Homeಮುಖಪುಟದ.ಕ. ಜಿಲ್ಲಾಧಿಕಾರಿಯ ದಿಡೀರ್ ವರ್ಗಾವಣೆ: ಕಾರಣಗಳೇನಿರಬಹುದು...?

ದ.ಕ. ಜಿಲ್ಲಾಧಿಕಾರಿಯ ದಿಡೀರ್ ವರ್ಗಾವಣೆ: ಕಾರಣಗಳೇನಿರಬಹುದು…?

ಆಧುನಿಕ ಕಾಲದ ರಾಜನಂತಹ ಜಿಲ್ಲಾಧಿಕಾರಿ ಹುದ್ದೆಯನ್ನು ತೊರೆದು ಹೊರಬರಲು ಎಲ್ಲರೂ ಸಸಿಕಾಂಥ್ ಸೆಂಥಿಲ್ ಅಲ್ಲವಲ್ಲಾ....?

- Advertisement -
- Advertisement -

ಅವರು ವ್ಯವಸ್ಥೆಯ ಕೈ‌ಗೊಂಬೆ ಎಂದು ನಾನೇ ಟೀಕಿಸಿದ್ದೆ. ಕೆಲವೊಮ್ಮೆ ಸಂಸದ ನಳಿನ್ ಮತ್ತು ಶಾಸಕ ವೇದವ್ಯಾಸ ಕಾಮತರ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದೆಣಿಸಿದ್ದೂ ತಪ್ಪಲ್ಲ. ಬ್ಯೂರೋಕ್ರಾಟ್ಸ್ ಯಾವತ್ತೂ ಸರ್ವ ಸ್ವತಂತ್ರವಾಗಿರುವುದು ಭಾರತದಂತಹ ದೇಶದಲ್ಲಿ ಸಾಧ್ಯವಿಲ್ಲ. ಇಲ್ಲಿರುವುದು ಬನಾನಾ ರಿಪಬ್ಲಿಕ್.

ಪ್ರಭುತ್ವದ ವಿರುದ್ಧ ಅಧಿಕಾರಿಯೊಬ್ಬ ಮಾತನಾಡುವುದನ್ನು ಬಿಜೆಪಿಯವರೆಂದಲ್ಲ, ಯಾರೂ ಸಹಿಸಿರಲಿಲ್ಲ. ಆದರೆ ಕಾನೂನು ಕೈಗೆತ್ತಿಕೊಳ್ಳುವ ಗೂಂಡಾಪಡೆಗಳ ವಿರುದ್ಧ ಕಾನೂನಾತ್ಮಕವಾಗಿ ಒಂದು ಹೇಳಿಕೆ ಕೊಟ್ಟ ಮಾತ್ರಕ್ಕೆ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ರನ್ನು ಪನಿಶ್ಮೆಂಟ್ ಟ್ರಾನ್ಸ್‌ಫರ್ ಮಾಡಲಾಗಿದೆ. ಬಹಿರಂಗವಾಗಿ ಪ್ರಭುತ್ವ ಹಾಗಂದಿಲ್ಲವಾದರೂ ಅವರನ್ನು ವರ್ಗಾಯಿಸಲಾದ-ಹುದ್ದೆ ಅದನ್ನು ಶ್ರುತಪಡಿಸುತ್ತದೆ.

ಸಿಂಧೂ ಅವರ ವರ್ಗಾವಣೆ ಕಾನೂನು ಭಂಜಕ ಶಕ್ತಿಗಳ ಕೃತ್ಯಕ್ಕೆ ಬಲ ನೀಡುವಂತಿದೆ. ತನ್ಮೂಲಕ ನೀವು ನಿಮ್ಮ ಕೆಲಸವನ್ನು ಸುಸೂತ್ರವಾಗಿ ಮಾಡುತ್ತಿರಿ, ನಿಮಗಾಗಿ ನಾವು ಜಿಲ್ಲಾಧಿಕಾರಿಯನ್ನೇ ಎತ್ತಂಗಡಿ ಮಾಡುತ್ತೇವೆ ಎಂಬ ಅಭಯದ ಸಂದೇಶವನ್ನು ಪ್ರಭುತ್ವ ಕಾನೂನು ಭಂಜಕರಿಗೆ ನೀಡಿದೆ. ಇದು ಭಾರತದಲ್ಲಿ ಪ್ರಜಾತಂತ್ರ ವ್ಯವಸ್ಥೆ ಹಾಡಹಗಲೆ ಕಗ್ಗೊಲೆಯಾಗುತ್ತಿದೆ ಎಂಬುವುದಕ್ಕೆ ಒಂದು ಪುಟ್ಟ ನಿದರ್ಶನವಷ್ಟೆ.

ಪ್ರಭುತ್ವದ ಕಾನೂನುಭಂಜಕ ಕೆಲಸಗಳಿಗೆ ಸಾಥ್ ನೀಡದ್ದಕ್ಕಾಗಿ “ಕೇರಳ ಮೂಲದ ಗುಜರಾತಿನ ಉನ್ನತ ಪೋಲೀಸ್ ಅಧಿಕಾರಿ ಶ್ರೀಕುಮಾರನ್‌ರನ್ನು ಯಾವ ರೀತಿ ಸತಾಯಿಸಲಾಯಿತು…ಜಸ್ಟಿಸ್ ಲೋಯಾರನ್ನು ಹೇಗೆ ಮುಗಿಸಲಾಯಿತು… ಇಂತಹ ಒಂದಲ್ಲ, ಎರಡಲ್ಲ ನೂರಾರು ಉದಾಹರಣೆಗಳನ್ನು ನಾವು ಬಿಜೆಪಿಯ ಅಂದಾ ದರ್ಬಾರಿನಲ್ಲಿ ಕಂಡಿದ್ದೇವೆ.

ಸಿಂಧೂ ಅವರು ಬಹಳ ದಕ್ಷ ಅಧಿಕಾರಿಯೆಂದು ಇಲ್ಲದ ವಿಶೇಷಣಗಳನ್ನು ಅವರಿಗೆ ನೀಡಲಾರೆ. ಕೊರೋನಾ ಆರಂಭ ಕಾಲದಲ್ಲಿ ಕೊಲ್ಲಿ ರಾಷ್ಟ್ರಗಳಿಂದ ಮಂಗಳೂರಿಗೆ ಬಂದಿಳಿದ ಮಂಗಳೂರು ಮುಸ್ಲಿಮರಿಗೆ ನೀಡಲಾದ ಮಾನಸಿಕ ಹಿಂಸೆ ಇನ್ನೂ ನಮ್ಮ ಮನಸಿಂದ ಮಾಸಿಲ್ಲ. ಅದಾಗ್ಯೂ ಆ ಬಳಿಕ ಅವರು ಕೋವಿಡ್ ವಿಷಮಕಾಲದಲ್ಲಿ ನಡೆದುಕೊಂಡ ಬಗೆ, ತೆಗೆದುಕೊಂಡ ಕ್ರಮ ಇತ್ಯಾದಿಗಳನ್ನು ಸ್ವಲ್ಪವಾದರೂ ಮೆಚ್ಚದಿರಲಾಗದು. ವ್ಯವಸ್ಥೆಯ ಉಪಟಳದ ಮಧ್ಯೆಯೂ ತನ್ನ ಮಿತಿಯಲ್ಲಿ ಜನಪರವಾಗಿಯೇ ಸಿಂಧೂ ಕೆಲಸ ಮಾಡಿದ್ದಾರೆ.

ಇತ್ತೀಚೆಗೆ ಸಿಂಧೂ ಹೇಳಿದ ಕಹಿ ಸತ್ಯವೊಂದು ವ್ಯವಸ್ಥೆಯ ಕಣ್ಣು ಕೆಂಪಾಗಿಸಿದೆ ಕೂಡಾ. “ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತರಾದವರ ಅಸಲಿ ಸಂಖ್ಯೆ ಕೇವಲ ನಾಲ್ಕು, ಉಳಿದ ಮೂವತ್ತಾರು ಸಾವುಗಳು ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ಸಂಭವಿಸಿದ್ದು” ಎಂದು ಅವರು ಹೇಳಿದ್ದು, ಕೊರೋನಾ ಕಾಲದ ಇತರ ಸಾವಿಗೆಲ್ಲಾ ಕೊರೋನಾ ಲೇಬಲ್ ಹಚ್ಚಲಾಗುತ್ತಿದೆ ಎನ್ನುವ ಪರೋಕ್ಷ ಸಂದೇಶ ನೀಡುವಂತಿತ್ತು. ಇದರಿಂದ ಬೆತ್ತಲಾದವರು ಜಿಲ್ಲೆಯ ಕೆಲ ಖಾಸಗಿ ಆಸ್ಪತ್ರೆ ಮಾಫಿಯಾ.

ಪ್ರಭುತ್ವ ಖಾಸಗಿ ಆಸ್ಪತ್ರೆ ಮಾಫಿಯಾದೊಂದಿಗೆ ಹೇಗೆ ಕೈ ಜೋಡಿಸಿದೆ ಎನ್ನುವುದಕ್ಕೆ ಇದು ಅತ್ಯುತ್ತಮ ನಿದರ್ಶನವಾಗಿದೆ. ಜಿಲ್ಲೆಯ ಕೆಲ  ದರೋಡೆಕೋರ ಖಾಸಗಿ‌‌ ಆಸ್ಪತ್ರೆಗಳಿಗೆ ಕೊರೋನಾ ಬಂದಾಗಿನಿಂದ ಸುಗ್ಗಿ ಕಾಲ. ಹೇಗೆಂದರೆ ಕೊರೋನಾದಲ್ಲಿ ರೋಗಿ ಅತ್ಯಂತ ಕ್ರಿಟಿಕಲ್ ಆದಾಗ ಮಾತ್ರ ಹೆಚ್ಚಿನ ಕೇರ್ ಮತ್ತು ಔಷಧಿಗಳ ಅಗತ್ಯ ಬೀಳುತ್ತದೆ. 98% ಕೋವಿಡ್ ಪಾಸಿಟಿವ್ ರೋಗಿಗಳನ್ನು ಸುಖಾಸುಮ್ಮನೆ ವಾರಗಟ್ಟಲೆ ಆಸ್ಪತ್ರೆಗಳಲ್ಲಿ ಬಂಧಿಸಿಟ್ಟು ಒಟ್ಟು ಅಡ್ಮಿಟೆಡ್ ಅವಧಿಯಲ್ಲಿ ಎರಡು ಪ್ಯಾರಾಸಿಟಮೋಲ್, ನಾಲ್ಕು ಝಿಂಕ್, ನಾಲ್ಕು ಕ್ಯಾಲ್ಸಿಯಂ ಗುಳಿಗೆಗಳನ್ನು ನುಂಗಿಸಿ ಐವತ್ತರಿಂದ-ಅರುವತ್ತು ಸಾವಿರ ಬಿಲ್‌‌‌ ಸುಲಿಯಲಾಗಿದೆ.

ಯಾವಾಗ ಸಿಂಧೂ ಅಸಲಿ ಕೊರೋನಾದಿಂದ ಸಂಭವಿಸಿದ ಸಾವು ಕೇವಲ ನಾಲ್ಕು ಮಾತ್ರ ಎಂದಿದ್ದರೋ ಅಂದಿನಿಂದ ಜನ ಖಾಸಗಿ ಆಸ್ಪತ್ರೆಗಳ ವಿರುದ್ಧ ಹರಿಹಾಯತೊಡಗಿದರು. ಕೆಲ ಪತ್ರಿಕೆಗಳಲ್ಲಿ ಸಿಂಧೂ ಅವರ ಹೇಳಿಕೆಯನ್ನು ಪುಷ್ಟೀಕರಿಸುವಂತಹ ವರದಿಗಳು ಮತ್ತು ಜನಾಭಿಪ್ರಾಯಗಳೂ ಪ್ರಕಟವಾದವು.ಇದು ಖಾಸಗಿ ಆಸ್ಪತ್ರೆ ಮಾಫಿಯಾದೊಂದಿಗೆ ಕೈ ಜೋಡಿಸಿದ ಆಳುವ ವರ್ಗಕ್ಕೆ ಚಪ್ಪಲಿಯಲ್ಲಿ ಹೊಡೆದಂತಾಗಿತ್ತು. ಇದಕ್ಕೆಲ್ಲಾ ಒಂದು ಕೊನೆಗಾಣಿಸಲೇಬೇಕಿತ್ತು.

ಇದೀಗ ಆಳುವ ವರ್ಗದ ಕೃಪಾಪೋಷಿತ ಗೂಂಡಾಗಳ ವಿರುದ್ಧ ನೀಡಿದ ಹೇಳಿಕೆಯ ಸಂದರ್ಭದಲ್ಲಿ ವರ್ಗಾವಣೆ ಮಾಡಿ ಪ್ರಭುತ್ವ ಒಂದೇ ಏಟಿಗೆ ಎರಡು ಹಣ್ಣು ಉದುರಿಸಿದೆ. ಒಂದೆಡೆ ಗೂಂಡಾಗಳನ್ನು ಸಂತೈಸಿದಂತೆಯೂ ಆಯಿತು, ಇನ್ನೊಂದೆಡೆ ಖಾಸಗಿ ಆಸ್ಪತ್ರೆ ಮಾಫಿಯಾ ಜೊತೆ ಕೈ ಜೋಡಿಸಿದ ವಿಚಾರದಲ್ಲಾದ ಮುಖಭಂಗಕ್ಕೆ ಪ್ರತೀಕಾರ ತೀರಿಸಿದಂತೆಯೂ ಆಯಿತು.

ಸಿಂಧೂ ಇಂತಹ ನಡೆಗಳನ್ನು ಪ್ರಜ್ಞಾಪೂರ್ವಕವಾಗಿ ಇಟ್ಟರೋ, ಅಲ್ಲವೋ ಎಂದು ಸ್ಪಷ್ಟವಾಗಿ ಹೇಳಲಾಗದು. ಆದರೆ ಒಟ್ಟಿನಲ್ಲಿ ಅವರ ಇಂತಹ ನಡೆಗಳು ಪ್ರಭುತ್ವಕ್ಕೆ ಮುಜುಗರವುಂಟು ಮಾಡಿದ್ದಂತೂ ಸುಳ್ಳಲ್ಲ.

ಆಧುನಿಕ ಕಾಲದ ರಾಜನಂತಹ ಜಿಲ್ಲಾಧಿಕಾರಿ ಹುದ್ದೆಯನ್ನು ತೊರೆದು ಹೊರಬರಲು ಎಲ್ಲರೂ ಸಸಿಕಾಂಥ್ ಸೆಂಥಿಲ್ ಅಲ್ಲವಲ್ಲಾ….?

ಇಸ್ಮತ್ ಪಜೀರ್‌, ಯುವ ಬರಹಗಾರರು.


ಓದಿ: ’ಕಡಿದು ಕೊಲೆ ಮಾಡಬೇಕು’: ದ. ಕ. ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...