Homeಫ್ಯಾಕ್ಟ್‌ಚೆಕ್ಆಮ್ಲಜನಕ ಮಟ್ಟ ಹೆಚ್ಚಳಕ್ಕೆ ಕರ್ಪೂರ, ಲವಂಗ, ಅಜಿವಾನ ಮತ್ತು ನೀಲಗಿರಿ ಎಣ್ಣೆ ಬಳಸಬೇಡಿ, ಇದು ಮಾರಣಾಂತಿಕವೂ...

ಆಮ್ಲಜನಕ ಮಟ್ಟ ಹೆಚ್ಚಳಕ್ಕೆ ಕರ್ಪೂರ, ಲವಂಗ, ಅಜಿವಾನ ಮತ್ತು ನೀಲಗಿರಿ ಎಣ್ಣೆ ಬಳಸಬೇಡಿ, ಇದು ಮಾರಣಾಂತಿಕವೂ ಆಗಬಹುದು!

- Advertisement -
- Advertisement -

ವಾಟ್ಸಾಪ್, ಫೇಸ್‌ಬುಕ್ ಮತ್ತು ಟ್ವಿಟರಿನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೈರಲ್ ಸಂದೇಶವು ಕರ್ಪೂರ, ಲವಂಗ, ಅಜಿವಾನ ಮತ್ತು ನೀಲಗಿರಿ ಎಣ್ಣೆಯ ಆವಿಯನ್ನು ಉಸಿರಾಡುವುದರಿಂದ ರಕ್ತದ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಉಸಿರಾಟದ ತೊಂದರೆಯನ್ನು ನಿವಾರಿಸುತ್ತದೆ ಎಂದು ಸೂಚಿಸುತ್ತದೆ. ಈ ವಾದವನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ ನಡೆಸಿದೆ. ಬದಲಾಗಿ, ಮಿಶ್ರಣವನ್ನು ಉಸಿರಾಟದ ಮೂಲಕ ಒಳಗೆ ತೆಗೆದುಕೊಳ್ಳುವುದರಿಂದ (ಸ್ನಿಫ್ಫಿಂಗ್) ಕರ್ಪೂರ ವಿಷಕ್ಕೆ ಕಾರಣವಾಗಬಹುದು, ಇದು ಕೆಲವು ಸಂದರ್ಭಗಳಲ್ಲಿ ಮಾರಣಾಂತಿಕವಾಗಿದೆ.

ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಮಧ್ಯೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಫೇಸ್‌ಬುಕ್‌ನಲ್ಲಿ ಈ ವೈರಲ್ ಅಸತ್ಯವನ್ನು ಹಂಚಿಕೊಂಡಿದ್ದರು.
ವೈರಲ್ ಆದ ಸಂದೇಶದಲ್ಲಿ “ಕರ್ಪೂರ, ಲವಂಗ, ಅಜಿವಾನ ಮತ್ತು ಕೆಲವು ಹನಿಗಳು ನೀಲಗಿರಿ ಎಣ್ಣೆ ಸೇರಿಸಿ ಅರೆದ ಮಿಶ್ರಣ ತಯಾರಿಸಬೇಕು. ದಿನವಿಡೀ ಅದನ್ನು ವಾಸನೆ ಮಾಡುವುದು ಅಂದರೆ ಉಸಿರಿನ ಮೂಲಕ ಒಳಕ್ಕೆ ತೆಗೆದುಕೊಳ್ಳುವುದು. ಇದರಿಂದ ರಕ್ತದಲ್ಲಿನ ಆಮ್ಲಜನಕದ ಮಟ್ಟ ಹೆಚ್ಚುತ್ತದೆ. ಆಮ್ಲಜನಕದ ಮಟ್ಟ ಕಡಿಮೆಯಾದಾಗ ಲಡಾಖ್‌ನ ಪ್ರವಾಸಿಗರಿಗೆ ಈ ಪೊಟ್ಲಿಯನ್ನು (ಮಿಶ್ರಣವನ್ನು) ನೀಡಲಾಗುತ್ತದೆ. ಇದು ಮನೆಮದ್ದು…..

ಫ್ಯಾಕ್ಟ್‌ಚೆಕ್

1. ಕರ್ಪೂರ
ಕರ್ಪೂರವು ಸುಡುವ ಬಿಳಿ ಸ್ಫಟಿಕದ ವಸ್ತುವಾಗಿದ್ದು ಅದು ಬಲವಾದ ಆರೊಮ್ಯಾಟಿಕ್ ವಾಸನೆಯನ್ನು ಹೊಂದಿರುತ್ತದೆ. ನೋವು ಮತ್ತು ತುರಿಕೆ ಕಡಿಮೆ ಮಾಡಲು ಇದನ್ನು ಕೆಲವೊಮ್ಮೆ ಚರ್ಮದ ಮೇಲೆ ಉಜ್ಜಲಾಗುತ್ತದೆ.

ಇದನ್ನು ವಿಕ್ಸ್ ವೆಪೊರಬ್‌ನಂತಹ ಸಾಮೂಹಿಕ ಮೂಗಿನ ಡಿಕೊಂಜೆಸ್ಟೆಂಟ್ ಜೆಲ್‌ಗಳಲ್ಲಿ ಸಣ್ಣ ಪ್ರಮಾಣದಲ್ಲಿ (4-5%) ಬಳಸಲಾಗುತ್ತದೆ. ಆದರೆ ಅದರ ಪರಿಣಾಮಕಾರಿತ್ವದ ಬಗ್ಗೆ ಪುರಾವೆಗಳು ಗೊಂದಲಮಯವಾಗಿವೆ. ಕೆಲವು ಹಳೆಯ ಅಧ್ಯಯನಗಳು ಕರ್ಪೂರ ಮತ್ತು ನೀಲಗಿರಿ ಮೂಗಿನ ಅನಾರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕಂಡುಹಿಡಿದಿವೆ.

ಔಷಧೀಯವಲ್ಲದ ಕರ್ಪೂರವನ್ನು ಅಳೆಯದ ಪ್ರಮಾಣದಲ್ಲಿ ಉಸಿರಾಡುವುದು ಅಥವಾ ಸೇವಿಸುವುದರಿಂದ ಒಡ್ಡಿಕೊಂಡ ಕೆಲವೇ ನಿಮಿಷಗಳಲ್ಲಿ, ವಿಶೇಷವಾಗಿ ಮಕ್ಕಳಲ್ಲಿ ತೀವ್ರ ವಿಷತ್ವಕ್ಕೆ ಕಾರಣವಾಗಬಹುದು.

ಅಮೇರಿಕನ್ ಅಸೋಸಿಯೇಷನ್ ಆಫ್ ಪಾಯ್ಸನ್ ಕಂಟ್ರೋಲ್ ಸೆಂಟರ್ ವರದಿಯ ಪ್ರಕಾರ, 2018 ರಲ್ಲಿ, ಅಮೆರಿಕದಲ್ಲಿ ಸುಮಾರು 9,500 ಕರ್ಪೂರ ವಿಷದ ಪ್ರಕರಣಗಳು ನಡೆದಿವೆ. ಅವುಗಳಲ್ಲಿ 10 ಜೀವಕ್ಕೆ ಅಪಾಯಕಾರಿಯಾದ ಪ್ರಕರಣಗಳಿದ್ದವು ಮತ್ತು ನೂರಾರು ಪ್ರಕರಣಗಳು ಗಮನಾರ್ಹ ಅಂಗವೈಕಲ್ಯಕ್ಕೆ ಕಾರಣವಾಗಿವೆ.

ಯುಎಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) ಮಾರ್ಗಸೂಚಿಗಳ ಪ್ರಕಾರ, ಕರ್ಪೂರ ಆವಿಗಳನ್ನು ಉಸಿರಾಡುವುದರಿಂದ ಮೂಗು, ಗಂಟಲು ಮತ್ತು ಕಣ್ಣಿನಲ್ಲಿ ಕೆರಳಿಕೆ, ತುರುಸುವಿಕೆ ಉಂಟಾಗುತ್ತದೆ. ಇದು ರೋಗಗ್ರಸ್ಥತನಕ್ಕೆ, ಮಾನಸಿಕ ಗೊಂದಲ, ಹೊಟ್ಟೆ ನೋವಿಗೆ ಕಾರಣವಾಗಬಹುದು. ಹೆಚ್ಚಿನ ಪ್ರಮಾಣದಲ್ಲಿ ಸೆವಿಸಿದಾಗ ಇದು ಕೆಲವು ಸಂದರ್ಭಗಳಲ್ಲಿ ಸಾವಿಗೆ ಕಾರಣವಾಗಬಹುದು. ಕರ್ಪೂರ ಆವಿ ಇನ್ಹಲೇಷನ್ ನಿಂದ ಉಂಟಾದ ವಿಷದ ಬಗ್ಗೆ ಭಾರತದಲ್ಲಿ ಹಲವಾರು ಪ್ರಕರಣಗಳು ವರದಿಯಾಗಿವೆ.

2. ಲವಂಗ
ಲವಂಗ ಆವಿ ಕೂಡ ವಿಷಕಾರಿಯಾಗಬಹುದು ಎಂದು ವೈಜ್ಞಾನಿಕ ವರದಿಗಳು ಹೇಳಿವೆ. ಆದರೆ ಇದು ರಕ್ತದ ಆಮ್ಲಜನಕವನ್ನು ಹೆಚ್ಚಿಸುತ್ತದೆ ಅಥವಾ ಉಸಿರಾಟದ ತೊಂದರೆಯನ್ನು ನಿವಾರಿಸುತ್ತದೆ ಎಂದು ಸೂಚಿಸಲು ಯಾವುದೇ ಸಂಶೋಧನೆಗಳಿಲ್ಲ.

3. ಅಜಿವಾನ ಮತ್ತು ನೀಲಗಿರಿ ಎಣ್ಣೆ

ಮೇಲಿನ ಎರಡೂ ಪದಾರ್ಥಗಳಿಗೆ, ಅವು ರಕ್ತದ ಆಮ್ಲಜನಕವನ್ನು ಹೆಚ್ಚಿಸುತ್ತವೆ ಅಥವಾ ಉಸಿರಾಟದ ತೊಂದರೆಯನ್ನು ನಿವಾರಿಸುತ್ತವೆ ಎಂದು ಸೂಚಿಸಲು ಯಾವುದೇ ಸಂಶೋಧನೆ ಅಥವಾ ಪುರಾವೆಗಳಿಲ್ಲ.

ವಾಟ್ಸಾಪ್ ಫಾರ್ವರ್ಡ್‌ ಸಂದೇಶದ ಇತರ ಆವೃತ್ತಿಗಳು ಆಯುರ್ವೇದ ವೈದ್ಯ ಪ್ರಜಗ್ರಾಜ್ ದಾಬಿ ಸಂಶೋಧನೆ ಮಾಡಿದ್ದಾರೆ ಎಂದು ಉಲ್ಲೇಖಿಸುತ್ತವೆ. ಅವರು ಹಲವು ಕೋವಿಡ್ ರೋಗಿಗಳಿಗೆ ಸೂತ್ರೀಕರಣದೊಂದಿಗೆ ಚಿಕಿತ್ಸೆ ನೀಡಿದ್ದಾರೆಂದು ಭಾವಿಸಲಾಗಿದೆ. ಆದರೆ ಈ ಹಕ್ಕನ್ನು ದಾಬಿ ತಿರಸ್ಕರಿಸಿದ್ದಾರೆ.

ಕೋವಿಡ್ ರೋಗಿಗಳ ಮೇಲೆ ಆಂಬ್ಯುಲೆನ್ಸ್‌ಗಳು ಈ ಸೂತ್ರೀಕರಣವನ್ನು ಬಳಸುತ್ತಿವೆ ಎಂದು ಇತರ ಆವೃತ್ತಿಗಳು ಹೇಳುತ್ತವೆ. ಆದರೆ ಕೋವಿಡ್ ಆಂಬುಲೆನ್ಸ್‌ಗಳಿಗಾಗಿ ಆರೋಗ್ಯ ಸಚಿವಾಲಯದ ಪ್ರೋಟೋಕಾಲ್‌ನಲ್ಲಿ ಅಂತಹ ಯಾವುದೇ ಚಿಕಿತ್ಸಾ ಮಾರ್ಗಸೂಚಿಗಳನ್ನು ಉಲ್ಲೇಖಿಸಲಾಗಿಲ್ಲ.

ಕರ್ಪೂರ, ಲವಂಗ ಅಥವಾ ಅಜಿವಾನ ಬೀಜಗಳು ರಕ್ತದ ಆಮ್ಲಜನಕವನ್ನು ಹೆಚ್ಚಿಸುತ್ತವೆ ಅಥವಾ ಉಸಿರಾಟದ ತೊಂದರೆಯ ಸಮಯದಲ್ಲಿ ಪರಿಹಾರವನ್ನು ನೀಡುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಸೌಮ್ಯ ಉಸಿರಾಟದ ಸೋಂಕುಗಳು ಅಥವಾ ಉರಿಯೂತದ ಸೈನುಟಿಸ್ ಸಮಯದಲ್ಲಿ ಇವುಗಳು ‘ಉತ್ತಮ ಅನುಭವ’ ಚಿಕಿತ್ಸೆಯಾಗಿ ಕಾರ್ಯನಿರ್ವಹಿಸಬಹುದು. ಕೋವಿಡ್ ರೋಗಿಗಳಲ್ಲಿ ಇವು ರಕ್ತದ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಬಹುದು ಎಂದು ಸೂಚಿಸುವುದರಿಂದ ಜನರು ಮನೆಮದ್ದುಗಳನ್ನು ಅವಲಂಬಿಸಬಹುದು ಮತ್ತು ವೈದ್ಯಕೀಯ ಸಹಾಯವನ್ನು ತೆಗೆದುಕೊಳ್ಳುವುದಿಲ್ಲ. ಮಿಶ್ರಣವನ್ನು ಸ್ನಿಫ್ ಮಾಡುವುದರಿಂದ ಕರ್ಪೂರ ವಿಷವೂ ಆಗಿ ಪರಿಣಮಿಸಬಹುದು, ಇದು ಕೆಲವು ಸಂದರ್ಭಗಳಲ್ಲಿ ಮಾರಣಾಂತಿಕವಾಗಬಹುದು.

(ಕೃಪೆ: ಅಲ್ಟ್‌ನ್ಯೂಸ್)


ಇದನ್ನೂ ಓದಿ: ದೇಶದೆಲ್ಲೆಡೆ ಆಮ್ಲಜನಕ ಕೊರತೆ: ಒಂದು ವರ್ಷದಲ್ಲಿ ಭಾರತದ ಆಮ್ಲಜನಕ ರಫ್ತು 700% ಕ್ಕಿಂತ ಹೆಚ್ಚಾಗಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...