Homeಅಂತರಾಷ್ಟ್ರೀಯ7 ವರ್ಷಗಳಲ್ಲಿ ಭಾರತ ದುಪ್ಪಟ್ಟು ಭೂಪ್ರದೇಶವನ್ನು ಕಳೆದುಕೊಂಡಿತೇ?

7 ವರ್ಷಗಳಲ್ಲಿ ಭಾರತ ದುಪ್ಪಟ್ಟು ಭೂಪ್ರದೇಶವನ್ನು ಕಳೆದುಕೊಂಡಿತೇ?

- Advertisement -
- Advertisement -

ದಿನ ಬೆಳಗಾದರೆ ನಮ್ಮ ಕನ್ನಡ ಟಿ.ವಿ. ಚಾನೆಲ್‌ಗಳು ನರೇಂದ್ರ ಮೋದಿಯ ಗುಣಗಾನ ಮಾಡುತ್ತ ಚೀನಾವನ್ನು ಬಗ್ಗು ಬಡಿಯುವ ಧೀರ, ಶೂರ ಎಂಬೆಲ್ಲ ಉಪಮೆಗಳನ್ನು ಬಳಸುತ್ತಿರುವ ಈ ಪ್ರಸ್ತುತ ಸಂದರ್ಭದಲ್ಲಿ ಜೂನ್ 21ರ The Week ನಿಯತ ಕಾಲಿಕೆಯ ಒಂದು ಲೇಖನ ಓದುಗರನ್ನು ಬೆಚ್ಚಿಬೀಳುಸುತ್ತಿದೆ. ಗಾಲ್ವಾನ್ ನದಿ ಕಣಿವೆ ಮತ್ತು ಪಾನ್‌ಗಾಂಗ್ ಸರೋವರದ ಪ್ರದೇಶದೊಳಗಡೆಗೆ ಚೀನಾದ PLA (People Libration Army) ನುಗ್ಗಿ ಭಾರತದ ಸುಮಾರು 60 ಚ.ಕಿ.ಮೀ. ಪ್ರದೇಶ ಆಕ್ರಮಿಸಿಕೊಂಡಿದೆ ಎಂದು ಮಾಜಿ ಲೆಫ್ಟಿನೆಂಟ್ ಜನರಲ್ ಹೆಚ್.ಎಸ್. ಪನಾಗ್ ಹೇಳಿರುವರು. ಅಂತೆಯೇ ಮಾಜಿ ವಿದೇಶಾಂಗ ಕಾರ್‍ಯದರ್ಶಿ ಶ್ಯಾಮ್‌ಸರಣ್ ಹೇಳಿಕೆಯಂತೆ 2013ರ ವೇಳೆಗೆ ಭಾರತ, ಚೀನಾಕ್ಕೆ ಕಳೆದುಕೊಂಡ ತನ್ನ ಭೂಪ್ರದೇಶ ಸುಮಾರು 640 ಚ.ಕಿ.ಮೀ. ಈಗಿದು 1300 ಚ.ಕಿ.ಮೀ.ನಷ್ಟಾಗಿದೆ ಎನ್ನುತ್ತಾರೆ ಶ್ಯಾಮ್‌ಸರಣ್.

ಇದು ಭಾರತ ಸರ್ಕಾರಕ್ಕೆ ಹಾಗೂ ಭಾರತೀಯ ಸೇನೆಗೆ ನಿಬ್ಬೆರಗುಗೊಳಿಸುವ ಸಂಗತಿ. ಉಪಗ್ರಹಗಳ ಮೂಲಕ ಭೂಚಿತ್ರಣದ ದೃಶ್ಯ ನಮ್ಮ ಬೆರಳ ತುದಿಯಲ್ಲೇ ಲಭ್ಯವಿರುವ ಸಂದರ್ಭದಲ್ಲಿ! ಹೀಗೇಕಾಯಿತು ಎಂಬುದೇ ನಿಗೂಢ. ಕನ್ನಡ ಟಿ.ವಿ. ಮಾಧ್ಯಮಗಳ ಬಹು ಆಪ್ತಮಿತ್ರ ನಮ್ಮ ನರೇಂದ್ರ ಮೋದಿಯವರು 2019 ಅಕ್ಟೋಬರ್ 11,12ರಂದು ಚೀನಾದ ಅಧ್ಯಕ್ಷರನ್ನು ತಮಿಳುನಾಡಿನ ಮಮ್ಮಲಪುರಂಗೆ ಆಹ್ವಾನಿಸಿ ಬಹುಪಚಾರದ ಮಾತುಕತೆ ಆಡಿದ ಸಂದರ್ಭದಲ್ಲಿ ಆತ ಭಾರತ ಸದರಿ ಕಣಿವೆಯಲ್ಲಿ ಕೈಗೊಂಡಿದ್ದ ಮೂಲಭೂತ ವ್ಯವಸ್ಥೆಗಳ ಬಗ್ಗೆ ಆಕ್ಷೇಪಣೆ ಎತ್ತಿದ್ದು, ಓದುಗರಿಗೆ ನೆನಪಿರಬಹುದು. ಸಿಯಾಚಿನ್ ನಿರ್ಗಲ್ಲು ತಲುಪಲು ಸೇನಾ ಸರಬರಾಜಿಗೆ ಅನುಕೂಲವಾಗಲೆಂದು ಭಾರತ, ದೌಲತ್ ಬೇಗ್ ಓಲ್ಡಿ ಮತ್ತು ದುರ್ಬುಕ್‌ಗಳಲ್ಲಿ ರಸ್ತೆ ನಿರ್ಮಾಣ ಹಾಗೂ ಶೈಯೋಕ್ ನದಿಗೆ ಸೇತುವೆ ನಿರ್ಮಿಸಿದ್ದು ಚೀನಾದ ಕಣ್ಣು ಕುಕ್ಕಿಸಿತು.

ಈಗೇನು ಚೀನಾ ಬಂದಿಳಿದಿದೆಯೋ ಆ ಪ್ರದೇಶಕ್ಕೆ ಅವರಿಗಿಂತ ಮುಂಚೆ ಪೂರ್ವಭಾವಿಯಾಗಿ ಬೇಸಿಗೆ ಆರಂಭಕ್ಕೂ ಮುನ್ನ ಬೇಕಾದ ಮಿಲಿಟರಿ ಸಲಕರಣೆಗಳೊಂದಿಗೆ ಹೋಗಿ ತಲುಪಲು ಭಾರತಕ್ಕೆ ಆರು ತಿಂಗಳ ಕಾಲಾವಕಾಶ ಲಭ್ಯವಿತ್ತು. ಆದರೆ ಅದು ಆಯಿತೆ? ಚೀನಾದ ಆಕ್ರಮಣಕ್ಕೆ ಎದುರಾಡುವ ಸಾಮರ್ಥ್ಯ ಇಂಡಿಯಾಕ್ಕೆ…?

ಕೇವಲ ಸಹಿಸಿಕೊಂಡು ಹೋಗುವ ಚಿತ್ತವುಳ್ಳ ಭಾರತ ಸರ್ಕಾರ ರಾಜತಾಂತ್ರಿಕತೆಯನ್ನಷ್ಟೇ ನಂಬಿ ಕುಳಿತಿದೆ. ನಮ್ಮ ಸೇನೆಗೆ ಶತೃವಿನ ಮೇಲೆ ಆಕ್ರಮಣವೆಸಗುವ ಮನೋಭಾವವಾಗಲಿ, ಯುದ್ಧೋಪ ಸಾಧನಗಳಾಗಲಿ, ಸಹಿಷ್ಣುತೆಯಾಗಲಿ ಇಲ್ಲ. ಈ ಸ್ಥಿತಿ ಚೀನಿಯರಿಗೆ ವರದಾನವೆನಿಸಿದ್ದು ಅದು ನಿರ್ಧಯತೆಯಿಂದ ವಾಸ್ತವಿಕ ಗಡಿ ರೇಖೆಯನ್ನು ದಿನದಿಂದ ದಿನಕ್ಕೆ ಭಾರತದ ಒಳಕ್ಕೆ ತಳ್ಳುತ್ತ ಬಂದಿದೆ. ಚೀನಾದ ದುರಾಸೆಗೆ, ಅದರ ಹೊಸ ಹೊಸ ವಾಸ್ತವಿಕ ಗಡಿರೇಖೆಗೆ, ಭಾರತ ಆಸ್ಪದವೀಯ್ಯುತ್ತಿದೆ. ಇದು ಚೀನಾದ ರಾಜಕೀಯ ನೀತಿಯೂ ಹೌದು! ತಮ್ಮ ದುರ್ಬುದ್ಧಿ ಸಮರ್ಥಿಸಿಕೊಳ್ಳಲು ಚೀನಾ ಪ್ರತಿಸಲವು ಮಾತುಕತೆಯ ದಿನಾಂಕವನ್ನು ಮುಂದು ಮುಂದಕ್ಕೆ ತಳ್ಳುತ್ತಾ ಮತ್ತಷ್ಟು ಭಾರತ ಭೂಭಾಗಕ್ಕೆ ಬೇಲಿ ಹಾಕುತ್ತ ಬರುತ್ತಿದೆ. ಭಾರತವೂ ಈ ಹಗ್ಗ ಜಗ್ಗಾಟಕ್ಕೆ ಬಲಿಯಾಗುತ್ತಿದ್ದು ಪ್ರತಿ ಮಾತುಕತೆಯ ನಂತರ ‘ಭಾರತ-ಚೀನಾ ಗಡಿ ಮಾತುಕತೆ ಫಲಪ್ರದ’ವೆಂದು ಹೇಳುತ್ತ ತನ್ನ ನೂರಾರು ಚ.ಕಿ.ಮೀ. ಭೂಪ್ರದೇಶವನ್ನು ನಿಷ್ಕರುಣೆ ಚೀನಾಕ್ಕೆ ಬಿಟ್ಟುಕೊಡುತ್ತ ಬಂದಿದೆ. ಈ ವಂಚನೆಯನ್ನು ಆದಷ್ಟು ಬೇಗ ಪ್ರಸ್ತುತ ಮೋದಿ ಸರ್ಕಾರ ಅರ್ಥ ಮಾಡಿಕೊಂಡರೆ ಒಳಿತು. ಈಗಲಾದರೂ ಭಾರತ ಸಕಲ ಯುದ್ಧೋಪಕರಣಗಳನ್ನು ವಾಸ್ತವಿಕ ಗಡಿರೇಖೆಯಲ್ಲಿ ಶಾಶ್ವತವಾಗಿರುವಂತೆ ಸ್ಥಾಪಿಸಿ ಚೀನಾಕ್ಕೆ ಬುದ್ಧಿ ಕಲಿಸುವ ಸದಾವಕಾಶ ಎದುರಾಗಿದೆ.

-ಸೊಂದಲಗೆರೆ ಲಕ್ಷ್ಮೀಪತಿ

(ಲೇಖಕರು ಬರಹಗಾರರು. ಅಭಿಪ್ರಾಯಗಳು ವೈಯಕ್ತಿಕವಾದವುಗಳು)


ಇದನ್ನೂ ಓದಿ: ಮಾತುಕತೆ ನಂತರ ಚೀನೀ ಸೈನ್ಯದಿಂದ 4 ಅಧಿಕಾರಿಗಳು ಸೇರಿ 10 ಸೈನಿಕರ ಬಿಡುಗಡೆ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...