Homeಕರ್ನಾಟಕಗಾಂಧಿ ವಿಚಾರಗಳನ್ನು ಮುನ್ನಡೆಸುವ ಕೆಲಸ ಮುದುಕರಿಗೆ ಬಿಡಬೇಡಿ, ಯುವಜನರು ಕೈಗೆತ್ತಿಕೊಳ್ಳಿ: ಹೆಗ್ಗೋಡು ಪ್ರಸನ್ನ

ಗಾಂಧಿ ವಿಚಾರಗಳನ್ನು ಮುನ್ನಡೆಸುವ ಕೆಲಸ ಮುದುಕರಿಗೆ ಬಿಡಬೇಡಿ, ಯುವಜನರು ಕೈಗೆತ್ತಿಕೊಳ್ಳಿ: ಹೆಗ್ಗೋಡು ಪ್ರಸನ್ನ

- Advertisement -
- Advertisement -

(ಮಂಡ್ಯದ ಗಾಂಧಿಭವನದಲ್ಲಿ ನಡೆದ ‘ಗಾಂಧಿಯೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮದಲ್ಲಿ “ಇಂದಿಗೆ ಅನಿವಾರ್ಯವಾಗಿರುವ ಗಾಂಧಿ ಮತ್ತು ಅವರ ಆರ್ಥಿಕ ಚಿಂತನೆ’ ವಿಷಯದ ಕುರಿತು ಹೆಗ್ಗೋಡು ಪ್ರಸನ್ನರವರು ಮಾಡಿದ ಭಾಷಣದ ಪೂರ್ಣಪಾಠ ಇಲ್ಲಿದೆ.)

ಮಹಾತ್ಮ ಗಾಂಧಿಯವರನ್ನು ಸ್ಪಷ್ಟವಾಗಿ ಅರಿತುಕೊಳ್ಳುವುದು ಈ ಪಾದಯಾತ್ರೆಯ ಉದ್ದೇಶ ಎಂದು ಸ್ಪಷ್ಟವಾಗಿ ಹೇಳಿದ್ದೀರಿ. ಕೆಲವರು ಪುಸ್ತಕ ಓದುವುದರ ಮತ್ತು ಬೌದ್ಧಿಕ ಚರ್ಚೆಯ ಮೂಲಕ ಗಾಂಧಿಯವರನ್ನು ಅರ್ಥಮಾಡಿಕೊಳ್ಳಬಹುದು ಎನ್ನುತ್ತಿದ್ದಾರೆ. ಆದರೆ ಅದು ತಪ್ಪು ಕಲ್ಪನೆಯಾಗಿದೆ.

ಜನರ ಬಳಿಗೆ ಹೋಗುವ ಪಾದಯಾತ್ರೆಯೇ ಉತ್ತಮ ಮಾರ್ಗ. ಅದೇ ಅರಿವು. ಅಲ್ಲಿ ನಿಧಾನವಾಗಿ ನಡೆಯುತ್ತೇವೆ. ಅಲ್ಲಿನ ಗ್ರಾಮ, ಮನುಷ್ಯರು, ಇಡೀ ಹಳ್ಳಿಯ ಪರಿಸರ ಅನುಭವಕ್ಕೆ ಬರುತ್ತದೆ‌. ಆದರೆ ಇಂದು ಅನುಭವವೇ ಕಾಣೆಯಾಗಿದೆ. ಎಲ್ಲವೂ ನಮಗೆ ಕೇವಲ ಮಾಹಿತಿಯಾಗಿ ದೊರೆಯುತ್ತದೆ. ಕೇವಲ ಮಾಹಿತಿ ಅಥವಾ ಜ್ಞಾನದಿಂದ ಚಳವಳಿ, ಸಮಾಜ ಕಟ್ಟಲು ಆಗುವುದಿಲ್ಲ ಎಂದು ಗಾಂಧಿಜಿಯವರು ಹೇಳಿದ್ದರು..

ಬಸವಣ್ಣ, ಕಬೀರ, ಅಲ್ಲಮನ ರೀತಿಯಲ್ಲಿಯೇ ಗಾಂಧಿಯನ್ನು ಸಹ ಒಬ್ಬ ಸಂತನಾಗಿ ಇಲ್ಲವೇ ರಾಜಕಾರಣಿಯಾಗಿ ನೋಡುವ ಪ್ರವೃತ್ತಿ ನಮ್ಮಲ್ಲಿ ಬೆಳೆದುಬಂದಿದೆ. ಅದರೆ ಅವರ ಕೆಲಸದ ಬುನಾದಿ ಅವರ ಆರ್ಥಿಕ ಕಾರ್ಯಕ್ರಮವಾಗಿದೆ. ಅದನ್ನು ಗ್ರಾಮ ಸ್ವರಾಜ್ಯ ಎಂದು ಕರದಿದ್ದರು. ಆದರೆ ಅದನ್ನು ಸಮಗ್ರವಾಗಿ ಮಾಡಲು ರಾಜಕೀಯ ಚಳವಳಿಯ ಕಾರಣಗಳಿಗಾಗಿ ಗಾಂಧಿಯವರಿಗೆ ಸಮಯ ಸಿಗಲಿಲ್ಲ.

ನಾಳೆ ಯಾರಿಗೆ ಬರಬೇಕು ಸ್ವತಂತ್ರ? ಎಂದು ಗಾಂಧಿ ಕೇಳಿದ್ದರು‌. ಸಾಮಾನ್ಯ ಜನರಿಗೆ, ಬಡಜನರಿಗೆ ಸ್ವಾತಂತ್ರ್ಯ ಸಿಗಬೇಕು. ಆದರೆ ಅವರಿಗೆ ಅದರ ಕಲ್ಪನೆ ಸಹ ಇಲ್ಲ. ಅವರ ಹಕ್ಕುಗಳ ಪರಿಚಯವಿಲ್ಲ. ಅವರಿಗೆ ಜಾತಿವಿನಾಶದ, ಲಿಂಗತಾರತಮ್ಯ, ಆರೋಗ್ಯ ಶಿಕ್ಷಣದ ಅರಿವಿಲ್ಲ‌. ನಾವು ಇದರ ಪರಿಚಯ ಮಾಡಿಕೊಡಬೇಕು..

ಎಲ್ಲಾ ರಚನಾತ್ಮಕ ಕೆಲಸಗಳನ್ನು ಬದಿಗೊತ್ತಿ ನಾವು ಕೇವಲ ಕಾನೂನಾತ್ಮಕ ಕೆಲಸಗಳನ್ನು ಮಾತ್ರ ಮಾಡಿದ್ದೇವೆ. ನಾವು ಮಾಡಿರುವ ಕಾನೂನುಗಳಲ್ಲಿ ಕಾಲುಭಾಗ ಜಾರಿಗ ಬಂದಿದ್ದರೂ ಸಹ ಭಾರತ ಸಮಾಜವಾದಿ ರಾಷ್ಟ್ರವಾಗುತ್ತಿತ್ತು. ಆದರೆ ಇಂದು ಭ್ರಷ್ಟಾಚಾರದ ದೇಶವಾಗುತ್ತಿದೆ.

ಇಂತಹ ಸಂಕಟದ ಸಮಯದಲ್ಲಿ ರಚನಾತ್ಮಕ ಚಳವಳಿ ಕಡೆಗೆ ಹೋಗಬೇಕಿದೆ. ನಮ್ಮ ಹಳ್ಳಿ ಜನರಿಗೆ ಮಳೆ ಬೆಳೆ ಸರಿಯಾಗಿ ಆಗುತ್ತಿಲ್ಲ, ಶೆಕೆಯಾಗುತ್ತಿದೆ, ಉದ್ಯೋಗವಿಲ್ಲ.. ಎನ್ನುವುದು ಮಾತ್ರ ಗೊತ್ತಿದೆ. ಆದರೆ ಕರಾಳ ದಿನಗಳ ಕಲ್ಪನೆ ಅವರಿಗಿಲ್ಲ.

ಒಬ್ಬ ವಿಜ್ಞಾನಿಗಳು ಹೇಳುತ್ತಾರೆ ಇನ್ನ 14 ವರ್ಷದಲ್ಲಿ ನಮ್ಮ ಈ ಅಭಿವೃದ್ಧಿಯ ಮಾದರಿಯನ್ನು ಬದಲಾಯಿಸಬೇಕು. ಅದಕ್ಕಾಗಿ ಹೋರಾಟ ನಡೆಯುತ್ತಿದೆ. ಅದರ ನಾಯಕತ್ವ ವಹಿಸುತ್ತಿರುವುದು ಯುವಜನತೆ.. ಅದರ ನಾಯಕಿ 16 ವರ್ಷದ ಗ್ರೇಟಾ ಥನ್ಬೆರ್ಗ್ ಕರೆಗೆ ಇಡೀ ವಿಶ್ವದ ಯುವಜನತೆ ಸಕರಾತ್ಮಕವಾಗಿ ಸ್ಪಂದಿಸಿದೆ. ಅಹಿಂಸಾತ್ಮಕವಾಗಿ ಗಾಂಧಿ ಮಾದರಿಯಲ್ಲಿ ನಡೆಯುತ್ತಿದ್ದು ನನ್ನ ಭವಿಷ್ಯವನ್ನು ನೀವೇಕೆ ಹಾಳು ಮಡುತ್ತಿದ್ದೀರಿ ಎಂದು ಆ ಹುಡುಗಿ ಪ್ರಶ್ನಿಸುತ್ತಿದ್ದಾಳೆ. ನಮ್ಮ ಮೂರು ಪ್ರಶ್ನೆಗಳಿವೆ.

ಮೊದಲ ಪ್ರಶ್ನೆ: 

ಮೊದಲ ಪ್ರಶ್ನೆ ಉದ್ಯೋಗದ್ದಾಗಿದೆ. ಕಳೆದ ನಾಲ್ಕು ತಿಂಗಳಿಂದ ನಮ್ಮ ದೇಶದಲ್ಲಿ ದಿನಕ್ಕೆ ಮೂರು ಲಕ್ಷ ಉದ್ಯೋಗಗಳು ನಷ್ಟವಾಗುತ್ತಿವೆ. ಹಾಗಾದರೆ ಕಷ್ಟಪಟ್ಟು ಓದುತ್ತಿರುವವರು ಮಣ್ಣು ತಿನ್ನಬೇಕೆ?

ಎರಡನೇ ಪ್ರಶ್ನೆ: 

ಎರಡನೇ ಪ್ರಶ್ನೆ ಪರಿಸರ ನಾಶವಾಗಿದೆ. ತಕ್ಷಣದಲ್ಲಿ ವಿಪರೀತ ಬೆಂಕಿ ಉಳಿಸುವ ಕೆಲಸ ಮಾಡದಿದ್ದರೆ ನಮ್ಮ ಪ್ರಪಂಚ ಖಂಡಿತ ವಾಸಯೋಗ್ಯವಾಗಿ ಉಳಿಯುವುದಿಲ್ಲ. ಇಂದು ಬೆಂಕಿ ಹಚ್ಚುವುದರ ಮೂಲಕ ಮಾತ್ರವೇ ಪ್ರಗತಿಯಾಗುತ್ತಿದೆ ಎಂದು ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಉದಾಹರಣೆಗೆ ನೀವು ಬೆಂಗಳೂರಿನಿಂದ ದೆಹಲಿಗೆ ವಿಮಾನದಲ್ಲಿ ಹೋದರೆ ಪ್ರತಿಯೊಬ್ಬ 29 ಕೆಜಿ ಕಾರ್ಬನ್ ಡೈಆಕ್ಸೈಡ್ ಅನ್ನು ಪರಿಸರಕ್ಕೆ ಬಿಡುತ್ತಿದ್ದೇವೆ ಎಂಬುದನ್ನು ಮರೆಯಬರದು.

ಮೂರನೇಯದು ಧರ್ಮದ ಪ್ರಶ್ನೆ:

ಇಂದು ರಾಜಕೀಯ ಕಾರಣಗಳಿಗಾಗಿ ಧರ್ಮ ಎನ್ನುವುದೇ ಜನರನ್ನು ಒಡೆಯುವ ಅಸ್ತ್ರ ಆಗಿದೆ. ಮೇಲ್ಜಾತಿಯವರನ್ನು ಮತ್ತಷ್ಟು ಕೊಬ್ಬಿಸಲು ಧರ್ಮ ಕಾರಣವಗುತ್ತಿದೆ. ಧರ್ಮ ಇಂದು ಒಳ್ಳೆಯ ಅಲೋಚನಗಳನ್ನು ಹಿಮ್ಮೆಟ್ಟುಸುವ ಅಸ್ತ್ರವಾಗಿದೆ. ನಿರುದ್ಯೋಗ, ಪರಿಸರ ನಾಶ, ಧರ್ಮದ ದುರ್ಬಳಕೆ ಈ ಮೂರು ವಿಷಯಗಳು ಇಂದು ನಮ್ಮನ್ನು ಬಾಧಿಸುತ್ತಿವೆ.

ಈ ದೇಶದ 60% ಕೃಷಿಭೂಮಿಯಲ್ಲಿ ಈಗಲೂ ಮಳೆಯಾಧಾರಿತ ಬೇಸಾಯ ನಡೆಯುತ್ತಿದೆ. ಮೀನುಗಾರಿಗೆ, ಹೈನೋದ್ಯಮ ಇತ್ಯಾದಿಗಳು ಇಂದಿಗೂ ಕೈ ಉತ್ಪಾದನೆಗಳಾಗಿವೆ. ಇದನ್ನು ನಡೆಸುವ ಜನ ಮತ್ತು ಕೌಶಲ್ಯ ನಮಗಿದೆ‌. ಇದನ್ನೆ ಗಾಂಧಿಯವರು ಗ್ರಾಮ ಸ್ವರಾಜ್ಯ ಎಂದಿದ್ದರು. ಅವರು ಸಮಾಜವಾದ, ಪರಿಸರ ರಕ್ಷಣೆ ಮತ್ತು ದುಡಿಯುವುದೇ ಧರ್ಮ ಎಂದು ಮಾತನಾಡಿದ್ದರು. ಈ ಮೂರನ್ನು ಒಟ್ಟಾಗಿ ಸೇರಿಸಿದರೆ ನಮಗೆ ಗಾಂಧಿ ಅರ್ಥವಾಗುತ್ತಾರೆ.

ಎಲ್ಲಾ ಧಾರೆಗಳ ಜನರು ಇಲ್ಲಿ ನೆರದಿದ್ದೀರಿ.. ಪ್ರತ್ಯೇಕತೆ ಕಳಚಿ ಹೋರಾಟ ಮಡಬೇಕಾದ ಪರಿಸ್ಥಿತಿ ಇಂದು ಬಂದಿದೆ. ಅದಕ್ಕೆ ಗಾಂಧಿಜಿಯವರ ವಿಚಾರಧಾರೆಗಳು ನಾಯಕತ್ವ ನೀಡುತ್ತವೆ.

ಏಸುಕ್ರಿಸ್ತ, ರಾಮ, ಬಸವಣ್ಣನವರ ಭಜನೆ ರೀತಿ ಗಾಂಧಿಯವರ ಭಜನೆ ಇಂದು ಬೇಡ. ನಾವು ಶ್ರಮದಾನ ಮಾಡಬೇಕಿದೆ. ಏಕೆಂದರೆ ಈ ದೇಶ ನಡೆಯುತ್ತಿರುವುದೇ ಕೋಟ್ಯಾಂತರ ಶ್ರಮಿಕರ ಶ್ರಮದಿಂದ‌. ಬುದ್ದಿಜೀವಿಗಳು, ವಿಚಾರವಂತರು ಶ್ರಮದಾನ ಮಾಡಿದರೆ ಅಗ ಅದಕ್ಕೆ ಅಪಾರವಾದ ಮಹತ್ವ ಬರುತ್ತದೆ. ಈ ಕೆಲಸ ಮುಂದುವರಿಸಿ, ಗಾಂಧಿಯನ್ನು ಜೀವಂತಗೊಳಿಸಿ, ರಚನಾತ್ಮಕ ಕೆಲಸ ಮುಂದುವರೆಸುವ ಕೆಲಸವನ್ನು ಮುದುಕರಿಗೆ ಬಿಡಬೇಡಿ.. ಯುವಕರೆ ಕೈಗೆತ್ತಿಕೊಳ್ಳಿ.

ಗಾಂಧಿಯನ್ನು ಕೇವಲ ಮುದುಕರಿಗೆ ಬಿಡಬೇಡಿ, ಗಾಂಧಿ ವಿಚಾರಧಾರೆಯ ವಾರಸುದಾರರು ಯುವಜನರೆ ಆಗಬೇಕು. ಜೊತೆಗೆ ಗಾಂಧಿಯನ್ನು ಬೋರ್ ಎನಿಸಬಾರದು. ಅದನ್ನು ಅರ್ಥಮಾಡಿಕೊಳ್ಳುವುದು ಕಷ್ಟದ ವಿಷಯವಾಗಿಸಬೇಡಿ..ಗಾಂಧಿ ಸರಳವಾಗಿದ್ದರು, ಇಡೀ ದೇಶ ಸುತ್ತಿದರು, ತಮಾಷೆಗಳನ್ನು ಮಾಡುವ ಚೈತನ್ಯವಾಗಿದ್ದರು ಎಂಬುದನ್ನು ಮರೆಯಬಾರದು.

ಶ್ರಮ ಸಂಸ್ಕತಿಯನ್ನು ಜೀವಂತವುಳಿಸಿ, ಮುಸ್ಲಿಂ ಹೆಣ್ಣು ಮಕ್ಕಳು ಸಹ ಹೊರಬಂದು ದೇಶಕಟ್ಟುವ ಕಲಸ ಮಾಡಬೇಕಿದೆ. ಆ ಮೂಲಕ ಸಮಾಜವನ್ನು ಮತಧರ್ಮ ನಿರಪೇಕ್ಷವನ್ನಾಗಿ ಮಾಡೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಮಿಳುನಾಡು| ರಸ್ತೆ ಅಪಘಾತದಲ್ಲಿ ಇಬ್ಬರು ದಲಿತ ಯುವಕರು ಸಾವು; ಜಾತಿ ವೈಷಮ್ಯ ಆರೋಪ

ತಮಿಳುನಾಡಿನ ಧರ್ಮಪುರಿಯಲ್ಲಿ ಬುಧವಾರ ರಾತ್ರಿ ಚಿನ್ನಾರ್ಥಳ್ಳಿ ಕೂಟ್ ರಸ್ತೆಯ ಬಳಿ ಅಪರಿಚಿತ ವಾಹನವೊಂದು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸೊನ್ನಂಪಟ್ಟಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ ಎಂದು...

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...