Homeಅಂತರಾಷ್ಟ್ರೀಯವ್ಯಾಪಾರ ಒತ್ತಡ ಹಾಕಿ ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದೆ : ಪುನರುಚ್ಚರಿಸಿದ ಟ್ರಂಪ್

ವ್ಯಾಪಾರ ಒತ್ತಡ ಹಾಕಿ ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದೆ : ಪುನರುಚ್ಚರಿಸಿದ ಟ್ರಂಪ್

- Advertisement -
- Advertisement -

ಭಾರತ- ಪಾಕಿಸ್ತಾನದ ಮೇಲೆ ವ್ಯಾಪಾರ ಒತ್ತಡವನ್ನು ಹೆಚ್ಚಿಸುವ ಮೂಲಕ ಉಭಯ ರಾಷ್ಟ್ರಗಳ ನಡುವಿನ ಯುದ್ಧವನ್ನು ತಪ್ಪಿಸಿದೆ ಎಂಬ ತಮ್ಮ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ (ಅ.29) ಪುನರುಚ್ಚರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರನ್ನು ‘ಅತ್ಯಂತ ಸುಂದರ’ ಮತ್ತು ‘ಕಠಿಣ ವ್ಯಕ್ತಿ’ ಎಂದು ಹೊಗಳಿದ ಟ್ರಂಪ್, ಅಮೆರಿಕ ಅಧ್ಯಕ್ಷರು ಪ್ರಧಾನಿಗೆ ಕರೆ ಮಾಡಿ ಮಾತನಾಡಿದ ಎರಡು ದಿನಗಳಲ್ಲಿ ಭಾರತ ಒತ್ತಡಕ್ಕೆ ಮಣಿದು ಯುದ್ಧವನ್ನು ನಿಲ್ಲಿಸಿತು ಎಂದು ಹೇಳಿದ್ದಾರೆ.

“ಪ್ರಧಾನಿ ಮೋದಿ ಅತ್ಯಂತ ಸುಂದರ ವ್ಯಕ್ತಿ. ಅವರೊಬ್ಬ ಕಿಲ್ಲರ್ ಮತ್ತು ಕಠಿಣ ವ್ಯಕ್ತಿ. ಅವರು ಹೋರಾಡುತ್ತೇವೆ ಎಂದರು, ಆಗ ನಾನು ವಾವ್, ಇದು ನನಗೆ ಗೊತ್ತಿರುವ ಅದೇ ವ್ಯಕ್ತಿನಾ? ಅಂದೆ” ಎಂದು ದಕ್ಷಿಣ ಕೊರಿಯಾದ ಜಿಯೊಂಗ್ಜುನಲ್ಲಿ ನಡೆದ ಎಪಿಇಸಿ (ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ) ಸಿಇಒ ಶೃಂಗಸಭೆಯಲ್ಲಿ ಟ್ರಂಪ್ ಹೇಳಿದ್ದಾರೆ.

ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರನ್ನೂ ಹೊಗಳಿದ ಟ್ರಂಪ್, ಅವರನ್ನು ‘ಶ್ರೇಷ್ಠ ಹೋರಾಟಗಾರ’ ಎಂದು ಕರೆದಿದ್ದಾರೆ.

“ಪಾಕಿಸ್ತಾನದ ಪ್ರಧಾನಿ ಒಬ್ಬ ಮಹಾನ್ ವ್ಯಕ್ತಿ. ಅವರ ಬಳಿ ಫೀಲ್ಡ್ ಮಾರ್ಷಲ್ ಇದ್ದಾರೆ. ಅವರು ಫೀಲ್ಡ್ ಮಾರ್ಷಲ್ ಯಾಕೆ ಅಂತ ನಿಮಗೆ ಗೊತ್ತಾ? ಅವರು ಒಬ್ಬ ಮಹಾನ್ ಹೋರಾಟಗಾರ. ಹಾಗಾಗಿ, ನನಗೆ ಅವರೆಲ್ಲರ ಪರಿಚಯವಿದೆ” ಎಂದು ಟ್ರಂಪ್ ಹೇಳಿದ್ದಾರೆ.

“ಇಬ್ಬರು ಪರಮ ಶತ್ರುಗಳ ನಡುವಿನ ಯುದ್ಧವನ್ನು ನಿಲ್ಲಿಸಿದ್ದೇನೆ ಎಂಬ ತನ್ನ ಹೇಳಿಕೆಯನ್ನು ಪುನರಾವರ್ತಿಸಿದ ಟ್ರಂಪ್, “ಇವು ಎರಡು ಪರಮಾಣು ರಾಷ್ಟ್ರಗಳು. ಅವರು ನಿಜವಾಗಿಯೂ ಅದನ್ನು ಬಳಸಲು ಹೊರಟಿದ್ದರು. ನಾನು ಪ್ರಧಾನಿ ಮೋದಿಯವರಿಗೆ ಕರೆ ಮಾಡಿ, ನಾವು ನಿಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ. ಅದಕ್ಕವರು, ಇಲ್ಲ, ಇಲ್ಲ, ನಾವು ವ್ಯಾಪಾರ ಒಪ್ಪಂದ ಮಾಡಿಕೊಳ್ಳಬೇಕು ಎಂದರು. ನಾನು, ಇಲ್ಲ ನಮಗೆ ಸಾಧ್ಯವಿಲ್ಲ ಎಂದು ಮತ್ತೆ ಹೇಳಿದೆ. ನೀವು ಪಾಕಿಸ್ತಾನದೊಂದಿಗೆ ಯುದ್ಧವನ್ನು ಪ್ರಾರಂಭಿಸುತ್ತಿದ್ದೀರಿ ಎಂದೆ. ತದನಂತರ ನಾನು ಪಾಕಿಸ್ತಾನಕ್ಕೆ ಕರೆ ಮಾಡಿ, ನೀವು ಭಾರತದೊಂದಿಗೆ ಹೋರಾಡುತ್ತಿರುವುದರಿಂದ ನಾವು ನಿಮ್ಮೊಂದಿಗೆ ವ್ಯಾಪಾರ ಮಾಡುವುದಿಲ್ಲ ಎಂದು ಹೇಳಿದೆ. ಅವರು, ‘ಇಲ್ಲ, ಇಲ್ಲ ನೀವು ನಮಗೆ ಹೋರಾಡಲು ಬಿಡಬೇಕು’ ಎಂದರು. ಅವರಿಬ್ಬರೂ ಹಾಗೆ ಹೇಳಿದರು, ಅವರು ಬಲಿಷ್ಠ ಜನರು” ಎಂದಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಎರಡೂ ನಾಯಕರು ಎರಡು ದಿನಗಳ ನಂತರ ತನಗೆ ಕರೆ ಮಾಡಿ ಹೋರಾಟ ನಿಲ್ಲಿಸಿದರು ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

“ಎರಡು ದಿನದ ಬಳಿಕ ಅವರು ನನಗೆ ಕರೆ ಮಾಡಿ ಯುದ್ದ ನಿಲ್ಲಿಸಿದ್ದೇವೆ, ನಮಗೆ ಅರ್ಥವಾಯಿತು ಎಂದು ಹೇಳಿದರು. ಇದು ಹೇಗೆ ಸಾಧ್ಯ? ಎಷ್ಟು ಅದ್ಬುತವಲ್ಲವೇ? ಬೈಡೆನ್ ಹೀಗೆ ಮಾಡುತ್ತಿದ್ದರು ಎಂದು ನೀವು ಭಾವಿಸುತ್ತೀರಾ?” ಎಂದು ಟ್ರಂಪ್ ಪ್ರಶ್ನಿಸಿದ್ದಾರೆ.

ಇದಕ್ಕೂ ಕೆಲವು ಗಂಟೆಗಳ ಮೊದಲು ಟೋಕಿಯೊದಲ್ಲಿ ಮಾತನಾಡಿದ್ದ ಟ್ರಂಪ್, “24 ಗಂಟೆಗಳಲ್ಲಿ ಯುದ್ಧ ನಿಲ್ಲಿಸುವಲ್ಲಿ ಯಶಸ್ವಿಯಾದೆ” ಎಂದು ಹೇಳಿದ್ದರು.

ಮಂಗಳವಾರ ಟೋಕಿಯೊದಲ್ಲಿ ವ್ಯಾಪಾರ ನಾಯಕರೊಂದಿಗೆ ನಡೆದ ಭೋಜನಕೂಟದಲ್ಲಿ ಮಾತನಾಡಿದ್ದ ಟ್ರಂಪ್, “ಭಾರತ-ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ‘ಏಳು ಹೊಚ್ಚ ಹೊಸ’ ವಿಮಾನಗಳನ್ನು ಹೊಡೆದುರುಳಿಸಲಾಯಿತು ಎಂದಿದ್ದರು. ಅವು ಯಾವ ದೇಶಕ್ಕೆ ಸೇರಿದವು ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಸುಡಾನ್‌ನ ಅಲ್‌-ಪಾಶೆರ್ ನಿಯಂತ್ರಣಕ್ಕೆ ಪಡೆದ ಅರೆಸೈನಿಕ ಪಡೆ ಆರ್‌ಎಸ್‌ಎಫ್‌ : ವ್ಯಾಪಕ ಹಿಂಸಾಚಾರದ ವರದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್: ಅಂತರ್ಜಾತಿ ವಿವಾಹ, ಸೊಸೆಯ ಕುಟುಂಬದವರಿಂದ ದಲಿತ ವ್ಯಕ್ತಿ ಕೊಲೆ.

ವಧುವಿನ ಕುಟುಂಬವು ಈ ಹಿಂದೆ ವರನ ತಂದೆಯನ್ನು ಬೆದರಿಸಿ ಸೊಸೆಯನ್ನು ತಮ್ಮ ಮನೆಗೆ ವಾಪಸ್‌ ಕಳುಹಿಸಲು ಒತ್ತಾಯಿಸಿತ್ತು ಎಂದು ವರನ ಕುಟುಂಬದವರು ಆರೋಪಿಸಿದ್ದಾರೆ. ಗುಜರಾತ್‌ ನ ನರೋಲ್‌ ಬಳಿ ಅಂತರ್ಜಾತಿ ವಿವಾಹವಾದ ನಂತರ ಮೇಲ್ಜಾತಿಗೆ...

ಕನ್ನಡ ವಿರೋಧಿ ಚಟುವಟಿಕೆ: ಎಂಇಎಸ್ ನಿಷೇಧಕ್ಕೆ ಗಂಭೀರ ಚರ್ಚೆ-ಸತೀಶ ಜಾರಕಿಹೊಳಿ

ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸ ದಿನದಂದೆ ನಾಡ ವಿರೋಧಿ ಘೋಷಣೆ ಹಾಕಿದ ಎಂ.ಇ.ಎಸ್ ಸಂಘಟನೆಯನ್ನು ನಿಷೇಧ ಮಾಡುವ ಬಗ್ಗೆ ಗಂಭೀರವಾಗಿ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.  ನಗರದಲ್ಲಿ ಶನಿವಾರ ರಾಜ್ಯೋತ್ಸವ...

ಬಿಹಾರದ ಒಂದೇ ಎಂಜಿನ್ ಸರ್ಕಾರ ಕೇಂದ್ರದಿಂದ ನಡೆಸಲ್ಪಡುತ್ತಿದೆ: ಪ್ರಿಯಾಂಕಾ ಗಾಂಧಿ

ಮುಂಬರುವ ರಾಜ್ಯ ಚುನಾವಣೆಯಲ್ಲಿ ಬುದ್ಧಿವಂತಿಕೆಯಿಂದ ಮತ ಚಲಾಯಿಸುವಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಶನಿವಾರ ಬಿಹಾರದ ಜನರಲ್ಲಿ ಮನವಿ ಮಾಡಿದರು. ಬೇಗುಸರಾಯ್‌ನಲ್ಲಿ ನಡೆದ ರಾಜಕೀಯ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, "ಬಿಹಾರದ ಎನ್‌ಡಿಎ ಸರ್ಕಾರದ ಉದ್ದೇಶಗಳು...

‘ನನ್ನ ಮಾತು ಕೇಳಿದ್ದರೆ ಯಡಿಯೂರಪ್ಪ ಜೈಲಿಗೆ ಹೋಗುತ್ತಿರಲಿಲ್ಲ’: ಜಮೀರ್ ಅಹಮದ್ ಖಾನ್

ಹೊಸಪೇಟೆ: ಬಿ.ಎಸ್. ಯಡಿಯೂರಪ್ಪ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ, ಹಣಕಾಸು ನಿರ್ವಹಣೆ ವಿಚಾರಣೆಯಲ್ಲಿ ಸಿದ್ದರಾಮಯ್ಯ ಅವರ ಸಲಹೆ ಪಡೆಯುವಂತೆ ಸೂಚಿಸಿದ್ದೆ, ನನ್ನ ಮಾತನ್ನು ತಿರಸ್ಕರಿಸಿ, ಯಡಿಯೂರಪ್ಪನವರು ಜೈಲಿಗೆ ಹೋಗುವಂತಾಯಿತು. ನನ್ನ ಮಾತು...

ಮಸೀದಿ ಧ್ವಂಸಕ್ಕೆ ‘ಜೈಶ್ರೀರಾಮ್-ಜೈ ಬಜರಂಗಬಲಿ’ ಘೋಷಣೆ ಸಾಧನವಾಗಿ ಬಳಸಲಾಗುತ್ತಿದೆ: ಸ್ವಾಮಿ ಪ್ರಸಾದ್ ಮೌರ್ಯ

ಬಿಜೆಪಿ ಆಡಳಿತದಲ್ಲಿ ದಲಿತ ಮತ್ತು ಮುಸ್ಲಿಂ ಸಮುದಾಯಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ಉತ್ತರ ಪ್ರದೇಶದ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಈಗ ಜೈ ಶ್ರೀ...

ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಕಾಲ್ತುಳಿತ: ಆಯೋಜಕರ ಮೇಲೆ ಆರೋಪ ಹೊರಿಸಿದ ಆಂಧ್ರ ಮುಖ್ಯಮಂತ್ರಿ

ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗಾ ಪ್ರದೇಶದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಹತ್ತು ಮಂದಿ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡ ಘಟನೆಯ ಬಗ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ದೇವಸ್ಥಾನವು ಖಾಸಗಿ ವ್ಯಕ್ತಿಗೆ ಸೇರಿದ್ದು,...

ದೆಹಲಿ ವಿಷಕಾರಿ ಗಾಳಿ: ಪ್ರತಿ ಏಳು ಸಾವುಗಳಲ್ಲಿ ಒಂದು ಮಾಲಿನ್ಯಕ್ಕೆ ಸಂಬಂಧಿಸಿದ್ದು

ಆರೋಗ್ಯ ಮಾಪನ ಮತ್ತು ಮೌಲ್ಯಮಾಪನ ಸಂಸ್ಥೆ (ಐಎಚ್‌ಎಂಇ) ನಡೆಸಿದ ವಿಶ್ಲೇಷಣೆಯ ಪ್ರಕಾರ, ವಾಯು ಮಾಲಿನ್ಯವು ದೆಹಲಿಗೆ ಅತ್ಯಂತ ಮಾರಕ ಆರೋಗ್ಯ ಸಮಸ್ಯೆಯಾಗಿ ಮುಂದುವರೆದಿದೆ. ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಬೊಜ್ಜುಗಿಂತ ಹೆಚ್ಚಿನ ಜೀವಗಳನ್ನು...

ಫ್ಯಾಕ್ಟ್‌ಚೆಕ್ : ಮದ್ಯದ ನಶೆಯಲ್ಲಿ ಹುಲಿಯ ತಲೆ ಸವರಿಸಿದ ವ್ಯಕ್ತಿ…ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು?

ರಾತ್ರಿ ಹೊತ್ತು ರಸ್ತೆಯಲ್ಲಿ ಕುಳಿತಿರುವ ಹುಲಿಯೊಂದರ ತಲೆ ಸವರುವ ವ್ಯಕ್ತಿ, ತನ್ನ ಕೈಯ್ಯಲ್ಲಿದ್ದ ಮದ್ಯದ ಬಾಟಲಿಯಿಂದ ಹುಲಿಗೆ ಮದ್ಯ ಕುಡಿಸಲು ಯತ್ನಿಸಿದ 6 ಸೆಕೆಂಡುಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಇದು...

ಕನ್ನಡ ವಿರೋಧಿ ಚಟುವಟಿಕೆ: ಎಂಇಎಸ್ ನಿಷೇಧಕ್ಕೆ ಗಂಭೀರ ಚರ್ಚೆ: ಸತೀಶ ಜಾರಕಿಹೊಳಿ

ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸ ದಿನದಂದೆ ನಾಡ ವಿರೋಧಿ ಘೋಷಣೆ ಹಾಕಿದ ಎಂ.ಇ.ಎಸ್ ಸಂಘಟನೆಯನ್ನು ನಿಷೇಧ ಮಾಡುವ ಬಗ್ಗೆ ಗಂಭೀರವಾಗಿ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.  ನಗರದಲ್ಲಿ ಶನಿವಾರ ರಾಜ್ಯೋತ್ಸವ...

ದೆಹಲಿಯನ್ನು ‘ಇಂದ್ರಪ್ರಸ್ಥ’ ಎಂದು ಮರುನಾಮಕರಣ ಮಾಡಿ: ಕೇಂದ್ರಕ್ಕೆ ಬಿಜೆಪಿ ಸಂಸದನ ಒತ್ತಾಯ

ರಾಷ್ಟ್ರ ರಾಜಧಾನಿ ದೆಹಲಿಯನ್ನು ಮಹಾಭಾರತ ಯುಗದಲ್ಲಿ ಪಾಂಡವರು ಸ್ಥಾಪಿಸಿದರು ಎಂದು ನಂಬಲಾದ ಪ್ರಾಚೀನ ನಗರದ ಹೆಸರಾದ 'ಇಂದ್ರಪ್ರಸ್ಥ' ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿ ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ಕೇಂದ್ರ ಗೃಹ ಸಚಿವ...