Homeಎಕಾನಮಿವೇಗವಾಗಿ ಮುಂದೋಡುತ್ತಿರುವ ರೇಸಿಂಗ್ ಕಾರಿನ ಟೈರುಗಳನ್ನ ಶೂಟ್ ಮಾಡಿದಂತೆ...

ವೇಗವಾಗಿ ಮುಂದೋಡುತ್ತಿರುವ ರೇಸಿಂಗ್ ಕಾರಿನ ಟೈರುಗಳನ್ನ ಶೂಟ್ ಮಾಡಿದಂತೆ…

ಉದ್ಯೋಗ ನಷ್ಟ ಮತ್ತು ಅಸಂಘಟಿತ ಉದ್ದಿಮೆಗಳ ಮುಚ್ಚುವಿಕೆಯ ದೀರ್ಘಕಾಲೀನ ಪರಿಣಾಮವನ್ನು ಈ ಆರ್ಥಿಕ ಕುಸಿತದಲ್ಲಿ ಕಾಣುತ್ತಿದ್ದೇವೆ

- Advertisement -
- Advertisement -

Demonetization in a booming like shooting economy is at the tyres of a racing car”           ಇದು ಅರ್ಥಶಾಸ್ತ್ರಜ್ಞ ಜೀನ್ ಡ್ರೆಝ್ ಹೇಳಿದ ಮಾತು.

ಈ ಮಾತು ಈಗ ಭಾರತದ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಹೆಚ್ಚು ಪ್ರಸ್ತುತವಾಗಿದೆ. ಕೇಂದ್ರ ಸರ್ಕಾರದ ಅಥವಾ ಪ್ರಧಾನಿ ಮೋದಿಯವರ ಬೆಂಬಲಿಗರು ಈಗಿನ ಪರಿಸ್ಥಿತಿಗೆ ಜಾಗತಿಕ ಆರ್ಥಿಕ ಹಿನ್ನಡೆಯೇ ಕಾರಣ ಅಂತ ಎಷ್ಟೇ ಚೀರಾಡಿದರೂ (ಅವರ್ಯಾರೂ ಕೂಡ ತಮ್ಮ ಮಾತಿಗೆ ಪೂರಕವಾದ ಅಂಕಿಅಂಶಗಳನ್ನ ಕೊಡ್ತಿಲ್ಲ) ದೇಶದ ಆರ್ಥಿಕ ಹಿಂಜರಿತಕ್ಕೆ ಮೂಲಕಾರಣ ಡಿಮಾನಿಟೈಸೇಷನ್ ಮತ್ತು ಅಪ್ರಬುದ್ಧ ಜಿಎಸ್ಟಿ ಜಾರಿ ಎಂದು ಜಗತ್ತಿನ ಎಲ್ಲ ಪ್ರಮುಖ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.

ಇದು ಹೇಗೆ ಮತ್ತು ಇದರಿಂದ ಹೊರಬರುವ ದಾರಿಗಳೇನು ಎಂದು ಸಂಕ್ಷಿಪ್ತವಾಗಿ ನೋಡೋಣ.
ಒಬ್ಬ/ಳು ತನ್ನ ಸಾಮಥ್ರ್ಯಕ್ಕೆ ತಕ್ಕ ಉದ್ಯೋಗ ಪಡೆದಾಗ ಅಲ್ಲಿ ದುಡಿಯುವ ಹಣವನ್ನು ತನಗೆ ಅಗತ್ಯವಿರುವ ವಸ್ತುಗಳನ್ನು ಕೊಳ್ಳಲು ಬಳಸುತ್ತಾನೆ/ಳೆ. ಆ ಅಂಗಡಿಯವನು/ಳು ಇಂಥ ವ್ಯಾಪಾರದಿಂದ ಬಂದ ಹಣವನ್ನು ತನ್ನ ಅಗತ್ಯದ ವಸ್ತುಗಳನ್ನು ಕೊಳ್ಳಲು ಬಳಸುವುದಲ್ಲದೆ, ತನ್ನ ಅಂಗಡಿಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಬಳಸುತ್ತಾನೆ/ಳೆ. ಇದರಿಂದಾಗಿ ಆ ಅಂಗಡಿಗೆ ವಿವಿಧ ರೀತಿಯ ವಸ್ತುಗಳನ್ನು ತಯಾರಿಸುವ ಅಥವಾ ವಿತರಿಸುವ ಕಂಪನಿಗೂ ಬೇಡಿಕೆ ಹೆಚ್ಚಾಗುತ್ತದೆ. ಜೊತೆಗೆ ಅಂತಹ ಅಂಗಡಿ ಮತ್ತು ಕಂಪನಿಗಳಲ್ಲಿ ಕೆಲಸ ಮಾಡುವವರಿಗೂ ಸಂಬಳ ಸುಲಭವಾಗಿ ದೊರೆತು ಅವರೂ ಅದನ್ನು ಮಾರುಕಟ್ಟೆಯಲ್ಲಿ ಖರ್ಚು ಮಾಡುತ್ತಾರೆ. ಹೀಗೆ ಹಲವು ಸ್ತರಗಳಲ್ಲಿ ಒಂದಕ್ಕೊಂದು ಪೂರಕವಾದ ಬೇಡಿಕೆ ಹೆಚ್ಚಾಗಿ ಅದಕ್ಕೆ ತಕ್ಕಂತೆ ಉತ್ಪಾದನೆಯೂ ಹೆಚ್ಚುತ್ತಾ ಹೋಗಿ ಆರ್ಥಿಕತೆ ವೇಗವಾಗಿ ಬೆಳೆಯುತ್ತದೆ.

ಆದರೆ ಮೋದಿಯವರು ತಾವು ಹೇಳಿದಂತೆ ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಿರಲಿ, ಇದ್ದಕ್ಕಿದ್ದಂತೆ ಡಿಮಾನೆಟೈಸೇಷನ್ ಮಾಡುವ ಮೂಲಕ ಕನಿಷ್ಟ ಐವತ್ತು ಲಕ್ಷ ಮಂದಿಯ ಉದ್ಯೋಗಗಳನ್ನು ಕೇವಲ ಆ ಮೂರು ತಿಂಗಳುಗಳಲ್ಲಿ ಕಸಿದುಕೊಂಡು ಬಿಟ್ಟರು.

ಇವತ್ತು ನಮ್ಮ ದೇಶದಲ್ಲಿ ಶೇ. ತೊಂಬತ್ತರಷ್ಟು ಉದ್ಯೋಗಿಗಳು ಕೆಲಸ ಮಾಡುತ್ತಿರುವುದೇ ಅಸಂಘಟಿತ ವಲಯದ ಉದ್ದಿಮೆಗಳಲ್ಲಿ ಹಾಗೂ ದೇಶದ ಜಿಡಿಪಿಯಲ್ಲಿ ಈ ಅಸಂಘಟಿತ ವಲಯದ ಕೊಡುಗೆ ಶೇ45 ರಷ್ಟಿದೆ. ಈ ಅಸಂಘಟಿತ ಉದ್ಯಮಗಳೆಲ್ಲ ಸಣ್ಣ ಮತ್ತು ಅತಿಸಣ್ಣ ಉದ್ಯಮಗಳಾಗಿದ್ದು ಇವೆಲ್ಲವೂ ನಗದಿನ ರೂಪದಲ್ಲೇ ತಮ್ಮ ವ್ಯವಹಾರ ಮಾಡುತ್ತವೆ.

ಇದ್ದಕ್ಕಿದ್ದಂತೆ ಡಿಮಾನೆಟೈಸೇಷನ್ ಮೂಲಕ ನಗದಿನ ಹರಿವೇ ನಿಂತುಹೋದಾಗ ಸಾವಿರಾರು ಉದ್ದಿಮೆಗಳು ಬಾಗಿಲು ಮುಚ್ಚಿದ ಪರಿಣಾಮ ಲಕ್ಷಾಂತರ ಮಂದಿ ತಮ್ಮ ಕೆಲಸ ಕಳೆದುಕೊಂಡರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದಂತೆ ಡಿಮಾನೆಟೈಸೇಷನ್ನಿನ ತಕ್ಷಣದ ಪರಿಣಾಮವಾಗಿಯೇ ಮುಂದಿನ ತ್ರೈಮಾಸಿಕದಲ್ಲಿಯೇ ಜಿಡಿಪಿ ದರ ಶೇ. ಎರಡರಷ್ಟು ಕುಸಿಯಿತು.

ಆದರೆ ಉದ್ಯೋಗ ನಷ್ಟ ಮತ್ತು ಅಸಂಘಟಿತ ಉದ್ದಿಮೆಗಳ ಮುಚ್ಚುವಿಕೆಯ ದೀರ್ಘಕಾಲೀನ ಪರಿಣಾಮವನ್ನು ಈ ಆರ್ಥಿಕ ಕುಸಿತದಲ್ಲಿ ಕಾಣುತ್ತಿದ್ದೇವೆ

ಮೊದಲೇ ಡಿಮಾನೆಟೈಸೇಷನ್ನಿಂದ ಹೊಡೆತ ತಿಂದಿದ್ದ ಅಸಂಘಟಿತ ವಲಯಕ್ಕೆ ಚೇತರಿಸಿಕೊಳ್ಳುವ ಮೊದಲೇ ಮತ್ತೆ ಹೊಡೆತ ನೀಡಿದ್ದು ಸರಿಯಾದ ತಯಾರಿಯಿಲ್ಲದ ಜಿಎಸ್ಟಿಯ ಆತುರಾತುರದ ಜಾರಿ. ಇದರಿಂದ ಜಿಎಸ್‍ಟಿ ಅಳವಡಿಸಿಕೊಳ್ಳಲು ಸರಿಯಾದ ಸೌಲಭ್ಯ ಮತ್ತು ಶಕ್ತಿ ಹೊಂದಿರದಿದ್ದ ಬಹುತೇಕ ಸಣ್ಣ ಮತ್ತು ಅತಿಸಣ್ಣ ಉದ್ಯಮಗಳಲ್ಲದೇ ಹಲವಾರು ಮದ್ಯಮ ಗಾತ್ರದ ಉದ್ದಿಮೆಗಳೂ ಹೊಡೆತ ತಿಂದವು. ಹಲವಾರು ಉದ್ದಿಮೆಗಳು ಮುಚ್ಚಿಕೊಂಡವು ಮತ್ತು ಇನ್ನೂ ಸಹಸ್ರಾರು ಉದ್ದಿಮೆಗಳ ಲಾಭಾಂಶ, ವ್ಯವಹಾರ ಎಲ್ಲ ಕಡಿಮೆಯಾಯಿತು.

ಇದರ ಪರಿಣಾಮ ಮತ್ತಷ್ಟು ಉದ್ಯೋಗ ನಷ್ಟ ಮತ್ತು ಆರ್ಥಿಕತೆಗೆ ಹೊಡೆತ. ಈ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಮೇಲೆ ಅನೇಕ ರೀತಿಯಲ್ಲಿ ಅವಲಂಬಿತವಾಗಿದ್ದ ಭಾರೀ ಉದ್ದಿಮೆಗಳು ಕೂಡ ಕೆಲಕಾಲದ ಬಳಿಕ ಈ ಜಿಎಸ್ಟಿ ಹೊಡೆತವನ್ನು ಪರೋಕ್ಷವಾಗಿ ಅನುಭವಿಸಿ ಹಿಂಜರಿತಕ್ಕೆ ಒಳಗಾದವು.

ಹಾಗಾಗಿಯೇ, ಇವತ್ತಿನ ಆರ್ಥಿಕ ಹಿಂಜರಿತ ಏನಿದೆ ಅದು ನಮ್ಮ ದೇಶದ ಪ್ರಧಾನಿ ಮತ್ತು ಕೇಂದ್ರ ಸರ್ಕಾರ ತಾನಾಗಿಯೇ ಸ್ವಯಂಕೃತಾಪರಾಧದಿಂದ ತಂದಿಟ್ಟುಕೊಂಡದ್ದೇ ಹೊರತು ಇದಕ್ಕೆ ಕೇವಲ ಜಾಗತಿಕ ಹಿಂಜರಿತ ಕಾರಣವಲ್ಲ. ಆದರೆ, ಇದರ ಕಷ್ಟ ಉಣ್ಣುತ್ತಿರುವವರು ನಮ್ಮಂತ ಕೋಟಿಕೋಟಿ ಜನಸಾಮಾನ್ಯರು.

ಈ ಆರ್ಥಿಕ ಹಿಂಜರಿತಕ್ಕೆ ಪರಿಹಾರವಿಲ್ಲವೆ? ಇದರಿಂದ ಹೊರಬರಲು ತೆಗೆದುಕೊಳ್ಳಬೇಕಾದ ಕ್ರಮಗಳೇನು?

ದೇಶದ ಮತ್ತು ಜಗತ್ತಿನ ಎಲ್ಲ ಆರ್ಥಿಕ ತಜ್ಞರು ಹೇಳಿರುವಂತೆ ಈಗಿನ ಆರ್ಥಿಕ ಹಿಂಜರಿತ ಉಂಟಾಗಿರುವುದು ಬೇಡಿಕೆಯ ಕೊರತೆಯಿಂದ. ಅಂದರೆ, ಈ ದೇಶದ ಜನರಲ್ಲಿ ಕೊಳ್ಳುವ ಶಕ್ತಿ ಉಡುಗಿರುವುದರಿಂದ. ಹಾಗಾಗಿ, ಬಹುತೇಕ ಎಲ್ಲ ಆರ್ಥಿಕ ತಜ್ಞರ ಅಭಿಪ್ರಾಯ ಈ ದೇಶದ ಜನಗಳ ಅದರಲ್ಲೂ ಗ್ರಾಮಾಂತರ ಪ್ರದೇಶದ ಜನಗಳ ಕೈಯಲ್ಲಿ ಹೆಚ್ಚು ಹಣ ಓಡಾಡುವಂತೆ ಮಾಡಿ ಅವರ ಕೊಳ್ಳುವ ಶಕ್ತಿ ಹೆಚ್ಚಾಗುವಂತೆ ಮಾಡುವುದು. ಇದರಿಂದ ಬೇಡಿಕೆ ಹೆಚ್ಚಾಗಿ ಅದಕ್ಕೆ ತಕ್ಕಂತೆ ಉತ್ಪಾದನೆಯೂ ಹೆಚ್ಚಾಗುತ್ತದೆ. ಯಾವಾಗ ಉತ್ಪಾದನೆ ಹೆಚ್ಚಾಗಬೇಕಾದ ಸನ್ನಿವೇಶ ಬರುತ್ತದೋ ಆಗ ಹೆಚ್ಚಿನ ಖಾಸಗಿ ಬಂಡವಾಳವೂ ಹರಿದುಬರುತ್ತದೆ. ಬಂಡವಾಳ ಮತ್ತಷ್ಟು ಉದ್ಯೋಗಗಳನ್ನು ಸೃಷ್ಟಿಸಿ ಆರ್ಥಿಕತೆ ಈ ಹಿಂಜರಿತದಿಂದ ಹೊರಬರಲು ಸಾಧ್ಯವಾಗುತ್ತದೆ.

ಅದಕ್ಕೆ ಕೇಂದ್ರ ಸರ್ಕಾರ ಮಾಡಬೇಕಿರುವುದು ಅತಿಮುಖ್ಯವಾಗಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚು ಹಣ ಕೊಡುವುದು ಹಾಗೂ ಆ ಯೋಜನೆಯಡಿಯಲ್ಲಿನ ಕೂಲಿಯನ್ನು ದುಪ್ಪಟ್ಟುಗೊಳಿಸುವುದು. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆ ಗಮನಾರ್ಹವಾಗಿ ಹೆಚ್ಚುತ್ತದೆ. ಜೊತೆಗೆ ರೈತರಿಗೆ ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ಕೊಡುವುದು. ಇವೆರಡೂ ತ್ವರಿತವಾಗಿ ಮಾಡಬಲ್ಲಂತ ಕೆಲಸಗಳು.

ಹಾಗೆಯೇ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲು (ರಸ್ತೆ, ಸೇತುವೆ, ಕಿರುನೀರಾವರಿ, ವಿದ್ಯುತ್ ಇತ್ಯಾದಿ) ಹೆಚ್ಚೆಚ್ಚು ಬಂಡವಾಳವನ್ನು ಸರ್ಕಾರವೇ ತೊಡಗಿಸುವುದು. ಇದರಿಂದಾಗಿಯೂ ಲಕ್ಷಾಂತರ ಉದ್ಯೋಗ ತಾತ್ಕಾಲಿಕವಾಗಿಯಾದರೂ ಸೃಷ್ಟಿಯಾಗಿ ಜನಗಳ ಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ.

ಇದರ ಜೊತೆಗೆ ಮಧ್ಯಮ ವರ್ಗದವರಿಗೆ ಆದಾಯ ತೆರಿಗೆಯನ್ನು ಕಡಿಮೆ ಮಾಡಿದರೆ ಅದರಲ್ಲಿ ಉಳಿಯುವ ಹಣವನ್ನು ಅವರು ಖರ್ಚು ಮಾಡುವುದರಿಂದಲೂ ಬೇಡಿಕೆ ಹೆಚ್ಚುತ್ತದೆ. ಈ ದೇಶದಲ್ಲಿ ಅಂದಾಜು ಐದು ಕೋಟಿ ಕುಟುಂಬಗಳು ಆದಾಯ ತೆರಿಗೆ ಪಾವತಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಬೇಡಿಕೆ ಹೆಚ್ಚಳ ಮಾಡುವಲ್ಲಿ ಒಂದು ಮಟ್ಟಕ್ಕೆ ಪರಿಣಾಮಕಾರಿಯಾಗಿಯೇ ಆಗಿರುತ್ತದೆ.

ಇದೆಲ್ಲದರಿಂದ ವಿತ್ತೀಯ ಕೊರತೆ (Fiscal deficit) ಹೆಚ್ಚಾದರೂ ಕೂಡ ಅದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳದೆ ಸರ್ಕಾರ ಮೇಲಿನಂಥ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕಿದೆ. (ವಾಸ್ತವವಾಗಿ ಈಗಾಗಲೇ ಬಹಳ ನಿಧಾನವಾಗಿ ಹೋಗಿದೆ)
ಇಷ್ಟೆಲ್ಲಾ ಮಾಡಿದರೂ ಕೂಡ ಆರ್ಥಿಕ ಚೇತರಿಕೆಗೆ ಕನಿಷ್ಟ ಒಂದು ವರ್ಷ ಬೇಕಾಗುವಂತಹ ವಿಷಮ ಸ್ಥಿತಿಯಲ್ಲಿ ನಾವಿದ್ದೇವೆ. ಆದರೆ, ಸರ್ಕಾರ ಬೇಡಿಕೆ ಹೆಚ್ಚಾಗುವಂಥ ಕ್ರಮಗಳನ್ನು ತೆಗೆದುಕೊಳ್ಳುವ ಬದಲು ಉತ್ಪಾದನೆ ಮತ್ತು ಅದರಿಂದ ಮತ್ತಷ್ಟು ಸರಬರಾಜು ಹೆಚ್ಚಾಗುವಂಥ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಕಾರ್ಪೊರೇಟ್ ಟ್ಯಾಕ್ಸನ್ನು 35% ರಿಂದ 25% ಗೆ ಇಳಿಸಿದ್ದು ಆರ್ಥಿಕ ಚೇತರಿಕೆಗೆ ಸರ್ಕಾರ ತೆಗೆದುಕೊಂಡ ಅತ್ಯಂತ ಪ್ರಮುಖ ಕ್ರಮ. ತಮ್ಮ ಲಾಭದ ಮೇಲೆ ಕಟ್ಟುವ ತೆರಿಗೆ ಕಡಿಮೆಯಾದ ಕಾರಣಕ್ಕೆ ಅನೇಕ ಕಂಪನಿಗಳು ಹೆಚ್ಚು ಉತ್ಪಾದಿಸುತ್ತವೆ ಮತ್ತು ಹೊಸದಾಗಿ ಬಂಡವಾಳ ಹೂಡುತ್ತವೆ. ಅದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬುದು ಸರ್ಕಾರದ ನಿರೀಕ್ಷೆ.

ಆದರೆ, ಈಗ ತಾವು ಉತ್ಪಾದಿಸಿರುವ ಉತ್ಪನ್ನಗಳು ಮಾರಾಟವಾದಾಗ ತಾನೇ ಕಂಪನಿಗಳಿಗೆ ಲಾಭ ಮತ್ತು ಲಾಭದ ಮೇಲಿನ ತೆರಿಗೆ ಇಳಿಕೆಯ ಲಾಭ ಎರಡೂ ಸಿಗುವುದು? ಆದರೆ, ಈಗಾಗಲೆ ಉತ್ಪನ್ನವಾಗಿರುವ ವಸ್ತುಗಳಿಗೇ ಬೇಡಿಕೆ ಇಲ್ಲದಿರುವಾಗ ಈ ಕಂಪನಿಗಳು ಮತ್ತಷ್ಟು ಉತ್ಪಾದನೆ ಯಾಕೆ ಮಾಡುತ್ತವೆ?

ಹಾಗಾಗಿ, ಸರ್ಕಾರ ಇಲ್ಲಿಯತನಕ ತೆಗೆದುಕೊಂಡ ಯಾವ ಕ್ರಮಗಳೂ (ಕಾರ್ಪೋರೇಟ್ ತೆರಿಗೆ ಕಡಿತ, ಬ್ಯಾಂಕುಗಳ ವಿಲೀನ ಇತ್ಯಾದಿ) ಆರ್ಥಿಕ ಹಿಂಜರಿತದಿಂದ ದೇಶವನ್ನು ಹೊರತರುವಲ್ಲಿ ಪರಿಣಾಮಕಾರಿಯಾಗಿಲ್ಲ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು ಮಾಡಬಲ್ಲ ಕ್ರಮಗಳನ್ನೂ ಸರ್ಕಾರ ಕೈಗೊಳ್ಳುತ್ತಿಲ್ಲ.

ಇದರ ಜೊತೆಗೆ ಜಾಗತಿಕ ಹಿಂಜರಿತ ಮತ್ತು ತೈಲ ಬೆಲೆ ಹೆಚ್ಚಳವೂ ಸೇರಿ ದೇಶ ಆರ್ಥಿಕ ಹಿಂಜರಿತದಿಂದ ಹೊರಬರುವ ಲಕ್ಷಣ ಸದ್ಯದ ಭವಿಷ್ಯದಲ್ಲೆಲ್ಲೂ ಕಾಣಿಸುತ್ತಿಲ್ಲ. ಇದರ ಹೊಡೆತದಲ್ಲಿ ಜನಸಾಮಾನ್ಯರ ಬದುಕು ಮತ್ತಷ್ಟು ಅಸಹನೀಯವಾಗಲಿದ್ದು, ಬಡತನದ ದಾರುಣತೆ ಇನ್ನೂ ಹೆಚ್ಚಲಿದ್ದು, ಇದರೊಳಗೆ ಬದುಕುಳಿಯುವುದೇ ಒಂದು ಸವಾಲಾಗಲಿದೆ.
ಡಾ.ಬಿ.ಸಿ.ಬಸವರಾಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಪಕ್ಷಗಳಿಂದ ತೀವ್ರ ಪ್ರತಿಭಟನೆ : ಲೋಕಸಭೆ ಕಲಾಪ ಮುಂದೂಡಿಕೆ

ಪ್ರತಿಪಕ್ಷಗಳ ತೀವ್ರ ಪ್ರತಿಭಟನೆ ಹಿನ್ನೆಲೆ ಗುರುವಾರ (ಫೆ.5) ಲೋಕಸಭೆ ಕಲಾಪವನ್ನು ಸ್ಪೀಕರ್ ಓಂ ಬಿರ್ಲಾ ಮಧ್ಯಾಹ್ನದವರೆಗೆ ಮುಂದೂಡಿದರು. ಬೆಳಿಗ್ಗೆ 11 ಗಂಟೆಗೆ ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ, ಪ್ರತಿಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಆರಂಭಿಸಿದರು. ವಿಶೇಷವಾಗಿ,...

ಗದಗ | ಕ್ಯಾಂಟರ್-ಕ್ರೂಸರ್ ನಡುವೆ ಅಪಘಾತ : ಮೂವರು ಸ್ಥಳದಲ್ಲೇ ಸಾವು, 10ಕ್ಕೂ ಹೆಚ್ಚು ಜನರಿಗೆ ಗಾಯ

ಗದಗ ಜಿಲ್ಲೆ ರೋಣ ತಾಲೂಕಿನ ಜಿಗಳೂರು ಕ್ರಾಸ್ ಬಳಿ ಕ್ರೂಸರ್ ಹಾಗೂ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಮಹಿಳೆಯರು ಸ್ಥಳದಲ್ಲೇ ಸಾವಿಗೀಡಾಗಿದ್ದು, 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಜೇಂದ್ರಗಡದ...

‘ಗಾಜಿಯಾಬಾದ್ ಮೂವರು ಸಹೋದರಿಯರ ಆತ್ಮಹತ್ಯೆ’: ಕೊರಿಯನ್ ಮೂಲದ ಆನ್ ಲೈನ್ ಆಟದಿಂದ ಸಾವನ್ನಪ್ಪಿರುವ ಶಂಕೆ 

ಗಾಜಿಯಾಬಾದ್‌ನಲ್ಲಿ ಬುಧವಾರ ತಡರಾತ್ರಿ 12, 14 ಮತ್ತು 16 ವರ್ಷ ವಯಸ್ಸಿನ ಮೂವರು ಸಹೋದರಿಯರು ತಮ್ಮ ವಸತಿ ಕಟ್ಟಡದ ಟೆರೇಸ್‌ನಿಂದ ಹಾರಿ ಸಾವನ್ನಪ್ಪಿದ್ದಾರೆ. ಈ ಕೃತ್ಯವು ಕೊರಿಯನ್ ಮೂಲದ ಆನ್‌ಲೈನ್ ಆಟಕ್ಕೆ ಸಂಬಂಧಿಸಿರಬಹುದು...

‘ಹೆಚ್ಚುತ್ತಿರುವ ನಿರುದ್ಯೋಗ ಬಿಕ್ಕಟ್ಟು’: ಮಧ್ಯಪ್ರವೇಶಿಸುವಂತೆ ಕೇಂದ್ರ ಸರ್ಕಾರಿ ಸಂಸ್ಥೆಗಳಿಗೆ ಮನವಿ ಪತ್ರ ಸಲ್ಲಿಸಿದ ಲಕ್ಷದ್ವೀಪ ವಿದ್ಯಾರ್ಥಿಗಳ  ಸಂಘ 

ಲಕ್ಷದ್ವೀಪ ವಿದ್ಯಾರ್ಥಿ ಸಂಘವು, ಕೇಂದ್ರಾಡಳಿತ ಪ್ರದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಬಿಕ್ಕಟ್ಟಿನ ಬಗ್ಗೆ ಮಧ್ಯಪ್ರವೇಶಿಸುವಂತೆ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಮತ್ತು ಇತರ ಕೇಂದ್ರ ಸರ್ಕಾರಿ ಸಂಸ್ಥೆಗಳನ್ನು ಒತ್ತಾಯಿಸಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ...

ಪ.ಬಂಗಾಳವನ್ನು ಗುರಿಯಾಗಿಸಲಾಗುತ್ತಿದೆ, ಅಸ್ಸಾಂನಲ್ಲಿ ಎಸ್‌ಐಆರ್‌ ಏಕಿಲ್ಲ? : ಸುಪ್ರೀಂ ಕೋರ್ಟ್‌ನಲ್ಲಿ ಮಮತಾ ಬ್ಯಾನರ್ಜಿ ವಾದ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಪಶ್ಚಿಮ ಬಂಗಾಳವನ್ನು ಗುರಿಯಾಗಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಫೆ.4) ಆರೋಪಿಸಿದ್ದು, ಬಿಜೆಪಿ ಆಡಳಿತವಿರುವ ಅಸ್ಸಾಂನಲ್ಲಿ ಏಕೆ ಎಸ್‌ಐಆರ್ ನಡೆಸುತ್ತಿಲ್ಲ ಎಂಬುವುದಾಗಿ...

ತಮಿಳುನಾಡು| ದಲಿತ ಯುವಕನನ್ನು ಪ್ರೀತಿಸುತ್ತಿದ್ದ ಯುವತಿ ಅನುಮಾನಾಸ್ಪದ ಸಾವು; ಮರ್ಯಾದೆಗೇಡು ಹತ್ಯೆ ಶಂಕೆ

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿನಿ ಸಾವು ಮರ್ಯಾದಾ ಹತ್ಯೆಯ ಗಂಭೀರ ಆರೋಪಗಳನ್ನು ಹುಟ್ಟುಹಾಕಿದೆ. ಸಾವಿನ ಆರಂಭಿಕ ತನಿಖೆಯು ಆತ್ಮಹತ್ಯೆಯತ್ತ ಬೊಟ್ಟು ಮಾಡುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ಸಾವಿಗೆ ಅಂತಿಮ ಕಾರಣ...

‘ರಾಜ್ಯವನ್ನು ನಿರ್ಲಕ್ಷಿಸಲಾಗಿದೆ’ : ಕೇಂದ್ರ ಬಜೆಟ್‌ ವಿರುದ್ಧ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ

ಕೇಂದ್ರ ಸರ್ಕಾರದ 2026-27ನೇ ಸಾಲಿನ ಬಜೆಟ್ ವಿರುದ್ದ ಕೇರಳ ವಿಧಾನಸಭೆ ನಿರ್ಣಯ ಅಂಗೀಕರಿಸಿದ್ದು, ರಾಜ್ಯವನ್ನು 'ನಿರ್ಲಕ್ಷಿಸಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದೆ. ಬಜೆಟ್‌ನಲ್ಲಿ ಕೇರಳದ ದೀರ್ಘಕಾಲದ ಬೇಡಿಕೆಗಳನ್ನು ಪರಿಗಣಿಸದೆ ಇರುವುದು ಮತ್ತು ರಾಜ್ಯಕ್ಕೆ ನೀಡಬೇಕಾದ ನ್ಯಾಯಯುತ...

ದೇವಾಲಯ-ಶಾಲೆಗಳ ಬಳಿ ಇರುವ ಮಾಂಸ ಮಳಿಗೆಗಳ ಕುರಿತು ಏಕರೂಪ ನೀತಿ ರೂಪಿಸಿ: ತೆಲಂಗಾಣ ಹೈಕೋರ್ಟ್

ಸಾರ್ವಜನಿಕ ಭಾವನೆ, ನೈರ್ಮಲ್ಯ, ಸಂಚಾರ ನಿರ್ವಹಣೆ, ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಕಳವಳಗಳನ್ನು ಉಲ್ಲೇಖಿಸಿ, ದೇವಾಲಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಂದ 100 ಮೀಟರ್ ಒಳಗೆ ಮಾಂಸ ಮತ್ತು ಮಾಂಸಾಹಾರಿ ಆಹಾರ ಮಾರಾಟವನ್ನು...

ಎಸ್‌ಐಆರ್ ಅರ್ಜಿ ವಿಚಾರಣೆ : ಸುಪ್ರೀಂ ಕೋರ್ಟ್‌ನಲ್ಲಿ ಮಮತಾ ಬ್ಯಾನರ್ಜಿ ಸ್ವತಃ ವಾದ ಮಂಡನೆ

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ದ ಸಲ್ಲಿಸಿರುವ ಅರ್ಜಿಯ ವಿಚಾರಣೆ ಬುಧವಾರ (ಫೆ.4) ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ವತಃ ವಾದ ಮಂಡನೆ ಮಾಡುತ್ತಿದ್ದಾರೆ....

ಆರ್‌ಕಾಮ್ ಬ್ಯಾಂಕ್ ವಂಚನೆ ತನಿಖೆ: ಇಡಿ, ಸಿಬಿಐಗೆ ಸುಪ್ರೀಂ ಕೋರ್ಟ್ ಛೀಮಾರಿ; ದೇಶ ಬಿಟ್ಟು ಹೋಗದಂತೆ ಅನಿಲ್ ಅಂಬಾನಿಗೆ ತಾಕೀತು 

ರಿಲಯನ್ಸ್ ಕಮ್ಯುನಿಕೇಷನ್ಸ್, ಅದರ ಸಮೂಹ ಕಂಪನಿಗಳು ಮತ್ತು ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಒಳಗೊಂಡ ಬೃಹತ್ ಪ್ರಮಾಣದ ಬ್ಯಾಂಕ್ ವಂಚನೆ ಆರೋಪಗಳ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಜಾರಿ...