Homeಮುಖಪುಟಟೂಲ್‌ ಕಿಟ್ ವಿಚಾರದಲ್ಲಿ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ಸರಿಯೇ?

ಟೂಲ್‌ ಕಿಟ್ ವಿಚಾರದಲ್ಲಿ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ಸರಿಯೇ?

- Advertisement -
- Advertisement -

ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಆಡಳಿತವನ್ನು ಬಂಧನದಲ್ಲಿರಿಸಿ ಸ್ಥಾಪಿತಗೊಂಡಿರುವ ಮಿಲಿಟರಿ ಆಡಳಿತ, ನಿನ್ನೆ ಶನಿವಾರ ದೇಶವ್ಯಾಪಿಯಾಗಿ ಇಂಟರ್‌ನೆಟ್ ಸ್ಥಗಿತಗೊಳಿಸಿದೆ. ವಿಶ್ವದ ಹಲವಾರು ದೇಶಗಳು ಈ ಕ್ರಮಗಳನ್ನು ಖಂಡಿಸುತ್ತಿವೆ. ಇದನ್ನು ಆಂತರಿಕ ಹಸ್ತಕ್ಷೇಪ ಎನ್ನಲಾಗುತ್ತದೆಯೇ?

ಇನ್ನೂ ಒಂದು ವಿಷಯ, ಕಳೆದ ವಾರ ಆ ದೇಶದಲ್ಲಿ ಮಿಲಿಟರಿ ದಂಗೆ ನಡೆದಾಗ ನಿಮ್ಮದೇ ಇಲಾಖೆ ಕಳವಳ ವ್ಯಕ್ತಪಡಿಸಿದ್ದು ಸೂಕ್ತವೇ ಆಗಿತ್ತು. ಓಕೆ, ಆದರೆ ಅದನ್ನು ಆಂತರಿಕ ಹಸ್ತಕ್ಷೇಪ ಎನ್ನಲಾಗುತ್ತದೆಯೇ ಜೈ ಶಂಕರ್ ಸರ್? ಈಗ ಅಲ್ಲಿ ಇಂಟರ್‌ನೆಟ್ ಸ್ಥಗಿತ ಮಾಡಿದ್ದರ ಕುರಿತು ನಿಮ್ಮ ಇಲಾಖೆ ಇನ್ನೂ ಆಕ್ಷೇಪ ವ್ಯಕ್ತ ಮಾಡಿಲ್ಲ. ಏಕೆಂದರೆ, ನಿಮ್ಮ ಇಲಾಖೆಯ ಮೂರ್ಖತನದ ಪ್ರಕಟಣೆ (ವಿದೇಶಿಯರ ಹಸ್ತಕ್ಷೇಪ ವಿರೋಧಿಸುವ ಪ್ರಕಟಣೆ). ಇಂದು ನೀವು ಮತ್ತು ನಿಮ್ಮ ಇಲಾಖೆ ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ದಬ್ಬಾಳಿಕೆಯನ್ನು ಖಂಡಿಸುವ ನೈತಿಕ ಅಧಿಕಾತವನ್ನೇ ಕಳೆದುಕೊಂಡು ಬಿಟ್ಟಿದ್ದೀರಿ, ಅಲ್ಲವೇ ಜೈ ಶಂಕರ್ ಜೀ?

ದೆಹಲಿ ಪೊಲೀಸರ ಹೆಜ್ಜೆಗಳಲ್ಲಿ ವಿದೇಶಾಂಗ ನೀತಿ!

ಸ್ವೀಡನ್‌ನ ಹದಿಹರೆಯದ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಹಂಚಿಕೊಂಡ ಟೂಲ್‌ಕಿಟ್‌ಗೆ ಖಲಿಸ್ತಾನಿ ಲಿಂಕ್ ದೊರೆತಿದೆ ಎಂದು ದೆಹಲಿ ಪೊಲೀಸರು ಹೇಳಿಕೊಂಡ ಎರಡು ದಿನಗಳ ನಂತರ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು, ‘ಈ ಡಾಕ್ಯುಮೆಂಟ್ ಬಹಳಷ್ಟು ವಿಷಯ ಬಹಿರಂಗಪಡಿಸಿದೆ ಮತ್ತು ಅಂತರರಾಷ್ಟ್ರೀಯ ಹೇಳಿಕೆಗಳಿಗೆ (ರಿಹಾನ್ನ, ಥನ್‌ಬರ್ಗ್, ಮೀನಾ ಹ್ಯಾರಿಸ್ ಮುಂತಾದವರು ರೈತ ಪ್ರತಿಭಟನೆ ಪರ ನೀಡಿದ ಹೇಳಿಕೆಗಳು) ಅವರ ಸಚಿವಾಲಯ ಏಕೆ ಪ್ರತಿಕ್ರಿಯಿಸಿತು ಎಂಬುದನ್ನು ಸ್ಪಷ್ಟವಾಗಿ ನೋಡಬಹುದು’ ಎಂದಿದ್ದಾರೆ.

‘ಸಾಕಷ್ಟು ಬಹಿರಂಗಪಡಿಸಿದೆ’….. ಅದೇನು ಬಹಿರಂಗಪಡಿಸಿದೆಯೋ ಎಂಬುದು ಪಬ್ಲಿಕ್ ಡೊಮೇನ್‌ನಲ್ಲಿ ಈಗಲೂ ಇದೆ. ಆ ಟೂಲ್‌ಕಿಟ್ ಅನ್ನೆ ಗ್ರೇಟಾ ಹಂಚಿಕೊಂಡಿದ್ದಾರಷ್ಟೇ. ವಿದೇಶಾಂಗ ಸಚಿವ ಜೈಶಂಕರ್ ಅವರು, ಟೂಲ್‌ಕಿಟ್‌ನಿಂದ ‘ಬಹಳಷ್ಟು ವಿಷಯ’ ಬಹಿರಂಗವಾದ ಕುರಿತು ಮಾತಾಡುವುದು ಮತ್ತು ಟ್ವೀಟ್ ಮಾಡುವುದನ್ನು ನೋಡಿದರೆ, ಇವರು ಕೂಡ ದೆಹಲಿ ಪೊಲಿಸರ ಪಥ ಸಂಚಲನದಲ್ಲಿ ಕೋರಸ್ ಹೇಳುತ್ತಿದ್ದಾರೆ ಅನಿಸುತ್ತದೆ. ಹಾಗೆಯೇ, ಸರ್ಕಾರದ ಪರ ಬ್ಯಾಟಿಂಗ್ ಕಂ ಆ್ಯಕ್ಟಿಂಗ್ ಮಾಡಿದ ಸೆಲೆಬ್ರಿಟಿಗಳ ಸಾಲಿಗೆ ಸೇರುತ್ತಿದ್ದಾರೆ ಅನಿಸುತ್ತದೆ.

ಅದರ ಜೊತೆಗೆ, ಗಣರಾಜ್ಯ ದಿನದಂದು ಕೆಲವು ಪುಂಡರಿಂದ ಕೆಂಪುಕೋಟೆ ಆವರಣದೊಳಗೆ ನಡೆದ ಹಿಂಸಾಚಾರವನ್ನು ನಿಯಂತ್ರಿಸಲಾಗದ ‘ದಿ ಗ್ರೇಟ್’ ದೆಹಲಿ ಪೊಲೀಸರ ಊಹೆಗಳನ್ನೇ ಜೈ ಶಂಕರ್ ಈಗ ಪ್ರತಿಪಾದಿಸುತ್ತಿದ್ದಾರೆ. ಅಂದರೆ ಅವರೀಗ ದೆಹಲಿ ಪೊಲೀಸರ ‘ಪಥ ಸಂಚಲನದಲ್ಲಿ’ ಹೆಜ್ಜೆ ಹಾಕುತ್ತಿದ್ದಾರಷ್ಟೇ.

“ಇದು ಬಹಳಷ್ಟನ್ನು ಬಹಿರಂಗಪಡಿಸಿದೆ. ಇನ್ನೂ ಏನೇನು ಹೊರಬರುತ್ತದೆ ಎಂಬುದನ್ನು ನಾವು ಕಾಯಬೇಕು. ನೀವು ನೋಡಿದಂತೆ, ಕೆಲವು ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ತಮಗೆ ಹೆಚ್ಚು ತಿಳಿದಿಲ್ಲದ ವಿಷಯಗಳ ಬಗ್ಗೆ ನೀಡಿದ ಹೇಳಿಕೆಗಳಿಗೆ ವಿದೇಶಾಂಗ ಸಚಿವಾಲಯವು ಪ್ರತಿಕ್ರಿಯಿಸಲು ಒಂದು ಕಾರಣವಿತ್ತು” ಎಂದು ಜೈಶಂಕರ್ ಎಎನ್‌ಐ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.

‘ತಮಗೆ ಹೆಚ್ಚು ತಿಳಿದಿಲ್ಲದ ವಿಷಯಗಳ ಬಗ್ಗೆ ನೀಡಿದ ಹೇಳಿಕೆಗಳಿಗೆ’- ಏನಿದರರ್ಥ? ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳಿಗೆ ಇಲ್ಲೇನು ನಡೆಯುತ್ತಿದೆ ಎಂಬ ಬಗ್ಗೆ ಅರಿವಿಲ್ಲದೆ ಟ್ವೀಟ್ ಮಾಡಿಬಿಟ್ಟರೆ? ಕೃಷಿ ಕಾಯ್ದೆಗಳನ್ನು ಅವರು ಸಂಪೂರ್ಣವಾಗಿ ಓದಿರಲಿಕ್ಕಿಲ್ಲ, ಓದುವ ಅಗತ್ಯವೂ ಇಲ್ಲ. ಆದರೆ, ಅವರು ಎತ್ತಿದ್ದು ಮಾನವ ಹಕ್ಕುಗಳ ವಿಷಯ ಎಂಬುದನ್ನು ವಿದೇಶಾಂಗ ಇಲಾಖೆ ನೆನಪಿಟ್ಟುಕೊಳ್ಳಲಿ. ಹಾಗೆ ನೋಡಿದರೆ, ಹೆಚ್ಚು ತಿಳಿಯದೇನೇ, ಅವರ ಇಲಾಖೆ ಕೊಟ್ಟ ಪ್ರಕಟಣೆಯೇ ಆತ್ಮವಂಚನೆಯಿಂದ ಕೂಡಿತ್ತಲ್ಲವೆ? ‘ಸಂಸತ್ತಿನಲ್ಲಿ ದೀರ್ಘ ಚರ್ಚೆಯ ನಂತರವಷ್ಟೆ ಈ ಕೃಷಿ ಕಾಯ್ದೆಗಳನ್ನು ಅಂಗೀಕಾರ ಮಾಡಲಾಗಿದೆ’ ಎಂಬ ಅವರ ಇಲಾಖೆಯ ಹೇಳಿಕಯೇ ಅರ್ಧಸತ್ಯದಿಂದ ಕೂಡಿದೆ.

ಕೆಳಮನೆಯಲ್ಲಿ ಸಿಕ್ಕಿರುವ ‘ಭಯಂಕರ’ ಬಹುಮತ ಇದಕ್ಕೆ ನೆರವಾಗಿತ್ತು. ಆದರೆ ಮೇಲ್ಮನೆಯಲ್ಲಿ ಬಹುಮತ ಇಲ್ಲದಿದ್ದಾಗಲೂ, ಈ ಕಾನೂನುಗಳ ಪರ ವಿಸ್ತೃತ ಚರ್ಚೆಯೇ ಇಲ್ಲದೆ, ಮತ ಸಂಖ್ಯೆಯನ್ನು ಎಣಿಕೆ ಮಾಡದೆಯೇ ಅಂಗೀಕಾರ ಪಡೆಯಲಾಗಿದೆ. ರಾಜ್ಯ ಸರ್ಕಾರಗಳ ಜೊತೆ ಚರ್ಚಿಸದೇ ಏಕಾಏಕಿ ಈ ಕಾಯ್ದೆಗಳನ್ನು ಹೇರಿದ್ದು ಒಕ್ಕೂಟ ವ್ಯವಸ್ಥೆಯನ್ನೇ ಅವಮಾನಿಸಿದೆ.
ಹೀಗಿರುವಾಗ ವಿದೇಶಾಂಗ ಸಚಿವ ಜೈಶಂಕರ್ ಯಾವ ಆಧಾರದಲ್ಲಿ ತಮ್ಮ ಇಲಾಖೆಯ ಪ್ರಕಟಣೆಗೆ ಅನುಮತಿ ನೀಡಿದರು? ‘ಸಂಸತ್ತಿನ ಸಂಪೂರ್ಣ ಒಪ್ಪಿಗೆ’ ನಿಜಕ್ಕೂ ಸಿಗದೇ ಇದ್ದಾಗ ಅದು ಸಿಕ್ಕಿದೆ ಎನ್ನುವುದು ಆತ್ಮವಂಚನೆಯಲ್ಲವೆ?

ಟೂಲ್‌ಕಿಟ್ ಅಂದರೆ ಅದರಲ್ಲೇನೂ ಸ್ಕೂಡ್ರೈವರ್, ಗರಗಸ ಅಥವಾ ಪಿಸ್ತೂಲ್ ಇರುವುದಿಲ್ಲ. ಟೂಲ್‌ಕಿಟ್ ಎಂಬುದು ಹಾರ್ಡ್ವೇರ್ ಕೂಡ ಅಲ್ಲ, ಅದು ಒಂದು ಚಳುವಳಿಯ ಕಾರ್ಯಕ್ರಮವನ್ನು, ಅದರ ಮುಂದಿನ ಯೋಜನೆ ಹೇಗಿರಲಿದೆ ಎಂಬುದನ್ನು ವಿವರಿಸುವ ಒಂದು ಸರಳ ಪಠ್ಯವಷ್ಟೇ. ಈಗ ದೊರೆತ ಟೂಲ್‌ಕಿಟ್ ಸಾರ್ವಜನಿಕವಾಗಿ ಲಭ್ಯವಿದೆ. ಅದರಲ್ಲೇನೂ ಈ ದೇಶದ ಬುಡ ಅಲ್ಲಾಡಿಸುವ ಯಾವ ಸಾಲೂ ಇಲ್ಲ. ಅದರಿಂದ ‘ಬಹಳಷ್ಟು ಬಹಿರಂಗ’ ಏನಾಯಿತೊ ಎಂಬುದನ್ನು ದಾಖಲೆ ಸಮೇತ ಜನರ ಮುಂದಿಡುವ ಬದಲು, ಬೆದರಿಕೆಯ ತಂತ್ರ ಅನುಸರಿಸುವ ಈ ಕ್ರಮ ಪ್ರಜಾಪ್ರಭುತ್ವ ವಿರೋಧಿಯೇ ಆಗಿದೆ.

-ಪಿ.ಕೆ. ಮಲ್ಲನಗೌಡರ್

(ಪತ್ರಕರ್ತರು, ಅಭಿಪ್ರಾಯಗಳು ವೈಯಕ್ತಿಕವಾದವುಗಳು)


ಇದನ್ನೂ ಓದಿ: ’ಟ್ರಾಕ್ಟರ್‌ ಕ್ರಾಂತಿ’ಯಲ್ಲಿ ಭಾಗವಹಿಸಿ: ದೇಶಕ್ಕೆ ರೈತ ಮುಖಂಡ ಟಿಕಾಯತ್‌ ಕರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...