Homeಕರ್ನಾಟಕಮೋದಿಯವರು ‘ಮನ್ ಕಿ ಬಾತ್‍ನಲ್ಲಿ ಅಂತ್ಯೋದಯ; ದಿಲ್ ಕಾ ಕಾಮ್‍ನಲ್ಲಿ ಉಳ್ಳವರ ಸೇವಕ’ - ದೇವನೂರು

ಮೋದಿಯವರು ‘ಮನ್ ಕಿ ಬಾತ್‍ನಲ್ಲಿ ಅಂತ್ಯೋದಯ; ದಿಲ್ ಕಾ ಕಾಮ್‍ನಲ್ಲಿ ಉಳ್ಳವರ ಸೇವಕ’ – ದೇವನೂರು

- Advertisement -
- Advertisement -

ಸಂದರ್ಶನ
| ಡಾ.ಎಸ್ ತುಕಾರಾಂ |

ಪರ್ಯಾಯ ರಾಜಕಾರಣದ ಪ್ರಯತ್ನಗಳನ್ನು ನಡೆಸುತ್ತಾ ಸಕ್ರಿಯವಾಗಿರುವ ಕನ್ನಡದ ಮಹತ್ವದ ಲೇಖಕ ದೇವನೂರ ಮಹಾದೇವ ಅವರನ್ನು ತುಕಾರಾಂ ಅವರು ಸಂಯುಕ್ತ ಕರ್ನಾಟಕಕ್ಕಾಗಿ ಸಂದರ್ಶಿಸಿದ್ದರು. ಆ ಸಂದರ್ಶನದ ಪೂರ್ಣಪಾಠ ಇಲ್ಲಿದೆ. ಇದನ್ನು ಪ್ರಕಟಿಸಲು ಅನುಮತಿ ಕೊಟ್ಟ ದೇವನೂರ ಮಹಾದೇವ, ತುಕಾರಾಂ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾದ ಹುಣಸವಾಡಿ ರಾಜನ್ ಅವರಿಗೆ ಧನ್ಯವಾದಗಳು ತಿಳಿಸಲು ಬಯಸುತ್ತೇವೆ.

ನಿಮ್ಮ ಸ್ವರಾಜ್ ಇಂಡಿಯಾ ಪಕ್ಷ ಲೋಕಸಭೆಗೆ ರಾಜ್ಯದಲ್ಲಿ ಯಾವ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿಲ್ಲವಲ್ಲ, ಯಾಕೆ?
ರೈತ ಮತ್ತು ದಲಿತ ಸಂಘಟನೆಗಳ ಕೂಡಿಕೆಯ ಸ್ವರಾಜ್ ಇಂಡಿಯಾದ ನೆಲೆ ಇರುವುದು ಜಿಲ್ಲಾ ಪಂಚಾಯ್ತ್, ತಾಲ್ಲೂಕು ಪಂಚಾಯ್ತ್ ಕ್ಷೇತ್ರಗಳಲ್ಲಿ. ಹಾಗಾಗಿ ನಿಲ್ಲಿಸಿಲ್ಲ. ಈ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಅವರಿಗೆ ಬೆಂಬಲ ನೀಡಿದ್ದೇವೆ.

• ಹಾಗದರೆ ಉಳಿದೆಡೆ ಲೋಕಸಭಾ ಕ್ಷೇತ್ರಗಳಲ್ಲಿ ನಿಮ್ಮ ಕೆಲಸ ಏನು?
ಸ್ವರಾಜ್ ಇಂಡಿಯಾ “ದೇಶಕ್ಕಾಗಿ ನಾವು” ಎಂಬ ಜಾಗೃತಿಯ ಆಂದೋಲನದ ಭಾಗವಾಗಿದೆ. ದೇಶವನ್ನು ಕಿತ್ತು ತಿನ್ನುತ್ತಿರುವ ನಿರುದ್ಯೋಗ, ತತ್ತರಿಸುತ್ತಿರುವ ಕೃಷಿ ಇತ್ಯಾದಿ ವಿಷಯಗಳನ್ನು ಮುನ್ನೆಲೆಗೆ ತಂದು ಚುನಾವಣಾ ಸಂದರ್ಭದಲ್ಲಿ ಚರ್ಚೆಯಾಗುವಂತೆ ವಾತಾವರಣ ಉಂಟುಮಾಡಿದ್ದೇವೆ. ಇದೇನು ಕಮ್ಮಿ ರಾಜಕಾರಣವಲ್ಲ!

• ನೀವು “ದೇಶಕ್ಕಾಗಿ ನಾವು” ಅನ್ನುತ್ತಿದ್ದರೆ ಬಿಜೆಪಿಯವರು “ದೇಶಕ್ಕಾಗಿ ಮೋದಿ” ಅನ್ನುತ್ತಿದ್ದಾರಲ್ಲ!
ಅವರು ಭಾವನಾತ್ಮಕ ವಿಷಯಗಳನ್ನು ಚುನಾವಣಾ ವಿಷಯವಾಗಿ ಮಾಡಲು ಪ್ರಯತ್ನಿಸಿ ವಿಫಲರಾಗಿ ದಿಕ್ಕೆಟ್ಟು ‘ಮೋದಿ ಮೋದಿ’ ಎಂದು ಕಿರುಚುತ್ತಿದ್ದಾರೆ. ಹೀಗೆ ಕಿರುಚುತ್ತಿರುವವರು ಬಹುತೇಕ ನಿರುದ್ಯೋಗ ಯುವಕರು. ನಿರುದ್ಯೋಗ ಕಳೆದ ನಲವತ್ತೈದು ವರ್ಷಗಳಲ್ಲಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿರಲಿಲ್ಲ ಎಂದು ಅಂಕಿಅಂಶಗಳು ಹೇಳುತ್ತವೆ. ವರ್ಷಕ್ಕೆ ಕೋಟಿಗಟ್ಟಲೆ ಉದ್ಯೋಗ ನೀಡುತ್ತೇವೆ ಎಂದು ಜನತೆಗೆ ವಚನ ನೀಡಿ ಅಧಿಕಾರಕ್ಕೆ ಬಂದ ವ್ಯಕ್ತಿಯೊಬ್ಬ ನೀಡುವುದಿರಲಿ, ಯಥಾಸ್ಥಿತಿಯನ್ನು ಉಳಿಸಿಕೊಳ್ಳಲಿಲ್ಲ. ಬದಲಾಗಿ ಉದ್ಯೋಗ ನಷ್ಟ ಮಾಡಿಬಿಟ್ಟ. ವಚನಪಾಲಕ ರಾಮನನ್ನು ಈ ವಚನ ಭ್ರಷ್ಟರು ಹೇಗೆ ಉಚ್ಚಾರಣೆ ಮಾಡುತ್ತಾರೋ ನನಗೆ ಅರ್ಥವಾಗುತ್ತಿಲ್ಲ. ಬಹುಶಃ ಆತ್ಮಸಾಕ್ಷಿ ಅಳುಕು ಇಲ್ಲದವರಿಗೆ ಇದು ಸಾಧ್ಯವಾಗಬಹುದು. ಅದಕ್ಕೇ ಬಿಜೆಪಿ ಅಧ್ಯಕ್ಷ ಅಮಿತ್ ಷಾ ತಮ್ಮನ್ನು ಅಧಿಕಾರಕ್ಕೆ ತಂದ ತಮ್ಮ ಪ್ರಣಾಳಿಕೆಯ ಚುನಾವಣಾ ಭರವಸೆಗಳನ್ನು `ಚುನಾವಣಾ ಜುಮ್ಲಾ (ಸುಳ್ಳು)’ ಎಂದು ಹೇಳುತ್ತಾರೆ. ಇದು ನಿರ್ಲಜ್ಜತೆಯ ತುಟ್ಟತುದಿ.

• ಆದರೆ ಬಿಜೆಪಿಯವರು ‘ದೇಶ ಮೊದಲು, ಪಕ್ಷ ನಂತರ, ಕೊನೆಗೆ ವ್ಯಕ್ತಿ’ ಅನ್ನುತ್ತಾರಲ್ಲ?
ಅವರ ನುಡಿ ನೋಡಬೇಡಿ, ನಡೆ ನೋಡಿ. ದೇಶದ ಸಾರ್ವಜನಿಕ ಸಂಪತ್ತನ್ನು ಮಾರುತ್ತಿರುವವರು ಯಾವ ನಾಲಿಗೆಯಲ್ಲಿ ದೇಶ ಮೊದಲು ಅನ್ನುತ್ತಿದ್ದಾರೆ? ಇದು ದೇಶವನ್ನೇ ಮಾರಿದಂತಾಗುವುದಿಲ್ಲವೇ? ಜೊತೆಗೆ ಪ್ರಧಾನ ಮಂತ್ರಿ ಮೋದಿಯವರ ಮಾತುಗಾರಿಕೆಯ ಏರಿಳಿತ, ಹಾವಭಾವ ನೋಡಿದರೆ ಏನನ್ನಿಸುತ್ತದೆ? ಇದು ಹಾರಾಜು ಹಾಕುವವರ ಹಾವಭಾವ, ಮಾತುಗಾರಿಕೆಯಂತೆ ಕಾಣುವುದಿಲ್ಲವೆ? ಇನ್ನು ಪಕ್ಷಕ್ಕೆ ಬಂದರೆ ಬಿಜೆಪಿ ಪಕ್ಷ ಎಲ್ಲಿದೆ? ಅದೊಂದು ಕೂಗುಮಾರಿ ಗುಂಪುಮಂದೆಯಾಗಿದೆ. ಅಲ್ಲಿರುವುದು ಇಬ್ಬರೆ. ಮೂರನೆಯವರಿಗೆ ಸ್ಥಾನವಿಲ್ಲ. ಜೊತೆಗೆ ಕೇಂದ್ರ ಸಚಿವ ಸಂಪುಟವನ್ನೇ ನೋಡಿ- ಅಲ್ಲಿರುವುದು ಒಬ್ಬರೆ! ಉಳಿದ ಸಚಿವರು ಪ್ರಧಾನಮಂತ್ರಿಗಳ ಪರಿಚಾರಕರು. ಬಿಜೆಪಿಯವರು ದೇಶ ಮೊದಲು, ಪಕ್ಷ ನಂತರ, ಕೊನೆಗೆ ವ್ಯಕ್ತಿ ಅಂತಾರಲ್ಲ ಅದನ್ನು ಮೋದಿಯವರು ತಲೆಕೆಳಗೆ ಮಾಡಿಬಿಟ್ಟರು. ಈ ಸಲದ ಚುನಾವಣಾ ಪ್ರಣಾಳಿಕೆ ನೋಡಿ- ಅಲ್ಲಿ ಮೋದಿಯವರೊಬ್ಬರ ಫೋಟೋ ಮಾತ್ರವಿದೆ.

• ಅಂದರೆ ಮೋದಿಯವರು ಏಕವ್ಯಕ್ತಿ ಅಧಿಕಾರ ಕೇಂದ್ರದತ್ತ ನಡೆಯುತ್ತಿದ್ದಾರೆ ಎನ್ನುವುದು ನಿಮ್ಮ ಆರೋಪವೇ?
ಶಾಸ್ತ್ರ ಕೇಳಲೇಬೇಕಾಗಿಲ್ಲ. ಮೋದಿಯವರದು ಏಕವ್ಯಕ್ತಿ ಕೇಂದ್ರಿತ ಅಧಿಕಾರ ಅನ್ನುವ ಮಾತು ಬಿಜೆಪಿ ಪಕ್ಷದ ನಾಯಕರ ಅಸಹಾಯಕ ಪಿಸುನುಡಿಗಳು.

• ಹಾಗಾದರೆ ಈ ಹಿಂದೆ ಇಂದಿರಾಗಾಂಧಿಯವರಿಗೂ ಏಕವ್ಯಕ್ತಿ ಅಧಿಕಾರ ಕೇಂದ್ರಿತ ಎಂಬ ಆರೋಪ ಇತ್ತಲ್ಲ?
ಹೌದು ಇತ್ತು. ಆದರೆ ಈ ಇಬ್ಬರ ನಡುವೆ ಒಂದು ವ್ಯತ್ಯಾಸವಿದೆ. ಇಂದಿರಾ ಅವರ ಆಡಳಿತದಲ್ಲಿ- ಬಡವರು, ಧ್ವನಿ ಇಲ್ಲದವರು, ಅಸಹಾಯಕರು ಉಸಿರಾಡುವಂತಹ ಸುಧಾರಣೆಗಳನ್ನು ತಂದರು. ಆದರೆ ಮೋದಿಯವರ ಆಡಳಿತದಲ್ಲಿ ಕೆಲವೇ ಕೆಲವು ಕಾರ್ಪೋರೇಟ್ ಕಂಪನಿಗಳ ಲಕ್ಷಾಂತರ ಕೋಟಿ ರೂಪಾಯಿಗಳ ಬಂಡವಾಳ ಬೆಳವಣಿಗೆಯಾಗುವುದಕ್ಕೆ ದೇಶದ ಪ್ರಧಾನಿ ಮೋದಿಯವರು ಒಬ್ಬ ವ್ಯವಸ್ಥಾಪಕನಂತೆ ಕಾರ್ಯ ನಿರ್ವಹಿಸಿಬಿಟ್ಟರು. ಅದಕ್ಕಾಗೇ, ಮೋದಿಯವರ ‘ಮನ್ ಕಿ ಬಾತ್‍ನಲ್ಲಿ ಅಂತ್ಯೋದಯ; ದಿಲ್ ಕಾ ಕಾಮ್‍ನಲ್ಲಿ ಉಳ್ಳವರ ಸೇವಕ’ ಎಂಬ ನಾಣ್ಣುಡಿ ಹುಟ್ಟಿಕೊಂಡಿದೆ.

• ನೀವು ವಿದ್ಯಾರ್ಥಿದೆಸೆಯಲ್ಲಿ ಲೋಹಿಯಾ ವಿಚಾರಧಾರೆಯ ಸಮಾಜವಾದಿ ಯುವಜನ ಸಭಾದಲ್ಲಿ ಇದ್ದವರು. ಲೋಹಿಯಾ ಅವರ ‘ಕಾಂಗ್ರೆಸ್ ವಿರೋಧಿ’ (Anti-Congress) ನಿಲುವಿಗೆ ಈಗ ನಿಮ್ಮ ಅಭಿಪ್ರಾಯ?
ಅಕ್ಷರ, ಪದಕ್ಕೆ ಅರ್ಥ ನೀಡಬಾರದು. ಅದರ ಆಂತರ್ಯ (Spirit) ನೋಡಬೇಕು. ಆ ಕಾಲಘಟ್ಟದಲ್ಲಿ ಲೋಹಿಯಾ ಹಾಗೂ ಅಂಬೇಡ್ಕರ್ ಅವರ ‘ಕಾಂಗ್ರೆಸ್ ವಿರೋಧಿ’ ಎಂದರೆ ಅದು ಆಂತರ್ಯದಲ್ಲಿ `ವ್ಯವಸ್ಥೆ ವಿರೋಧಿ’ (Anti- establishment) ಎಂದೇ ಅರ್ಥ. ಈ ಅರ್ಥದಲ್ಲಿ ಇಂದು ‘ವ್ಯವಸ್ಥೆ ವಿರೋಧಿ’ ನಿಲುವು ಎಂದರೆ ಏನು? ಇಂದು ಬಿಜೆಪಿ ದೇಶವನ್ನು ಆಳುತ್ತಿದೆ. ಈಗ ವ್ಯವಸ್ಥೆ ವಿರೋಧಿ ನಿಲುವು ಎಂದರೆ ಅದು ಬಿಜೆಪಿ ವಿರೋಧಿ ನಿಲುವು ಎಂದೇ ಆಗುತ್ತದೆ. ಸಮಾಜದ ಸಾಮರಸ್ಯ ಮತ್ತು ಸಮಾನತೆಗಾಗಿ ಅಂದರೆ ಮುಂಚಲನೆಗಾಗಿ ಬದಲಾವಣೆ ಬೇಕೆಂದಿದ್ದರೆ ಸಮುದಾಯ ಪ್ರಜ್ಞೆ ಯಾವಾಗಲೂ ವ್ಯವಸ್ಥೆ ವಿರೋಧಿ ನಿಲುವನ್ನು ಜಾಗೃತವಾಗಿರಿಸಿಕೊಂಡಿರಬೇಕಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...