Homeಚಳವಳಿಪ್ರಜಾಪ್ರಭುತ್ವ v/s ಜಾತಿಪ್ರಭುತ್ವ Democracy v/s Castocracy : ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ಪ್ರಜಾಪ್ರಭುತ್ವ v/s ಜಾತಿಪ್ರಭುತ್ವ Democracy v/s Castocracy : ಡಾ. ಮೂಡ್ನಾಕೂಡು ಚಿನ್ನಸ್ವಾಮಿ

- Advertisement -
- Advertisement -

ರಂಗಾಯಣಕ್ಕಾಗಿ ಬಹುರೂಪಿ ಎಂಬ ನಾಟಕವನ್ನು ಬರೆದು ನಿರ್ದೇಶಿಸಿದ ಚಾಮರಾಜನಗರ ಜಿಲ್ಲೆಯ ಮೂಡ್ನಾಕೂಡು ಚಿನ್ನಸ್ವಾಮಿಯವರು ನಿಜಕ್ಕೂ ಬಹುರೂಪಿಯೇ. ಕವಿ, ನಾಟಕಕಾರ, ನಟ, ರಂಗನಿರ್ದೇಶಕ, ಚಿಂತಕ ಹೀಗೆ ಬಹುಆಯಾಮವುಳ್ಳ ಲೇಖಕರಾದ ಅವರು ಕೆಎಸ್‍ಆರ್‌ಟಿಸಿಯಲ್ಲಿ ಆರ್ಥಿಕ ಸಲಹೆಗಾರರಾಗಿ ಗೊತ್ತಿದ್ದರೆ, ಸಾಹಿತ್ಯದ ಓದುಗರಲ್ಲದ ಲಕ್ಷಾಂತರ ಜನರಿಗೆ ‘ನಾನೊಂದು ಮರವಾಗಿದ್ದರೆ’ ಹಾಡಿನ ಕರ್ತೃವಾಗಿ ಗೊತ್ತು. ಭಾರತದ ಐದು ಭಾಷೆಗಳಲ್ಲದೇ ಹೀಬ್ರೂ, ಸ್ಪ್ಯಾನಿಷ್, ಇಂಗ್ಲಿಷ್ ಭಾಷೆಗಳಿಗೂ ಅವರ ಕೃತಿಗಳು ಅನುವಾದವಾಗಿದ್ದು, ವಿವಿಧ ಪ್ರಕಾರಗಳ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಕನ್ನಡದ ಪ್ರಮುಖ ಬರಹಗಾರರಲ್ಲೊಬ್ಬರು.

ಭಾರತದ ಪ್ರಜಾಪ್ರಭುತ್ವವು ಜಾತಿಯ ಕಿಲುಬು ಹಿಡಿದ ಒಂದು ಪಾತ್ರೆ. ಅಲ್ಲಿಗೆ ಪಾಯಸ ಹಾಕಿದರೂ ಅಷ್ಟೆ, ನೀರು ಹಾಕಿದರೂ ಅಷ್ಟೆ; ವಿಷವಾಗಿ ಪರಿವರ್ತನೆಯಾಗುತ್ತದೆ. ಪ್ರಜಾಪ್ರಭುತ್ವದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಕಿಲುಬು ಹಿಡಿದ ಪಾತ್ರೆಗಳೇ ಆಗಿವೆ. ನಾಲ್ಕನೆಯ ಅಂಗವೆಂದು ನಂಬಿಕೊಂಡು ಬಂದಿರುವ ಮಾಧ್ಯಮ ಕ್ಷೇತ್ರವು ಹೆಚ್ಚು ಕಲುಷಿತವಾಗಿರುವುದು ತಿಳಿದಿರುವ ಸಂಗತಿ. ಆತ್ಮಪ್ರತ್ಯಯವುಳ್ಳ ಹಿಂದೂ ಒಬ್ಬ ನಾನು ಜಾತ್ಯತೀತ ಎಂದು ಕರೆದುಕೊಳ್ಳಲು ಸಾಧ್ಯವಿಲ್ಲ. ಜಾತಿ ಭ್ರಷ್ಟಾಚಾರ, ಸ್ವಜನಪಕ್ಷಪಾತವಷ್ಟೇ ಅಲ್ಲ, ಎಲ್ಲ ಅನೈತಿಕತೆಯ ಗಂಗೋತ್ರಿ. ಜಾತಿ ಎಂಬುದು ವಿಷ, ಜಾತಿ ಎಂಬುದು ವಿನಾಶಕಾರಿ ಎಂದು ಹೇಳುತ್ತೇವೆ. ಆದರೆ ನಮ್ಮ ಶ್ರಮವೆಲ್ಲವೂ ಜಾತಿಯನ್ನು ಉಳಿಸಿಕೊಳ್ಳುವುದರಲ್ಲೇ ವ್ಯಯವಾಗುತ್ತಿದೆ. ಈ ದೇಶದ ಎಲ್ಲ ರೋಗಗಳ, ಅನಿಷ್ಟಗಳ ಮೂಲ ಜಾತಿ ಎಂಬುದು ಇನ್ನೂ ನಮ್ಮ ಅರಿವಿಗೆ ಬಂದಿಲ್ಲ. ನಮ್ಮ ದೇಶದ ಆರ್ಥಿಕತೆ ಪ್ರಪಂಚದ ಆರ್ಥಿಕತೆಯಲ್ಲಿ ಐದನೆಯದೋ, ಆರನೆಯದೋ ಎಂದು ಹೇಳಿಕೊಳ್ಳಲು ನನಗೆ ನಾಚಿಕೆಯೆನಿಸುತ್ತದೆ. ಯಾಕೆಂದರೆ ಅದರ ಎಂಬತ್ತು ಭಾಗ ಶೇ.ಒಂದರಷ್ಟು ಮೇಲ್ಜಾತಿ ಜನರ ಬಳಿ ಅಥವಾ 56 ಕುಟುಂಬಗಳ ಒಳಗೆ ಅಡಕವಾಗಿದ್ದರೆ ಅದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೊಂದಿಲ್ಲ. ಆದ್ದರಿಂದ ಈ ದೇಶದಲ್ಲಿ ಒಬ್ಬ ಒಳ್ಳೆಯ ಆಡಳಿತಗಾರ ಅಡ್ರೆಸ್ ಮಾಡಬೇಕಾಗಿರುವುದು ಜಾತಿಯನ್ನು, ಅಸಮಾನತೆಯನ್ನು. ಜಾತಿಯ ಕಾರಣದಿಂದಾಗಿ ಈ ದೇಶದ ಪ್ರತಿಭೆಯ ವ್ಯಾಪ್ತಿಯು ಕುಗ್ಗಿಹೋಗಿದೆ, ಅವಕಾಶಗಳ ವ್ಯೋಮವು ಕಿರಿದಾಗಿದೆ ಎಂಬುದು ಎಲ್ಲಿಯವರೆಗೆ ನಮ್ಮ ತಿಳಿವಳಿಕೆಗೆ ಬರುವುದಿಲ್ಲವೋ ಅಲ್ಲಿಯವರೆಗೆ ದೇಶದ ಸರ್ವಾಂಗೀಣ ಏಳಿಗೆ ಎಂಬುದಿಲ್ಲ.

ಸಂವಿಧಾನವನ್ನು ಅಂಬೇಡ್ಕರ್ ರಚಿಸಿಟ್ಟು ಹೋದರು. ಆದರೆ ಜಾತಿವಾದಿಗಳ ಕೈಯಲ್ಲಿ ಸಿಕ್ಕಿ ಅದರ ಆಶಯಗಳು ನಗಣ್ಯವಾಗಿವೆ. ಜಾತಿವಾದವೇ ಹೂರಣವಾಗಿ ಸಂವಿಧಾನ ಅದರ ಕವಚವಾಗಿದೆ. ಇಂಡಿಯಾದ ಹಿಂದೂ ಜಾತಿಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಬಹುದು.
1. ಅಲ್ಪಸಂಖ್ಯಾತ ಬ್ರಾಹ್ಮಣೀಯ ಜಾತಿಗಳು
2. ಬಲಾಢ್ಯ ಊಳಿಗಮಾನ್ಯ ಜಾತಿಗಳು
3. ಬಹುಜನ ಹಿಂದುಳಿದ ಜಾತಿಗಳು ಮತ್ತು
4. ಬಹುಜನ ದಲಿತ ಜಾತಿಗಳು.

ಜಾತಿ ಪ್ರಗತಿ ವಿರೋಧಿ, ವಿನಾಶಕಾರಕ ಎಂದು ಒಬ್ಬ ಬ್ರಾಹ್ಮಣೀಯ ಮೇಲ್ಜಾತೀ ರಾಜಕಾರಣಿಗೆ ತಿಳಿಯುವುದಿಲ್ಲವೆಂದಲ್ಲ. ಅವನು ಜಾತಿವಿನಾಶದತ್ತ ಕಾರ್ಯೋನ್ಮುಖನಾದರೆ ತನ್ನ ಬುಡಕ್ಕೇ ಕೊಡಲಿ ಬೀಳುತ್ತದೆ ಎಂದು ಅವನಿಗೆ ತಿಳಿದಿದೆ. ಜಾತಿ ಪೋಷಣೆಯೇ ತನ್ನ ಅಸ್ತಿತ್ವಕ್ಕೆ ಆಧಾರ ಎಂದು ತಿಳಿದಿರುವುದರಿಂದಲೇ ಜಾತಿ ವಿಷಯ ಬಂದಾಗ ಅವನು ಜಾಣಗುರುಡು ಪ್ರದರ್ಶಿಸುತ್ತಾನೆ. ಬಲಾಢ್ಯ ಊಳಿಗಮಾನ್ಯ ಜಾತಿಗಳ ಪ್ರತಿನಿಧಿಗಳು ಆರಿಸಿ ಬರಲು ತಮ್ಮ ಜಾತಿಗಳನ್ನೆ ನೆಚ್ಚಿಕೊಂಡಿರುವುದರಿಂದ ಜಾತಿವಿನಾಶ ಅವರಿಗೆ ಬೇಕಾಗಿರುವುದಿಲ್ಲ. ಮೆದುಳನ್ನೇ ಬಂಡವಾಳ ಮಾಡಿಕೊಂಡಿರುವ ಬ್ರಾಹ್ಮಣೀಯ ಜಾತಿಜನ ಅಸಮಾನತೆ, ಭ್ರಷ್ಟಾಚಾರ ಎಲ್ಲ ಸಮಾಜಗಳಲ್ಲಿಯೂ ಇರುವಂಥದ್ದೆ ಎಂದೂ, ಜಾತಿಯಿಂದ ನಷ್ಟವೇನೂ ಇಲ್ಲ ಎಂದೂ ಪ್ರಚಾರ ಮಾಡಿಕೊಂಡು ಬರುತ್ತಿದ್ದಾರೆ. ಬಲಾಢ್ಯ ಊಳಿಗಮಾನ್ಯ ಜಾತಿಗಳು ತಮ್ಮ ಭುಜಬಲ ಮತ್ತು ಧನಬಲದಿಂದ ಬಹುಜನರನ್ನು ಹತ್ತಿಕ್ಕುತ್ತ ಜಾತಿವಾದವನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ವಾಸ್ತವವಾಗಿ ಇವೆರಡು ವರ್ಗಗಳು ಜಾತಿವ್ಯವಸ್ಥೆಯ ಪರಮ ಫಲಾನುಭವಿಗಳಾಗಿರುವುದರಿಂದ ಜಾತಿವಿನಾಶಕ್ಕೆ ಅವರು ವಿಮುಖರಾಗಿರುವುದು ಸಹಜವೇ ಆಗಿದೆ. ನಮ್ಮ ಜಾತಿಯ ವಕೀಲ, ನಮ್ಮ ಜಾತಿಯ ನ್ಯಾಯಾಧೀಶ, ನಮ್ಮವನೇ ಆದ ಮಹಾಲೇಖಪಾಲ ಮತ್ತು ನಮ್ಮ ಕೈಬೆರಳ ತುದಿಯಲ್ಲಿ ಆಡಿಸಬಹುದಾದ ಪೊಲೀಸ್ ಮುಖ್ಯಸ್ಥ ಇರುವವರೆಗೆ ಅವರಿಗೆ ಜಾತಿ ನಕಾರಾತ್ಮಕ ಎನಿಸುವುದಿಲ್ಲ. ಇನ್ನು, ಬಹುಜನ ಹಿಂದುಳಿದ ಜಾತಿಗಳು ಮತ್ತು ಬಹುಜನ ದಲಿತ ಜಾತಿಗಳು ಮಾತ್ರ ಜಾತಿವಿರೋಧಿ ಚಳವಳಿಗಳ ಭಾಗವಾಗಿದ್ದಾರೆ. ಇದು ಕಾಳ್ಗಿಚ್ಚಿನ ಎದುರು ಆಗಾಗ ಬಂದುಹೋಗುವ ತುಂತುರು ಮಳೆಯಷ್ಟೆ ಅಪ್ರಯೋಜಕವಾಗಿದೆ.

ನಮ್ಮನ್ನು ಆಳುವ ರಾಜಕಾರಣಿಗಳಿಗೆ ಆಳ್ವಿಕೆಯ ಮೂಲಪಾಠಗಳೇ ತಿಳಿದಿರುವುದಿಲ್ಲ. ಅನ್ನ, ಬಟ್ಟೆ, ವಸತಿ ಅಥವಾ ಆರೋಗ್ಯ, ವಿದ್ಯೆ, ವಿಮೆ ಇಂಥವು ಇವರ ಮೊದಲ ಆಯ್ಕೆಯಾಗಿರುವುದಿಲ್ಲ. ಪಂಚಾಯಿತಿ ಸದಸ್ಯರಿಂದ ಹಿಡಿದು ಸಂಸತ್ ಸದಸ್ಯರವರೆಗೆ ಅವರು ರಾಜಕಾರಣಕ್ಕೆ ಬರುವುದು ವಾಮಮಾರ್ಗದಲ್ಲಿ ಹಣ ಗಳಿಸಲು ಮತ್ತು ಅದನ್ನು ಬಳಸಿ ಮುಂದಿನ ಚುನಾವಣೆಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಎಂಬುದು ಖಚಿತವಾಗಿದೆ. ನಮ್ಮ ಶಾಸಕರು, ಸಂಸದರು ತಮ್ಮ ಅನುದಾನವನ್ನು ಬಳಸುವ ಪರಿಯನ್ನು ನೋಡಿದರೆ ಇದು ತಿಳಿಯುತ್ತದೆ. ಅವರು ಶಾಲೆಗಳನ್ನು ಉತ್ತಮಪಡಿಸುವುದಕ್ಕಿಂತಲೂ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಹೆಚ್ಚು ಖರ್ಚು ಮಾಡಿರುತ್ತಾರೆ! ರೈತರ ಹೊಲ, ಮನೆ ನೋಡುವುದಿಲ್ಲ, ಮಳೆಬೆಳೆ ವಿಚಾರಿಸುವುದಿಲ್ಲ. ತಮ್ಮ ಕ್ಷೇತ್ರದ ಯಾವುದೇ ಕುಟುಂಬದ ಮದುವೆ, ಮುಂಜಿ ಶುಭಕಾರ್ಯದಲ್ಲಿ ಅಥವಾ ಸಾವು ಸಂಭವಿಸಿದಲ್ಲಿ ಹಾಜರಿರುತ್ತಾರೆ. ಓಟು ಕೀಳುವುದಕ್ಕೆ ಭಾವನಾತ್ಮಕ ನಂಟು ಬೆಳೆಸಿಕೊಳ್ಳುವುದು (ಓಟುಗಳನ್ನು ಹಣ ಕೊಟ್ಟು ಖರೀದಿಸಬೇಕೆಂದು ತಿಳಿದೂ) ಅವರಿಗೆ ಅನಿವಾರ್ಯವಾಗಿರುತ್ತದೆ.

ಇನ್ನು ಮೇಲುಸ್ತರದ ರಾಜಕಾರಣಿಗಳು ಬೇರೊಂದು ರೀತಿಯಲ್ಲಿ ತಮ್ಮ ವ್ಯಾಪಾರದಲ್ಲಿ ತೊಡಗಿರುತ್ತಾರೆ. ಇವರು ಹೆಚ್ಚಾಗಿ ಸರ್ಕಾರದ ನೀತಿ ನಿರೂಪಕರು. ಅಪಾರ ಹಣ ಇವರ ಬೆನ್ನಿಗಿರುತ್ತದೆ. ಪಕ್ಷ ಕಟ್ಟುವುದೇ ಇವರ ಕೆಲಸ. ಸರ್ಕಾರದ ಕೆಲಸಕ್ಕಿಂತಲೂ ಅದು ಮುಖ್ಯ ಎಂದು ತಿಳಿದವರು, ಅದಕ್ಕಾಗಿ ಭ್ರಷ್ಟಾಚಾರ ಅನಿವಾರ್ಯ ಎಂದು ನಂಬಿರುವವರು ಇವರು. ಅದರ ಜೊತೆಗೇ ತಮ್ಮ ಜಾತಿಯನ್ನು, ಮಠಗಳನ್ನೂ ಬೆಳೆಸುತ್ತಾರೆ. ತಮ್ಮ ಓಟುಗಳನ್ನು ಖಚಿತಪಡಿಸಿಕೊಳ್ಳುತ್ತಾರೆ. ಎಪ್ಪತ್ತು ವರ್ಷಗಳು ಇಂಥ ರಾಜಕಾರಣಿಗಳಿಂದ ನಾವು ಆಳಿಸಿಕೊಂಡಿದ್ದೇವೆ.

ಈ ದೇಶದಲ್ಲಿ ರಾಜ್ಯಾಧಿಕಾರ ಎನ್ನುವುದು ಕೆಟ್ಟರಕ್ತವಾಗಿದೆ. ಆ ರಕ್ತದ ರುಚಿ ಮಾನ, ಪ್ರಾಣದ ರುಚಿಗಿಂತಲು ಮಿಗಿಲು. ಒಬ್ಬ ಹಿರಿಯ ಮಂತ್ರಿ ಭ್ರಷ್ಟಾಚಾರದ ಹಗರಣದಲ್ಲಿ ಜೈಲಿಗೆ ಹೋದವನು ಹಿಂದಿರುಗಿ ಬರುವಾಗ ತನ್ನ ಕೈ ಮೇಲೆತ್ತಿ ಎರಡು ಬೆರಳುಗಳನ್ನು ಆಡಿಸುತ್ತಾ ವಿಜಯಶಾಲಿಯಾದಂತೆ ಹೊರಬರುತ್ತಾನೆ. ಭ್ರಷ್ಟಾಚಾರ ಕಣ್ಣಿಗೆ ರಾಚುವಂತೆ ಕಾಣುತ್ತಿದ್ದರೂ ಅವನ ಜಾತಿಯ ಮಠಾಧೀಶರು ಬೆಂಬಲ ಸೂಚಿಸಲು ಬೀದಿಗಿಳಿಯುತ್ತಾರೆ. ಮತ್ತೊಬ್ಬ ಭ್ರಷ್ಟ ಮಂತ್ರಿ ಜೈಲು ಪಾಲಾದರು ಎಂದು ಅವನ ಜಾತಿಜನ ಮಂತ್ರಿ ಶಾಸಕರ ಮುಂದಾಳತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತಾರೆ. ಭ್ರಷ್ಟರನ್ನು ಯಾಕೆ ಬೆಂಬಲಿಸುತ್ತೀರಿ ಎಂದು ಕೇಳಿನೋಡಿ. ಅವರ ಉತ್ತರ- ಬೇರೆ ಜಾತಿಯಲ್ಲಿ ಭ್ರಷ್ಟರಿಲ್ಲವೆ? ಎಂಬುದಾಗಿರುತ್ತದೆ. ಅವರ ನಾಯಕರು ಸಜ್ಜನರಲ್ಲವೆಂದು ಬೆಂಬಲಿಸುವ ಮಠಾಧೀಶರಿಗೂ, ರೈತರಿಗೂ, ಶ್ರಮಿಕರಿಗೂ, ಕೂಲಿಕಾರರಿಗೂ ಗೊತ್ತಿರುತ್ತದೆ. ಈ ನಾಯಕನಿಗೂ ತನ್ನ ಕುಕೃತ್ಯಗಳಿಂದಲೇ ಅವರನ್ನು ಸಂಪ್ರೀತಗೊಳಿಸಬೇಕೆಂದು ತಿಳಿದಿರುತ್ತದೆ. ಕೆಲವು ಅಪವಾದಗಳನ್ನು ಹೊರತುಪಡಿಸಿ ಈ ಮಾತುಗಳನ್ನು ಹೇಳುತ್ತಿದ್ದೇನೆ.

ಇತ್ತೀಚೆಗೆ ಮಥುರಾದಲ್ಲಿ ಭಾಷಣ ಮಾಡುವಾಗ ಮಾನ್ಯ ಪ್ರಧಾನ ಮಂತ್ರಿಗಳು “ಕೆಲವರಿಗೆ ಓಂ ಮತ್ತು ಗೋವು ಶಬ್ದಗಳು ಹಿಡಿಸುವುದಿಲ್ಲ” ಎಂದು ಹೇಳಿದ್ದಾರೆ. ಇದು ಯೋಚಿಸಬೇಕಾದ ವಿಷಯವೆ? ಸದಾ ಬಾಯಲ್ಲಿ ಅಭಿವೃದ್ಧಿ ಮಂತ್ರ ಪಠಿಸುವ ಇವರ ಪ್ರಥಮ ಕಾಳಜಿ ಏನು ಎಂಬುದನ್ನು ಹೊರಹಾಕಿದ್ದಾರೆ. ಒಂದು ವರ್ಗದ ಆದ್ಯತೆಗಳನ್ನೆ ಒತ್ತಿ ಹೇಳುವ ಇವರು ಕಿಂಚಿತ್ ಅಳುಕು ಇಲ್ಲದೆ ನಾನು ಜಾತ್ಯತೀತನಲ್ಲ ಎಂಬುದನ್ನು ಸಾರಿ ಹೇಳಿದ್ದಾರೆ. ಹಾಗೆ ಹೇಳುವುದರ ಮೂಲಕ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ. ಸಂವಿಧಾನವನ್ನು ರಕ್ಷಿಸಬೇಕಾದವರು ಭಕ್ಷಣೆಗೆ ಇಳಿದಿದ್ದಾರೆ ಎಂದು ನಿರ್ವಾಹವಿಲ್ಲದೆ ಹೇಳಬೇಕಾಗಿದೆ. ನಮ್ಮ ನಾಯಕ ಹೀಗೆ ಹೇಳುತ್ತಾರೆಂದು ಅರಿತ ಅವರ ಹಿಂಬಾಲಕರು ಅನ್ಯಧರ್ಮೀಯರನ್ನು ಹೊಡೆದು, ಬಡಿದು ‘ಜೈಶ್ರೀರಾಮ್’ ಎಂದು ಹೇಳಿಸುತ್ತಾರೆ. ಮನುಷ್ಯನನ್ನು ಕೊಂದು (ಲಿಂಚಿಸಿ) ಗೋವನ್ನು ರಕ್ಷಿಸುತ್ತಾರೆ. ಇಂತಹ ದೌರ್ಜನ್ಯಗಳ ವಿರುದ್ಧ ದನಿ ಎತ್ತಿದ ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಅಂಥವರನ್ನು ಬೇಟೆಯಾಡುತ್ತಾರೆ. ಆದ್ದರಿಂದ ಜಾತ್ಯತೀತವಾದಿ ಆಗಿರುವುದಕ್ಕಿಂತಲೂ ಸಂವಿಧಾನವಾದಿ ಆಗಿರುವುದು ಇಂದಿನ ತುರ್ತು ಎಂದು ಹೇಳಲೇಬೇಕಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...