Homeಚಳವಳಿ’ಬಾಯ್ಕಟ್‌ ಮತ್ತು ಟ್ರೋಲ್‌’ ಹೊರತಾಗಿಯೂ ಲಾಭ ಗಳಿಸಿದ ದೀಪಿಕಾರ ಚಪಾಕ್...

’ಬಾಯ್ಕಟ್‌ ಮತ್ತು ಟ್ರೋಲ್‌’ ಹೊರತಾಗಿಯೂ ಲಾಭ ಗಳಿಸಿದ ದೀಪಿಕಾರ ಚಪಾಕ್…

ಚಪಾಕ್‌ ಕಮರ್ಷಿಯಲ್‌ ಚಿತ್ರವಲ್ಲ. ಹಾಗಾಗಿ ಇದನ್ನು ಕೇವಲ 1700 ಪರದೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಆದರೂ ಅದು ಹೂಡಿದ ಬಂಡವಾಳದ ಡಬಲ್‌ ಗಳಿಸಿದೆ.

- Advertisement -
- Advertisement -

ಖ್ಯಾತ ಬಾಲಿವುಡ್‌ ತಾರೆ ದೀಪಿಕಾ ಪಡುಕೋಣೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ಹೆಜ್ಜೆ ಹಾಕಿ ಹಲ್ಲೆಗೊಳಗಾದ ಜೆಎನ್‌ಯುಎಸ್‌ಯು ಅಧ್ಯಕ್ಷೆ ಆಯಿಶೆ ಘೋಷ್‌ ಪರ ದೃಢವಾಗಿ ನಿಂತರು. ಆ ಮೂಲಕ ಬಹಳಷ್ಟು ಜನ ಅವರ ದಿಟ್ಟತವನ್ನು ಮೆಚ್ಚಿಕೊಂಡರು.

ಆದರೆ ಅದನ್ನು ಸಹಿಸದ ಹಲವಾರು ಬಲಪಂಥೀಯರು ಅವರನ್ನು ಟ್ರೋಲ್‌ ಮಾಡಿದ್ದಲ್ಲದೇ ಅವರ ಚಪಾಕ್‌ ಸಿನಿಮಾವನ್ನು ವಿಕ್ಷಸಬೇಡಿ ಎಂದು ಕರೆನೀಡಿದರು. ಆ ಚಿತ್ರದ ಕುರಿತು ಸುಳ್ಳು ಸುದ್ದಿಗಳನ್ನು ಹರಡಿದರು. ಚಿತ್ರದಲ್ಲಿ ಆರೋಪಿಯ ಹೆಸರನ್ನು ಮುಸ್ಲಿಂ ಬದಲಿಗೆ ಹಿಂದೂವನ್ನಾಗಿ ತಿರುಚಿದ್ದಾರೆ ಎಂದು ಸುಳ್ಳು ಹರಡಿದರು. ಚಪಾಕ್‌ ಚಿತ್ರದ ವಿರುದ್ಧ ಕೆಟ್ಟ ಭಾವನೆ ಮೂಡುವಂತೆ ಏನೆಲ್ಲಾ ಮಾಡಬಹುದು ಎಲ್ಲಾ ಮಾಡಿದರು. ಇಷ್ಟೆಲ್ಲದರ ಹೊರತಾಗಿಯೂ ಟ್ರೋಲ್‌ ಮಾಡಿದವರಿಗೆ ಕಹಿ ಸುದ್ದಿಯೆಂದರೆ ಚಪಾಕ್‌ ಸಿನಿಮಾ ಲಾಭ ಗಳಿಸಿದ್ದು ಅದೇ ದಾರಿಯಲ್ಲಿ ಮುಂದುವರೆದಿದೆ.

ಮೇಘನಾ ಗುಲ್ಜಾರ್ ನಿದೇರ್ಶನ ಮಾಡಿರುವ ಈ ಚಿತ್ರಕ್ಕೆ ಫಾಕ್ಸ್ ಸ್ಟಾರ್ ಸ್ಟುಡಿಯೋಸ್, ದೀಪಿಕಾ ಪಡುಕೋಣೆ, ಗೋವಂದ್ ಸಿಂಗ್ ಸಂಧು ಮತ್ತು ಮೇಘನಾ ಗುಲ್ಜಾರ್ ಹಣ ಹೂಡಿಕೆ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ವಿಕ್ರಂತ್ ಮಾಸ್ಸಿ ನಟಿಸಿರುವ ಚಪಾಕ್‌ ಚಿತ್ರವು ಮಾಧ್ಯಮಗಳು ಹೇಳುವಂತೆ ನಷ್ಟ ಅನುಭವಿಸಿಲ್ಲ ಬದಲಿಗೆ ಲಾಭದ ಹಾದಿಯಲ್ಲಿದೆ. ಹೇಗೆ ಇಲ್ಲಿದೆ ನೋಡಿ ಡಿಟೈಲ್ಸ್…

ಚಪಾಕ್ ಮಧ್ಯಮ ಬಜೆಟ್ ಚಿತ್ರವಾಗಿದ್ದು, ಮುದ್ರಣಗಳ ವೆಚ್ಚ ಮತ್ತು ಪ್ರಚಾರ ಸೇರಿದಂತೆ ಒಟ್ಟು 35 ಕೋಟಿ ರೂಗಳಲ್ಲಿ ತಯಾರಾಗಿದೆ. ಜನವರಿ 10ರಂದು ಬಿಡುಗಡೆಯಾದ ಸಿನಿಮಾ ಸೋಮವಾರದವರೆಗೆ (11 ದಿನಗಳಲ್ಲಿ) ಭಾರತದಲ್ಲಿ ಕೇವಲ ಟಿಕೆಟ್ ಮಾರಾಟದಿಂದಲೇ 32.48 ಕೋಟಿ ರೂ ಗಳಿಸಿದೆ. ಇನ್ನು ಈ ಚಿತ್ರವು ತನ್ನ ಸಂಗೀತ ಹಕ್ಕುಗಳನ್ನು 3 ಕೋಟಿ ರೂ.ಗೆ ಮತ್ತು ಅದರ ಡಿಜಿಟಲ್ + ಸ್ಯಾಟಲೈಟ್‌ ರೈಟ್ಸ್‌ ಅನ್ನು 23 ಕೋಟಿ ರೂ.ಗೆ ಮಾರಾಟ ಮಾಡಿದೆ. ಹಾಗಾಗಿ, ಚಿತ್ರ ಈಗಾಗಲೇ 58.48 ಕೋಟಿ ರೂ. ಗಳಿಸಿದಂತಾಗಿದೆ.

ಅಷ್ಟೆ ಅಲ್ಲದೇ, ವಿದೇಶದಲ್ಲಿ ಟಿಕೆಟ್ ಮಾರಾಟದಿಂದ ಚಪಾಕ್ 13 ಕೋಟಿ ರೂಗಳನ್ನು ಗಳಿಸಿದ್ದು ಅದನ್ನು ಸೇರಿಸಿದರೆ ಚಿತ್ರದ ಒಟ್ಟು ಗಳಿಕೆ 70 ಕೋಟಿ  ದಾಟುತ್ತದೆ. ಅಂದರೆ ನಿರ್ಮಾಣಕ್ಕೆ ಹಾಕಿದ ಎರಡು ಪಟ್ಟು ದುಡ್ಡನ್ನು ಕೇವಲ 11ದಿನಗಳಲ್ಲಿ ಗಳಿಸಿದ್ದು ಇನ್ನು ನೂರಾರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು ಮತ್ತಷ್ಟು ಲಾಭ ಗಳಿಸುವ ನಿರೀಕ್ಷೆಯಿದೆ. ಆದರೆ ಕೇವಲ ಹಣಗಳಿಕೆಯ ಸಿನಿಮಾದ ಯಶಸ್ಸನ್ನು ಸಾರುವುದಿಲ್ಲ ಅಲ್ಲವೇ? ಚಪಾಕ್‌ ಬಗ್ಗೆ ಲಕ್ಷಾಂತರು ಜನರು ಮೆಚ್ಚುಗೆಯ ಮಾತುಗಳನ್ನಾಡಿ ದೀಪಿಕಾಳ ಪ್ರಯತ್ನಕ್ಕೆ ಶಹಬ್ಬಾಶ್‌ ಹೇಳಿದ್ದಾರೆ.

ಇದು ದೀಪಿಕಾ ಅವರ ಹಿಂದಿನ ಚಿತ್ರ ಪದ್ಮಾವತ್ ರೀತಿಯ ಭಾರೀ ಹಣವನ್ನು ಗಳಿಸಿಲ್ಲ. ಆದರೆ ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಜೊತೆಯಾಗಿ ನಟಿಸಿದ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಪದ್ಮಾವತ್‌ ಚಿತ್ರವನ್ನು ಬರೋಬ್ಬರಿ 200 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು ಎಂಬುದನ್ನು ನಾವು ಮರೆಯಬಾರದು. ಆ ಚಿತ್ರ ಭಾರತವೊಂದರಲ್ಲಿಯೇ 3500 ಪರದೆಗಳಲ್ಲಿ ಬಿಡುಗಡೆಯಾಗಿತ್ತು. ಆದರೆ ಚಪಾಕ್‌ ಕಮರ್ಷಿಯಲ್‌ ಚಿತ್ರವಲ್ಲ. ಹಾಗಾಗಿ ಇದನ್ನು ಕೇವಲ 1700 ಪರದೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಆದರೂ ಅದು ಹೂಡಿದ ಬಂಡವಾಳದ ಡಬಲ್‌ ಗಳಿಸಿದೆ.

ಟ್ವಿಟ್ಟರ್‌ನಲ್ಲಿ ಬಾಯ್ಕಟ್‌ ಹೇಳಿ ಕೂಡಲೇ ಜನ ಅದನ್ನು ತಿರಸ್ಕರಿಸುತ್ತಾರೆ ಎಂಬುದು ಸುಳ್ಳು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಹಿಂದೆ ಇದೇ ರೀತಿ ಬಾಯ್ಕಟ್‌ಗೆ ಗುರಿಯಾಗಿದ್ದ ಪದ್ಮಾವತ್ (₹ 580 ಕೋಟಿ),  ಪಿಕೆ (₹ 850 ಕೋಟಿ), ದಂಗಲ್ (Cr 2000 ಕೋಟಿ), ವೀರ್‌ ದಿ ವೆಡ್ಡಿಂಗ್ (₹ 140 ಕೋಟಿ) ಚಿತ್ರಗಳು ಭಾರೀ ಲಾಭ ಮಾಡಿದ್ದವು ಎಂಬುದನ್ನು ನಾವು ಮರೆಯಬಾರದು.

ಅಲ್ಲದೆ, ಕೇಳಬೇಕಾದ ಪ್ರಶ್ನೆಯೆಂದರೆ, ಚಪಾಕ್‌ ವಿಷಯದಲ್ಲಿ ಏಕೆ ಟ್ರೋಲ್‌‌ ಮಾಡಲಾಯಿತು? ಹಲ್ಲೆಗೊಳಗಾದ ವಿದ್ಯಾರ್ಥಿಗಳ ಪರ ನಿಂತಿದ್ದು ದೀಪಿಕಾರವರ ವಯಕ್ತಿಕ ಹಕ್ಕು. ಅದು ಬಿಟ್ಟು ಚಿತ್ರದ ಬಗ್ಗೆ ಆಲೋಚಿಸಿದರೆ ಅದು ಮಹಿಳೆಯರ ಮೇಲೆ ಆಸಿಡ್ ದಾಳಿಯನ್ನು ಎತ್ತಿ ತೋರಿಸುವ ಸಾಮಾಜಿಕ ವಿಷಯದ ಕುರಿತ ಚಲನಚಿತ್ರವಾಗಿದೆ. ಆಸಿಡ್‌ ದಾಳಿಯಂತಹ ಭೀಕರ ಅಪರಾಧ ಮತ್ತು ಅದರ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಚಿತ್ರವಾಗಿದೆ. ಆಸಿಡ್‌ ಮಾರಾಟದ ನಿಷೇಧವನ್ನು ಅಥವಾ ಸುಲಭವಾಗಿ ಲಭ್ಯವಾಗಬಾರದೆಂದು ಪ್ರತಿಪಾದಿಸುವ ಚಿತ್ರವನ್ನು ವಿರೋಧಿಸುವ ಮೂಲಕ ನೀವು ಯಾರ ಪರ ನಿಲ್ಲುತ್ತಿದ್ದೀರಿ? ಟ್ರೋಲ್‌ ಮಾಡಿದವರು ದಯವಿಟ್ಟು ಆಲೋಚಿಸಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...