Homeಅಂಕಣಗಳುಎಲೆಮರೆಯಿಂದಅಮಲ್ ದೆಪ್ಪಡೇ, ಓ ಅಕಲ್ ತಪ್ಪಡೇ..: ಅಮಲು ಸೇವಿಸದಿರಿ... ಓ ಮತಿ ತಪ್ಪದಿರಿ

ಅಮಲ್ ದೆಪ್ಪಡೇ, ಓ ಅಕಲ್ ತಪ್ಪಡೇ..: ಅಮಲು ಸೇವಿಸದಿರಿ… ಓ ಮತಿ ತಪ್ಪದಿರಿ

- Advertisement -
- Advertisement -

ತುಳು ಭಾಷೆ ಅರಿಯದವರು ಈ ಶೀರ್ಷಿಕೆ ನೋಡಿ ಗಲಿಬಿಲಿಗೊಳ್ಳಬಹುದು.. ಇದು ತುಳು, ಕನ್ನಡ ಮತ್ತು ಹವ್ಯಕ ಭಾಷೆಯ ಕವಿ ನನ್ನೂರಿನ ನರ್ಕಳ ಮಾರಪ್ಪ ಶೆಟ್ಟರ ಪ್ರಸಿದ್ಧ ಕವನವೊಂದರ ಸಾಲು. ಇದು ತುಳುನಾಡಿನಲ್ಲಿ ಮದ್ಯಪಾನ ವಿರೋಧೀ ಜನಜಾಗೃತಿ ಸಭೆಗಳಲ್ಲಿ ಲಾವಣಿಯಂತೆ ಹಾಡಲ್ಪಡುತ್ತಿದ್ದ ಸಾಲುಗಳು..
ಇದರರ್ಥ “ಅಮಲು ಸೇವಿಸದಿರಿ… ಓ ಮತಿ ತಪ್ಪದಿರಿ..”

ಕರ್ನಾಟಕ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಹೊರತಂದ `ಶತಮಾನದ ಬೆಳಕು’ ಎಂಬ ಗ್ರಂಥದಲ್ಲಿ ಇಸ್ಮತ್ ಪಜೀರ್ ಬರೆದ `ಕನ್ನಡದ ಸಹೋದರ ಭಾಷೆಗಳಲ್ಲಿ ಸಾಹಿತ್ಯದ ಬೆಳವಣಿಗೆ’ ಎಂಬ ದೀರ್ಘ ಪ್ರಬಂಧವೊಂದನ್ನು ಓದುತ್ತಿದ್ದಂತೆ ನರ್ಕಳ ಮಾರಪ್ಪ ಶೆಟ್ಟರ ಹೆಸರು ಕಣ್ಣಿಗೆ ಬಿತ್ತು. ಅಲ್ಲಿಂದ ಈ ಶೆಟ್ಟರ ಜಾಡು ಹಿಡಿದು ಹೊರಟೆ. ಕಾರಣ ನರ್ಕಳವೆಂಬುವುದು ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ನನ್ನೂರು ಕುಳಾಲು ಎಂಬಲ್ಲಿರುವ ಒಂದು ಪುಟ್ಟ ಹಳ್ಳಿ. ಶೆಟ್ಟರ ಬಗ್ಗೆ ನನ್ನೂರಿನಲ್ಲಿ ವಿಚಾರಿಸಿದಾಗ ಗೊತ್ತಿಲ್ಲ ಎಂದವರೇ ಎಲ್ಲಾ. ಸೋಜಿಗವೇನೆಂದರೆ, ಇಸ್ಮತ್ ನರ್ಕಳ ಮಾರಪ್ಪ ಶೆಟ್ಟರ ಸಾಹಿತ್ಯದ ಕುರಿತಂತೆ “ಶತಮಾನದ ಬೆಳಕು” ಎಂಬ ಗ್ರಂಥದಲ್ಲಿ ಚರ್ಚೆ ನಡೆಸಿದ್ದಾರಾದರೂ ಅವರಿಗೂ ಈ ನರ್ಕಳ ನನ್ನೂರಿನ ಪಕ್ಕದ ಹಳ್ಳಿ ಎಂದು ಗೊತ್ತೇ ಇರಲಿಲ್ಲ.

ನಾನು ಶೆಟ್ಟರ ಕುರಿತ ಹುಡುಕಾಟ ಬಿಡಲಿಲ್ಲ. ವರ್ಷಗಳ ನಂತರ ಹೊಸಕಟ್ಟಡಕ್ಕೆ ಸ್ಥಳಾಂತರಗೊಂಡ ಸಾಲೆತ್ತೂರಿನ ಸಾರ್ವಜನಿಕ ಗ್ರಂಥಾಲಯಕ್ಕೆ ನರ್ಕಳ ಮಾರಪ್ಪ ಶೆಟ್ಟರ ಹೆಸರಿಟ್ಟಿರುವುದನ್ನು ನೋಡಿದ್ದೇ ತಡ ಲೈಬ್ರರಿಯ ಮೆಟ್ಟಿಲು ಹತ್ತಿದೆ. ಗ್ರಂಥಪಾಲಕಿಯ ಬಳಿ ಶೆಟ್ಟರ ಬಗ್ಗೆ ವಿಚಾರಿಸಿದಾಗ ಆಕೆ “ನರ್ಕಳ ಮಾರಪ್ಪ ಶೆಟ್ಟರ ಬದುಕು ಮತ್ತು ಬರಹ” ಎಂಬ ಗ್ರಂಥವೊಂದನ್ನು ಉಡುಗೊರೆಯಾಗಿ ನೀಡಿದರು. ಅಲ್ಲಲ್ಲಿ ಚದುರಿಹೋಗಿದ್ದ ಅವರ ಬದುಕು ಮತ್ತು ಬರಹವನ್ನು ಸಾದ್ಯಂತ ಸಂಗ್ರಹಿಸಿ ಗ್ರಂಥ ರೂಪಕ್ಕಿಳಿಸಿದ್ದು 1989ರ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ, ಮಾರಪ್ಪ ಶೆಟ್ಟರ ಮಗನಾದ ನರ್ಕಳ ರಘುನಾಥ ಶೆಟ್ಟರು… ಅದೂ ಬಹಳ ತಡವಾಗಿ.

ಇಂತಹ ಘನ ವ್ಯಕ್ತಿತ್ವವನ್ನು ಹೊಸ ಪೀಳಿಗೆಗೆ ಪರಿಚಯಿಸದ ನಮ್ಮೂರಿನ ಜನರ ಬಗ್ಗೆ, ನಾ ಕಲಿತ ಕುಳಾಲು ಶಾಲೆಯಲ್ಲಿ ಅಧ್ಯಾಪಕನಾಗಿ ಸೇವೆ ಸಲ್ಲಿಸಿದ್ದರೂ ಅವರ ಬಗ್ಗೆ ಪರಿಚಯಿಸಿ ಕೊಡದ ನನ್ನ ಶಿಕ್ಷಕರ ಬಗ್ಗೆ, ಸ್ವಾತಂತ್ರ‍್ಯ ಹೋರಾಟಗಾರನಾಗಿದ್ದರೂ ಕನಿಷ್ಟ ಸ್ವಾತಂತ್ರ‍್ಯ ದಿನದಂದಾದರೂ ಸ್ಮರಿಸದಿರುವುದರ ಬಗ್ಗೆ ಖೇದವಿದೆ.

1894ರಲ್ಲಿ ನರ್ಕಳದಲ್ಲಿ ಜನಿಸಿದ ಮಾರಪ್ಪ ಶೆಟ್ರು ನರ್ಕಳ ಮನೆತನದ ಅವಿಭಕ್ತ ಕುಟುಂಬದ ಮೊದಲ ವಿದ್ಯಾವಂತ. ನಮ್ಮೂರಿಗೂ ಅವರೇ ಮೊದಲಿಗರಿರಬೇಕು. ಎಳವೆಯಲ್ಲೇ ಅಧ್ಯಾಪಕನಾಗಬೇಕೆಂಬ ಕನಸ ಹೊತ್ತಿದ್ದ ಶೆಟ್ಟರು ತನ್ನ ಹದಿನಾಲ್ಕನೇ ವಯಸ್ಸಿಗೇ ತಾನು ಕಲಿತ ಸಾಲೆತ್ತೂರು ಶಾಲೆಯಲ್ಲೇ ಅಧ್ಯಾಪಕರಾದರು..!! ಅವರ ಅಧ್ಯಾಪನದ ಕನಸನ್ನು ನನಸಾಗಿಸಿದವರು ತುಳುನಾಡಿನ ಮಹಾಕವಿ ಪಂಜೆ ಮಂಗೇಶರಾಯರು. ಆಗಿನ ಬ್ರಿಟಿಷ್ ಸರಕಾರದ ನಿಯಮದಂತೆ ಶಾಲಾ ಇನ್ಸ್ಪೆಕ್ಟರ್‌ಗಳೇ ಜಾಣ ವಿದ್ಯಾರ್ಥಿಗಳನ್ನು ಗುರುತಿಸಿ ಶಿಕ್ಷಕರಾಗಿ ನೇಮಿಸಬೇಕಿತ್ತು. ಜೊತೆಗೆ ಶಿಕ್ಷಕ ತರಬೇತಿಗೆ ಶಿಫಾರಸು ಮಾಡಬೇಕಿತ್ತು.

ಶೆಟ್ಟರು ಸಾಲೆತ್ತೂರು ಶಾಲೆಯಲ್ಲಿ ೪ನೇ ತರಗತಿಯಲ್ಲಿ (ಫಾರಂ) ವ್ಯಾಸಂಗ ಮಾಡುತ್ತಿದ್ದಾಗ ಶಾಲಾ ಪರೀಕ್ಷಾಧಿಕಾರಿಯಾಗಿ ಬಂದ ಪಂಜೆಯವರು ಶೆಟ್ಟರನ್ನು ಮೂರು ರೂಪಾಯಿ ಮಾಸಿಕ ವೇತನದೊಂದಿಗೆ ಅದೇ ಶಾಲೆಗೆ ಅಧ್ಯಾಪಕರನ್ನಾಗಿ ನೇಮಿಸಿದರು. ಆರು ವರ್ಷಗಳ ನಂತರ ತರಬೇತಿ ಪಡೆದು ಅಧಿಕೃತ ಶಿಕ್ಷಕರಾದರು. ಕೊಡ್ಲಮೊಗರು, ಮೂಡಂಬೈಲು, ಅಡ್ಯನಡ್ಕ ಅಷ್ಟೇ ಅಲ್ಲದೇ ನಾ ಕಲಿತ ಕುಳಾಲು ಶಾಲೆಯಲ್ಲೂ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಇನ್ನೂ ಕೆಲವೆಡೆ ಅಧ್ಯಾಪಕನಾಗಿ ಸೇವೆ ಸಲ್ಲಿಸಿದ್ದರೂ ಅದರ ದಾಖಲೆಗಳು ಲಭ್ಯವಾಗಿಲ್ಲ. ಅಧ್ಯಾಪನದ ಜೊತೆಜೊತೆಗೆ ಅಕ್ಷರ ಬಿತ್ತುವ ಕಾಯಕದಲ್ಲೂ ತೊಡಗಿಸಿಕೊಂಡರು. ಶಾಲೆಯೇ ಇಲ್ಲದ ಮೂಡಂಬೈಲಿನಲ್ಲಿ ಮಕ್ಕಳನ್ನೆಲ್ಲಾ ಕೂಡಿಸಿ ಸಣ್ಣ ಗುಡಿಸಲೊಂದರಲ್ಲಿ ಶಾಲೆಯನ್ನು ಪ್ರಾರಂಭಿಸಿದರು. ಮಂಗಳೂರಿನ ಬಿಜೈಯಲ್ಲಿ ಲೂರ್ಡ್ಸ್ ಪ್ರೌಢಶಾಲೆ ಸ್ಥಾಪನೆಗೆ ತನು, ಮನ, ಧನದೊಂದಿಗೆ ಶ್ರಮಿಸಿದರು. ವಯಸ್ಕರಿಗಾಗಿ ಅಡ್ಯನಡ್ಕದಲ್ಲಿ ರಾತ್ರಿ ಶಾಲೆ ಪ್ರಾರಂಭಿಸಿದರು. ಶೆಟ್ಟರ ಪಾಠ ಮಾಡುವ ಪ್ರಾಯೋಗಿಕ ಶೈಲಿ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಮೂಡಿಸುತ್ತಿತ್ತು.ನಾನೀಗ ನನ್ನ ಮಗಳಿಗೆ ಅಕ್ಷರ ಬರೆಯಲು ಸುಲಭವಾಗುವಂತೆ  slanting line, standing line, curves  ಹೀಗೆ ಏನೆಲ್ಲಾ ಕಲಿಸುತ್ತೇನೋ ಇದನ್ನೆಲ್ಲಾ ಶೆಟ್ಟರು ಸ್ವಾತಂತ್ರ‍್ಯ ಪೂರ್ವದಲ್ಲೇ ಕನ್ನಡ ಅಕ್ಷರ ಕಲಿಸಲು ಬಳಸುತ್ತಿದ್ದರು. ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಕೆಲವು ಕೈ ಕಸುಬು, ಗುಡಿ ಕೈಗಾರಿಕೆಗಳನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸುತ್ತಿದ್ದರು.

ಶೆಟ್ಟರ ಕಲಿಕೆಯ ತುಡಿತ ಅದೆಷ್ಟು ಅದಮ್ಯವಾಗಿತ್ತೆಂದರೆ ಮಧ್ಯವಯಸ್ಸಿನಲ್ಲಿ ಮಗಳೊಂದಿಗೆ SSಐಅ ಪರೀಕ್ಷೆ ಬರೆದು ಅನುತ್ತೀರ್ಣರಾದರು. ಆ ಕಾಲದಲ್ಲೇ ತನ್ನ ಹತ್ತು ಮಂದಿ ಮಕ್ಕಳಲ್ಲಿ ಏಳು ಮಂದಿಯನ್ನು ಪದವೀಧರರನ್ನಾಗಿಸಿದರು. ತನ್ನ 14ರ ಹರೆಯದಿಂದ ೫೮ರ ವರೆಗೆ (1908-1952) ಮಾದರಿ ಶಿಕ್ಷಕರಾಗಿ ಕಾರ್ಯನಿರ್ವಹಿಸುವುದರ ಜೊತೆಜೊತೆಗೆ ಸ್ವಾತಂತ್ರ‍್ಯ ಆಂದೋಲನದಲ್ಲೂ ಭಾಗಿಯಾಗಿದ್ದರು.
ಗಾಂಧೀ ತತ್ವ ಪ್ರಣಾಳಿಕೆಯ ಪ್ರತಿಪಾದಕರಾಗಿ ದ.ಕ ಜಿಲ್ಲೆಯಾದ್ಯಂತ ಸಂಚರಿಸಿ ಹರಿಜನೋದ್ಧಾರ, ಖಾದಿಯ ಮಹತ್ವ, ಮದ್ಯಪಾನ ನಿಷೇಧದ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಿದರು.

“ಅಮಲ್ ದೆಪ್ಪಡೇ…!ಓ..!
ಅಕಲ್ ತಪ್ಪಡೇ…!!”
ಪರಡೆ ಕಲಿ ಗಂಗಸರೊ.. (ಕುಡಿಯಬೇಡಿರೋ…ಶೇಂದಿ…ಶರಾಬು) ಇತ್ಯಾದಿ ಸ್ವರಚಿತ ಕವನಗಳ ಮೂಲಕ ದ.ಕ.ಜಿಲ್ಲೆಯ ಜನರನ್ನು ತಲುಪಿದರು. ತನ್ನ ಕೊನೆಯುಸಿರಿರುವವರೆಗೂ ಗಾಂಧಿವಾದಿಯಾಗಿಯೇ ಬದುಕಿದರು. ಅವರು ಕನ್ನಡವಲ್ಲದೇ ತುಳು, ಹವ್ಯಕ ಭಾಷೆಗಳಲ್ಲೂ ಸಾಹಿತ್ಯ ಕೃಷಿ ಮಾಡಿದ್ದರು. ತುಳುನಾಡು, ನುಡಿ, ಸಂಸ್ಕೃತಿ, ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. ಬಾಲಸಾಹಿತ್ಯದಲ್ಲೂ ಪಳಗಿದ ಶೆಟ್ಟರ “ಸುಂದರಿಯ ಚಂದ” ಎಂಬ ಮಕ್ಕಳ ಕತೆಯು ಬಡಗಿಯೊಬ್ಬನು ಕೆತ್ತಿದ ಸುಂದರಿ ಎಂಬ ಬೊಂಬೆಯ ಚಿತ್ರಣವಾಗಿದೆ. ಅಡ್ಯನಡ್ಕ ಶಾಲೆಯ ಅಧ್ಯಾಪಕರಾಗಿದ್ದಾಗ “ಶಿಶು ಜೀವಾಳ” ಎಂಬ ವಿದ್ಯಾರ್ಥಿ ಹಸ್ತಪತ್ರಿಕೆಯನ್ನು ಪ್ರಾರಂಭಿಸಿದರು. ೧೯೨೯ರಲ್ಲಿ ತುಳುವಿನಲ್ಲಿ ರಚಿಸಿದ ‘ಪೊರ್ಲಕಂಟ್’ ಮತ್ತು ‘ಅಮಲ್ ದೆಪ್ಪಡೆ’ ಎಂಬ ಕವನ ಸಂಕಲನಗಳಲ್ಲಿನ ತುಳು ಪದಗಳ ವೈಶಿಷ್ಟ್ಯ ಮತ್ತು ಭಾರ ನೋಡಿದರೆ ಈ ಕಾಲದ ಸಾಹಿತಿಗಳಿಗೆ ಅಚ್ಚರಿಯಾಗಬಹುದು. ತುಳು ಶಬ್ದಗಳ ಹುಟ್ಟು ಮತ್ತು ವಿಕಾಸದ ಬಗ್ಗೆಯೂ ಸಾಕಷ್ಟು ಬರೆದಿರುವ ಇವರು ತುಳು ಭಾಷಾತಜ್ಞನೂ ಹೌದು. ತುಳು ಸ್ಥಳನಾಮಗಳ ಬಗ್ಗೆಯೂ ಸಂಶೋಧನೆಗೈದಿದ್ದಾರೆ.

ಕನ್ನಡದಲ್ಲಿ ‘ಮಂಜಟ್ಟಿ ಕೋಣ’, ಜಾತಿ ಮತ್ತು ವರ್ಣ ಬೇಧ ನೀತಿಯನ್ನು ವಿರೋಧಿಸುವ
`ಕರಿ-ಬಿಳಿ ಕಾಳಗ’, ‘ಕಾಸರಗೋಡು ಕನ್ನಡಿಗರ ಗೋಳಿನ ಕತೆ’ ಇತ್ಯಾದಿ ಕವನಗಳ ಜೊತೆಗೆ ಭಾಮಿನಿ ಹಾಗೂ ವಾರ್ಧಕ ಷಟ್ಪದಿಯಲ್ಲೂ ಬರೆದಿದ್ದಾರೆ. ಚೀನಾ ಆಕ್ರಮಣದ ಸಂದರ್ಭದಲ್ಲಿ ವಾರ್ಧಕ ಷಟ್ಪದಿಯಲ್ಲಿ “ಭಾರತೀಯರೊಂದಾಗಿ” ಎಂಬ ದೇಶಪ್ರೇಮವನ್ನು ಸಾರುವ ಕವನವನ್ನು ಬರೆದು ಆ ಮೂಲಕ ಜಾಗೃತಿ ಮೂಡಿಸಿದ್ದರು. ಯಕ್ಷಗಾನ ಅರ್ಥದಾರಿಯಾಗಿದ್ದ ಶೆಟ್ಟರು “ದಂಡಯಾತ್ರೆ” ಎಂಬ ಯಕ್ಷಗಾನ ಪ್ರಸಂಗವೊಂದನ್ನು ರಚಿಸಿದ್ದರು. ‘ಕೂಸಕ್ಕನ ಮದುವೆ’ ಎಂಬ ನಾಟಕ ಹವ್ಯಕ ಭಾಷಾ ಸಾಹಿತ್ಯಕ್ಕೆ ಶೆಟ್ಟರ ವಿಶೇಷ ಕೊಡುಗೆ. ಸಂಧಿ, ಸಮಾಸ, ಷಟ್ಪದಿಗಳಲ್ಲಿ ಅಪಾರ ಪಾಂಡಿತ್ಯ ಗಳಿಸಿದ್ದ ಶೆಟ್ಟರು “ಗುರುಮಿತ್ರ” ಎಂಬ ಅಧ್ಯಾಪಕರ ಸಂಘದ ಹಸ್ತಪತ್ರಿಕೆಯ ಸಂಪಾದಕರಾಗಿದ್ದರು. ನಿನ್ನೆ ಮೊನ್ನೆಯಷ್ಟೇ ಮೂಲಸ್ವರೂಪವನ್ನು ಉಳಿಸುತ್ತಲೇ ಆಧುನಿಕತೆಯತ್ತ ಮುಖಮಾಡಿರುವ ನನ್ನೂರಿನಲ್ಲಿ ಆ ಕಾಲದಲ್ಲಿ ಓರ್ವ ಅಧ್ಯಾಪಕನಾಗಿ, ಸಾಹಿತಿಯಾಗಿ, ಸ್ವಾತಂತ್ರ‍್ಯ ಹೋರಾಟಗಾರನಾಗಿ ಒಂದು ಅರ್ಥಪೂರ್ಣ ಬದುಕು ಸವೆಸಿದ ನರ್ಕಳ ಮಾರಪ್ಪ ಶೆಟ್ಟರನ್ನು ನನ್ನೂರು ಮರೆತಿರುವುದು ವಿಷಾದನೀಯ…

  • ಮಿಸ್ರಿಯಾ ಐ ಪಜೀರ್, ಯುವ ಬರಹಗಾರ್ತಿ.

ನಾ ಹ್ಯಾಂಗ ಮರೆಯಲಿ ನಿನ್ನ ಗಾಂಧಿ ತಾತ… : ಮಿಸ್ರಿಯಾ ಐ. ಪಜೀರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...