Homeಕರ್ನಾಟಕಗಾಂಧಿ ವಿಚಾರಗಳನ್ನು ಮುನ್ನಡೆಸುವ ಕೆಲಸ ಮುದುಕರಿಗೆ ಬಿಡಬೇಡಿ, ಯುವಜನರು ಕೈಗೆತ್ತಿಕೊಳ್ಳಿ: ಹೆಗ್ಗೋಡು ಪ್ರಸನ್ನ

ಗಾಂಧಿ ವಿಚಾರಗಳನ್ನು ಮುನ್ನಡೆಸುವ ಕೆಲಸ ಮುದುಕರಿಗೆ ಬಿಡಬೇಡಿ, ಯುವಜನರು ಕೈಗೆತ್ತಿಕೊಳ್ಳಿ: ಹೆಗ್ಗೋಡು ಪ್ರಸನ್ನ

- Advertisement -
- Advertisement -

(ಮಂಡ್ಯದ ಗಾಂಧಿಭವನದಲ್ಲಿ ನಡೆದ ‘ಗಾಂಧಿಯೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮದಲ್ಲಿ “ಇಂದಿಗೆ ಅನಿವಾರ್ಯವಾಗಿರುವ ಗಾಂಧಿ ಮತ್ತು ಅವರ ಆರ್ಥಿಕ ಚಿಂತನೆ’ ವಿಷಯದ ಕುರಿತು ಹೆಗ್ಗೋಡು ಪ್ರಸನ್ನರವರು ಮಾಡಿದ ಭಾಷಣದ ಪೂರ್ಣಪಾಠ ಇಲ್ಲಿದೆ.)

ಮಹಾತ್ಮ ಗಾಂಧಿಯವರನ್ನು ಸ್ಪಷ್ಟವಾಗಿ ಅರಿತುಕೊಳ್ಳುವುದು ಈ ಪಾದಯಾತ್ರೆಯ ಉದ್ದೇಶ ಎಂದು ಸ್ಪಷ್ಟವಾಗಿ ಹೇಳಿದ್ದೀರಿ. ಕೆಲವರು ಪುಸ್ತಕ ಓದುವುದರ ಮತ್ತು ಬೌದ್ಧಿಕ ಚರ್ಚೆಯ ಮೂಲಕ ಗಾಂಧಿಯವರನ್ನು ಅರ್ಥಮಾಡಿಕೊಳ್ಳಬಹುದು ಎನ್ನುತ್ತಿದ್ದಾರೆ. ಆದರೆ ಅದು ತಪ್ಪು ಕಲ್ಪನೆಯಾಗಿದೆ.

ಜನರ ಬಳಿಗೆ ಹೋಗುವ ಪಾದಯಾತ್ರೆಯೇ ಉತ್ತಮ ಮಾರ್ಗ. ಅದೇ ಅರಿವು. ಅಲ್ಲಿ ನಿಧಾನವಾಗಿ ನಡೆಯುತ್ತೇವೆ. ಅಲ್ಲಿನ ಗ್ರಾಮ, ಮನುಷ್ಯರು, ಇಡೀ ಹಳ್ಳಿಯ ಪರಿಸರ ಅನುಭವಕ್ಕೆ ಬರುತ್ತದೆ‌. ಆದರೆ ಇಂದು ಅನುಭವವೇ ಕಾಣೆಯಾಗಿದೆ. ಎಲ್ಲವೂ ನಮಗೆ ಕೇವಲ ಮಾಹಿತಿಯಾಗಿ ದೊರೆಯುತ್ತದೆ. ಕೇವಲ ಮಾಹಿತಿ ಅಥವಾ ಜ್ಞಾನದಿಂದ ಚಳವಳಿ, ಸಮಾಜ ಕಟ್ಟಲು ಆಗುವುದಿಲ್ಲ ಎಂದು ಗಾಂಧಿಜಿಯವರು ಹೇಳಿದ್ದರು..

ಬಸವಣ್ಣ, ಕಬೀರ, ಅಲ್ಲಮನ ರೀತಿಯಲ್ಲಿಯೇ ಗಾಂಧಿಯನ್ನು ಸಹ ಒಬ್ಬ ಸಂತನಾಗಿ ಇಲ್ಲವೇ ರಾಜಕಾರಣಿಯಾಗಿ ನೋಡುವ ಪ್ರವೃತ್ತಿ ನಮ್ಮಲ್ಲಿ ಬೆಳೆದುಬಂದಿದೆ. ಅದರೆ ಅವರ ಕೆಲಸದ ಬುನಾದಿ ಅವರ ಆರ್ಥಿಕ ಕಾರ್ಯಕ್ರಮವಾಗಿದೆ. ಅದನ್ನು ಗ್ರಾಮ ಸ್ವರಾಜ್ಯ ಎಂದು ಕರದಿದ್ದರು. ಆದರೆ ಅದನ್ನು ಸಮಗ್ರವಾಗಿ ಮಾಡಲು ರಾಜಕೀಯ ಚಳವಳಿಯ ಕಾರಣಗಳಿಗಾಗಿ ಗಾಂಧಿಯವರಿಗೆ ಸಮಯ ಸಿಗಲಿಲ್ಲ.

ನಾಳೆ ಯಾರಿಗೆ ಬರಬೇಕು ಸ್ವತಂತ್ರ? ಎಂದು ಗಾಂಧಿ ಕೇಳಿದ್ದರು‌. ಸಾಮಾನ್ಯ ಜನರಿಗೆ, ಬಡಜನರಿಗೆ ಸ್ವಾತಂತ್ರ್ಯ ಸಿಗಬೇಕು. ಆದರೆ ಅವರಿಗೆ ಅದರ ಕಲ್ಪನೆ ಸಹ ಇಲ್ಲ. ಅವರ ಹಕ್ಕುಗಳ ಪರಿಚಯವಿಲ್ಲ. ಅವರಿಗೆ ಜಾತಿವಿನಾಶದ, ಲಿಂಗತಾರತಮ್ಯ, ಆರೋಗ್ಯ ಶಿಕ್ಷಣದ ಅರಿವಿಲ್ಲ‌. ನಾವು ಇದರ ಪರಿಚಯ ಮಾಡಿಕೊಡಬೇಕು..

ಎಲ್ಲಾ ರಚನಾತ್ಮಕ ಕೆಲಸಗಳನ್ನು ಬದಿಗೊತ್ತಿ ನಾವು ಕೇವಲ ಕಾನೂನಾತ್ಮಕ ಕೆಲಸಗಳನ್ನು ಮಾತ್ರ ಮಾಡಿದ್ದೇವೆ. ನಾವು ಮಾಡಿರುವ ಕಾನೂನುಗಳಲ್ಲಿ ಕಾಲುಭಾಗ ಜಾರಿಗ ಬಂದಿದ್ದರೂ ಸಹ ಭಾರತ ಸಮಾಜವಾದಿ ರಾಷ್ಟ್ರವಾಗುತ್ತಿತ್ತು. ಆದರೆ ಇಂದು ಭ್ರಷ್ಟಾಚಾರದ ದೇಶವಾಗುತ್ತಿದೆ.

ಇಂತಹ ಸಂಕಟದ ಸಮಯದಲ್ಲಿ ರಚನಾತ್ಮಕ ಚಳವಳಿ ಕಡೆಗೆ ಹೋಗಬೇಕಿದೆ. ನಮ್ಮ ಹಳ್ಳಿ ಜನರಿಗೆ ಮಳೆ ಬೆಳೆ ಸರಿಯಾಗಿ ಆಗುತ್ತಿಲ್ಲ, ಶೆಕೆಯಾಗುತ್ತಿದೆ, ಉದ್ಯೋಗವಿಲ್ಲ.. ಎನ್ನುವುದು ಮಾತ್ರ ಗೊತ್ತಿದೆ. ಆದರೆ ಕರಾಳ ದಿನಗಳ ಕಲ್ಪನೆ ಅವರಿಗಿಲ್ಲ.

ಒಬ್ಬ ವಿಜ್ಞಾನಿಗಳು ಹೇಳುತ್ತಾರೆ ಇನ್ನ 14 ವರ್ಷದಲ್ಲಿ ನಮ್ಮ ಈ ಅಭಿವೃದ್ಧಿಯ ಮಾದರಿಯನ್ನು ಬದಲಾಯಿಸಬೇಕು. ಅದಕ್ಕಾಗಿ ಹೋರಾಟ ನಡೆಯುತ್ತಿದೆ. ಅದರ ನಾಯಕತ್ವ ವಹಿಸುತ್ತಿರುವುದು ಯುವಜನತೆ.. ಅದರ ನಾಯಕಿ 16 ವರ್ಷದ ಗ್ರೇಟಾ ಥನ್ಬೆರ್ಗ್ ಕರೆಗೆ ಇಡೀ ವಿಶ್ವದ ಯುವಜನತೆ ಸಕರಾತ್ಮಕವಾಗಿ ಸ್ಪಂದಿಸಿದೆ. ಅಹಿಂಸಾತ್ಮಕವಾಗಿ ಗಾಂಧಿ ಮಾದರಿಯಲ್ಲಿ ನಡೆಯುತ್ತಿದ್ದು ನನ್ನ ಭವಿಷ್ಯವನ್ನು ನೀವೇಕೆ ಹಾಳು ಮಡುತ್ತಿದ್ದೀರಿ ಎಂದು ಆ ಹುಡುಗಿ ಪ್ರಶ್ನಿಸುತ್ತಿದ್ದಾಳೆ. ನಮ್ಮ ಮೂರು ಪ್ರಶ್ನೆಗಳಿವೆ.

ಮೊದಲ ಪ್ರಶ್ನೆ: 

ಮೊದಲ ಪ್ರಶ್ನೆ ಉದ್ಯೋಗದ್ದಾಗಿದೆ. ಕಳೆದ ನಾಲ್ಕು ತಿಂಗಳಿಂದ ನಮ್ಮ ದೇಶದಲ್ಲಿ ದಿನಕ್ಕೆ ಮೂರು ಲಕ್ಷ ಉದ್ಯೋಗಗಳು ನಷ್ಟವಾಗುತ್ತಿವೆ. ಹಾಗಾದರೆ ಕಷ್ಟಪಟ್ಟು ಓದುತ್ತಿರುವವರು ಮಣ್ಣು ತಿನ್ನಬೇಕೆ?

ಎರಡನೇ ಪ್ರಶ್ನೆ: 

ಎರಡನೇ ಪ್ರಶ್ನೆ ಪರಿಸರ ನಾಶವಾಗಿದೆ. ತಕ್ಷಣದಲ್ಲಿ ವಿಪರೀತ ಬೆಂಕಿ ಉಳಿಸುವ ಕೆಲಸ ಮಾಡದಿದ್ದರೆ ನಮ್ಮ ಪ್ರಪಂಚ ಖಂಡಿತ ವಾಸಯೋಗ್ಯವಾಗಿ ಉಳಿಯುವುದಿಲ್ಲ. ಇಂದು ಬೆಂಕಿ ಹಚ್ಚುವುದರ ಮೂಲಕ ಮಾತ್ರವೇ ಪ್ರಗತಿಯಾಗುತ್ತಿದೆ ಎಂದು ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಉದಾಹರಣೆಗೆ ನೀವು ಬೆಂಗಳೂರಿನಿಂದ ದೆಹಲಿಗೆ ವಿಮಾನದಲ್ಲಿ ಹೋದರೆ ಪ್ರತಿಯೊಬ್ಬ 29 ಕೆಜಿ ಕಾರ್ಬನ್ ಡೈಆಕ್ಸೈಡ್ ಅನ್ನು ಪರಿಸರಕ್ಕೆ ಬಿಡುತ್ತಿದ್ದೇವೆ ಎಂಬುದನ್ನು ಮರೆಯಬರದು.

ಮೂರನೇಯದು ಧರ್ಮದ ಪ್ರಶ್ನೆ:

ಇಂದು ರಾಜಕೀಯ ಕಾರಣಗಳಿಗಾಗಿ ಧರ್ಮ ಎನ್ನುವುದೇ ಜನರನ್ನು ಒಡೆಯುವ ಅಸ್ತ್ರ ಆಗಿದೆ. ಮೇಲ್ಜಾತಿಯವರನ್ನು ಮತ್ತಷ್ಟು ಕೊಬ್ಬಿಸಲು ಧರ್ಮ ಕಾರಣವಗುತ್ತಿದೆ. ಧರ್ಮ ಇಂದು ಒಳ್ಳೆಯ ಅಲೋಚನಗಳನ್ನು ಹಿಮ್ಮೆಟ್ಟುಸುವ ಅಸ್ತ್ರವಾಗಿದೆ. ನಿರುದ್ಯೋಗ, ಪರಿಸರ ನಾಶ, ಧರ್ಮದ ದುರ್ಬಳಕೆ ಈ ಮೂರು ವಿಷಯಗಳು ಇಂದು ನಮ್ಮನ್ನು ಬಾಧಿಸುತ್ತಿವೆ.

ಈ ದೇಶದ 60% ಕೃಷಿಭೂಮಿಯಲ್ಲಿ ಈಗಲೂ ಮಳೆಯಾಧಾರಿತ ಬೇಸಾಯ ನಡೆಯುತ್ತಿದೆ. ಮೀನುಗಾರಿಗೆ, ಹೈನೋದ್ಯಮ ಇತ್ಯಾದಿಗಳು ಇಂದಿಗೂ ಕೈ ಉತ್ಪಾದನೆಗಳಾಗಿವೆ. ಇದನ್ನು ನಡೆಸುವ ಜನ ಮತ್ತು ಕೌಶಲ್ಯ ನಮಗಿದೆ‌. ಇದನ್ನೆ ಗಾಂಧಿಯವರು ಗ್ರಾಮ ಸ್ವರಾಜ್ಯ ಎಂದಿದ್ದರು. ಅವರು ಸಮಾಜವಾದ, ಪರಿಸರ ರಕ್ಷಣೆ ಮತ್ತು ದುಡಿಯುವುದೇ ಧರ್ಮ ಎಂದು ಮಾತನಾಡಿದ್ದರು. ಈ ಮೂರನ್ನು ಒಟ್ಟಾಗಿ ಸೇರಿಸಿದರೆ ನಮಗೆ ಗಾಂಧಿ ಅರ್ಥವಾಗುತ್ತಾರೆ.

ಎಲ್ಲಾ ಧಾರೆಗಳ ಜನರು ಇಲ್ಲಿ ನೆರದಿದ್ದೀರಿ.. ಪ್ರತ್ಯೇಕತೆ ಕಳಚಿ ಹೋರಾಟ ಮಡಬೇಕಾದ ಪರಿಸ್ಥಿತಿ ಇಂದು ಬಂದಿದೆ. ಅದಕ್ಕೆ ಗಾಂಧಿಜಿಯವರ ವಿಚಾರಧಾರೆಗಳು ನಾಯಕತ್ವ ನೀಡುತ್ತವೆ.

ಏಸುಕ್ರಿಸ್ತ, ರಾಮ, ಬಸವಣ್ಣನವರ ಭಜನೆ ರೀತಿ ಗಾಂಧಿಯವರ ಭಜನೆ ಇಂದು ಬೇಡ. ನಾವು ಶ್ರಮದಾನ ಮಾಡಬೇಕಿದೆ. ಏಕೆಂದರೆ ಈ ದೇಶ ನಡೆಯುತ್ತಿರುವುದೇ ಕೋಟ್ಯಾಂತರ ಶ್ರಮಿಕರ ಶ್ರಮದಿಂದ‌. ಬುದ್ದಿಜೀವಿಗಳು, ವಿಚಾರವಂತರು ಶ್ರಮದಾನ ಮಾಡಿದರೆ ಅಗ ಅದಕ್ಕೆ ಅಪಾರವಾದ ಮಹತ್ವ ಬರುತ್ತದೆ. ಈ ಕೆಲಸ ಮುಂದುವರಿಸಿ, ಗಾಂಧಿಯನ್ನು ಜೀವಂತಗೊಳಿಸಿ, ರಚನಾತ್ಮಕ ಕೆಲಸ ಮುಂದುವರೆಸುವ ಕೆಲಸವನ್ನು ಮುದುಕರಿಗೆ ಬಿಡಬೇಡಿ.. ಯುವಕರೆ ಕೈಗೆತ್ತಿಕೊಳ್ಳಿ.

ಗಾಂಧಿಯನ್ನು ಕೇವಲ ಮುದುಕರಿಗೆ ಬಿಡಬೇಡಿ, ಗಾಂಧಿ ವಿಚಾರಧಾರೆಯ ವಾರಸುದಾರರು ಯುವಜನರೆ ಆಗಬೇಕು. ಜೊತೆಗೆ ಗಾಂಧಿಯನ್ನು ಬೋರ್ ಎನಿಸಬಾರದು. ಅದನ್ನು ಅರ್ಥಮಾಡಿಕೊಳ್ಳುವುದು ಕಷ್ಟದ ವಿಷಯವಾಗಿಸಬೇಡಿ..ಗಾಂಧಿ ಸರಳವಾಗಿದ್ದರು, ಇಡೀ ದೇಶ ಸುತ್ತಿದರು, ತಮಾಷೆಗಳನ್ನು ಮಾಡುವ ಚೈತನ್ಯವಾಗಿದ್ದರು ಎಂಬುದನ್ನು ಮರೆಯಬಾರದು.

ಶ್ರಮ ಸಂಸ್ಕತಿಯನ್ನು ಜೀವಂತವುಳಿಸಿ, ಮುಸ್ಲಿಂ ಹೆಣ್ಣು ಮಕ್ಕಳು ಸಹ ಹೊರಬಂದು ದೇಶಕಟ್ಟುವ ಕಲಸ ಮಾಡಬೇಕಿದೆ. ಆ ಮೂಲಕ ಸಮಾಜವನ್ನು ಮತಧರ್ಮ ನಿರಪೇಕ್ಷವನ್ನಾಗಿ ಮಾಡೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನನ್ನನ್ನು ಎದುರಿಸಲು 19 ರಾಜ್ಯಗಳು, ಕೇಂದ್ರ ಒಗ್ಗೂಡಿವೆ, ನಾನು ಸಾಮಾನ್ಯ ಜನರಿಗಾಗಿ ಏಕಾಂಗಿಯಾಗಿ ಹೋರಾಡುತ್ತಿದ್ದೇನೆ’: ಮಮತಾ ಬ್ಯಾನರ್ಜಿ

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ತಮ್ಮ ವಿರುದ್ಧ ಹೋರಾಡಲು 19 ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ಒಗ್ಗೂಡಿವೆ ಮತ್ತು ಅವರು ಸಾಮಾನ್ಯ ಜನರಿಗಾಗಿ ಏಕಾಂಗಿಯಾಗಿ...

ಮತಗಟ್ಟೆಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ : ಕೇಂದ್ರ ಸರ್ಕಾರ, ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಮತದಾನ ಕೇಂದ್ರಗಳಲ್ಲಿ ಬೆರಳಚ್ಚು ಮತ್ತು ಕಣ್ಣಿನ ಮಣಿ (ಐರಿಸ್) ಆಧಾರಿತ ಬಯೋಮೆಟ್ರಿಕ್ ಗುರುತಿಸುವಿಕೆಯನ್ನು ಜಾರಿಗೆ ತರಬೇಕು ಎಂದು ಕೋರಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ಸಂಬಂಧ ಸುಪ್ರೀಂ...

‘ಅಸ್ಸಾಂ ಮುಖ್ಯಮಂತ್ರಿ ದೇಶದ ಅತ್ಯಂತ ಭ್ರಷ್ಟ, ತಮ್ಮ ವಿರೋಧಿಗಳನ್ನು ಮುಗಿಸಲು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ; ರಾಹುಲ್ ಗಾಂಧಿ

ನವದೆಹಲಿ: "ಅಸ್ಸಾಂನ ಪ್ರಸ್ತುತ ಮುಖ್ಯಮಂತ್ರಿ ದೇಶದ ಅತ್ಯಂತ ಭ್ರಷ್ಟ. ಅವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಮ್ಮ ರಾಜಕೀಯ ವಿರೋಧಿಗಳು ಮತ್ತು ವಿಮರ್ಶಕರನ್ನು ಕಿರುಕುಳ ನೀಡಲು ಅವರು ರಾಜ್ಯ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು ಸಂವಿಧಾನಕ್ಕೆ ವಿರುದ್ಧವಾಗಿದೆ"...

ಕೃಷಿ ವೆಚ್ಚದ ಆಧಾರದ ಮೇಲೆ ಎಂಎಸ್‌ಪಿ ನಿಗದಿ ಕೋರಿ ರೈತರಿಂದ ಅರ್ಜಿ : ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ನಿಗದಿಪಡಿಸುವಾಗ, ಆಯಾ ರಾಜ್ಯ ಸರ್ಕಾರಗಳು ಪ್ರಸ್ತಾಪಿಸಿದ 'C2' ಎಂದು ಕರೆಯಲಾಗುವ ಕೃಷಿ ವೆಚ್ಚಕ್ಕೆ ಸಮರ್ಪಕ ಪ್ರಾಮುಖ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ...

ದೆಹಲಿ ವಿವಿ: ಅಂಬೇಡ್ಕರ್ ಕಾಲೇಜಿನಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ವಿರೋಧಿಸಿ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಬಂಧನ

ಸೋಮವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಆಯೋಜಿಸಿದ್ದ ಕಾರ್ಯಕ್ರಮವನ್ನು ವಿರೋಧಿಸಿ ಪ್ರತಿಭಟಿಸಿದ ದೆಹಲಿ ವಿಶ್ವವಿದ್ಯಾಲಯದ ಡಾ. ಭೀಮ್ ರಾವ್ ಅಂಬೇಡ್ಕರ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿ, ದೆಹಲಿ ಪೊಲೀಸರು...

ಪವನ್ ಖೇರಾಗೆ ನಿರೀಕ್ಷಣಾ ಜಾಮೀನು : ತೆಲಂಗಾಣ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಅಸ್ಸಾಂ ಸರ್ಕಾರ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ವಿರುದ್ಧದ ಹೇಳಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ತೆಲಂಗಾಣ ಹೈಕೋರ್ಟ್ ಒಂದು ವಾರದ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ನೀಡಿದ...

ಶಾಂತಿಗಾಗಿ ಕರೆ ನೀಡಿದ್ದ ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ; ತಾನೇ ಯೇಸು ಕ್ರಿಸ್ತ ಎಂಬಂತೆ ಎಐ ಫೋಟೋ ಹಂಚಿಕೊಂಡ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ರಾತ್ರಿ ಪೋಪ್ ಲಿಯೋ XIV ವಿರುದ್ಧ ಅಸಾಧಾರಣ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಜನಿಸಿದ ಕ್ಯಾಥೋಲಿಕ್ ಚರ್ಚ್‌ನ ಜಾಗತಿಕ ನಾಯಕ "ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ" ಮತ್ತು...

ಜಾಮೀನು ನಿರಾಕರಣೆ : ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ ಉಮರ್ ಖಾಲಿದ್

ದೆಹಲಿ ಗಲಭೆ ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ ಜನವರಿ 5ರ ಆದೇಶವನ್ನು ಮರು ಪರಿಶೀಲಿಸುವಂತೆ ಕೋರಿ ಉಮರ್ ಖಾಲಿದ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ಬುಧವಾರಕ್ಕೆ (ಏ.15) ನಿಗದಿಯಾಗಿದೆ ಎಂದು...

ಜಾರ್ಖಂಡ್| ಅಬಕಾರಿ ಕಾನ್‌ಸ್ಟೆಬಲ್ ಪರೀಕ್ಷೆ ಪತ್ರಿಕೆ ಸೋರಿಕೆ ಪ್ರಕರಣ; 159 ಅಭ್ಯರ್ಥಿಗಳ ಬಂಧನ

ರಾಂಚಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯಿಂದ 159 ಅಭ್ಯರ್ಥಿಗಳನ್ನು ಪೊಲೀಸರು ಬಂಧಿಸಿದ ನಂತರ ಪರೀಕ್ಷೆ ಪತ್ರಿಕೆ ಸೋರಿಕೆ ಕೃತ್ಯ ಬೆಳಕಿಗೆ ಬಂದಿದೆ. ತಮರ್ ಪೊಲೀಸ್ ಠಾಣೆ ವ್ಯಾಪ್ತಿಯ ರಾರ್ಗಾಂವ್‌ನಲ್ಲಿರುವ ಸ್ಥಳದಲ್ಲಿ ಅಭ್ಯರ್ಥಿಗಳನ್ನು ಒಟ್ಟುಗೂಡಿಸಲಾಗಿದ್ದು, ಪರೀಕ್ಷೆಗೆ ಮೊದಲು...

ನೋಯ್ಡಾ: ವೇತನ ಹೆಚ್ಚಳಕ್ಕೆ ಒತ್ತಾಯಿಸಿ ನಡೆದ ಕಾರ್ಮಿಕರ ಪ್ರತಿಭಟನೆಯಲ್ಲಿ ಹೆಚ್ಚಿದ ಹಿಂಸಾಚಾರ; ಕಲ್ಲು ತೂರಾಟ, ವಾಹನಗಳು ಧ್ವಂಸ

ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದಲ್ಲಿ ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳಿಗಾಗಿ ಕಾರ್ಮಿಕರು ನಡೆಸುತ್ತಿದ್ದ ಪ್ರತಿಭಟನೆ ಸೋಮವಾರ ತೀವ್ರ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನೆಯ ಸಮಯದಲ್ಲಿ, ವಾಹನಗಳು ಮತ್ತು ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಲಾಗಿದ್ದು, ಕಲ್ಲು ತೂರಾಟ...