Homeಮುಖಪುಟದ್ರಾವಿಡಮೂಲದ ಕನ್ನಡವನ್ನು ಬೆನ್ನತ್ತಿ...

ದ್ರಾವಿಡಮೂಲದ ಕನ್ನಡವನ್ನು ಬೆನ್ನತ್ತಿ…

- Advertisement -
- Advertisement -

| ಡಾ. ಸರ್ಜಾಶಂಕರ ಹರಳಿಮಠ |

ದ್ರಾವಿಡಶೋಧದ ನೆಲೆಯ ಕನ್ನಡ ಅಸ್ಮಿತೆಯ ಮುಖ್ಯ ಚಹರೆಯೆಂದರೆ ಸ್ವವಿಮರ್ಶೆಯ ಗುಣ. ಇದು ಇಂಗ್ಲಿಷನ್ನೋ ಅಥವಾ ನೆರೆಯ ಭಾಷೆಯನ್ನೋ ಕನ್ನಡದ ವೈರಿಭಾಷೆಯೆಂದು ಪರಿಗಣಿಸುವುದಿಲ್ಲ. ಸಂಸ್ಕೃತವನ್ನು ಕನ್ನಡಕ್ಕೆ ಕಂಟಕ ತರುತ್ತಿದೆ ಎಂದು ಭಾವಿಸಿದರೂ ಅಲ್ಲಿ ಮುಖ್ಯವಾಗಿರುವುದು ಭಾಷೆಯಾಗಿ ಸಂಸ್ಕೃತಕ್ಕಿಂತಲೂ ಸಂಸ್ಕೃತದ ಮೂಲಕ ತಮ್ಮ ಶ್ರೇಷ್ಠತೆಯನ್ನು ಪ್ರತಿಷ್ಟಾಪಿಸಲು ಬಯಸುವ ಸಾಮಾಜಿಕ ವರ್ಗ.

ಭಾರತದಲ್ಲಿ ಬ್ರಿಟಿಷ್ ಅಧಿಕಾರಿಗಳು ದಕ್ಷಿಣ ಭಾರತದ ಭಾಷೆಗಳ ಮೂಲವನ್ನು ಅರಿಯಲು ಸಂಶೋಧನೆಗೆ ತೊಡಗಲು ಭಾಷಾ ಸಂಬಂಧಿ ಆಸಕ್ತಿ ಮತ್ತು ಸ್ಥಳೀಯ ಭಾಷೆಗಳನ್ನು ಅರ್ಥಮಾಡಿಕೊಳ್ಳುವುದು ಪ್ರಮುಖ ಪ್ರೇರಣೆಯಾಗಿದ್ದವು. ಆದರೆ ಈ ಸಂಶೋಧಕರು ಹೊರಗೆಡಹಿದ ಫಲಿತಗಳು ಮಾತ್ರ ಭಾರತದ ಸಾಮಾಜಿಕ ವಲಯದಲ್ಲಿ ಸಂಚಲನೆಗೆ ಕಾರಣವಾಯಿತು. ಪುರೋಹಿತಶಾಹಿ ವರ್ಗದವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿದ್ದ, ಬಹುಸಂಖ್ಯಾತ ತಳವರ್ಗದವರಿಗೆ ಅಲಭ್ಯವಾಗಿದ್ದ ಶಿಕ್ಷಣ ಸೌಲಭ್ಯವೇ ಕಾರಣವಾಗಿ ಸಮಾಜದಲ್ಲಿ ಜಾತಿ ತಾರತಮ್ಯ, ಅವಮಾನ, ಆರ್ಥಿಕ ಅಸಮಾನತೆಗಳಿಗೆ ಕಾರಣವಾಗಿತ್ತು. ಸಂಸ್ಕೃತ ಪುರೋಹಿತಶಾಹಿ ವರ್ಗದ ಭಾಷೆಯಾಗಿದ್ದು ಈ ಭಾಷೆಯನ್ನು ಕಲಿಯಲು ಬೇರೆಯವರಿಗೆ ನಿರ್ಬಂಧವಿತ್ತು. ಪರಿಣಾಮವಾಗಿ ಭಾರತೀಯ ಬಹುಸಂಖ್ಯಾತ ತಳವರ್ಗದಲ್ಲಿ ಪುರೋಹಿತಶಾಹಿ ಮತ್ತು ಸಂಸ್ಕೃತದ ಮೇಲಿನ ಸಿಟ್ಟು ಬೇರ್ಪಡಿಸಲಾಗದಂತಿತ್ತು. ಆದರೂ ಕನ್ನಡದ ಮೂಲಭಾಷೆ ಸಂಸ್ಕೃತ ಎನ್ನುವ ಪ್ರಚಲಿತದಲ್ಲಿದ್ದ ನಂಬಿಕೆಯ ಹಿನ್ನೆಲೆಯಲ್ಲಿ ಆ ಸಿಟ್ಟು ವ್ಯಕ್ತವಾಗುತ್ತಿರಲಿಲ್ಲ. ಯಾವಾಗ ಕನ್ನಡ ಸಂಸ್ಕೃತದಿಂದ ಟಿಸಿಲೊಡೆದ ಭಾಷೆ ಅಲ್ಲ, ಇದು ದ್ರಾವಿಡಭಾಷಾ ಕುಟುಂಬದಿಂದ ಬಂದ ಭಾಷೆ ಎನ್ನುವ ಸತ್ಯ ಅನಾವರಣವಾಯಿತೋ ಅದು ತಳವರ್ಗದವರಲ್ಲಿ ಸ್ವಾಭಿಮಾನದ ಸಂಗತಿಯಾಗಿ ಹೊರಹೊಮ್ಮತೊಡಗಿತು. ಅಂದರೆ ಕನ್ನಡವನ್ನು ಸಂಸ್ಕೃತದಿಂದ ಬೇರ್ಪಡಿಸಿ, ದ್ರಾವಿಡ ನೆಲೆಯಿಂದ ನೋಡುವುದು ಭಾಷಿಕ ಕಾರಣಕ್ಕಿಂತ ಸಾಮಾಜಿಕ ಕಾರಣಕ್ಕಾಗಿ ಮುನ್ನೆಲೆಗೆ ಬಂದಿತು. ಈ ಅಂಶಗಳು ದ್ರಾವಿಡಮೂಲದ ಕನ್ನಡವನ್ನು ಪುನರೂಪಿಸುವ ಪ್ರಯತ್ನದ ಹಿಂದೆಯೂ ದಟ್ಟವಾಗಿರುವುದನ್ನು ಗುರುತಿಸಬಹುದು.

‘ದ್ರಾವಿಡ’ ಎಂಬ ಪದವು ದೇಶವಾಚಕವಾಗಿ, ಜನಾಂಗವಾಚಕವಾಗಿ ಸಾಮಾನ್ಯವಾಗಿ ರೂಢಿಯಲ್ಲಿದೆ. ದ್ರಾವಿಡಭಾಷೆ ಎಂದಾಗ ಅದು ಒಂದು ಭಾಷಾವರ್ಗವನ್ನು ಹೆಸರಿಸುತ್ತದೆ. ಸಂಸ್ಕೃತ ವಿದ್ವಾಂಸರ ಪ್ರಕಾರ ದ್ರಾವಿಡ ಎಂಬುದು ದಕ್ಷಿಣ ಭಾರತದ ಒಂದು ಭೂಭಾಗವೇ ಆಗಿದೆ. ಸಂಸ್ಕೃತದ ಮಹಾವಿದ್ವಾಂಸನಾದ ಫೆಡ್ರಿಕ್ ಮ್ಯಾಕ್ಸ್ ಮುಲ್ಲರ್ ಮೊತ್ತಮೊದಲ ಬಾರಿಗೆ ಹತ್ತೊಂಬತ್ತನೆಯ ಶತಮಾನದ ದಶಕದಲ್ಲಿ ದ್ರಾವಿಡ ಭಾಷೆಗಳನ್ನು ವಿಭಾಗಿಸಿದ. ಅಲ್ಲಿಂದ ಮುಂದೆ ‘ದ್ರಾವಿಡ’ ಎಂಬುದು ಒಂದು ಭಾಷಿಕ ಪರಿಕಲ್ಪನೆಯಾಗಿ ಭಾರತದಲ್ಲಿ ನಿರ್ದಿಷ್ಟವಾದ ಒಂದು ‘ಭಾಷಾ ಪರಿವಾರ’ ಎಂಬರ್ಥದಲ್ಲಿ ಪ್ರಕಟಗೊಂಡಿತು ಸಾಮಾನ್ಯವಾಗಿ ದಕ್ಷಿಣ ಭಾರತವನ್ನು ದೃಷ್ಟಿಯಲ್ಲಿರಿಸಿಕೊಂಡು ಅದನ್ನು ದ್ರಾವಿಡ ನಾಡೆಂದು, ಇಲ್ಲಿ ವಾಸ ಮಾಡುವ ಜನರನ್ನು ದ್ರಾವಿಡರು ಎಂದು ಗುರುತಿಸುವುದಿದೆ. ಇನ್ನೂ ನಿರ್ದಿಷ್ಟವಾಗಿ ದ್ರಾವಿಡ ಪದವನ್ನು ವ್ಯಾಪಕವಾಗಿ ‘ತಮಿಳ’ ಪದಕ್ಕೆ ಪರ್ಯಾಯವಾಗಿ ಬಳಸಲಾಗಿದೆ.

ಶಂಬಾ ಅವರು ಪಾಶ್ಚಾತ್ಯ ಮಾನವಶಾಸ್ತ್ರಜ್ಞರು ಮತ್ತು ದೇಶಿ ವಿದ್ವಾಂಸರ ‘ದ್ರಾವಿಡ’ ಅಧ್ಯಯನಗಳನ್ನು ಆಧರಿಸಿ, ‘ದ್ರಾವಿಡ’ ಪದಕ್ಕಿರುವ ಅರ್ಥವ್ಯಾಪ್ತಿಯನ್ನು ಚರ್ಚಿಸುತ್ತಾರೆ. ‘ದ್ರಾವಿಡ’ ಪ್ರಯೋಗ ವೈದಿಕ ವಾಙ್ಮಯದಲ್ಲಿ ‘ದಸ್ಯು’ಗಳನ್ನು ನಿರ್ದೇಶಿಸುವ ಪದ. ಆರ್ಯರೊಂದಿಗೆ ಹೋರಾಡಿದ ದಸ್ಯುಗಳೇ ದ್ರಾವಿಡರಾಗಿದ್ದು, ದ್ರಾವಿಡ ಮೂಲದ ‘ಬ್ರಾಹೂಯಿ’ ಭಾಷೆ ಇಂದಿಗೂ ಬಲೂಚಿಸ್ಥಾನದ ಪರಿಸರದಲ್ಲಿರುವುದು, ಸಿಂಧು ಸಂಸ್ಕೃತಿಯು ದ್ರಾವಿಡರ ಅಸ್ತಿತ್ವಕ್ಕೆ ಪ್ರಬಲ ಪುರಾವೆಯೆನ್ನುವುದು ಶಂಬಾ ಅವರ ವಾದ. ಇಂದಿನ ತಮಿಳರು ಮತ್ತು ಕನ್ನಡಿಗರು ಮೂಲ ದ್ರಾವಿಡ ಪಂಗಡಕ್ಕೆ ಸೇರಿದವರೆನ್ನುವುದನ್ನು ಹಳಗನ್ನಡ ಮತ್ತು ತಮಿಳು ಭಾಷೆಗಳೆರಡು ಒಡೆಯುವ ಪೂರ್ವದಲ್ಲಿದ್ದ ಏಕರೂಪ ‘ಕಂದಮಿಳ’ ಭಾಷೆ. ಕಂದಮಿಳ ಭಾಷೆಯನ್ನಾಡುವವರೇ ‘ಕಂದಮಿಳರು’, ದ್ರಾವಿಡ ಸಂಸ್ಕøತಿಯ ಮೂಲಿಗರಾದ ‘ಕಂದಮಿಳರು’ ಕ್ರಿಸ್ತಪೂರ್ವ ಸು.2000 ವರ್ಷಗಳ ಹಿಂದೆ ನರ್ಮದೆಯ ಪರಿಸರದಲ್ಲಿ ಅಂದರೆ ಇಂದಿನ ಗುಜರಾಥ (ಲಾಟ), ಬಂಗಾಲ, ಮಹಾರಾಷ್ಟ್ರದಲ್ಲಿ ನೆಲೆಸಿದ್ದರು ಎಂದು ಶಂಬಾ ಅವರು ನಿರ್ಣಯಕ್ಕೆ ಬರುತ್ತಾರೆ.

ದ್ರಾವಿಡಶೋಧದ ನೆಲೆಯಲ್ಲಿ ಕನ್ನಡ ಅಸ್ಮಿತೆಯನ್ನು ಕಟ್ಟಿಕೊಳ್ಳುವ ಪ್ರಯತ್ನದ ಹಿಂದಿನ ಪ್ರೇರಣೆಗಳಿಗೆ ಹಲವು ಆಯಾಮಗಳಿವೆ. ತಿಳಿವಳಿಕೆಯ ಕೊರತೆಯಿಂದ ಆಗಿರಬಹುದಾದ ಸಂಸ್ಕೃತವೇ ಕನ್ನಡದ ಮೂಲ ಎಂಬ ಸಮಾಜದಲ್ಲಿದ್ದ ನಂಬಿಕೆಯು ಸಂಶೋಧನೆಗಳು ನಡೆದು ಸತ್ಯ ತಿಳಿದ ನಂತರ ಸ್ವಲ್ಪಮಟ್ಟಿಗೆ ಬದಲಾಯಿತು. ಆದರೆ ಸಂಸ್ಕೃತವೇ ಕನ್ನಡದ ಮೂಲ ಎಂಬ ವಾದವನ್ನು ಒಂದು ವರ್ಗ ಮುಂದುವರೆಸಿದ್ದು ಇದರ ಹಿಂದೆ ನಿರ್ದಿಷ್ಠ ಉದ್ದೇಶ ಇರುವುದನ್ನು ಹೇಳಿತು. ಈ ಉದ್ದೇಶ ಭಾಷಾಮೂಲದ್ದಾಗಿರದೆ ವರ್ಗ ಹಿತಾಸಕ್ತಿಯದ್ದಾಗಿತ್ತು.

ಕನ್ನಡ ಅಸ್ಮಿತೆಯನ್ನು ದ್ರಾವಿಡ ನೆಲೆಯಿಂದ ನೋಡುವ ಚಿಂತನಾಕ್ರಮದ ಹಿಂದೆ ಭಾಷಿಕ ಕಾರಣವೂ ಇದೆ. ಈ ಭಾಷಿಕ ಕಾರಣವೂ ಸಾಮಾಜಿಕ ನೆಲೆಯಲ್ಲಿ ಅಂತರ್ಗತವಾಗಿದೆ. ಬರಹದ ಭಾಷೆ ಸಂಸ್ಕೃತದಿಂದ ಪ್ರಭಾವಿತವಾಗಿದ್ದು ಆಡುಭಾಷೆಗಿಂತ ಭಿನ್ನವಾಗಿದೆ. ಬರಹದ ಭಾಷೆಯ ಎದುರು ಆಡುಭಾಷೆ ಕೀಳರಿಮೆಯನ್ನು ಅನುಭವಿಸುತ್ತಿದ್ದು, ಮುಖ್ಯವಾಗಿ ತಳವರ್ಗದವರಿಗೆ ಇದು ಬಳಕೆಯ ಸಂದರ್ಭದಲ್ಲಿ ತೊಡಕಾಗಿ ಪರಿಣಮಿಸುತ್ತ್ತಿದೆ. ಆಡುಭಾಷೆಯ ಕನ್ನಡ ಹೆಚ್ಚು ಸಂಸ್ಕೃತ ಪದಗಳಿಲ್ಲದ ಮೂಲ ಕನ್ನಡ ಭಾಷೆಗೆ ಹತ್ತಿರವಾಗಿದೆ. ಇದು ತಳವರ್ಗದವರಿಗೆ ಬಳಸಲು ಸುಲಭವಾಗಿದೆ. ಆಡುಭಾಷೆಯ ಕನ್ನಡವನ್ನೇ ಬರಹದಲ್ಲಿಯೂ ಬಳಸುವಂತೆ ದ್ರಾವಿಡ ನೆಲೆಯ ಕನ್ನಡ ಅಸ್ಮಿತೆ ಒತ್ತಾಯಿಸುತ್ತದೆ. ಈ ಒತ್ತಾಯದ ಹಿಂದೆ ಎರಡು ಉದ್ದೇಶಗಳಿವೆ. ಮೊದಲನೆಯದು ಸಂಸ್ಕೃತದ ವಿರೋಧ. ಒಂದು ಭಾಷೆಯ ಹೇರಿಕೆಯ ವಿರೋಧ, ಆ ಸಂಸ್ಕೃತಿಯ ವಿರೋಧವೂ ಆಗಿಬಿಡುತ್ತದೆ. ಎರಡನೆಯದು ಸಂಸ್ಕೃತದ ಹಿಡಿತದಿಂದ ಹೊರಬರುವ ಮತ್ತು ತಳವರ್ಗದ ಕನ್ನಡ ಭಾಷೆಯನ್ನು ಮೇಲ್ಚಲನೆಗೊಳಪಡಿಸುವ ಉದ್ದೇಶ.

ದ್ರಾವಿಡಶೋಧದ ನೆಲೆಯ ಕನ್ನಡ ಅಸ್ಮಿತೆಯ ಮುಖ್ಯ ಚಹರೆಯೆಂದರೆ ಸ್ವವಿಮರ್ಶೆಯ ಗುಣ. ಇದು ಇಂಗ್ಲಿಶನ್ನೋ ಅಥವಾ ನೆರೆಯ ಭಾಷೆಯನ್ನೋ ಕನ್ನಡದ ವೈರಿಭಾಷೆಯೆಂದು ಪರಿಗಣಿಸುವುದಿಲ್ಲ. ಸಂಸ್ಕೃತವನ್ನು ಕನ್ನಡಕ್ಕೆ ಕಂಟಕ ತರುತ್ತಿದೆ ಎಂದು ಭಾವಿಸಿದರೂ ಅಲ್ಲಿ ಮುಖ್ಯವಾಗಿರುವುದು ಭಾಷೆಯಾಗಿ ಸಂಸ್ಕೃತಕ್ಕಿಂತಲೂ ಸಂಸ್ಕೃತದ ಮೂಲಕ ತಮ್ಮ ಶ್ರೇಷ್ಠತೆಯನ್ನು ಪ್ರತಿಷ್ಟಾಪಿಸಲು ಬಯಸುವ ಸಾಮಾಜಿಕ ವರ್ಗ. ದ್ರಾವಿಡಶೋಧದ ನೆಲೆ ಕನ್ನಡದೊಳಗೆ ಪರಿವರ್ತನೆ ಮತ್ತು ಸುಧಾರಣೆಯ ಮೂಲಕ ಕನ್ನಡವನ್ನು ಉಳಿಸಲು ಮತ್ತು ಬೆಳೆಸಲು ಪ್ರಯತ್ನಿಸುತ್ತದೆ. ಇದು ಕನ್ನಡದೊಳಗೇ ಇರುವ ವಿವಿಧ ಸಾಮಾಜಿಕ ವರ್ಗಗಳ ಹಿತಾಸಕ್ತಿಗಳು ಕನ್ನಡಕ್ಕೆ ಉಂಟು ಮಾಡುತ್ತಿರುವ ತೊಡಕುಗಳನ್ನು ಪ್ರಧಾನವಾಗಿ ಗಮನಿಸುತ್ತದೆ.

ಕನ್ನಡದಲ್ಲಿ ದ್ರಾವಿಡಶೋಧದ ನೆಲೆಯಲ್ಲಿ ಕನ್ನಡ ಅಸ್ಮಿತೆಯನ್ನು ಕಟ್ಟಿಕೊಡುತ್ತಿರುವವರಲ್ಲಿ ಡಿ.ಎನ್.ಶಂಕರಭಟ್ಟರು ಮತ್ತು ಕೆ.ವಿ.ನಾರಾಯಣ ಅವರು ಪ್ರಮುಖರು. ಡಿ.ಎನ್.ಶಂಕರಭಟ್ಟರು ದ್ರಾವಿಡಮೂಲದ ಕನ್ನಡವನ್ನು ಪುನರ್ ರೂಪಿಸುವ ಪ್ರಯತ್ನದಲ್ಲಿದ್ದಾರೆ. ಕೆ.ವಿ.ನಾರಾಯಣ ಅವರು ಜಾಗತಿಕ ಪರಿವರ್ತನೆಗಳು, ಆಧುನಿಕ ತಂತ್ರಜ್ಞಾನ, ಸಾಮಾಜಿಕ ಚಲನೆಗಳು, ವ್ಶೆಜ್ಞಾನಿಕವಾಗಿ ಕಂಡುಕೊಂಡ ಕಲಿಕೆಯ ಸಾಮಥ್ರ್ಯ, ಹೀಗೆ ಎಲ್ಲ ಆಯಾಮಗಳಿಂದಲೂ ಕನ್ನಡಕ್ಕೆ ಆಗುವ ಪರಿಣಾಮಗಳನ್ನು ಮುಕ್ತವಾಗಿ ಚಿಂತಿಸಿದರೂ ಈ ಚಿಂತನೆಗಳು ದ್ರಾವಿಡ ಮೂಲದಿಂದ ಹೊರಡುತ್ತವೆ ಎನ್ನುವುದು ಮುಖ್ಯವಾದ ಸಂಗತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...