Homeಮುಖಪುಟದೊರೆಸ್ವಾಮಿ ಎಂಬ ರಾಕ್‍ಸ್ಟಾರ್ !! ಆರು ವರ್ಷದ ಹಿಂದೆ ಗೌರಿ ಲಂಕೇಶ್‌ ಬರೆದ ಲೇಖನ

ದೊರೆಸ್ವಾಮಿ ಎಂಬ ರಾಕ್‍ಸ್ಟಾರ್ !! ಆರು ವರ್ಷದ ಹಿಂದೆ ಗೌರಿ ಲಂಕೇಶ್‌ ಬರೆದ ಲೇಖನ

- Advertisement -
- Advertisement -

ಎಚ್.ಎಸ್ ದೊರೆಸ್ವಾಮಿಯವರಿಗೆ ಈಗ ವಯಸ್ಸು 97. ಆದರೆ ಅವರಿಗೆ ಅದೊಂದು ಮಿತಿಯೂ ಅಲ್ಲ ಅಡೆತಡೆಯೂ ಅಲ್ಲ! ಈಗಲೂ ಎಂತಹ ಸಾಹಸಕ್ಕೂ ಜೈ ಎನ್ನುವ ಜಾಯಮಾನ, ಯಾವ ಅಂಶವನ್ನೂ ಮರೆಯದ ಚುರುಕು ಬುದ್ಧಿ ಅವರದ್ದು. ಅವರಿಗಿರುವ ರಾಜಕೀಯ ಸಹೃದಯತೆ, ಪ್ರಾಮಾಣಿಕತೆ, ಚುರುಕುತನ, ಹಾಸ್ಯ ಮನೋವತ್ತಿ ಒಂದಿಷ್ಟೂ ಬೇಸರಪಟ್ಟುಕೊಳ್ಳದ, ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುವ ಅವರ ಮನೋಭಾವವನ್ನು ಮೆಚ್ಚದೆ ಇರಲು ಸಾಧ್ಯವೇ ಇಲ್ಲ. ಈಗಲೂ ಓದಲು ಕನ್ನಡಕ ಬಳಸದೆ, ಕಾಫಿ ಜೊತೆ ಸಕ್ಕರೆ ಬೇಕೇಬೇಕೆನ್ನುವ, ರುಚಿಕರವಾದ ಆಹಾರವನ್ನು ಇಷ್ಟ ಪಡುವ, ಪುಟ್ಟ ಮಕ್ಕಳಂತೆ ಸ್ವೀಟ್ಸ್ ಮತ್ತು ಐಸ್‍ಕ್ರೀಮ್ ಇಷ್ಟ ಪಡುವ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯಾದಂತ ಸುತ್ತಾಡುವ ಅವರ ಜೀವನೋತ್ಸಾಹ ಬೆರಗು ಮೂಡಿಸುವಂತಹವು.

ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರಲು ದೊರೆಸ್ವಾಮಿಯವರನ್ನು ಚಿಕ್ಕಮಗಳೂರಿಗೆ ಕರೆದುಕೊಂಡು ಹೋದರೆ ಅವರಿಗೆ ದಣಿವಾಗಬಹುದು ಎಂಬ ಕಾರಣಕ್ಕೇ ಮೊದಲು ನಾವು ಆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದೆವು. ಆದರೆ ಅದಕ್ಕೆ ಹಲವು ತಾಂತ್ರಿಕ ಕಾರಣಗಳು ಅಡ್ಡಿಯಾದಾಗ ಚಿಕ್ಕಮಗಳೂರಿನಲ್ಲಿ ಅದನ್ನು ಏರ್ಪಸುವುದು ಅನಿವಾರ್ಯವಾಯಿತು. ಶಿವಸುಂದರ್ ಅವರು ಹಿಂಜರಿಕೆಯಿಂದಲೇ .

“ಸಾರ್ ಇದಕ್ಕೆ ಚಿಕ್ಕಮಗಳೂರಿಗೇ ಹೋಗಬೇಕಾಗುತ್ತದೆ” ಎಂದು ದೊರೆಸ್ವಾಮಿಯವರ ಮುಂದೆ ಪ್ರಸ್ತಾಪಿಸಿದಾಗ ಅವರು “ನಡೀರಿ ಹೋಗೋಣ” ಎಂದು ಎಲ್ಲರಿಗಿಂತ ಮೊದಲು ಸಜ್ಜಾದರು!

ದೊರೆಸ್ವಾಮಿಯವರನ್ನು ಆರಾಮಾಗಿ ಚಿಕ್ಕಮಗಳೂರಿಗೆ ಕರೆದುಕೊಂಡು ಹೋಗಲೆಂದು ನನ್ನ ಪುಟ್ಟ ಸ್ಯಾಂಟ್ರೊ ಕಾರ್ ಬದಲಾಗಿ ನನ್ನ ತಂಗಿಯ ಇನ್ನೋವಾ ಕಾರ್ ಪಡೆದೆ. ಅವತ್ತು ಭಾನುವಾರ ಬೆಳಗ್ಗೆ ದೊರೆಸ್ಟಾಮಿಯವರ ಸಂಬಂಧಿಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತಾದ್ದರಿಂದ ಅವರು ಬೆಳಗ್ಗೆಯೇ ಮನೆಯಿಂದ ತಮ್ಮ ಬ್ಯಾಗ್ ಹಿಡಿದು ಹೊರಟಿದ್ದರು. ಮಧ್ಯಾಹ್ನ ಬನಶಂಕರಿಯ ಸುಚಿತ್ರಾ ಫಿಲಂ ಸೊಸೈಟಿ ಆವರಣದಿಂದ ನಾನು ಮತ್ತು ಶಿವಸುಂದರ್ ದೊರೆಸ್ವಾಮಿಯವರನ್ನು ಕರೆದುಕೊಂಡು ಚಿಕ್ಕಮಗಳೂರಿಗೆ ಹೊರಟೆವು.

ನೆಲಮಂಗಲ ದಾಟುವ ಹೊತ್ತಿಗೆ ಊಟದ ಸಮಯವಾಗಿತ್ತು. ದುರದೃಷ್ಟವಶಾತ್ ಆ ಹೆದ್ದಾರಿಯಲ್ಲಿ ಅಚ್ಚುಕಟ್ಟಾದ ಸಸ್ಕಾಹಾರಿ ಹೋಟೆಲ್‍ಗಳಿಗಿಂತ ಹೆಚ್ಚಾಗಿ ಡಾಬಾಗಳೇ ಇವೆ. ಒಂದು ಡಾಬಾದ ಮುಂದೆ ಕಾರ್ ನಿಲ್ಲಿಸಿ ದೊರೆಸ್ವಾಮಿಯವರಿಗೆ ಅನ್ನ-ಸಾರು, ಮೊಸರನ್ನ ಇದೆಯೇ ಎಂದು ವಿಚಾರಿಸಿದೆವು. ಆಗ ದೊರೆಸ್ವಾಮಿಯವರು “ನನಗೆ ಪರೋಟ, ಮೊಸರನ್ನ ಮತ್ತು ಪುಟ್ಟ ಐಸ್‍ಕ್ರೀಮ್ ಬೇಕು” ಎಂದರು. ಡಾಬಾಗಳಲ್ಲಿ ‘ಗುಂಡು ಮತ್ತು ತುಂಡು’ ಸಾಮಾನ್ಯವಾದ್ದರಿಂದ ಅವರು ಕಾರಿನಲ್ಲೇ ಊಟ ಮಾಡುವುದಾಗಿ ಹೇಳಿದರು. ಒಳಗೆ ಹೋದ ನಾನು ವೈಟರ್ ಒಬ್ಬನಿಗೆ “ಹೊರಗೆ ಕಾರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ಟಾಮಿಯವರಿದ್ದಾರೆ. ಅವರಿಗೆ ಬೇಕಿದ್ದನ್ನು ಕೊಡು” ಎಂದೆ. ಹೊರಕ್ಕೆ ದೌಡಾಯಿಸಿದ ಆತ ದೊರೆಸ್ವಾಮಿಯವರ ಪಾದಗಳಿಗೆ ನಮಸ್ಕರಿಸಿ, ನಿಮ್ಮನ್ನು ಟಿವಿಯಲ್ಲಿ ನೋಡಿದ್ದೆ. ಇವತ್ತು ನಿಮ್ಮ ದರ್ಶನದ ಜೊತೆಗೆ ನಿಮ್ಮ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ಏನು ಬೇಕು ಹೇಳಿ ಸಾರ್” ಎಂದು ಅವರ ನೆರವಿಗೆ ನಿಂತ.

ನಾವು ಊಟ ಮುಗಿಸಿ ಹೊರಗೆಬಂದಾಗ ಬಹಳಷ್ಟು ಜನ ದೊರೆಸ್ವಾಮಿಯವರನ್ನು ಮುತ್ತಿಕೊಂಡಿದ್ದರು. ಎಲ್ಲರೂ ಅಭಿಮಾನದಿಂದ, ಗೌರವದಿಂದ ದೊರೆಸ್ವಾಮಿಯವರನ್ನು ಮಾತನಾಡಿಸುತ್ತಿದ್ದರು. “ಬೀಡಾ ಬೇಕಾ ಸಾರ್?” ಎಂದು ಕೇಳಿದೆ. “ಸ್ವೀಟ್ ಬೀಡಾ ಬೇಕು ಆದರೆ ಅದರಲ್ಲಿ ತಂಬಾಕು ಇರಬಾರದು” ಎಂದರು. ಬೀಡಾ ಅಂಗಡಿ ಮುಂದೆ ಇಬ್ಬರು ಯುವಕರು ನಿಂತಿದ್ದರು. “ದೊರೆಸ್ವಾಮಿಯವರ ಬಗ್ಗೆ ಕೇಳಿದ್ದೀರಾ, ಅವರು ಕಾರ್‍ನಲ್ಲಿ ಕೂತಿದ್ದಾರೆ. ಅಂತಹವರನ್ನು ಭೇಟಿ ಆಗುವ ಅವಕಾಶ ನಿಮಗೆ ಮುಂದೆ ಸಿಗಲಾರದು, ಹೋಗಿ ಮಾತನಾಡಿಸಿ” ಎಂದೆ. ಇಬ್ಬರೂ ಮಾತನಾಡಿಸಿ ಬಂದಾಗ “ಇವರೇ ಅಲ್ವಾ ಮೇಡಂ ಡಿ.ಕೆ.ಶಿವಕುಮಾರ್ ವಿರುದ್ಧ ಹೋರಾಟ ಮಾಡುತ್ತಿರುವುದು, ಟಿವಿಯಲ್ಲಿ ನೋಡಿದ್ವಿ ಎಂದರು.

ಮಾರ್ಗಮಧ್ಯದಲ್ಲಿ ನಾನು ಒಂದಿಷ್ಟು ಹೊತ್ತು ತೂಕಡಿಸಿದರೂ, ದೊರೆಸ್ವಾಮಿಯವರು ಮಾತ್ರ ಎಚ್ಚರವಾಗಿಯೇ ಇದ್ದರು.

ಚಿಕ್ಕಮಗಳೂರಿನಲ್ಲಿ ನಮ್ಮೆಲ್ಲರಿಗೆ ಐಬಿಯಲ್ಲಿ ರೂಮುಗಳನ್ನು ಕಾದಿರಿಸಿದ್ದೆವು. ಆದರೂ ದೊರೆಸ್ವಾಮಿಯವರು ತಮ್ಮ ಅಣ್ಣನ ಅಳಿಯನ ಮನೆಯಲ್ಲಿ ತಂಗುವುದಾಗಿ ಹೇಳಿದರು. ಆ ಅಳಿಯನ ಮನೆ ಶಂಕರಮಠದ ಹತ್ತಿರವಿದೆ ಎಂಬುದು ಅವರಿಗೆ ಗೊತ್ತಿತ್ತೇ ಹೊರತು ಸರಿಯಾದ ಅಡೆಸ್ ಆಗಲಿ, ಫೋನ್ ನಂಬರ್ ಆಗಲಿ ಅವರಿಗೆ ಗೊತ್ತಿರಲಿಲ್ಲಿ ಕಾರ್ ನಿಲ್ಲಿಸಿ ಡೈರೆಕ್ಷನ್ ಕೇಳಿದ ಕಡೆಯೆಲ್ಲ ಜನ ದೊರೆಸ್ವಾಮಿಯವರನ್ನು ಗುರುತಿಸಿ ಮಾತನಾಡಿಸುತ್ತಿದ್ದರು.

ಕೊನೆಗೂ ಆ ಮನೆ ಸಿಕ್ಕಿತು. “ಬೆಳಗ್ಗೆ ಎಲ್ಲರೂ ಇಲ್ಲಿಗೆ ತಿಂಡಿಗೆ ಬನ್ನಿ” ಎಂದ ದೊರೆಸ್ವಾಮಿಯವರು ನಮ್ಮನ್ನು ಬೀಳ್ಕೊಟ್ಟರು: ಅವತ್ತು ಬೆಂಗಳೂರಿನಲ್ಲಿ ಕಾರ್ ಹತ್ತಿದ್ದ ಅವರು ಎಲ್ಲೂ ಇಳಿದಿರಲಿಲ್ಲ. ಆದರೂ ಅವರಿಗೆ ಒಂದಿಷ್ಟೂ ದಣಿವಾಗಿರಲಿಲ್ಲ!

ಮಾರನೆ ದಿನ ಬೆಳಗ್ಗೆ ಒಂಭತ್ತೂವರೆಗೆ ಅವರನ್ನು ಅಲ್ಲಿಂದ ಕರೆದುಕೊಂಡು ಡಿಸಿ ಆಫೀಸಿಗೆ ಹೋದೆವು. ಅಲ್ಲಿ ಡಿಸಿ ಮತ್ತು ಎಸ್‍ಪಿ ಅವರೊಂದಿಗೆ ಚರ್ಚಿಸಿದ ನಂತರ ಐಬಿಗೆ ಬಂದೆವು.

ನೂರ್ ಮತ್ತು ಸಿರಿಮನೆ ಅವರು ಬರುತಿದ್ದಂತೆ ನೂಕುನುಗ್ಗಲು ಶುರುವಾಯಿತು. ಒಂದೆಡೆ ಎಲ್ಲರಿಗೂ ಅವರನ್ನು ಸ್ವಾಗತಿಸುವ ಆಸೆ, ಇನ್ನೊಂದೆಡೆ ಮಾಧ್ಯಮದವರಿಗೆ ಹತ್ತಿರದಿಂದ ಫೋಟೋ ಮತ್ತು ವೀಡಿಯೋ ಹಿಡಿಯುವ ತವಕ. ಆ ನೂಕಾಟದಲ್ಲಿ ಮಾಧ್ಯಮದವರೇ ಪರಸ್ಪರ ಜಗಳ ಪ್ರಾರಂಭಿಸಿದರು. ಎಷ್ಟೇ ಪ್ರಯತ್ನಪಟ್ಟರೂ ಮಾಧ್ಯಮದವರನ್ನು ನಿಯಂತ್ರಿಸಲಾಗಲಿಲ್ಲ. ಇದೆಲ್ಲ ನಡೆಯುತ್ತಿದ್ದಾಗ ಒಬ್ಬರು ಬಂದು “ದತ್ತಣ್ಣ (ವೈ.ಎಸ್.ವಿ.ದತ್ತ) ನಿಮಗೆ ಅಭಿನಂದನೆಗಳನ್ನು ಕಳುಹಿಸಿದ್ದಾರೆ” ಎಂದು ನನ್ನ ಕೈಗೆ ಒಂದು ಹೂವಿನಹಾರವನ್ನು ಕೊಟ್ಟರು. ಅದನ್ನು ನೂರ್ ಝುಲ್ಫಿಕರ್ ಅವರಿಗೆ ಕೊಟ್ಟು “ದೊರೆಸ್ವಾಮಿಯವರಿಗೆ ಥ್ಯಾಂಕ್ಸ್ ಹೇಳಿ” ಎಂದೆ. ಅವರು ಹಾರವನ್ನು ದೊರೆಸ್ಟಾಮಿಯವರಿಗೆ ಹಾಕಿ ಥ್ಯಾಂಕ್ಸ್ ಹೇಳಿದರು.

ಆಮೇಲೆ ಎಲ್ಲರೂ ಡಿಸಿ ಕಚೇರಿಗೆ ಹೋಗಿ ನಿಯಮದ ಪ್ರಕಾರ ನೂರ್ ಹಾಗು ಸಿರಿಮನೆಯವರನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಿದೆವು. ನೂರ್ ಮತ್ತು ಸಿರಿಮನೆಯವರ ಪತ್ರಿಕಾಹೇಳಿಕೆ ಪ್ರಕ್ರಿಯೆಗಳು ಮುಗಿದನಂತರ ನಾನು “ಸರ್, ಒಂದು ಚರ್ಚಾಸಭೆಯನ್ನು ಏರ್ಪಡಿಸಿದ್ದಾರೆ. ಅದನ್ನು ಮುಗಿಸಿದಕೂಡಲೇ ಬೆಂಗಳೂರಿಗೆ ಹೊರಡೋಣ” ಎಂದೆ. ಆಗ ದೊರೆಸ್ವಾಮಿಯವರು ’ಇಲ್ಲ ನಾನು ಬಳ್ಳಾರಿಗೆ ಹೋಗುತ್ತೇನೆ ಎಂದು ಬಾಂಬ್’ ಸಿಡಿಸಿದರು. “ಅಲ್ಲಾ ಸಾರ್, ನೀವು ಹೇಗೆ ಬಳ್ಳಾರಿಗೆ ಹೋಗುತ್ತೀರಿ?” ಎಂದು ಅಚ್ಚರಿಯಿಂದ ಕೇಳಿದೆ. “ನನ್ನನ್ನ ಕರೆದುಕೊಂಡು ಹೋಗಲು ಬಂದಿದ್ದಾರೆ” ಎಂದರು. “ಅವರು ಯಾರು? ಯಾವುದರಲ್ಲಿ ನಿಮ್ಮನ್ನು ಕರೆದುಕೊಂಡು ಹೋಗುತ್ತಾರೆ ಎಂದೆಲ್ಲ ಗೊತ್ತಾದ ಮೇಲೇ ನಾನು ನಿಮ್ಮನ್ನು ಅವರ ಜೊತೆ ಕಳಿಸೋದು” ಎಂದೆ. ಅದಕ್ಕೆ ದೊರೆಸ್ವಾಮಿಯವರು “ಓಹೋ, ಇವರಿಬ್ಬರನ್ನು ಹಸ್ತಾಂತರಿಸಿದ್ದು ಆಯಿತು. ಈಗ ನನ್ನನ್ನೂ ಹಸ್ತಾಂತರಿಸುತ್ತೀಯಾ!” ಎಂದು ಜೋಕ್ ಮಾಡಿದರು. “ಸರ್, ನೀವು ಇವತ್ತು ನಮ್ಮೊಂದಿಗೆ ಬೆಂಗಳೂರಿಗೆ ವಾಪಾಸ್ ಹೋಗಬೇಕಿತ್ತು ಆದರೆ ನೀವೀಗ ಬೇರೆಲ್ಲಿಗೋ ಹೊರಟಿದ್ದೀರಿ. ಮನೆಯವರು ಏನಂತಾರೆ?” ಅಂದೆ. “ಅವಳು ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಟ್ಟಿದ್ದಾಳೆ” ಎಂದ ಅವರು ಜೋರಾಗಿ ನಕ್ಕರು.

ಐಬಿಗೆ ಹಿಂದಿರುಗಿದಾಗ ದೊರೆಸ್ವಾಮಿಯವರು ಮಂಚದ ಮೇಲೆ ಕಾಲು ಚಾಚಿಕೊಂಡು ಕೂತಿದ್ದಾಗ, ಸುತ್ತುವರಿದಿದ್ದ ಜನರೊಂದಿಗೆ ಮತ್ತೆ ಹರಟಲಾರಂಭಿಸಿದರು. ಆಗ ಶಿವಸುಂದರ್‍ಗೆ ದೊರೆಸ್ವಾಮಿಯವರು ಬಳ್ಳಾರಿಗೆ ಹೊರಟಿದ್ದ ವಿಚಾರ ತಿಳಿಸಿದೆ. “ನನ್ನ ಮನೆಯವರಿಗೆ ಫೋನ್ ಮಾಡಿ ನಾನು ಬಳ್ಳಾರಿಗೆ ಹೋಗಿದ್ದೀನಿ ಅಂತ ತಿಳಿಸಿ ಎಂದರು. ಶಿವಸುಂದರ್ ಅವರು “ಸಾರ್ ಅವರು ಬೈಯಲ್ಲವಾ?” ಎಂದು ಕೇಳಿದರೆ “ಬೈದರೆ ನೀವು ತಾನೆ ಬೈಸಿಕೊಳ್ಳುವುದು, ಬೈಯಿಸಿಕೊಳ್ಳಿ” ಎಂದು ಗಹಗಹಿಸಿ ನಕ್ಕರು.

ದೊರೆಸ್ವಾಮಿಯವರು ಹೊರಡಲು ಸಿದ್ಧರಾಗಿ ನಿಂತಿದರೂ ಸುತ್ತುವರಿದಿದ್ದ ಹಲವಾರು ಅಭಿಮಾನಿಗಳು ಮತ್ತು ಮಾಧ್ಯಮದವರು ಅವರನ್ನು ಮಾತನಾಡಿಸುತ್ತಲೇ ಇದ್ದರು. “ನೀವು ಒಬ್ಬ ರಾಕ್‍ಸ್ಟಾರ್. ನಿಮ್ಮನ್ನ ಜನ ಸುತ್ತುವರಿದೇ ಇರುತ್ತಾರೆ” ಎಂದು ತಮಾಷೆ ಮಾಡುತ್ತಾ ಅವರನ್ನು ಐಬಿಯಿಂದ ಕರೆದುಕೊಂಡು ಹೊರಟೆ.

ಬಳ್ಳಾರಿಯಿಂದ ಬಂದಿದ್ದವರ ಕಾರ್ ಹತ್ತುತ್ತಾ “ನನ್ನ ಜೊತೆ ನನ್ನ ಬ್ಯಾಗನ್ನೂ ಹಸ್ತಾಂತರಿಸಿದ್ದೀ ಏನಮ್ಮ?” ಎಂದು ನಗುನಗುತ್ತಾ ಕೇಳಿದರು. ದೊರೆಸ್ವಾಮಿ ನಿಜಕ್ಕೂ ಅಪರಂಜಿಯಂತಹ ಮನುಷ್ಯ.

ಡಿಸೆಂಬರ್ 24, 2014.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....