Homeಮುಖಪುಟದ.ಕ. ಜಿಲ್ಲಾಧಿಕಾರಿಯ ದಿಡೀರ್ ವರ್ಗಾವಣೆ: ಕಾರಣಗಳೇನಿರಬಹುದು...?

ದ.ಕ. ಜಿಲ್ಲಾಧಿಕಾರಿಯ ದಿಡೀರ್ ವರ್ಗಾವಣೆ: ಕಾರಣಗಳೇನಿರಬಹುದು…?

ಆಧುನಿಕ ಕಾಲದ ರಾಜನಂತಹ ಜಿಲ್ಲಾಧಿಕಾರಿ ಹುದ್ದೆಯನ್ನು ತೊರೆದು ಹೊರಬರಲು ಎಲ್ಲರೂ ಸಸಿಕಾಂಥ್ ಸೆಂಥಿಲ್ ಅಲ್ಲವಲ್ಲಾ....?

- Advertisement -
- Advertisement -

ಅವರು ವ್ಯವಸ್ಥೆಯ ಕೈ‌ಗೊಂಬೆ ಎಂದು ನಾನೇ ಟೀಕಿಸಿದ್ದೆ. ಕೆಲವೊಮ್ಮೆ ಸಂಸದ ನಳಿನ್ ಮತ್ತು ಶಾಸಕ ವೇದವ್ಯಾಸ ಕಾಮತರ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದೆಣಿಸಿದ್ದೂ ತಪ್ಪಲ್ಲ. ಬ್ಯೂರೋಕ್ರಾಟ್ಸ್ ಯಾವತ್ತೂ ಸರ್ವ ಸ್ವತಂತ್ರವಾಗಿರುವುದು ಭಾರತದಂತಹ ದೇಶದಲ್ಲಿ ಸಾಧ್ಯವಿಲ್ಲ. ಇಲ್ಲಿರುವುದು ಬನಾನಾ ರಿಪಬ್ಲಿಕ್.

ಪ್ರಭುತ್ವದ ವಿರುದ್ಧ ಅಧಿಕಾರಿಯೊಬ್ಬ ಮಾತನಾಡುವುದನ್ನು ಬಿಜೆಪಿಯವರೆಂದಲ್ಲ, ಯಾರೂ ಸಹಿಸಿರಲಿಲ್ಲ. ಆದರೆ ಕಾನೂನು ಕೈಗೆತ್ತಿಕೊಳ್ಳುವ ಗೂಂಡಾಪಡೆಗಳ ವಿರುದ್ಧ ಕಾನೂನಾತ್ಮಕವಾಗಿ ಒಂದು ಹೇಳಿಕೆ ಕೊಟ್ಟ ಮಾತ್ರಕ್ಕೆ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ರನ್ನು ಪನಿಶ್ಮೆಂಟ್ ಟ್ರಾನ್ಸ್‌ಫರ್ ಮಾಡಲಾಗಿದೆ. ಬಹಿರಂಗವಾಗಿ ಪ್ರಭುತ್ವ ಹಾಗಂದಿಲ್ಲವಾದರೂ ಅವರನ್ನು ವರ್ಗಾಯಿಸಲಾದ-ಹುದ್ದೆ ಅದನ್ನು ಶ್ರುತಪಡಿಸುತ್ತದೆ.

ಸಿಂಧೂ ಅವರ ವರ್ಗಾವಣೆ ಕಾನೂನು ಭಂಜಕ ಶಕ್ತಿಗಳ ಕೃತ್ಯಕ್ಕೆ ಬಲ ನೀಡುವಂತಿದೆ. ತನ್ಮೂಲಕ ನೀವು ನಿಮ್ಮ ಕೆಲಸವನ್ನು ಸುಸೂತ್ರವಾಗಿ ಮಾಡುತ್ತಿರಿ, ನಿಮಗಾಗಿ ನಾವು ಜಿಲ್ಲಾಧಿಕಾರಿಯನ್ನೇ ಎತ್ತಂಗಡಿ ಮಾಡುತ್ತೇವೆ ಎಂಬ ಅಭಯದ ಸಂದೇಶವನ್ನು ಪ್ರಭುತ್ವ ಕಾನೂನು ಭಂಜಕರಿಗೆ ನೀಡಿದೆ. ಇದು ಭಾರತದಲ್ಲಿ ಪ್ರಜಾತಂತ್ರ ವ್ಯವಸ್ಥೆ ಹಾಡಹಗಲೆ ಕಗ್ಗೊಲೆಯಾಗುತ್ತಿದೆ ಎಂಬುವುದಕ್ಕೆ ಒಂದು ಪುಟ್ಟ ನಿದರ್ಶನವಷ್ಟೆ.

ಪ್ರಭುತ್ವದ ಕಾನೂನುಭಂಜಕ ಕೆಲಸಗಳಿಗೆ ಸಾಥ್ ನೀಡದ್ದಕ್ಕಾಗಿ “ಕೇರಳ ಮೂಲದ ಗುಜರಾತಿನ ಉನ್ನತ ಪೋಲೀಸ್ ಅಧಿಕಾರಿ ಶ್ರೀಕುಮಾರನ್‌ರನ್ನು ಯಾವ ರೀತಿ ಸತಾಯಿಸಲಾಯಿತು…ಜಸ್ಟಿಸ್ ಲೋಯಾರನ್ನು ಹೇಗೆ ಮುಗಿಸಲಾಯಿತು… ಇಂತಹ ಒಂದಲ್ಲ, ಎರಡಲ್ಲ ನೂರಾರು ಉದಾಹರಣೆಗಳನ್ನು ನಾವು ಬಿಜೆಪಿಯ ಅಂದಾ ದರ್ಬಾರಿನಲ್ಲಿ ಕಂಡಿದ್ದೇವೆ.

ಸಿಂಧೂ ಅವರು ಬಹಳ ದಕ್ಷ ಅಧಿಕಾರಿಯೆಂದು ಇಲ್ಲದ ವಿಶೇಷಣಗಳನ್ನು ಅವರಿಗೆ ನೀಡಲಾರೆ. ಕೊರೋನಾ ಆರಂಭ ಕಾಲದಲ್ಲಿ ಕೊಲ್ಲಿ ರಾಷ್ಟ್ರಗಳಿಂದ ಮಂಗಳೂರಿಗೆ ಬಂದಿಳಿದ ಮಂಗಳೂರು ಮುಸ್ಲಿಮರಿಗೆ ನೀಡಲಾದ ಮಾನಸಿಕ ಹಿಂಸೆ ಇನ್ನೂ ನಮ್ಮ ಮನಸಿಂದ ಮಾಸಿಲ್ಲ. ಅದಾಗ್ಯೂ ಆ ಬಳಿಕ ಅವರು ಕೋವಿಡ್ ವಿಷಮಕಾಲದಲ್ಲಿ ನಡೆದುಕೊಂಡ ಬಗೆ, ತೆಗೆದುಕೊಂಡ ಕ್ರಮ ಇತ್ಯಾದಿಗಳನ್ನು ಸ್ವಲ್ಪವಾದರೂ ಮೆಚ್ಚದಿರಲಾಗದು. ವ್ಯವಸ್ಥೆಯ ಉಪಟಳದ ಮಧ್ಯೆಯೂ ತನ್ನ ಮಿತಿಯಲ್ಲಿ ಜನಪರವಾಗಿಯೇ ಸಿಂಧೂ ಕೆಲಸ ಮಾಡಿದ್ದಾರೆ.

ಇತ್ತೀಚೆಗೆ ಸಿಂಧೂ ಹೇಳಿದ ಕಹಿ ಸತ್ಯವೊಂದು ವ್ಯವಸ್ಥೆಯ ಕಣ್ಣು ಕೆಂಪಾಗಿಸಿದೆ ಕೂಡಾ. “ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತರಾದವರ ಅಸಲಿ ಸಂಖ್ಯೆ ಕೇವಲ ನಾಲ್ಕು, ಉಳಿದ ಮೂವತ್ತಾರು ಸಾವುಗಳು ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ಸಂಭವಿಸಿದ್ದು” ಎಂದು ಅವರು ಹೇಳಿದ್ದು, ಕೊರೋನಾ ಕಾಲದ ಇತರ ಸಾವಿಗೆಲ್ಲಾ ಕೊರೋನಾ ಲೇಬಲ್ ಹಚ್ಚಲಾಗುತ್ತಿದೆ ಎನ್ನುವ ಪರೋಕ್ಷ ಸಂದೇಶ ನೀಡುವಂತಿತ್ತು. ಇದರಿಂದ ಬೆತ್ತಲಾದವರು ಜಿಲ್ಲೆಯ ಕೆಲ ಖಾಸಗಿ ಆಸ್ಪತ್ರೆ ಮಾಫಿಯಾ.

ಪ್ರಭುತ್ವ ಖಾಸಗಿ ಆಸ್ಪತ್ರೆ ಮಾಫಿಯಾದೊಂದಿಗೆ ಹೇಗೆ ಕೈ ಜೋಡಿಸಿದೆ ಎನ್ನುವುದಕ್ಕೆ ಇದು ಅತ್ಯುತ್ತಮ ನಿದರ್ಶನವಾಗಿದೆ. ಜಿಲ್ಲೆಯ ಕೆಲ  ದರೋಡೆಕೋರ ಖಾಸಗಿ‌‌ ಆಸ್ಪತ್ರೆಗಳಿಗೆ ಕೊರೋನಾ ಬಂದಾಗಿನಿಂದ ಸುಗ್ಗಿ ಕಾಲ. ಹೇಗೆಂದರೆ ಕೊರೋನಾದಲ್ಲಿ ರೋಗಿ ಅತ್ಯಂತ ಕ್ರಿಟಿಕಲ್ ಆದಾಗ ಮಾತ್ರ ಹೆಚ್ಚಿನ ಕೇರ್ ಮತ್ತು ಔಷಧಿಗಳ ಅಗತ್ಯ ಬೀಳುತ್ತದೆ. 98% ಕೋವಿಡ್ ಪಾಸಿಟಿವ್ ರೋಗಿಗಳನ್ನು ಸುಖಾಸುಮ್ಮನೆ ವಾರಗಟ್ಟಲೆ ಆಸ್ಪತ್ರೆಗಳಲ್ಲಿ ಬಂಧಿಸಿಟ್ಟು ಒಟ್ಟು ಅಡ್ಮಿಟೆಡ್ ಅವಧಿಯಲ್ಲಿ ಎರಡು ಪ್ಯಾರಾಸಿಟಮೋಲ್, ನಾಲ್ಕು ಝಿಂಕ್, ನಾಲ್ಕು ಕ್ಯಾಲ್ಸಿಯಂ ಗುಳಿಗೆಗಳನ್ನು ನುಂಗಿಸಿ ಐವತ್ತರಿಂದ-ಅರುವತ್ತು ಸಾವಿರ ಬಿಲ್‌‌‌ ಸುಲಿಯಲಾಗಿದೆ.

ಯಾವಾಗ ಸಿಂಧೂ ಅಸಲಿ ಕೊರೋನಾದಿಂದ ಸಂಭವಿಸಿದ ಸಾವು ಕೇವಲ ನಾಲ್ಕು ಮಾತ್ರ ಎಂದಿದ್ದರೋ ಅಂದಿನಿಂದ ಜನ ಖಾಸಗಿ ಆಸ್ಪತ್ರೆಗಳ ವಿರುದ್ಧ ಹರಿಹಾಯತೊಡಗಿದರು. ಕೆಲ ಪತ್ರಿಕೆಗಳಲ್ಲಿ ಸಿಂಧೂ ಅವರ ಹೇಳಿಕೆಯನ್ನು ಪುಷ್ಟೀಕರಿಸುವಂತಹ ವರದಿಗಳು ಮತ್ತು ಜನಾಭಿಪ್ರಾಯಗಳೂ ಪ್ರಕಟವಾದವು.ಇದು ಖಾಸಗಿ ಆಸ್ಪತ್ರೆ ಮಾಫಿಯಾದೊಂದಿಗೆ ಕೈ ಜೋಡಿಸಿದ ಆಳುವ ವರ್ಗಕ್ಕೆ ಚಪ್ಪಲಿಯಲ್ಲಿ ಹೊಡೆದಂತಾಗಿತ್ತು. ಇದಕ್ಕೆಲ್ಲಾ ಒಂದು ಕೊನೆಗಾಣಿಸಲೇಬೇಕಿತ್ತು.

ಇದೀಗ ಆಳುವ ವರ್ಗದ ಕೃಪಾಪೋಷಿತ ಗೂಂಡಾಗಳ ವಿರುದ್ಧ ನೀಡಿದ ಹೇಳಿಕೆಯ ಸಂದರ್ಭದಲ್ಲಿ ವರ್ಗಾವಣೆ ಮಾಡಿ ಪ್ರಭುತ್ವ ಒಂದೇ ಏಟಿಗೆ ಎರಡು ಹಣ್ಣು ಉದುರಿಸಿದೆ. ಒಂದೆಡೆ ಗೂಂಡಾಗಳನ್ನು ಸಂತೈಸಿದಂತೆಯೂ ಆಯಿತು, ಇನ್ನೊಂದೆಡೆ ಖಾಸಗಿ ಆಸ್ಪತ್ರೆ ಮಾಫಿಯಾ ಜೊತೆ ಕೈ ಜೋಡಿಸಿದ ವಿಚಾರದಲ್ಲಾದ ಮುಖಭಂಗಕ್ಕೆ ಪ್ರತೀಕಾರ ತೀರಿಸಿದಂತೆಯೂ ಆಯಿತು.

ಸಿಂಧೂ ಇಂತಹ ನಡೆಗಳನ್ನು ಪ್ರಜ್ಞಾಪೂರ್ವಕವಾಗಿ ಇಟ್ಟರೋ, ಅಲ್ಲವೋ ಎಂದು ಸ್ಪಷ್ಟವಾಗಿ ಹೇಳಲಾಗದು. ಆದರೆ ಒಟ್ಟಿನಲ್ಲಿ ಅವರ ಇಂತಹ ನಡೆಗಳು ಪ್ರಭುತ್ವಕ್ಕೆ ಮುಜುಗರವುಂಟು ಮಾಡಿದ್ದಂತೂ ಸುಳ್ಳಲ್ಲ.

ಆಧುನಿಕ ಕಾಲದ ರಾಜನಂತಹ ಜಿಲ್ಲಾಧಿಕಾರಿ ಹುದ್ದೆಯನ್ನು ತೊರೆದು ಹೊರಬರಲು ಎಲ್ಲರೂ ಸಸಿಕಾಂಥ್ ಸೆಂಥಿಲ್ ಅಲ್ಲವಲ್ಲಾ….?

ಇಸ್ಮತ್ ಪಜೀರ್‌, ಯುವ ಬರಹಗಾರರು.


ಓದಿ: ’ಕಡಿದು ಕೊಲೆ ಮಾಡಬೇಕು’: ದ. ಕ. ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...