Homeಅಂತರಾಷ್ಟ್ರೀಯ7 ವರ್ಷಗಳಲ್ಲಿ ಭಾರತ ದುಪ್ಪಟ್ಟು ಭೂಪ್ರದೇಶವನ್ನು ಕಳೆದುಕೊಂಡಿತೇ?

7 ವರ್ಷಗಳಲ್ಲಿ ಭಾರತ ದುಪ್ಪಟ್ಟು ಭೂಪ್ರದೇಶವನ್ನು ಕಳೆದುಕೊಂಡಿತೇ?

- Advertisement -
- Advertisement -

ದಿನ ಬೆಳಗಾದರೆ ನಮ್ಮ ಕನ್ನಡ ಟಿ.ವಿ. ಚಾನೆಲ್‌ಗಳು ನರೇಂದ್ರ ಮೋದಿಯ ಗುಣಗಾನ ಮಾಡುತ್ತ ಚೀನಾವನ್ನು ಬಗ್ಗು ಬಡಿಯುವ ಧೀರ, ಶೂರ ಎಂಬೆಲ್ಲ ಉಪಮೆಗಳನ್ನು ಬಳಸುತ್ತಿರುವ ಈ ಪ್ರಸ್ತುತ ಸಂದರ್ಭದಲ್ಲಿ ಜೂನ್ 21ರ The Week ನಿಯತ ಕಾಲಿಕೆಯ ಒಂದು ಲೇಖನ ಓದುಗರನ್ನು ಬೆಚ್ಚಿಬೀಳುಸುತ್ತಿದೆ. ಗಾಲ್ವಾನ್ ನದಿ ಕಣಿವೆ ಮತ್ತು ಪಾನ್‌ಗಾಂಗ್ ಸರೋವರದ ಪ್ರದೇಶದೊಳಗಡೆಗೆ ಚೀನಾದ PLA (People Libration Army) ನುಗ್ಗಿ ಭಾರತದ ಸುಮಾರು 60 ಚ.ಕಿ.ಮೀ. ಪ್ರದೇಶ ಆಕ್ರಮಿಸಿಕೊಂಡಿದೆ ಎಂದು ಮಾಜಿ ಲೆಫ್ಟಿನೆಂಟ್ ಜನರಲ್ ಹೆಚ್.ಎಸ್. ಪನಾಗ್ ಹೇಳಿರುವರು. ಅಂತೆಯೇ ಮಾಜಿ ವಿದೇಶಾಂಗ ಕಾರ್‍ಯದರ್ಶಿ ಶ್ಯಾಮ್‌ಸರಣ್ ಹೇಳಿಕೆಯಂತೆ 2013ರ ವೇಳೆಗೆ ಭಾರತ, ಚೀನಾಕ್ಕೆ ಕಳೆದುಕೊಂಡ ತನ್ನ ಭೂಪ್ರದೇಶ ಸುಮಾರು 640 ಚ.ಕಿ.ಮೀ. ಈಗಿದು 1300 ಚ.ಕಿ.ಮೀ.ನಷ್ಟಾಗಿದೆ ಎನ್ನುತ್ತಾರೆ ಶ್ಯಾಮ್‌ಸರಣ್.

ಇದು ಭಾರತ ಸರ್ಕಾರಕ್ಕೆ ಹಾಗೂ ಭಾರತೀಯ ಸೇನೆಗೆ ನಿಬ್ಬೆರಗುಗೊಳಿಸುವ ಸಂಗತಿ. ಉಪಗ್ರಹಗಳ ಮೂಲಕ ಭೂಚಿತ್ರಣದ ದೃಶ್ಯ ನಮ್ಮ ಬೆರಳ ತುದಿಯಲ್ಲೇ ಲಭ್ಯವಿರುವ ಸಂದರ್ಭದಲ್ಲಿ! ಹೀಗೇಕಾಯಿತು ಎಂಬುದೇ ನಿಗೂಢ. ಕನ್ನಡ ಟಿ.ವಿ. ಮಾಧ್ಯಮಗಳ ಬಹು ಆಪ್ತಮಿತ್ರ ನಮ್ಮ ನರೇಂದ್ರ ಮೋದಿಯವರು 2019 ಅಕ್ಟೋಬರ್ 11,12ರಂದು ಚೀನಾದ ಅಧ್ಯಕ್ಷರನ್ನು ತಮಿಳುನಾಡಿನ ಮಮ್ಮಲಪುರಂಗೆ ಆಹ್ವಾನಿಸಿ ಬಹುಪಚಾರದ ಮಾತುಕತೆ ಆಡಿದ ಸಂದರ್ಭದಲ್ಲಿ ಆತ ಭಾರತ ಸದರಿ ಕಣಿವೆಯಲ್ಲಿ ಕೈಗೊಂಡಿದ್ದ ಮೂಲಭೂತ ವ್ಯವಸ್ಥೆಗಳ ಬಗ್ಗೆ ಆಕ್ಷೇಪಣೆ ಎತ್ತಿದ್ದು, ಓದುಗರಿಗೆ ನೆನಪಿರಬಹುದು. ಸಿಯಾಚಿನ್ ನಿರ್ಗಲ್ಲು ತಲುಪಲು ಸೇನಾ ಸರಬರಾಜಿಗೆ ಅನುಕೂಲವಾಗಲೆಂದು ಭಾರತ, ದೌಲತ್ ಬೇಗ್ ಓಲ್ಡಿ ಮತ್ತು ದುರ್ಬುಕ್‌ಗಳಲ್ಲಿ ರಸ್ತೆ ನಿರ್ಮಾಣ ಹಾಗೂ ಶೈಯೋಕ್ ನದಿಗೆ ಸೇತುವೆ ನಿರ್ಮಿಸಿದ್ದು ಚೀನಾದ ಕಣ್ಣು ಕುಕ್ಕಿಸಿತು.

ಈಗೇನು ಚೀನಾ ಬಂದಿಳಿದಿದೆಯೋ ಆ ಪ್ರದೇಶಕ್ಕೆ ಅವರಿಗಿಂತ ಮುಂಚೆ ಪೂರ್ವಭಾವಿಯಾಗಿ ಬೇಸಿಗೆ ಆರಂಭಕ್ಕೂ ಮುನ್ನ ಬೇಕಾದ ಮಿಲಿಟರಿ ಸಲಕರಣೆಗಳೊಂದಿಗೆ ಹೋಗಿ ತಲುಪಲು ಭಾರತಕ್ಕೆ ಆರು ತಿಂಗಳ ಕಾಲಾವಕಾಶ ಲಭ್ಯವಿತ್ತು. ಆದರೆ ಅದು ಆಯಿತೆ? ಚೀನಾದ ಆಕ್ರಮಣಕ್ಕೆ ಎದುರಾಡುವ ಸಾಮರ್ಥ್ಯ ಇಂಡಿಯಾಕ್ಕೆ…?

ಕೇವಲ ಸಹಿಸಿಕೊಂಡು ಹೋಗುವ ಚಿತ್ತವುಳ್ಳ ಭಾರತ ಸರ್ಕಾರ ರಾಜತಾಂತ್ರಿಕತೆಯನ್ನಷ್ಟೇ ನಂಬಿ ಕುಳಿತಿದೆ. ನಮ್ಮ ಸೇನೆಗೆ ಶತೃವಿನ ಮೇಲೆ ಆಕ್ರಮಣವೆಸಗುವ ಮನೋಭಾವವಾಗಲಿ, ಯುದ್ಧೋಪ ಸಾಧನಗಳಾಗಲಿ, ಸಹಿಷ್ಣುತೆಯಾಗಲಿ ಇಲ್ಲ. ಈ ಸ್ಥಿತಿ ಚೀನಿಯರಿಗೆ ವರದಾನವೆನಿಸಿದ್ದು ಅದು ನಿರ್ಧಯತೆಯಿಂದ ವಾಸ್ತವಿಕ ಗಡಿ ರೇಖೆಯನ್ನು ದಿನದಿಂದ ದಿನಕ್ಕೆ ಭಾರತದ ಒಳಕ್ಕೆ ತಳ್ಳುತ್ತ ಬಂದಿದೆ. ಚೀನಾದ ದುರಾಸೆಗೆ, ಅದರ ಹೊಸ ಹೊಸ ವಾಸ್ತವಿಕ ಗಡಿರೇಖೆಗೆ, ಭಾರತ ಆಸ್ಪದವೀಯ್ಯುತ್ತಿದೆ. ಇದು ಚೀನಾದ ರಾಜಕೀಯ ನೀತಿಯೂ ಹೌದು! ತಮ್ಮ ದುರ್ಬುದ್ಧಿ ಸಮರ್ಥಿಸಿಕೊಳ್ಳಲು ಚೀನಾ ಪ್ರತಿಸಲವು ಮಾತುಕತೆಯ ದಿನಾಂಕವನ್ನು ಮುಂದು ಮುಂದಕ್ಕೆ ತಳ್ಳುತ್ತಾ ಮತ್ತಷ್ಟು ಭಾರತ ಭೂಭಾಗಕ್ಕೆ ಬೇಲಿ ಹಾಕುತ್ತ ಬರುತ್ತಿದೆ. ಭಾರತವೂ ಈ ಹಗ್ಗ ಜಗ್ಗಾಟಕ್ಕೆ ಬಲಿಯಾಗುತ್ತಿದ್ದು ಪ್ರತಿ ಮಾತುಕತೆಯ ನಂತರ ‘ಭಾರತ-ಚೀನಾ ಗಡಿ ಮಾತುಕತೆ ಫಲಪ್ರದ’ವೆಂದು ಹೇಳುತ್ತ ತನ್ನ ನೂರಾರು ಚ.ಕಿ.ಮೀ. ಭೂಪ್ರದೇಶವನ್ನು ನಿಷ್ಕರುಣೆ ಚೀನಾಕ್ಕೆ ಬಿಟ್ಟುಕೊಡುತ್ತ ಬಂದಿದೆ. ಈ ವಂಚನೆಯನ್ನು ಆದಷ್ಟು ಬೇಗ ಪ್ರಸ್ತುತ ಮೋದಿ ಸರ್ಕಾರ ಅರ್ಥ ಮಾಡಿಕೊಂಡರೆ ಒಳಿತು. ಈಗಲಾದರೂ ಭಾರತ ಸಕಲ ಯುದ್ಧೋಪಕರಣಗಳನ್ನು ವಾಸ್ತವಿಕ ಗಡಿರೇಖೆಯಲ್ಲಿ ಶಾಶ್ವತವಾಗಿರುವಂತೆ ಸ್ಥಾಪಿಸಿ ಚೀನಾಕ್ಕೆ ಬುದ್ಧಿ ಕಲಿಸುವ ಸದಾವಕಾಶ ಎದುರಾಗಿದೆ.

-ಸೊಂದಲಗೆರೆ ಲಕ್ಷ್ಮೀಪತಿ

(ಲೇಖಕರು ಬರಹಗಾರರು. ಅಭಿಪ್ರಾಯಗಳು ವೈಯಕ್ತಿಕವಾದವುಗಳು)


ಇದನ್ನೂ ಓದಿ: ಮಾತುಕತೆ ನಂತರ ಚೀನೀ ಸೈನ್ಯದಿಂದ 4 ಅಧಿಕಾರಿಗಳು ಸೇರಿ 10 ಸೈನಿಕರ ಬಿಡುಗಡೆ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...