಕೆ ಕಾರಣ ಇದು. ಅಂದು ಕೀಳು ಜಾತಿ ಅಂತ ಅವಮಾನಿಸಿದಿರಿ, ಇಂದು ದೇಶ ವಿರೋಧಿಗಳು ಅಂತ ಅನುಮಾನಿಸುತ್ತಿದ್ದೀರಿ” ಎಂದು ಅಬ್ದುಲ್ ಮುನೀರ್ ಪ್ರತಿಕ್ರಿಯಿಸಿದ್ದಾರೆ.

ಈ ಸಂಸದರಿಗೆ ದೇಶದ ಜ್ವಲಂತ ಸಮಸ್ಯೆ ಯಾವುದು ಎಂದು ಮನದಟ್ಟು ಮಾಡಿಕೊಟ್ಟ ಆ ಹಳ್ಳಿಗರಿಗೆ ವಂದನೆಗಳು. ಇನ್ನಾದರೂ ಅವರು ಸಂಸತ್ತಿನಲ್ಲಿ ಈ ಸಮಸ್ಯೆಯ ಬಗ್ಗೆ ದನಿ ಎತ್ತಬೇಕು. ಆಗಿಲ್ಲವೆಂದರೆ ಊರ ಹೊರಗೆ ಕುರ್ಚಿ ಹಾಕಿ ಕಾರ್ಯಕ್ರಮ ನಡೆಸಲಿ. ಅದೂ ಆಗಿಲ್ಲವೆಂದರೆ ರಾಜೀನಾಮೆ ನೀಡಿ ಹೋರಾಟಕ್ಕೆ ಮುಂದಾಗಲಿ ಎಂದು ಸಂತೋಷ್ ಗುಡ್ಡಿಯಂಗಡಿಯವರು ಪ್ರತಿಕ್ರಿಯಿಸಿದ್ದಾರೆ.

ಬೆಳಗ್ಗೆಯಿಂದ ಒಂದಷ್ಟು ಗೊಲ್ಲ ಸಮುದಾಯದ ಸ್ನೇಹಿತರು ಪೋನ್ ಮಾಡಿ ಸಂಸದರಿಗೆ ತಟ್ಟಿದ ಅಸ್ಪೃಶ್ಯತೆ ಬಗ್ಗೆ ತೀವ್ರ ಸಂಕಟ ಹೊರಹಾಕಿದರು..ಅರಿವು ,ಬದ್ದತೆ ಇರುವ ಆ ಸಮುದಾಯದ ಗೆಳೆಯರೊಂದಿಗೆ ನಾವೆಲ್ಲರೂ ಸೇರಿ ಜಾಗೃತಿ ಮೂಡಿಸುವ ಅಥವಾ ಮನಸ್ಸು ಗಳನ್ನ ಪರಿವರ್ತಿಸುವ ಕೆಲಸ ಈ ಕ್ಷಣದ ತುರ್ತು…
ಶಿಕ್ಷೆಯಿಂದ ಎಲ್ಲಾ ಬದಲಾಗುವಂತಿದ್ದರೆ ಹೆಚ್ಚೂಕಮ್ಮಿ ಮೌಡ್ಯ ಇರುವ ಎಲ್ಲಾ ಗೊಲ್ಲರಟ್ಟಿಯವರ ಮೇಲೆ ಎರಡೂ ದಲಿತ ದೌರ್ಜನ್ಯ ಪ್ರಕರಣಗಳು ದಾಖಲಗುತ್ತಿದ್ದವು .
ಹಟ್ಟಿಗಳ ಪರಿವರ್ತನೆ ಗೆ ಇದು ರೈಟ್ ಟೈಮ್ ಎಂದು ಕೊಟ್ಟ ಶಂಕರ್ ರವರು ತಿಳಿಸಿದ್ದಾರೆ.

ಈ ವಿಚಾರ ಪತ್ರಿಕೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಕೂಡಲೇ ಗೊಲ್ಲರಹಟ್ಟಿಯ ಜನ ಎಚ್ಚೆತ್ತುಕೊಂಡಿದ್ದಾರೆ. “ನಮ್ಮ ನಡವಳಿಕೆಗಳಿಂದ ಸಂಸದರಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ, ನೀವು ಮತ್ತೊಮ್ಮೆ ನಮ್ಮ ಹಟ್ಟಿಗೆ ಬಂದು ನಮ್ಮ ಸಮಸ್ಯೆ ಆಲಿಸಿ, ನಮಗೆಲ್ಲಾ ಮನೆ ಕಟ್ಟಿಕೊಡಿ” ಎಂದು ಮನವಿ ಮಾಡಿದ್ದಾರೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...