Homeಮುಖಪುಟಸಾವುಗಳು ಆಗುವುದು ಸಾಂಕ್ರಮಿಕ ವೈರಸಿನಿಂದ ಮಾತ್ರವಲ್ಲ...!!

ಸಾವುಗಳು ಆಗುವುದು ಸಾಂಕ್ರಮಿಕ ವೈರಸಿನಿಂದ ಮಾತ್ರವಲ್ಲ…!!

- Advertisement -
- Advertisement -

ಆಧುನಿಕತೆ ಕೊಡುಗೆ ನೀಡಿದ ಮಾನವ ನಿರ್ಮಿತವಾದ ಸಕಲ ಸನ್ನಾಹಗಳನ್ನೂ ಪರಾಭವಗೊಳಿಸಿ, ಸೂಕ್ಷ್ಮ ವೈರಸೊಂದು ಮಾಡುತ್ತಿರುವ ಆಕ್ರಮಣವು, ನ್ಯೂಯಾರ್ಕ್, ಪ್ಯಾರಿಸ್, ರೋಮ್, ನವದೆಹಲಿ, ಬೀಜಿಂಗ್, ಮಾಸ್ಕೋ, ರಿಯಾದ್, ಟೆಲ್‌ಅವೀವ್, ಕೈರೋದಂತಹ ಮಹಾನಗರಗಳಲ್ಲಿನ ‘ಬೆರಳತುದಿಯಲ್ಲಿ ಜಗತ್ತು ನಿಯಂತ್ರಿಸಲ್ಪಡುತ್ತಿದೆ’ ಎಂದು ಬೀಗುತ್ತಿದ್ದ ಆಡಳಿತಾರೂಢರನ್ನು ಅಸ್ವಸ್ಥರನ್ನಾಗಿಸಿದೆ. ನಿರೀಕ್ಷಣಾ ಕ್ಯಾಮರಾಗಳು ಮತ್ತು ರಹಸ್ಯ ಆಪ್‌ಗಳು ಜೊತೆಗೆ ಬಹುಸಂಖ್ಯಾತ ರಹಸ್ಯ ಪಡೆಗಳು ಇದ್ದರೆ, ಯಾವ ರಾಷ್ಟ್ರ ಬೇಕಾದರೂ ಸುರಕ್ಷಿತ ಹಾಗೂ ಶಾಂತವಾಗಿರುತ್ತದೆ ಎಂಬ ಧೋರಣೆಯನ್ನು ತಿದ್ದಬೇಕಾಯಿತು. ಈ ತಪ್ಪು ಕಲ್ಪನೆಯನ್ನು ಬಲವಂತವಾಗಿ ಹೇರಿದ ಕಾರಣದಿಂದಾಗಿದೆ ಹೆಚ್ಚಿನ ರಾಷ್ಟ್ರಗಳು ಜನಾರೋಗ್ಯ, ಶಿಕ್ಷಣ, ಉದ್ಯೋಗ ಮುಂತಾದುವುಗಳಿಗೆ ಖರ್ಚು ಮಾಡುವ ಹತ್ತು ಪಟ್ಟು ಹಣವನ್ನು ರಾಷ್ಟ್ರ ರಕ್ಷಣೆಗೆ ಮೀಸಲಿಡೋದು. ಆದರೆ, ಇದರಿಂದೇನೂ ಯಾವ ರಾಷ್ಟ್ರವೂ ಸುರಕ್ಷಿತವಾಗಿರಬೇಕೆಂದಿಲ್ಲ ಎಂಬುದನ್ನು ನೆನಪಿಸುವಂತಿದೆ ಈ ಸಣ್ಣ ವೈರಾಣು.

ಯುದ್ಧದ ದಿನಗಳಲ್ಲಿ ಜೀವಿಸುವ ಆಸೆಯಿಂದ ಅಟ್ಟಹಾಸಗೈದು ಪ್ರಾಣ ಕೈಯಲ್ಲಿ ಹಿಡಿದು ಓಡುತ್ತಿರುವಾಗ, ದೇಶ ರಾಷ್ಟ್ರಗಳ ಗಡಿಯಲ್ಲಿ ಪ್ರವೇಶ ನಿರಾಕರಿಸಲ್ಪಟ್ಟ ಸಿರಿಯಾ ಹಾಗೂ ಇರಾಕ್‌ನ ಪುಟ್ಟ ಕಂದಮ್ಮಗಳು, ರಕ್ಷಣಾ ಬೋಟ್‌ನಲ್ಲಿ ದಡ ತಲುಪಲಾಗದೆ ಅತ್ತು ಗೋಗರೆಯುತ್ತಿದ್ದ ಮ್ಯಾನ್ಮಾರಿನ ರೋಹೀಂಗ್ಯಾ ಜನತೆ ಇದನ್ನು ಕಾಣುವಾಗ ಕಣ್ಣಗಲಿಸಿ ನೋಡುತ್ತಿರಬಹುದು. ಹಸಿದು ಬಳಲಿದ ಮುಖದೊಂದಿಗೆ ಗಡಿದಾಟಿ ತಲುಪಿದ ತಮ್ಮನ್ನು ತಳ್ಳಿ ದೂರ ಮಾಡುತ್ತಿದ್ದಾಗ, ಅದನ್ನು ಕಂಡು ನೋವು ಅರಗಿಸಿಕೊಳ್ಳಲಾಗದೆ, ಎದೆಯೊಡೆದು ಪ್ರಾಣ ಕಳಕೊಂಡವರಿದ್ದಾರೆ, ಕಡಲಗರ್ಭದ ಆಳದಲ್ಲಿ ಮುಳುಗಿ ಸಾವು ಕಂಡವರಿದ್ದಾರೆ, ಸಮುದ್ರ ತೀರದೆಡೆಗೆ ಎಸೆಯಲ್ಪಟ್ಟ ಅದೆಷ್ಟೋ ‘ಐಲನ್ ಕುರ್ದಿ’ಗಳಿದ್ದಾರೆ ಅವರಲ್ಲಿ.

ಪ್ರಪಂಚದಲ್ಲಿ ಅತಿ ಹೆಚ್ಚು ವಲಸಿಗರನ್ನು ಹೊಂದಿರುವ ರಾಷ್ಟ್ರಗಳ ಸಂಖ್ಯೆಗಳು ಅಚ್ಚರಿಗೊಳಿಸುವಂತದ್ದು. ಅತಿ ಹೆಚ್ಚು ವಲಸಿಗರನ್ನು ಬರಮಾಡಿಕೊಂಡ ದೇಶಗಳ ಪಟ್ಟಿಯಲ್ಲಿ ಟರ್ಕಿ, ಪಾಕಿಸ್ತಾನ, ಉಗಾಂಡ, ಸುಡಾನ್, ಜರ್ಮನಿ ಹೀಗಿದೆ. ವಲಸಿಗರಿಂದ ಉಂಟಾಗುವ ಸಾಮಾಜಿಕ, ಆರ್ಥಿಕ ಪ್ರತ್ಯಾಘಾತಗಳ ಕುರಿತು ಆಕ್ರೋಶಗಳು ಮತ್ತು ಅವರನ್ನು ಹೊರಗಟ್ಟಬೇಕೆನ್ನುವ ಕೂಗು ಅತ್ಯಂತ ಮನುಷ್ಯತ್ವ ವಿರುದ್ಧವಾಗಿ ಮೊಳಗುತ್ತಿದ್ದುದು ಶ್ರೀಮಂತ ಐರೋಪ್ಯ ರಾಷ್ಟ್ರಗಳಿಂದಲೂ, ಅಮೇರಿಕದಿಂದಲೂ ಆಗಿತ್ತು. ನಿರಾಶ್ರಿತರೊಂದಿಗೆ ತೋರುವ ಅದೇ ಸಾಮೀಪ್ಯವಾಗಿದೆ, ವಲಸಿಗರಾದ ಪೌರತ್ವ ಲಭಿಸಿದವರೊಂದಿಗೂ ಕೆಲವು ದೇಶಗಳು ತೋರುತ್ತಿರುವುದು. ವಲಸಿಗರ ಸಂಖ್ಯೆ 272 ದಶಲಕ್ಷಕ್ಕೇರಿದೆ ಎಂದಾಗಿತ್ತು 2019 ರಲ್ಲಿ ಯು.ಎನ್ ಡಿಪಾರ್ಟ್ಮೆಂಟ್ ಆಫ್ ಇಕನಾಮಿಕ್ಸ್ ಆಂಡ್ ಸೋಶಿಯಲ್ ಅಫೆರ‍್ಸ್ ಹೇಳಿರುವುದು. ಇದರಲ್ಲಿ 2010-19 ರ ಕಾಲಘಟ್ಟದಲ್ಲಿ 51 ದಶಲಕ್ಷ ಏರಿಕೆಯಾಗಿದೆ. ಒಂದು ಕಾಲದಲ್ಲಿ ಉದ್ಯೋಗ ಸಾಮರ್ಥ್ಯದ ಅಭಾವವನ್ನು ಎದುರಿಸಿದ ಹಲವು ಯುರೋಪ್ಯನ್ ಶ್ರೀಮಂತ ರಾಷ್ಟ್ರಗಳಿಗೂ ಅನುಗ್ರಹವೇ ಆಗಿತ್ತು ಈ ವಲಸೆ.

ಆದರೆ, ಇಂದು ಸ್ಥಿತಿ ಬದಲಾಗಿದೆ. ಸಂಕುಚಿತ ಮನಸ್ಥಿತಿಯ ರಾಷ್ಟ್ರೀಯವಾದಿಗಳು ವಲಸೆ ವಿರುದ್ಧ ಧ್ವನಿಯೆತ್ತಿ ಅಧಿಕಾರವನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಮೇರಿಕದ ಅಧ್ಯಕ್ಷ ಟ್ರಂಪ್‌ರ ವಿಜಯವೂ ಕೂಡಾ ವಲಸೆ ವಿರುದ್ಧ ಪ್ರಚಾರ ಮಾಡಿದ್ದರಿಂದಲೇ ಆಗಿತ್ತು. ಪೌರತ್ವ ಸಿಕ್ಕಿದ ನಂತರವೂ ಕೂಡಾ, ನಿರ್ಲಕ್ಷ್ಯ, ಅಕ್ರಮ, ಅಪಹಾಸ್ಯಕ್ಕೀಡಾಗುವುದೆಲ್ಲವೂ ನಡೆಯುತ್ತಲೇ ಇದೆ. ವಿಶೇಷವಾಗಿ, ಚರ್ಮದ ಬಣ್ಣ ಬದಲಾದಂತೆಯೇ ಅದು ನಡೆಯುತ್ತದೆ. ಆ ಅನುಭವವೇ ಆಗಿತ್ತು ಬೆಲ್ಜಿಯಂ ಕ್ರೀಡಾಪಟು ಲೂಕಾಕುವನ್ನು ‘ವಿಜೇತನಾದರೆ ರಾಷ್ಟ್ರಿಯ ತಾರೆಯಾಗಿ ಸಂಭ್ರಮಿಸುತ್ತಾರೆ, ಪರಾಭವಗೊಂಡರೆ ತಾನೋರ್ವ ವಲಸಿಗನೆಂಬ ಪಟ್ಟ ಕಟ್ಟಿ ಆಕ್ಷೇಪಿಸುತ್ತಾರೆ’ ಎಂಬ ರೀತಿಯನ್ನು 2018 ರ ವಿಶ್ವಕಪ್ ಫುಟ್ಬಾಲ್ ಪಂದ್ಯದ ನಡುವೆ ಹೇಳುವಂತೆ ಮಾಡಿರುವುದು.

ವೈರಸ್‌ಗಿಂತ ಮಾರಕ ರೂಪದಲ್ಲಿ ಮಾನವಕುಲವನ್ನು ಆಕ್ರಮಿಸುವವರಾಗಿದ್ದಾರೆ ಸಂಕುಚಿತ ರಾಷ್ಟ್ರಿಯತೆ ಹಾಗೂ ವಂಶೀಯತೆಯ ವಿಷಬೀಜಗಳನ್ನು ಬಿತ್ತುವ ಅಮೇರಿಕ ಮತ್ತು ಯುರೋಪಿನ ಬಲಪಂಥೀಯ ಆಡಳಿತ ಪಕ್ಷಗಳು. ಬಂಗಾಳದಿಂದ ವಲಸೆ ಬಂದ ‘ಅಕ್ರಮ ವಲಸಿಗರು’ ಎಂಬ ಮಹಾಸುಳ್ಳು ಪ್ರಚಾರ ಮಾಡುವ ಮೂಲಕ ಅಸ್ಸಾಂನಲ್ಲಿ ದಶಕಗಳಿಂದ ವಾಸ ಮಾಡುತ್ತಿದ್ದವರನ್ನು ಹೊರಗಟ್ಟಲು ಭಾರತ ಶ್ರಮಿಸುತ್ತಿರೋದು ನಮಗೆ ಗೊತ್ತಿರುವ ವಿಚಾರ. ದೇಶವ್ಯಾಪಿಯಾಗಿ ಈ ರೀತಿಯ ಅಕ್ರಮ ವಲಸಿಗರಿದ್ದಾರೆ ಎಂಬ ಸುಳ್ಳನ್ನು ಆಧಾರವಾಗಿ ಇಟ್ಟುಕೊಂಡು ಅವರನ್ನು ದೇಶದಿಂದ ಹೊರದಬ್ಬುವ ಉದ್ದೇಶದಿಂದಲೇ ಸಂಘಪರಿವಾರದ ಫ್ಯಾಸಿಸ್ಟರು ‘ರಾಷ್ಟ್ರೀಯ ಪೌರತ್ವ ನೋಂದಣಿ’ ಜಾರಿಗೊಳಿಸಲು ಮುಂದೆ ಬಂದಿರೋದು. ಭಾರತದಲ್ಲಿ ಕೆಲವು ದಿನಗಳ ಹಿಂದೆ ಪೌರತ್ವ ನಿಷೇಧ ಕಾನೂನಿನ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಮಾತ್ರವಾಗಿ ಕೊಲ್ಲಲ್ಪಟ್ಟದ್ದು ನೂರಕ್ಕೂ ಹೆಚ್ಚು ಜನರು.

ಫೆಲೆಸ್ತೀನ್‌ನಲ್ಲಿ ಆ ಮಣ್ಣಿನ ನಿಜವಾದ ಹಕ್ಕುದಾರರನ್ನು ಗೋಡೆ ಹಾಗೂ ತಂತಿ ಬೇಲಿಯ ನಡುವೆ ಸಿಲುಕಿಸಿ ಗುಂಪು ಹತ್ಯೆ ನಡೆಸುತ್ತಿದೆ ಇಸ್ರೇಲ್. ಹೊರ ಜಗತ್ತಿನೊಂದಿಗೆ ಸಂಬಂಧಗಳನ್ನು ಕಳೆದುಕೊಂಡಿರುವ ಗಾಝಾ, ಈ ಶತಮಾನ ಕಂಡ ಭೀತಿ ಜನಕ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ನರಮೇಧದ ಪ್ರತೀಕವಾಗಿದೆ. ಫೆಲೆಸ್ತೀನ್ ಅನ್ನು ಅನ್ಯಾಯವಾಗಿ ವಶಪಡಿಸಿದ ನಂತರ ಸಯನಿಸ್ಟ್ಗಳು ಕೊಂದು ಹಾಕಿದ ಅರಬಿಗಳ ಸಂಖ್ಯೆ 11 ದಶಲಕ್ಷಗಳಿಗಿಂತ ಹೆಚ್ಚು. ನಿರಾಶ್ರಿತರಾಗಿ ಪ್ರಪಂಚದ ವಿವಿಧೆಡೆಗಳಲ್ಲಿ ವಾಸಿಸುವವರು ಆರು ದಶಲಕ್ಷಗಳಿಗಿಂತ ಹೆಚ್ಚು. ಇದರಲ್ಲಿ ಒಂದುವರೆ ಲಕ್ಷ ಜನರು ದಶಕಗಳ ನಂತರ ಈಗಲೂ ನಿರಾಶ್ರಿತರ ಕ್ಯಾಂಪ್‌ಗಳಲ್ಲಿದ್ದಾರೆ. ರಾಖೈನ್ ಪ್ರಾಂತ್ಯಗಳಿಂದ 2015 ರ ನಂತರ ಮಾತ್ರ 9 ಲಕ್ಷ ಜನರನ್ನಾಗಿದೆ ಮ್ಯಾನ್ಮಾರಿನ ಆಡಳಿತ ಹೊರ ಹಾಕಿರೋದು. ಸಿಕ್ಯಂಗ್ ಪ್ರಾಂತ್ಯದ ಉಯಿಗುರ್ ವಂಶಜರ ಮೇಲೆ ಚೀನಾ ನಡೆಸುತ್ತಿರುವ ಅತಿ ಕ್ರೂರವಾದ ವಂಶ ಹತ್ಯೆ ಮತ್ತು ಸಾಂಸ್ಕೃತಿಕ ಉನ್ಮೂಲನಾ ವಿಧಾನಗಳು ಅತ್ಯಂತ ನೀಚವೂ, ಮೃಗೀಯತೆಯಿಂದ ಕೂಡಿದ್ದಾಗಿದೆ. ಪ್ರತಿ ವರ್ಷವೂ ಅಮೇರಿಕ ಪಶ್ಚಿಮ ಏಷ್ಯಾದಲ್ಲೂ, ಅಫ್ಗಾನಿಸ್ತಾನದಲ್ಲೂ ಮಾತ್ರ ನಡೆಸುವ ಬಾಂಬ್ ದಾಳಿಯಿಂದಾಗಿ, ವರ್ಷದಲ್ಲಿ ಕೊಲ್ಲಲ್ಪಡುತ್ತಿರುವ ನಾಗರೀಕರು ಸಾವಿರಾರು.

ಯುನಿಸೆಫ್ ನ ಅಂಕಿಅಂಶಗಳ ಪ್ರಕಾರ ಪೌಷ್ಟಿಕಾಹಾರ ಕೊರತೆಯಿಂದಾಗಿ ಪ್ರತಿ ದಿನವೂ ಸಾವಿಗೆ ತುತ್ತಾಗುತ್ತಿರುವವರು 22 ಸಾವಿರ ಮಕ್ಕಳಾಗಿದ್ದಾರೆ. ಶುದ್ಧ ನೀರು ಮತ್ತು ಸಮರ್ಥ ರೀತಿಯ ಶುಚಿತ್ವ ಸೌಕರ್ಯಗಳಿಲ್ಲದ ಕಾರಣ ಅತಿಸಾರದಂತಹ ರೋಗ ಬಾಧಿತರಾಗಿ 8,42000 ಜನರು ಪ್ರತಿವರ್ಷ ಅಸುನೀಗುತ್ತಿದ್ದಾರೆ. ಅಂದರೆ, ಪ್ರತಿ ದಿನಕ್ಕೆ 2300 ಜನರು. ಹಸಿವು ಕಾರಣ ಸಾಯುತ್ತಿರುವವರ ಸಂಖ್ಯೆ ಒಂದುವರೆ ಬಿಲಿಯನ್ ಎಂದು ಅಂದಾಜಿಸಲಾಗಿದೆ.

ಕೊವಿಡ್‌ 19 ರ ವಿರುದ್ಧ ಇಂದು ಗೋಳಿಡುತ್ತಿರುವ ಆಡಳಿತ ವರ್ಗದಲ್ಲಿರುವ ಹಲವರು, ಅಸಂತುಲಿತ ಆರ್ಥಿಕ ಕ್ರಮ ಹಾಗೂ ಶೋಷಣೆಯನ್ನು ಬಲವಂತವಾಗಿ ಹೇರಿ ಈ ಜನರ ಹಕ್ಕುಗಳನ್ನು ಕಸಿದುಕೊಂಡವರೇ ಆಗಿದ್ದಾರೆ. ಸಾಮೂಹಿಕ ಹತ್ಯೆಗೆ ಬೇಕಾಗುವ ಆಯುಧಗಳನ್ನು ತಯಾರಿಸಿ, ರಾಸಾಯನಿಕ ಹಾಗೂ ಜೈವಿಕ ಅಸ್ತ್ರಗಳನ್ನು ಅಭಿವೃದ್ಧಿಪಡಿಸಲು ತತ್ವ ದೀಕ್ಷೆಯಿಲ್ಲದ ಕೋಟಿಗಟ್ಟಲೆ ಹಣವನ್ನು ಖರ್ಚುಮಾಡುವುದೂ ಕೂಡಾ ಇದೇ ರಾಷ್ಟ್ರಗಳೇ ಆಗಿವೆ.

ಏಕಪಕ್ಷೀಯವಾದ ಪ್ರತಿರೋಧದ ಕಾರಣದಿಂದಾಗಿ ಕುಸಿದು ಬಿದ್ದ ರಾಷ್ಟ್ರಗಳಲ್ಲಿ ಕಂದಮ್ಮಗಳು ಹಸಿವಿನಿಂದ ಸಾವಿನ ದವಡೆಗೆ ನೂಕಲ್ಪಡುತ್ತಿರುವಾಗ, ಪ್ರತಿರೋಧಗಳನ್ನು ಜಯಿಸಿದೆವು ಎಂದವರು ಅಹಂಕರಿಸುವುದುಂಟು. ಕೊವಿಡ್-19 ವ್ಯಾಪಕವಾಗಿ ಹರಡುತ್ತಿರುವ ಈ ಕಾಲದಲ್ಲೂ, ಪ್ರತಿರೋಧದಿಂದಾಗಿ ಕುಸಿದು ಬಿದ್ದ ಇರಾನ್ ಜನತೆಯನ್ನು ರಕ್ಷಿಸುವುದಕ್ಕಾಗಿಯೋ, ಗಾಝಾದ ಜನತೆಗೆ ಆಶ್ವಾಸನೆಯನ್ನು ನೀಡಲೆಂದೋ ಯಾರೂ ಮುಂದೆ ಬಂದಿಲ್ಲ. ಚೀನಾದ ನಂತರ ಮರುಕ್ಷಣ ಅತಿಭಯಾನಕ ರೀತಿಯಲ್ಲಿ ಕೊವಿಡ್-19 ಇರಾನಿಗೆ ವ್ಯಾಪಿಸಿದಾಗ ಹೊಸ ಪ್ರತಿರೋಧ ವ್ಯವಸ್ಥೆಗಳನ್ನು ಬಲವಂತವಾಗಿ ಹೇರಿ, ಯಾತನೆ ಅನುಭವಿಸುತ್ತಿರುವ ಜನರನ್ನು ಮತ್ತೊಮ್ಮೆ ದೌರ್ಜನ್ಯವೆಸಗಲೆಂದೇ ಅಮೇರಿಕ ಮುಂದೆ ಬಂದಿದ್ದು. ನಿರಂತರ ನರಹತ್ಯೆಗೆ ನೇತೃತ್ವವನ್ನು ನೀಡುವ ವಂಶೀಯವಾದಿ ಆಡಳಿತಕಾರರೆಲ್ಲರೂ, ಮನುಷ್ಯ ಜೀವಗಳನ್ನು ನೆನೆಯುತ್ತಾ ಇದೀಗ ತುರ್ತಾಗಿ ಎದ್ದು ನಿಂತಿರೋದು ಕೊವಿಡ್-19 ಮರಣವು ಭೂಮಿಯಲ್ಲಿ ಅವಗಣಿಸಲ್ಪಟ್ಟವರನ್ನು ಮಾತ್ರವಲ್ಲ, ಸಾಮಾಜಿಕ, ಆರ್ಥಿಕ ಭೇದವಿಲ್ಲದೆ ಸಕಲರನ್ನೂ ನುಂಗಿ ಹಾಕುತ್ತಿರುವುದರಿಂದಲೇ ಆಗಿದೆ. ಆಗ ಮಾತ್ರ ಉಂಟಾಗುವ ಈ ಅನಿಯಂತ್ರಿತ ಎದೆಗುದಿ ಇದೆಯಲ್ಲಾ, ಅದಾಗಿದೆ ಮರಣಕ್ಕಿಂತಲೂ ಭೀಕರವಾದುದು.

ಅಂಕಿ-ಅಂಶಗಳಿಗೆ ಆಧಾರ: www.who.in, www.dw.com, www.un.org,www.dosomething.org

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...