ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್, ತೆರೆದ ಹುಲ್ಲುಹಾಸಿನಲ್ಲಿ ಇತರ ಮೂವರೊಂದಿಗೆ ಕೈನಲ್ಲಿ ಕಾಫಿ ಮಗ್ ಹಿಡಿದು ಸಿಗರೇಟ್ ಸೇದುತ್ತಿರುವ ಫೋಟೋ ವೈರಲ್ ಆದ ನಂತರ, ವ್ಯಕ್ತಿಯೊಬ್ಬನೊಂದಿಗೆ ವಿಡಿಯೊ ಕರೆ ಮಾಡಿರುವ ಕ್ಲಿಪ್ ವೈರಲ್ ಆಗಿದೆ.
ಹಳದಿ ಟೀ ಶರ್ಟ್ ಧರಿಸಿದ ವ್ಯಕ್ತಿಯೊಬ್ಬ ವೀಡಿಯೊ ಕರೆಯಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ನೋಡಿ ನಗುತ್ತಿರುವಾಗ ವೀಡಿಯೋ ಇದೆ. ನಂತರ, ಎರಡನೇ ವ್ಯಕ್ತಿ ತನ್ನ ಫೋನ್ನೊಂದಿಗೆ ಹೊರಟು ಹೋಗುತ್ತಾನೆ, ಕ್ಯಾಮೆರಾವನ್ನು ತನ್ನ ಮುಖದಿಂದ ದೂರಕ್ಕೆ ತೋರಿಸಿ ಅದನ್ನು ಬೇರೆಯವರಿಗೆ ಹಸ್ತಾಂತರಿಸುತ್ತಾನೆ. ಲವಲವಿಕೆಯಿಂದ ಕೈ ಬೀಸಿ ಆ ವ್ಯಕ್ತಿಯನ್ನು ಸ್ವಾಗತಿಸುವಾಗ ದರ್ಶನ್ ಅವರ ಮುಖವು ತೆರೆಯ ಮೇಲೆ ಬರುತ್ತದೆ. ಆ ವ್ಯಕ್ತಿ ತನ್ನ ಬಾಯಿಯ ಕಡೆಗೆ ಸನ್ನೆ ಮಾಡಿ, ನಟನಿಗೆ ತಿನ್ನಲು ಏನಾದರೂ ಇದೆಯೇ ಎಂದು ಕೇಳುತ್ತಾನೆ. ನಗುತ್ತಿರುವ ದರ್ಶನ್ ತಲೆಯಾಡಿಸುವ ಮೂಲಕ ಪ್ರತಿಕ್ರಿಯಿಸಿದರು ಮತ್ತು ಕೆಲವು ಮಾತುಗಳ ವಿನಿಮಯದ ನಂತರ ಇಬ್ಬರೂ ಪರಸ್ಪರ ಕರೆ ಕಟ್ ಮಾಡಿದರು.
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಅವರ ಸ್ನೇಹಿತೆ ನಟಿ ಪವಿತ್ರಾ ಗೌಡ ಸೇರಿದಂತೆ 17 ಮಂದಿ ಆರೋಪಿಗಳನ್ನಿ ದರ್ಶನ್ ಕೂಡ ಸೇರಿದ್ದಾರೆ. 33 ವರ್ಷದ ಅಭಿಮಾನಿಯೊಬ್ಬರು ಪವಿತ್ರಾ ಗೌಡರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದರು, ನಂತರ ಅವರ ಶವ ಜೂನ್ 9 ರಂದು ಬೆಂಗಳೂರಿನ ಸುಮನಹಳ್ಳಿಯ ಚರಂಡಿ ಬಳಿ ಪತ್ತೆಯಾಗಿತ್ತು.
ಭಾನುವಾರ ವೈರಲ್ ಆದ ಫೋಟೊದಲ್ಲಿ, ಕುಖ್ಯಾತ ರೌಡಿ ವಿಲ್ಸನ್ ಗಾರ್ಡನ್ ನಾಗ ಮತ್ತು ತಮ್ಮ ಮ್ಯಾನೇಜರ್ ಸೇರಿದಂತೆ ಮೂವರು ವ್ಯಕ್ತಿಗಳ ಪಕ್ಕದಲ್ಲಿ ಹುಲ್ಲುಹಾಸಿನ ಕುರ್ಚಿಯ ಮೇಲೆ ನಟ ದರ್ಶನ್ ಕುಳಿತಿರುವುದನ್ನು ಕಾಣಬಹುದು. ನಟ ಮತ್ತು ಅವರ ಸಹಾಯಕರು ಜೈಲಿನೊಳಗೆ ವಿಶೇಷ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಲಾದ ವೀಡಿಯೊ ಅನುಮಾನಗಳನ್ನು ಹುಟ್ಟುಹಾಕಿದೆ. ಈ ಬಗ್ಗೆ ಆಂತರಿಕ ತನಿಖೆ ನಡೆಸುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ರೇಣುಕಾಸ್ವಾಮಿ ಅವರ ತಂದೆ ಸಿಬಿಐ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕೆಂದು ಒತ್ತಾಯಿಸಿದ್ದಾರೆ. “ಇಂತಹ ವಿಷಯಗಳ ಜೊತೆಗೆ ಸಿಬಿಐ ತನಿಖೆ ಆಗಬೇಕು ಎಂಬ ಭಾವನೆ ಇದೆ… ಫೋಟೋ ನೋಡಿದಾಗ ಅವರು (ದರ್ಶನ್) ಇತರರೊಂದಿಗೆ ಸಿಗರೇಟ್ ಹಿಡಿದು ಚಹಾ ಕುಡಿಯುತ್ತಿರುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು. ಅವರು ಜೈಲಿನಲ್ಲಿದ್ದಾರೋ ಅಥವಾ ಇಲ್ಲವೋ ಎಂಬ ಅನುಮಾನ ನಮಗೆ ಬರುತ್ತದೆ. ಅವರನ್ನು ಇತರ ಸಾಮಾನ್ಯ ಕೈದಿಗಳಂತೆ ಪರಿಗಣಿಸಬೇಕು. ಆದರೆ, ಇಲ್ಲಿ ಅವರು ರೆಸಾರ್ಟ್ನಲ್ಲಿ ಕುಳಿತಿದ್ದಾರೆ ಎಂದು ತೋರುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ; ಒಡಿಶಾ: ಜಗಳದ ವೇಳೆ ಗಂಡನಿಗೆ ಥಳಿಸಿದ ಮಹಿಳೆ; ಸ್ಥಳೀಯರ ಪಂಚಾಯಿತಿ ಆದೇಶ ನಂತರ ತಲೆ ಬೋಳಿಸಿ ಬಹಿಷ್ಕಾರ


