Homeಅಂಕಣಗಳುನೀವು ತಿಳಿದುಕೊಳ್ಳಲೇಬೇಕಾದ ಡಿಸ್‍ಫೋರಿಯಾ

ನೀವು ತಿಳಿದುಕೊಳ್ಳಲೇಬೇಕಾದ ಡಿಸ್‍ಫೋರಿಯಾ

- Advertisement -
- Advertisement -

ಡಾ.ಕಾರ್ತಿಕ್ ಬಿಟ್ಟು, ಪ್ರಾಧ್ಯಾಪಕರು, ಅಶೋಕ ವಿಶ್ವವಿದ್ಯಾಲಯ, ಹರಿಯಾಣ
ಅನು: ರಾಜಶೇಖರ್ ಅಕ್ಕಿ

ಡಿಸ್‍ಫೋರಿಯಾ ಅಂದರೆ ಒಬ್ಬ ವ್ಯಕ್ತಿಗೆ ತನಗೆ ಹುಟ್ಟಿನಿಂದ ಆರೋಪಿಸಲಾದ ಜೆಂಡರ್‍ನೊಂದಿಗಿರುವ ಅಸಂತುಷ್ಟತೆ ಮತ್ತು ಬೇರ್ಪಡಿಕೆ. ಡಿಸ್‍ಫೋರಿಯಾ ಅನೇಕ ಸ್ವರೂಪಗಳನ್ನು ಪಡೆದುಕೊಳ್ಳಬಹುದು. ಒಬ್ಬ ಟ್ರಾನ್ಸ್‍ಜೆಂಡರ್ ವ್ಯಕ್ತಿಯ ಜೀವನಾನುಭವವನ್ನು ರೂಪಿಸುವುದೇ ಈ ಡಿಸ್‍ಫೋರಿಯಾ. ಆದರೆ ನಮ್ಮ ಸಮಾಜ ಆ ಅಸಂತುಷ್ಟತೆಯನ್ನು ಹೋಗಲಾಡಿಸುವಲ್ಲಿ ಸಹಾಯಕ ಪಾತ್ರ ವಹಿಸಲು ಸಾಧ್ಯ. ಆದರೆ ಅದರ ಬದಲಿಗೆ ಅವರ ಅಸಂತುಷ್ಟತೆಯನ್ನು ಉಲ್ಬಣಗೊಳಿಸುವುದೇ ಹೆಚ್ಚು. ಟ್ರಾನ್ಸ್‍ಜೆಂಡರ್ ಸಮುದಾಯಕ್ಕೆ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸದೇ, ಅವರ ಜೀವನವನ್ನು ನರಕಯಾತನೆಯನ್ನಾಗಿಸಿದ್ದೇ ನಮ್ಮ ಸಮಾಜ ಅವರಿಗೆ ಪೂರಕವಾಗಿ, ಅವರ ಸಂತುಷ್ಟಿಗೆ ನೆಲೆ ಹೇಗೆ ಆಗಬಲ್ಲದು ಎನ್ನುವುದನ್ನು ನಾವೆಲ್ಲರೂ ಸೇರಿ ಯೋಚಿಸಬೇಕಿದೆ. ಹಾಗಾದರೆ, ಟ್ರಾನ್ಸ್‍ಜೆಂಡರ್ ವ್ಯಕ್ತಿಗಳಿಗೆ ಪೂರಕವಾಗಬಲ್ಲ ವಾತಾವರಣವನ್ನು ಸೃಷ್ಟಿಸಲು ನಾವೇನು ಮಾಡಬಹುದು?
ಪ್ರತಿಯೊಬ್ಬರೂ ಮಾಡಬಲ್ಲ ಒಂದು ಸರಳ ವಿಷಯವೇನೆಂದರೆ, ಆ ವ್ಯಕ್ತಿಗಳು ಯಾವ ಜೆಂಡರ್‍ನೊಂದಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ ಎಂದು ಕೇಳುವುದು ಹಾಗೂ ಅವರು ಗುರುತಿಸಿಕೊಳ್ಳುವ ಜೆಂಡರ್‍ಗೆ ಗೌರವ ನೀಡಿ ಅವರೊಂದಿಗೆ ವ್ಯವಹರಿಸುವುದು. ಒಬ್ಬ ಟ್ರಾನ್ಸ್‍ಜೆಂಡರ್ ವ್ಯಕ್ತಿಗೆ ಪೂರಕವಾಗುವಂತಹ/ ಸ್ನೇಹಿಯಾಗುವಂತಹ ಜಗತ್ತನ್ನು ಸೃಷ್ಟಿಸಲು ಇಷ್ಟು ಮಾಡಿದರೂ ಸಾಕು.
ಒಬ್ಬ ಟ್ರಾನ್ಸ್ ವ್ಯಕ್ತಿ ಡಿಸ್‍ಫೋರಿಯಾದ ಭಾವನೆಯಿಂದ ಬಳಲುತ್ತಿರುವುದನ್ನು ನೆನಪಿಟ್ಟುಕೊಳ್ಳಬೇಕು. ನಮ್ಮ ಸಂಭಾಷಣೆಗಳಲ್ಲಿ ಅವರನ್ನು ಉದ್ದೇಶಿಸುವುದಕ್ಕಿಂತ ಮುಂಚೆ ಒಬ್ಬ ವ್ಯಕ್ತಿಯ ದೇಹದ ಆಧಾರದ ಮೇಲೆ ಇರುವ ಸಾಮಾಜಿಕ ಅವಧಾರಣೆಯನ್ನು ಗಮನದಲ್ಲಿಟ್ಟುಕೊಂಡು, ಅದನ್ನು ಕಡಿಮೆ ಮಾಡುವ ಒಂದು ಸಮಾಜವನ್ನು ಸೃಷ್ಟಿಸಬೇಕಿದೆ. ಅವರು ತಮ್ಮ ದೇಹದೊಂದಿಗೆ ಸಾಮರಸ್ಯ ಸ್ಥಾಪಿಸಲು ಯಾವುದೇ ವೈದ್ಯಕೀಯ ನೆರವು ಬೇಕಿದ್ದಲ್ಲಿ ಅದಕ್ಕೆ ಬೆಂಬಲವಾಗಿ ನಿಲ್ಲಬೇಕಿದೆ.
ಇದನ್ನು ಎಲ್ಲರಿಗಿಂತ ಮೊದಲು ಮಾಡಬೇಕಾದವರು ಆ ವ್ಯಕ್ತಿಯ ಪೋಷಕರು. ಆದರೆ ಪೋಷಕರಿಗೆ ತಮ್ಮ ಮಗುವಿಗೆ ಏನು ಒಳ್ಳೆಯದು ಎನ್ನುವುದರ ಬಗ್ಗೆ ಬಲವಾದ, ಸಮಸ್ಯಾತ್ಮಕ ಭಾವನೆಗಳನ್ನು ಹೊಂದಿರುತ್ತಾರೆ. ಇದುವೆ ಹೆಚ್ಚಿನ ಟ್ರಾನ್ಸ್‍ಜೆಂಡರ್ ಮಕ್ಕಳು ಅನುಭವಿಸುವ ಮೊದಲ ನೋವು. ಮಕ್ಕಳು ತಮ್ಮ ಜೆಂಡರ್ ಅನ್ನು ಯಾವುದೇ ರೀತಿಯಲ್ಲಿ ವ್ಯಕ್ತಪಡಿಸಿದರೂ ತಂದೆತಾಯಿಗಳು ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಹಾಗೂ ಜೆಂಡರ್ ಬಗ್ಗೆಯ ಮಕ್ಕಳ ಭಾವನೆಗಳನ್ನು ಗೌರವಿಸುವುದಿಲ್ಲ. ಒಂದು ವೇಳೆ ಹಾಗೆ ಮಾಡಿದರೂ, ತಮ್ಮ ಮಗು ತನ್ನ ದೇಹ ಬೇರೆಯಾಗಿರಬೇಕಾಗಿತ್ತು ಎಂದು ಹೇಳಿದಾಗ ನಕ್ಕುಬಿಡುವ ಪೋಷಕರೇ ಹಚ್ಚು. ಇದಕ್ಕೆ ಕಾರಣ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳೆಂದರೆ ಏನು ಎನ್ನುವುದರ ಬಗ್ಗೆ ಯಾವುದೇ ಅರಿವು ಇಲ್ಲದಿರುವುದು. ಆ ಕಾರಣಕ್ಕಾಗಿಯೇ ನಾನಿದನ್ನು ಬರೆಯುತ್ತಿದ್ದೇನೆ, ಇದನ್ನು ಓದಿ, ಒಬ್ಬ ಟ್ರಾನ್ಸ್‍ಜೆಂಡರ್ ಮಗುವನ್ನು ಬೆಳೆಸುವುದು ಹೇಗೆ, ಎನ್ನುವುದರ ಬಗ್ಗೆ ಪರಸ್ಪರ ಚರ್ಚಿಸಿ, ಟ್ರಾನ್ಸ್‍ಜೆಂಡರ್ ಮಕ್ಕಳಿಗೆ ಅನುಕೂಲವಾಗುವಂತಹ ಸಮಾಜವನ್ನು ನಿರ್ಮಿಸುವಲ್ಲಿ ಸಹಕಾರಿಯಾಗಬಲ್ಲಿರಿ ಎನ್ನುವುದು ನನ್ನ ಅಪೇಕ್ಷೆ.
ಇಂಟರ್‍ಸೆಕ್ಸ್ ಆಗಿರುವುದು ಹಾಗೂ ಟ್ರಾನ್ಸ್‍ಜೆಂಡರ್ ಆಗಿರುವುದು, ಇವರೆಡರ ಮಧ್ಯೆ ಇರುವ ಸಾಮಾಜಿಕ ಗೊಂದಲದಿಂದಲೇ ಮೊಟ್ಟಮೊದಲ ಅರಿವಿನ ಕೊರತೆ ಬರುವುದು. ಒಂದು ವೇಳೆ ಮಗುವಿನ ದೇಹ ಗಂಡು ಅಥವಾ ಹೆಣ್ಣಿನಂತಿದ್ದು ಅದರಲ್ಲಿ ಯಾವುದೇ ಗೊಂದಲಗಳಿಲ್ಲದಿದ್ದರೆ, ಆ ಮಗುವಿನ ಪೋಷಕರು ಮಗುವಿನ ಜೆಂಡರ್ ತಮಗೆ ಸ್ಪಷ್ಟವಾಗಿ ಗೊತ್ತು ಎಂದು ತಿಳಿದುಕೊಂಡಿರುತ್ತಾರೆ. ಆ ಮಗುವಿಗೆ ನೀಡಿದ ಜೆಂಡರ್‍ನೊಂದಿಗೆ ಸಂಬಂಧಿಸಿದ ನಿರ್ಬಂಧಗಳನ್ನು ಹೇರುವುದರಲ್ಲಿ ಯಾವುದೇ ಹಿಂಜರಿಕೆಯನ್ನು ತೋರುವುದಿಲ್ಲ, ಅದೂ ತುಂಬಾ ಚಿಕ್ಕ ವಯಸ್ಸಿನಿಂದಲೇ. ಒಬ್ಬ ಮಗುವಿಗೆ ಆ ಜೆಂಡರ್‍ಗೆ ಸಂಬಂಧಿಸಿದ ಅತ್ಯಂತ ಸಂಕುಚಿತವಾದ ನಿರ್ಬಂಧನೆಗಳನ್ನು ಮೀರಿ ಹಲವಾರು ಆಸಕ್ತಿ ಮತ್ತು ವರ್ತನೆಗಳನ್ನು ಹೊಂದಿದ್ದರೆ, ಆ ಮಗುವಿನ ಮೇಲೆ ಹಾಕುವ ನಿರ್ಬಂಧನೆಗಳು ಮಾನಸಿಕ ಹಿಂಸೆಯ ಒಂದು ಸ್ವರೂಪವಾಗಿಬಿಡುತ್ತವೆ. ತಮ್ಮ ಸುತ್ತಮುತ್ತಲಿನ ಚಟುವಟಿಕೆಗಳಿಗಾಗಿ ಸಹಜವಾಗಿಯೇ ಮಕ್ಕಳು ಒಂದು ಸುಂದರವಾದ ಕುತೂಹಲ ಹೊಂದಿರುತ್ತಾರೆ ಆದರೆ ಪೋಷಕರು ಸಿನೆಮಾ ಹೀರೋಯಿನ್ ತರಹ ಡಾನ್ಸ್ ಮಾಡಲು ಇಚ್ಛಿಸುವ, ಮೇಕ್-ಅಪ್ ಜೊತೆಗೆ ಆಟವಾಡಲು ಇಚ್ಛಿಸುವ ಗಂಡುಮಕ್ಕಳನ್ನು ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸುತ್ತಾರೆ, ಹೀಗೆ ಮಾಡುವುದರಿಂದ ಆ ಮಕ್ಕಳನ್ನು ಪೋಷಕರು ಕುಂಠಿತಗೊಳಿಸುತ್ತಾರೆ – ಆ ಮಕ್ಕಳು ಟ್ರಾನ್ಸ್‍ಜೆಂಡರ್ ಆಗದಿದ್ದರೂ ಅವರ ಮೇಲೆ ಪರಿಣಾಮ ಅದೇ ಆಗುವುದು.
ಹೆಚ್ಚಿನ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳ ಕಥಾನಕಗಳು ಇದರ ಬಗ್ಗೆಯೇ ಆಗಿರುತ್ತವೆ; ಅವರು ಆಡಬಯಸುವ ಆಟಗಳು, ಅಂತಹ ಆಟವನ್ನಾಡಲು ಬಿಡದ ಪೋಷಕರು ಇತ್ಯಾದಿ. ಆದರೆ ಇದು ಟ್ರಾನ್ಸ್‍ಜೆಂಡರ್ ಆಗಿರುವುದರ ಸಾಮಾಜಿಕ ಆಯಾಮಕ್ಕೆ ಮಾತ್ರ ಸಂಬಂಧಿಸಿದ್ದಾಗಿದೆ. ಡಿಸ್‍ಫೋರಿಯಾವನ್ನು ತಿಳಿದುಕೊಳ್ಳುವಾಗ ಅದಕ್ಕೆ ಸಾಮಾಜಿಕ ಮತ್ತು ದೈಹಿಕ ಅಂಶಗಳು ಎರಡೂ ಇರುತ್ತವೆ ಎನ್ನುವುದನ್ನು ತಿಳಿದುಕೊಳ್ಳಬೇಕಿದೆ, ಹಾಗೂ ಈ ಎರಡೂ ಅಂಶಗಳು ಆ ವ್ಯಕ್ತಿಯ ಮಿದುಳಿನಿಂದ ಕಾರ್ಯನಿರ್ವಹಿಸಿ ವ್ಯಕ್ತಿಯ ವರ್ತನೆಯ ಮೇಲೆ ಪರಿಣಾಮ ಬೀರುತ್ತವೆ. ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾದ ಸಂಗತಿಯೊಂದಿದೆ. ಸಮಾಜವು ಮಿದುಳಿನ ರಚನೆಯಲ್ಲಿ ಬದಲಾವಣೆ ತಂದು ವ್ಯಕ್ತಿಗಳ ವರ್ತನೆಯ ಮೇಲೂ ಪರಿಣಾಮ ಬೀರುತ್ತದೆ.
ಕೆಲವು ಮಕ್ಕಳು ತಮಗೆ ನೀಡಿದ ಜೆಂಡರ್‍ನಿಂದ ಅಪೇಕ್ಷಿಸಲಾಗುವ ವರ್ತನೆಗಳಿಗಿಂತ ಭಿನ್ನವಾಗಿ ವರ್ತಿಸದೇ ಇರಬಹುದು. ಹಾಗಿದ್ದರೂ ತಮ್ಮ ದೇಹದೊಂದಿಗೆ ಆಳವಾದ ಅಸಹನೆ, ಅಸಂತುಷ್ಟಿಯನ್ನಿಟ್ಟುಕೊಂಡು ಬೆಳೆಯಬಹುದಾಗಿದೆ. ನಾವು ಮೊದಲು ಚರ್ಚಿಸಿದಂತೆ, ಜೆಂಡರ್‍ನ ವಿಷಯದಲ್ಲಿ ತಮ್ಮ ದೈಹಿಕ ಬೆಳವಣಿಗೆಗೆ ಅನುಗುಣವಾಗದೇ, ಬೇರೆ ರೀತಿಯಲ್ಲಿ ಮಿದುಳಿನ ಬೆಳವಣಿಗೆ ಆಗುವ ಮಕ್ಕಳನ್ನು ಟ್ರಾನ್ಸ್‍ಜೆಂಡರ್ ಅನ್ನಬಹುದು.
ಒಬ್ಬ ಟ್ರಾನ್ಸ್‍ಜೆಂಡರ್ ಮಗು ತನ್ನ ವಯಸ್ಕ ಜೀವನಕ್ಕೆ ಹೋಗುವಾಗ, ಯಾವ್ಯಾವ ಅನುಭವಗಳಿಂದ ಹಾದುಹೋಗಬೇಕಾಗುತ್ತದೆ ಎಂದು ತಿಳಿಯಲು ನಾವು ಈ ಡಿಸ್‍ಫೋರಿಯಾ ಅನ್ನು ಇನ್ನಷ್ಟೂ ಕೂಲಂಕಷವಾಗಿ ತಿಳಿದುಕೊಳ್ಳೋಣ. ಹರೆಯಕ್ಕೆ ಪ್ರವೇಶಿಸುವ ಸಮಯದಲ್ಲಂತೂ ಈ ಡಿಸ್‍ಫೋರಿಯಾ ಅತ್ಯಂತ ಕೆಟ್ಟಹಂತದಲ್ಲಿರುತ್ತದೆ. ಪ್ರೌಢಾವಸ್ಥೆ (ಪ್ಯೂಬರ್ಟಿ) ಹಂತಕ್ಕೆ ತಲುಪುವ ತನಕ ಭಾರತೀಯ ಸಂಸ್ಕøತಿಯಲ್ಲಿ ಹೆಚ್ಚಿನ ಮಕ್ಕಳನ್ನು ಒಂದೇ ತೆರನಾಗಿ ನೋಡಿಕೊಳ್ಳಲಾಗುತ್ತದೆ. ಹಾಗೂ ಸಾಮಾನ್ಯವಾಗಿ ಹಾಕಿಕೊಳ್ಳುವ ಬಟ್ಟೆಗಳನ್ನು ಧರಿಸಿದ ಮಕ್ಕಳಿಗೆ ಇತರ ಮಕ್ಕಳ ಜೆಂಡರ್‍ಗೆ ಇರುವ ವ್ಯತ್ಯಾಸವೂ ಕೆಲವೊಮ್ಮೆ ತಿಳಿಯುವುದಿಲ್ಲ. ಜನನಾಂಗವೊಂದನ್ನು ಬಿಟ್ಟರೆ ಚಿಕ್ಕಮಕ್ಕಳ ದೇಹದಲ್ಲಿ ಬೇರೆ ಯಾವ ವ್ಯತ್ಯಾಸವೂ ಇರುವುದಿಲ್ಲ. ಆದರೆ ಪ್ರೌಢಾವಸ್ಥೆಯ ಸಮಯದಲ್ಲಿ, ಅವರ ಮಿದುಳು ಅಪೇಕ್ಷಿಸದ ರೀತಿಯಲ್ಲಿ ಗಂಡು ಮತ್ತು ಹೆಣ್ಣುಮಕ್ಕಳ ದೇಹಗಳು ಬದಲಾಗುತ್ತವೆ. ಇದೂ ಹೇಗೂ ತುಂಬಾ ಸಂಕಷ್ಟದ ಸಮಯವೇ ಆಗಿರುತ್ತದೆ. ಅದರೊಂದಿಗೆ, ಅಲ್ಲಿಯವರೆಗೆ ಯಾವ ಜೆಂಡರ್ ಜೊತೆಗೂ ಆಟವಾಡಬಹುದಾದ ಮಕ್ಕಳು ಮೀಸೆ ಅಥವಾ ಎದೆಯನ್ನು ಬೆಳೆಸಿ ಭಿನ್ನವಾಗಿ ಕಾಣಿಸತೊಡಗುತ್ತಾರೆ. ಇದರೊಂದಿಗೆ, ಸಮಾಜವೂ ಇದೇ ಸಮಯದಲ್ಲಿ ಇವರ ಜೀವನದಲ್ಲಿ ಪ್ರವೇಶಿಸಿ, ಮಕ್ಕಳ ಸಾಮಾಜಿಕ ಪಾತ್ರಗಳಲ್ಲಿ ಹೆಚ್ಚಿನ ನಿರ್ಬಂಧನೆಗಳನ್ನು ಹಾಕತೊಡಗುತ್ತದೆ. ಪ್ರೌಢಾವಸ್ಥೆಯ ನಂತರ ಗಂಡು ಮತ್ತು ಹೆಣ್ಣು ಮಕ್ಕಳು ಪರಸ್ಪರ ಬೆರೆಯಬಾರದು ಇತ್ಯಾದಿ ಕಟ್ಟಳೆಗಳನ್ನು ವಿಧಿಸಲಾಗುತ್ತದೆ ಹಾಗು ಇವೆಲ್ಲ ಟ್ರಾನ್ಸ್‍ಜೆಂಡರ್ ಮಕ್ಕಳನ್ನು ಇನ್ನಷ್ಟು ನಿರ್ಬಂಧಿಸಿ ಅವರನ್ನು ತಾವು ಗುರುತಿಸಿಕೊಳ್ಳಲಾಗದ ಸಾಮಾಜಿಕ ಜೆಂಡರ್‍ನೊಂದಿಗೆ ಸೇರಿಸಲಾಗುತ್ತದೆ.
ಬಹುತೇಕ ಟ್ರಾನ್ಸ್‍ಜೆಂಡರ್ ಕಥಾನಕಗಳು ಅವರೆದುರಿಸುವ ಸಮಸ್ಯೆಯ ಸಾಮಾಜಿಕ ಆಯಾಮದ ಬಗ್ಗೆ ಹೇಳುತ್ತವೆ ಹಾಗೂ ತನ್ನ ದೇಹದೊಂದಿಗೆ ಇರುವ ಅಸಂತುಷ್ಟತೆಯ ದೈಹಿಕ ಆಯಾಮದ ಬಗ್ಗೆ ಹೇಳುವುದಿಲ್ಲ. ಅದಕ್ಕಿರುವ ಒಂದು ಕಾರಣವೆಂದರೆ, ಸಾಮಾಜಿಕ ಅಸಂತುಷ್ಟತೆ ಸುಲಭವಾಗಿ ಗೋಚರಿಸುತ್ತವೆ ಆದರೆ ದೈಹಿಕ ಅಂಶ ಯಾವಾಗಲೂ ಖಾಸಗಿಯಾಗಿರುತ್ತದೆ. ಹಾಗೂ ಅನೇಕ ಟ್ರಾನ್ಸ್‍ಜೆಂಡರ್ ಮಕ್ಕಳು ತಮ್ಮ ದೇಹದೊಂದಿಗೆ ಅತ್ಯಂತ ತೀವ್ರವಾದ ಮುಜುಗರವನ್ನು ಬೆಳೆಸಿಕೊಂಡಿರುತ್ತಾರೆ. ಅನೇಕ ಟ್ರಾನ್ಸ್‍ಜೆಂಡರ್ ಮಕ್ಕಳು ಆತ್ಮಹತ್ಯೆಗೂ ಪ್ರಯತ್ನಿಸುತ್ತಾರೆ. ಆದರೂ ಆ ಮಕ್ಕಳ ಪೋಷಕರಿಗೆ ಮಕ್ಕಳು ತಮ್ಮ ಭಾವನೆಗಳನ್ನು ಅವರೊಂದಿಗೆ ಏಕೆ ಹಂಚಿಕೊಳ್ಳುವುದಿಲ್ಲ ಎಂದು ಅರ್ಥವಾಗುವುದಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...