Homeಅಂಕಣಗಳುಎಲೆಮರೆಯಿಂದಅಮಲ್ ದೆಪ್ಪಡೇ, ಓ ಅಕಲ್ ತಪ್ಪಡೇ..: ಅಮಲು ಸೇವಿಸದಿರಿ... ಓ ಮತಿ ತಪ್ಪದಿರಿ

ಅಮಲ್ ದೆಪ್ಪಡೇ, ಓ ಅಕಲ್ ತಪ್ಪಡೇ..: ಅಮಲು ಸೇವಿಸದಿರಿ… ಓ ಮತಿ ತಪ್ಪದಿರಿ

- Advertisement -
- Advertisement -

ತುಳು ಭಾಷೆ ಅರಿಯದವರು ಈ ಶೀರ್ಷಿಕೆ ನೋಡಿ ಗಲಿಬಿಲಿಗೊಳ್ಳಬಹುದು.. ಇದು ತುಳು, ಕನ್ನಡ ಮತ್ತು ಹವ್ಯಕ ಭಾಷೆಯ ಕವಿ ನನ್ನೂರಿನ ನರ್ಕಳ ಮಾರಪ್ಪ ಶೆಟ್ಟರ ಪ್ರಸಿದ್ಧ ಕವನವೊಂದರ ಸಾಲು. ಇದು ತುಳುನಾಡಿನಲ್ಲಿ ಮದ್ಯಪಾನ ವಿರೋಧೀ ಜನಜಾಗೃತಿ ಸಭೆಗಳಲ್ಲಿ ಲಾವಣಿಯಂತೆ ಹಾಡಲ್ಪಡುತ್ತಿದ್ದ ಸಾಲುಗಳು..
ಇದರರ್ಥ “ಅಮಲು ಸೇವಿಸದಿರಿ… ಓ ಮತಿ ತಪ್ಪದಿರಿ..”

ಕರ್ನಾಟಕ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಹೊರತಂದ `ಶತಮಾನದ ಬೆಳಕು’ ಎಂಬ ಗ್ರಂಥದಲ್ಲಿ ಇಸ್ಮತ್ ಪಜೀರ್ ಬರೆದ `ಕನ್ನಡದ ಸಹೋದರ ಭಾಷೆಗಳಲ್ಲಿ ಸಾಹಿತ್ಯದ ಬೆಳವಣಿಗೆ’ ಎಂಬ ದೀರ್ಘ ಪ್ರಬಂಧವೊಂದನ್ನು ಓದುತ್ತಿದ್ದಂತೆ ನರ್ಕಳ ಮಾರಪ್ಪ ಶೆಟ್ಟರ ಹೆಸರು ಕಣ್ಣಿಗೆ ಬಿತ್ತು. ಅಲ್ಲಿಂದ ಈ ಶೆಟ್ಟರ ಜಾಡು ಹಿಡಿದು ಹೊರಟೆ. ಕಾರಣ ನರ್ಕಳವೆಂಬುವುದು ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ನನ್ನೂರು ಕುಳಾಲು ಎಂಬಲ್ಲಿರುವ ಒಂದು ಪುಟ್ಟ ಹಳ್ಳಿ. ಶೆಟ್ಟರ ಬಗ್ಗೆ ನನ್ನೂರಿನಲ್ಲಿ ವಿಚಾರಿಸಿದಾಗ ಗೊತ್ತಿಲ್ಲ ಎಂದವರೇ ಎಲ್ಲಾ. ಸೋಜಿಗವೇನೆಂದರೆ, ಇಸ್ಮತ್ ನರ್ಕಳ ಮಾರಪ್ಪ ಶೆಟ್ಟರ ಸಾಹಿತ್ಯದ ಕುರಿತಂತೆ “ಶತಮಾನದ ಬೆಳಕು” ಎಂಬ ಗ್ರಂಥದಲ್ಲಿ ಚರ್ಚೆ ನಡೆಸಿದ್ದಾರಾದರೂ ಅವರಿಗೂ ಈ ನರ್ಕಳ ನನ್ನೂರಿನ ಪಕ್ಕದ ಹಳ್ಳಿ ಎಂದು ಗೊತ್ತೇ ಇರಲಿಲ್ಲ.

ನಾನು ಶೆಟ್ಟರ ಕುರಿತ ಹುಡುಕಾಟ ಬಿಡಲಿಲ್ಲ. ವರ್ಷಗಳ ನಂತರ ಹೊಸಕಟ್ಟಡಕ್ಕೆ ಸ್ಥಳಾಂತರಗೊಂಡ ಸಾಲೆತ್ತೂರಿನ ಸಾರ್ವಜನಿಕ ಗ್ರಂಥಾಲಯಕ್ಕೆ ನರ್ಕಳ ಮಾರಪ್ಪ ಶೆಟ್ಟರ ಹೆಸರಿಟ್ಟಿರುವುದನ್ನು ನೋಡಿದ್ದೇ ತಡ ಲೈಬ್ರರಿಯ ಮೆಟ್ಟಿಲು ಹತ್ತಿದೆ. ಗ್ರಂಥಪಾಲಕಿಯ ಬಳಿ ಶೆಟ್ಟರ ಬಗ್ಗೆ ವಿಚಾರಿಸಿದಾಗ ಆಕೆ “ನರ್ಕಳ ಮಾರಪ್ಪ ಶೆಟ್ಟರ ಬದುಕು ಮತ್ತು ಬರಹ” ಎಂಬ ಗ್ರಂಥವೊಂದನ್ನು ಉಡುಗೊರೆಯಾಗಿ ನೀಡಿದರು. ಅಲ್ಲಲ್ಲಿ ಚದುರಿಹೋಗಿದ್ದ ಅವರ ಬದುಕು ಮತ್ತು ಬರಹವನ್ನು ಸಾದ್ಯಂತ ಸಂಗ್ರಹಿಸಿ ಗ್ರಂಥ ರೂಪಕ್ಕಿಳಿಸಿದ್ದು 1989ರ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ, ಮಾರಪ್ಪ ಶೆಟ್ಟರ ಮಗನಾದ ನರ್ಕಳ ರಘುನಾಥ ಶೆಟ್ಟರು… ಅದೂ ಬಹಳ ತಡವಾಗಿ.

ಇಂತಹ ಘನ ವ್ಯಕ್ತಿತ್ವವನ್ನು ಹೊಸ ಪೀಳಿಗೆಗೆ ಪರಿಚಯಿಸದ ನಮ್ಮೂರಿನ ಜನರ ಬಗ್ಗೆ, ನಾ ಕಲಿತ ಕುಳಾಲು ಶಾಲೆಯಲ್ಲಿ ಅಧ್ಯಾಪಕನಾಗಿ ಸೇವೆ ಸಲ್ಲಿಸಿದ್ದರೂ ಅವರ ಬಗ್ಗೆ ಪರಿಚಯಿಸಿ ಕೊಡದ ನನ್ನ ಶಿಕ್ಷಕರ ಬಗ್ಗೆ, ಸ್ವಾತಂತ್ರ‍್ಯ ಹೋರಾಟಗಾರನಾಗಿದ್ದರೂ ಕನಿಷ್ಟ ಸ್ವಾತಂತ್ರ‍್ಯ ದಿನದಂದಾದರೂ ಸ್ಮರಿಸದಿರುವುದರ ಬಗ್ಗೆ ಖೇದವಿದೆ.

1894ರಲ್ಲಿ ನರ್ಕಳದಲ್ಲಿ ಜನಿಸಿದ ಮಾರಪ್ಪ ಶೆಟ್ರು ನರ್ಕಳ ಮನೆತನದ ಅವಿಭಕ್ತ ಕುಟುಂಬದ ಮೊದಲ ವಿದ್ಯಾವಂತ. ನಮ್ಮೂರಿಗೂ ಅವರೇ ಮೊದಲಿಗರಿರಬೇಕು. ಎಳವೆಯಲ್ಲೇ ಅಧ್ಯಾಪಕನಾಗಬೇಕೆಂಬ ಕನಸ ಹೊತ್ತಿದ್ದ ಶೆಟ್ಟರು ತನ್ನ ಹದಿನಾಲ್ಕನೇ ವಯಸ್ಸಿಗೇ ತಾನು ಕಲಿತ ಸಾಲೆತ್ತೂರು ಶಾಲೆಯಲ್ಲೇ ಅಧ್ಯಾಪಕರಾದರು..!! ಅವರ ಅಧ್ಯಾಪನದ ಕನಸನ್ನು ನನಸಾಗಿಸಿದವರು ತುಳುನಾಡಿನ ಮಹಾಕವಿ ಪಂಜೆ ಮಂಗೇಶರಾಯರು. ಆಗಿನ ಬ್ರಿಟಿಷ್ ಸರಕಾರದ ನಿಯಮದಂತೆ ಶಾಲಾ ಇನ್ಸ್ಪೆಕ್ಟರ್‌ಗಳೇ ಜಾಣ ವಿದ್ಯಾರ್ಥಿಗಳನ್ನು ಗುರುತಿಸಿ ಶಿಕ್ಷಕರಾಗಿ ನೇಮಿಸಬೇಕಿತ್ತು. ಜೊತೆಗೆ ಶಿಕ್ಷಕ ತರಬೇತಿಗೆ ಶಿಫಾರಸು ಮಾಡಬೇಕಿತ್ತು.

ಶೆಟ್ಟರು ಸಾಲೆತ್ತೂರು ಶಾಲೆಯಲ್ಲಿ ೪ನೇ ತರಗತಿಯಲ್ಲಿ (ಫಾರಂ) ವ್ಯಾಸಂಗ ಮಾಡುತ್ತಿದ್ದಾಗ ಶಾಲಾ ಪರೀಕ್ಷಾಧಿಕಾರಿಯಾಗಿ ಬಂದ ಪಂಜೆಯವರು ಶೆಟ್ಟರನ್ನು ಮೂರು ರೂಪಾಯಿ ಮಾಸಿಕ ವೇತನದೊಂದಿಗೆ ಅದೇ ಶಾಲೆಗೆ ಅಧ್ಯಾಪಕರನ್ನಾಗಿ ನೇಮಿಸಿದರು. ಆರು ವರ್ಷಗಳ ನಂತರ ತರಬೇತಿ ಪಡೆದು ಅಧಿಕೃತ ಶಿಕ್ಷಕರಾದರು. ಕೊಡ್ಲಮೊಗರು, ಮೂಡಂಬೈಲು, ಅಡ್ಯನಡ್ಕ ಅಷ್ಟೇ ಅಲ್ಲದೇ ನಾ ಕಲಿತ ಕುಳಾಲು ಶಾಲೆಯಲ್ಲೂ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಇನ್ನೂ ಕೆಲವೆಡೆ ಅಧ್ಯಾಪಕನಾಗಿ ಸೇವೆ ಸಲ್ಲಿಸಿದ್ದರೂ ಅದರ ದಾಖಲೆಗಳು ಲಭ್ಯವಾಗಿಲ್ಲ. ಅಧ್ಯಾಪನದ ಜೊತೆಜೊತೆಗೆ ಅಕ್ಷರ ಬಿತ್ತುವ ಕಾಯಕದಲ್ಲೂ ತೊಡಗಿಸಿಕೊಂಡರು. ಶಾಲೆಯೇ ಇಲ್ಲದ ಮೂಡಂಬೈಲಿನಲ್ಲಿ ಮಕ್ಕಳನ್ನೆಲ್ಲಾ ಕೂಡಿಸಿ ಸಣ್ಣ ಗುಡಿಸಲೊಂದರಲ್ಲಿ ಶಾಲೆಯನ್ನು ಪ್ರಾರಂಭಿಸಿದರು. ಮಂಗಳೂರಿನ ಬಿಜೈಯಲ್ಲಿ ಲೂರ್ಡ್ಸ್ ಪ್ರೌಢಶಾಲೆ ಸ್ಥಾಪನೆಗೆ ತನು, ಮನ, ಧನದೊಂದಿಗೆ ಶ್ರಮಿಸಿದರು. ವಯಸ್ಕರಿಗಾಗಿ ಅಡ್ಯನಡ್ಕದಲ್ಲಿ ರಾತ್ರಿ ಶಾಲೆ ಪ್ರಾರಂಭಿಸಿದರು. ಶೆಟ್ಟರ ಪಾಠ ಮಾಡುವ ಪ್ರಾಯೋಗಿಕ ಶೈಲಿ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಮೂಡಿಸುತ್ತಿತ್ತು.ನಾನೀಗ ನನ್ನ ಮಗಳಿಗೆ ಅಕ್ಷರ ಬರೆಯಲು ಸುಲಭವಾಗುವಂತೆ  slanting line, standing line, curves  ಹೀಗೆ ಏನೆಲ್ಲಾ ಕಲಿಸುತ್ತೇನೋ ಇದನ್ನೆಲ್ಲಾ ಶೆಟ್ಟರು ಸ್ವಾತಂತ್ರ‍್ಯ ಪೂರ್ವದಲ್ಲೇ ಕನ್ನಡ ಅಕ್ಷರ ಕಲಿಸಲು ಬಳಸುತ್ತಿದ್ದರು. ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಕೆಲವು ಕೈ ಕಸುಬು, ಗುಡಿ ಕೈಗಾರಿಕೆಗಳನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸುತ್ತಿದ್ದರು.

ಶೆಟ್ಟರ ಕಲಿಕೆಯ ತುಡಿತ ಅದೆಷ್ಟು ಅದಮ್ಯವಾಗಿತ್ತೆಂದರೆ ಮಧ್ಯವಯಸ್ಸಿನಲ್ಲಿ ಮಗಳೊಂದಿಗೆ SSಐಅ ಪರೀಕ್ಷೆ ಬರೆದು ಅನುತ್ತೀರ್ಣರಾದರು. ಆ ಕಾಲದಲ್ಲೇ ತನ್ನ ಹತ್ತು ಮಂದಿ ಮಕ್ಕಳಲ್ಲಿ ಏಳು ಮಂದಿಯನ್ನು ಪದವೀಧರರನ್ನಾಗಿಸಿದರು. ತನ್ನ 14ರ ಹರೆಯದಿಂದ ೫೮ರ ವರೆಗೆ (1908-1952) ಮಾದರಿ ಶಿಕ್ಷಕರಾಗಿ ಕಾರ್ಯನಿರ್ವಹಿಸುವುದರ ಜೊತೆಜೊತೆಗೆ ಸ್ವಾತಂತ್ರ‍್ಯ ಆಂದೋಲನದಲ್ಲೂ ಭಾಗಿಯಾಗಿದ್ದರು.
ಗಾಂಧೀ ತತ್ವ ಪ್ರಣಾಳಿಕೆಯ ಪ್ರತಿಪಾದಕರಾಗಿ ದ.ಕ ಜಿಲ್ಲೆಯಾದ್ಯಂತ ಸಂಚರಿಸಿ ಹರಿಜನೋದ್ಧಾರ, ಖಾದಿಯ ಮಹತ್ವ, ಮದ್ಯಪಾನ ನಿಷೇಧದ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಿದರು.

“ಅಮಲ್ ದೆಪ್ಪಡೇ…!ಓ..!
ಅಕಲ್ ತಪ್ಪಡೇ…!!”
ಪರಡೆ ಕಲಿ ಗಂಗಸರೊ.. (ಕುಡಿಯಬೇಡಿರೋ…ಶೇಂದಿ…ಶರಾಬು) ಇತ್ಯಾದಿ ಸ್ವರಚಿತ ಕವನಗಳ ಮೂಲಕ ದ.ಕ.ಜಿಲ್ಲೆಯ ಜನರನ್ನು ತಲುಪಿದರು. ತನ್ನ ಕೊನೆಯುಸಿರಿರುವವರೆಗೂ ಗಾಂಧಿವಾದಿಯಾಗಿಯೇ ಬದುಕಿದರು. ಅವರು ಕನ್ನಡವಲ್ಲದೇ ತುಳು, ಹವ್ಯಕ ಭಾಷೆಗಳಲ್ಲೂ ಸಾಹಿತ್ಯ ಕೃಷಿ ಮಾಡಿದ್ದರು. ತುಳುನಾಡು, ನುಡಿ, ಸಂಸ್ಕೃತಿ, ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. ಬಾಲಸಾಹಿತ್ಯದಲ್ಲೂ ಪಳಗಿದ ಶೆಟ್ಟರ “ಸುಂದರಿಯ ಚಂದ” ಎಂಬ ಮಕ್ಕಳ ಕತೆಯು ಬಡಗಿಯೊಬ್ಬನು ಕೆತ್ತಿದ ಸುಂದರಿ ಎಂಬ ಬೊಂಬೆಯ ಚಿತ್ರಣವಾಗಿದೆ. ಅಡ್ಯನಡ್ಕ ಶಾಲೆಯ ಅಧ್ಯಾಪಕರಾಗಿದ್ದಾಗ “ಶಿಶು ಜೀವಾಳ” ಎಂಬ ವಿದ್ಯಾರ್ಥಿ ಹಸ್ತಪತ್ರಿಕೆಯನ್ನು ಪ್ರಾರಂಭಿಸಿದರು. ೧೯೨೯ರಲ್ಲಿ ತುಳುವಿನಲ್ಲಿ ರಚಿಸಿದ ‘ಪೊರ್ಲಕಂಟ್’ ಮತ್ತು ‘ಅಮಲ್ ದೆಪ್ಪಡೆ’ ಎಂಬ ಕವನ ಸಂಕಲನಗಳಲ್ಲಿನ ತುಳು ಪದಗಳ ವೈಶಿಷ್ಟ್ಯ ಮತ್ತು ಭಾರ ನೋಡಿದರೆ ಈ ಕಾಲದ ಸಾಹಿತಿಗಳಿಗೆ ಅಚ್ಚರಿಯಾಗಬಹುದು. ತುಳು ಶಬ್ದಗಳ ಹುಟ್ಟು ಮತ್ತು ವಿಕಾಸದ ಬಗ್ಗೆಯೂ ಸಾಕಷ್ಟು ಬರೆದಿರುವ ಇವರು ತುಳು ಭಾಷಾತಜ್ಞನೂ ಹೌದು. ತುಳು ಸ್ಥಳನಾಮಗಳ ಬಗ್ಗೆಯೂ ಸಂಶೋಧನೆಗೈದಿದ್ದಾರೆ.

ಕನ್ನಡದಲ್ಲಿ ‘ಮಂಜಟ್ಟಿ ಕೋಣ’, ಜಾತಿ ಮತ್ತು ವರ್ಣ ಬೇಧ ನೀತಿಯನ್ನು ವಿರೋಧಿಸುವ
`ಕರಿ-ಬಿಳಿ ಕಾಳಗ’, ‘ಕಾಸರಗೋಡು ಕನ್ನಡಿಗರ ಗೋಳಿನ ಕತೆ’ ಇತ್ಯಾದಿ ಕವನಗಳ ಜೊತೆಗೆ ಭಾಮಿನಿ ಹಾಗೂ ವಾರ್ಧಕ ಷಟ್ಪದಿಯಲ್ಲೂ ಬರೆದಿದ್ದಾರೆ. ಚೀನಾ ಆಕ್ರಮಣದ ಸಂದರ್ಭದಲ್ಲಿ ವಾರ್ಧಕ ಷಟ್ಪದಿಯಲ್ಲಿ “ಭಾರತೀಯರೊಂದಾಗಿ” ಎಂಬ ದೇಶಪ್ರೇಮವನ್ನು ಸಾರುವ ಕವನವನ್ನು ಬರೆದು ಆ ಮೂಲಕ ಜಾಗೃತಿ ಮೂಡಿಸಿದ್ದರು. ಯಕ್ಷಗಾನ ಅರ್ಥದಾರಿಯಾಗಿದ್ದ ಶೆಟ್ಟರು “ದಂಡಯಾತ್ರೆ” ಎಂಬ ಯಕ್ಷಗಾನ ಪ್ರಸಂಗವೊಂದನ್ನು ರಚಿಸಿದ್ದರು. ‘ಕೂಸಕ್ಕನ ಮದುವೆ’ ಎಂಬ ನಾಟಕ ಹವ್ಯಕ ಭಾಷಾ ಸಾಹಿತ್ಯಕ್ಕೆ ಶೆಟ್ಟರ ವಿಶೇಷ ಕೊಡುಗೆ. ಸಂಧಿ, ಸಮಾಸ, ಷಟ್ಪದಿಗಳಲ್ಲಿ ಅಪಾರ ಪಾಂಡಿತ್ಯ ಗಳಿಸಿದ್ದ ಶೆಟ್ಟರು “ಗುರುಮಿತ್ರ” ಎಂಬ ಅಧ್ಯಾಪಕರ ಸಂಘದ ಹಸ್ತಪತ್ರಿಕೆಯ ಸಂಪಾದಕರಾಗಿದ್ದರು. ನಿನ್ನೆ ಮೊನ್ನೆಯಷ್ಟೇ ಮೂಲಸ್ವರೂಪವನ್ನು ಉಳಿಸುತ್ತಲೇ ಆಧುನಿಕತೆಯತ್ತ ಮುಖಮಾಡಿರುವ ನನ್ನೂರಿನಲ್ಲಿ ಆ ಕಾಲದಲ್ಲಿ ಓರ್ವ ಅಧ್ಯಾಪಕನಾಗಿ, ಸಾಹಿತಿಯಾಗಿ, ಸ್ವಾತಂತ್ರ‍್ಯ ಹೋರಾಟಗಾರನಾಗಿ ಒಂದು ಅರ್ಥಪೂರ್ಣ ಬದುಕು ಸವೆಸಿದ ನರ್ಕಳ ಮಾರಪ್ಪ ಶೆಟ್ಟರನ್ನು ನನ್ನೂರು ಮರೆತಿರುವುದು ವಿಷಾದನೀಯ…

  • ಮಿಸ್ರಿಯಾ ಐ ಪಜೀರ್, ಯುವ ಬರಹಗಾರ್ತಿ.

ನಾ ಹ್ಯಾಂಗ ಮರೆಯಲಿ ನಿನ್ನ ಗಾಂಧಿ ತಾತ… : ಮಿಸ್ರಿಯಾ ಐ. ಪಜೀರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....