Homeಅಂಕಣಗಳುನಮ್ಮ ತೋಟದ ಸಾಲಿಗೆ ನೀವೂ ಬನ್ನಿನಮ್ಮ ತೋಟದ ಸಾಲಿಗೆ ನೀವೂ ಬನ್ನಿ -6: ತೆಂಗಿನ ಗರಿಗಳ ಲೀಲೆ

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ -6: ತೆಂಗಿನ ಗರಿಗಳ ಲೀಲೆ

ತೆಂಗಿನ ಹಸಿ ಗರಿಗಳಿಂದ ಹರಟೆ ಚಾಪೆಯನ್ನೂ, ಸುಳಿಗರಿಗಳಿಂದ ಮಡಕೆ, ವಾಡೆ, ಮೂಡೆಗಳ ತಳಕ್ಕೆ ಬಳಸುತ್ತಿದ್ದ ಸಿಂಬೆಗಳನ್ನು ಸುಂದರವಾಗಿ ಹೆಣೆಯುತ್ತಿದ್ದ ಆನೆಗಾಲು ಸಿದ್ದಪ್ಪ ಒಂದು ಸುಂದರ ನೆನಪು.

- Advertisement -
- Advertisement -

ತೆಂಗಿನ ಮರವನ್ನು ಇನ್ನಿತರ ಮರಗಳಿಂದ ಬೇರ್ಪಡಿಸಿ ನೋಡುವಂತೆ ಮಾಡಿರುವುದೇ ಈ ಮರಕ್ಕಿರುವ ರೆಕ್ಕೆಯಂತಾ ಗರಿಗಳು. ಜನರು ಇದನ್ನು ಸರಿಯಾಗಿಯೇ ಗುರ್ತಿಸಿ ತೆಂಗಿನ ಎಲೆ ಎನ್ನದೆ ತೆಂಗಿನ ಗರಿ ಎಂದು ಕರೆದಿರುವುದು. ಗಾಳಿ ಬೀಸುವಾಗ ನೋಡಿದರೆ ಇವು ಎಲ್ಲಿಗೋ ಹಾರಿ ಹೋಗಲು ಸಿದ್ಧವಾಗುತ್ತಿವೆಯೇನೋ ಅನಿಸುತ್ತದೆ. ರೆಂಬೆ ಕೊಂಬೆ ಇಲ್ಲದ ಈ ಮರಕ್ಕೆ ಈ ಗರಿಗಳೇ ರೆಂಬೆಗಳು ಕೊಂಬೆಗಳು.

ಈಗ್ಗೆ ನಲವತ್ತು ಐವತ್ತು ವರ್ಷಗಳ ಹಿಂದೆ ತೆಂಗು ವಿರಳವಾಗಿದ್ದಾಗಲೂ ಅವುಗಳ ಗರಿಗಳನ್ನು ಮದುವೆ ಚಪ್ಪರಗಳ ರಚನೆಗೆ ಬಳಸುತ್ತಿದ್ದರು. ಅಡಕೆ ಮರ ಅಡಕೆ ದಬ್ಬೆಗಳನ್ನು ಬಳಸಿ ರೂಪಿಸುತ್ತಿದ್ದ ಚಪ್ಪರಕ್ಕೆ ಈ ಕಲಾಕೃತಿಯಂತಾ ಗರಿಗಳನ್ನು ಹೊದಿಸುತ್ತಿದ್ದರು. ಈ ಬಗೆಯ ಚಪ್ಪರವನ್ನು ನೋಡಲೆಂದೆ ಜನ ನಮ್ಮೂರಿನ ಮದುವೆಗಳಿಗೆ ಬರುತ್ತಿದ್ದರು. ನಮ್ಮೂರಿನ ಸಿದ್ದಕ್ಕನವರ ರಾಮಣ್ಣನವರು ಈ ಚಪ್ಪರ ಹಾಕಿಸುವ ಇಂಜಿನಿಯರ್‌ ಆಗಿದ್ದರು. ಒಂದಿಂಚೂ ಆಚೀಚೆ ಆಗದಂತೆ ಗಣಿತ ಶಾಸ್ತ್ರ ಪಂಡಿತರಂತೆ ಮುಂದೆ ನಿಂತು ಚಪ್ಪರ ಹಾಕಿಸುತ್ತಿದ್ದರು. ಇವರಿಗೆ ಸಾತ್‌ ನೀಡುತ್ತಿದ್ದ ನಮ್ಮ ಪೀಳಿಗೆಯ ಜನ ಅವರನ್ನು ಬಹುವಾಗಿ ನೆನಪಿಸಿಕೊಳ್ಳುತ್ತಾರೆ.

ತೆಂಗಿನ ಹಸಿ ಗರಿಗಳಿಂದ ಹರಟೆ ಚಾಪೆಯನ್ನೂ, ಸುಳಿಗರಿಗಳಿಂದ ಮಡಕೆ, ವಾಡೆ, ಮೂಡೆಗಳ ತಳಕ್ಕೆ ಬಳಸುತ್ತಿದ್ದ ಸಿಂಬೆಗಳನ್ನು ಸುಂದರವಾಗಿ ಹೆಣೆಯುತ್ತಿದ್ದ ಆನೆಗಾಲು ಸಿದ್ದಪ್ಪ ಒಂದು ಸುಂದರ ನೆನಪು. ನಮ್ಮ ಅಟ್ಟದ ಮೇಲೆ ಹುಡುಕಿದರೆ ಸಿದ್ದಪ್ಪ ಹೆಣೆದ ಸಿಂಬೆಗಳು ಅನಾಥ ಸ್ಥಿತಿಯಲ್ಲಿ ಸಿಕ್ಕಾವು. ಇಂಥಾ ಸಿದ್ದಪ್ಪ ಹೆಣೆದುಕೊಡುತ್ತಿದ್ದ ಹರಟೆ ಚಾಪೆಗಳ ಮೇಲೆ ಕೂರಿಸಿಕೊಂಡು ರಾತ್ರಿ ಆಕಾಶದ ಅಡಿಯಲ್ಲಿ ನಮ್ಮಜ್ಜಿ ಹೇಳುತ್ತಿದ್ದ ಕತೆಗಳ ಮಾಯಕ್ಕೆ ಏನು ಸಮ.

ಆಯ್ಕೆ ಮಾಡಿದ ಒಣ ತೆಂಗಿನ ಗರಿಗಳಿಂದ ಚಾಪೆ ಹೆಣೆದು ಕೃಷಿ ಉತ್ಪನ್ನಗಳನ್ನು ಒಣಗಲು ಹಾಕಲು ಬಳಸುತ್ತಿದ್ದರು. ಟಾರ್ಪಾಲು, ಪ್ಲಾಸ್ಟಿಕ್ ಶೀಟ್‌ ಗಳ ಬಳಕೆ ಇರಲೇ ಇಲ್ಲ. ಇಂಥ ಚಾಪೆಗಳನ್ನು ಹೆಣೆಯುವುದರಲ್ಲಿ ನಮ್ಮವ್ವನ್ನನ್ನು ಮೀರಿಸುವವರು ಇರಲಿಲ್ಲವೆಂದು ಆಗ ನಮ್ಮವ್ವನ ಸಹಚರರು ಹೇಳುತ್ತಿದ್ದುದನ್ನು ಕೇಳಿಸಿಕೊಂಡಿದ್ದೆ. ನಮ್ಮವ್ವನ ಈ ಚಾಪೆಗಳ ಹಣಿ ಅಗಲವಾಗಿಯೂ ದೃಢವಾಗಿಯೂ ಇರುತ್ತಿದ್ದವು. ಮಾತು ಮಾತಾಡುತ್ತಲೇ ಚಾಪೆಯ ಹಣಿಯ ಸಿಂಬೆಗಳು ಸುತ್ತಿಕೊಂಡು ದೊಡ್ಡವಾಗುತ್ತಿದ್ದವು. ಈ ಹಣಿಗಳನ್ನು ಸೇರಿಸಿ ಒಟ್ಟಿಗೆ ಚಾಪೆ ಹೊಲಿಯುವುದು ಒಂದು ಕಲೆ. ಈಚಲು ಗರಿಗಳಿಂದ ಚಾಪೆ ಹೆಣಿಯುತ್ತಿದ್ದರು, ನಿಜ ಹೇಳಬೇಕೆಂದರೆ ಇವು ತೆಂಗಿನ ಚಾಪೆಗಳಿಗಿಂತಲೂ ಬಾಳಿಕೆ ಬರುತ್ತಿದ್ದವು. ಇವೆಲ್ಲ ಈಗ ಗ್ರಾಮೀಣ ಚರಿತ್ರೆಯ ಹಳಹಳಿಕೆಗಳಾಗಿ ಮಾತ್ರ ಉಳಿದಿವೆ.

ಈಗ ಈ ಗರಿಗಳನ್ನು ನಾವೀಗ ಮಲ್ಚಿಂಗ್‌ ಮುಚ್ಚಿಕೆಯಾಗಿ ಬಳಸುತ್ತಿದ್ದೇವೆ. ಸ್ವಾಗೆ ಗರಿಗಳಲ್ಲಿರುವ ಕಡ್ಡಿಗೆ ಈಗ ಉತ್ತಮ ಬೆಲೆ ಬಂದಿದೆ, ಉತ್ತರ ಭಾರತದ ಕಸ ಗುಡಿಸುತ್ತಿರುವುದು ಈ ನಮ್ಮ ಭಾಗದ ಸ್ವಾಗೆ ಕಡ್ಡಿ ಪೊರಕೆಗಳೇ. ಆಮ್‌ ಆದ್ಮಿ ಪಕ್ಷದ ಸಿಂಬಲ್ ಮಟ್ಟಕೆ ಅದು ಬೆಳೆದು ನಿಂತಿರುವುದು ಯಾರಿಗೆ ತಾನೆ ಗೊತ್ತಿಲ್ಲ.

ಈ ತೆಂಗಿನ ಗರಿಗಳನ್ನು ಸುಟ್ಟು ಭಸ್ಮ ಮಾಡುತ್ತಿದ್ದ ರೈತರೀಗ ಅದರ ಲಾಭ ಕಂಡುಕೊಂಡಿದ್ದಾರೆ. ನೆಲದ ಪಸೆ ಆರದಂತೆ ಅವುಗಳನ್ನು ಹರಡಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಈ ಗರಿಗಳನ್ನು ಸಣ್ಣಗೆ ಸವರಿ ಹರಡುತ್ತಿದ್ದಾರೆ, ಏನಾದರೂ ಆಗಲಿ ಸುಡದಿದ್ದರೆ ಸಾಕು. ಸುಟ್ಟರೆ ಸುಡುಗಾಡು ಎಂಬುದನ್ನು ಮತ್ತೆ ಮತ್ತೆ ನೆನೆದರೆ ಅದೇ ಪುಣ್ಯ.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-4: ಸಹಜ ಕೃಷಿ ಅಲ್ಲ, ಉಳುಮೆ ಇಲ್ಲದ ತೋಟ ನಮ್ಮದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...