Homeಮುಖಪುಟಟೂಲ್‌ ಕಿಟ್ ವಿಚಾರದಲ್ಲಿ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ಸರಿಯೇ?

ಟೂಲ್‌ ಕಿಟ್ ವಿಚಾರದಲ್ಲಿ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ಸರಿಯೇ?

- Advertisement -
- Advertisement -

ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಆಡಳಿತವನ್ನು ಬಂಧನದಲ್ಲಿರಿಸಿ ಸ್ಥಾಪಿತಗೊಂಡಿರುವ ಮಿಲಿಟರಿ ಆಡಳಿತ, ನಿನ್ನೆ ಶನಿವಾರ ದೇಶವ್ಯಾಪಿಯಾಗಿ ಇಂಟರ್‌ನೆಟ್ ಸ್ಥಗಿತಗೊಳಿಸಿದೆ. ವಿಶ್ವದ ಹಲವಾರು ದೇಶಗಳು ಈ ಕ್ರಮಗಳನ್ನು ಖಂಡಿಸುತ್ತಿವೆ. ಇದನ್ನು ಆಂತರಿಕ ಹಸ್ತಕ್ಷೇಪ ಎನ್ನಲಾಗುತ್ತದೆಯೇ?

ಇನ್ನೂ ಒಂದು ವಿಷಯ, ಕಳೆದ ವಾರ ಆ ದೇಶದಲ್ಲಿ ಮಿಲಿಟರಿ ದಂಗೆ ನಡೆದಾಗ ನಿಮ್ಮದೇ ಇಲಾಖೆ ಕಳವಳ ವ್ಯಕ್ತಪಡಿಸಿದ್ದು ಸೂಕ್ತವೇ ಆಗಿತ್ತು. ಓಕೆ, ಆದರೆ ಅದನ್ನು ಆಂತರಿಕ ಹಸ್ತಕ್ಷೇಪ ಎನ್ನಲಾಗುತ್ತದೆಯೇ ಜೈ ಶಂಕರ್ ಸರ್? ಈಗ ಅಲ್ಲಿ ಇಂಟರ್‌ನೆಟ್ ಸ್ಥಗಿತ ಮಾಡಿದ್ದರ ಕುರಿತು ನಿಮ್ಮ ಇಲಾಖೆ ಇನ್ನೂ ಆಕ್ಷೇಪ ವ್ಯಕ್ತ ಮಾಡಿಲ್ಲ. ಏಕೆಂದರೆ, ನಿಮ್ಮ ಇಲಾಖೆಯ ಮೂರ್ಖತನದ ಪ್ರಕಟಣೆ (ವಿದೇಶಿಯರ ಹಸ್ತಕ್ಷೇಪ ವಿರೋಧಿಸುವ ಪ್ರಕಟಣೆ). ಇಂದು ನೀವು ಮತ್ತು ನಿಮ್ಮ ಇಲಾಖೆ ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ದಬ್ಬಾಳಿಕೆಯನ್ನು ಖಂಡಿಸುವ ನೈತಿಕ ಅಧಿಕಾತವನ್ನೇ ಕಳೆದುಕೊಂಡು ಬಿಟ್ಟಿದ್ದೀರಿ, ಅಲ್ಲವೇ ಜೈ ಶಂಕರ್ ಜೀ?

ದೆಹಲಿ ಪೊಲೀಸರ ಹೆಜ್ಜೆಗಳಲ್ಲಿ ವಿದೇಶಾಂಗ ನೀತಿ!

ಸ್ವೀಡನ್‌ನ ಹದಿಹರೆಯದ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಹಂಚಿಕೊಂಡ ಟೂಲ್‌ಕಿಟ್‌ಗೆ ಖಲಿಸ್ತಾನಿ ಲಿಂಕ್ ದೊರೆತಿದೆ ಎಂದು ದೆಹಲಿ ಪೊಲೀಸರು ಹೇಳಿಕೊಂಡ ಎರಡು ದಿನಗಳ ನಂತರ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು, ‘ಈ ಡಾಕ್ಯುಮೆಂಟ್ ಬಹಳಷ್ಟು ವಿಷಯ ಬಹಿರಂಗಪಡಿಸಿದೆ ಮತ್ತು ಅಂತರರಾಷ್ಟ್ರೀಯ ಹೇಳಿಕೆಗಳಿಗೆ (ರಿಹಾನ್ನ, ಥನ್‌ಬರ್ಗ್, ಮೀನಾ ಹ್ಯಾರಿಸ್ ಮುಂತಾದವರು ರೈತ ಪ್ರತಿಭಟನೆ ಪರ ನೀಡಿದ ಹೇಳಿಕೆಗಳು) ಅವರ ಸಚಿವಾಲಯ ಏಕೆ ಪ್ರತಿಕ್ರಿಯಿಸಿತು ಎಂಬುದನ್ನು ಸ್ಪಷ್ಟವಾಗಿ ನೋಡಬಹುದು’ ಎಂದಿದ್ದಾರೆ.

‘ಸಾಕಷ್ಟು ಬಹಿರಂಗಪಡಿಸಿದೆ’….. ಅದೇನು ಬಹಿರಂಗಪಡಿಸಿದೆಯೋ ಎಂಬುದು ಪಬ್ಲಿಕ್ ಡೊಮೇನ್‌ನಲ್ಲಿ ಈಗಲೂ ಇದೆ. ಆ ಟೂಲ್‌ಕಿಟ್ ಅನ್ನೆ ಗ್ರೇಟಾ ಹಂಚಿಕೊಂಡಿದ್ದಾರಷ್ಟೇ. ವಿದೇಶಾಂಗ ಸಚಿವ ಜೈಶಂಕರ್ ಅವರು, ಟೂಲ್‌ಕಿಟ್‌ನಿಂದ ‘ಬಹಳಷ್ಟು ವಿಷಯ’ ಬಹಿರಂಗವಾದ ಕುರಿತು ಮಾತಾಡುವುದು ಮತ್ತು ಟ್ವೀಟ್ ಮಾಡುವುದನ್ನು ನೋಡಿದರೆ, ಇವರು ಕೂಡ ದೆಹಲಿ ಪೊಲಿಸರ ಪಥ ಸಂಚಲನದಲ್ಲಿ ಕೋರಸ್ ಹೇಳುತ್ತಿದ್ದಾರೆ ಅನಿಸುತ್ತದೆ. ಹಾಗೆಯೇ, ಸರ್ಕಾರದ ಪರ ಬ್ಯಾಟಿಂಗ್ ಕಂ ಆ್ಯಕ್ಟಿಂಗ್ ಮಾಡಿದ ಸೆಲೆಬ್ರಿಟಿಗಳ ಸಾಲಿಗೆ ಸೇರುತ್ತಿದ್ದಾರೆ ಅನಿಸುತ್ತದೆ.

ಅದರ ಜೊತೆಗೆ, ಗಣರಾಜ್ಯ ದಿನದಂದು ಕೆಲವು ಪುಂಡರಿಂದ ಕೆಂಪುಕೋಟೆ ಆವರಣದೊಳಗೆ ನಡೆದ ಹಿಂಸಾಚಾರವನ್ನು ನಿಯಂತ್ರಿಸಲಾಗದ ‘ದಿ ಗ್ರೇಟ್’ ದೆಹಲಿ ಪೊಲೀಸರ ಊಹೆಗಳನ್ನೇ ಜೈ ಶಂಕರ್ ಈಗ ಪ್ರತಿಪಾದಿಸುತ್ತಿದ್ದಾರೆ. ಅಂದರೆ ಅವರೀಗ ದೆಹಲಿ ಪೊಲೀಸರ ‘ಪಥ ಸಂಚಲನದಲ್ಲಿ’ ಹೆಜ್ಜೆ ಹಾಕುತ್ತಿದ್ದಾರಷ್ಟೇ.

“ಇದು ಬಹಳಷ್ಟನ್ನು ಬಹಿರಂಗಪಡಿಸಿದೆ. ಇನ್ನೂ ಏನೇನು ಹೊರಬರುತ್ತದೆ ಎಂಬುದನ್ನು ನಾವು ಕಾಯಬೇಕು. ನೀವು ನೋಡಿದಂತೆ, ಕೆಲವು ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ತಮಗೆ ಹೆಚ್ಚು ತಿಳಿದಿಲ್ಲದ ವಿಷಯಗಳ ಬಗ್ಗೆ ನೀಡಿದ ಹೇಳಿಕೆಗಳಿಗೆ ವಿದೇಶಾಂಗ ಸಚಿವಾಲಯವು ಪ್ರತಿಕ್ರಿಯಿಸಲು ಒಂದು ಕಾರಣವಿತ್ತು” ಎಂದು ಜೈಶಂಕರ್ ಎಎನ್‌ಐ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.

‘ತಮಗೆ ಹೆಚ್ಚು ತಿಳಿದಿಲ್ಲದ ವಿಷಯಗಳ ಬಗ್ಗೆ ನೀಡಿದ ಹೇಳಿಕೆಗಳಿಗೆ’- ಏನಿದರರ್ಥ? ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳಿಗೆ ಇಲ್ಲೇನು ನಡೆಯುತ್ತಿದೆ ಎಂಬ ಬಗ್ಗೆ ಅರಿವಿಲ್ಲದೆ ಟ್ವೀಟ್ ಮಾಡಿಬಿಟ್ಟರೆ? ಕೃಷಿ ಕಾಯ್ದೆಗಳನ್ನು ಅವರು ಸಂಪೂರ್ಣವಾಗಿ ಓದಿರಲಿಕ್ಕಿಲ್ಲ, ಓದುವ ಅಗತ್ಯವೂ ಇಲ್ಲ. ಆದರೆ, ಅವರು ಎತ್ತಿದ್ದು ಮಾನವ ಹಕ್ಕುಗಳ ವಿಷಯ ಎಂಬುದನ್ನು ವಿದೇಶಾಂಗ ಇಲಾಖೆ ನೆನಪಿಟ್ಟುಕೊಳ್ಳಲಿ. ಹಾಗೆ ನೋಡಿದರೆ, ಹೆಚ್ಚು ತಿಳಿಯದೇನೇ, ಅವರ ಇಲಾಖೆ ಕೊಟ್ಟ ಪ್ರಕಟಣೆಯೇ ಆತ್ಮವಂಚನೆಯಿಂದ ಕೂಡಿತ್ತಲ್ಲವೆ? ‘ಸಂಸತ್ತಿನಲ್ಲಿ ದೀರ್ಘ ಚರ್ಚೆಯ ನಂತರವಷ್ಟೆ ಈ ಕೃಷಿ ಕಾಯ್ದೆಗಳನ್ನು ಅಂಗೀಕಾರ ಮಾಡಲಾಗಿದೆ’ ಎಂಬ ಅವರ ಇಲಾಖೆಯ ಹೇಳಿಕಯೇ ಅರ್ಧಸತ್ಯದಿಂದ ಕೂಡಿದೆ.

ಕೆಳಮನೆಯಲ್ಲಿ ಸಿಕ್ಕಿರುವ ‘ಭಯಂಕರ’ ಬಹುಮತ ಇದಕ್ಕೆ ನೆರವಾಗಿತ್ತು. ಆದರೆ ಮೇಲ್ಮನೆಯಲ್ಲಿ ಬಹುಮತ ಇಲ್ಲದಿದ್ದಾಗಲೂ, ಈ ಕಾನೂನುಗಳ ಪರ ವಿಸ್ತೃತ ಚರ್ಚೆಯೇ ಇಲ್ಲದೆ, ಮತ ಸಂಖ್ಯೆಯನ್ನು ಎಣಿಕೆ ಮಾಡದೆಯೇ ಅಂಗೀಕಾರ ಪಡೆಯಲಾಗಿದೆ. ರಾಜ್ಯ ಸರ್ಕಾರಗಳ ಜೊತೆ ಚರ್ಚಿಸದೇ ಏಕಾಏಕಿ ಈ ಕಾಯ್ದೆಗಳನ್ನು ಹೇರಿದ್ದು ಒಕ್ಕೂಟ ವ್ಯವಸ್ಥೆಯನ್ನೇ ಅವಮಾನಿಸಿದೆ.
ಹೀಗಿರುವಾಗ ವಿದೇಶಾಂಗ ಸಚಿವ ಜೈಶಂಕರ್ ಯಾವ ಆಧಾರದಲ್ಲಿ ತಮ್ಮ ಇಲಾಖೆಯ ಪ್ರಕಟಣೆಗೆ ಅನುಮತಿ ನೀಡಿದರು? ‘ಸಂಸತ್ತಿನ ಸಂಪೂರ್ಣ ಒಪ್ಪಿಗೆ’ ನಿಜಕ್ಕೂ ಸಿಗದೇ ಇದ್ದಾಗ ಅದು ಸಿಕ್ಕಿದೆ ಎನ್ನುವುದು ಆತ್ಮವಂಚನೆಯಲ್ಲವೆ?

ಟೂಲ್‌ಕಿಟ್ ಅಂದರೆ ಅದರಲ್ಲೇನೂ ಸ್ಕೂಡ್ರೈವರ್, ಗರಗಸ ಅಥವಾ ಪಿಸ್ತೂಲ್ ಇರುವುದಿಲ್ಲ. ಟೂಲ್‌ಕಿಟ್ ಎಂಬುದು ಹಾರ್ಡ್ವೇರ್ ಕೂಡ ಅಲ್ಲ, ಅದು ಒಂದು ಚಳುವಳಿಯ ಕಾರ್ಯಕ್ರಮವನ್ನು, ಅದರ ಮುಂದಿನ ಯೋಜನೆ ಹೇಗಿರಲಿದೆ ಎಂಬುದನ್ನು ವಿವರಿಸುವ ಒಂದು ಸರಳ ಪಠ್ಯವಷ್ಟೇ. ಈಗ ದೊರೆತ ಟೂಲ್‌ಕಿಟ್ ಸಾರ್ವಜನಿಕವಾಗಿ ಲಭ್ಯವಿದೆ. ಅದರಲ್ಲೇನೂ ಈ ದೇಶದ ಬುಡ ಅಲ್ಲಾಡಿಸುವ ಯಾವ ಸಾಲೂ ಇಲ್ಲ. ಅದರಿಂದ ‘ಬಹಳಷ್ಟು ಬಹಿರಂಗ’ ಏನಾಯಿತೊ ಎಂಬುದನ್ನು ದಾಖಲೆ ಸಮೇತ ಜನರ ಮುಂದಿಡುವ ಬದಲು, ಬೆದರಿಕೆಯ ತಂತ್ರ ಅನುಸರಿಸುವ ಈ ಕ್ರಮ ಪ್ರಜಾಪ್ರಭುತ್ವ ವಿರೋಧಿಯೇ ಆಗಿದೆ.

-ಪಿ.ಕೆ. ಮಲ್ಲನಗೌಡರ್

(ಪತ್ರಕರ್ತರು, ಅಭಿಪ್ರಾಯಗಳು ವೈಯಕ್ತಿಕವಾದವುಗಳು)


ಇದನ್ನೂ ಓದಿ: ’ಟ್ರಾಕ್ಟರ್‌ ಕ್ರಾಂತಿ’ಯಲ್ಲಿ ಭಾಗವಹಿಸಿ: ದೇಶಕ್ಕೆ ರೈತ ಮುಖಂಡ ಟಿಕಾಯತ್‌ ಕರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...