Homeಸಿನಿಮಾಕ್ರೀಡೆಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ಫೀಲ್ಡಿಂಗ್ ನಿರ್ಬಂಧಗಳನ್ನು ಮೀರಿದ ಕಾರಣಕ್ಕಾಗಿಯೇ ಧೋನಿಯ ರನ್ ಔಟ್ ಆಯಿತೇ? ಇಲ್ಲಿದೆ...

ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ಫೀಲ್ಡಿಂಗ್ ನಿರ್ಬಂಧಗಳನ್ನು ಮೀರಿದ ಕಾರಣಕ್ಕಾಗಿಯೇ ಧೋನಿಯ ರನ್ ಔಟ್ ಆಯಿತೇ? ಇಲ್ಲಿದೆ ಸತ್ಯ

- Advertisement -
- Advertisement -

ಮಹತ್ವದ ಸೆಮಿಫೈನಲ್ ನಲ್ಲಿ ಲೀಗ್ ಹಂತದ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಭಾರತವನ್ನು ನಾಲ್ಕನೇ ಸ್ಥಾನದಲ್ಲಿದ್ದ ನ್ಯೂಜಿಲೆಂಡ್ ಮಣಿಸಿ ಫೈನಲ್ ಪ್ರವೇಶಿಸಿದ್ದು ನಿಮಗೆಲ್ಲಾ ಗೊತ್ತಿರುವ ವಿಚಾರ. ಆ ಪಂದ್ಯದ ಸೋಲಿನಲ್ಲಿ ಮಹೇಂದ್ರ ಸಿಂಗ್ ಧೋನಿಯವರ ರನ್ ಔಟ್ ಪ್ರಮುಖ ಪಾತ್ರ ವಹಿಸಿತ್ತು. ರನ್ ಔಟ್ ಆದಾಗ ಧೋನಿ ಅಂಗಳದಲ್ಲಿಯೇ ಕಣ್ಣೀರಾಕಿದ್ದನ್ನು ಅಭಿಮಾನಿಗಳು ಮರೆತಿಲ್ಲ.

ಇದೇ ಸಂದರ್ಭದಲ್ಲಿ ಅಂಪೈರ್ ಗಳ ತಪ್ಪಿನಿಂದಾಗಿ ರನ್ ಔಟ್ ಆಗಿದೆ, 48ನೇ ಓವರ್ ನಲ್ಲಿ ಲಾಕೀ ಫರ್ಗೂಸನ್ ನ ಎಸೆತವನ್ನು ಧೋನಿ ಬಾರಿಸಿದ ಹೊಡೆತದಲ್ಲಿ ಎರಡನೇ ರನ್ ಗಾಗಿ ಧೋನಿ ಓಡುತ್ತಿದ್ದಾಗ ಮಾರ್ಟಿನ್ ಗುಪ್ಟಿಲ್ ನೇರವಾಗಿ ವಿಕೆಟ್ ಗೆ ಬಾಲ್ ಎಸೆದ ಕಾರಣ ಆದ ರನ್ ಔಟ್ ನ ಬಾಲ್ ಕ್ರಮಬದ್ಧವಾಗಿಲ್ಲ ಎಂಬ ಆರೋಪ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮೂರನೇ ಪವರ್ ಪ್ಲೆ (41-50 ಓವರ್) ನಲ್ಲಿ ಐದಕ್ಕಿಂತ ಹೆಚ್ಚು ಫೀಲ್ಡರ್ ಗಳು 30 ಯಾರ್ಡ್ ಸರ್ಕಲ್ ನಿಂದ ಹೊರಗೆ ನಿಲ್ಲುವಂತಿಲ್ಲ ಎಂಬ ಐಸಿಸಿ ನಿಯಮವಿದ್ದರೂ ಸಹ ಸೆಮಿಫೈನಲ್ ಪಂದ್ಯದಲ್ಲಿ ಧೋನಿ ಔಟಾದ 48.3ನೇ ಬಾಲ್ ನಲ್ಲಿ ಆರು ಜನ ಫೀಲ್ಡರ್ ಗಳು 30 ಯಾರ್ಡ್ ಸರ್ಕಲ್ ನಿಂದ ಹೊರಗಿದ್ದರು ಅಂಪೈರ್ ಗಮನಿಸಿಲ್ಲ ಎಂಬ ಸ್ಕ್ರೀನ್ ಶಾಟ್ ಎಲ್ಲಾ ಕಡೆ ಹರಿದಾಡಿದೆ.

ಸಿ.ಎನ್.ಎನ್ ನ್ಯೂಸ್18ನ ನಿರೂಪಕ ಆನಂದ್ ನರಸಿಂಹನ್ ರವರು ಆ ಸ್ಕ್ರೀನ್ ಶಾಟ್ ಅನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ “ಮೂರನೇ ಪವರ್ ಪ್ಲೆ ನಲ್ಲಿ 6 ಜನ ಫೀಲ್ಡರ್ ಗಳು ಸರ್ಕಲ್ ನಿಂದ ಹೊರಗಿರುವುದು ಹೇಗೆ? ಅಂಪೈರ್ ಗಳ ಈ ಮಹಾ ಅಪರಾಧಕ್ಕೆ ಶಿಕ್ಷೆ ಇಲ್ಲವೇ? ಸೆಮಿ ಫೈನಲ್ ನಲ್ಲೇ ಹೀಗಾದರೆ ಹೇಗೆ ಎಂದು ಬರೆದಿದ್ದರು.

ನೂರಾರು ಜನರು ಅಂಪೈರ್ ಗಳ ತಪ್ಪು ಎಂದು  ಈ ಸ್ಕ್ರೀನ್ ಶಾಟ್ ಅನ್ನು ಷೇರ್ ಮಾಡಿದ್ದರು. ಎಂ.ಎಸ್ ಧೋನಿ ಫ್ಯಾನ್ಸ್ ಅಫೀಶಿಯಲ್ ಎನ್ನು 6 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಟ್ವಿಟ್ಟರ್ ಖಾತೆಯಿಂದಲೂ ಪೋಸ್ಟ ಆಗಿದ್ದಲ್ಲದೇ, ಧೋನಿ ನಾಟ್ ಔಟ್ ಆಗಿದ್ದರೆಂಬ ಯೂಟ್ಯೂಬ್ ವಿಡಿಯೋವೊಂದು ಪೋಸ್ಟ್ ಆಗಿದ್ದು ಅದನ್ನು ಬರೋಬ್ಬರಿ 1 ಕೋಟಿ 30 ಲಕ್ಷ ಜನ ವೀಕ್ಷಿಸಿದ್ದಾರೆ.

ಬಹುಮುಖ್ಯ ಮಾಧ್ಯಮ ಸಂಸ್ಥೆಗಳಾದ ದಿ ಇಂಡಿಯನ್ ಎಕ್ಸ್ ಪ್ರೆಸ್, ಇಂಡಿಯಾ ಟುಡೆ, ಆಜ್ ತಕ್ ಮುಂತಾದವುಗಳು ಸಹ ಫೀಲ್ಡಿಂಗ್ ನಿರ್ಬಂಧದ ಅಂಪೈರ್ ಗಳ ತಪ್ಪಿನಿಂದಾಗಿ ಧೋನಿ ಔಟಾಗಿರುವ ಸಾಧ್ಯತೆಯಿದೆ ಎಂಬ ವರದಿಗಳನ್ನು ಪ್ರಕಟಿಸಿದ್ದವು.

ಹಾಗಾದರೆ ಆ 48ನೇ ಓವರ್ ನಲ್ಲಿ ಆಗಿದ್ದಾದರೂ ಏನು?

ಈ ಕುರಿತು ಸ್ವತಂತ್ರ ಮಾಧ್ಯಮ ಸಂಸ್ಥೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ನಡೆಸಿದೆ. ಸ್ಕ್ರೀನ್ ಶಾಟ್ ನಲ್ಲಿ ಕಾಣುತ್ತಿರುವ ಫೀಲ್ಡರ್ ಗಳ ಗ್ರಾಫಿಕ್ ನಲ್ಲಿ ತಪ್ಪಾಗಿದೆಯೇ ಹೊರತು ಅಂಪೈರ್ ನಿಂದಲ್ಲ ಎಂದು ಕಂಡಬಂದಿದೆ. ಆ ಓವರ್ ನ ಮೂರು ಬಾಲ್ ಗಳಲ್ಲಿ ಏನಾಯಿತು, ಫೀಲ್ಡರ್ ಗಳು ಯಾವ ಯಾವ ಜಾಗದಲ್ಲಿ ನಿಂತಿದ್ದರು ಎಂಬುದನ್ನು ಒಂದೊಂದಾಗಿ ನೋಡೋಣ

ಮೊದಲ ಬಾಲ್ (48.1 ಓವರ್ಸ್)

ಈ ಎಸೆತದಲ್ಲಿ ಐದು ಫೀಲ್ಡರ್ ಗಳು 30 ಯಾರ್ಡ್ ಸರ್ಕಲ್ ನಿಂದ ಹೊರಗಿದ್ದರು. ಅಂದರೆ ಥರ್ಡ್ ಮ್ಯಾನ್, ಡೀಪ್ ಫೈನ್ ಲೆಗ್, ಡೀಪ್ ಪಾಯಿಂಟ್, ಡೀಪ್ ಸ್ಕೇರ್ ಲೆಗ್ ಮತ್ತು ಲಾಂಗ್ ಆನ್ ನಲ್ಲಿ ನಿಂತಿದ್ದರು. ಫರ್ಗೂಸನ್ ಎಸೆದ ಆ ಬಾಲ್ ಅನ್ನು ಧೋನಿ ಸಿಕ್ಸ್ ಸಿಡಿಸಿದ್ದರು.

ಎರಡನೇ ಬಾಲ್ (48.2 ಓವರ್ಸ್)

ಈ ಎಸೆತದಲ್ಲಿ ಮಿಡ್ ವಿಕೆಟ್ ನಲ್ಲಿದ್ದ ಫೀಲ್ಡರ್ ಹಿಂದಕ್ಕೆ ಚಲಿಸಿದ್ದಾರೆ ಮತ್ತು ಡೀಪ್ ಫೈನ್ ಲೆಗ್ ನಲ್ಲಿದ್ದ ಫೀಲ್ಡರ್ ಸರ್ಕಲ್ ನ ಒಳಗೆ ಬಂದಿದ್ದಾರೆ. ಈ ಬಾಲ್ ನಲ್ಲಿ ಯಾವುದೇ ರನ್ ಬಂದಿಲ್ಲ.

ಮೂರನೇ ಬಾಲ್ (48.3 ಓವರ್ಸ್)

ಈ ಎಸೆತದಲ್ಲಿಯೇ ಆರು ಜನ ಹೊರಗಿರುವಂತೆ ಮೇಲಿನ ಸ್ಕ್ರೀನ್ ಶಾಟ್ ನಲ್ಲಿ ಆರೋಪಿಸಲಾಗಿದೆ. ಡೀಪ್ ಪಾಯಿಂಟ್, ಡೀಪ್ ಫೈನ್ ಲೆಗ್, ಡೀಪ್ ಸ್ಕ್ವೇರ್ ಲೆಗ್, ಡೀಪ್ ಮಿಡ್ ವಿಕೆಟ್, ಲಾಂಗ್ ಮತ್ತು ಥರ್ಡ್ ಮ್ಯಾನ್ ಎನ್ನಲಾಗಿದೆ.  ಆದರೆ ಆನಂತರ ಥರ್ಡ್ ಮ್ಯಾನ್ ಸರ್ಕಲ್ ಒಳಗೆ ಬಂದು ಶಾರ್ಟ್ ಥರ್ಡ್ ಮ್ಯಾನ್ ಜಾಗಕ್ಕೆ ನಿಂತಿದ್ದಾರೆ.

ಆದರೆ ಗ್ರಾಫಿಕ್ ನಲ್ಲಿ ಇದು ಅಪ್ ಡೇಟ್ ಆಗಿಲ್ಲ. ಹಾಗಾಗಿ ಇದು ಗ್ರಾಫಿಕ್ ಬ್ರಾಡ್ ಕಾಸ್ಟ್ ನ ಸಮಸ್ಯೆಯೇ ಹೊರತು ಅಂಪೈರ್ ದಲ್ಲ ಎಂಬುದು ಸ್ಪಷ್ಟವಾಗಿದೆ.

ಈ ಚಿತ್ರದ ಎಡಭಾಗದ ಮೇಲುಭಾಗದಲ್ಲಿ ಶಾರ್ಟ್ ಥರ್ಡ್ ಮ್ಯಾನ್ ಜಾಗದಲ್ಲಿ ಸರ್ಕಲ್ ನ ಒಳಗೆ ಫೀಲ್ಡರ್ ಬಂದು ನಿಂತಿರುವುದನ್ನು ನೀವು ನೋಡಬಹದು. ಹಾಗಾಗಿ ಥರ್ಡ್ ಮ್ಯಾನ್ ಸರ್ಕಲ್ ಒಳಗೆ ಬಂದು ಶಾರ್ಟ್ ಥರ್ಡ್ ಮ್ಯಾನ್ ಜಾಗಕ್ಕೆ ನಿಂತಿರುವುದನ್ನು ಗ್ರಾಫಿಕ್ ಬ್ರಾಡ್ ಕಾಸ್ಟ್ ತೋರಿಸದಿರುವುದೇ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಿದೆ ಅಷ್ಟೇ. ಸರ್ಕಲ್ ನಿಂದ ಹೊರಗೆ 5 ಜನರು ಮಾತ್ರ ಇರುವುದು ಖಾತ್ರಿಯಾಗಿದೆ. ಆನಂತರ ಆನಂದ್ ನರಸಿಂಹನ್ ರವರು ಇನ್ನೊಂದು ಟ್ವೀಟ್ ಮಾಡಿ ಸ್ಪಷ್ಟೀಕರಣ ನೀಡಿದ್ದಾರೆ.

ಒಟ್ಟಿನಲ್ಲಿ ಲಕ್ಷಾಂತರ ಜನ ಸತ್ಯ ಗೊತ್ತಿಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಮನಸ್ಸಿಗೆ ಬಂದ ವಾಗ್ವಾದಗಳನ್ನು ನಡೆಸಿದ್ದರು ಎನ್ನುವುದು ಮಾತ್ರ ಸತ್ಯು. ಹಾಗಾಗಿ ಯಾವುದನ್ನು ಫ್ಯಾಕ್ಟ್ ಚೆಕ್ ಮಾಡದೇ ನಂಬಬಾರದು ಎಂಬುದು ಮತ್ತೆ ಸಾಬೀತಾಗಿದೆ.

ಕೃಪೆ: ಆಲ್ಟ್ ನ್ಯೂಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...