ಜೂನ್ 15 ರ ಹಿಂಸಾತ್ಮಕ ಘರ್ಷಣೆಯ ನಂತರ ವಶಕ್ಕೆ ತೆಗೆದುಕೊಂಡಿದ್ದ ನಾಲ್ವರು ಅಧಿಕಾರಿಗಳು ಸೇರಿದಂತೆ ಹತ್ತು ಭಾರತೀಯ ಸೈನಿಕರನ್ನು ಮಾತುಕತೆಯ ನಂತರ ಚೀನಾ ಸೇನೆಯು ಬಿಡುಗಡೆ ಮಾಡಿದೆ. ಸೈನ್ಯದ ಮೇಜರ್ ಜನರಲ್ ನೇತೃತ್ವದ ತಂಡವು ಗಾಲ್ವಾನ್ ಕಣಿವೆಯಲ್ಲಿ ಮೂರು ದಿನಗಳ ಮಾತುಕತೆಯ ನಂತರ ಈ ಬಿಡುಗಡೆ ಸಂಭವಿಸಿದೆ.
ಬಿಡುಗಡೆಯ ವಿವರಗಳ ಬಗ್ಗೆ ಸೇನೆಯು ಪ್ರತಿಕ್ರಿಯಿಸದಿದ್ದರೂ, ಚೀನೀಯರೊಂದಿಗಿನ ಘರ್ಷಣೆಯಲ್ಲಿ ಭಾಗಿಯಾಗಿರುವ ಎಲ್ಲ ಸೈನಿಕರನ್ನು ಈಗ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. “ಯಾವುದೇ ಭಾರತೀಯ ಪಡೆಗಳು ಕಾಣೆಯಾಗಿಲ್ಲ ಎಂದು” ಎಂದು ಸೇನೆಯು ಗುರುವಾರ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿತ್ತು.
ಘರ್ಷಣೆಯ ನಂತರ ಎಪ್ಪತ್ತಾರು ಭಾರತೀಯ ಸೈನಿಕರು ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದು, ಇವರೆಲ್ಲರೂ 15 ದಿನಗಳಲ್ಲಿ ಕರ್ತವ್ಯಕ್ಕೆ ಮರಳುವ ನಿರೀಕ್ಷೆಯಿದೆ ಎನ್ನಲಾಗಿದೆ.
ಉಪಗ್ರಹ ಚಿತ್ರಗಳು ಗಾಲ್ವಾನ್ ಕಣಿವೆಯಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಬದಿಯಲ್ಲಿ ಚೀನಾವು ಬೃಹತ್ ನಿರ್ಮಾಣ ಕಾಮಗಾರಿ ನಡೆಸುತ್ತಿದೆ. ನದಿ ಹರಿವನ್ನು ತಡೆಯುತ್ತಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಲಡಾಖ್ ಘರ್ಷಣೆ ಕುರಿತ ಸರ್ವಪಕ್ಷ ಸಭೆಗೆ AAP, RJDಗೆ ಆಹ್ವಾನವಿಲ್ಲ: ಹೊಸ ವಿವಾದ
ಎಂತಹಾ ದುರ್ಗತಿ ಬಂತು ನಮ್ಮ ಸೈನಿಕರಿಗೆ.