Homeಅಂತರಾಷ್ಟ್ರೀಯಕೆನಡಾದ ಸಾರ್ವತ್ರಿಕ ಚುನಾವಣೆಗೆ ಭಾರತದಿಂದ 'ಆಯ್ಧ ಅಭ್ಯರ್ಥಿಗಳಿಗೆ' ರಹಸ್ಯವಾಗಿ ಹಣಕಾಸಿನ ನೆರವು: ವರದಿ

ಕೆನಡಾದ ಸಾರ್ವತ್ರಿಕ ಚುನಾವಣೆಗೆ ಭಾರತದಿಂದ ‘ಆಯ್ಧ ಅಭ್ಯರ್ಥಿಗಳಿಗೆ’ ರಹಸ್ಯವಾಗಿ ಹಣಕಾಸಿನ ನೆರವು: ವರದಿ

- Advertisement -
- Advertisement -

2021ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಆಯ್ದ ಅಭ್ಯರ್ಥಿಗಳಿಗೆ ರಹಸ್ಯವಾಗಿ ಹಣಕಾಸಿನ ನೆರವು ನೀಡಲು ಭಾರತ ಸರ್ಕಾರವು ತನ್ನ ಪ್ರಾಕ್ಸಿ ಏಜೆಂಟ್‌ಗಳ ಮೂಲಕ ಪ್ರಯತ್ನಿಸಿರಬಹುದು ಎಂದು ಕೆನಡಾದಲ್ಲಿ ವಿದೇಶಿ ಹಸ್ತಕ್ಷೇಪದ ಕುರಿತು ತನಿಖೆ ನಡೆಸುತ್ತಿರುವ ಕೆನಡಾದ ವಿದೇಶಿ ಹಸ್ತಕ್ಷೇಪ ಆಯೋಗದ ವರದಿಯು ತಿಳಿಸಿದೆ.

ಕೆನಡಾದ ವಿದೇಶಿ ಹಸ್ತಕ್ಷೇಪ ಆಯೋಗದ ವರದಿಯು 2019 ಮತ್ತು 2021ರ ನಡುವೆ ಕೆನಡಾದಲ್ಲಿ ರಾಜಕೀಯ ಪ್ರಕ್ರಿಯೆಗಳಲ್ಲಿ ವಿದೇಶಿ ಹಸ್ತಕ್ಷೇಪದ ಘಟನೆಗಳನ್ನು ವಿವರಿಸುತ್ತದೆ. ವರದಿಯಲ್ಲಿ ಕೆನಡಾದ ರಾಜಕಾರಣಿಗಳು ಭಾರತದಿಂದ “ಅಕ್ರಮ ಆರ್ಥಿಕ ಬೆಂಬಲ” ವನ್ನು ಗೌಪ್ಯವಾಗಿ ಸ್ವೀಕರಿಸಿರುವ ಬಗ್ಗೆ ಉಲ್ಲೇಖಿತವಾಗಿದೆ.

ಸೆಕ್ಯೂರಿಟಿ ಆ್ಯಂಡ್ ಇಂಟೆಲಿಜನ್ಸ್ ಥ್ರೆಟ್ಸ್ ಟು ಎಲೆಕ್ಷನ್ಸ್ ಟಾಸ್ಕ್‌ಫೋರ್ಸ್ (ಎಸ್‌ಐಟಿಇ) ಚುನಾವಣೆಗೆ ಸಂಬಂಧಿಸಿದಂತೆ ಕೆಲವು ಕ್ಷೇತ್ರಗಳು ಮತ್ತು ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ವಿದೇಶಿ ಹಸ್ತಕ್ಷೇಪ ಚಟುವಟಿಕೆಗಳನ್ನು ಗಮನಿಸಿದೆ. ಇವುಗಳಲ್ಲಿ ಚೀನಾ ಹೆಚ್ಚು ಪಾಲು  ಹೊಂದಿದ್ದು, ಸ್ವಲ್ಪಮಟ್ಟಿಗೆ ಭಾರತ ಮತ್ತು ಪಾಕಿಸ್ತಾನದ ಕೈವಾಡ ಕಂಡು ಬಂದಿದೆ ಮತ್ತು ಇದನ್ನು ಏಜೆಂಟ್‌ಗಳ ಮೂಲಕ ನಡೆಸಲಾಗಿತ್ತು ಎಂದು ತಿಳಿಸಿದೆ. ಆದರೆ ಈ ಹಸ್ತಕ್ಷೇಪಗಳು ಕ್ರಿಮಿನಲ್ ತನಿಖೆಯನ್ನು ಅಗತ್ಯವಾಗಿಸುವ ಮಟ್ಟದಲ್ಲಿ ನಡೆದಿರಲಿಲ್ಲ ಎಂದು ವರದಿ ಹೇಳಿದೆ.

ತಿಂಗಳ ಕಾಲ ಈ ಕುರಿತು ತನಿಖೆ ನಡೆಸಲಾಗಿದ್ದು, 21 ದಿನಗಳ ವಿಚಾರಣೆಯ ಸಮಯದಲ್ಲಿ 60ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ಬಳಿಕ ‘ಫೆಡರಲ್ ಚುನಾವಣಾ ಪ್ರಕ್ರಿಯೆಗಳು ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ವಿದೇಶಿ ಹಸ್ತಕ್ಷೇಪದ ಸಾರ್ವಜನಿಕ ವಿಚಾರಣೆ’ ತನ್ನ ಆರಂಭಿಕ ವರದಿಯನ್ನು ಬಿಡುಗಡೆ ಮಾಡಿದೆ, ಇದು 2019 ಮತ್ತು 2021ರ ಚುನಾವಣೆಗಳಲ್ಲಿ ವಿದೇಶಿ ಹಸ್ತಕ್ಷೇಪವನ್ನು ಕೇಂದ್ರೀಕರಿಸಿ ತನಿಖೆಯನ್ನು ನಡೆಸಿ ವರದಿಯನ್ನು ಸಿದ್ದಪಡಿಸಿದೆ.

ಸಂಶೋಧನೆಯ ಪ್ರಕಾರ, ಕೆನಡಾದಲ್ಲಿ ದಕ್ಷಿಣ ಏಶ್ಯನ್ ಸಮುದಾಯಕ್ಕೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಕೆನಡಾದಲ್ಲಿ ಭಾರತವು ಹಿತಾಸಕ್ತಿಯನ್ನು ಹೊಂದಿದೆ. ಆ ದೇಶದಲ್ಲಿರುವ ಖಲಿಸ್ತಾನಿ ಬೆಂಬಲಿಗರ ವಿಷಯದಲ್ಲಿ ಕೆನಡಾದ ನಿಲುವನ್ನು ಭಾರತದ ಹಿತಾಸಕ್ತಿಗೆ ಅನುಗುಣವಾಗಿಸುವ ಉದ್ದೇಶವನ್ನು ಈ ಹಸ್ತಕ್ಷೇಪವು ಹೊಂದಿದೆ ಎಂದು ವರದಿಯು ಹೇಳಿದೆ. ದಕ್ಷಿಣ ಏಷ್ಯಾದ ಸಮುದಾಯದ ಕೆಲವು ಸದಸ್ಯರನ್ನು ಭಾರತ ಸರ್ಕಾರವು ಭಾರತ ವಿರೋಧಿ ಭಾವನೆಯನ್ನು ಪ್ರೋತ್ಸಾಹಿಸುತ್ತಿದೆ ಎಂದು ನೋಡುತ್ತದೆ. ಖಾಲಿಸ್ತಾನಿ ಪ್ರತ್ಯೇಕತಾವಾದದೊಂದಿಗೆ ಸೇರಿದವರನ್ನು ಭಾರತಕ್ಕೆ ಬೆದರಿಕೆ ಎಂದು ಭಾರತವು ನೋಡುತ್ತದೆ ಎಂದು ವರದಿ ಹೇಳಿದೆ.

ವರದಿಯ ಪ್ರಕಾರ, ಭಾರತವು ತನ್ನ ವಿದೇಶಿ ಹಸ್ತಕ್ಷೇಪದಿಂದ ಇಂಡೋ-ಕೆನಡಿಯನ್ ಸಮುದಾಯದ ಸದಸ್ಯರನ್ನು ಗುರಿಯಾಗಿಸುವ ಜೊತೆಗೆ ಇಂಡೋ-ಕೆನಡಿಯನ್ನರಲ್ಲದವರನ್ನು ಕೂಡ ಗುರಿಯಾಗಿಸುತ್ತದೆ. ಈ ಕ್ರಮಗಳು ಕೆನಡಾದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ನೇರವಾಗಿ ಪ್ರಭಾವ ಬೀರುವ ಉದ್ದೇಶವನ್ನು ಹೊಂದಿರದಿದ್ದರೂ, ಅವು ಆತಂಕಕಾರಿಯಾಗಿವೆ ಎಂದು ವರದಿ ಹೇಳಿದೆ.

ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ಮೂವರು ಭಾರತೀಯರಾದ ಕರಣ್‌ಪ್ರೀತ್ ಸಿಂಗ್, ಕಮಲ್‌ಪ್ರೀತ್ ಸಿಂಗ್ ಮತ್ತು ಕರಣ್ ಬ್ರಾರ್ ಅವರನ್ನು ಆಲ್ಬರ್ಟಾದ ಎಡ್ಮಂಟನ್‌ನಿಂದ ಬಂಧಿಸಿದ್ದಾರೆ. ಇದರ ಬೆನ್ನಲ್ಲಿ ಈ ಹಸ್ತಕ್ಷೇಪದ ವರದಿ ಹೊರ ಬಿದ್ದಿದೆ.

ಇದನ್ನು ಓದಿ: ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read