Homeಅಂಕಣಗಳುನಮ್ಮ ತೋಟದ ಸಾಲಿಗೆ ನೀವೂ ಬನ್ನಿನಮ್ಮ ತೋಟದ ಸಾಲಿಗೆ ನೀವೂ ಬನ್ನಿ -6: ತೆಂಗಿನ ಗರಿಗಳ ಲೀಲೆ

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ -6: ತೆಂಗಿನ ಗರಿಗಳ ಲೀಲೆ

ತೆಂಗಿನ ಹಸಿ ಗರಿಗಳಿಂದ ಹರಟೆ ಚಾಪೆಯನ್ನೂ, ಸುಳಿಗರಿಗಳಿಂದ ಮಡಕೆ, ವಾಡೆ, ಮೂಡೆಗಳ ತಳಕ್ಕೆ ಬಳಸುತ್ತಿದ್ದ ಸಿಂಬೆಗಳನ್ನು ಸುಂದರವಾಗಿ ಹೆಣೆಯುತ್ತಿದ್ದ ಆನೆಗಾಲು ಸಿದ್ದಪ್ಪ ಒಂದು ಸುಂದರ ನೆನಪು.

- Advertisement -
- Advertisement -

ತೆಂಗಿನ ಮರವನ್ನು ಇನ್ನಿತರ ಮರಗಳಿಂದ ಬೇರ್ಪಡಿಸಿ ನೋಡುವಂತೆ ಮಾಡಿರುವುದೇ ಈ ಮರಕ್ಕಿರುವ ರೆಕ್ಕೆಯಂತಾ ಗರಿಗಳು. ಜನರು ಇದನ್ನು ಸರಿಯಾಗಿಯೇ ಗುರ್ತಿಸಿ ತೆಂಗಿನ ಎಲೆ ಎನ್ನದೆ ತೆಂಗಿನ ಗರಿ ಎಂದು ಕರೆದಿರುವುದು. ಗಾಳಿ ಬೀಸುವಾಗ ನೋಡಿದರೆ ಇವು ಎಲ್ಲಿಗೋ ಹಾರಿ ಹೋಗಲು ಸಿದ್ಧವಾಗುತ್ತಿವೆಯೇನೋ ಅನಿಸುತ್ತದೆ. ರೆಂಬೆ ಕೊಂಬೆ ಇಲ್ಲದ ಈ ಮರಕ್ಕೆ ಈ ಗರಿಗಳೇ ರೆಂಬೆಗಳು ಕೊಂಬೆಗಳು.

ಈಗ್ಗೆ ನಲವತ್ತು ಐವತ್ತು ವರ್ಷಗಳ ಹಿಂದೆ ತೆಂಗು ವಿರಳವಾಗಿದ್ದಾಗಲೂ ಅವುಗಳ ಗರಿಗಳನ್ನು ಮದುವೆ ಚಪ್ಪರಗಳ ರಚನೆಗೆ ಬಳಸುತ್ತಿದ್ದರು. ಅಡಕೆ ಮರ ಅಡಕೆ ದಬ್ಬೆಗಳನ್ನು ಬಳಸಿ ರೂಪಿಸುತ್ತಿದ್ದ ಚಪ್ಪರಕ್ಕೆ ಈ ಕಲಾಕೃತಿಯಂತಾ ಗರಿಗಳನ್ನು ಹೊದಿಸುತ್ತಿದ್ದರು. ಈ ಬಗೆಯ ಚಪ್ಪರವನ್ನು ನೋಡಲೆಂದೆ ಜನ ನಮ್ಮೂರಿನ ಮದುವೆಗಳಿಗೆ ಬರುತ್ತಿದ್ದರು. ನಮ್ಮೂರಿನ ಸಿದ್ದಕ್ಕನವರ ರಾಮಣ್ಣನವರು ಈ ಚಪ್ಪರ ಹಾಕಿಸುವ ಇಂಜಿನಿಯರ್‌ ಆಗಿದ್ದರು. ಒಂದಿಂಚೂ ಆಚೀಚೆ ಆಗದಂತೆ ಗಣಿತ ಶಾಸ್ತ್ರ ಪಂಡಿತರಂತೆ ಮುಂದೆ ನಿಂತು ಚಪ್ಪರ ಹಾಕಿಸುತ್ತಿದ್ದರು. ಇವರಿಗೆ ಸಾತ್‌ ನೀಡುತ್ತಿದ್ದ ನಮ್ಮ ಪೀಳಿಗೆಯ ಜನ ಅವರನ್ನು ಬಹುವಾಗಿ ನೆನಪಿಸಿಕೊಳ್ಳುತ್ತಾರೆ.

ತೆಂಗಿನ ಹಸಿ ಗರಿಗಳಿಂದ ಹರಟೆ ಚಾಪೆಯನ್ನೂ, ಸುಳಿಗರಿಗಳಿಂದ ಮಡಕೆ, ವಾಡೆ, ಮೂಡೆಗಳ ತಳಕ್ಕೆ ಬಳಸುತ್ತಿದ್ದ ಸಿಂಬೆಗಳನ್ನು ಸುಂದರವಾಗಿ ಹೆಣೆಯುತ್ತಿದ್ದ ಆನೆಗಾಲು ಸಿದ್ದಪ್ಪ ಒಂದು ಸುಂದರ ನೆನಪು. ನಮ್ಮ ಅಟ್ಟದ ಮೇಲೆ ಹುಡುಕಿದರೆ ಸಿದ್ದಪ್ಪ ಹೆಣೆದ ಸಿಂಬೆಗಳು ಅನಾಥ ಸ್ಥಿತಿಯಲ್ಲಿ ಸಿಕ್ಕಾವು. ಇಂಥಾ ಸಿದ್ದಪ್ಪ ಹೆಣೆದುಕೊಡುತ್ತಿದ್ದ ಹರಟೆ ಚಾಪೆಗಳ ಮೇಲೆ ಕೂರಿಸಿಕೊಂಡು ರಾತ್ರಿ ಆಕಾಶದ ಅಡಿಯಲ್ಲಿ ನಮ್ಮಜ್ಜಿ ಹೇಳುತ್ತಿದ್ದ ಕತೆಗಳ ಮಾಯಕ್ಕೆ ಏನು ಸಮ.

ಆಯ್ಕೆ ಮಾಡಿದ ಒಣ ತೆಂಗಿನ ಗರಿಗಳಿಂದ ಚಾಪೆ ಹೆಣೆದು ಕೃಷಿ ಉತ್ಪನ್ನಗಳನ್ನು ಒಣಗಲು ಹಾಕಲು ಬಳಸುತ್ತಿದ್ದರು. ಟಾರ್ಪಾಲು, ಪ್ಲಾಸ್ಟಿಕ್ ಶೀಟ್‌ ಗಳ ಬಳಕೆ ಇರಲೇ ಇಲ್ಲ. ಇಂಥ ಚಾಪೆಗಳನ್ನು ಹೆಣೆಯುವುದರಲ್ಲಿ ನಮ್ಮವ್ವನ್ನನ್ನು ಮೀರಿಸುವವರು ಇರಲಿಲ್ಲವೆಂದು ಆಗ ನಮ್ಮವ್ವನ ಸಹಚರರು ಹೇಳುತ್ತಿದ್ದುದನ್ನು ಕೇಳಿಸಿಕೊಂಡಿದ್ದೆ. ನಮ್ಮವ್ವನ ಈ ಚಾಪೆಗಳ ಹಣಿ ಅಗಲವಾಗಿಯೂ ದೃಢವಾಗಿಯೂ ಇರುತ್ತಿದ್ದವು. ಮಾತು ಮಾತಾಡುತ್ತಲೇ ಚಾಪೆಯ ಹಣಿಯ ಸಿಂಬೆಗಳು ಸುತ್ತಿಕೊಂಡು ದೊಡ್ಡವಾಗುತ್ತಿದ್ದವು. ಈ ಹಣಿಗಳನ್ನು ಸೇರಿಸಿ ಒಟ್ಟಿಗೆ ಚಾಪೆ ಹೊಲಿಯುವುದು ಒಂದು ಕಲೆ. ಈಚಲು ಗರಿಗಳಿಂದ ಚಾಪೆ ಹೆಣಿಯುತ್ತಿದ್ದರು, ನಿಜ ಹೇಳಬೇಕೆಂದರೆ ಇವು ತೆಂಗಿನ ಚಾಪೆಗಳಿಗಿಂತಲೂ ಬಾಳಿಕೆ ಬರುತ್ತಿದ್ದವು. ಇವೆಲ್ಲ ಈಗ ಗ್ರಾಮೀಣ ಚರಿತ್ರೆಯ ಹಳಹಳಿಕೆಗಳಾಗಿ ಮಾತ್ರ ಉಳಿದಿವೆ.

ಈಗ ಈ ಗರಿಗಳನ್ನು ನಾವೀಗ ಮಲ್ಚಿಂಗ್‌ ಮುಚ್ಚಿಕೆಯಾಗಿ ಬಳಸುತ್ತಿದ್ದೇವೆ. ಸ್ವಾಗೆ ಗರಿಗಳಲ್ಲಿರುವ ಕಡ್ಡಿಗೆ ಈಗ ಉತ್ತಮ ಬೆಲೆ ಬಂದಿದೆ, ಉತ್ತರ ಭಾರತದ ಕಸ ಗುಡಿಸುತ್ತಿರುವುದು ಈ ನಮ್ಮ ಭಾಗದ ಸ್ವಾಗೆ ಕಡ್ಡಿ ಪೊರಕೆಗಳೇ. ಆಮ್‌ ಆದ್ಮಿ ಪಕ್ಷದ ಸಿಂಬಲ್ ಮಟ್ಟಕೆ ಅದು ಬೆಳೆದು ನಿಂತಿರುವುದು ಯಾರಿಗೆ ತಾನೆ ಗೊತ್ತಿಲ್ಲ.

ಈ ತೆಂಗಿನ ಗರಿಗಳನ್ನು ಸುಟ್ಟು ಭಸ್ಮ ಮಾಡುತ್ತಿದ್ದ ರೈತರೀಗ ಅದರ ಲಾಭ ಕಂಡುಕೊಂಡಿದ್ದಾರೆ. ನೆಲದ ಪಸೆ ಆರದಂತೆ ಅವುಗಳನ್ನು ಹರಡಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಈ ಗರಿಗಳನ್ನು ಸಣ್ಣಗೆ ಸವರಿ ಹರಡುತ್ತಿದ್ದಾರೆ, ಏನಾದರೂ ಆಗಲಿ ಸುಡದಿದ್ದರೆ ಸಾಕು. ಸುಟ್ಟರೆ ಸುಡುಗಾಡು ಎಂಬುದನ್ನು ಮತ್ತೆ ಮತ್ತೆ ನೆನೆದರೆ ಅದೇ ಪುಣ್ಯ.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-4: ಸಹಜ ಕೃಷಿ ಅಲ್ಲ, ಉಳುಮೆ ಇಲ್ಲದ ತೋಟ ನಮ್ಮದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...