Homeಮುಖಪುಟರಾಮದಾಸ್‌ v/s ಪ್ರತಾಪ್‌ಸಿಂಹ ಒಳಜಗಳದಲ್ಲಿ ‘ಗುಂಬಜ್‌’ ವಿವಾದ ಹುಟ್ಟಿತೇ?

ರಾಮದಾಸ್‌ v/s ಪ್ರತಾಪ್‌ಸಿಂಹ ಒಳಜಗಳದಲ್ಲಿ ‘ಗುಂಬಜ್‌’ ವಿವಾದ ಹುಟ್ಟಿತೇ?

“ಮೈಸೂರಿನ ಬಿಜೆಪಿ ಮುಖಂಡರ ನಡುವಿನ ಒಳಸಮರ ಗುಂಬಜ್‌ ಮಾದರಿ ಬಸ್‌ ನಿಲ್ದಾಣದ ನೆಪದಲ್ಲಿ ಮತ್ತೆ ಸ್ಫೋಟಗೊಂಡಿದೆ”

- Advertisement -
- Advertisement -

ಮೈಸೂರು ನಗರದ ಊಟಿ‌ ರಸ್ತೆಯ‌ ಜೆಎಸ್ಎಸ್ ಕಾಲೇಜು ಬಳಿ ನಿರ್ಮಿಸಿರುವ ಬಸ್ ನಿಲ್ದಾಣದ ಮೇಲಿನ ಗುಮ್ಮಟ(ಗುಂಬಜ್)ದ ಮಾದರಿಯ ವಿನ್ಯಾಸವನ್ನು ಕೆಡವುತ್ತೇನೆ ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್‌ ಸಿಂಹ ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ರಂಗಾಯಣದಲ್ಲಿ ಭಾನುವಾರ ನಡೆದ ‘ಟಿಪ್ಪು ನಿಜಕನಸುಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರತಾಪ್‌ ಸಿಂಹ, “ಗುತ್ತಿಗೆದಾರರೊಬ್ಬರು ಮಸೀದಿ ಗುಂಬಜ್‌ ಹೋಲುವ ಬಸ್‌ ನಿಲ್ದಾಣ ನಿರ್ಮಿಸಿದ್ದಾರೆ. ಇದನ್ನು ಬದಲಿಸಲು 3 ದಿನಗಳ ಗಡುವು ನೀಡಿದ್ದೇನೆ. ಬದಲಿಸದಿದ್ದರೆ, ಜೆಸಿಬಿ ತರಿಸಿ ಕೆಡವಿಸುತ್ತೇನೆ” ಎಂದಿದ್ದರು.

“ತದನಂತರ ರಾತ್ರೋರಾತ್ರಿ ಗುಮ್ಮಟದ ವಿನ್ಯಾಸದ ಮೇಲೆ ಕಳಶಗಳನ್ನು ಜೋಡಿಸಿ, ಹಿಂದೂ ಧಾರ್ಮಿಕತೆ ಪ್ರದರ್ಶಿಸಲಾಗಿದೆ. ತಂಗುದಾಣದ ಒಳಗೆ ಅರಮನೆ ಚಿತ್ರ, ಶಾಸಕ ಎಸ್‌.ಎ.ರಾಮದಾಸ್ ಹಾಗೂ ಚಾಮುಂಡೇಶ್ವರಿ ದೇವಸ್ಥಾನದ ಫೋಟೋಗಳನ್ನು ಹಾಕಲಾಗಿದೆ” ಎಂದು ಮಾಧ್ಯಮಗಳು ವರದಿ ಮಾಡಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಇದು ಗುಂಬಜ್‌ ಮಾದರಿಯ ಕಟ್ಟಡವಲ್ಲ, ಅರಮನೆ ಶೈಲಿಯ ಕಟ್ಟಡ” ಎಂಬ ಸಮರ್ಥನೆಗಳನ್ನು ರಾಮದಾಸ್ ಬೆಂಬಲಿಗರು ನೀಡುತ್ತಿದ್ದಾರೆ. “ಬಸ್ ನಿಲ್ದಾಣದ ಮೇಲ್ಭಾಗದಲ್ಲಿ ನಿರ್ಮಿಸಿರುವುದು ಅರಮನೆಯ ಮಾದರಿಯ ಗೋಪುರವೇ ಹೊರತು, ಗುಂಬಜ್ ಅಲ್ಲ‌. ಶಾಸಕರೇ ಮುತುವರ್ಜಿ ವಹಿಸಿ ಈ ಮಾದರಿ ನಿರ್ಮಾಣಕ್ಕೆ ಕ್ರಮ ವಹಿಸಿದ್ದಾರೆ” ಎಂದು ಬಸ್‌ ನಿಲ್ದಾಣ ನಿರ್ಮಿಸಿದ ಕೆಆರ್‌ಡಿಎಲ್‌ ಎಂಜಿನಿಯರ್ ತಿಪ್ಪಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

“ಶಾಸಕರ ಅನುದಾನದಲ್ಲಿ ₹10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮೂಲ ವಿನ್ಯಾಸದಲ್ಲಿ ಚಾವಣಿಯ ಮೇಲೆ ಯಾವುದೇ ಆಕೃತಿ ರಚಿಸುವ ಯೋಜನೆ ಇರಲಿಲ್ಲ. ಶಾಸಕರು ಪರಿಚಿತ ಗುತ್ತಿಗೆದಾರರಿಂದ ಅರಮನೆಯಂತೆ ಗೋಪುರ ನಿರ್ಮಿಸಿದ್ದಾರೆ. ಇದಕ್ಕೂ‌ ನಮಗೂ ಸಂಬಂಧವಿಲ್ಲ” ಎಂದಿದ್ದಾರೆ.

ಅಕ್ಟೋಬರ್‌ನಲ್ಲಿ ನಿಲ್ದಾಣದ ಕಾಮಗಾರಿ ಮುಗಿದಿದ್ದು, ಇನ್ನೂ ಅಧಿಕೃತವಾಗಿ ಉದ್ಘಾಟನೆಯಾಗಿಲ್ಲ. ಆದರೆ ಈ ವಿವಾದದ ಸುತ್ತ ಬೇರೆಯೇ ರಾಜಕೀಯ ಕೆಲಸ ಮಾಡುತ್ತಿದೆ. ಮೈಸೂರು ಭಾಗದ ಬಿಜೆಪಿಯೊಳಗಿನ ನಾಯಕತ್ವ ಸಮರವೇ ಈ ವಿವಾದದ ಕೇಂದ್ರಬಿಂದು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

“ಈ ಪ್ರಕರಣವನ್ನು ಮೇಲುನೋಟಕ್ಕೆ ನೋಡಿದರೆ- ಹಿಂದೂ ಮುಸ್ಲಿಂ ಕೇಂದ್ರಿತ ರಾಜಕಾರಣವಾಗಿ ಕಾಣುತ್ತದೆ. ಅದಕ್ಕಿಂತ ಮುಖ್ಯವಾಗಿ ಮಾಜಿ ಸಚಿವ, ಹಾಲಿ ಶಾಸಕ ಎಸ್.ಎ.ರಾಮದಾಸ್‌ ಮತ್ತು ಸಂಸದ ಪ್ರತಾಪಸಿಂಹ ನಡುವಿನ ಜಟಾಪಟಿಯೇ ಈ ವಿವಾದಕ್ಕೆ ಕಾರಣ” ಎನ್ನುತ್ತಾರೆ ಸ್ಥಳೀಯರು.

ಈ ಇಬ್ಬರ ನಡುವೆ ಮೈಸೂರು ಭಾಗದಲ್ಲಿ ಆಗಾಗ್ಗೆ ವೈಮಸ್ಸುಗಳು ತಲೆದೋರಿವೆ. ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ, ಈ ಭಾಗದಲ್ಲಿ ಬಿಜೆಪಿಯೊಳಗೆ ನಿರಂತರ ಸಮರ ನಡೆಯುತ್ತಿದೆ.

ಪ್ರತಾಪ್‌ಸಿಂಹ ಹಾಗೂ ರಾಮದಾಸ್ ನಡುವಿನ ಜಟಾಪಟಿ ಇತಿಹಾಸವು ಸುಯೇಜ್ ಫಾರಂ ವಿವಾದದಲ್ಲಿ ಸ್ಫೋಟಗೊಳ್ಳುತ್ತದೆ. ಎರಡು ವರ್ಷಗಳ ಹಿಂದೆ ಸೂಯೇಜ್‌ ಫಾರಂ ವಿಚಾರಕ್ಕೆ ಪ್ರತಾಪ್ ಸಿಂಹ ಕೈಹಾಕಿದ್ದಕ್ಕೆ ರಾಮದಾಸ್ ಸಿಡಿಮಿಡಿಗೊಂಡಿದ್ದರು. ತನ್ನ ಕ್ಷೇತ್ರದ ವಿಚಾರದಲ್ಲಿ ಸಂಸದರು ತಲೆಹಾಕುತ್ತಿರುವುದು ಶಾಸಕರಿಗೆ ಇರಸುಮುರುಸು ಉಂಟು ಮಾಡಿತು.

ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜು ಅಧ್ಯಕ್ಷತೆಯಲ್ಲಿ 2020ರ ಮೇನಲ್ಲಿ ನಡೆದಿದ್ದ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಸಭೆಯಲ್ಲಿ ಸಂಸದ ಮತ್ತು ಶಾಸಕರ ನಡುವಿನ ಭಿನ್ನಮತ ಸ್ಫೋಟಗೊಂಡಿತ್ತು. ಸಚಿವ ಎಸ್.ಟಿ.ಸೋಮಶೇಖರ್ ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು.

“ಸುಯೇಜ್‌ ಫಾರಂ ಕಸ ವಿಲೇವಾರಿ ಸಂಬಂಧ ವರ್ಕ್ ಆರ್ಡರ್‌ ನೀಡಲಾಗಿದೆ” ಎಂದು ಪ್ರತಾಪ ಸಿಂಹ ಹೇಳಿದರೆ, “ಈ ಬಗ್ಗೆ ತಮಗೇನೂ ಮಾಹಿತಿಯೇ ಇಲ್ಲ” ಎಂದು ರಾಮದಾಸ್‌ ಅಸಮಾಧಾನ ವ್ಯಕ್ತಪಡಿಸಿದ್ದರು.

“ಈ ಯೋಜನೆ ನನ್ನ ಗಮನಕ್ಕೂ ಬಂದಿಲ್ಲ. ಆದರೂ ಸಭೆ ನಡೆಸಿ ನಿರ್ಣಯ ಕೈಗೊಂಡಿದ್ದಾರೆ. ಕತ್ತಲಿನಲ್ಲಿ ಕೆಲಸ ಮಾಡುವಂತೆ ಮಾಡಿದ್ದಾರೆ. ನಾಗ್ಪುರ ಮಾದರಿಯಲ್ಲಿಯೇ ಕಸ ವಿಂಗಡಣೆ ಮಾಡಿ. ಆದರೆ ಸುಯೇಜ್ ಫಾರಂನಲ್ಲಿ ಮಾಡುವುದಕ್ಕಿಂತ ರಾಯನಕೆರೆಯಲ್ಲಿ ನಿಗದಿಪಡಿಸಿರುವ 110 ಎಕರೆ ಪ್ರದೇಶದಲ್ಲಿ ಮಾಡಬೇಕು” ಎಂದು ಆಗ್ರಹಿಸಿದ್ದರು.

“ಸುಯೇಜ್ ಫಾರಂನಲ್ಲಿ 5 ಘಟಕಗಳನ್ನು ಸ್ಥಾಪಿಸಿ, 15 ಯಂತ್ರಗಳಿಂದ ಗೊಬ್ಬರ ತಯಾರಿಕೆ ಯೋಜನೆ ಮಾಡುವುದಕ್ಕೆ ನನ್ನ ವಿರೋಧವಿದೆ. ಇದಕ್ಕೆ ರೂಪುರೇಷೆಗಳನ್ನು ರಚಿಸಿ. ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮುಂದಿನ ನಿರ್ಧಾರ ಕೈಗೊಳ್ಳಬೇಕು. 25 ವರ್ಷದಿಂದ ಇಲ್ಲಿನ ಸಾರ್ವಜನಿಕರು ಅನಾರೋಗ್ಯಕ್ಕೊಳಗಾಗಿದ್ದಾರೆ. ಇದನ್ನು ಮೊದಲು ಕೊನೆಗಾಣಿಸಿ. ಸಂಸದ ಪ್ರತಾಪ್ ಸಿಂಹ ಅವರಿಗೂ ನನಗೂ ಯಾವುದೇ ವೈಯಕ್ತಿಕ ದ್ವೇಷ, ಭಿನ್ನಾಭಿಪ್ರಾಯ ಇಲ್ಲ. ಅವರು ರಾಷ್ಟ್ರೀಯ ನಾಯಕರು. ನಾನು ಸ್ಥಳೀಯ ಕಾರ್ಯಕರ್ತ. 25 ವರ್ಷದಿಂದ ಮೈಸೂರು ಜಿಲ್ಲೆಯಲ್ಲಿ ಯಾವುದೇ ಉಸ್ತುವಾರಿ ಸಚಿವರು ಏನೂ ಮಾಡಿಲ್ಲ ಎಂದು ಹೇಳಿದ್ದಾರೆ. ಅವರ ದೂರದೃಷ್ಟಿತ್ವದ ಬಗ್ಗೆ ನಾನು ಹೇಳುತ್ತಿದ್ದೇನೆ ಅಷ್ಟೇ” ಎಂದು ರಾಮದಾಸ್ ತಿರುಗೇಟು ನೀಡಿದ್ದರು.

ramdas tweet

ಕೆಲವು ತಿಂಗಳ ಹಿಂದೆ ಇಬ್ಬರ ನಡುವೆ ಪೈಪೋಟಿ ಮತ್ತೆ ಮುನ್ನೆಲೆಗೆ ಬಂದಿತು. ನಗರದಲ್ಲಿ ರಸ್ತೆಗಳನ್ನು ಅಗೆದು ಗ್ಯಾಸ್ ಪೈಪ್‌ಲೈನ್‌ಗಳನ್ನು ಹಾಕುವ ಯೋಜನೆಯನ್ನು ರಾಮದಾಸ್‌ ಕೆಲವು ತಿಂಗಳ ಹಿಂದಷ್ಟೇ ವಿರೋಧಿಸಿದ್ದರು. ಇದಕ್ಕೆ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್‌.ನಾಗೇಂದ್ರ ಅವರೂ ರಾಮದಾಸ್‌ ನಿಲುವನ್ನು ಬೆಂಬಲಿಸಿದ್ದರು.

ರಸ್ತೆಯನ್ನು ಅಗೆಯುವ ಯೋಜನೆಯನ್ನು ಬೆಂಬಲಿಸಬಾರದು ಎಂದು ಮೈಸೂರು ಪಾಲಿಕೆಗೆ ರಾಮದಾಸ್ ಕೋರಿದ್ದರು. ಅದಕ್ಕೆ ಪ್ರತಾಪ್‌ ಸಿಂಹ ಪ್ರತಿಕ್ರಿಯಿಸಿ, “ಗ್ಯಾಸ್ ಪೈಪ್‌ಲೈನ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲವಿದೆ” ಎಂದಿದ್ದರು. ಈ ಭಿನ್ನಮತವು ಯೋಗ ದಿನಾಚರಣೆಯ ಹೊಸ್ತಿಲಲ್ಲೂ ತಲೆದೋರಿತ್ತು.

ಪ್ರಧಾನಿ ಮೋದಿಯವರು ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಬರಲಿದ್ದರು. ಇದರಲ್ಲಿ ಮೈಲೇಜ್‌ ಪಡೆಯುವುದಕ್ಕಾಗಿ ಸಂಸದರು, ಶಾಸಕರು ಪ್ರಯತ್ನಿಸಿದ್ದರು. ಎಷ್ಟು ಜನರನ್ನು ಕಾರ್ಯಕ್ರಮಕ್ಕೆ ಸೇರಿಸಲಾಗುತ್ತದೆ ಎಂಬ ವಿಚಾರವಾಗಿಯೂ ಮಾಧ್ಯಮಗಳೆದುರು ಈ ಇಬ್ಬರು ಬಿಜೆಪಿಗರು ಕಿತಾಪತಿ ಮಾಡಿಕೊಂಡಿದ್ದರು.

ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ ಪ್ರತಾಪ್‌ ಸಿಂಹ, “ಮೈಸೂರು ಅರಮನೆ ಮೈದಾನದಲ್ಲಿ ಒಬ್ಬರು ಯೋಗ ಮಾಡಬೇಕಾದರೆ 6*6 ಜಾಗಬೇಕಾಗುತ್ತದೆ. ಅದರನ್ವಯ ಅರಮನೆ ಮೈದಾನದಲ್ಲಿ ಏಳರಿಂದ ಎಂಟು ಸಾವಿರ ಜನ ಸೇರಬಹುದು” ಎಂದು ಹೇಳಿದ್ದರು. ಸಂಸದರು ಮಾತನಾಡುತ್ತಿರುವಾಗಲೇ ರಾಮದಾಸ್‌ ಮಾತಿಗೆ ಮುಂದಾಗಿ, “ಹದಿನೈದು ಸಾವಿರ ಜನ ಈಗಾಗಲೇ ಆರ್ಡರ್‌ ಮಾಡಿದ್ದಾರೆ” ಎಂದಿದ್ದರು. ಅದಕ್ಕೆ ಪ್ರತಾಪ್‌, “ನಾನು ಮಾತನಾಡುತ್ತಿದ್ದೇನೆ. ರಾಮದಾಸ್ ಅವರು ಸಮಾಧಾನದಿಂದ ಇರಬೇಕು” ಎಂದಿದ್ದು ವಿಡಿಯೊದಲ್ಲಿ ರೆಕಾರ್ಡ್ ಆಗಿತ್ತು. ನಂತರ ಪ್ರತಿಕ್ರಿಯಿಸಿದ್ದ ರಾಮದಾಸ್‌, “ಸಂಸದರಿಗೆ ಮಾಹಿತಿ ಇರಲಿಲ್ಲ. ಅದಕ್ಕಾಗಿ ಮಾತನಾಡಿದೆ. ಈಗಾಗಲೇ ನಮಗೆ ಕ್ಲಿಯರೆನ್ಸ್ ಮಾಡಿಕೊಟ್ಟಿರುವುದು ಸಂಸದರಿಗೆ ಗೊತ್ತಿರಲಿಲ್ಲ. ನಿಮಗೆ ಗೊಂದಲವಾಗಬಾರದು ಎಂದು ಮಾತಿನ ಮಧ್ಯೆ ಸ್ಪಷ್ಟನೆ ನೀಡಿದೆ” ಎಂದು ಸಮರ್ಥಿಸಿದ್ದರು.

ಇದನ್ನೂ ಓದಿರಿ: ತಿರುಚಿದ ಟಿಪ್ಪು ಇತಿಹಾಸವನ್ನು ‘ಫ್ಯಾಕ್ಟ್‌ಚೆಕ್’ ಮಾಡುವ ಕೃತಿ ’ಟಿಪ್ಪು ಸುಲ್ತಾನ- ಹಿಂದೂ, ಕ್ರೈಸ್ತ ವಿರೋಧಿಯೇ?’

ಈಗ ‘ಗುಂಬಜ್‌’ ವಿವಾದ…

ರಾಮದಾಸ್ ಕ್ಷೇತ್ರದಲ್ಲಿನ ಬಸ್ ನಿಲ್ದಾಣದ ಕುರಿತು ಪ್ರತಾಪ್ ಸಿಂಹ ಬೇಕಂತಲೇ ಕಿತಾಪತಿ ಮಾಡಿದ್ದಾರೆಂದು ಸ್ಥಳೀಯ ಮೂಲಗಳು ಹೇಳುತ್ತವೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಸ್ಥಳೀಯ ಪತ್ರಕರ್ತರೊಬ್ಬರು, “ಮೈಸೂರನ್ನು ಯಾರು ಹಿಡಿತದಲ್ಲಿ ಇಟ್ಟುಕೊಳ್ಳಬೇಕೆಂಬ ಪೈಪೋಟಿಯ ಭಾಗವೇ ಈ ಗುಂಬಜ್‌ ವಿವಾದ. ಕಾಮಗಾರಿ ಮುಗಿಯುವ ಹಂತದಲ್ಲಿದೆ. ಅಷ್ಟರಲ್ಲಿಯೇ ಈ ಜಟಾಪಟಿ ನಡೆಸಿದ್ದಾರೆ. ಕಾಮಗಾರಿ ಮಾಡುತ್ತಿರುವುದು ಸರ್ಕಾರಿ ಹಣದಲ್ಲಿ, ರೂಪುರೇಷೆ ಮಾಡಿದ್ದು ಬಿಜೆಪಿ ಎಂಎಲ್‌ಎ ರಾಮದಾಸ್. ಅವರದ್ದೇ ಸರ್ಕಾರದ ಶಾಸಕರು ಕಟ್ಟಿಸಿದ್ದನ್ನು ಒಡೆದು ಹಾಕುವುದಾಗಿ ಪ್ರತಾಪ್‌ ಹೇಳುತ್ತಿದ್ದಾರೆ” ಎಂದು ವಿವರಿಸಿದರು.

“ಮೈಸೂರು ಅರಮನೆ ಮೇಲೆ ಗೊಮ್ಮಟಗಳಿವೆ. ಕಾರಂಜಿ ಮಹಲ್‌, ಜಗನ್ಮೋಹನ ಪಾಲೇಸ್‌, ಲಲಿತ ಮಹಲ್‌, ಮೈಸೂರು ಜಿಲ್ಲಾಧಿಕಾರಿ ಕಚೇರಿ, ಮಹಾನಗರ ಪಾಲಿಕೆ ಕಚೇರಿಗಳಲ್ಲಿ ಗುಂಬಜ್‌ಗಳಿವೆ. ಆ ಎಲ್ಲವೂ ಮಸೀದಿ ರೀತಿ ಕಾಣುವುದಾದರೆ, ಪ್ರತಾಪ್‌ಸಿಂಹ ಅಲ್ಲಿಗೆ ಕಾಲಿಡುವುದಿಲ್ಲವೇ? ಅವುಗಳನ್ನು ಒಡೆದು ಹಾಕುತ್ತಾರೆಯೇ?” ಎಂದು ಮುಖಂಡರೊಬ್ಬರು ಪ್ರಶ್ನಿಸಿದರು.

“ಪ್ರತಾಪ್‌ ಸಿಂಹ ಅವರಿಗೆ ಟಿಕೆಟ್ ತಪ್ಪಿಸಬೇಕೆಂದು ರಾಮದಾಸ್‌ ಪ್ರಯತ್ನಪಡುತ್ತಿದ್ದರೆ, ರಾಮದಾಸ್‌ಗೆ ಟಿಕೆಟ್ ತಪ್ಪಿಸಬೇಕೆಂದು ಪ್ರತಾಪ್‌ಸಿಂಹ ಯತ್ನಿಸುತ್ತಿದ್ದಾರೆ” ಎಂದು ಸ್ಥಳೀಯ ಪತ್ರಕರ್ತರು ಮಾತಾಡಿಕೊಳ್ಳುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಯಾರೋ ಫಿಟ್ಟಿಂಗ್ ಇಟ್ಟಿರ್ಬೇಕು, ಕೋಮುಗಲಭೆ ಸ್ಟಾರ್ಟ್ ಆಗ್ಲಿ ಅಂತ ಆದರೆ ಇವರಿಗೆ ಸ್ವಂತಿಕೆ ಬುದ್ಧಿಯೇ ಇಲ್ಲ ಎಂಬಂತೆ ಕಾಣುತ್ತಿದೆ ಆದರೆ ಈ ಕೊಳಕು ಕೋಮುವಾದ ಇಷ್ಟೊಂದು ರೀತಿಯಲ್ಲಿ ಕಿಚ್ಚು ಮನಸ್ಸಿಂದ ಕಕ್ಕಬಾರದು ರಾಜಕೀಯದವರಿಗೆ ಯಾವಾಗಲೂ ಪ್ರಾಮಾಣಿಕತೆ ಸಹನೆ ಸಹಬಾಳುವೆ ಪ್ರೀತಿ ಮನೋಭಾವ ಇರಬೇಕು ……ಸ್ಥಳದಲ್ಲಿ ಜಡ್ಜ್ಮೆಂಟ್ ಕೊಡುವಂತಹ ನಾಯ ಕತ್ವ ಇರಬೇಕು

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...