Homeಚಳವಳಿಪ್ರಜಾಪ್ರಭುತ್ವ v/s ಜಾತಿಪ್ರಭುತ್ವ Democracy v/s Castocracy : ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ಪ್ರಜಾಪ್ರಭುತ್ವ v/s ಜಾತಿಪ್ರಭುತ್ವ Democracy v/s Castocracy : ಡಾ. ಮೂಡ್ನಾಕೂಡು ಚಿನ್ನಸ್ವಾಮಿ

- Advertisement -
- Advertisement -

ರಂಗಾಯಣಕ್ಕಾಗಿ ಬಹುರೂಪಿ ಎಂಬ ನಾಟಕವನ್ನು ಬರೆದು ನಿರ್ದೇಶಿಸಿದ ಚಾಮರಾಜನಗರ ಜಿಲ್ಲೆಯ ಮೂಡ್ನಾಕೂಡು ಚಿನ್ನಸ್ವಾಮಿಯವರು ನಿಜಕ್ಕೂ ಬಹುರೂಪಿಯೇ. ಕವಿ, ನಾಟಕಕಾರ, ನಟ, ರಂಗನಿರ್ದೇಶಕ, ಚಿಂತಕ ಹೀಗೆ ಬಹುಆಯಾಮವುಳ್ಳ ಲೇಖಕರಾದ ಅವರು ಕೆಎಸ್‍ಆರ್‌ಟಿಸಿಯಲ್ಲಿ ಆರ್ಥಿಕ ಸಲಹೆಗಾರರಾಗಿ ಗೊತ್ತಿದ್ದರೆ, ಸಾಹಿತ್ಯದ ಓದುಗರಲ್ಲದ ಲಕ್ಷಾಂತರ ಜನರಿಗೆ ‘ನಾನೊಂದು ಮರವಾಗಿದ್ದರೆ’ ಹಾಡಿನ ಕರ್ತೃವಾಗಿ ಗೊತ್ತು. ಭಾರತದ ಐದು ಭಾಷೆಗಳಲ್ಲದೇ ಹೀಬ್ರೂ, ಸ್ಪ್ಯಾನಿಷ್, ಇಂಗ್ಲಿಷ್ ಭಾಷೆಗಳಿಗೂ ಅವರ ಕೃತಿಗಳು ಅನುವಾದವಾಗಿದ್ದು, ವಿವಿಧ ಪ್ರಕಾರಗಳ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಕನ್ನಡದ ಪ್ರಮುಖ ಬರಹಗಾರರಲ್ಲೊಬ್ಬರು.

ಭಾರತದ ಪ್ರಜಾಪ್ರಭುತ್ವವು ಜಾತಿಯ ಕಿಲುಬು ಹಿಡಿದ ಒಂದು ಪಾತ್ರೆ. ಅಲ್ಲಿಗೆ ಪಾಯಸ ಹಾಕಿದರೂ ಅಷ್ಟೆ, ನೀರು ಹಾಕಿದರೂ ಅಷ್ಟೆ; ವಿಷವಾಗಿ ಪರಿವರ್ತನೆಯಾಗುತ್ತದೆ. ಪ್ರಜಾಪ್ರಭುತ್ವದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಕಿಲುಬು ಹಿಡಿದ ಪಾತ್ರೆಗಳೇ ಆಗಿವೆ. ನಾಲ್ಕನೆಯ ಅಂಗವೆಂದು ನಂಬಿಕೊಂಡು ಬಂದಿರುವ ಮಾಧ್ಯಮ ಕ್ಷೇತ್ರವು ಹೆಚ್ಚು ಕಲುಷಿತವಾಗಿರುವುದು ತಿಳಿದಿರುವ ಸಂಗತಿ. ಆತ್ಮಪ್ರತ್ಯಯವುಳ್ಳ ಹಿಂದೂ ಒಬ್ಬ ನಾನು ಜಾತ್ಯತೀತ ಎಂದು ಕರೆದುಕೊಳ್ಳಲು ಸಾಧ್ಯವಿಲ್ಲ. ಜಾತಿ ಭ್ರಷ್ಟಾಚಾರ, ಸ್ವಜನಪಕ್ಷಪಾತವಷ್ಟೇ ಅಲ್ಲ, ಎಲ್ಲ ಅನೈತಿಕತೆಯ ಗಂಗೋತ್ರಿ. ಜಾತಿ ಎಂಬುದು ವಿಷ, ಜಾತಿ ಎಂಬುದು ವಿನಾಶಕಾರಿ ಎಂದು ಹೇಳುತ್ತೇವೆ. ಆದರೆ ನಮ್ಮ ಶ್ರಮವೆಲ್ಲವೂ ಜಾತಿಯನ್ನು ಉಳಿಸಿಕೊಳ್ಳುವುದರಲ್ಲೇ ವ್ಯಯವಾಗುತ್ತಿದೆ. ಈ ದೇಶದ ಎಲ್ಲ ರೋಗಗಳ, ಅನಿಷ್ಟಗಳ ಮೂಲ ಜಾತಿ ಎಂಬುದು ಇನ್ನೂ ನಮ್ಮ ಅರಿವಿಗೆ ಬಂದಿಲ್ಲ. ನಮ್ಮ ದೇಶದ ಆರ್ಥಿಕತೆ ಪ್ರಪಂಚದ ಆರ್ಥಿಕತೆಯಲ್ಲಿ ಐದನೆಯದೋ, ಆರನೆಯದೋ ಎಂದು ಹೇಳಿಕೊಳ್ಳಲು ನನಗೆ ನಾಚಿಕೆಯೆನಿಸುತ್ತದೆ. ಯಾಕೆಂದರೆ ಅದರ ಎಂಬತ್ತು ಭಾಗ ಶೇ.ಒಂದರಷ್ಟು ಮೇಲ್ಜಾತಿ ಜನರ ಬಳಿ ಅಥವಾ 56 ಕುಟುಂಬಗಳ ಒಳಗೆ ಅಡಕವಾಗಿದ್ದರೆ ಅದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೊಂದಿಲ್ಲ. ಆದ್ದರಿಂದ ಈ ದೇಶದಲ್ಲಿ ಒಬ್ಬ ಒಳ್ಳೆಯ ಆಡಳಿತಗಾರ ಅಡ್ರೆಸ್ ಮಾಡಬೇಕಾಗಿರುವುದು ಜಾತಿಯನ್ನು, ಅಸಮಾನತೆಯನ್ನು. ಜಾತಿಯ ಕಾರಣದಿಂದಾಗಿ ಈ ದೇಶದ ಪ್ರತಿಭೆಯ ವ್ಯಾಪ್ತಿಯು ಕುಗ್ಗಿಹೋಗಿದೆ, ಅವಕಾಶಗಳ ವ್ಯೋಮವು ಕಿರಿದಾಗಿದೆ ಎಂಬುದು ಎಲ್ಲಿಯವರೆಗೆ ನಮ್ಮ ತಿಳಿವಳಿಕೆಗೆ ಬರುವುದಿಲ್ಲವೋ ಅಲ್ಲಿಯವರೆಗೆ ದೇಶದ ಸರ್ವಾಂಗೀಣ ಏಳಿಗೆ ಎಂಬುದಿಲ್ಲ.

ಸಂವಿಧಾನವನ್ನು ಅಂಬೇಡ್ಕರ್ ರಚಿಸಿಟ್ಟು ಹೋದರು. ಆದರೆ ಜಾತಿವಾದಿಗಳ ಕೈಯಲ್ಲಿ ಸಿಕ್ಕಿ ಅದರ ಆಶಯಗಳು ನಗಣ್ಯವಾಗಿವೆ. ಜಾತಿವಾದವೇ ಹೂರಣವಾಗಿ ಸಂವಿಧಾನ ಅದರ ಕವಚವಾಗಿದೆ. ಇಂಡಿಯಾದ ಹಿಂದೂ ಜಾತಿಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಬಹುದು.
1. ಅಲ್ಪಸಂಖ್ಯಾತ ಬ್ರಾಹ್ಮಣೀಯ ಜಾತಿಗಳು
2. ಬಲಾಢ್ಯ ಊಳಿಗಮಾನ್ಯ ಜಾತಿಗಳು
3. ಬಹುಜನ ಹಿಂದುಳಿದ ಜಾತಿಗಳು ಮತ್ತು
4. ಬಹುಜನ ದಲಿತ ಜಾತಿಗಳು.

ಜಾತಿ ಪ್ರಗತಿ ವಿರೋಧಿ, ವಿನಾಶಕಾರಕ ಎಂದು ಒಬ್ಬ ಬ್ರಾಹ್ಮಣೀಯ ಮೇಲ್ಜಾತೀ ರಾಜಕಾರಣಿಗೆ ತಿಳಿಯುವುದಿಲ್ಲವೆಂದಲ್ಲ. ಅವನು ಜಾತಿವಿನಾಶದತ್ತ ಕಾರ್ಯೋನ್ಮುಖನಾದರೆ ತನ್ನ ಬುಡಕ್ಕೇ ಕೊಡಲಿ ಬೀಳುತ್ತದೆ ಎಂದು ಅವನಿಗೆ ತಿಳಿದಿದೆ. ಜಾತಿ ಪೋಷಣೆಯೇ ತನ್ನ ಅಸ್ತಿತ್ವಕ್ಕೆ ಆಧಾರ ಎಂದು ತಿಳಿದಿರುವುದರಿಂದಲೇ ಜಾತಿ ವಿಷಯ ಬಂದಾಗ ಅವನು ಜಾಣಗುರುಡು ಪ್ರದರ್ಶಿಸುತ್ತಾನೆ. ಬಲಾಢ್ಯ ಊಳಿಗಮಾನ್ಯ ಜಾತಿಗಳ ಪ್ರತಿನಿಧಿಗಳು ಆರಿಸಿ ಬರಲು ತಮ್ಮ ಜಾತಿಗಳನ್ನೆ ನೆಚ್ಚಿಕೊಂಡಿರುವುದರಿಂದ ಜಾತಿವಿನಾಶ ಅವರಿಗೆ ಬೇಕಾಗಿರುವುದಿಲ್ಲ. ಮೆದುಳನ್ನೇ ಬಂಡವಾಳ ಮಾಡಿಕೊಂಡಿರುವ ಬ್ರಾಹ್ಮಣೀಯ ಜಾತಿಜನ ಅಸಮಾನತೆ, ಭ್ರಷ್ಟಾಚಾರ ಎಲ್ಲ ಸಮಾಜಗಳಲ್ಲಿಯೂ ಇರುವಂಥದ್ದೆ ಎಂದೂ, ಜಾತಿಯಿಂದ ನಷ್ಟವೇನೂ ಇಲ್ಲ ಎಂದೂ ಪ್ರಚಾರ ಮಾಡಿಕೊಂಡು ಬರುತ್ತಿದ್ದಾರೆ. ಬಲಾಢ್ಯ ಊಳಿಗಮಾನ್ಯ ಜಾತಿಗಳು ತಮ್ಮ ಭುಜಬಲ ಮತ್ತು ಧನಬಲದಿಂದ ಬಹುಜನರನ್ನು ಹತ್ತಿಕ್ಕುತ್ತ ಜಾತಿವಾದವನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ವಾಸ್ತವವಾಗಿ ಇವೆರಡು ವರ್ಗಗಳು ಜಾತಿವ್ಯವಸ್ಥೆಯ ಪರಮ ಫಲಾನುಭವಿಗಳಾಗಿರುವುದರಿಂದ ಜಾತಿವಿನಾಶಕ್ಕೆ ಅವರು ವಿಮುಖರಾಗಿರುವುದು ಸಹಜವೇ ಆಗಿದೆ. ನಮ್ಮ ಜಾತಿಯ ವಕೀಲ, ನಮ್ಮ ಜಾತಿಯ ನ್ಯಾಯಾಧೀಶ, ನಮ್ಮವನೇ ಆದ ಮಹಾಲೇಖಪಾಲ ಮತ್ತು ನಮ್ಮ ಕೈಬೆರಳ ತುದಿಯಲ್ಲಿ ಆಡಿಸಬಹುದಾದ ಪೊಲೀಸ್ ಮುಖ್ಯಸ್ಥ ಇರುವವರೆಗೆ ಅವರಿಗೆ ಜಾತಿ ನಕಾರಾತ್ಮಕ ಎನಿಸುವುದಿಲ್ಲ. ಇನ್ನು, ಬಹುಜನ ಹಿಂದುಳಿದ ಜಾತಿಗಳು ಮತ್ತು ಬಹುಜನ ದಲಿತ ಜಾತಿಗಳು ಮಾತ್ರ ಜಾತಿವಿರೋಧಿ ಚಳವಳಿಗಳ ಭಾಗವಾಗಿದ್ದಾರೆ. ಇದು ಕಾಳ್ಗಿಚ್ಚಿನ ಎದುರು ಆಗಾಗ ಬಂದುಹೋಗುವ ತುಂತುರು ಮಳೆಯಷ್ಟೆ ಅಪ್ರಯೋಜಕವಾಗಿದೆ.

ನಮ್ಮನ್ನು ಆಳುವ ರಾಜಕಾರಣಿಗಳಿಗೆ ಆಳ್ವಿಕೆಯ ಮೂಲಪಾಠಗಳೇ ತಿಳಿದಿರುವುದಿಲ್ಲ. ಅನ್ನ, ಬಟ್ಟೆ, ವಸತಿ ಅಥವಾ ಆರೋಗ್ಯ, ವಿದ್ಯೆ, ವಿಮೆ ಇಂಥವು ಇವರ ಮೊದಲ ಆಯ್ಕೆಯಾಗಿರುವುದಿಲ್ಲ. ಪಂಚಾಯಿತಿ ಸದಸ್ಯರಿಂದ ಹಿಡಿದು ಸಂಸತ್ ಸದಸ್ಯರವರೆಗೆ ಅವರು ರಾಜಕಾರಣಕ್ಕೆ ಬರುವುದು ವಾಮಮಾರ್ಗದಲ್ಲಿ ಹಣ ಗಳಿಸಲು ಮತ್ತು ಅದನ್ನು ಬಳಸಿ ಮುಂದಿನ ಚುನಾವಣೆಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಎಂಬುದು ಖಚಿತವಾಗಿದೆ. ನಮ್ಮ ಶಾಸಕರು, ಸಂಸದರು ತಮ್ಮ ಅನುದಾನವನ್ನು ಬಳಸುವ ಪರಿಯನ್ನು ನೋಡಿದರೆ ಇದು ತಿಳಿಯುತ್ತದೆ. ಅವರು ಶಾಲೆಗಳನ್ನು ಉತ್ತಮಪಡಿಸುವುದಕ್ಕಿಂತಲೂ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಹೆಚ್ಚು ಖರ್ಚು ಮಾಡಿರುತ್ತಾರೆ! ರೈತರ ಹೊಲ, ಮನೆ ನೋಡುವುದಿಲ್ಲ, ಮಳೆಬೆಳೆ ವಿಚಾರಿಸುವುದಿಲ್ಲ. ತಮ್ಮ ಕ್ಷೇತ್ರದ ಯಾವುದೇ ಕುಟುಂಬದ ಮದುವೆ, ಮುಂಜಿ ಶುಭಕಾರ್ಯದಲ್ಲಿ ಅಥವಾ ಸಾವು ಸಂಭವಿಸಿದಲ್ಲಿ ಹಾಜರಿರುತ್ತಾರೆ. ಓಟು ಕೀಳುವುದಕ್ಕೆ ಭಾವನಾತ್ಮಕ ನಂಟು ಬೆಳೆಸಿಕೊಳ್ಳುವುದು (ಓಟುಗಳನ್ನು ಹಣ ಕೊಟ್ಟು ಖರೀದಿಸಬೇಕೆಂದು ತಿಳಿದೂ) ಅವರಿಗೆ ಅನಿವಾರ್ಯವಾಗಿರುತ್ತದೆ.

ಇನ್ನು ಮೇಲುಸ್ತರದ ರಾಜಕಾರಣಿಗಳು ಬೇರೊಂದು ರೀತಿಯಲ್ಲಿ ತಮ್ಮ ವ್ಯಾಪಾರದಲ್ಲಿ ತೊಡಗಿರುತ್ತಾರೆ. ಇವರು ಹೆಚ್ಚಾಗಿ ಸರ್ಕಾರದ ನೀತಿ ನಿರೂಪಕರು. ಅಪಾರ ಹಣ ಇವರ ಬೆನ್ನಿಗಿರುತ್ತದೆ. ಪಕ್ಷ ಕಟ್ಟುವುದೇ ಇವರ ಕೆಲಸ. ಸರ್ಕಾರದ ಕೆಲಸಕ್ಕಿಂತಲೂ ಅದು ಮುಖ್ಯ ಎಂದು ತಿಳಿದವರು, ಅದಕ್ಕಾಗಿ ಭ್ರಷ್ಟಾಚಾರ ಅನಿವಾರ್ಯ ಎಂದು ನಂಬಿರುವವರು ಇವರು. ಅದರ ಜೊತೆಗೇ ತಮ್ಮ ಜಾತಿಯನ್ನು, ಮಠಗಳನ್ನೂ ಬೆಳೆಸುತ್ತಾರೆ. ತಮ್ಮ ಓಟುಗಳನ್ನು ಖಚಿತಪಡಿಸಿಕೊಳ್ಳುತ್ತಾರೆ. ಎಪ್ಪತ್ತು ವರ್ಷಗಳು ಇಂಥ ರಾಜಕಾರಣಿಗಳಿಂದ ನಾವು ಆಳಿಸಿಕೊಂಡಿದ್ದೇವೆ.

ಈ ದೇಶದಲ್ಲಿ ರಾಜ್ಯಾಧಿಕಾರ ಎನ್ನುವುದು ಕೆಟ್ಟರಕ್ತವಾಗಿದೆ. ಆ ರಕ್ತದ ರುಚಿ ಮಾನ, ಪ್ರಾಣದ ರುಚಿಗಿಂತಲು ಮಿಗಿಲು. ಒಬ್ಬ ಹಿರಿಯ ಮಂತ್ರಿ ಭ್ರಷ್ಟಾಚಾರದ ಹಗರಣದಲ್ಲಿ ಜೈಲಿಗೆ ಹೋದವನು ಹಿಂದಿರುಗಿ ಬರುವಾಗ ತನ್ನ ಕೈ ಮೇಲೆತ್ತಿ ಎರಡು ಬೆರಳುಗಳನ್ನು ಆಡಿಸುತ್ತಾ ವಿಜಯಶಾಲಿಯಾದಂತೆ ಹೊರಬರುತ್ತಾನೆ. ಭ್ರಷ್ಟಾಚಾರ ಕಣ್ಣಿಗೆ ರಾಚುವಂತೆ ಕಾಣುತ್ತಿದ್ದರೂ ಅವನ ಜಾತಿಯ ಮಠಾಧೀಶರು ಬೆಂಬಲ ಸೂಚಿಸಲು ಬೀದಿಗಿಳಿಯುತ್ತಾರೆ. ಮತ್ತೊಬ್ಬ ಭ್ರಷ್ಟ ಮಂತ್ರಿ ಜೈಲು ಪಾಲಾದರು ಎಂದು ಅವನ ಜಾತಿಜನ ಮಂತ್ರಿ ಶಾಸಕರ ಮುಂದಾಳತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತಾರೆ. ಭ್ರಷ್ಟರನ್ನು ಯಾಕೆ ಬೆಂಬಲಿಸುತ್ತೀರಿ ಎಂದು ಕೇಳಿನೋಡಿ. ಅವರ ಉತ್ತರ- ಬೇರೆ ಜಾತಿಯಲ್ಲಿ ಭ್ರಷ್ಟರಿಲ್ಲವೆ? ಎಂಬುದಾಗಿರುತ್ತದೆ. ಅವರ ನಾಯಕರು ಸಜ್ಜನರಲ್ಲವೆಂದು ಬೆಂಬಲಿಸುವ ಮಠಾಧೀಶರಿಗೂ, ರೈತರಿಗೂ, ಶ್ರಮಿಕರಿಗೂ, ಕೂಲಿಕಾರರಿಗೂ ಗೊತ್ತಿರುತ್ತದೆ. ಈ ನಾಯಕನಿಗೂ ತನ್ನ ಕುಕೃತ್ಯಗಳಿಂದಲೇ ಅವರನ್ನು ಸಂಪ್ರೀತಗೊಳಿಸಬೇಕೆಂದು ತಿಳಿದಿರುತ್ತದೆ. ಕೆಲವು ಅಪವಾದಗಳನ್ನು ಹೊರತುಪಡಿಸಿ ಈ ಮಾತುಗಳನ್ನು ಹೇಳುತ್ತಿದ್ದೇನೆ.

ಇತ್ತೀಚೆಗೆ ಮಥುರಾದಲ್ಲಿ ಭಾಷಣ ಮಾಡುವಾಗ ಮಾನ್ಯ ಪ್ರಧಾನ ಮಂತ್ರಿಗಳು “ಕೆಲವರಿಗೆ ಓಂ ಮತ್ತು ಗೋವು ಶಬ್ದಗಳು ಹಿಡಿಸುವುದಿಲ್ಲ” ಎಂದು ಹೇಳಿದ್ದಾರೆ. ಇದು ಯೋಚಿಸಬೇಕಾದ ವಿಷಯವೆ? ಸದಾ ಬಾಯಲ್ಲಿ ಅಭಿವೃದ್ಧಿ ಮಂತ್ರ ಪಠಿಸುವ ಇವರ ಪ್ರಥಮ ಕಾಳಜಿ ಏನು ಎಂಬುದನ್ನು ಹೊರಹಾಕಿದ್ದಾರೆ. ಒಂದು ವರ್ಗದ ಆದ್ಯತೆಗಳನ್ನೆ ಒತ್ತಿ ಹೇಳುವ ಇವರು ಕಿಂಚಿತ್ ಅಳುಕು ಇಲ್ಲದೆ ನಾನು ಜಾತ್ಯತೀತನಲ್ಲ ಎಂಬುದನ್ನು ಸಾರಿ ಹೇಳಿದ್ದಾರೆ. ಹಾಗೆ ಹೇಳುವುದರ ಮೂಲಕ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ. ಸಂವಿಧಾನವನ್ನು ರಕ್ಷಿಸಬೇಕಾದವರು ಭಕ್ಷಣೆಗೆ ಇಳಿದಿದ್ದಾರೆ ಎಂದು ನಿರ್ವಾಹವಿಲ್ಲದೆ ಹೇಳಬೇಕಾಗಿದೆ. ನಮ್ಮ ನಾಯಕ ಹೀಗೆ ಹೇಳುತ್ತಾರೆಂದು ಅರಿತ ಅವರ ಹಿಂಬಾಲಕರು ಅನ್ಯಧರ್ಮೀಯರನ್ನು ಹೊಡೆದು, ಬಡಿದು ‘ಜೈಶ್ರೀರಾಮ್’ ಎಂದು ಹೇಳಿಸುತ್ತಾರೆ. ಮನುಷ್ಯನನ್ನು ಕೊಂದು (ಲಿಂಚಿಸಿ) ಗೋವನ್ನು ರಕ್ಷಿಸುತ್ತಾರೆ. ಇಂತಹ ದೌರ್ಜನ್ಯಗಳ ವಿರುದ್ಧ ದನಿ ಎತ್ತಿದ ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಅಂಥವರನ್ನು ಬೇಟೆಯಾಡುತ್ತಾರೆ. ಆದ್ದರಿಂದ ಜಾತ್ಯತೀತವಾದಿ ಆಗಿರುವುದಕ್ಕಿಂತಲೂ ಸಂವಿಧಾನವಾದಿ ಆಗಿರುವುದು ಇಂದಿನ ತುರ್ತು ಎಂದು ಹೇಳಲೇಬೇಕಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...