Homeಮುಖಪುಟಸಾವುಗಳು ಆಗುವುದು ಸಾಂಕ್ರಮಿಕ ವೈರಸಿನಿಂದ ಮಾತ್ರವಲ್ಲ...!!

ಸಾವುಗಳು ಆಗುವುದು ಸಾಂಕ್ರಮಿಕ ವೈರಸಿನಿಂದ ಮಾತ್ರವಲ್ಲ…!!

- Advertisement -
- Advertisement -

ಆಧುನಿಕತೆ ಕೊಡುಗೆ ನೀಡಿದ ಮಾನವ ನಿರ್ಮಿತವಾದ ಸಕಲ ಸನ್ನಾಹಗಳನ್ನೂ ಪರಾಭವಗೊಳಿಸಿ, ಸೂಕ್ಷ್ಮ ವೈರಸೊಂದು ಮಾಡುತ್ತಿರುವ ಆಕ್ರಮಣವು, ನ್ಯೂಯಾರ್ಕ್, ಪ್ಯಾರಿಸ್, ರೋಮ್, ನವದೆಹಲಿ, ಬೀಜಿಂಗ್, ಮಾಸ್ಕೋ, ರಿಯಾದ್, ಟೆಲ್‌ಅವೀವ್, ಕೈರೋದಂತಹ ಮಹಾನಗರಗಳಲ್ಲಿನ ‘ಬೆರಳತುದಿಯಲ್ಲಿ ಜಗತ್ತು ನಿಯಂತ್ರಿಸಲ್ಪಡುತ್ತಿದೆ’ ಎಂದು ಬೀಗುತ್ತಿದ್ದ ಆಡಳಿತಾರೂಢರನ್ನು ಅಸ್ವಸ್ಥರನ್ನಾಗಿಸಿದೆ. ನಿರೀಕ್ಷಣಾ ಕ್ಯಾಮರಾಗಳು ಮತ್ತು ರಹಸ್ಯ ಆಪ್‌ಗಳು ಜೊತೆಗೆ ಬಹುಸಂಖ್ಯಾತ ರಹಸ್ಯ ಪಡೆಗಳು ಇದ್ದರೆ, ಯಾವ ರಾಷ್ಟ್ರ ಬೇಕಾದರೂ ಸುರಕ್ಷಿತ ಹಾಗೂ ಶಾಂತವಾಗಿರುತ್ತದೆ ಎಂಬ ಧೋರಣೆಯನ್ನು ತಿದ್ದಬೇಕಾಯಿತು. ಈ ತಪ್ಪು ಕಲ್ಪನೆಯನ್ನು ಬಲವಂತವಾಗಿ ಹೇರಿದ ಕಾರಣದಿಂದಾಗಿದೆ ಹೆಚ್ಚಿನ ರಾಷ್ಟ್ರಗಳು ಜನಾರೋಗ್ಯ, ಶಿಕ್ಷಣ, ಉದ್ಯೋಗ ಮುಂತಾದುವುಗಳಿಗೆ ಖರ್ಚು ಮಾಡುವ ಹತ್ತು ಪಟ್ಟು ಹಣವನ್ನು ರಾಷ್ಟ್ರ ರಕ್ಷಣೆಗೆ ಮೀಸಲಿಡೋದು. ಆದರೆ, ಇದರಿಂದೇನೂ ಯಾವ ರಾಷ್ಟ್ರವೂ ಸುರಕ್ಷಿತವಾಗಿರಬೇಕೆಂದಿಲ್ಲ ಎಂಬುದನ್ನು ನೆನಪಿಸುವಂತಿದೆ ಈ ಸಣ್ಣ ವೈರಾಣು.

ಯುದ್ಧದ ದಿನಗಳಲ್ಲಿ ಜೀವಿಸುವ ಆಸೆಯಿಂದ ಅಟ್ಟಹಾಸಗೈದು ಪ್ರಾಣ ಕೈಯಲ್ಲಿ ಹಿಡಿದು ಓಡುತ್ತಿರುವಾಗ, ದೇಶ ರಾಷ್ಟ್ರಗಳ ಗಡಿಯಲ್ಲಿ ಪ್ರವೇಶ ನಿರಾಕರಿಸಲ್ಪಟ್ಟ ಸಿರಿಯಾ ಹಾಗೂ ಇರಾಕ್‌ನ ಪುಟ್ಟ ಕಂದಮ್ಮಗಳು, ರಕ್ಷಣಾ ಬೋಟ್‌ನಲ್ಲಿ ದಡ ತಲುಪಲಾಗದೆ ಅತ್ತು ಗೋಗರೆಯುತ್ತಿದ್ದ ಮ್ಯಾನ್ಮಾರಿನ ರೋಹೀಂಗ್ಯಾ ಜನತೆ ಇದನ್ನು ಕಾಣುವಾಗ ಕಣ್ಣಗಲಿಸಿ ನೋಡುತ್ತಿರಬಹುದು. ಹಸಿದು ಬಳಲಿದ ಮುಖದೊಂದಿಗೆ ಗಡಿದಾಟಿ ತಲುಪಿದ ತಮ್ಮನ್ನು ತಳ್ಳಿ ದೂರ ಮಾಡುತ್ತಿದ್ದಾಗ, ಅದನ್ನು ಕಂಡು ನೋವು ಅರಗಿಸಿಕೊಳ್ಳಲಾಗದೆ, ಎದೆಯೊಡೆದು ಪ್ರಾಣ ಕಳಕೊಂಡವರಿದ್ದಾರೆ, ಕಡಲಗರ್ಭದ ಆಳದಲ್ಲಿ ಮುಳುಗಿ ಸಾವು ಕಂಡವರಿದ್ದಾರೆ, ಸಮುದ್ರ ತೀರದೆಡೆಗೆ ಎಸೆಯಲ್ಪಟ್ಟ ಅದೆಷ್ಟೋ ‘ಐಲನ್ ಕುರ್ದಿ’ಗಳಿದ್ದಾರೆ ಅವರಲ್ಲಿ.

ಪ್ರಪಂಚದಲ್ಲಿ ಅತಿ ಹೆಚ್ಚು ವಲಸಿಗರನ್ನು ಹೊಂದಿರುವ ರಾಷ್ಟ್ರಗಳ ಸಂಖ್ಯೆಗಳು ಅಚ್ಚರಿಗೊಳಿಸುವಂತದ್ದು. ಅತಿ ಹೆಚ್ಚು ವಲಸಿಗರನ್ನು ಬರಮಾಡಿಕೊಂಡ ದೇಶಗಳ ಪಟ್ಟಿಯಲ್ಲಿ ಟರ್ಕಿ, ಪಾಕಿಸ್ತಾನ, ಉಗಾಂಡ, ಸುಡಾನ್, ಜರ್ಮನಿ ಹೀಗಿದೆ. ವಲಸಿಗರಿಂದ ಉಂಟಾಗುವ ಸಾಮಾಜಿಕ, ಆರ್ಥಿಕ ಪ್ರತ್ಯಾಘಾತಗಳ ಕುರಿತು ಆಕ್ರೋಶಗಳು ಮತ್ತು ಅವರನ್ನು ಹೊರಗಟ್ಟಬೇಕೆನ್ನುವ ಕೂಗು ಅತ್ಯಂತ ಮನುಷ್ಯತ್ವ ವಿರುದ್ಧವಾಗಿ ಮೊಳಗುತ್ತಿದ್ದುದು ಶ್ರೀಮಂತ ಐರೋಪ್ಯ ರಾಷ್ಟ್ರಗಳಿಂದಲೂ, ಅಮೇರಿಕದಿಂದಲೂ ಆಗಿತ್ತು. ನಿರಾಶ್ರಿತರೊಂದಿಗೆ ತೋರುವ ಅದೇ ಸಾಮೀಪ್ಯವಾಗಿದೆ, ವಲಸಿಗರಾದ ಪೌರತ್ವ ಲಭಿಸಿದವರೊಂದಿಗೂ ಕೆಲವು ದೇಶಗಳು ತೋರುತ್ತಿರುವುದು. ವಲಸಿಗರ ಸಂಖ್ಯೆ 272 ದಶಲಕ್ಷಕ್ಕೇರಿದೆ ಎಂದಾಗಿತ್ತು 2019 ರಲ್ಲಿ ಯು.ಎನ್ ಡಿಪಾರ್ಟ್ಮೆಂಟ್ ಆಫ್ ಇಕನಾಮಿಕ್ಸ್ ಆಂಡ್ ಸೋಶಿಯಲ್ ಅಫೆರ‍್ಸ್ ಹೇಳಿರುವುದು. ಇದರಲ್ಲಿ 2010-19 ರ ಕಾಲಘಟ್ಟದಲ್ಲಿ 51 ದಶಲಕ್ಷ ಏರಿಕೆಯಾಗಿದೆ. ಒಂದು ಕಾಲದಲ್ಲಿ ಉದ್ಯೋಗ ಸಾಮರ್ಥ್ಯದ ಅಭಾವವನ್ನು ಎದುರಿಸಿದ ಹಲವು ಯುರೋಪ್ಯನ್ ಶ್ರೀಮಂತ ರಾಷ್ಟ್ರಗಳಿಗೂ ಅನುಗ್ರಹವೇ ಆಗಿತ್ತು ಈ ವಲಸೆ.

ಆದರೆ, ಇಂದು ಸ್ಥಿತಿ ಬದಲಾಗಿದೆ. ಸಂಕುಚಿತ ಮನಸ್ಥಿತಿಯ ರಾಷ್ಟ್ರೀಯವಾದಿಗಳು ವಲಸೆ ವಿರುದ್ಧ ಧ್ವನಿಯೆತ್ತಿ ಅಧಿಕಾರವನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಮೇರಿಕದ ಅಧ್ಯಕ್ಷ ಟ್ರಂಪ್‌ರ ವಿಜಯವೂ ಕೂಡಾ ವಲಸೆ ವಿರುದ್ಧ ಪ್ರಚಾರ ಮಾಡಿದ್ದರಿಂದಲೇ ಆಗಿತ್ತು. ಪೌರತ್ವ ಸಿಕ್ಕಿದ ನಂತರವೂ ಕೂಡಾ, ನಿರ್ಲಕ್ಷ್ಯ, ಅಕ್ರಮ, ಅಪಹಾಸ್ಯಕ್ಕೀಡಾಗುವುದೆಲ್ಲವೂ ನಡೆಯುತ್ತಲೇ ಇದೆ. ವಿಶೇಷವಾಗಿ, ಚರ್ಮದ ಬಣ್ಣ ಬದಲಾದಂತೆಯೇ ಅದು ನಡೆಯುತ್ತದೆ. ಆ ಅನುಭವವೇ ಆಗಿತ್ತು ಬೆಲ್ಜಿಯಂ ಕ್ರೀಡಾಪಟು ಲೂಕಾಕುವನ್ನು ‘ವಿಜೇತನಾದರೆ ರಾಷ್ಟ್ರಿಯ ತಾರೆಯಾಗಿ ಸಂಭ್ರಮಿಸುತ್ತಾರೆ, ಪರಾಭವಗೊಂಡರೆ ತಾನೋರ್ವ ವಲಸಿಗನೆಂಬ ಪಟ್ಟ ಕಟ್ಟಿ ಆಕ್ಷೇಪಿಸುತ್ತಾರೆ’ ಎಂಬ ರೀತಿಯನ್ನು 2018 ರ ವಿಶ್ವಕಪ್ ಫುಟ್ಬಾಲ್ ಪಂದ್ಯದ ನಡುವೆ ಹೇಳುವಂತೆ ಮಾಡಿರುವುದು.

ವೈರಸ್‌ಗಿಂತ ಮಾರಕ ರೂಪದಲ್ಲಿ ಮಾನವಕುಲವನ್ನು ಆಕ್ರಮಿಸುವವರಾಗಿದ್ದಾರೆ ಸಂಕುಚಿತ ರಾಷ್ಟ್ರಿಯತೆ ಹಾಗೂ ವಂಶೀಯತೆಯ ವಿಷಬೀಜಗಳನ್ನು ಬಿತ್ತುವ ಅಮೇರಿಕ ಮತ್ತು ಯುರೋಪಿನ ಬಲಪಂಥೀಯ ಆಡಳಿತ ಪಕ್ಷಗಳು. ಬಂಗಾಳದಿಂದ ವಲಸೆ ಬಂದ ‘ಅಕ್ರಮ ವಲಸಿಗರು’ ಎಂಬ ಮಹಾಸುಳ್ಳು ಪ್ರಚಾರ ಮಾಡುವ ಮೂಲಕ ಅಸ್ಸಾಂನಲ್ಲಿ ದಶಕಗಳಿಂದ ವಾಸ ಮಾಡುತ್ತಿದ್ದವರನ್ನು ಹೊರಗಟ್ಟಲು ಭಾರತ ಶ್ರಮಿಸುತ್ತಿರೋದು ನಮಗೆ ಗೊತ್ತಿರುವ ವಿಚಾರ. ದೇಶವ್ಯಾಪಿಯಾಗಿ ಈ ರೀತಿಯ ಅಕ್ರಮ ವಲಸಿಗರಿದ್ದಾರೆ ಎಂಬ ಸುಳ್ಳನ್ನು ಆಧಾರವಾಗಿ ಇಟ್ಟುಕೊಂಡು ಅವರನ್ನು ದೇಶದಿಂದ ಹೊರದಬ್ಬುವ ಉದ್ದೇಶದಿಂದಲೇ ಸಂಘಪರಿವಾರದ ಫ್ಯಾಸಿಸ್ಟರು ‘ರಾಷ್ಟ್ರೀಯ ಪೌರತ್ವ ನೋಂದಣಿ’ ಜಾರಿಗೊಳಿಸಲು ಮುಂದೆ ಬಂದಿರೋದು. ಭಾರತದಲ್ಲಿ ಕೆಲವು ದಿನಗಳ ಹಿಂದೆ ಪೌರತ್ವ ನಿಷೇಧ ಕಾನೂನಿನ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಮಾತ್ರವಾಗಿ ಕೊಲ್ಲಲ್ಪಟ್ಟದ್ದು ನೂರಕ್ಕೂ ಹೆಚ್ಚು ಜನರು.

ಫೆಲೆಸ್ತೀನ್‌ನಲ್ಲಿ ಆ ಮಣ್ಣಿನ ನಿಜವಾದ ಹಕ್ಕುದಾರರನ್ನು ಗೋಡೆ ಹಾಗೂ ತಂತಿ ಬೇಲಿಯ ನಡುವೆ ಸಿಲುಕಿಸಿ ಗುಂಪು ಹತ್ಯೆ ನಡೆಸುತ್ತಿದೆ ಇಸ್ರೇಲ್. ಹೊರ ಜಗತ್ತಿನೊಂದಿಗೆ ಸಂಬಂಧಗಳನ್ನು ಕಳೆದುಕೊಂಡಿರುವ ಗಾಝಾ, ಈ ಶತಮಾನ ಕಂಡ ಭೀತಿ ಜನಕ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ನರಮೇಧದ ಪ್ರತೀಕವಾಗಿದೆ. ಫೆಲೆಸ್ತೀನ್ ಅನ್ನು ಅನ್ಯಾಯವಾಗಿ ವಶಪಡಿಸಿದ ನಂತರ ಸಯನಿಸ್ಟ್ಗಳು ಕೊಂದು ಹಾಕಿದ ಅರಬಿಗಳ ಸಂಖ್ಯೆ 11 ದಶಲಕ್ಷಗಳಿಗಿಂತ ಹೆಚ್ಚು. ನಿರಾಶ್ರಿತರಾಗಿ ಪ್ರಪಂಚದ ವಿವಿಧೆಡೆಗಳಲ್ಲಿ ವಾಸಿಸುವವರು ಆರು ದಶಲಕ್ಷಗಳಿಗಿಂತ ಹೆಚ್ಚು. ಇದರಲ್ಲಿ ಒಂದುವರೆ ಲಕ್ಷ ಜನರು ದಶಕಗಳ ನಂತರ ಈಗಲೂ ನಿರಾಶ್ರಿತರ ಕ್ಯಾಂಪ್‌ಗಳಲ್ಲಿದ್ದಾರೆ. ರಾಖೈನ್ ಪ್ರಾಂತ್ಯಗಳಿಂದ 2015 ರ ನಂತರ ಮಾತ್ರ 9 ಲಕ್ಷ ಜನರನ್ನಾಗಿದೆ ಮ್ಯಾನ್ಮಾರಿನ ಆಡಳಿತ ಹೊರ ಹಾಕಿರೋದು. ಸಿಕ್ಯಂಗ್ ಪ್ರಾಂತ್ಯದ ಉಯಿಗುರ್ ವಂಶಜರ ಮೇಲೆ ಚೀನಾ ನಡೆಸುತ್ತಿರುವ ಅತಿ ಕ್ರೂರವಾದ ವಂಶ ಹತ್ಯೆ ಮತ್ತು ಸಾಂಸ್ಕೃತಿಕ ಉನ್ಮೂಲನಾ ವಿಧಾನಗಳು ಅತ್ಯಂತ ನೀಚವೂ, ಮೃಗೀಯತೆಯಿಂದ ಕೂಡಿದ್ದಾಗಿದೆ. ಪ್ರತಿ ವರ್ಷವೂ ಅಮೇರಿಕ ಪಶ್ಚಿಮ ಏಷ್ಯಾದಲ್ಲೂ, ಅಫ್ಗಾನಿಸ್ತಾನದಲ್ಲೂ ಮಾತ್ರ ನಡೆಸುವ ಬಾಂಬ್ ದಾಳಿಯಿಂದಾಗಿ, ವರ್ಷದಲ್ಲಿ ಕೊಲ್ಲಲ್ಪಡುತ್ತಿರುವ ನಾಗರೀಕರು ಸಾವಿರಾರು.

ಯುನಿಸೆಫ್ ನ ಅಂಕಿಅಂಶಗಳ ಪ್ರಕಾರ ಪೌಷ್ಟಿಕಾಹಾರ ಕೊರತೆಯಿಂದಾಗಿ ಪ್ರತಿ ದಿನವೂ ಸಾವಿಗೆ ತುತ್ತಾಗುತ್ತಿರುವವರು 22 ಸಾವಿರ ಮಕ್ಕಳಾಗಿದ್ದಾರೆ. ಶುದ್ಧ ನೀರು ಮತ್ತು ಸಮರ್ಥ ರೀತಿಯ ಶುಚಿತ್ವ ಸೌಕರ್ಯಗಳಿಲ್ಲದ ಕಾರಣ ಅತಿಸಾರದಂತಹ ರೋಗ ಬಾಧಿತರಾಗಿ 8,42000 ಜನರು ಪ್ರತಿವರ್ಷ ಅಸುನೀಗುತ್ತಿದ್ದಾರೆ. ಅಂದರೆ, ಪ್ರತಿ ದಿನಕ್ಕೆ 2300 ಜನರು. ಹಸಿವು ಕಾರಣ ಸಾಯುತ್ತಿರುವವರ ಸಂಖ್ಯೆ ಒಂದುವರೆ ಬಿಲಿಯನ್ ಎಂದು ಅಂದಾಜಿಸಲಾಗಿದೆ.

ಕೊವಿಡ್‌ 19 ರ ವಿರುದ್ಧ ಇಂದು ಗೋಳಿಡುತ್ತಿರುವ ಆಡಳಿತ ವರ್ಗದಲ್ಲಿರುವ ಹಲವರು, ಅಸಂತುಲಿತ ಆರ್ಥಿಕ ಕ್ರಮ ಹಾಗೂ ಶೋಷಣೆಯನ್ನು ಬಲವಂತವಾಗಿ ಹೇರಿ ಈ ಜನರ ಹಕ್ಕುಗಳನ್ನು ಕಸಿದುಕೊಂಡವರೇ ಆಗಿದ್ದಾರೆ. ಸಾಮೂಹಿಕ ಹತ್ಯೆಗೆ ಬೇಕಾಗುವ ಆಯುಧಗಳನ್ನು ತಯಾರಿಸಿ, ರಾಸಾಯನಿಕ ಹಾಗೂ ಜೈವಿಕ ಅಸ್ತ್ರಗಳನ್ನು ಅಭಿವೃದ್ಧಿಪಡಿಸಲು ತತ್ವ ದೀಕ್ಷೆಯಿಲ್ಲದ ಕೋಟಿಗಟ್ಟಲೆ ಹಣವನ್ನು ಖರ್ಚುಮಾಡುವುದೂ ಕೂಡಾ ಇದೇ ರಾಷ್ಟ್ರಗಳೇ ಆಗಿವೆ.

ಏಕಪಕ್ಷೀಯವಾದ ಪ್ರತಿರೋಧದ ಕಾರಣದಿಂದಾಗಿ ಕುಸಿದು ಬಿದ್ದ ರಾಷ್ಟ್ರಗಳಲ್ಲಿ ಕಂದಮ್ಮಗಳು ಹಸಿವಿನಿಂದ ಸಾವಿನ ದವಡೆಗೆ ನೂಕಲ್ಪಡುತ್ತಿರುವಾಗ, ಪ್ರತಿರೋಧಗಳನ್ನು ಜಯಿಸಿದೆವು ಎಂದವರು ಅಹಂಕರಿಸುವುದುಂಟು. ಕೊವಿಡ್-19 ವ್ಯಾಪಕವಾಗಿ ಹರಡುತ್ತಿರುವ ಈ ಕಾಲದಲ್ಲೂ, ಪ್ರತಿರೋಧದಿಂದಾಗಿ ಕುಸಿದು ಬಿದ್ದ ಇರಾನ್ ಜನತೆಯನ್ನು ರಕ್ಷಿಸುವುದಕ್ಕಾಗಿಯೋ, ಗಾಝಾದ ಜನತೆಗೆ ಆಶ್ವಾಸನೆಯನ್ನು ನೀಡಲೆಂದೋ ಯಾರೂ ಮುಂದೆ ಬಂದಿಲ್ಲ. ಚೀನಾದ ನಂತರ ಮರುಕ್ಷಣ ಅತಿಭಯಾನಕ ರೀತಿಯಲ್ಲಿ ಕೊವಿಡ್-19 ಇರಾನಿಗೆ ವ್ಯಾಪಿಸಿದಾಗ ಹೊಸ ಪ್ರತಿರೋಧ ವ್ಯವಸ್ಥೆಗಳನ್ನು ಬಲವಂತವಾಗಿ ಹೇರಿ, ಯಾತನೆ ಅನುಭವಿಸುತ್ತಿರುವ ಜನರನ್ನು ಮತ್ತೊಮ್ಮೆ ದೌರ್ಜನ್ಯವೆಸಗಲೆಂದೇ ಅಮೇರಿಕ ಮುಂದೆ ಬಂದಿದ್ದು. ನಿರಂತರ ನರಹತ್ಯೆಗೆ ನೇತೃತ್ವವನ್ನು ನೀಡುವ ವಂಶೀಯವಾದಿ ಆಡಳಿತಕಾರರೆಲ್ಲರೂ, ಮನುಷ್ಯ ಜೀವಗಳನ್ನು ನೆನೆಯುತ್ತಾ ಇದೀಗ ತುರ್ತಾಗಿ ಎದ್ದು ನಿಂತಿರೋದು ಕೊವಿಡ್-19 ಮರಣವು ಭೂಮಿಯಲ್ಲಿ ಅವಗಣಿಸಲ್ಪಟ್ಟವರನ್ನು ಮಾತ್ರವಲ್ಲ, ಸಾಮಾಜಿಕ, ಆರ್ಥಿಕ ಭೇದವಿಲ್ಲದೆ ಸಕಲರನ್ನೂ ನುಂಗಿ ಹಾಕುತ್ತಿರುವುದರಿಂದಲೇ ಆಗಿದೆ. ಆಗ ಮಾತ್ರ ಉಂಟಾಗುವ ಈ ಅನಿಯಂತ್ರಿತ ಎದೆಗುದಿ ಇದೆಯಲ್ಲಾ, ಅದಾಗಿದೆ ಮರಣಕ್ಕಿಂತಲೂ ಭೀಕರವಾದುದು.

ಅಂಕಿ-ಅಂಶಗಳಿಗೆ ಆಧಾರ: www.who.in, www.dw.com, www.un.org,www.dosomething.org

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್‌ನ ಕಿರೀಟ ರತ್ನ ಖಾರ್ಗ್ ದ್ವೀಪದ ಮೇಲೆ ಅಮೆರಿಕದಿಂದ ಬಾಂಬ್ ದಾಳಿ : ಟ್ರಂಪ್ ಹೇಳಿಕೆ

ಇರಾನ್‌ನ ಖಾರ್ಗ್ ದ್ವೀಪದ ಮೇಲೆ ಅಮೆರಿಕ 'ಅತ್ಯಂತ ಶಕ್ತಿಶಾಲಿ ಬಾಂಬ್ ದಾಳಿ' ನಡೆಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ದ್ವೀಪದಲ್ಲಿರುವ ತೈಲ ಮೂಲಸೌಕರ್ಯಗಳನ್ನು ನಾಶಪಡಿಸದೆ ಇರಲು ನಿರ್ಧರಿಸಿದ ಅಮೆರಿಕ ಪಡೆಗಳು, ಅಲ್ಲಿನ ಮಿಲಿಟರಿ ಕೇಂದ್ರಗಳನ್ನು...

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...