Homeಚಳವಳಿ’ಬಾಯ್ಕಟ್‌ ಮತ್ತು ಟ್ರೋಲ್‌’ ಹೊರತಾಗಿಯೂ ಲಾಭ ಗಳಿಸಿದ ದೀಪಿಕಾರ ಚಪಾಕ್...

’ಬಾಯ್ಕಟ್‌ ಮತ್ತು ಟ್ರೋಲ್‌’ ಹೊರತಾಗಿಯೂ ಲಾಭ ಗಳಿಸಿದ ದೀಪಿಕಾರ ಚಪಾಕ್…

ಚಪಾಕ್‌ ಕಮರ್ಷಿಯಲ್‌ ಚಿತ್ರವಲ್ಲ. ಹಾಗಾಗಿ ಇದನ್ನು ಕೇವಲ 1700 ಪರದೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಆದರೂ ಅದು ಹೂಡಿದ ಬಂಡವಾಳದ ಡಬಲ್‌ ಗಳಿಸಿದೆ.

- Advertisement -
- Advertisement -

ಖ್ಯಾತ ಬಾಲಿವುಡ್‌ ತಾರೆ ದೀಪಿಕಾ ಪಡುಕೋಣೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ಹೆಜ್ಜೆ ಹಾಕಿ ಹಲ್ಲೆಗೊಳಗಾದ ಜೆಎನ್‌ಯುಎಸ್‌ಯು ಅಧ್ಯಕ್ಷೆ ಆಯಿಶೆ ಘೋಷ್‌ ಪರ ದೃಢವಾಗಿ ನಿಂತರು. ಆ ಮೂಲಕ ಬಹಳಷ್ಟು ಜನ ಅವರ ದಿಟ್ಟತವನ್ನು ಮೆಚ್ಚಿಕೊಂಡರು.

ಆದರೆ ಅದನ್ನು ಸಹಿಸದ ಹಲವಾರು ಬಲಪಂಥೀಯರು ಅವರನ್ನು ಟ್ರೋಲ್‌ ಮಾಡಿದ್ದಲ್ಲದೇ ಅವರ ಚಪಾಕ್‌ ಸಿನಿಮಾವನ್ನು ವಿಕ್ಷಸಬೇಡಿ ಎಂದು ಕರೆನೀಡಿದರು. ಆ ಚಿತ್ರದ ಕುರಿತು ಸುಳ್ಳು ಸುದ್ದಿಗಳನ್ನು ಹರಡಿದರು. ಚಿತ್ರದಲ್ಲಿ ಆರೋಪಿಯ ಹೆಸರನ್ನು ಮುಸ್ಲಿಂ ಬದಲಿಗೆ ಹಿಂದೂವನ್ನಾಗಿ ತಿರುಚಿದ್ದಾರೆ ಎಂದು ಸುಳ್ಳು ಹರಡಿದರು. ಚಪಾಕ್‌ ಚಿತ್ರದ ವಿರುದ್ಧ ಕೆಟ್ಟ ಭಾವನೆ ಮೂಡುವಂತೆ ಏನೆಲ್ಲಾ ಮಾಡಬಹುದು ಎಲ್ಲಾ ಮಾಡಿದರು. ಇಷ್ಟೆಲ್ಲದರ ಹೊರತಾಗಿಯೂ ಟ್ರೋಲ್‌ ಮಾಡಿದವರಿಗೆ ಕಹಿ ಸುದ್ದಿಯೆಂದರೆ ಚಪಾಕ್‌ ಸಿನಿಮಾ ಲಾಭ ಗಳಿಸಿದ್ದು ಅದೇ ದಾರಿಯಲ್ಲಿ ಮುಂದುವರೆದಿದೆ.

ಮೇಘನಾ ಗುಲ್ಜಾರ್ ನಿದೇರ್ಶನ ಮಾಡಿರುವ ಈ ಚಿತ್ರಕ್ಕೆ ಫಾಕ್ಸ್ ಸ್ಟಾರ್ ಸ್ಟುಡಿಯೋಸ್, ದೀಪಿಕಾ ಪಡುಕೋಣೆ, ಗೋವಂದ್ ಸಿಂಗ್ ಸಂಧು ಮತ್ತು ಮೇಘನಾ ಗುಲ್ಜಾರ್ ಹಣ ಹೂಡಿಕೆ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ವಿಕ್ರಂತ್ ಮಾಸ್ಸಿ ನಟಿಸಿರುವ ಚಪಾಕ್‌ ಚಿತ್ರವು ಮಾಧ್ಯಮಗಳು ಹೇಳುವಂತೆ ನಷ್ಟ ಅನುಭವಿಸಿಲ್ಲ ಬದಲಿಗೆ ಲಾಭದ ಹಾದಿಯಲ್ಲಿದೆ. ಹೇಗೆ ಇಲ್ಲಿದೆ ನೋಡಿ ಡಿಟೈಲ್ಸ್…

ಚಪಾಕ್ ಮಧ್ಯಮ ಬಜೆಟ್ ಚಿತ್ರವಾಗಿದ್ದು, ಮುದ್ರಣಗಳ ವೆಚ್ಚ ಮತ್ತು ಪ್ರಚಾರ ಸೇರಿದಂತೆ ಒಟ್ಟು 35 ಕೋಟಿ ರೂಗಳಲ್ಲಿ ತಯಾರಾಗಿದೆ. ಜನವರಿ 10ರಂದು ಬಿಡುಗಡೆಯಾದ ಸಿನಿಮಾ ಸೋಮವಾರದವರೆಗೆ (11 ದಿನಗಳಲ್ಲಿ) ಭಾರತದಲ್ಲಿ ಕೇವಲ ಟಿಕೆಟ್ ಮಾರಾಟದಿಂದಲೇ 32.48 ಕೋಟಿ ರೂ ಗಳಿಸಿದೆ. ಇನ್ನು ಈ ಚಿತ್ರವು ತನ್ನ ಸಂಗೀತ ಹಕ್ಕುಗಳನ್ನು 3 ಕೋಟಿ ರೂ.ಗೆ ಮತ್ತು ಅದರ ಡಿಜಿಟಲ್ + ಸ್ಯಾಟಲೈಟ್‌ ರೈಟ್ಸ್‌ ಅನ್ನು 23 ಕೋಟಿ ರೂ.ಗೆ ಮಾರಾಟ ಮಾಡಿದೆ. ಹಾಗಾಗಿ, ಚಿತ್ರ ಈಗಾಗಲೇ 58.48 ಕೋಟಿ ರೂ. ಗಳಿಸಿದಂತಾಗಿದೆ.

ಅಷ್ಟೆ ಅಲ್ಲದೇ, ವಿದೇಶದಲ್ಲಿ ಟಿಕೆಟ್ ಮಾರಾಟದಿಂದ ಚಪಾಕ್ 13 ಕೋಟಿ ರೂಗಳನ್ನು ಗಳಿಸಿದ್ದು ಅದನ್ನು ಸೇರಿಸಿದರೆ ಚಿತ್ರದ ಒಟ್ಟು ಗಳಿಕೆ 70 ಕೋಟಿ  ದಾಟುತ್ತದೆ. ಅಂದರೆ ನಿರ್ಮಾಣಕ್ಕೆ ಹಾಕಿದ ಎರಡು ಪಟ್ಟು ದುಡ್ಡನ್ನು ಕೇವಲ 11ದಿನಗಳಲ್ಲಿ ಗಳಿಸಿದ್ದು ಇನ್ನು ನೂರಾರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು ಮತ್ತಷ್ಟು ಲಾಭ ಗಳಿಸುವ ನಿರೀಕ್ಷೆಯಿದೆ. ಆದರೆ ಕೇವಲ ಹಣಗಳಿಕೆಯ ಸಿನಿಮಾದ ಯಶಸ್ಸನ್ನು ಸಾರುವುದಿಲ್ಲ ಅಲ್ಲವೇ? ಚಪಾಕ್‌ ಬಗ್ಗೆ ಲಕ್ಷಾಂತರು ಜನರು ಮೆಚ್ಚುಗೆಯ ಮಾತುಗಳನ್ನಾಡಿ ದೀಪಿಕಾಳ ಪ್ರಯತ್ನಕ್ಕೆ ಶಹಬ್ಬಾಶ್‌ ಹೇಳಿದ್ದಾರೆ.

ಇದು ದೀಪಿಕಾ ಅವರ ಹಿಂದಿನ ಚಿತ್ರ ಪದ್ಮಾವತ್ ರೀತಿಯ ಭಾರೀ ಹಣವನ್ನು ಗಳಿಸಿಲ್ಲ. ಆದರೆ ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಜೊತೆಯಾಗಿ ನಟಿಸಿದ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಪದ್ಮಾವತ್‌ ಚಿತ್ರವನ್ನು ಬರೋಬ್ಬರಿ 200 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು ಎಂಬುದನ್ನು ನಾವು ಮರೆಯಬಾರದು. ಆ ಚಿತ್ರ ಭಾರತವೊಂದರಲ್ಲಿಯೇ 3500 ಪರದೆಗಳಲ್ಲಿ ಬಿಡುಗಡೆಯಾಗಿತ್ತು. ಆದರೆ ಚಪಾಕ್‌ ಕಮರ್ಷಿಯಲ್‌ ಚಿತ್ರವಲ್ಲ. ಹಾಗಾಗಿ ಇದನ್ನು ಕೇವಲ 1700 ಪರದೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಆದರೂ ಅದು ಹೂಡಿದ ಬಂಡವಾಳದ ಡಬಲ್‌ ಗಳಿಸಿದೆ.

ಟ್ವಿಟ್ಟರ್‌ನಲ್ಲಿ ಬಾಯ್ಕಟ್‌ ಹೇಳಿ ಕೂಡಲೇ ಜನ ಅದನ್ನು ತಿರಸ್ಕರಿಸುತ್ತಾರೆ ಎಂಬುದು ಸುಳ್ಳು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಹಿಂದೆ ಇದೇ ರೀತಿ ಬಾಯ್ಕಟ್‌ಗೆ ಗುರಿಯಾಗಿದ್ದ ಪದ್ಮಾವತ್ (₹ 580 ಕೋಟಿ),  ಪಿಕೆ (₹ 850 ಕೋಟಿ), ದಂಗಲ್ (Cr 2000 ಕೋಟಿ), ವೀರ್‌ ದಿ ವೆಡ್ಡಿಂಗ್ (₹ 140 ಕೋಟಿ) ಚಿತ್ರಗಳು ಭಾರೀ ಲಾಭ ಮಾಡಿದ್ದವು ಎಂಬುದನ್ನು ನಾವು ಮರೆಯಬಾರದು.

ಅಲ್ಲದೆ, ಕೇಳಬೇಕಾದ ಪ್ರಶ್ನೆಯೆಂದರೆ, ಚಪಾಕ್‌ ವಿಷಯದಲ್ಲಿ ಏಕೆ ಟ್ರೋಲ್‌‌ ಮಾಡಲಾಯಿತು? ಹಲ್ಲೆಗೊಳಗಾದ ವಿದ್ಯಾರ್ಥಿಗಳ ಪರ ನಿಂತಿದ್ದು ದೀಪಿಕಾರವರ ವಯಕ್ತಿಕ ಹಕ್ಕು. ಅದು ಬಿಟ್ಟು ಚಿತ್ರದ ಬಗ್ಗೆ ಆಲೋಚಿಸಿದರೆ ಅದು ಮಹಿಳೆಯರ ಮೇಲೆ ಆಸಿಡ್ ದಾಳಿಯನ್ನು ಎತ್ತಿ ತೋರಿಸುವ ಸಾಮಾಜಿಕ ವಿಷಯದ ಕುರಿತ ಚಲನಚಿತ್ರವಾಗಿದೆ. ಆಸಿಡ್‌ ದಾಳಿಯಂತಹ ಭೀಕರ ಅಪರಾಧ ಮತ್ತು ಅದರ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಚಿತ್ರವಾಗಿದೆ. ಆಸಿಡ್‌ ಮಾರಾಟದ ನಿಷೇಧವನ್ನು ಅಥವಾ ಸುಲಭವಾಗಿ ಲಭ್ಯವಾಗಬಾರದೆಂದು ಪ್ರತಿಪಾದಿಸುವ ಚಿತ್ರವನ್ನು ವಿರೋಧಿಸುವ ಮೂಲಕ ನೀವು ಯಾರ ಪರ ನಿಲ್ಲುತ್ತಿದ್ದೀರಿ? ಟ್ರೋಲ್‌ ಮಾಡಿದವರು ದಯವಿಟ್ಟು ಆಲೋಚಿಸಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...