Homeಅಂಕಣಗಳುನೀವು ತಿಳಿದುಕೊಳ್ಳಲೇಬೇಕಾದ ಡಿಸ್‍ಫೋರಿಯಾ

ನೀವು ತಿಳಿದುಕೊಳ್ಳಲೇಬೇಕಾದ ಡಿಸ್‍ಫೋರಿಯಾ

- Advertisement -
- Advertisement -

ಡಾ.ಕಾರ್ತಿಕ್ ಬಿಟ್ಟು, ಪ್ರಾಧ್ಯಾಪಕರು, ಅಶೋಕ ವಿಶ್ವವಿದ್ಯಾಲಯ, ಹರಿಯಾಣ
ಅನು: ರಾಜಶೇಖರ್ ಅಕ್ಕಿ

ಡಿಸ್‍ಫೋರಿಯಾ ಅಂದರೆ ಒಬ್ಬ ವ್ಯಕ್ತಿಗೆ ತನಗೆ ಹುಟ್ಟಿನಿಂದ ಆರೋಪಿಸಲಾದ ಜೆಂಡರ್‍ನೊಂದಿಗಿರುವ ಅಸಂತುಷ್ಟತೆ ಮತ್ತು ಬೇರ್ಪಡಿಕೆ. ಡಿಸ್‍ಫೋರಿಯಾ ಅನೇಕ ಸ್ವರೂಪಗಳನ್ನು ಪಡೆದುಕೊಳ್ಳಬಹುದು. ಒಬ್ಬ ಟ್ರಾನ್ಸ್‍ಜೆಂಡರ್ ವ್ಯಕ್ತಿಯ ಜೀವನಾನುಭವವನ್ನು ರೂಪಿಸುವುದೇ ಈ ಡಿಸ್‍ಫೋರಿಯಾ. ಆದರೆ ನಮ್ಮ ಸಮಾಜ ಆ ಅಸಂತುಷ್ಟತೆಯನ್ನು ಹೋಗಲಾಡಿಸುವಲ್ಲಿ ಸಹಾಯಕ ಪಾತ್ರ ವಹಿಸಲು ಸಾಧ್ಯ. ಆದರೆ ಅದರ ಬದಲಿಗೆ ಅವರ ಅಸಂತುಷ್ಟತೆಯನ್ನು ಉಲ್ಬಣಗೊಳಿಸುವುದೇ ಹೆಚ್ಚು. ಟ್ರಾನ್ಸ್‍ಜೆಂಡರ್ ಸಮುದಾಯಕ್ಕೆ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸದೇ, ಅವರ ಜೀವನವನ್ನು ನರಕಯಾತನೆಯನ್ನಾಗಿಸಿದ್ದೇ ನಮ್ಮ ಸಮಾಜ ಅವರಿಗೆ ಪೂರಕವಾಗಿ, ಅವರ ಸಂತುಷ್ಟಿಗೆ ನೆಲೆ ಹೇಗೆ ಆಗಬಲ್ಲದು ಎನ್ನುವುದನ್ನು ನಾವೆಲ್ಲರೂ ಸೇರಿ ಯೋಚಿಸಬೇಕಿದೆ. ಹಾಗಾದರೆ, ಟ್ರಾನ್ಸ್‍ಜೆಂಡರ್ ವ್ಯಕ್ತಿಗಳಿಗೆ ಪೂರಕವಾಗಬಲ್ಲ ವಾತಾವರಣವನ್ನು ಸೃಷ್ಟಿಸಲು ನಾವೇನು ಮಾಡಬಹುದು?
ಪ್ರತಿಯೊಬ್ಬರೂ ಮಾಡಬಲ್ಲ ಒಂದು ಸರಳ ವಿಷಯವೇನೆಂದರೆ, ಆ ವ್ಯಕ್ತಿಗಳು ಯಾವ ಜೆಂಡರ್‍ನೊಂದಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ ಎಂದು ಕೇಳುವುದು ಹಾಗೂ ಅವರು ಗುರುತಿಸಿಕೊಳ್ಳುವ ಜೆಂಡರ್‍ಗೆ ಗೌರವ ನೀಡಿ ಅವರೊಂದಿಗೆ ವ್ಯವಹರಿಸುವುದು. ಒಬ್ಬ ಟ್ರಾನ್ಸ್‍ಜೆಂಡರ್ ವ್ಯಕ್ತಿಗೆ ಪೂರಕವಾಗುವಂತಹ/ ಸ್ನೇಹಿಯಾಗುವಂತಹ ಜಗತ್ತನ್ನು ಸೃಷ್ಟಿಸಲು ಇಷ್ಟು ಮಾಡಿದರೂ ಸಾಕು.
ಒಬ್ಬ ಟ್ರಾನ್ಸ್ ವ್ಯಕ್ತಿ ಡಿಸ್‍ಫೋರಿಯಾದ ಭಾವನೆಯಿಂದ ಬಳಲುತ್ತಿರುವುದನ್ನು ನೆನಪಿಟ್ಟುಕೊಳ್ಳಬೇಕು. ನಮ್ಮ ಸಂಭಾಷಣೆಗಳಲ್ಲಿ ಅವರನ್ನು ಉದ್ದೇಶಿಸುವುದಕ್ಕಿಂತ ಮುಂಚೆ ಒಬ್ಬ ವ್ಯಕ್ತಿಯ ದೇಹದ ಆಧಾರದ ಮೇಲೆ ಇರುವ ಸಾಮಾಜಿಕ ಅವಧಾರಣೆಯನ್ನು ಗಮನದಲ್ಲಿಟ್ಟುಕೊಂಡು, ಅದನ್ನು ಕಡಿಮೆ ಮಾಡುವ ಒಂದು ಸಮಾಜವನ್ನು ಸೃಷ್ಟಿಸಬೇಕಿದೆ. ಅವರು ತಮ್ಮ ದೇಹದೊಂದಿಗೆ ಸಾಮರಸ್ಯ ಸ್ಥಾಪಿಸಲು ಯಾವುದೇ ವೈದ್ಯಕೀಯ ನೆರವು ಬೇಕಿದ್ದಲ್ಲಿ ಅದಕ್ಕೆ ಬೆಂಬಲವಾಗಿ ನಿಲ್ಲಬೇಕಿದೆ.
ಇದನ್ನು ಎಲ್ಲರಿಗಿಂತ ಮೊದಲು ಮಾಡಬೇಕಾದವರು ಆ ವ್ಯಕ್ತಿಯ ಪೋಷಕರು. ಆದರೆ ಪೋಷಕರಿಗೆ ತಮ್ಮ ಮಗುವಿಗೆ ಏನು ಒಳ್ಳೆಯದು ಎನ್ನುವುದರ ಬಗ್ಗೆ ಬಲವಾದ, ಸಮಸ್ಯಾತ್ಮಕ ಭಾವನೆಗಳನ್ನು ಹೊಂದಿರುತ್ತಾರೆ. ಇದುವೆ ಹೆಚ್ಚಿನ ಟ್ರಾನ್ಸ್‍ಜೆಂಡರ್ ಮಕ್ಕಳು ಅನುಭವಿಸುವ ಮೊದಲ ನೋವು. ಮಕ್ಕಳು ತಮ್ಮ ಜೆಂಡರ್ ಅನ್ನು ಯಾವುದೇ ರೀತಿಯಲ್ಲಿ ವ್ಯಕ್ತಪಡಿಸಿದರೂ ತಂದೆತಾಯಿಗಳು ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಹಾಗೂ ಜೆಂಡರ್ ಬಗ್ಗೆಯ ಮಕ್ಕಳ ಭಾವನೆಗಳನ್ನು ಗೌರವಿಸುವುದಿಲ್ಲ. ಒಂದು ವೇಳೆ ಹಾಗೆ ಮಾಡಿದರೂ, ತಮ್ಮ ಮಗು ತನ್ನ ದೇಹ ಬೇರೆಯಾಗಿರಬೇಕಾಗಿತ್ತು ಎಂದು ಹೇಳಿದಾಗ ನಕ್ಕುಬಿಡುವ ಪೋಷಕರೇ ಹಚ್ಚು. ಇದಕ್ಕೆ ಕಾರಣ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳೆಂದರೆ ಏನು ಎನ್ನುವುದರ ಬಗ್ಗೆ ಯಾವುದೇ ಅರಿವು ಇಲ್ಲದಿರುವುದು. ಆ ಕಾರಣಕ್ಕಾಗಿಯೇ ನಾನಿದನ್ನು ಬರೆಯುತ್ತಿದ್ದೇನೆ, ಇದನ್ನು ಓದಿ, ಒಬ್ಬ ಟ್ರಾನ್ಸ್‍ಜೆಂಡರ್ ಮಗುವನ್ನು ಬೆಳೆಸುವುದು ಹೇಗೆ, ಎನ್ನುವುದರ ಬಗ್ಗೆ ಪರಸ್ಪರ ಚರ್ಚಿಸಿ, ಟ್ರಾನ್ಸ್‍ಜೆಂಡರ್ ಮಕ್ಕಳಿಗೆ ಅನುಕೂಲವಾಗುವಂತಹ ಸಮಾಜವನ್ನು ನಿರ್ಮಿಸುವಲ್ಲಿ ಸಹಕಾರಿಯಾಗಬಲ್ಲಿರಿ ಎನ್ನುವುದು ನನ್ನ ಅಪೇಕ್ಷೆ.
ಇಂಟರ್‍ಸೆಕ್ಸ್ ಆಗಿರುವುದು ಹಾಗೂ ಟ್ರಾನ್ಸ್‍ಜೆಂಡರ್ ಆಗಿರುವುದು, ಇವರೆಡರ ಮಧ್ಯೆ ಇರುವ ಸಾಮಾಜಿಕ ಗೊಂದಲದಿಂದಲೇ ಮೊಟ್ಟಮೊದಲ ಅರಿವಿನ ಕೊರತೆ ಬರುವುದು. ಒಂದು ವೇಳೆ ಮಗುವಿನ ದೇಹ ಗಂಡು ಅಥವಾ ಹೆಣ್ಣಿನಂತಿದ್ದು ಅದರಲ್ಲಿ ಯಾವುದೇ ಗೊಂದಲಗಳಿಲ್ಲದಿದ್ದರೆ, ಆ ಮಗುವಿನ ಪೋಷಕರು ಮಗುವಿನ ಜೆಂಡರ್ ತಮಗೆ ಸ್ಪಷ್ಟವಾಗಿ ಗೊತ್ತು ಎಂದು ತಿಳಿದುಕೊಂಡಿರುತ್ತಾರೆ. ಆ ಮಗುವಿಗೆ ನೀಡಿದ ಜೆಂಡರ್‍ನೊಂದಿಗೆ ಸಂಬಂಧಿಸಿದ ನಿರ್ಬಂಧಗಳನ್ನು ಹೇರುವುದರಲ್ಲಿ ಯಾವುದೇ ಹಿಂಜರಿಕೆಯನ್ನು ತೋರುವುದಿಲ್ಲ, ಅದೂ ತುಂಬಾ ಚಿಕ್ಕ ವಯಸ್ಸಿನಿಂದಲೇ. ಒಬ್ಬ ಮಗುವಿಗೆ ಆ ಜೆಂಡರ್‍ಗೆ ಸಂಬಂಧಿಸಿದ ಅತ್ಯಂತ ಸಂಕುಚಿತವಾದ ನಿರ್ಬಂಧನೆಗಳನ್ನು ಮೀರಿ ಹಲವಾರು ಆಸಕ್ತಿ ಮತ್ತು ವರ್ತನೆಗಳನ್ನು ಹೊಂದಿದ್ದರೆ, ಆ ಮಗುವಿನ ಮೇಲೆ ಹಾಕುವ ನಿರ್ಬಂಧನೆಗಳು ಮಾನಸಿಕ ಹಿಂಸೆಯ ಒಂದು ಸ್ವರೂಪವಾಗಿಬಿಡುತ್ತವೆ. ತಮ್ಮ ಸುತ್ತಮುತ್ತಲಿನ ಚಟುವಟಿಕೆಗಳಿಗಾಗಿ ಸಹಜವಾಗಿಯೇ ಮಕ್ಕಳು ಒಂದು ಸುಂದರವಾದ ಕುತೂಹಲ ಹೊಂದಿರುತ್ತಾರೆ ಆದರೆ ಪೋಷಕರು ಸಿನೆಮಾ ಹೀರೋಯಿನ್ ತರಹ ಡಾನ್ಸ್ ಮಾಡಲು ಇಚ್ಛಿಸುವ, ಮೇಕ್-ಅಪ್ ಜೊತೆಗೆ ಆಟವಾಡಲು ಇಚ್ಛಿಸುವ ಗಂಡುಮಕ್ಕಳನ್ನು ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸುತ್ತಾರೆ, ಹೀಗೆ ಮಾಡುವುದರಿಂದ ಆ ಮಕ್ಕಳನ್ನು ಪೋಷಕರು ಕುಂಠಿತಗೊಳಿಸುತ್ತಾರೆ – ಆ ಮಕ್ಕಳು ಟ್ರಾನ್ಸ್‍ಜೆಂಡರ್ ಆಗದಿದ್ದರೂ ಅವರ ಮೇಲೆ ಪರಿಣಾಮ ಅದೇ ಆಗುವುದು.
ಹೆಚ್ಚಿನ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳ ಕಥಾನಕಗಳು ಇದರ ಬಗ್ಗೆಯೇ ಆಗಿರುತ್ತವೆ; ಅವರು ಆಡಬಯಸುವ ಆಟಗಳು, ಅಂತಹ ಆಟವನ್ನಾಡಲು ಬಿಡದ ಪೋಷಕರು ಇತ್ಯಾದಿ. ಆದರೆ ಇದು ಟ್ರಾನ್ಸ್‍ಜೆಂಡರ್ ಆಗಿರುವುದರ ಸಾಮಾಜಿಕ ಆಯಾಮಕ್ಕೆ ಮಾತ್ರ ಸಂಬಂಧಿಸಿದ್ದಾಗಿದೆ. ಡಿಸ್‍ಫೋರಿಯಾವನ್ನು ತಿಳಿದುಕೊಳ್ಳುವಾಗ ಅದಕ್ಕೆ ಸಾಮಾಜಿಕ ಮತ್ತು ದೈಹಿಕ ಅಂಶಗಳು ಎರಡೂ ಇರುತ್ತವೆ ಎನ್ನುವುದನ್ನು ತಿಳಿದುಕೊಳ್ಳಬೇಕಿದೆ, ಹಾಗೂ ಈ ಎರಡೂ ಅಂಶಗಳು ಆ ವ್ಯಕ್ತಿಯ ಮಿದುಳಿನಿಂದ ಕಾರ್ಯನಿರ್ವಹಿಸಿ ವ್ಯಕ್ತಿಯ ವರ್ತನೆಯ ಮೇಲೆ ಪರಿಣಾಮ ಬೀರುತ್ತವೆ. ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾದ ಸಂಗತಿಯೊಂದಿದೆ. ಸಮಾಜವು ಮಿದುಳಿನ ರಚನೆಯಲ್ಲಿ ಬದಲಾವಣೆ ತಂದು ವ್ಯಕ್ತಿಗಳ ವರ್ತನೆಯ ಮೇಲೂ ಪರಿಣಾಮ ಬೀರುತ್ತದೆ.
ಕೆಲವು ಮಕ್ಕಳು ತಮಗೆ ನೀಡಿದ ಜೆಂಡರ್‍ನಿಂದ ಅಪೇಕ್ಷಿಸಲಾಗುವ ವರ್ತನೆಗಳಿಗಿಂತ ಭಿನ್ನವಾಗಿ ವರ್ತಿಸದೇ ಇರಬಹುದು. ಹಾಗಿದ್ದರೂ ತಮ್ಮ ದೇಹದೊಂದಿಗೆ ಆಳವಾದ ಅಸಹನೆ, ಅಸಂತುಷ್ಟಿಯನ್ನಿಟ್ಟುಕೊಂಡು ಬೆಳೆಯಬಹುದಾಗಿದೆ. ನಾವು ಮೊದಲು ಚರ್ಚಿಸಿದಂತೆ, ಜೆಂಡರ್‍ನ ವಿಷಯದಲ್ಲಿ ತಮ್ಮ ದೈಹಿಕ ಬೆಳವಣಿಗೆಗೆ ಅನುಗುಣವಾಗದೇ, ಬೇರೆ ರೀತಿಯಲ್ಲಿ ಮಿದುಳಿನ ಬೆಳವಣಿಗೆ ಆಗುವ ಮಕ್ಕಳನ್ನು ಟ್ರಾನ್ಸ್‍ಜೆಂಡರ್ ಅನ್ನಬಹುದು.
ಒಬ್ಬ ಟ್ರಾನ್ಸ್‍ಜೆಂಡರ್ ಮಗು ತನ್ನ ವಯಸ್ಕ ಜೀವನಕ್ಕೆ ಹೋಗುವಾಗ, ಯಾವ್ಯಾವ ಅನುಭವಗಳಿಂದ ಹಾದುಹೋಗಬೇಕಾಗುತ್ತದೆ ಎಂದು ತಿಳಿಯಲು ನಾವು ಈ ಡಿಸ್‍ಫೋರಿಯಾ ಅನ್ನು ಇನ್ನಷ್ಟೂ ಕೂಲಂಕಷವಾಗಿ ತಿಳಿದುಕೊಳ್ಳೋಣ. ಹರೆಯಕ್ಕೆ ಪ್ರವೇಶಿಸುವ ಸಮಯದಲ್ಲಂತೂ ಈ ಡಿಸ್‍ಫೋರಿಯಾ ಅತ್ಯಂತ ಕೆಟ್ಟಹಂತದಲ್ಲಿರುತ್ತದೆ. ಪ್ರೌಢಾವಸ್ಥೆ (ಪ್ಯೂಬರ್ಟಿ) ಹಂತಕ್ಕೆ ತಲುಪುವ ತನಕ ಭಾರತೀಯ ಸಂಸ್ಕøತಿಯಲ್ಲಿ ಹೆಚ್ಚಿನ ಮಕ್ಕಳನ್ನು ಒಂದೇ ತೆರನಾಗಿ ನೋಡಿಕೊಳ್ಳಲಾಗುತ್ತದೆ. ಹಾಗೂ ಸಾಮಾನ್ಯವಾಗಿ ಹಾಕಿಕೊಳ್ಳುವ ಬಟ್ಟೆಗಳನ್ನು ಧರಿಸಿದ ಮಕ್ಕಳಿಗೆ ಇತರ ಮಕ್ಕಳ ಜೆಂಡರ್‍ಗೆ ಇರುವ ವ್ಯತ್ಯಾಸವೂ ಕೆಲವೊಮ್ಮೆ ತಿಳಿಯುವುದಿಲ್ಲ. ಜನನಾಂಗವೊಂದನ್ನು ಬಿಟ್ಟರೆ ಚಿಕ್ಕಮಕ್ಕಳ ದೇಹದಲ್ಲಿ ಬೇರೆ ಯಾವ ವ್ಯತ್ಯಾಸವೂ ಇರುವುದಿಲ್ಲ. ಆದರೆ ಪ್ರೌಢಾವಸ್ಥೆಯ ಸಮಯದಲ್ಲಿ, ಅವರ ಮಿದುಳು ಅಪೇಕ್ಷಿಸದ ರೀತಿಯಲ್ಲಿ ಗಂಡು ಮತ್ತು ಹೆಣ್ಣುಮಕ್ಕಳ ದೇಹಗಳು ಬದಲಾಗುತ್ತವೆ. ಇದೂ ಹೇಗೂ ತುಂಬಾ ಸಂಕಷ್ಟದ ಸಮಯವೇ ಆಗಿರುತ್ತದೆ. ಅದರೊಂದಿಗೆ, ಅಲ್ಲಿಯವರೆಗೆ ಯಾವ ಜೆಂಡರ್ ಜೊತೆಗೂ ಆಟವಾಡಬಹುದಾದ ಮಕ್ಕಳು ಮೀಸೆ ಅಥವಾ ಎದೆಯನ್ನು ಬೆಳೆಸಿ ಭಿನ್ನವಾಗಿ ಕಾಣಿಸತೊಡಗುತ್ತಾರೆ. ಇದರೊಂದಿಗೆ, ಸಮಾಜವೂ ಇದೇ ಸಮಯದಲ್ಲಿ ಇವರ ಜೀವನದಲ್ಲಿ ಪ್ರವೇಶಿಸಿ, ಮಕ್ಕಳ ಸಾಮಾಜಿಕ ಪಾತ್ರಗಳಲ್ಲಿ ಹೆಚ್ಚಿನ ನಿರ್ಬಂಧನೆಗಳನ್ನು ಹಾಕತೊಡಗುತ್ತದೆ. ಪ್ರೌಢಾವಸ್ಥೆಯ ನಂತರ ಗಂಡು ಮತ್ತು ಹೆಣ್ಣು ಮಕ್ಕಳು ಪರಸ್ಪರ ಬೆರೆಯಬಾರದು ಇತ್ಯಾದಿ ಕಟ್ಟಳೆಗಳನ್ನು ವಿಧಿಸಲಾಗುತ್ತದೆ ಹಾಗು ಇವೆಲ್ಲ ಟ್ರಾನ್ಸ್‍ಜೆಂಡರ್ ಮಕ್ಕಳನ್ನು ಇನ್ನಷ್ಟು ನಿರ್ಬಂಧಿಸಿ ಅವರನ್ನು ತಾವು ಗುರುತಿಸಿಕೊಳ್ಳಲಾಗದ ಸಾಮಾಜಿಕ ಜೆಂಡರ್‍ನೊಂದಿಗೆ ಸೇರಿಸಲಾಗುತ್ತದೆ.
ಬಹುತೇಕ ಟ್ರಾನ್ಸ್‍ಜೆಂಡರ್ ಕಥಾನಕಗಳು ಅವರೆದುರಿಸುವ ಸಮಸ್ಯೆಯ ಸಾಮಾಜಿಕ ಆಯಾಮದ ಬಗ್ಗೆ ಹೇಳುತ್ತವೆ ಹಾಗೂ ತನ್ನ ದೇಹದೊಂದಿಗೆ ಇರುವ ಅಸಂತುಷ್ಟತೆಯ ದೈಹಿಕ ಆಯಾಮದ ಬಗ್ಗೆ ಹೇಳುವುದಿಲ್ಲ. ಅದಕ್ಕಿರುವ ಒಂದು ಕಾರಣವೆಂದರೆ, ಸಾಮಾಜಿಕ ಅಸಂತುಷ್ಟತೆ ಸುಲಭವಾಗಿ ಗೋಚರಿಸುತ್ತವೆ ಆದರೆ ದೈಹಿಕ ಅಂಶ ಯಾವಾಗಲೂ ಖಾಸಗಿಯಾಗಿರುತ್ತದೆ. ಹಾಗೂ ಅನೇಕ ಟ್ರಾನ್ಸ್‍ಜೆಂಡರ್ ಮಕ್ಕಳು ತಮ್ಮ ದೇಹದೊಂದಿಗೆ ಅತ್ಯಂತ ತೀವ್ರವಾದ ಮುಜುಗರವನ್ನು ಬೆಳೆಸಿಕೊಂಡಿರುತ್ತಾರೆ. ಅನೇಕ ಟ್ರಾನ್ಸ್‍ಜೆಂಡರ್ ಮಕ್ಕಳು ಆತ್ಮಹತ್ಯೆಗೂ ಪ್ರಯತ್ನಿಸುತ್ತಾರೆ. ಆದರೂ ಆ ಮಕ್ಕಳ ಪೋಷಕರಿಗೆ ಮಕ್ಕಳು ತಮ್ಮ ಭಾವನೆಗಳನ್ನು ಅವರೊಂದಿಗೆ ಏಕೆ ಹಂಚಿಕೊಳ್ಳುವುದಿಲ್ಲ ಎಂದು ಅರ್ಥವಾಗುವುದಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...