Homeಮುಖಪುಟಟೂಲ್‌ ಕಿಟ್ ವಿಚಾರದಲ್ಲಿ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ಸರಿಯೇ?

ಟೂಲ್‌ ಕಿಟ್ ವಿಚಾರದಲ್ಲಿ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ಸರಿಯೇ?

- Advertisement -
- Advertisement -

ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಆಡಳಿತವನ್ನು ಬಂಧನದಲ್ಲಿರಿಸಿ ಸ್ಥಾಪಿತಗೊಂಡಿರುವ ಮಿಲಿಟರಿ ಆಡಳಿತ, ನಿನ್ನೆ ಶನಿವಾರ ದೇಶವ್ಯಾಪಿಯಾಗಿ ಇಂಟರ್‌ನೆಟ್ ಸ್ಥಗಿತಗೊಳಿಸಿದೆ. ವಿಶ್ವದ ಹಲವಾರು ದೇಶಗಳು ಈ ಕ್ರಮಗಳನ್ನು ಖಂಡಿಸುತ್ತಿವೆ. ಇದನ್ನು ಆಂತರಿಕ ಹಸ್ತಕ್ಷೇಪ ಎನ್ನಲಾಗುತ್ತದೆಯೇ?

ಇನ್ನೂ ಒಂದು ವಿಷಯ, ಕಳೆದ ವಾರ ಆ ದೇಶದಲ್ಲಿ ಮಿಲಿಟರಿ ದಂಗೆ ನಡೆದಾಗ ನಿಮ್ಮದೇ ಇಲಾಖೆ ಕಳವಳ ವ್ಯಕ್ತಪಡಿಸಿದ್ದು ಸೂಕ್ತವೇ ಆಗಿತ್ತು. ಓಕೆ, ಆದರೆ ಅದನ್ನು ಆಂತರಿಕ ಹಸ್ತಕ್ಷೇಪ ಎನ್ನಲಾಗುತ್ತದೆಯೇ ಜೈ ಶಂಕರ್ ಸರ್? ಈಗ ಅಲ್ಲಿ ಇಂಟರ್‌ನೆಟ್ ಸ್ಥಗಿತ ಮಾಡಿದ್ದರ ಕುರಿತು ನಿಮ್ಮ ಇಲಾಖೆ ಇನ್ನೂ ಆಕ್ಷೇಪ ವ್ಯಕ್ತ ಮಾಡಿಲ್ಲ. ಏಕೆಂದರೆ, ನಿಮ್ಮ ಇಲಾಖೆಯ ಮೂರ್ಖತನದ ಪ್ರಕಟಣೆ (ವಿದೇಶಿಯರ ಹಸ್ತಕ್ಷೇಪ ವಿರೋಧಿಸುವ ಪ್ರಕಟಣೆ). ಇಂದು ನೀವು ಮತ್ತು ನಿಮ್ಮ ಇಲಾಖೆ ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ದಬ್ಬಾಳಿಕೆಯನ್ನು ಖಂಡಿಸುವ ನೈತಿಕ ಅಧಿಕಾತವನ್ನೇ ಕಳೆದುಕೊಂಡು ಬಿಟ್ಟಿದ್ದೀರಿ, ಅಲ್ಲವೇ ಜೈ ಶಂಕರ್ ಜೀ?

ದೆಹಲಿ ಪೊಲೀಸರ ಹೆಜ್ಜೆಗಳಲ್ಲಿ ವಿದೇಶಾಂಗ ನೀತಿ!

ಸ್ವೀಡನ್‌ನ ಹದಿಹರೆಯದ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಹಂಚಿಕೊಂಡ ಟೂಲ್‌ಕಿಟ್‌ಗೆ ಖಲಿಸ್ತಾನಿ ಲಿಂಕ್ ದೊರೆತಿದೆ ಎಂದು ದೆಹಲಿ ಪೊಲೀಸರು ಹೇಳಿಕೊಂಡ ಎರಡು ದಿನಗಳ ನಂತರ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು, ‘ಈ ಡಾಕ್ಯುಮೆಂಟ್ ಬಹಳಷ್ಟು ವಿಷಯ ಬಹಿರಂಗಪಡಿಸಿದೆ ಮತ್ತು ಅಂತರರಾಷ್ಟ್ರೀಯ ಹೇಳಿಕೆಗಳಿಗೆ (ರಿಹಾನ್ನ, ಥನ್‌ಬರ್ಗ್, ಮೀನಾ ಹ್ಯಾರಿಸ್ ಮುಂತಾದವರು ರೈತ ಪ್ರತಿಭಟನೆ ಪರ ನೀಡಿದ ಹೇಳಿಕೆಗಳು) ಅವರ ಸಚಿವಾಲಯ ಏಕೆ ಪ್ರತಿಕ್ರಿಯಿಸಿತು ಎಂಬುದನ್ನು ಸ್ಪಷ್ಟವಾಗಿ ನೋಡಬಹುದು’ ಎಂದಿದ್ದಾರೆ.

‘ಸಾಕಷ್ಟು ಬಹಿರಂಗಪಡಿಸಿದೆ’….. ಅದೇನು ಬಹಿರಂಗಪಡಿಸಿದೆಯೋ ಎಂಬುದು ಪಬ್ಲಿಕ್ ಡೊಮೇನ್‌ನಲ್ಲಿ ಈಗಲೂ ಇದೆ. ಆ ಟೂಲ್‌ಕಿಟ್ ಅನ್ನೆ ಗ್ರೇಟಾ ಹಂಚಿಕೊಂಡಿದ್ದಾರಷ್ಟೇ. ವಿದೇಶಾಂಗ ಸಚಿವ ಜೈಶಂಕರ್ ಅವರು, ಟೂಲ್‌ಕಿಟ್‌ನಿಂದ ‘ಬಹಳಷ್ಟು ವಿಷಯ’ ಬಹಿರಂಗವಾದ ಕುರಿತು ಮಾತಾಡುವುದು ಮತ್ತು ಟ್ವೀಟ್ ಮಾಡುವುದನ್ನು ನೋಡಿದರೆ, ಇವರು ಕೂಡ ದೆಹಲಿ ಪೊಲಿಸರ ಪಥ ಸಂಚಲನದಲ್ಲಿ ಕೋರಸ್ ಹೇಳುತ್ತಿದ್ದಾರೆ ಅನಿಸುತ್ತದೆ. ಹಾಗೆಯೇ, ಸರ್ಕಾರದ ಪರ ಬ್ಯಾಟಿಂಗ್ ಕಂ ಆ್ಯಕ್ಟಿಂಗ್ ಮಾಡಿದ ಸೆಲೆಬ್ರಿಟಿಗಳ ಸಾಲಿಗೆ ಸೇರುತ್ತಿದ್ದಾರೆ ಅನಿಸುತ್ತದೆ.

ಅದರ ಜೊತೆಗೆ, ಗಣರಾಜ್ಯ ದಿನದಂದು ಕೆಲವು ಪುಂಡರಿಂದ ಕೆಂಪುಕೋಟೆ ಆವರಣದೊಳಗೆ ನಡೆದ ಹಿಂಸಾಚಾರವನ್ನು ನಿಯಂತ್ರಿಸಲಾಗದ ‘ದಿ ಗ್ರೇಟ್’ ದೆಹಲಿ ಪೊಲೀಸರ ಊಹೆಗಳನ್ನೇ ಜೈ ಶಂಕರ್ ಈಗ ಪ್ರತಿಪಾದಿಸುತ್ತಿದ್ದಾರೆ. ಅಂದರೆ ಅವರೀಗ ದೆಹಲಿ ಪೊಲೀಸರ ‘ಪಥ ಸಂಚಲನದಲ್ಲಿ’ ಹೆಜ್ಜೆ ಹಾಕುತ್ತಿದ್ದಾರಷ್ಟೇ.

“ಇದು ಬಹಳಷ್ಟನ್ನು ಬಹಿರಂಗಪಡಿಸಿದೆ. ಇನ್ನೂ ಏನೇನು ಹೊರಬರುತ್ತದೆ ಎಂಬುದನ್ನು ನಾವು ಕಾಯಬೇಕು. ನೀವು ನೋಡಿದಂತೆ, ಕೆಲವು ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ತಮಗೆ ಹೆಚ್ಚು ತಿಳಿದಿಲ್ಲದ ವಿಷಯಗಳ ಬಗ್ಗೆ ನೀಡಿದ ಹೇಳಿಕೆಗಳಿಗೆ ವಿದೇಶಾಂಗ ಸಚಿವಾಲಯವು ಪ್ರತಿಕ್ರಿಯಿಸಲು ಒಂದು ಕಾರಣವಿತ್ತು” ಎಂದು ಜೈಶಂಕರ್ ಎಎನ್‌ಐ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.

‘ತಮಗೆ ಹೆಚ್ಚು ತಿಳಿದಿಲ್ಲದ ವಿಷಯಗಳ ಬಗ್ಗೆ ನೀಡಿದ ಹೇಳಿಕೆಗಳಿಗೆ’- ಏನಿದರರ್ಥ? ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳಿಗೆ ಇಲ್ಲೇನು ನಡೆಯುತ್ತಿದೆ ಎಂಬ ಬಗ್ಗೆ ಅರಿವಿಲ್ಲದೆ ಟ್ವೀಟ್ ಮಾಡಿಬಿಟ್ಟರೆ? ಕೃಷಿ ಕಾಯ್ದೆಗಳನ್ನು ಅವರು ಸಂಪೂರ್ಣವಾಗಿ ಓದಿರಲಿಕ್ಕಿಲ್ಲ, ಓದುವ ಅಗತ್ಯವೂ ಇಲ್ಲ. ಆದರೆ, ಅವರು ಎತ್ತಿದ್ದು ಮಾನವ ಹಕ್ಕುಗಳ ವಿಷಯ ಎಂಬುದನ್ನು ವಿದೇಶಾಂಗ ಇಲಾಖೆ ನೆನಪಿಟ್ಟುಕೊಳ್ಳಲಿ. ಹಾಗೆ ನೋಡಿದರೆ, ಹೆಚ್ಚು ತಿಳಿಯದೇನೇ, ಅವರ ಇಲಾಖೆ ಕೊಟ್ಟ ಪ್ರಕಟಣೆಯೇ ಆತ್ಮವಂಚನೆಯಿಂದ ಕೂಡಿತ್ತಲ್ಲವೆ? ‘ಸಂಸತ್ತಿನಲ್ಲಿ ದೀರ್ಘ ಚರ್ಚೆಯ ನಂತರವಷ್ಟೆ ಈ ಕೃಷಿ ಕಾಯ್ದೆಗಳನ್ನು ಅಂಗೀಕಾರ ಮಾಡಲಾಗಿದೆ’ ಎಂಬ ಅವರ ಇಲಾಖೆಯ ಹೇಳಿಕಯೇ ಅರ್ಧಸತ್ಯದಿಂದ ಕೂಡಿದೆ.

ಕೆಳಮನೆಯಲ್ಲಿ ಸಿಕ್ಕಿರುವ ‘ಭಯಂಕರ’ ಬಹುಮತ ಇದಕ್ಕೆ ನೆರವಾಗಿತ್ತು. ಆದರೆ ಮೇಲ್ಮನೆಯಲ್ಲಿ ಬಹುಮತ ಇಲ್ಲದಿದ್ದಾಗಲೂ, ಈ ಕಾನೂನುಗಳ ಪರ ವಿಸ್ತೃತ ಚರ್ಚೆಯೇ ಇಲ್ಲದೆ, ಮತ ಸಂಖ್ಯೆಯನ್ನು ಎಣಿಕೆ ಮಾಡದೆಯೇ ಅಂಗೀಕಾರ ಪಡೆಯಲಾಗಿದೆ. ರಾಜ್ಯ ಸರ್ಕಾರಗಳ ಜೊತೆ ಚರ್ಚಿಸದೇ ಏಕಾಏಕಿ ಈ ಕಾಯ್ದೆಗಳನ್ನು ಹೇರಿದ್ದು ಒಕ್ಕೂಟ ವ್ಯವಸ್ಥೆಯನ್ನೇ ಅವಮಾನಿಸಿದೆ.
ಹೀಗಿರುವಾಗ ವಿದೇಶಾಂಗ ಸಚಿವ ಜೈಶಂಕರ್ ಯಾವ ಆಧಾರದಲ್ಲಿ ತಮ್ಮ ಇಲಾಖೆಯ ಪ್ರಕಟಣೆಗೆ ಅನುಮತಿ ನೀಡಿದರು? ‘ಸಂಸತ್ತಿನ ಸಂಪೂರ್ಣ ಒಪ್ಪಿಗೆ’ ನಿಜಕ್ಕೂ ಸಿಗದೇ ಇದ್ದಾಗ ಅದು ಸಿಕ್ಕಿದೆ ಎನ್ನುವುದು ಆತ್ಮವಂಚನೆಯಲ್ಲವೆ?

ಟೂಲ್‌ಕಿಟ್ ಅಂದರೆ ಅದರಲ್ಲೇನೂ ಸ್ಕೂಡ್ರೈವರ್, ಗರಗಸ ಅಥವಾ ಪಿಸ್ತೂಲ್ ಇರುವುದಿಲ್ಲ. ಟೂಲ್‌ಕಿಟ್ ಎಂಬುದು ಹಾರ್ಡ್ವೇರ್ ಕೂಡ ಅಲ್ಲ, ಅದು ಒಂದು ಚಳುವಳಿಯ ಕಾರ್ಯಕ್ರಮವನ್ನು, ಅದರ ಮುಂದಿನ ಯೋಜನೆ ಹೇಗಿರಲಿದೆ ಎಂಬುದನ್ನು ವಿವರಿಸುವ ಒಂದು ಸರಳ ಪಠ್ಯವಷ್ಟೇ. ಈಗ ದೊರೆತ ಟೂಲ್‌ಕಿಟ್ ಸಾರ್ವಜನಿಕವಾಗಿ ಲಭ್ಯವಿದೆ. ಅದರಲ್ಲೇನೂ ಈ ದೇಶದ ಬುಡ ಅಲ್ಲಾಡಿಸುವ ಯಾವ ಸಾಲೂ ಇಲ್ಲ. ಅದರಿಂದ ‘ಬಹಳಷ್ಟು ಬಹಿರಂಗ’ ಏನಾಯಿತೊ ಎಂಬುದನ್ನು ದಾಖಲೆ ಸಮೇತ ಜನರ ಮುಂದಿಡುವ ಬದಲು, ಬೆದರಿಕೆಯ ತಂತ್ರ ಅನುಸರಿಸುವ ಈ ಕ್ರಮ ಪ್ರಜಾಪ್ರಭುತ್ವ ವಿರೋಧಿಯೇ ಆಗಿದೆ.

-ಪಿ.ಕೆ. ಮಲ್ಲನಗೌಡರ್

(ಪತ್ರಕರ್ತರು, ಅಭಿಪ್ರಾಯಗಳು ವೈಯಕ್ತಿಕವಾದವುಗಳು)


ಇದನ್ನೂ ಓದಿ: ’ಟ್ರಾಕ್ಟರ್‌ ಕ್ರಾಂತಿ’ಯಲ್ಲಿ ಭಾಗವಹಿಸಿ: ದೇಶಕ್ಕೆ ರೈತ ಮುಖಂಡ ಟಿಕಾಯತ್‌ ಕರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...