Homeಅಂಕಣಗಳುನೀವು ತಿಳಿದುಕೊಳ್ಳಲೇಬೇಕಾದ ಡಿಸ್‍ಫೋರಿಯಾ

ನೀವು ತಿಳಿದುಕೊಳ್ಳಲೇಬೇಕಾದ ಡಿಸ್‍ಫೋರಿಯಾ

- Advertisement -
- Advertisement -

ಡಾ.ಕಾರ್ತಿಕ್ ಬಿಟ್ಟು, ಪ್ರಾಧ್ಯಾಪಕರು, ಅಶೋಕ ವಿಶ್ವವಿದ್ಯಾಲಯ, ಹರಿಯಾಣ
ಅನು: ರಾಜಶೇಖರ್ ಅಕ್ಕಿ

ಡಿಸ್‍ಫೋರಿಯಾ ಅಂದರೆ ಒಬ್ಬ ವ್ಯಕ್ತಿಗೆ ತನಗೆ ಹುಟ್ಟಿನಿಂದ ಆರೋಪಿಸಲಾದ ಜೆಂಡರ್‍ನೊಂದಿಗಿರುವ ಅಸಂತುಷ್ಟತೆ ಮತ್ತು ಬೇರ್ಪಡಿಕೆ. ಡಿಸ್‍ಫೋರಿಯಾ ಅನೇಕ ಸ್ವರೂಪಗಳನ್ನು ಪಡೆದುಕೊಳ್ಳಬಹುದು. ಒಬ್ಬ ಟ್ರಾನ್ಸ್‍ಜೆಂಡರ್ ವ್ಯಕ್ತಿಯ ಜೀವನಾನುಭವವನ್ನು ರೂಪಿಸುವುದೇ ಈ ಡಿಸ್‍ಫೋರಿಯಾ. ಆದರೆ ನಮ್ಮ ಸಮಾಜ ಆ ಅಸಂತುಷ್ಟತೆಯನ್ನು ಹೋಗಲಾಡಿಸುವಲ್ಲಿ ಸಹಾಯಕ ಪಾತ್ರ ವಹಿಸಲು ಸಾಧ್ಯ. ಆದರೆ ಅದರ ಬದಲಿಗೆ ಅವರ ಅಸಂತುಷ್ಟತೆಯನ್ನು ಉಲ್ಬಣಗೊಳಿಸುವುದೇ ಹೆಚ್ಚು. ಟ್ರಾನ್ಸ್‍ಜೆಂಡರ್ ಸಮುದಾಯಕ್ಕೆ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸದೇ, ಅವರ ಜೀವನವನ್ನು ನರಕಯಾತನೆಯನ್ನಾಗಿಸಿದ್ದೇ ನಮ್ಮ ಸಮಾಜ ಅವರಿಗೆ ಪೂರಕವಾಗಿ, ಅವರ ಸಂತುಷ್ಟಿಗೆ ನೆಲೆ ಹೇಗೆ ಆಗಬಲ್ಲದು ಎನ್ನುವುದನ್ನು ನಾವೆಲ್ಲರೂ ಸೇರಿ ಯೋಚಿಸಬೇಕಿದೆ. ಹಾಗಾದರೆ, ಟ್ರಾನ್ಸ್‍ಜೆಂಡರ್ ವ್ಯಕ್ತಿಗಳಿಗೆ ಪೂರಕವಾಗಬಲ್ಲ ವಾತಾವರಣವನ್ನು ಸೃಷ್ಟಿಸಲು ನಾವೇನು ಮಾಡಬಹುದು?
ಪ್ರತಿಯೊಬ್ಬರೂ ಮಾಡಬಲ್ಲ ಒಂದು ಸರಳ ವಿಷಯವೇನೆಂದರೆ, ಆ ವ್ಯಕ್ತಿಗಳು ಯಾವ ಜೆಂಡರ್‍ನೊಂದಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ ಎಂದು ಕೇಳುವುದು ಹಾಗೂ ಅವರು ಗುರುತಿಸಿಕೊಳ್ಳುವ ಜೆಂಡರ್‍ಗೆ ಗೌರವ ನೀಡಿ ಅವರೊಂದಿಗೆ ವ್ಯವಹರಿಸುವುದು. ಒಬ್ಬ ಟ್ರಾನ್ಸ್‍ಜೆಂಡರ್ ವ್ಯಕ್ತಿಗೆ ಪೂರಕವಾಗುವಂತಹ/ ಸ್ನೇಹಿಯಾಗುವಂತಹ ಜಗತ್ತನ್ನು ಸೃಷ್ಟಿಸಲು ಇಷ್ಟು ಮಾಡಿದರೂ ಸಾಕು.
ಒಬ್ಬ ಟ್ರಾನ್ಸ್ ವ್ಯಕ್ತಿ ಡಿಸ್‍ಫೋರಿಯಾದ ಭಾವನೆಯಿಂದ ಬಳಲುತ್ತಿರುವುದನ್ನು ನೆನಪಿಟ್ಟುಕೊಳ್ಳಬೇಕು. ನಮ್ಮ ಸಂಭಾಷಣೆಗಳಲ್ಲಿ ಅವರನ್ನು ಉದ್ದೇಶಿಸುವುದಕ್ಕಿಂತ ಮುಂಚೆ ಒಬ್ಬ ವ್ಯಕ್ತಿಯ ದೇಹದ ಆಧಾರದ ಮೇಲೆ ಇರುವ ಸಾಮಾಜಿಕ ಅವಧಾರಣೆಯನ್ನು ಗಮನದಲ್ಲಿಟ್ಟುಕೊಂಡು, ಅದನ್ನು ಕಡಿಮೆ ಮಾಡುವ ಒಂದು ಸಮಾಜವನ್ನು ಸೃಷ್ಟಿಸಬೇಕಿದೆ. ಅವರು ತಮ್ಮ ದೇಹದೊಂದಿಗೆ ಸಾಮರಸ್ಯ ಸ್ಥಾಪಿಸಲು ಯಾವುದೇ ವೈದ್ಯಕೀಯ ನೆರವು ಬೇಕಿದ್ದಲ್ಲಿ ಅದಕ್ಕೆ ಬೆಂಬಲವಾಗಿ ನಿಲ್ಲಬೇಕಿದೆ.
ಇದನ್ನು ಎಲ್ಲರಿಗಿಂತ ಮೊದಲು ಮಾಡಬೇಕಾದವರು ಆ ವ್ಯಕ್ತಿಯ ಪೋಷಕರು. ಆದರೆ ಪೋಷಕರಿಗೆ ತಮ್ಮ ಮಗುವಿಗೆ ಏನು ಒಳ್ಳೆಯದು ಎನ್ನುವುದರ ಬಗ್ಗೆ ಬಲವಾದ, ಸಮಸ್ಯಾತ್ಮಕ ಭಾವನೆಗಳನ್ನು ಹೊಂದಿರುತ್ತಾರೆ. ಇದುವೆ ಹೆಚ್ಚಿನ ಟ್ರಾನ್ಸ್‍ಜೆಂಡರ್ ಮಕ್ಕಳು ಅನುಭವಿಸುವ ಮೊದಲ ನೋವು. ಮಕ್ಕಳು ತಮ್ಮ ಜೆಂಡರ್ ಅನ್ನು ಯಾವುದೇ ರೀತಿಯಲ್ಲಿ ವ್ಯಕ್ತಪಡಿಸಿದರೂ ತಂದೆತಾಯಿಗಳು ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಹಾಗೂ ಜೆಂಡರ್ ಬಗ್ಗೆಯ ಮಕ್ಕಳ ಭಾವನೆಗಳನ್ನು ಗೌರವಿಸುವುದಿಲ್ಲ. ಒಂದು ವೇಳೆ ಹಾಗೆ ಮಾಡಿದರೂ, ತಮ್ಮ ಮಗು ತನ್ನ ದೇಹ ಬೇರೆಯಾಗಿರಬೇಕಾಗಿತ್ತು ಎಂದು ಹೇಳಿದಾಗ ನಕ್ಕುಬಿಡುವ ಪೋಷಕರೇ ಹಚ್ಚು. ಇದಕ್ಕೆ ಕಾರಣ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳೆಂದರೆ ಏನು ಎನ್ನುವುದರ ಬಗ್ಗೆ ಯಾವುದೇ ಅರಿವು ಇಲ್ಲದಿರುವುದು. ಆ ಕಾರಣಕ್ಕಾಗಿಯೇ ನಾನಿದನ್ನು ಬರೆಯುತ್ತಿದ್ದೇನೆ, ಇದನ್ನು ಓದಿ, ಒಬ್ಬ ಟ್ರಾನ್ಸ್‍ಜೆಂಡರ್ ಮಗುವನ್ನು ಬೆಳೆಸುವುದು ಹೇಗೆ, ಎನ್ನುವುದರ ಬಗ್ಗೆ ಪರಸ್ಪರ ಚರ್ಚಿಸಿ, ಟ್ರಾನ್ಸ್‍ಜೆಂಡರ್ ಮಕ್ಕಳಿಗೆ ಅನುಕೂಲವಾಗುವಂತಹ ಸಮಾಜವನ್ನು ನಿರ್ಮಿಸುವಲ್ಲಿ ಸಹಕಾರಿಯಾಗಬಲ್ಲಿರಿ ಎನ್ನುವುದು ನನ್ನ ಅಪೇಕ್ಷೆ.
ಇಂಟರ್‍ಸೆಕ್ಸ್ ಆಗಿರುವುದು ಹಾಗೂ ಟ್ರಾನ್ಸ್‍ಜೆಂಡರ್ ಆಗಿರುವುದು, ಇವರೆಡರ ಮಧ್ಯೆ ಇರುವ ಸಾಮಾಜಿಕ ಗೊಂದಲದಿಂದಲೇ ಮೊಟ್ಟಮೊದಲ ಅರಿವಿನ ಕೊರತೆ ಬರುವುದು. ಒಂದು ವೇಳೆ ಮಗುವಿನ ದೇಹ ಗಂಡು ಅಥವಾ ಹೆಣ್ಣಿನಂತಿದ್ದು ಅದರಲ್ಲಿ ಯಾವುದೇ ಗೊಂದಲಗಳಿಲ್ಲದಿದ್ದರೆ, ಆ ಮಗುವಿನ ಪೋಷಕರು ಮಗುವಿನ ಜೆಂಡರ್ ತಮಗೆ ಸ್ಪಷ್ಟವಾಗಿ ಗೊತ್ತು ಎಂದು ತಿಳಿದುಕೊಂಡಿರುತ್ತಾರೆ. ಆ ಮಗುವಿಗೆ ನೀಡಿದ ಜೆಂಡರ್‍ನೊಂದಿಗೆ ಸಂಬಂಧಿಸಿದ ನಿರ್ಬಂಧಗಳನ್ನು ಹೇರುವುದರಲ್ಲಿ ಯಾವುದೇ ಹಿಂಜರಿಕೆಯನ್ನು ತೋರುವುದಿಲ್ಲ, ಅದೂ ತುಂಬಾ ಚಿಕ್ಕ ವಯಸ್ಸಿನಿಂದಲೇ. ಒಬ್ಬ ಮಗುವಿಗೆ ಆ ಜೆಂಡರ್‍ಗೆ ಸಂಬಂಧಿಸಿದ ಅತ್ಯಂತ ಸಂಕುಚಿತವಾದ ನಿರ್ಬಂಧನೆಗಳನ್ನು ಮೀರಿ ಹಲವಾರು ಆಸಕ್ತಿ ಮತ್ತು ವರ್ತನೆಗಳನ್ನು ಹೊಂದಿದ್ದರೆ, ಆ ಮಗುವಿನ ಮೇಲೆ ಹಾಕುವ ನಿರ್ಬಂಧನೆಗಳು ಮಾನಸಿಕ ಹಿಂಸೆಯ ಒಂದು ಸ್ವರೂಪವಾಗಿಬಿಡುತ್ತವೆ. ತಮ್ಮ ಸುತ್ತಮುತ್ತಲಿನ ಚಟುವಟಿಕೆಗಳಿಗಾಗಿ ಸಹಜವಾಗಿಯೇ ಮಕ್ಕಳು ಒಂದು ಸುಂದರವಾದ ಕುತೂಹಲ ಹೊಂದಿರುತ್ತಾರೆ ಆದರೆ ಪೋಷಕರು ಸಿನೆಮಾ ಹೀರೋಯಿನ್ ತರಹ ಡಾನ್ಸ್ ಮಾಡಲು ಇಚ್ಛಿಸುವ, ಮೇಕ್-ಅಪ್ ಜೊತೆಗೆ ಆಟವಾಡಲು ಇಚ್ಛಿಸುವ ಗಂಡುಮಕ್ಕಳನ್ನು ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸುತ್ತಾರೆ, ಹೀಗೆ ಮಾಡುವುದರಿಂದ ಆ ಮಕ್ಕಳನ್ನು ಪೋಷಕರು ಕುಂಠಿತಗೊಳಿಸುತ್ತಾರೆ – ಆ ಮಕ್ಕಳು ಟ್ರಾನ್ಸ್‍ಜೆಂಡರ್ ಆಗದಿದ್ದರೂ ಅವರ ಮೇಲೆ ಪರಿಣಾಮ ಅದೇ ಆಗುವುದು.
ಹೆಚ್ಚಿನ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳ ಕಥಾನಕಗಳು ಇದರ ಬಗ್ಗೆಯೇ ಆಗಿರುತ್ತವೆ; ಅವರು ಆಡಬಯಸುವ ಆಟಗಳು, ಅಂತಹ ಆಟವನ್ನಾಡಲು ಬಿಡದ ಪೋಷಕರು ಇತ್ಯಾದಿ. ಆದರೆ ಇದು ಟ್ರಾನ್ಸ್‍ಜೆಂಡರ್ ಆಗಿರುವುದರ ಸಾಮಾಜಿಕ ಆಯಾಮಕ್ಕೆ ಮಾತ್ರ ಸಂಬಂಧಿಸಿದ್ದಾಗಿದೆ. ಡಿಸ್‍ಫೋರಿಯಾವನ್ನು ತಿಳಿದುಕೊಳ್ಳುವಾಗ ಅದಕ್ಕೆ ಸಾಮಾಜಿಕ ಮತ್ತು ದೈಹಿಕ ಅಂಶಗಳು ಎರಡೂ ಇರುತ್ತವೆ ಎನ್ನುವುದನ್ನು ತಿಳಿದುಕೊಳ್ಳಬೇಕಿದೆ, ಹಾಗೂ ಈ ಎರಡೂ ಅಂಶಗಳು ಆ ವ್ಯಕ್ತಿಯ ಮಿದುಳಿನಿಂದ ಕಾರ್ಯನಿರ್ವಹಿಸಿ ವ್ಯಕ್ತಿಯ ವರ್ತನೆಯ ಮೇಲೆ ಪರಿಣಾಮ ಬೀರುತ್ತವೆ. ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾದ ಸಂಗತಿಯೊಂದಿದೆ. ಸಮಾಜವು ಮಿದುಳಿನ ರಚನೆಯಲ್ಲಿ ಬದಲಾವಣೆ ತಂದು ವ್ಯಕ್ತಿಗಳ ವರ್ತನೆಯ ಮೇಲೂ ಪರಿಣಾಮ ಬೀರುತ್ತದೆ.
ಕೆಲವು ಮಕ್ಕಳು ತಮಗೆ ನೀಡಿದ ಜೆಂಡರ್‍ನಿಂದ ಅಪೇಕ್ಷಿಸಲಾಗುವ ವರ್ತನೆಗಳಿಗಿಂತ ಭಿನ್ನವಾಗಿ ವರ್ತಿಸದೇ ಇರಬಹುದು. ಹಾಗಿದ್ದರೂ ತಮ್ಮ ದೇಹದೊಂದಿಗೆ ಆಳವಾದ ಅಸಹನೆ, ಅಸಂತುಷ್ಟಿಯನ್ನಿಟ್ಟುಕೊಂಡು ಬೆಳೆಯಬಹುದಾಗಿದೆ. ನಾವು ಮೊದಲು ಚರ್ಚಿಸಿದಂತೆ, ಜೆಂಡರ್‍ನ ವಿಷಯದಲ್ಲಿ ತಮ್ಮ ದೈಹಿಕ ಬೆಳವಣಿಗೆಗೆ ಅನುಗುಣವಾಗದೇ, ಬೇರೆ ರೀತಿಯಲ್ಲಿ ಮಿದುಳಿನ ಬೆಳವಣಿಗೆ ಆಗುವ ಮಕ್ಕಳನ್ನು ಟ್ರಾನ್ಸ್‍ಜೆಂಡರ್ ಅನ್ನಬಹುದು.
ಒಬ್ಬ ಟ್ರಾನ್ಸ್‍ಜೆಂಡರ್ ಮಗು ತನ್ನ ವಯಸ್ಕ ಜೀವನಕ್ಕೆ ಹೋಗುವಾಗ, ಯಾವ್ಯಾವ ಅನುಭವಗಳಿಂದ ಹಾದುಹೋಗಬೇಕಾಗುತ್ತದೆ ಎಂದು ತಿಳಿಯಲು ನಾವು ಈ ಡಿಸ್‍ಫೋರಿಯಾ ಅನ್ನು ಇನ್ನಷ್ಟೂ ಕೂಲಂಕಷವಾಗಿ ತಿಳಿದುಕೊಳ್ಳೋಣ. ಹರೆಯಕ್ಕೆ ಪ್ರವೇಶಿಸುವ ಸಮಯದಲ್ಲಂತೂ ಈ ಡಿಸ್‍ಫೋರಿಯಾ ಅತ್ಯಂತ ಕೆಟ್ಟಹಂತದಲ್ಲಿರುತ್ತದೆ. ಪ್ರೌಢಾವಸ್ಥೆ (ಪ್ಯೂಬರ್ಟಿ) ಹಂತಕ್ಕೆ ತಲುಪುವ ತನಕ ಭಾರತೀಯ ಸಂಸ್ಕøತಿಯಲ್ಲಿ ಹೆಚ್ಚಿನ ಮಕ್ಕಳನ್ನು ಒಂದೇ ತೆರನಾಗಿ ನೋಡಿಕೊಳ್ಳಲಾಗುತ್ತದೆ. ಹಾಗೂ ಸಾಮಾನ್ಯವಾಗಿ ಹಾಕಿಕೊಳ್ಳುವ ಬಟ್ಟೆಗಳನ್ನು ಧರಿಸಿದ ಮಕ್ಕಳಿಗೆ ಇತರ ಮಕ್ಕಳ ಜೆಂಡರ್‍ಗೆ ಇರುವ ವ್ಯತ್ಯಾಸವೂ ಕೆಲವೊಮ್ಮೆ ತಿಳಿಯುವುದಿಲ್ಲ. ಜನನಾಂಗವೊಂದನ್ನು ಬಿಟ್ಟರೆ ಚಿಕ್ಕಮಕ್ಕಳ ದೇಹದಲ್ಲಿ ಬೇರೆ ಯಾವ ವ್ಯತ್ಯಾಸವೂ ಇರುವುದಿಲ್ಲ. ಆದರೆ ಪ್ರೌಢಾವಸ್ಥೆಯ ಸಮಯದಲ್ಲಿ, ಅವರ ಮಿದುಳು ಅಪೇಕ್ಷಿಸದ ರೀತಿಯಲ್ಲಿ ಗಂಡು ಮತ್ತು ಹೆಣ್ಣುಮಕ್ಕಳ ದೇಹಗಳು ಬದಲಾಗುತ್ತವೆ. ಇದೂ ಹೇಗೂ ತುಂಬಾ ಸಂಕಷ್ಟದ ಸಮಯವೇ ಆಗಿರುತ್ತದೆ. ಅದರೊಂದಿಗೆ, ಅಲ್ಲಿಯವರೆಗೆ ಯಾವ ಜೆಂಡರ್ ಜೊತೆಗೂ ಆಟವಾಡಬಹುದಾದ ಮಕ್ಕಳು ಮೀಸೆ ಅಥವಾ ಎದೆಯನ್ನು ಬೆಳೆಸಿ ಭಿನ್ನವಾಗಿ ಕಾಣಿಸತೊಡಗುತ್ತಾರೆ. ಇದರೊಂದಿಗೆ, ಸಮಾಜವೂ ಇದೇ ಸಮಯದಲ್ಲಿ ಇವರ ಜೀವನದಲ್ಲಿ ಪ್ರವೇಶಿಸಿ, ಮಕ್ಕಳ ಸಾಮಾಜಿಕ ಪಾತ್ರಗಳಲ್ಲಿ ಹೆಚ್ಚಿನ ನಿರ್ಬಂಧನೆಗಳನ್ನು ಹಾಕತೊಡಗುತ್ತದೆ. ಪ್ರೌಢಾವಸ್ಥೆಯ ನಂತರ ಗಂಡು ಮತ್ತು ಹೆಣ್ಣು ಮಕ್ಕಳು ಪರಸ್ಪರ ಬೆರೆಯಬಾರದು ಇತ್ಯಾದಿ ಕಟ್ಟಳೆಗಳನ್ನು ವಿಧಿಸಲಾಗುತ್ತದೆ ಹಾಗು ಇವೆಲ್ಲ ಟ್ರಾನ್ಸ್‍ಜೆಂಡರ್ ಮಕ್ಕಳನ್ನು ಇನ್ನಷ್ಟು ನಿರ್ಬಂಧಿಸಿ ಅವರನ್ನು ತಾವು ಗುರುತಿಸಿಕೊಳ್ಳಲಾಗದ ಸಾಮಾಜಿಕ ಜೆಂಡರ್‍ನೊಂದಿಗೆ ಸೇರಿಸಲಾಗುತ್ತದೆ.
ಬಹುತೇಕ ಟ್ರಾನ್ಸ್‍ಜೆಂಡರ್ ಕಥಾನಕಗಳು ಅವರೆದುರಿಸುವ ಸಮಸ್ಯೆಯ ಸಾಮಾಜಿಕ ಆಯಾಮದ ಬಗ್ಗೆ ಹೇಳುತ್ತವೆ ಹಾಗೂ ತನ್ನ ದೇಹದೊಂದಿಗೆ ಇರುವ ಅಸಂತುಷ್ಟತೆಯ ದೈಹಿಕ ಆಯಾಮದ ಬಗ್ಗೆ ಹೇಳುವುದಿಲ್ಲ. ಅದಕ್ಕಿರುವ ಒಂದು ಕಾರಣವೆಂದರೆ, ಸಾಮಾಜಿಕ ಅಸಂತುಷ್ಟತೆ ಸುಲಭವಾಗಿ ಗೋಚರಿಸುತ್ತವೆ ಆದರೆ ದೈಹಿಕ ಅಂಶ ಯಾವಾಗಲೂ ಖಾಸಗಿಯಾಗಿರುತ್ತದೆ. ಹಾಗೂ ಅನೇಕ ಟ್ರಾನ್ಸ್‍ಜೆಂಡರ್ ಮಕ್ಕಳು ತಮ್ಮ ದೇಹದೊಂದಿಗೆ ಅತ್ಯಂತ ತೀವ್ರವಾದ ಮುಜುಗರವನ್ನು ಬೆಳೆಸಿಕೊಂಡಿರುತ್ತಾರೆ. ಅನೇಕ ಟ್ರಾನ್ಸ್‍ಜೆಂಡರ್ ಮಕ್ಕಳು ಆತ್ಮಹತ್ಯೆಗೂ ಪ್ರಯತ್ನಿಸುತ್ತಾರೆ. ಆದರೂ ಆ ಮಕ್ಕಳ ಪೋಷಕರಿಗೆ ಮಕ್ಕಳು ತಮ್ಮ ಭಾವನೆಗಳನ್ನು ಅವರೊಂದಿಗೆ ಏಕೆ ಹಂಚಿಕೊಳ್ಳುವುದಿಲ್ಲ ಎಂದು ಅರ್ಥವಾಗುವುದಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...