Homeಅಂಕಣಗಳುನಮ್ಮ ತೋಟದ ಸಾಲಿಗೆ ನೀವೂ ಬನ್ನಿನಮ್ಮ ತೋಟದ ಸಾಲಿಗೆ ನೀವೂ ಬನ್ನಿ -6: ತೆಂಗಿನ ಗರಿಗಳ ಲೀಲೆ

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ -6: ತೆಂಗಿನ ಗರಿಗಳ ಲೀಲೆ

ತೆಂಗಿನ ಹಸಿ ಗರಿಗಳಿಂದ ಹರಟೆ ಚಾಪೆಯನ್ನೂ, ಸುಳಿಗರಿಗಳಿಂದ ಮಡಕೆ, ವಾಡೆ, ಮೂಡೆಗಳ ತಳಕ್ಕೆ ಬಳಸುತ್ತಿದ್ದ ಸಿಂಬೆಗಳನ್ನು ಸುಂದರವಾಗಿ ಹೆಣೆಯುತ್ತಿದ್ದ ಆನೆಗಾಲು ಸಿದ್ದಪ್ಪ ಒಂದು ಸುಂದರ ನೆನಪು.

- Advertisement -
- Advertisement -

ತೆಂಗಿನ ಮರವನ್ನು ಇನ್ನಿತರ ಮರಗಳಿಂದ ಬೇರ್ಪಡಿಸಿ ನೋಡುವಂತೆ ಮಾಡಿರುವುದೇ ಈ ಮರಕ್ಕಿರುವ ರೆಕ್ಕೆಯಂತಾ ಗರಿಗಳು. ಜನರು ಇದನ್ನು ಸರಿಯಾಗಿಯೇ ಗುರ್ತಿಸಿ ತೆಂಗಿನ ಎಲೆ ಎನ್ನದೆ ತೆಂಗಿನ ಗರಿ ಎಂದು ಕರೆದಿರುವುದು. ಗಾಳಿ ಬೀಸುವಾಗ ನೋಡಿದರೆ ಇವು ಎಲ್ಲಿಗೋ ಹಾರಿ ಹೋಗಲು ಸಿದ್ಧವಾಗುತ್ತಿವೆಯೇನೋ ಅನಿಸುತ್ತದೆ. ರೆಂಬೆ ಕೊಂಬೆ ಇಲ್ಲದ ಈ ಮರಕ್ಕೆ ಈ ಗರಿಗಳೇ ರೆಂಬೆಗಳು ಕೊಂಬೆಗಳು.

ಈಗ್ಗೆ ನಲವತ್ತು ಐವತ್ತು ವರ್ಷಗಳ ಹಿಂದೆ ತೆಂಗು ವಿರಳವಾಗಿದ್ದಾಗಲೂ ಅವುಗಳ ಗರಿಗಳನ್ನು ಮದುವೆ ಚಪ್ಪರಗಳ ರಚನೆಗೆ ಬಳಸುತ್ತಿದ್ದರು. ಅಡಕೆ ಮರ ಅಡಕೆ ದಬ್ಬೆಗಳನ್ನು ಬಳಸಿ ರೂಪಿಸುತ್ತಿದ್ದ ಚಪ್ಪರಕ್ಕೆ ಈ ಕಲಾಕೃತಿಯಂತಾ ಗರಿಗಳನ್ನು ಹೊದಿಸುತ್ತಿದ್ದರು. ಈ ಬಗೆಯ ಚಪ್ಪರವನ್ನು ನೋಡಲೆಂದೆ ಜನ ನಮ್ಮೂರಿನ ಮದುವೆಗಳಿಗೆ ಬರುತ್ತಿದ್ದರು. ನಮ್ಮೂರಿನ ಸಿದ್ದಕ್ಕನವರ ರಾಮಣ್ಣನವರು ಈ ಚಪ್ಪರ ಹಾಕಿಸುವ ಇಂಜಿನಿಯರ್‌ ಆಗಿದ್ದರು. ಒಂದಿಂಚೂ ಆಚೀಚೆ ಆಗದಂತೆ ಗಣಿತ ಶಾಸ್ತ್ರ ಪಂಡಿತರಂತೆ ಮುಂದೆ ನಿಂತು ಚಪ್ಪರ ಹಾಕಿಸುತ್ತಿದ್ದರು. ಇವರಿಗೆ ಸಾತ್‌ ನೀಡುತ್ತಿದ್ದ ನಮ್ಮ ಪೀಳಿಗೆಯ ಜನ ಅವರನ್ನು ಬಹುವಾಗಿ ನೆನಪಿಸಿಕೊಳ್ಳುತ್ತಾರೆ.

ತೆಂಗಿನ ಹಸಿ ಗರಿಗಳಿಂದ ಹರಟೆ ಚಾಪೆಯನ್ನೂ, ಸುಳಿಗರಿಗಳಿಂದ ಮಡಕೆ, ವಾಡೆ, ಮೂಡೆಗಳ ತಳಕ್ಕೆ ಬಳಸುತ್ತಿದ್ದ ಸಿಂಬೆಗಳನ್ನು ಸುಂದರವಾಗಿ ಹೆಣೆಯುತ್ತಿದ್ದ ಆನೆಗಾಲು ಸಿದ್ದಪ್ಪ ಒಂದು ಸುಂದರ ನೆನಪು. ನಮ್ಮ ಅಟ್ಟದ ಮೇಲೆ ಹುಡುಕಿದರೆ ಸಿದ್ದಪ್ಪ ಹೆಣೆದ ಸಿಂಬೆಗಳು ಅನಾಥ ಸ್ಥಿತಿಯಲ್ಲಿ ಸಿಕ್ಕಾವು. ಇಂಥಾ ಸಿದ್ದಪ್ಪ ಹೆಣೆದುಕೊಡುತ್ತಿದ್ದ ಹರಟೆ ಚಾಪೆಗಳ ಮೇಲೆ ಕೂರಿಸಿಕೊಂಡು ರಾತ್ರಿ ಆಕಾಶದ ಅಡಿಯಲ್ಲಿ ನಮ್ಮಜ್ಜಿ ಹೇಳುತ್ತಿದ್ದ ಕತೆಗಳ ಮಾಯಕ್ಕೆ ಏನು ಸಮ.

ಆಯ್ಕೆ ಮಾಡಿದ ಒಣ ತೆಂಗಿನ ಗರಿಗಳಿಂದ ಚಾಪೆ ಹೆಣೆದು ಕೃಷಿ ಉತ್ಪನ್ನಗಳನ್ನು ಒಣಗಲು ಹಾಕಲು ಬಳಸುತ್ತಿದ್ದರು. ಟಾರ್ಪಾಲು, ಪ್ಲಾಸ್ಟಿಕ್ ಶೀಟ್‌ ಗಳ ಬಳಕೆ ಇರಲೇ ಇಲ್ಲ. ಇಂಥ ಚಾಪೆಗಳನ್ನು ಹೆಣೆಯುವುದರಲ್ಲಿ ನಮ್ಮವ್ವನ್ನನ್ನು ಮೀರಿಸುವವರು ಇರಲಿಲ್ಲವೆಂದು ಆಗ ನಮ್ಮವ್ವನ ಸಹಚರರು ಹೇಳುತ್ತಿದ್ದುದನ್ನು ಕೇಳಿಸಿಕೊಂಡಿದ್ದೆ. ನಮ್ಮವ್ವನ ಈ ಚಾಪೆಗಳ ಹಣಿ ಅಗಲವಾಗಿಯೂ ದೃಢವಾಗಿಯೂ ಇರುತ್ತಿದ್ದವು. ಮಾತು ಮಾತಾಡುತ್ತಲೇ ಚಾಪೆಯ ಹಣಿಯ ಸಿಂಬೆಗಳು ಸುತ್ತಿಕೊಂಡು ದೊಡ್ಡವಾಗುತ್ತಿದ್ದವು. ಈ ಹಣಿಗಳನ್ನು ಸೇರಿಸಿ ಒಟ್ಟಿಗೆ ಚಾಪೆ ಹೊಲಿಯುವುದು ಒಂದು ಕಲೆ. ಈಚಲು ಗರಿಗಳಿಂದ ಚಾಪೆ ಹೆಣಿಯುತ್ತಿದ್ದರು, ನಿಜ ಹೇಳಬೇಕೆಂದರೆ ಇವು ತೆಂಗಿನ ಚಾಪೆಗಳಿಗಿಂತಲೂ ಬಾಳಿಕೆ ಬರುತ್ತಿದ್ದವು. ಇವೆಲ್ಲ ಈಗ ಗ್ರಾಮೀಣ ಚರಿತ್ರೆಯ ಹಳಹಳಿಕೆಗಳಾಗಿ ಮಾತ್ರ ಉಳಿದಿವೆ.

ಈಗ ಈ ಗರಿಗಳನ್ನು ನಾವೀಗ ಮಲ್ಚಿಂಗ್‌ ಮುಚ್ಚಿಕೆಯಾಗಿ ಬಳಸುತ್ತಿದ್ದೇವೆ. ಸ್ವಾಗೆ ಗರಿಗಳಲ್ಲಿರುವ ಕಡ್ಡಿಗೆ ಈಗ ಉತ್ತಮ ಬೆಲೆ ಬಂದಿದೆ, ಉತ್ತರ ಭಾರತದ ಕಸ ಗುಡಿಸುತ್ತಿರುವುದು ಈ ನಮ್ಮ ಭಾಗದ ಸ್ವಾಗೆ ಕಡ್ಡಿ ಪೊರಕೆಗಳೇ. ಆಮ್‌ ಆದ್ಮಿ ಪಕ್ಷದ ಸಿಂಬಲ್ ಮಟ್ಟಕೆ ಅದು ಬೆಳೆದು ನಿಂತಿರುವುದು ಯಾರಿಗೆ ತಾನೆ ಗೊತ್ತಿಲ್ಲ.

ಈ ತೆಂಗಿನ ಗರಿಗಳನ್ನು ಸುಟ್ಟು ಭಸ್ಮ ಮಾಡುತ್ತಿದ್ದ ರೈತರೀಗ ಅದರ ಲಾಭ ಕಂಡುಕೊಂಡಿದ್ದಾರೆ. ನೆಲದ ಪಸೆ ಆರದಂತೆ ಅವುಗಳನ್ನು ಹರಡಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಈ ಗರಿಗಳನ್ನು ಸಣ್ಣಗೆ ಸವರಿ ಹರಡುತ್ತಿದ್ದಾರೆ, ಏನಾದರೂ ಆಗಲಿ ಸುಡದಿದ್ದರೆ ಸಾಕು. ಸುಟ್ಟರೆ ಸುಡುಗಾಡು ಎಂಬುದನ್ನು ಮತ್ತೆ ಮತ್ತೆ ನೆನೆದರೆ ಅದೇ ಪುಣ್ಯ.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-4: ಸಹಜ ಕೃಷಿ ಅಲ್ಲ, ಉಳುಮೆ ಇಲ್ಲದ ತೋಟ ನಮ್ಮದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಟ್ರಕ್ ಚಾಲಕನಿಗೆ ಥಳಿಸಿ, ಸೆಗಣಿ ತಿನ್ನಿಸಿದ ಪ್ರಕರಣ : ಇಬ್ಬರು ಸ್ವಘೋಷಿತ ಗೋರಕ್ಷಕರ ಬಂಧನ

ಎಮ್ಮೆಗಳನ್ನು ಸಾಗಿಸುತ್ತಿದ್ದ ಟ್ರಕ್‌ ಚಾಲಕನಿಗೆ ಥಳಿಸಿ, ಸೆಗಣಿ ತಿನ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸ್ವಘೋಷಿತ ಗೋರಕ್ಷಕರನ್ನು ಮಹಾರಾಷ್ಟ್ರದ ಪುಣೆ ನಗರ ಪೊಲೀಸರು ಬಂಧಿಸಿದ್ದಾರೆ. ಬಿಪಾಶಾ ಅಲಿಯಾಸ್ ಆಕಾಶ್ ಮಾಣಿಕಂ ಮತ್ತು ಹೇಮಂತ್ ಗಾಯಕ್ವಾಡ್ ಬಂಧಿತರು....

ದೆಹಲಿ ಗಲಭೆ ಪ್ರಕರಣ : ಶಾರ್ಜೀಲ್ ಇಮಾಮ್‌ಗೆ 10 ದಿನಗಳ ಮಧ್ಯಂತರ ಜಾಮೀನು

ದೆಹಲಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಸಂಶೋಧನಾ ವಿದ್ಯಾರ್ಥಿ ಶಾರ್ಜೀಲ್ ಇಮಾಮ್ ಅವರಿಗೆ ನ್ಯಾಯಾಲಯ ಸೋಮವಾರ (ಮಾ.9) 10 ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ತನ್ನ ಸಹೋದರನ...

‘ಬಲಾಢ್ಯರ ಓಲೈಕೆಗಾಗಿ ಸಾಮಾಜಿಕ ನ್ಯಾಯದ ಸಮಾಧಿ..’; ಬಜೆಟ್‌ನಲ್ಲಿ ಅಲೆಮಾರಿ ಸಮುದಾಯಗಳಿಗೆ ಅನ್ಯಾಯ

'ಬಲಾಢ್ಯರ ಓಲೈಕೆಗಾಗಿ ಸಾಮಾಜಿಕ ನ್ಯಾಯದ ಸಮಾಧಿ ಮಾಡಲಾಗಿದೆ; ಬಜೆಟ್‌ನಲ್ಲಿ ಅಲೆಮಾರಿ ಸಮುದಾಯಗಳಿಗೆ ಅನ್ಯಾಯ ಮಾಡಲಾಗಿದೆ ಎಂದು 'ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟ' ಸಿದ್ದರಾಮಯ್ಯ ಅವರ ಬಜೆಟ್‌ ಕುರಿತು ಅಸಮಾಧಾನ ಹೊರಹಾಕಿದೆ. ಈ ಕುರಿತು...

ಒಳಮೀಸಲಾತಿ ಇಲ್ಲದೇ ಉದ್ಯೋಗ ಭರ್ತಿಗೆ ವಿರೋಧ; ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ

ಒಳಮೀಸಲಾತಿ ಇಲ್ಲದೇ 56 ಸಾವಿರ ಉದ್ಯೋಗ ಭರ್ತಿಗೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಒಳಮೀಸಲಾತಿ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದು, ಇದೇ ತಿಂಗಳ 12 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. ಈ...

ನಾಸಿರ್–ಜುನೈದ್ ಕೊಲೆ ಪ್ರಕರಣ: ಜಾಮೀನಿನ ಮೇಲೆ ಹೊರಬಂದ ಹಿಂದುತ್ವ ಕಾರ್ಯಕರ್ತ ಮೋನು ಮಾನೇಸರ್ ಗೆ ಗುರುಗ್ರಾಮದಲ್ಲಿ ಭವ್ಯ ಸ್ವಾಗತ 

2023 ರಲ್ಲಿ ಹರಿಯಾಣದಲ್ಲಿ ಗೋರಕ್ಷಣೆ ಹೆಸರಿನಲ್ಲಿ ಇಬ್ಬರು ಮುಸ್ಲಿಂ ಪುರುಷರ ಹತ್ಯೆ ಪ್ರಕರಣದ ಆರೋಪಿಯಾಗಿರುವ ಹಿಂದುತ್ವ ಕಾರ್ಯಕರ್ತ ಮೋನು ಮಾನೇಸರ್ ಅವರಿಗೆ ರಾಜಸ್ಥಾನ ಹೈಕೋರ್ಟ್ ಜಾಮೀನು ನೀಡಿದ ನಂತರ ಶನಿವಾರ ಸಂಜೆ ಭರತ್‌ಪುರ...

ಪಶ್ಚಿಮ ಏಷ್ಯಾ ಸಂಘರ್ಷ: ಇರಾನ್ ನಾಯಕರನ್ನು ಗುರಿಯಾಗಿಸುವ ಇಸ್ರೇಲ್ ಬೆದರಿಕೆಗೆ ಚೀನಾ ವಿರೋಧ

ಇರಾನ್‌ನಲ್ಲಿ ಸರ್ವೋಚ್ಛ ನಾಯಕರಾಗಿ ಯಾರೇ ಆಯ್ಕೆಯಾದರು ಅವರು ನಮ್ಮ ಮುಂದಿನ ಗುರಿಯಾಗಿರುತ್ತಾರೆ ಎಂದು ಬೆದರಿಕೆ ಹಾಕಿದ್ದ ಇಸ್ರೇಲ್ ನಡೆಯನ್ನು ಚೀನಾ ಖಂಡಿಸಿದೆ. ಸದ್ಯ ಸರ್ವೋಚ್ಛ ನಾಯಕರಾಗಿ ನೇಮಕವಾಗಿರುವ ಅಲಿ ಖಮೇನಿ ಅವರ ಪುತ್ರ...

ಪಶ್ಚಿಮ ಏಷ್ಯಾ ಸಂಘರ್ಷ ಕುರಿತು ಚರ್ಚೆಗೆ ಒತ್ತಾಯ : ಸಂಸತ್ ಆವರಣದಲ್ಲಿ ವಿಪಕ್ಷ ಸಂಸದರಿಂದ ಪ್ರತಿಭಟನೆ

ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಚರ್ಚೆಗೆ ಒತ್ತಾಯಿಸಿ ಮತ್ತು ಅದಕ್ಕೆ ಸಂಬಂಧಿಸಿದ ನಿರ್ಣಾಯಕ ವಿಷಯಗಳ ಬಗ್ಗೆ ಸರ್ಕಾರ ಮೌನ ವಹಿಸಿರುವುದನ್ನು ಖಂಡಿಸಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ರಾಹುಲ್...

ಇರಾನಿನ ತೈಲ ಸಂಗ್ರಹಾಗಾರಗಳ ಮೇಲೆ ಇಸ್ರೇಲ್ ದಾಳಿ; ಅಮೆರಿಕಾ ಅಸಮಾಧಾನಗೊಂಡಿರುವುದಾಗಿ ವರದಿ

ವಾಷಿಂಗ್ಟನ್, ಡಿಸಿ: ಇರಾನಿನ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ದೊಡ್ಡ ಪ್ರಮಾಣದ ವೈಮಾನಿಕ ದಾಳಿಯ ಬಗ್ಗೆ ಅಮೆರಿಕ ಮತ್ತು ಇಸ್ರೇಲ್ ನಡುವೆ ಭಿನ್ನಾಭಿಪ್ರಾಯ ಹೊರಹೊಮ್ಮಿದೆ ಎಂದು ವರದಿಯಾಗಿದೆ. ಅಮೆರಿಕದ ಅಧಿಕಾರಿಗಳು ಕಾರ್ಯಾಚರಣೆಯ...

ಪಶ್ಚಿಮ ಏಷ್ಯಾ ಸಂಘರ್ಷ ಕುರಿತು ಚರ್ಚೆಗೆ ಪ್ರತಿಪಕ್ಷಗಳು ಪಟ್ಟು : ಲೋಕಸಭೆ ಕಲಾಪ ಮುಂದೂಡಿಕೆ

ಲೋಕಸಭೆಯ ಬಜೆಟ್ ಅಧಿವೇಶನದ ಎರಡನೇ ಹಂತದ ಕಾರ್ಯ ಕಲಾಪಗಳು ಸೋಮವಾರ (ಮಾ.9) ಭಾರೀ ಗದ್ದಲದೊಂದಿಗೆ ಆರಂಭಗೊಂಡಿತು. ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಕುರಿತು ಚರ್ಚಿಸಲು ಆಗ್ರಹಿಸಿ ಪ್ರತಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸಿದ ಹಿನ್ನೆಲೆ, ಸ್ಪೀಕರ್...

Parliament Budget Session | ಇಂಧನ ಭದ್ರತೆ ಕುರಿತು ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾಪ : ರಾಜ್ಯಸಭೆಯಲ್ಲಿ ಗದ್ದಲ

ಸಂಸತ್ತಿನ 2026-27ನೇ ಸಾಲಿನ ಬಜೆಟ್ ಅಧಿವೇಶನದ ಎರಡನೇ ಹಂತದ ಕಾರ್ಯ ಕಲಾಪಗಳು ಸೋಮವಾರದಿಂದ (ಮಾ.9) ಪ್ರಾರಂಭಗೊಂಡಿವೆ. ಮೊದಲ ದಿನ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅವರು...