Homeಅಂಕಣಗಳುನೀವು ತಿಳಿದುಕೊಳ್ಳಲೇಬೇಕಾದ ಡಿಸ್‍ಫೋರಿಯಾ

ನೀವು ತಿಳಿದುಕೊಳ್ಳಲೇಬೇಕಾದ ಡಿಸ್‍ಫೋರಿಯಾ

- Advertisement -
- Advertisement -

ಡಾ.ಕಾರ್ತಿಕ್ ಬಿಟ್ಟು, ಪ್ರಾಧ್ಯಾಪಕರು, ಅಶೋಕ ವಿಶ್ವವಿದ್ಯಾಲಯ, ಹರಿಯಾಣ
ಅನು: ರಾಜಶೇಖರ್ ಅಕ್ಕಿ

ಡಿಸ್‍ಫೋರಿಯಾ ಅಂದರೆ ಒಬ್ಬ ವ್ಯಕ್ತಿಗೆ ತನಗೆ ಹುಟ್ಟಿನಿಂದ ಆರೋಪಿಸಲಾದ ಜೆಂಡರ್‍ನೊಂದಿಗಿರುವ ಅಸಂತುಷ್ಟತೆ ಮತ್ತು ಬೇರ್ಪಡಿಕೆ. ಡಿಸ್‍ಫೋರಿಯಾ ಅನೇಕ ಸ್ವರೂಪಗಳನ್ನು ಪಡೆದುಕೊಳ್ಳಬಹುದು. ಒಬ್ಬ ಟ್ರಾನ್ಸ್‍ಜೆಂಡರ್ ವ್ಯಕ್ತಿಯ ಜೀವನಾನುಭವವನ್ನು ರೂಪಿಸುವುದೇ ಈ ಡಿಸ್‍ಫೋರಿಯಾ. ಆದರೆ ನಮ್ಮ ಸಮಾಜ ಆ ಅಸಂತುಷ್ಟತೆಯನ್ನು ಹೋಗಲಾಡಿಸುವಲ್ಲಿ ಸಹಾಯಕ ಪಾತ್ರ ವಹಿಸಲು ಸಾಧ್ಯ. ಆದರೆ ಅದರ ಬದಲಿಗೆ ಅವರ ಅಸಂತುಷ್ಟತೆಯನ್ನು ಉಲ್ಬಣಗೊಳಿಸುವುದೇ ಹೆಚ್ಚು. ಟ್ರಾನ್ಸ್‍ಜೆಂಡರ್ ಸಮುದಾಯಕ್ಕೆ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸದೇ, ಅವರ ಜೀವನವನ್ನು ನರಕಯಾತನೆಯನ್ನಾಗಿಸಿದ್ದೇ ನಮ್ಮ ಸಮಾಜ ಅವರಿಗೆ ಪೂರಕವಾಗಿ, ಅವರ ಸಂತುಷ್ಟಿಗೆ ನೆಲೆ ಹೇಗೆ ಆಗಬಲ್ಲದು ಎನ್ನುವುದನ್ನು ನಾವೆಲ್ಲರೂ ಸೇರಿ ಯೋಚಿಸಬೇಕಿದೆ. ಹಾಗಾದರೆ, ಟ್ರಾನ್ಸ್‍ಜೆಂಡರ್ ವ್ಯಕ್ತಿಗಳಿಗೆ ಪೂರಕವಾಗಬಲ್ಲ ವಾತಾವರಣವನ್ನು ಸೃಷ್ಟಿಸಲು ನಾವೇನು ಮಾಡಬಹುದು?
ಪ್ರತಿಯೊಬ್ಬರೂ ಮಾಡಬಲ್ಲ ಒಂದು ಸರಳ ವಿಷಯವೇನೆಂದರೆ, ಆ ವ್ಯಕ್ತಿಗಳು ಯಾವ ಜೆಂಡರ್‍ನೊಂದಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ ಎಂದು ಕೇಳುವುದು ಹಾಗೂ ಅವರು ಗುರುತಿಸಿಕೊಳ್ಳುವ ಜೆಂಡರ್‍ಗೆ ಗೌರವ ನೀಡಿ ಅವರೊಂದಿಗೆ ವ್ಯವಹರಿಸುವುದು. ಒಬ್ಬ ಟ್ರಾನ್ಸ್‍ಜೆಂಡರ್ ವ್ಯಕ್ತಿಗೆ ಪೂರಕವಾಗುವಂತಹ/ ಸ್ನೇಹಿಯಾಗುವಂತಹ ಜಗತ್ತನ್ನು ಸೃಷ್ಟಿಸಲು ಇಷ್ಟು ಮಾಡಿದರೂ ಸಾಕು.
ಒಬ್ಬ ಟ್ರಾನ್ಸ್ ವ್ಯಕ್ತಿ ಡಿಸ್‍ಫೋರಿಯಾದ ಭಾವನೆಯಿಂದ ಬಳಲುತ್ತಿರುವುದನ್ನು ನೆನಪಿಟ್ಟುಕೊಳ್ಳಬೇಕು. ನಮ್ಮ ಸಂಭಾಷಣೆಗಳಲ್ಲಿ ಅವರನ್ನು ಉದ್ದೇಶಿಸುವುದಕ್ಕಿಂತ ಮುಂಚೆ ಒಬ್ಬ ವ್ಯಕ್ತಿಯ ದೇಹದ ಆಧಾರದ ಮೇಲೆ ಇರುವ ಸಾಮಾಜಿಕ ಅವಧಾರಣೆಯನ್ನು ಗಮನದಲ್ಲಿಟ್ಟುಕೊಂಡು, ಅದನ್ನು ಕಡಿಮೆ ಮಾಡುವ ಒಂದು ಸಮಾಜವನ್ನು ಸೃಷ್ಟಿಸಬೇಕಿದೆ. ಅವರು ತಮ್ಮ ದೇಹದೊಂದಿಗೆ ಸಾಮರಸ್ಯ ಸ್ಥಾಪಿಸಲು ಯಾವುದೇ ವೈದ್ಯಕೀಯ ನೆರವು ಬೇಕಿದ್ದಲ್ಲಿ ಅದಕ್ಕೆ ಬೆಂಬಲವಾಗಿ ನಿಲ್ಲಬೇಕಿದೆ.
ಇದನ್ನು ಎಲ್ಲರಿಗಿಂತ ಮೊದಲು ಮಾಡಬೇಕಾದವರು ಆ ವ್ಯಕ್ತಿಯ ಪೋಷಕರು. ಆದರೆ ಪೋಷಕರಿಗೆ ತಮ್ಮ ಮಗುವಿಗೆ ಏನು ಒಳ್ಳೆಯದು ಎನ್ನುವುದರ ಬಗ್ಗೆ ಬಲವಾದ, ಸಮಸ್ಯಾತ್ಮಕ ಭಾವನೆಗಳನ್ನು ಹೊಂದಿರುತ್ತಾರೆ. ಇದುವೆ ಹೆಚ್ಚಿನ ಟ್ರಾನ್ಸ್‍ಜೆಂಡರ್ ಮಕ್ಕಳು ಅನುಭವಿಸುವ ಮೊದಲ ನೋವು. ಮಕ್ಕಳು ತಮ್ಮ ಜೆಂಡರ್ ಅನ್ನು ಯಾವುದೇ ರೀತಿಯಲ್ಲಿ ವ್ಯಕ್ತಪಡಿಸಿದರೂ ತಂದೆತಾಯಿಗಳು ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಹಾಗೂ ಜೆಂಡರ್ ಬಗ್ಗೆಯ ಮಕ್ಕಳ ಭಾವನೆಗಳನ್ನು ಗೌರವಿಸುವುದಿಲ್ಲ. ಒಂದು ವೇಳೆ ಹಾಗೆ ಮಾಡಿದರೂ, ತಮ್ಮ ಮಗು ತನ್ನ ದೇಹ ಬೇರೆಯಾಗಿರಬೇಕಾಗಿತ್ತು ಎಂದು ಹೇಳಿದಾಗ ನಕ್ಕುಬಿಡುವ ಪೋಷಕರೇ ಹಚ್ಚು. ಇದಕ್ಕೆ ಕಾರಣ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳೆಂದರೆ ಏನು ಎನ್ನುವುದರ ಬಗ್ಗೆ ಯಾವುದೇ ಅರಿವು ಇಲ್ಲದಿರುವುದು. ಆ ಕಾರಣಕ್ಕಾಗಿಯೇ ನಾನಿದನ್ನು ಬರೆಯುತ್ತಿದ್ದೇನೆ, ಇದನ್ನು ಓದಿ, ಒಬ್ಬ ಟ್ರಾನ್ಸ್‍ಜೆಂಡರ್ ಮಗುವನ್ನು ಬೆಳೆಸುವುದು ಹೇಗೆ, ಎನ್ನುವುದರ ಬಗ್ಗೆ ಪರಸ್ಪರ ಚರ್ಚಿಸಿ, ಟ್ರಾನ್ಸ್‍ಜೆಂಡರ್ ಮಕ್ಕಳಿಗೆ ಅನುಕೂಲವಾಗುವಂತಹ ಸಮಾಜವನ್ನು ನಿರ್ಮಿಸುವಲ್ಲಿ ಸಹಕಾರಿಯಾಗಬಲ್ಲಿರಿ ಎನ್ನುವುದು ನನ್ನ ಅಪೇಕ್ಷೆ.
ಇಂಟರ್‍ಸೆಕ್ಸ್ ಆಗಿರುವುದು ಹಾಗೂ ಟ್ರಾನ್ಸ್‍ಜೆಂಡರ್ ಆಗಿರುವುದು, ಇವರೆಡರ ಮಧ್ಯೆ ಇರುವ ಸಾಮಾಜಿಕ ಗೊಂದಲದಿಂದಲೇ ಮೊಟ್ಟಮೊದಲ ಅರಿವಿನ ಕೊರತೆ ಬರುವುದು. ಒಂದು ವೇಳೆ ಮಗುವಿನ ದೇಹ ಗಂಡು ಅಥವಾ ಹೆಣ್ಣಿನಂತಿದ್ದು ಅದರಲ್ಲಿ ಯಾವುದೇ ಗೊಂದಲಗಳಿಲ್ಲದಿದ್ದರೆ, ಆ ಮಗುವಿನ ಪೋಷಕರು ಮಗುವಿನ ಜೆಂಡರ್ ತಮಗೆ ಸ್ಪಷ್ಟವಾಗಿ ಗೊತ್ತು ಎಂದು ತಿಳಿದುಕೊಂಡಿರುತ್ತಾರೆ. ಆ ಮಗುವಿಗೆ ನೀಡಿದ ಜೆಂಡರ್‍ನೊಂದಿಗೆ ಸಂಬಂಧಿಸಿದ ನಿರ್ಬಂಧಗಳನ್ನು ಹೇರುವುದರಲ್ಲಿ ಯಾವುದೇ ಹಿಂಜರಿಕೆಯನ್ನು ತೋರುವುದಿಲ್ಲ, ಅದೂ ತುಂಬಾ ಚಿಕ್ಕ ವಯಸ್ಸಿನಿಂದಲೇ. ಒಬ್ಬ ಮಗುವಿಗೆ ಆ ಜೆಂಡರ್‍ಗೆ ಸಂಬಂಧಿಸಿದ ಅತ್ಯಂತ ಸಂಕುಚಿತವಾದ ನಿರ್ಬಂಧನೆಗಳನ್ನು ಮೀರಿ ಹಲವಾರು ಆಸಕ್ತಿ ಮತ್ತು ವರ್ತನೆಗಳನ್ನು ಹೊಂದಿದ್ದರೆ, ಆ ಮಗುವಿನ ಮೇಲೆ ಹಾಕುವ ನಿರ್ಬಂಧನೆಗಳು ಮಾನಸಿಕ ಹಿಂಸೆಯ ಒಂದು ಸ್ವರೂಪವಾಗಿಬಿಡುತ್ತವೆ. ತಮ್ಮ ಸುತ್ತಮುತ್ತಲಿನ ಚಟುವಟಿಕೆಗಳಿಗಾಗಿ ಸಹಜವಾಗಿಯೇ ಮಕ್ಕಳು ಒಂದು ಸುಂದರವಾದ ಕುತೂಹಲ ಹೊಂದಿರುತ್ತಾರೆ ಆದರೆ ಪೋಷಕರು ಸಿನೆಮಾ ಹೀರೋಯಿನ್ ತರಹ ಡಾನ್ಸ್ ಮಾಡಲು ಇಚ್ಛಿಸುವ, ಮೇಕ್-ಅಪ್ ಜೊತೆಗೆ ಆಟವಾಡಲು ಇಚ್ಛಿಸುವ ಗಂಡುಮಕ್ಕಳನ್ನು ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸುತ್ತಾರೆ, ಹೀಗೆ ಮಾಡುವುದರಿಂದ ಆ ಮಕ್ಕಳನ್ನು ಪೋಷಕರು ಕುಂಠಿತಗೊಳಿಸುತ್ತಾರೆ – ಆ ಮಕ್ಕಳು ಟ್ರಾನ್ಸ್‍ಜೆಂಡರ್ ಆಗದಿದ್ದರೂ ಅವರ ಮೇಲೆ ಪರಿಣಾಮ ಅದೇ ಆಗುವುದು.
ಹೆಚ್ಚಿನ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳ ಕಥಾನಕಗಳು ಇದರ ಬಗ್ಗೆಯೇ ಆಗಿರುತ್ತವೆ; ಅವರು ಆಡಬಯಸುವ ಆಟಗಳು, ಅಂತಹ ಆಟವನ್ನಾಡಲು ಬಿಡದ ಪೋಷಕರು ಇತ್ಯಾದಿ. ಆದರೆ ಇದು ಟ್ರಾನ್ಸ್‍ಜೆಂಡರ್ ಆಗಿರುವುದರ ಸಾಮಾಜಿಕ ಆಯಾಮಕ್ಕೆ ಮಾತ್ರ ಸಂಬಂಧಿಸಿದ್ದಾಗಿದೆ. ಡಿಸ್‍ಫೋರಿಯಾವನ್ನು ತಿಳಿದುಕೊಳ್ಳುವಾಗ ಅದಕ್ಕೆ ಸಾಮಾಜಿಕ ಮತ್ತು ದೈಹಿಕ ಅಂಶಗಳು ಎರಡೂ ಇರುತ್ತವೆ ಎನ್ನುವುದನ್ನು ತಿಳಿದುಕೊಳ್ಳಬೇಕಿದೆ, ಹಾಗೂ ಈ ಎರಡೂ ಅಂಶಗಳು ಆ ವ್ಯಕ್ತಿಯ ಮಿದುಳಿನಿಂದ ಕಾರ್ಯನಿರ್ವಹಿಸಿ ವ್ಯಕ್ತಿಯ ವರ್ತನೆಯ ಮೇಲೆ ಪರಿಣಾಮ ಬೀರುತ್ತವೆ. ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾದ ಸಂಗತಿಯೊಂದಿದೆ. ಸಮಾಜವು ಮಿದುಳಿನ ರಚನೆಯಲ್ಲಿ ಬದಲಾವಣೆ ತಂದು ವ್ಯಕ್ತಿಗಳ ವರ್ತನೆಯ ಮೇಲೂ ಪರಿಣಾಮ ಬೀರುತ್ತದೆ.
ಕೆಲವು ಮಕ್ಕಳು ತಮಗೆ ನೀಡಿದ ಜೆಂಡರ್‍ನಿಂದ ಅಪೇಕ್ಷಿಸಲಾಗುವ ವರ್ತನೆಗಳಿಗಿಂತ ಭಿನ್ನವಾಗಿ ವರ್ತಿಸದೇ ಇರಬಹುದು. ಹಾಗಿದ್ದರೂ ತಮ್ಮ ದೇಹದೊಂದಿಗೆ ಆಳವಾದ ಅಸಹನೆ, ಅಸಂತುಷ್ಟಿಯನ್ನಿಟ್ಟುಕೊಂಡು ಬೆಳೆಯಬಹುದಾಗಿದೆ. ನಾವು ಮೊದಲು ಚರ್ಚಿಸಿದಂತೆ, ಜೆಂಡರ್‍ನ ವಿಷಯದಲ್ಲಿ ತಮ್ಮ ದೈಹಿಕ ಬೆಳವಣಿಗೆಗೆ ಅನುಗುಣವಾಗದೇ, ಬೇರೆ ರೀತಿಯಲ್ಲಿ ಮಿದುಳಿನ ಬೆಳವಣಿಗೆ ಆಗುವ ಮಕ್ಕಳನ್ನು ಟ್ರಾನ್ಸ್‍ಜೆಂಡರ್ ಅನ್ನಬಹುದು.
ಒಬ್ಬ ಟ್ರಾನ್ಸ್‍ಜೆಂಡರ್ ಮಗು ತನ್ನ ವಯಸ್ಕ ಜೀವನಕ್ಕೆ ಹೋಗುವಾಗ, ಯಾವ್ಯಾವ ಅನುಭವಗಳಿಂದ ಹಾದುಹೋಗಬೇಕಾಗುತ್ತದೆ ಎಂದು ತಿಳಿಯಲು ನಾವು ಈ ಡಿಸ್‍ಫೋರಿಯಾ ಅನ್ನು ಇನ್ನಷ್ಟೂ ಕೂಲಂಕಷವಾಗಿ ತಿಳಿದುಕೊಳ್ಳೋಣ. ಹರೆಯಕ್ಕೆ ಪ್ರವೇಶಿಸುವ ಸಮಯದಲ್ಲಂತೂ ಈ ಡಿಸ್‍ಫೋರಿಯಾ ಅತ್ಯಂತ ಕೆಟ್ಟಹಂತದಲ್ಲಿರುತ್ತದೆ. ಪ್ರೌಢಾವಸ್ಥೆ (ಪ್ಯೂಬರ್ಟಿ) ಹಂತಕ್ಕೆ ತಲುಪುವ ತನಕ ಭಾರತೀಯ ಸಂಸ್ಕøತಿಯಲ್ಲಿ ಹೆಚ್ಚಿನ ಮಕ್ಕಳನ್ನು ಒಂದೇ ತೆರನಾಗಿ ನೋಡಿಕೊಳ್ಳಲಾಗುತ್ತದೆ. ಹಾಗೂ ಸಾಮಾನ್ಯವಾಗಿ ಹಾಕಿಕೊಳ್ಳುವ ಬಟ್ಟೆಗಳನ್ನು ಧರಿಸಿದ ಮಕ್ಕಳಿಗೆ ಇತರ ಮಕ್ಕಳ ಜೆಂಡರ್‍ಗೆ ಇರುವ ವ್ಯತ್ಯಾಸವೂ ಕೆಲವೊಮ್ಮೆ ತಿಳಿಯುವುದಿಲ್ಲ. ಜನನಾಂಗವೊಂದನ್ನು ಬಿಟ್ಟರೆ ಚಿಕ್ಕಮಕ್ಕಳ ದೇಹದಲ್ಲಿ ಬೇರೆ ಯಾವ ವ್ಯತ್ಯಾಸವೂ ಇರುವುದಿಲ್ಲ. ಆದರೆ ಪ್ರೌಢಾವಸ್ಥೆಯ ಸಮಯದಲ್ಲಿ, ಅವರ ಮಿದುಳು ಅಪೇಕ್ಷಿಸದ ರೀತಿಯಲ್ಲಿ ಗಂಡು ಮತ್ತು ಹೆಣ್ಣುಮಕ್ಕಳ ದೇಹಗಳು ಬದಲಾಗುತ್ತವೆ. ಇದೂ ಹೇಗೂ ತುಂಬಾ ಸಂಕಷ್ಟದ ಸಮಯವೇ ಆಗಿರುತ್ತದೆ. ಅದರೊಂದಿಗೆ, ಅಲ್ಲಿಯವರೆಗೆ ಯಾವ ಜೆಂಡರ್ ಜೊತೆಗೂ ಆಟವಾಡಬಹುದಾದ ಮಕ್ಕಳು ಮೀಸೆ ಅಥವಾ ಎದೆಯನ್ನು ಬೆಳೆಸಿ ಭಿನ್ನವಾಗಿ ಕಾಣಿಸತೊಡಗುತ್ತಾರೆ. ಇದರೊಂದಿಗೆ, ಸಮಾಜವೂ ಇದೇ ಸಮಯದಲ್ಲಿ ಇವರ ಜೀವನದಲ್ಲಿ ಪ್ರವೇಶಿಸಿ, ಮಕ್ಕಳ ಸಾಮಾಜಿಕ ಪಾತ್ರಗಳಲ್ಲಿ ಹೆಚ್ಚಿನ ನಿರ್ಬಂಧನೆಗಳನ್ನು ಹಾಕತೊಡಗುತ್ತದೆ. ಪ್ರೌಢಾವಸ್ಥೆಯ ನಂತರ ಗಂಡು ಮತ್ತು ಹೆಣ್ಣು ಮಕ್ಕಳು ಪರಸ್ಪರ ಬೆರೆಯಬಾರದು ಇತ್ಯಾದಿ ಕಟ್ಟಳೆಗಳನ್ನು ವಿಧಿಸಲಾಗುತ್ತದೆ ಹಾಗು ಇವೆಲ್ಲ ಟ್ರಾನ್ಸ್‍ಜೆಂಡರ್ ಮಕ್ಕಳನ್ನು ಇನ್ನಷ್ಟು ನಿರ್ಬಂಧಿಸಿ ಅವರನ್ನು ತಾವು ಗುರುತಿಸಿಕೊಳ್ಳಲಾಗದ ಸಾಮಾಜಿಕ ಜೆಂಡರ್‍ನೊಂದಿಗೆ ಸೇರಿಸಲಾಗುತ್ತದೆ.
ಬಹುತೇಕ ಟ್ರಾನ್ಸ್‍ಜೆಂಡರ್ ಕಥಾನಕಗಳು ಅವರೆದುರಿಸುವ ಸಮಸ್ಯೆಯ ಸಾಮಾಜಿಕ ಆಯಾಮದ ಬಗ್ಗೆ ಹೇಳುತ್ತವೆ ಹಾಗೂ ತನ್ನ ದೇಹದೊಂದಿಗೆ ಇರುವ ಅಸಂತುಷ್ಟತೆಯ ದೈಹಿಕ ಆಯಾಮದ ಬಗ್ಗೆ ಹೇಳುವುದಿಲ್ಲ. ಅದಕ್ಕಿರುವ ಒಂದು ಕಾರಣವೆಂದರೆ, ಸಾಮಾಜಿಕ ಅಸಂತುಷ್ಟತೆ ಸುಲಭವಾಗಿ ಗೋಚರಿಸುತ್ತವೆ ಆದರೆ ದೈಹಿಕ ಅಂಶ ಯಾವಾಗಲೂ ಖಾಸಗಿಯಾಗಿರುತ್ತದೆ. ಹಾಗೂ ಅನೇಕ ಟ್ರಾನ್ಸ್‍ಜೆಂಡರ್ ಮಕ್ಕಳು ತಮ್ಮ ದೇಹದೊಂದಿಗೆ ಅತ್ಯಂತ ತೀವ್ರವಾದ ಮುಜುಗರವನ್ನು ಬೆಳೆಸಿಕೊಂಡಿರುತ್ತಾರೆ. ಅನೇಕ ಟ್ರಾನ್ಸ್‍ಜೆಂಡರ್ ಮಕ್ಕಳು ಆತ್ಮಹತ್ಯೆಗೂ ಪ್ರಯತ್ನಿಸುತ್ತಾರೆ. ಆದರೂ ಆ ಮಕ್ಕಳ ಪೋಷಕರಿಗೆ ಮಕ್ಕಳು ತಮ್ಮ ಭಾವನೆಗಳನ್ನು ಅವರೊಂದಿಗೆ ಏಕೆ ಹಂಚಿಕೊಳ್ಳುವುದಿಲ್ಲ ಎಂದು ಅರ್ಥವಾಗುವುದಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...