Homeಅಂಕಣಗಳುನಮ್ಮ ತೋಟದ ಸಾಲಿಗೆ ನೀವೂ ಬನ್ನಿನಮ್ಮ ತೋಟದ ಸಾಲಿಗೆ ನೀವೂ ಬನ್ನಿ -6: ತೆಂಗಿನ ಗರಿಗಳ ಲೀಲೆ

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ -6: ತೆಂಗಿನ ಗರಿಗಳ ಲೀಲೆ

ತೆಂಗಿನ ಹಸಿ ಗರಿಗಳಿಂದ ಹರಟೆ ಚಾಪೆಯನ್ನೂ, ಸುಳಿಗರಿಗಳಿಂದ ಮಡಕೆ, ವಾಡೆ, ಮೂಡೆಗಳ ತಳಕ್ಕೆ ಬಳಸುತ್ತಿದ್ದ ಸಿಂಬೆಗಳನ್ನು ಸುಂದರವಾಗಿ ಹೆಣೆಯುತ್ತಿದ್ದ ಆನೆಗಾಲು ಸಿದ್ದಪ್ಪ ಒಂದು ಸುಂದರ ನೆನಪು.

- Advertisement -
- Advertisement -

ತೆಂಗಿನ ಮರವನ್ನು ಇನ್ನಿತರ ಮರಗಳಿಂದ ಬೇರ್ಪಡಿಸಿ ನೋಡುವಂತೆ ಮಾಡಿರುವುದೇ ಈ ಮರಕ್ಕಿರುವ ರೆಕ್ಕೆಯಂತಾ ಗರಿಗಳು. ಜನರು ಇದನ್ನು ಸರಿಯಾಗಿಯೇ ಗುರ್ತಿಸಿ ತೆಂಗಿನ ಎಲೆ ಎನ್ನದೆ ತೆಂಗಿನ ಗರಿ ಎಂದು ಕರೆದಿರುವುದು. ಗಾಳಿ ಬೀಸುವಾಗ ನೋಡಿದರೆ ಇವು ಎಲ್ಲಿಗೋ ಹಾರಿ ಹೋಗಲು ಸಿದ್ಧವಾಗುತ್ತಿವೆಯೇನೋ ಅನಿಸುತ್ತದೆ. ರೆಂಬೆ ಕೊಂಬೆ ಇಲ್ಲದ ಈ ಮರಕ್ಕೆ ಈ ಗರಿಗಳೇ ರೆಂಬೆಗಳು ಕೊಂಬೆಗಳು.

ಈಗ್ಗೆ ನಲವತ್ತು ಐವತ್ತು ವರ್ಷಗಳ ಹಿಂದೆ ತೆಂಗು ವಿರಳವಾಗಿದ್ದಾಗಲೂ ಅವುಗಳ ಗರಿಗಳನ್ನು ಮದುವೆ ಚಪ್ಪರಗಳ ರಚನೆಗೆ ಬಳಸುತ್ತಿದ್ದರು. ಅಡಕೆ ಮರ ಅಡಕೆ ದಬ್ಬೆಗಳನ್ನು ಬಳಸಿ ರೂಪಿಸುತ್ತಿದ್ದ ಚಪ್ಪರಕ್ಕೆ ಈ ಕಲಾಕೃತಿಯಂತಾ ಗರಿಗಳನ್ನು ಹೊದಿಸುತ್ತಿದ್ದರು. ಈ ಬಗೆಯ ಚಪ್ಪರವನ್ನು ನೋಡಲೆಂದೆ ಜನ ನಮ್ಮೂರಿನ ಮದುವೆಗಳಿಗೆ ಬರುತ್ತಿದ್ದರು. ನಮ್ಮೂರಿನ ಸಿದ್ದಕ್ಕನವರ ರಾಮಣ್ಣನವರು ಈ ಚಪ್ಪರ ಹಾಕಿಸುವ ಇಂಜಿನಿಯರ್‌ ಆಗಿದ್ದರು. ಒಂದಿಂಚೂ ಆಚೀಚೆ ಆಗದಂತೆ ಗಣಿತ ಶಾಸ್ತ್ರ ಪಂಡಿತರಂತೆ ಮುಂದೆ ನಿಂತು ಚಪ್ಪರ ಹಾಕಿಸುತ್ತಿದ್ದರು. ಇವರಿಗೆ ಸಾತ್‌ ನೀಡುತ್ತಿದ್ದ ನಮ್ಮ ಪೀಳಿಗೆಯ ಜನ ಅವರನ್ನು ಬಹುವಾಗಿ ನೆನಪಿಸಿಕೊಳ್ಳುತ್ತಾರೆ.

ತೆಂಗಿನ ಹಸಿ ಗರಿಗಳಿಂದ ಹರಟೆ ಚಾಪೆಯನ್ನೂ, ಸುಳಿಗರಿಗಳಿಂದ ಮಡಕೆ, ವಾಡೆ, ಮೂಡೆಗಳ ತಳಕ್ಕೆ ಬಳಸುತ್ತಿದ್ದ ಸಿಂಬೆಗಳನ್ನು ಸುಂದರವಾಗಿ ಹೆಣೆಯುತ್ತಿದ್ದ ಆನೆಗಾಲು ಸಿದ್ದಪ್ಪ ಒಂದು ಸುಂದರ ನೆನಪು. ನಮ್ಮ ಅಟ್ಟದ ಮೇಲೆ ಹುಡುಕಿದರೆ ಸಿದ್ದಪ್ಪ ಹೆಣೆದ ಸಿಂಬೆಗಳು ಅನಾಥ ಸ್ಥಿತಿಯಲ್ಲಿ ಸಿಕ್ಕಾವು. ಇಂಥಾ ಸಿದ್ದಪ್ಪ ಹೆಣೆದುಕೊಡುತ್ತಿದ್ದ ಹರಟೆ ಚಾಪೆಗಳ ಮೇಲೆ ಕೂರಿಸಿಕೊಂಡು ರಾತ್ರಿ ಆಕಾಶದ ಅಡಿಯಲ್ಲಿ ನಮ್ಮಜ್ಜಿ ಹೇಳುತ್ತಿದ್ದ ಕತೆಗಳ ಮಾಯಕ್ಕೆ ಏನು ಸಮ.

ಆಯ್ಕೆ ಮಾಡಿದ ಒಣ ತೆಂಗಿನ ಗರಿಗಳಿಂದ ಚಾಪೆ ಹೆಣೆದು ಕೃಷಿ ಉತ್ಪನ್ನಗಳನ್ನು ಒಣಗಲು ಹಾಕಲು ಬಳಸುತ್ತಿದ್ದರು. ಟಾರ್ಪಾಲು, ಪ್ಲಾಸ್ಟಿಕ್ ಶೀಟ್‌ ಗಳ ಬಳಕೆ ಇರಲೇ ಇಲ್ಲ. ಇಂಥ ಚಾಪೆಗಳನ್ನು ಹೆಣೆಯುವುದರಲ್ಲಿ ನಮ್ಮವ್ವನ್ನನ್ನು ಮೀರಿಸುವವರು ಇರಲಿಲ್ಲವೆಂದು ಆಗ ನಮ್ಮವ್ವನ ಸಹಚರರು ಹೇಳುತ್ತಿದ್ದುದನ್ನು ಕೇಳಿಸಿಕೊಂಡಿದ್ದೆ. ನಮ್ಮವ್ವನ ಈ ಚಾಪೆಗಳ ಹಣಿ ಅಗಲವಾಗಿಯೂ ದೃಢವಾಗಿಯೂ ಇರುತ್ತಿದ್ದವು. ಮಾತು ಮಾತಾಡುತ್ತಲೇ ಚಾಪೆಯ ಹಣಿಯ ಸಿಂಬೆಗಳು ಸುತ್ತಿಕೊಂಡು ದೊಡ್ಡವಾಗುತ್ತಿದ್ದವು. ಈ ಹಣಿಗಳನ್ನು ಸೇರಿಸಿ ಒಟ್ಟಿಗೆ ಚಾಪೆ ಹೊಲಿಯುವುದು ಒಂದು ಕಲೆ. ಈಚಲು ಗರಿಗಳಿಂದ ಚಾಪೆ ಹೆಣಿಯುತ್ತಿದ್ದರು, ನಿಜ ಹೇಳಬೇಕೆಂದರೆ ಇವು ತೆಂಗಿನ ಚಾಪೆಗಳಿಗಿಂತಲೂ ಬಾಳಿಕೆ ಬರುತ್ತಿದ್ದವು. ಇವೆಲ್ಲ ಈಗ ಗ್ರಾಮೀಣ ಚರಿತ್ರೆಯ ಹಳಹಳಿಕೆಗಳಾಗಿ ಮಾತ್ರ ಉಳಿದಿವೆ.

ಈಗ ಈ ಗರಿಗಳನ್ನು ನಾವೀಗ ಮಲ್ಚಿಂಗ್‌ ಮುಚ್ಚಿಕೆಯಾಗಿ ಬಳಸುತ್ತಿದ್ದೇವೆ. ಸ್ವಾಗೆ ಗರಿಗಳಲ್ಲಿರುವ ಕಡ್ಡಿಗೆ ಈಗ ಉತ್ತಮ ಬೆಲೆ ಬಂದಿದೆ, ಉತ್ತರ ಭಾರತದ ಕಸ ಗುಡಿಸುತ್ತಿರುವುದು ಈ ನಮ್ಮ ಭಾಗದ ಸ್ವಾಗೆ ಕಡ್ಡಿ ಪೊರಕೆಗಳೇ. ಆಮ್‌ ಆದ್ಮಿ ಪಕ್ಷದ ಸಿಂಬಲ್ ಮಟ್ಟಕೆ ಅದು ಬೆಳೆದು ನಿಂತಿರುವುದು ಯಾರಿಗೆ ತಾನೆ ಗೊತ್ತಿಲ್ಲ.

ಈ ತೆಂಗಿನ ಗರಿಗಳನ್ನು ಸುಟ್ಟು ಭಸ್ಮ ಮಾಡುತ್ತಿದ್ದ ರೈತರೀಗ ಅದರ ಲಾಭ ಕಂಡುಕೊಂಡಿದ್ದಾರೆ. ನೆಲದ ಪಸೆ ಆರದಂತೆ ಅವುಗಳನ್ನು ಹರಡಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಈ ಗರಿಗಳನ್ನು ಸಣ್ಣಗೆ ಸವರಿ ಹರಡುತ್ತಿದ್ದಾರೆ, ಏನಾದರೂ ಆಗಲಿ ಸುಡದಿದ್ದರೆ ಸಾಕು. ಸುಟ್ಟರೆ ಸುಡುಗಾಡು ಎಂಬುದನ್ನು ಮತ್ತೆ ಮತ್ತೆ ನೆನೆದರೆ ಅದೇ ಪುಣ್ಯ.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-4: ಸಹಜ ಕೃಷಿ ಅಲ್ಲ, ಉಳುಮೆ ಇಲ್ಲದ ತೋಟ ನಮ್ಮದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...

ಮಧ್ಯಪ್ರದೇಶ| ವಂದೇ ಮಾತರಂ ಹಾಡಲು ನಿರಾಕರಣೆ; ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್

ಏಪ್ರಿಲ್ 8 ರಂದು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ನ ಬಜೆಟ್ ಅಧಿವೇಶನದಲ್ಲಿ ಧಾರ್ಮಿಕ ಮತ್ತು ಸಾಂವಿಧಾನಿಕ ಕಾರಣಗಳನ್ನು ಉಲ್ಲೇಖಿಸಿ ವಂದೇ ಮಾತರಂ ಹಾಡಲು ನಿರಾಕರಿಸಿದ್ದಕ್ಕಾಗಿ ಮಧ್ಯಪ್ರದೇಶ ಪೊಲೀಸರು ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್...

ನ್ಯಾಯಾಂಗ ಸೇವೆಗಳು, ಸರ್ಕಾರಿ ಸಮಿತಿಗಳಲ್ಲಿ ಶೇ. 50 ಮಹಿಳಾ ಪ್ರಾತಿನಿಧ್ಯ ಕೋರಿ ಪಿಐಎಲ್ : ವಜಾಗೊಳಿಸಿದ ಸುಪ್ರೀಂ ಕೋರ್ಟ್

ಸರ್ಕಾರಿ ಸಮಿತಿಗಳು ಮತ್ತು ನ್ಯಾಯಾಂಗ ಸೇವೆಯ ಖಾಲಿ ಇರುವ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಪ್ರಾತಿನಿಧ್ಯ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ ಗುರುವಾರ...

ರಷ್ಯಾ ತೈಲ ಖರೀದಿಸಲು ಭಾರತಕ್ಕೆ ನೀಡಿದ್ದ ಕಾಲಾವಕಾಶ ವಿಸ್ತರಿಸುವುದಿಲ್ಲ: ಅಮೆರಿಕ

ಇರಾನ್ ಮತ್ತು ರಷ್ಯಾದಿಂದ ತೈಲವನ್ನು ಖರೀದಿಸಲು ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಈವರೆಗೆ ನೀಡಲಾಗಿದ್ದ ನಿರ್ಬಂಧ ಸಡಿಲಿಕೆಯನ್ನು ಇನ್ನು ಮುಂದೆ ಮುಂದುವರಿಸುವುದಿಲ್ಲ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಬುಧವಾರ (ಏ.15)...