Homeಅಂತರಾಷ್ಟ್ರೀಯ7 ವರ್ಷಗಳಲ್ಲಿ ಭಾರತ ದುಪ್ಪಟ್ಟು ಭೂಪ್ರದೇಶವನ್ನು ಕಳೆದುಕೊಂಡಿತೇ?

7 ವರ್ಷಗಳಲ್ಲಿ ಭಾರತ ದುಪ್ಪಟ್ಟು ಭೂಪ್ರದೇಶವನ್ನು ಕಳೆದುಕೊಂಡಿತೇ?

- Advertisement -
- Advertisement -

ದಿನ ಬೆಳಗಾದರೆ ನಮ್ಮ ಕನ್ನಡ ಟಿ.ವಿ. ಚಾನೆಲ್‌ಗಳು ನರೇಂದ್ರ ಮೋದಿಯ ಗುಣಗಾನ ಮಾಡುತ್ತ ಚೀನಾವನ್ನು ಬಗ್ಗು ಬಡಿಯುವ ಧೀರ, ಶೂರ ಎಂಬೆಲ್ಲ ಉಪಮೆಗಳನ್ನು ಬಳಸುತ್ತಿರುವ ಈ ಪ್ರಸ್ತುತ ಸಂದರ್ಭದಲ್ಲಿ ಜೂನ್ 21ರ The Week ನಿಯತ ಕಾಲಿಕೆಯ ಒಂದು ಲೇಖನ ಓದುಗರನ್ನು ಬೆಚ್ಚಿಬೀಳುಸುತ್ತಿದೆ. ಗಾಲ್ವಾನ್ ನದಿ ಕಣಿವೆ ಮತ್ತು ಪಾನ್‌ಗಾಂಗ್ ಸರೋವರದ ಪ್ರದೇಶದೊಳಗಡೆಗೆ ಚೀನಾದ PLA (People Libration Army) ನುಗ್ಗಿ ಭಾರತದ ಸುಮಾರು 60 ಚ.ಕಿ.ಮೀ. ಪ್ರದೇಶ ಆಕ್ರಮಿಸಿಕೊಂಡಿದೆ ಎಂದು ಮಾಜಿ ಲೆಫ್ಟಿನೆಂಟ್ ಜನರಲ್ ಹೆಚ್.ಎಸ್. ಪನಾಗ್ ಹೇಳಿರುವರು. ಅಂತೆಯೇ ಮಾಜಿ ವಿದೇಶಾಂಗ ಕಾರ್‍ಯದರ್ಶಿ ಶ್ಯಾಮ್‌ಸರಣ್ ಹೇಳಿಕೆಯಂತೆ 2013ರ ವೇಳೆಗೆ ಭಾರತ, ಚೀನಾಕ್ಕೆ ಕಳೆದುಕೊಂಡ ತನ್ನ ಭೂಪ್ರದೇಶ ಸುಮಾರು 640 ಚ.ಕಿ.ಮೀ. ಈಗಿದು 1300 ಚ.ಕಿ.ಮೀ.ನಷ್ಟಾಗಿದೆ ಎನ್ನುತ್ತಾರೆ ಶ್ಯಾಮ್‌ಸರಣ್.

ಇದು ಭಾರತ ಸರ್ಕಾರಕ್ಕೆ ಹಾಗೂ ಭಾರತೀಯ ಸೇನೆಗೆ ನಿಬ್ಬೆರಗುಗೊಳಿಸುವ ಸಂಗತಿ. ಉಪಗ್ರಹಗಳ ಮೂಲಕ ಭೂಚಿತ್ರಣದ ದೃಶ್ಯ ನಮ್ಮ ಬೆರಳ ತುದಿಯಲ್ಲೇ ಲಭ್ಯವಿರುವ ಸಂದರ್ಭದಲ್ಲಿ! ಹೀಗೇಕಾಯಿತು ಎಂಬುದೇ ನಿಗೂಢ. ಕನ್ನಡ ಟಿ.ವಿ. ಮಾಧ್ಯಮಗಳ ಬಹು ಆಪ್ತಮಿತ್ರ ನಮ್ಮ ನರೇಂದ್ರ ಮೋದಿಯವರು 2019 ಅಕ್ಟೋಬರ್ 11,12ರಂದು ಚೀನಾದ ಅಧ್ಯಕ್ಷರನ್ನು ತಮಿಳುನಾಡಿನ ಮಮ್ಮಲಪುರಂಗೆ ಆಹ್ವಾನಿಸಿ ಬಹುಪಚಾರದ ಮಾತುಕತೆ ಆಡಿದ ಸಂದರ್ಭದಲ್ಲಿ ಆತ ಭಾರತ ಸದರಿ ಕಣಿವೆಯಲ್ಲಿ ಕೈಗೊಂಡಿದ್ದ ಮೂಲಭೂತ ವ್ಯವಸ್ಥೆಗಳ ಬಗ್ಗೆ ಆಕ್ಷೇಪಣೆ ಎತ್ತಿದ್ದು, ಓದುಗರಿಗೆ ನೆನಪಿರಬಹುದು. ಸಿಯಾಚಿನ್ ನಿರ್ಗಲ್ಲು ತಲುಪಲು ಸೇನಾ ಸರಬರಾಜಿಗೆ ಅನುಕೂಲವಾಗಲೆಂದು ಭಾರತ, ದೌಲತ್ ಬೇಗ್ ಓಲ್ಡಿ ಮತ್ತು ದುರ್ಬುಕ್‌ಗಳಲ್ಲಿ ರಸ್ತೆ ನಿರ್ಮಾಣ ಹಾಗೂ ಶೈಯೋಕ್ ನದಿಗೆ ಸೇತುವೆ ನಿರ್ಮಿಸಿದ್ದು ಚೀನಾದ ಕಣ್ಣು ಕುಕ್ಕಿಸಿತು.

ಈಗೇನು ಚೀನಾ ಬಂದಿಳಿದಿದೆಯೋ ಆ ಪ್ರದೇಶಕ್ಕೆ ಅವರಿಗಿಂತ ಮುಂಚೆ ಪೂರ್ವಭಾವಿಯಾಗಿ ಬೇಸಿಗೆ ಆರಂಭಕ್ಕೂ ಮುನ್ನ ಬೇಕಾದ ಮಿಲಿಟರಿ ಸಲಕರಣೆಗಳೊಂದಿಗೆ ಹೋಗಿ ತಲುಪಲು ಭಾರತಕ್ಕೆ ಆರು ತಿಂಗಳ ಕಾಲಾವಕಾಶ ಲಭ್ಯವಿತ್ತು. ಆದರೆ ಅದು ಆಯಿತೆ? ಚೀನಾದ ಆಕ್ರಮಣಕ್ಕೆ ಎದುರಾಡುವ ಸಾಮರ್ಥ್ಯ ಇಂಡಿಯಾಕ್ಕೆ…?

ಕೇವಲ ಸಹಿಸಿಕೊಂಡು ಹೋಗುವ ಚಿತ್ತವುಳ್ಳ ಭಾರತ ಸರ್ಕಾರ ರಾಜತಾಂತ್ರಿಕತೆಯನ್ನಷ್ಟೇ ನಂಬಿ ಕುಳಿತಿದೆ. ನಮ್ಮ ಸೇನೆಗೆ ಶತೃವಿನ ಮೇಲೆ ಆಕ್ರಮಣವೆಸಗುವ ಮನೋಭಾವವಾಗಲಿ, ಯುದ್ಧೋಪ ಸಾಧನಗಳಾಗಲಿ, ಸಹಿಷ್ಣುತೆಯಾಗಲಿ ಇಲ್ಲ. ಈ ಸ್ಥಿತಿ ಚೀನಿಯರಿಗೆ ವರದಾನವೆನಿಸಿದ್ದು ಅದು ನಿರ್ಧಯತೆಯಿಂದ ವಾಸ್ತವಿಕ ಗಡಿ ರೇಖೆಯನ್ನು ದಿನದಿಂದ ದಿನಕ್ಕೆ ಭಾರತದ ಒಳಕ್ಕೆ ತಳ್ಳುತ್ತ ಬಂದಿದೆ. ಚೀನಾದ ದುರಾಸೆಗೆ, ಅದರ ಹೊಸ ಹೊಸ ವಾಸ್ತವಿಕ ಗಡಿರೇಖೆಗೆ, ಭಾರತ ಆಸ್ಪದವೀಯ್ಯುತ್ತಿದೆ. ಇದು ಚೀನಾದ ರಾಜಕೀಯ ನೀತಿಯೂ ಹೌದು! ತಮ್ಮ ದುರ್ಬುದ್ಧಿ ಸಮರ್ಥಿಸಿಕೊಳ್ಳಲು ಚೀನಾ ಪ್ರತಿಸಲವು ಮಾತುಕತೆಯ ದಿನಾಂಕವನ್ನು ಮುಂದು ಮುಂದಕ್ಕೆ ತಳ್ಳುತ್ತಾ ಮತ್ತಷ್ಟು ಭಾರತ ಭೂಭಾಗಕ್ಕೆ ಬೇಲಿ ಹಾಕುತ್ತ ಬರುತ್ತಿದೆ. ಭಾರತವೂ ಈ ಹಗ್ಗ ಜಗ್ಗಾಟಕ್ಕೆ ಬಲಿಯಾಗುತ್ತಿದ್ದು ಪ್ರತಿ ಮಾತುಕತೆಯ ನಂತರ ‘ಭಾರತ-ಚೀನಾ ಗಡಿ ಮಾತುಕತೆ ಫಲಪ್ರದ’ವೆಂದು ಹೇಳುತ್ತ ತನ್ನ ನೂರಾರು ಚ.ಕಿ.ಮೀ. ಭೂಪ್ರದೇಶವನ್ನು ನಿಷ್ಕರುಣೆ ಚೀನಾಕ್ಕೆ ಬಿಟ್ಟುಕೊಡುತ್ತ ಬಂದಿದೆ. ಈ ವಂಚನೆಯನ್ನು ಆದಷ್ಟು ಬೇಗ ಪ್ರಸ್ತುತ ಮೋದಿ ಸರ್ಕಾರ ಅರ್ಥ ಮಾಡಿಕೊಂಡರೆ ಒಳಿತು. ಈಗಲಾದರೂ ಭಾರತ ಸಕಲ ಯುದ್ಧೋಪಕರಣಗಳನ್ನು ವಾಸ್ತವಿಕ ಗಡಿರೇಖೆಯಲ್ಲಿ ಶಾಶ್ವತವಾಗಿರುವಂತೆ ಸ್ಥಾಪಿಸಿ ಚೀನಾಕ್ಕೆ ಬುದ್ಧಿ ಕಲಿಸುವ ಸದಾವಕಾಶ ಎದುರಾಗಿದೆ.

-ಸೊಂದಲಗೆರೆ ಲಕ್ಷ್ಮೀಪತಿ

(ಲೇಖಕರು ಬರಹಗಾರರು. ಅಭಿಪ್ರಾಯಗಳು ವೈಯಕ್ತಿಕವಾದವುಗಳು)


ಇದನ್ನೂ ಓದಿ: ಮಾತುಕತೆ ನಂತರ ಚೀನೀ ಸೈನ್ಯದಿಂದ 4 ಅಧಿಕಾರಿಗಳು ಸೇರಿ 10 ಸೈನಿಕರ ಬಿಡುಗಡೆ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...