Homeಮುಖಪುಟಟೂಲ್‌ ಕಿಟ್ ವಿಚಾರದಲ್ಲಿ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ಸರಿಯೇ?

ಟೂಲ್‌ ಕಿಟ್ ವಿಚಾರದಲ್ಲಿ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ಸರಿಯೇ?

- Advertisement -
- Advertisement -

ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಆಡಳಿತವನ್ನು ಬಂಧನದಲ್ಲಿರಿಸಿ ಸ್ಥಾಪಿತಗೊಂಡಿರುವ ಮಿಲಿಟರಿ ಆಡಳಿತ, ನಿನ್ನೆ ಶನಿವಾರ ದೇಶವ್ಯಾಪಿಯಾಗಿ ಇಂಟರ್‌ನೆಟ್ ಸ್ಥಗಿತಗೊಳಿಸಿದೆ. ವಿಶ್ವದ ಹಲವಾರು ದೇಶಗಳು ಈ ಕ್ರಮಗಳನ್ನು ಖಂಡಿಸುತ್ತಿವೆ. ಇದನ್ನು ಆಂತರಿಕ ಹಸ್ತಕ್ಷೇಪ ಎನ್ನಲಾಗುತ್ತದೆಯೇ?

ಇನ್ನೂ ಒಂದು ವಿಷಯ, ಕಳೆದ ವಾರ ಆ ದೇಶದಲ್ಲಿ ಮಿಲಿಟರಿ ದಂಗೆ ನಡೆದಾಗ ನಿಮ್ಮದೇ ಇಲಾಖೆ ಕಳವಳ ವ್ಯಕ್ತಪಡಿಸಿದ್ದು ಸೂಕ್ತವೇ ಆಗಿತ್ತು. ಓಕೆ, ಆದರೆ ಅದನ್ನು ಆಂತರಿಕ ಹಸ್ತಕ್ಷೇಪ ಎನ್ನಲಾಗುತ್ತದೆಯೇ ಜೈ ಶಂಕರ್ ಸರ್? ಈಗ ಅಲ್ಲಿ ಇಂಟರ್‌ನೆಟ್ ಸ್ಥಗಿತ ಮಾಡಿದ್ದರ ಕುರಿತು ನಿಮ್ಮ ಇಲಾಖೆ ಇನ್ನೂ ಆಕ್ಷೇಪ ವ್ಯಕ್ತ ಮಾಡಿಲ್ಲ. ಏಕೆಂದರೆ, ನಿಮ್ಮ ಇಲಾಖೆಯ ಮೂರ್ಖತನದ ಪ್ರಕಟಣೆ (ವಿದೇಶಿಯರ ಹಸ್ತಕ್ಷೇಪ ವಿರೋಧಿಸುವ ಪ್ರಕಟಣೆ). ಇಂದು ನೀವು ಮತ್ತು ನಿಮ್ಮ ಇಲಾಖೆ ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ದಬ್ಬಾಳಿಕೆಯನ್ನು ಖಂಡಿಸುವ ನೈತಿಕ ಅಧಿಕಾತವನ್ನೇ ಕಳೆದುಕೊಂಡು ಬಿಟ್ಟಿದ್ದೀರಿ, ಅಲ್ಲವೇ ಜೈ ಶಂಕರ್ ಜೀ?

ದೆಹಲಿ ಪೊಲೀಸರ ಹೆಜ್ಜೆಗಳಲ್ಲಿ ವಿದೇಶಾಂಗ ನೀತಿ!

ಸ್ವೀಡನ್‌ನ ಹದಿಹರೆಯದ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಹಂಚಿಕೊಂಡ ಟೂಲ್‌ಕಿಟ್‌ಗೆ ಖಲಿಸ್ತಾನಿ ಲಿಂಕ್ ದೊರೆತಿದೆ ಎಂದು ದೆಹಲಿ ಪೊಲೀಸರು ಹೇಳಿಕೊಂಡ ಎರಡು ದಿನಗಳ ನಂತರ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು, ‘ಈ ಡಾಕ್ಯುಮೆಂಟ್ ಬಹಳಷ್ಟು ವಿಷಯ ಬಹಿರಂಗಪಡಿಸಿದೆ ಮತ್ತು ಅಂತರರಾಷ್ಟ್ರೀಯ ಹೇಳಿಕೆಗಳಿಗೆ (ರಿಹಾನ್ನ, ಥನ್‌ಬರ್ಗ್, ಮೀನಾ ಹ್ಯಾರಿಸ್ ಮುಂತಾದವರು ರೈತ ಪ್ರತಿಭಟನೆ ಪರ ನೀಡಿದ ಹೇಳಿಕೆಗಳು) ಅವರ ಸಚಿವಾಲಯ ಏಕೆ ಪ್ರತಿಕ್ರಿಯಿಸಿತು ಎಂಬುದನ್ನು ಸ್ಪಷ್ಟವಾಗಿ ನೋಡಬಹುದು’ ಎಂದಿದ್ದಾರೆ.

‘ಸಾಕಷ್ಟು ಬಹಿರಂಗಪಡಿಸಿದೆ’….. ಅದೇನು ಬಹಿರಂಗಪಡಿಸಿದೆಯೋ ಎಂಬುದು ಪಬ್ಲಿಕ್ ಡೊಮೇನ್‌ನಲ್ಲಿ ಈಗಲೂ ಇದೆ. ಆ ಟೂಲ್‌ಕಿಟ್ ಅನ್ನೆ ಗ್ರೇಟಾ ಹಂಚಿಕೊಂಡಿದ್ದಾರಷ್ಟೇ. ವಿದೇಶಾಂಗ ಸಚಿವ ಜೈಶಂಕರ್ ಅವರು, ಟೂಲ್‌ಕಿಟ್‌ನಿಂದ ‘ಬಹಳಷ್ಟು ವಿಷಯ’ ಬಹಿರಂಗವಾದ ಕುರಿತು ಮಾತಾಡುವುದು ಮತ್ತು ಟ್ವೀಟ್ ಮಾಡುವುದನ್ನು ನೋಡಿದರೆ, ಇವರು ಕೂಡ ದೆಹಲಿ ಪೊಲಿಸರ ಪಥ ಸಂಚಲನದಲ್ಲಿ ಕೋರಸ್ ಹೇಳುತ್ತಿದ್ದಾರೆ ಅನಿಸುತ್ತದೆ. ಹಾಗೆಯೇ, ಸರ್ಕಾರದ ಪರ ಬ್ಯಾಟಿಂಗ್ ಕಂ ಆ್ಯಕ್ಟಿಂಗ್ ಮಾಡಿದ ಸೆಲೆಬ್ರಿಟಿಗಳ ಸಾಲಿಗೆ ಸೇರುತ್ತಿದ್ದಾರೆ ಅನಿಸುತ್ತದೆ.

ಅದರ ಜೊತೆಗೆ, ಗಣರಾಜ್ಯ ದಿನದಂದು ಕೆಲವು ಪುಂಡರಿಂದ ಕೆಂಪುಕೋಟೆ ಆವರಣದೊಳಗೆ ನಡೆದ ಹಿಂಸಾಚಾರವನ್ನು ನಿಯಂತ್ರಿಸಲಾಗದ ‘ದಿ ಗ್ರೇಟ್’ ದೆಹಲಿ ಪೊಲೀಸರ ಊಹೆಗಳನ್ನೇ ಜೈ ಶಂಕರ್ ಈಗ ಪ್ರತಿಪಾದಿಸುತ್ತಿದ್ದಾರೆ. ಅಂದರೆ ಅವರೀಗ ದೆಹಲಿ ಪೊಲೀಸರ ‘ಪಥ ಸಂಚಲನದಲ್ಲಿ’ ಹೆಜ್ಜೆ ಹಾಕುತ್ತಿದ್ದಾರಷ್ಟೇ.

“ಇದು ಬಹಳಷ್ಟನ್ನು ಬಹಿರಂಗಪಡಿಸಿದೆ. ಇನ್ನೂ ಏನೇನು ಹೊರಬರುತ್ತದೆ ಎಂಬುದನ್ನು ನಾವು ಕಾಯಬೇಕು. ನೀವು ನೋಡಿದಂತೆ, ಕೆಲವು ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ತಮಗೆ ಹೆಚ್ಚು ತಿಳಿದಿಲ್ಲದ ವಿಷಯಗಳ ಬಗ್ಗೆ ನೀಡಿದ ಹೇಳಿಕೆಗಳಿಗೆ ವಿದೇಶಾಂಗ ಸಚಿವಾಲಯವು ಪ್ರತಿಕ್ರಿಯಿಸಲು ಒಂದು ಕಾರಣವಿತ್ತು” ಎಂದು ಜೈಶಂಕರ್ ಎಎನ್‌ಐ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.

‘ತಮಗೆ ಹೆಚ್ಚು ತಿಳಿದಿಲ್ಲದ ವಿಷಯಗಳ ಬಗ್ಗೆ ನೀಡಿದ ಹೇಳಿಕೆಗಳಿಗೆ’- ಏನಿದರರ್ಥ? ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳಿಗೆ ಇಲ್ಲೇನು ನಡೆಯುತ್ತಿದೆ ಎಂಬ ಬಗ್ಗೆ ಅರಿವಿಲ್ಲದೆ ಟ್ವೀಟ್ ಮಾಡಿಬಿಟ್ಟರೆ? ಕೃಷಿ ಕಾಯ್ದೆಗಳನ್ನು ಅವರು ಸಂಪೂರ್ಣವಾಗಿ ಓದಿರಲಿಕ್ಕಿಲ್ಲ, ಓದುವ ಅಗತ್ಯವೂ ಇಲ್ಲ. ಆದರೆ, ಅವರು ಎತ್ತಿದ್ದು ಮಾನವ ಹಕ್ಕುಗಳ ವಿಷಯ ಎಂಬುದನ್ನು ವಿದೇಶಾಂಗ ಇಲಾಖೆ ನೆನಪಿಟ್ಟುಕೊಳ್ಳಲಿ. ಹಾಗೆ ನೋಡಿದರೆ, ಹೆಚ್ಚು ತಿಳಿಯದೇನೇ, ಅವರ ಇಲಾಖೆ ಕೊಟ್ಟ ಪ್ರಕಟಣೆಯೇ ಆತ್ಮವಂಚನೆಯಿಂದ ಕೂಡಿತ್ತಲ್ಲವೆ? ‘ಸಂಸತ್ತಿನಲ್ಲಿ ದೀರ್ಘ ಚರ್ಚೆಯ ನಂತರವಷ್ಟೆ ಈ ಕೃಷಿ ಕಾಯ್ದೆಗಳನ್ನು ಅಂಗೀಕಾರ ಮಾಡಲಾಗಿದೆ’ ಎಂಬ ಅವರ ಇಲಾಖೆಯ ಹೇಳಿಕಯೇ ಅರ್ಧಸತ್ಯದಿಂದ ಕೂಡಿದೆ.

ಕೆಳಮನೆಯಲ್ಲಿ ಸಿಕ್ಕಿರುವ ‘ಭಯಂಕರ’ ಬಹುಮತ ಇದಕ್ಕೆ ನೆರವಾಗಿತ್ತು. ಆದರೆ ಮೇಲ್ಮನೆಯಲ್ಲಿ ಬಹುಮತ ಇಲ್ಲದಿದ್ದಾಗಲೂ, ಈ ಕಾನೂನುಗಳ ಪರ ವಿಸ್ತೃತ ಚರ್ಚೆಯೇ ಇಲ್ಲದೆ, ಮತ ಸಂಖ್ಯೆಯನ್ನು ಎಣಿಕೆ ಮಾಡದೆಯೇ ಅಂಗೀಕಾರ ಪಡೆಯಲಾಗಿದೆ. ರಾಜ್ಯ ಸರ್ಕಾರಗಳ ಜೊತೆ ಚರ್ಚಿಸದೇ ಏಕಾಏಕಿ ಈ ಕಾಯ್ದೆಗಳನ್ನು ಹೇರಿದ್ದು ಒಕ್ಕೂಟ ವ್ಯವಸ್ಥೆಯನ್ನೇ ಅವಮಾನಿಸಿದೆ.
ಹೀಗಿರುವಾಗ ವಿದೇಶಾಂಗ ಸಚಿವ ಜೈಶಂಕರ್ ಯಾವ ಆಧಾರದಲ್ಲಿ ತಮ್ಮ ಇಲಾಖೆಯ ಪ್ರಕಟಣೆಗೆ ಅನುಮತಿ ನೀಡಿದರು? ‘ಸಂಸತ್ತಿನ ಸಂಪೂರ್ಣ ಒಪ್ಪಿಗೆ’ ನಿಜಕ್ಕೂ ಸಿಗದೇ ಇದ್ದಾಗ ಅದು ಸಿಕ್ಕಿದೆ ಎನ್ನುವುದು ಆತ್ಮವಂಚನೆಯಲ್ಲವೆ?

ಟೂಲ್‌ಕಿಟ್ ಅಂದರೆ ಅದರಲ್ಲೇನೂ ಸ್ಕೂಡ್ರೈವರ್, ಗರಗಸ ಅಥವಾ ಪಿಸ್ತೂಲ್ ಇರುವುದಿಲ್ಲ. ಟೂಲ್‌ಕಿಟ್ ಎಂಬುದು ಹಾರ್ಡ್ವೇರ್ ಕೂಡ ಅಲ್ಲ, ಅದು ಒಂದು ಚಳುವಳಿಯ ಕಾರ್ಯಕ್ರಮವನ್ನು, ಅದರ ಮುಂದಿನ ಯೋಜನೆ ಹೇಗಿರಲಿದೆ ಎಂಬುದನ್ನು ವಿವರಿಸುವ ಒಂದು ಸರಳ ಪಠ್ಯವಷ್ಟೇ. ಈಗ ದೊರೆತ ಟೂಲ್‌ಕಿಟ್ ಸಾರ್ವಜನಿಕವಾಗಿ ಲಭ್ಯವಿದೆ. ಅದರಲ್ಲೇನೂ ಈ ದೇಶದ ಬುಡ ಅಲ್ಲಾಡಿಸುವ ಯಾವ ಸಾಲೂ ಇಲ್ಲ. ಅದರಿಂದ ‘ಬಹಳಷ್ಟು ಬಹಿರಂಗ’ ಏನಾಯಿತೊ ಎಂಬುದನ್ನು ದಾಖಲೆ ಸಮೇತ ಜನರ ಮುಂದಿಡುವ ಬದಲು, ಬೆದರಿಕೆಯ ತಂತ್ರ ಅನುಸರಿಸುವ ಈ ಕ್ರಮ ಪ್ರಜಾಪ್ರಭುತ್ವ ವಿರೋಧಿಯೇ ಆಗಿದೆ.

-ಪಿ.ಕೆ. ಮಲ್ಲನಗೌಡರ್

(ಪತ್ರಕರ್ತರು, ಅಭಿಪ್ರಾಯಗಳು ವೈಯಕ್ತಿಕವಾದವುಗಳು)


ಇದನ್ನೂ ಓದಿ: ’ಟ್ರಾಕ್ಟರ್‌ ಕ್ರಾಂತಿ’ಯಲ್ಲಿ ಭಾಗವಹಿಸಿ: ದೇಶಕ್ಕೆ ರೈತ ಮುಖಂಡ ಟಿಕಾಯತ್‌ ಕರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...