Homeಮುಖಪುಟದೊರೆಸ್ವಾಮಿ ಎಂಬ ರಾಕ್‍ಸ್ಟಾರ್ !! ಆರು ವರ್ಷದ ಹಿಂದೆ ಗೌರಿ ಲಂಕೇಶ್‌ ಬರೆದ ಲೇಖನ

ದೊರೆಸ್ವಾಮಿ ಎಂಬ ರಾಕ್‍ಸ್ಟಾರ್ !! ಆರು ವರ್ಷದ ಹಿಂದೆ ಗೌರಿ ಲಂಕೇಶ್‌ ಬರೆದ ಲೇಖನ

- Advertisement -
- Advertisement -

ಎಚ್.ಎಸ್ ದೊರೆಸ್ವಾಮಿಯವರಿಗೆ ಈಗ ವಯಸ್ಸು 97. ಆದರೆ ಅವರಿಗೆ ಅದೊಂದು ಮಿತಿಯೂ ಅಲ್ಲ ಅಡೆತಡೆಯೂ ಅಲ್ಲ! ಈಗಲೂ ಎಂತಹ ಸಾಹಸಕ್ಕೂ ಜೈ ಎನ್ನುವ ಜಾಯಮಾನ, ಯಾವ ಅಂಶವನ್ನೂ ಮರೆಯದ ಚುರುಕು ಬುದ್ಧಿ ಅವರದ್ದು. ಅವರಿಗಿರುವ ರಾಜಕೀಯ ಸಹೃದಯತೆ, ಪ್ರಾಮಾಣಿಕತೆ, ಚುರುಕುತನ, ಹಾಸ್ಯ ಮನೋವತ್ತಿ ಒಂದಿಷ್ಟೂ ಬೇಸರಪಟ್ಟುಕೊಳ್ಳದ, ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುವ ಅವರ ಮನೋಭಾವವನ್ನು ಮೆಚ್ಚದೆ ಇರಲು ಸಾಧ್ಯವೇ ಇಲ್ಲ. ಈಗಲೂ ಓದಲು ಕನ್ನಡಕ ಬಳಸದೆ, ಕಾಫಿ ಜೊತೆ ಸಕ್ಕರೆ ಬೇಕೇಬೇಕೆನ್ನುವ, ರುಚಿಕರವಾದ ಆಹಾರವನ್ನು ಇಷ್ಟ ಪಡುವ, ಪುಟ್ಟ ಮಕ್ಕಳಂತೆ ಸ್ವೀಟ್ಸ್ ಮತ್ತು ಐಸ್‍ಕ್ರೀಮ್ ಇಷ್ಟ ಪಡುವ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯಾದಂತ ಸುತ್ತಾಡುವ ಅವರ ಜೀವನೋತ್ಸಾಹ ಬೆರಗು ಮೂಡಿಸುವಂತಹವು.

ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರಲು ದೊರೆಸ್ವಾಮಿಯವರನ್ನು ಚಿಕ್ಕಮಗಳೂರಿಗೆ ಕರೆದುಕೊಂಡು ಹೋದರೆ ಅವರಿಗೆ ದಣಿವಾಗಬಹುದು ಎಂಬ ಕಾರಣಕ್ಕೇ ಮೊದಲು ನಾವು ಆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದೆವು. ಆದರೆ ಅದಕ್ಕೆ ಹಲವು ತಾಂತ್ರಿಕ ಕಾರಣಗಳು ಅಡ್ಡಿಯಾದಾಗ ಚಿಕ್ಕಮಗಳೂರಿನಲ್ಲಿ ಅದನ್ನು ಏರ್ಪಸುವುದು ಅನಿವಾರ್ಯವಾಯಿತು. ಶಿವಸುಂದರ್ ಅವರು ಹಿಂಜರಿಕೆಯಿಂದಲೇ .

“ಸಾರ್ ಇದಕ್ಕೆ ಚಿಕ್ಕಮಗಳೂರಿಗೇ ಹೋಗಬೇಕಾಗುತ್ತದೆ” ಎಂದು ದೊರೆಸ್ವಾಮಿಯವರ ಮುಂದೆ ಪ್ರಸ್ತಾಪಿಸಿದಾಗ ಅವರು “ನಡೀರಿ ಹೋಗೋಣ” ಎಂದು ಎಲ್ಲರಿಗಿಂತ ಮೊದಲು ಸಜ್ಜಾದರು!

ದೊರೆಸ್ವಾಮಿಯವರನ್ನು ಆರಾಮಾಗಿ ಚಿಕ್ಕಮಗಳೂರಿಗೆ ಕರೆದುಕೊಂಡು ಹೋಗಲೆಂದು ನನ್ನ ಪುಟ್ಟ ಸ್ಯಾಂಟ್ರೊ ಕಾರ್ ಬದಲಾಗಿ ನನ್ನ ತಂಗಿಯ ಇನ್ನೋವಾ ಕಾರ್ ಪಡೆದೆ. ಅವತ್ತು ಭಾನುವಾರ ಬೆಳಗ್ಗೆ ದೊರೆಸ್ಟಾಮಿಯವರ ಸಂಬಂಧಿಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತಾದ್ದರಿಂದ ಅವರು ಬೆಳಗ್ಗೆಯೇ ಮನೆಯಿಂದ ತಮ್ಮ ಬ್ಯಾಗ್ ಹಿಡಿದು ಹೊರಟಿದ್ದರು. ಮಧ್ಯಾಹ್ನ ಬನಶಂಕರಿಯ ಸುಚಿತ್ರಾ ಫಿಲಂ ಸೊಸೈಟಿ ಆವರಣದಿಂದ ನಾನು ಮತ್ತು ಶಿವಸುಂದರ್ ದೊರೆಸ್ವಾಮಿಯವರನ್ನು ಕರೆದುಕೊಂಡು ಚಿಕ್ಕಮಗಳೂರಿಗೆ ಹೊರಟೆವು.

ನೆಲಮಂಗಲ ದಾಟುವ ಹೊತ್ತಿಗೆ ಊಟದ ಸಮಯವಾಗಿತ್ತು. ದುರದೃಷ್ಟವಶಾತ್ ಆ ಹೆದ್ದಾರಿಯಲ್ಲಿ ಅಚ್ಚುಕಟ್ಟಾದ ಸಸ್ಕಾಹಾರಿ ಹೋಟೆಲ್‍ಗಳಿಗಿಂತ ಹೆಚ್ಚಾಗಿ ಡಾಬಾಗಳೇ ಇವೆ. ಒಂದು ಡಾಬಾದ ಮುಂದೆ ಕಾರ್ ನಿಲ್ಲಿಸಿ ದೊರೆಸ್ವಾಮಿಯವರಿಗೆ ಅನ್ನ-ಸಾರು, ಮೊಸರನ್ನ ಇದೆಯೇ ಎಂದು ವಿಚಾರಿಸಿದೆವು. ಆಗ ದೊರೆಸ್ವಾಮಿಯವರು “ನನಗೆ ಪರೋಟ, ಮೊಸರನ್ನ ಮತ್ತು ಪುಟ್ಟ ಐಸ್‍ಕ್ರೀಮ್ ಬೇಕು” ಎಂದರು. ಡಾಬಾಗಳಲ್ಲಿ ‘ಗುಂಡು ಮತ್ತು ತುಂಡು’ ಸಾಮಾನ್ಯವಾದ್ದರಿಂದ ಅವರು ಕಾರಿನಲ್ಲೇ ಊಟ ಮಾಡುವುದಾಗಿ ಹೇಳಿದರು. ಒಳಗೆ ಹೋದ ನಾನು ವೈಟರ್ ಒಬ್ಬನಿಗೆ “ಹೊರಗೆ ಕಾರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ಟಾಮಿಯವರಿದ್ದಾರೆ. ಅವರಿಗೆ ಬೇಕಿದ್ದನ್ನು ಕೊಡು” ಎಂದೆ. ಹೊರಕ್ಕೆ ದೌಡಾಯಿಸಿದ ಆತ ದೊರೆಸ್ವಾಮಿಯವರ ಪಾದಗಳಿಗೆ ನಮಸ್ಕರಿಸಿ, ನಿಮ್ಮನ್ನು ಟಿವಿಯಲ್ಲಿ ನೋಡಿದ್ದೆ. ಇವತ್ತು ನಿಮ್ಮ ದರ್ಶನದ ಜೊತೆಗೆ ನಿಮ್ಮ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ಏನು ಬೇಕು ಹೇಳಿ ಸಾರ್” ಎಂದು ಅವರ ನೆರವಿಗೆ ನಿಂತ.

ನಾವು ಊಟ ಮುಗಿಸಿ ಹೊರಗೆಬಂದಾಗ ಬಹಳಷ್ಟು ಜನ ದೊರೆಸ್ವಾಮಿಯವರನ್ನು ಮುತ್ತಿಕೊಂಡಿದ್ದರು. ಎಲ್ಲರೂ ಅಭಿಮಾನದಿಂದ, ಗೌರವದಿಂದ ದೊರೆಸ್ವಾಮಿಯವರನ್ನು ಮಾತನಾಡಿಸುತ್ತಿದ್ದರು. “ಬೀಡಾ ಬೇಕಾ ಸಾರ್?” ಎಂದು ಕೇಳಿದೆ. “ಸ್ವೀಟ್ ಬೀಡಾ ಬೇಕು ಆದರೆ ಅದರಲ್ಲಿ ತಂಬಾಕು ಇರಬಾರದು” ಎಂದರು. ಬೀಡಾ ಅಂಗಡಿ ಮುಂದೆ ಇಬ್ಬರು ಯುವಕರು ನಿಂತಿದ್ದರು. “ದೊರೆಸ್ವಾಮಿಯವರ ಬಗ್ಗೆ ಕೇಳಿದ್ದೀರಾ, ಅವರು ಕಾರ್‍ನಲ್ಲಿ ಕೂತಿದ್ದಾರೆ. ಅಂತಹವರನ್ನು ಭೇಟಿ ಆಗುವ ಅವಕಾಶ ನಿಮಗೆ ಮುಂದೆ ಸಿಗಲಾರದು, ಹೋಗಿ ಮಾತನಾಡಿಸಿ” ಎಂದೆ. ಇಬ್ಬರೂ ಮಾತನಾಡಿಸಿ ಬಂದಾಗ “ಇವರೇ ಅಲ್ವಾ ಮೇಡಂ ಡಿ.ಕೆ.ಶಿವಕುಮಾರ್ ವಿರುದ್ಧ ಹೋರಾಟ ಮಾಡುತ್ತಿರುವುದು, ಟಿವಿಯಲ್ಲಿ ನೋಡಿದ್ವಿ ಎಂದರು.

ಮಾರ್ಗಮಧ್ಯದಲ್ಲಿ ನಾನು ಒಂದಿಷ್ಟು ಹೊತ್ತು ತೂಕಡಿಸಿದರೂ, ದೊರೆಸ್ವಾಮಿಯವರು ಮಾತ್ರ ಎಚ್ಚರವಾಗಿಯೇ ಇದ್ದರು.

ಚಿಕ್ಕಮಗಳೂರಿನಲ್ಲಿ ನಮ್ಮೆಲ್ಲರಿಗೆ ಐಬಿಯಲ್ಲಿ ರೂಮುಗಳನ್ನು ಕಾದಿರಿಸಿದ್ದೆವು. ಆದರೂ ದೊರೆಸ್ವಾಮಿಯವರು ತಮ್ಮ ಅಣ್ಣನ ಅಳಿಯನ ಮನೆಯಲ್ಲಿ ತಂಗುವುದಾಗಿ ಹೇಳಿದರು. ಆ ಅಳಿಯನ ಮನೆ ಶಂಕರಮಠದ ಹತ್ತಿರವಿದೆ ಎಂಬುದು ಅವರಿಗೆ ಗೊತ್ತಿತ್ತೇ ಹೊರತು ಸರಿಯಾದ ಅಡೆಸ್ ಆಗಲಿ, ಫೋನ್ ನಂಬರ್ ಆಗಲಿ ಅವರಿಗೆ ಗೊತ್ತಿರಲಿಲ್ಲಿ ಕಾರ್ ನಿಲ್ಲಿಸಿ ಡೈರೆಕ್ಷನ್ ಕೇಳಿದ ಕಡೆಯೆಲ್ಲ ಜನ ದೊರೆಸ್ವಾಮಿಯವರನ್ನು ಗುರುತಿಸಿ ಮಾತನಾಡಿಸುತ್ತಿದ್ದರು.

ಕೊನೆಗೂ ಆ ಮನೆ ಸಿಕ್ಕಿತು. “ಬೆಳಗ್ಗೆ ಎಲ್ಲರೂ ಇಲ್ಲಿಗೆ ತಿಂಡಿಗೆ ಬನ್ನಿ” ಎಂದ ದೊರೆಸ್ವಾಮಿಯವರು ನಮ್ಮನ್ನು ಬೀಳ್ಕೊಟ್ಟರು: ಅವತ್ತು ಬೆಂಗಳೂರಿನಲ್ಲಿ ಕಾರ್ ಹತ್ತಿದ್ದ ಅವರು ಎಲ್ಲೂ ಇಳಿದಿರಲಿಲ್ಲ. ಆದರೂ ಅವರಿಗೆ ಒಂದಿಷ್ಟೂ ದಣಿವಾಗಿರಲಿಲ್ಲ!

ಮಾರನೆ ದಿನ ಬೆಳಗ್ಗೆ ಒಂಭತ್ತೂವರೆಗೆ ಅವರನ್ನು ಅಲ್ಲಿಂದ ಕರೆದುಕೊಂಡು ಡಿಸಿ ಆಫೀಸಿಗೆ ಹೋದೆವು. ಅಲ್ಲಿ ಡಿಸಿ ಮತ್ತು ಎಸ್‍ಪಿ ಅವರೊಂದಿಗೆ ಚರ್ಚಿಸಿದ ನಂತರ ಐಬಿಗೆ ಬಂದೆವು.

ನೂರ್ ಮತ್ತು ಸಿರಿಮನೆ ಅವರು ಬರುತಿದ್ದಂತೆ ನೂಕುನುಗ್ಗಲು ಶುರುವಾಯಿತು. ಒಂದೆಡೆ ಎಲ್ಲರಿಗೂ ಅವರನ್ನು ಸ್ವಾಗತಿಸುವ ಆಸೆ, ಇನ್ನೊಂದೆಡೆ ಮಾಧ್ಯಮದವರಿಗೆ ಹತ್ತಿರದಿಂದ ಫೋಟೋ ಮತ್ತು ವೀಡಿಯೋ ಹಿಡಿಯುವ ತವಕ. ಆ ನೂಕಾಟದಲ್ಲಿ ಮಾಧ್ಯಮದವರೇ ಪರಸ್ಪರ ಜಗಳ ಪ್ರಾರಂಭಿಸಿದರು. ಎಷ್ಟೇ ಪ್ರಯತ್ನಪಟ್ಟರೂ ಮಾಧ್ಯಮದವರನ್ನು ನಿಯಂತ್ರಿಸಲಾಗಲಿಲ್ಲ. ಇದೆಲ್ಲ ನಡೆಯುತ್ತಿದ್ದಾಗ ಒಬ್ಬರು ಬಂದು “ದತ್ತಣ್ಣ (ವೈ.ಎಸ್.ವಿ.ದತ್ತ) ನಿಮಗೆ ಅಭಿನಂದನೆಗಳನ್ನು ಕಳುಹಿಸಿದ್ದಾರೆ” ಎಂದು ನನ್ನ ಕೈಗೆ ಒಂದು ಹೂವಿನಹಾರವನ್ನು ಕೊಟ್ಟರು. ಅದನ್ನು ನೂರ್ ಝುಲ್ಫಿಕರ್ ಅವರಿಗೆ ಕೊಟ್ಟು “ದೊರೆಸ್ವಾಮಿಯವರಿಗೆ ಥ್ಯಾಂಕ್ಸ್ ಹೇಳಿ” ಎಂದೆ. ಅವರು ಹಾರವನ್ನು ದೊರೆಸ್ಟಾಮಿಯವರಿಗೆ ಹಾಕಿ ಥ್ಯಾಂಕ್ಸ್ ಹೇಳಿದರು.

ಆಮೇಲೆ ಎಲ್ಲರೂ ಡಿಸಿ ಕಚೇರಿಗೆ ಹೋಗಿ ನಿಯಮದ ಪ್ರಕಾರ ನೂರ್ ಹಾಗು ಸಿರಿಮನೆಯವರನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಿದೆವು. ನೂರ್ ಮತ್ತು ಸಿರಿಮನೆಯವರ ಪತ್ರಿಕಾಹೇಳಿಕೆ ಪ್ರಕ್ರಿಯೆಗಳು ಮುಗಿದನಂತರ ನಾನು “ಸರ್, ಒಂದು ಚರ್ಚಾಸಭೆಯನ್ನು ಏರ್ಪಡಿಸಿದ್ದಾರೆ. ಅದನ್ನು ಮುಗಿಸಿದಕೂಡಲೇ ಬೆಂಗಳೂರಿಗೆ ಹೊರಡೋಣ” ಎಂದೆ. ಆಗ ದೊರೆಸ್ವಾಮಿಯವರು ’ಇಲ್ಲ ನಾನು ಬಳ್ಳಾರಿಗೆ ಹೋಗುತ್ತೇನೆ ಎಂದು ಬಾಂಬ್’ ಸಿಡಿಸಿದರು. “ಅಲ್ಲಾ ಸಾರ್, ನೀವು ಹೇಗೆ ಬಳ್ಳಾರಿಗೆ ಹೋಗುತ್ತೀರಿ?” ಎಂದು ಅಚ್ಚರಿಯಿಂದ ಕೇಳಿದೆ. “ನನ್ನನ್ನ ಕರೆದುಕೊಂಡು ಹೋಗಲು ಬಂದಿದ್ದಾರೆ” ಎಂದರು. “ಅವರು ಯಾರು? ಯಾವುದರಲ್ಲಿ ನಿಮ್ಮನ್ನು ಕರೆದುಕೊಂಡು ಹೋಗುತ್ತಾರೆ ಎಂದೆಲ್ಲ ಗೊತ್ತಾದ ಮೇಲೇ ನಾನು ನಿಮ್ಮನ್ನು ಅವರ ಜೊತೆ ಕಳಿಸೋದು” ಎಂದೆ. ಅದಕ್ಕೆ ದೊರೆಸ್ವಾಮಿಯವರು “ಓಹೋ, ಇವರಿಬ್ಬರನ್ನು ಹಸ್ತಾಂತರಿಸಿದ್ದು ಆಯಿತು. ಈಗ ನನ್ನನ್ನೂ ಹಸ್ತಾಂತರಿಸುತ್ತೀಯಾ!” ಎಂದು ಜೋಕ್ ಮಾಡಿದರು. “ಸರ್, ನೀವು ಇವತ್ತು ನಮ್ಮೊಂದಿಗೆ ಬೆಂಗಳೂರಿಗೆ ವಾಪಾಸ್ ಹೋಗಬೇಕಿತ್ತು ಆದರೆ ನೀವೀಗ ಬೇರೆಲ್ಲಿಗೋ ಹೊರಟಿದ್ದೀರಿ. ಮನೆಯವರು ಏನಂತಾರೆ?” ಅಂದೆ. “ಅವಳು ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಟ್ಟಿದ್ದಾಳೆ” ಎಂದ ಅವರು ಜೋರಾಗಿ ನಕ್ಕರು.

ಐಬಿಗೆ ಹಿಂದಿರುಗಿದಾಗ ದೊರೆಸ್ವಾಮಿಯವರು ಮಂಚದ ಮೇಲೆ ಕಾಲು ಚಾಚಿಕೊಂಡು ಕೂತಿದ್ದಾಗ, ಸುತ್ತುವರಿದಿದ್ದ ಜನರೊಂದಿಗೆ ಮತ್ತೆ ಹರಟಲಾರಂಭಿಸಿದರು. ಆಗ ಶಿವಸುಂದರ್‍ಗೆ ದೊರೆಸ್ವಾಮಿಯವರು ಬಳ್ಳಾರಿಗೆ ಹೊರಟಿದ್ದ ವಿಚಾರ ತಿಳಿಸಿದೆ. “ನನ್ನ ಮನೆಯವರಿಗೆ ಫೋನ್ ಮಾಡಿ ನಾನು ಬಳ್ಳಾರಿಗೆ ಹೋಗಿದ್ದೀನಿ ಅಂತ ತಿಳಿಸಿ ಎಂದರು. ಶಿವಸುಂದರ್ ಅವರು “ಸಾರ್ ಅವರು ಬೈಯಲ್ಲವಾ?” ಎಂದು ಕೇಳಿದರೆ “ಬೈದರೆ ನೀವು ತಾನೆ ಬೈಸಿಕೊಳ್ಳುವುದು, ಬೈಯಿಸಿಕೊಳ್ಳಿ” ಎಂದು ಗಹಗಹಿಸಿ ನಕ್ಕರು.

ದೊರೆಸ್ವಾಮಿಯವರು ಹೊರಡಲು ಸಿದ್ಧರಾಗಿ ನಿಂತಿದರೂ ಸುತ್ತುವರಿದಿದ್ದ ಹಲವಾರು ಅಭಿಮಾನಿಗಳು ಮತ್ತು ಮಾಧ್ಯಮದವರು ಅವರನ್ನು ಮಾತನಾಡಿಸುತ್ತಲೇ ಇದ್ದರು. “ನೀವು ಒಬ್ಬ ರಾಕ್‍ಸ್ಟಾರ್. ನಿಮ್ಮನ್ನ ಜನ ಸುತ್ತುವರಿದೇ ಇರುತ್ತಾರೆ” ಎಂದು ತಮಾಷೆ ಮಾಡುತ್ತಾ ಅವರನ್ನು ಐಬಿಯಿಂದ ಕರೆದುಕೊಂಡು ಹೊರಟೆ.

ಬಳ್ಳಾರಿಯಿಂದ ಬಂದಿದ್ದವರ ಕಾರ್ ಹತ್ತುತ್ತಾ “ನನ್ನ ಜೊತೆ ನನ್ನ ಬ್ಯಾಗನ್ನೂ ಹಸ್ತಾಂತರಿಸಿದ್ದೀ ಏನಮ್ಮ?” ಎಂದು ನಗುನಗುತ್ತಾ ಕೇಳಿದರು. ದೊರೆಸ್ವಾಮಿ ನಿಜಕ್ಕೂ ಅಪರಂಜಿಯಂತಹ ಮನುಷ್ಯ.

ಡಿಸೆಂಬರ್ 24, 2014.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...