Homeಮುಖಪುಟದ್ರಾವಿಡಮೂಲದ ಕನ್ನಡವನ್ನು ಬೆನ್ನತ್ತಿ...

ದ್ರಾವಿಡಮೂಲದ ಕನ್ನಡವನ್ನು ಬೆನ್ನತ್ತಿ…

- Advertisement -
- Advertisement -

| ಡಾ. ಸರ್ಜಾಶಂಕರ ಹರಳಿಮಠ |

ದ್ರಾವಿಡಶೋಧದ ನೆಲೆಯ ಕನ್ನಡ ಅಸ್ಮಿತೆಯ ಮುಖ್ಯ ಚಹರೆಯೆಂದರೆ ಸ್ವವಿಮರ್ಶೆಯ ಗುಣ. ಇದು ಇಂಗ್ಲಿಷನ್ನೋ ಅಥವಾ ನೆರೆಯ ಭಾಷೆಯನ್ನೋ ಕನ್ನಡದ ವೈರಿಭಾಷೆಯೆಂದು ಪರಿಗಣಿಸುವುದಿಲ್ಲ. ಸಂಸ್ಕೃತವನ್ನು ಕನ್ನಡಕ್ಕೆ ಕಂಟಕ ತರುತ್ತಿದೆ ಎಂದು ಭಾವಿಸಿದರೂ ಅಲ್ಲಿ ಮುಖ್ಯವಾಗಿರುವುದು ಭಾಷೆಯಾಗಿ ಸಂಸ್ಕೃತಕ್ಕಿಂತಲೂ ಸಂಸ್ಕೃತದ ಮೂಲಕ ತಮ್ಮ ಶ್ರೇಷ್ಠತೆಯನ್ನು ಪ್ರತಿಷ್ಟಾಪಿಸಲು ಬಯಸುವ ಸಾಮಾಜಿಕ ವರ್ಗ.

ಭಾರತದಲ್ಲಿ ಬ್ರಿಟಿಷ್ ಅಧಿಕಾರಿಗಳು ದಕ್ಷಿಣ ಭಾರತದ ಭಾಷೆಗಳ ಮೂಲವನ್ನು ಅರಿಯಲು ಸಂಶೋಧನೆಗೆ ತೊಡಗಲು ಭಾಷಾ ಸಂಬಂಧಿ ಆಸಕ್ತಿ ಮತ್ತು ಸ್ಥಳೀಯ ಭಾಷೆಗಳನ್ನು ಅರ್ಥಮಾಡಿಕೊಳ್ಳುವುದು ಪ್ರಮುಖ ಪ್ರೇರಣೆಯಾಗಿದ್ದವು. ಆದರೆ ಈ ಸಂಶೋಧಕರು ಹೊರಗೆಡಹಿದ ಫಲಿತಗಳು ಮಾತ್ರ ಭಾರತದ ಸಾಮಾಜಿಕ ವಲಯದಲ್ಲಿ ಸಂಚಲನೆಗೆ ಕಾರಣವಾಯಿತು. ಪುರೋಹಿತಶಾಹಿ ವರ್ಗದವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿದ್ದ, ಬಹುಸಂಖ್ಯಾತ ತಳವರ್ಗದವರಿಗೆ ಅಲಭ್ಯವಾಗಿದ್ದ ಶಿಕ್ಷಣ ಸೌಲಭ್ಯವೇ ಕಾರಣವಾಗಿ ಸಮಾಜದಲ್ಲಿ ಜಾತಿ ತಾರತಮ್ಯ, ಅವಮಾನ, ಆರ್ಥಿಕ ಅಸಮಾನತೆಗಳಿಗೆ ಕಾರಣವಾಗಿತ್ತು. ಸಂಸ್ಕೃತ ಪುರೋಹಿತಶಾಹಿ ವರ್ಗದ ಭಾಷೆಯಾಗಿದ್ದು ಈ ಭಾಷೆಯನ್ನು ಕಲಿಯಲು ಬೇರೆಯವರಿಗೆ ನಿರ್ಬಂಧವಿತ್ತು. ಪರಿಣಾಮವಾಗಿ ಭಾರತೀಯ ಬಹುಸಂಖ್ಯಾತ ತಳವರ್ಗದಲ್ಲಿ ಪುರೋಹಿತಶಾಹಿ ಮತ್ತು ಸಂಸ್ಕೃತದ ಮೇಲಿನ ಸಿಟ್ಟು ಬೇರ್ಪಡಿಸಲಾಗದಂತಿತ್ತು. ಆದರೂ ಕನ್ನಡದ ಮೂಲಭಾಷೆ ಸಂಸ್ಕೃತ ಎನ್ನುವ ಪ್ರಚಲಿತದಲ್ಲಿದ್ದ ನಂಬಿಕೆಯ ಹಿನ್ನೆಲೆಯಲ್ಲಿ ಆ ಸಿಟ್ಟು ವ್ಯಕ್ತವಾಗುತ್ತಿರಲಿಲ್ಲ. ಯಾವಾಗ ಕನ್ನಡ ಸಂಸ್ಕೃತದಿಂದ ಟಿಸಿಲೊಡೆದ ಭಾಷೆ ಅಲ್ಲ, ಇದು ದ್ರಾವಿಡಭಾಷಾ ಕುಟುಂಬದಿಂದ ಬಂದ ಭಾಷೆ ಎನ್ನುವ ಸತ್ಯ ಅನಾವರಣವಾಯಿತೋ ಅದು ತಳವರ್ಗದವರಲ್ಲಿ ಸ್ವಾಭಿಮಾನದ ಸಂಗತಿಯಾಗಿ ಹೊರಹೊಮ್ಮತೊಡಗಿತು. ಅಂದರೆ ಕನ್ನಡವನ್ನು ಸಂಸ್ಕೃತದಿಂದ ಬೇರ್ಪಡಿಸಿ, ದ್ರಾವಿಡ ನೆಲೆಯಿಂದ ನೋಡುವುದು ಭಾಷಿಕ ಕಾರಣಕ್ಕಿಂತ ಸಾಮಾಜಿಕ ಕಾರಣಕ್ಕಾಗಿ ಮುನ್ನೆಲೆಗೆ ಬಂದಿತು. ಈ ಅಂಶಗಳು ದ್ರಾವಿಡಮೂಲದ ಕನ್ನಡವನ್ನು ಪುನರೂಪಿಸುವ ಪ್ರಯತ್ನದ ಹಿಂದೆಯೂ ದಟ್ಟವಾಗಿರುವುದನ್ನು ಗುರುತಿಸಬಹುದು.

‘ದ್ರಾವಿಡ’ ಎಂಬ ಪದವು ದೇಶವಾಚಕವಾಗಿ, ಜನಾಂಗವಾಚಕವಾಗಿ ಸಾಮಾನ್ಯವಾಗಿ ರೂಢಿಯಲ್ಲಿದೆ. ದ್ರಾವಿಡಭಾಷೆ ಎಂದಾಗ ಅದು ಒಂದು ಭಾಷಾವರ್ಗವನ್ನು ಹೆಸರಿಸುತ್ತದೆ. ಸಂಸ್ಕೃತ ವಿದ್ವಾಂಸರ ಪ್ರಕಾರ ದ್ರಾವಿಡ ಎಂಬುದು ದಕ್ಷಿಣ ಭಾರತದ ಒಂದು ಭೂಭಾಗವೇ ಆಗಿದೆ. ಸಂಸ್ಕೃತದ ಮಹಾವಿದ್ವಾಂಸನಾದ ಫೆಡ್ರಿಕ್ ಮ್ಯಾಕ್ಸ್ ಮುಲ್ಲರ್ ಮೊತ್ತಮೊದಲ ಬಾರಿಗೆ ಹತ್ತೊಂಬತ್ತನೆಯ ಶತಮಾನದ ದಶಕದಲ್ಲಿ ದ್ರಾವಿಡ ಭಾಷೆಗಳನ್ನು ವಿಭಾಗಿಸಿದ. ಅಲ್ಲಿಂದ ಮುಂದೆ ‘ದ್ರಾವಿಡ’ ಎಂಬುದು ಒಂದು ಭಾಷಿಕ ಪರಿಕಲ್ಪನೆಯಾಗಿ ಭಾರತದಲ್ಲಿ ನಿರ್ದಿಷ್ಟವಾದ ಒಂದು ‘ಭಾಷಾ ಪರಿವಾರ’ ಎಂಬರ್ಥದಲ್ಲಿ ಪ್ರಕಟಗೊಂಡಿತು ಸಾಮಾನ್ಯವಾಗಿ ದಕ್ಷಿಣ ಭಾರತವನ್ನು ದೃಷ್ಟಿಯಲ್ಲಿರಿಸಿಕೊಂಡು ಅದನ್ನು ದ್ರಾವಿಡ ನಾಡೆಂದು, ಇಲ್ಲಿ ವಾಸ ಮಾಡುವ ಜನರನ್ನು ದ್ರಾವಿಡರು ಎಂದು ಗುರುತಿಸುವುದಿದೆ. ಇನ್ನೂ ನಿರ್ದಿಷ್ಟವಾಗಿ ದ್ರಾವಿಡ ಪದವನ್ನು ವ್ಯಾಪಕವಾಗಿ ‘ತಮಿಳ’ ಪದಕ್ಕೆ ಪರ್ಯಾಯವಾಗಿ ಬಳಸಲಾಗಿದೆ.

ಶಂಬಾ ಅವರು ಪಾಶ್ಚಾತ್ಯ ಮಾನವಶಾಸ್ತ್ರಜ್ಞರು ಮತ್ತು ದೇಶಿ ವಿದ್ವಾಂಸರ ‘ದ್ರಾವಿಡ’ ಅಧ್ಯಯನಗಳನ್ನು ಆಧರಿಸಿ, ‘ದ್ರಾವಿಡ’ ಪದಕ್ಕಿರುವ ಅರ್ಥವ್ಯಾಪ್ತಿಯನ್ನು ಚರ್ಚಿಸುತ್ತಾರೆ. ‘ದ್ರಾವಿಡ’ ಪ್ರಯೋಗ ವೈದಿಕ ವಾಙ್ಮಯದಲ್ಲಿ ‘ದಸ್ಯು’ಗಳನ್ನು ನಿರ್ದೇಶಿಸುವ ಪದ. ಆರ್ಯರೊಂದಿಗೆ ಹೋರಾಡಿದ ದಸ್ಯುಗಳೇ ದ್ರಾವಿಡರಾಗಿದ್ದು, ದ್ರಾವಿಡ ಮೂಲದ ‘ಬ್ರಾಹೂಯಿ’ ಭಾಷೆ ಇಂದಿಗೂ ಬಲೂಚಿಸ್ಥಾನದ ಪರಿಸರದಲ್ಲಿರುವುದು, ಸಿಂಧು ಸಂಸ್ಕೃತಿಯು ದ್ರಾವಿಡರ ಅಸ್ತಿತ್ವಕ್ಕೆ ಪ್ರಬಲ ಪುರಾವೆಯೆನ್ನುವುದು ಶಂಬಾ ಅವರ ವಾದ. ಇಂದಿನ ತಮಿಳರು ಮತ್ತು ಕನ್ನಡಿಗರು ಮೂಲ ದ್ರಾವಿಡ ಪಂಗಡಕ್ಕೆ ಸೇರಿದವರೆನ್ನುವುದನ್ನು ಹಳಗನ್ನಡ ಮತ್ತು ತಮಿಳು ಭಾಷೆಗಳೆರಡು ಒಡೆಯುವ ಪೂರ್ವದಲ್ಲಿದ್ದ ಏಕರೂಪ ‘ಕಂದಮಿಳ’ ಭಾಷೆ. ಕಂದಮಿಳ ಭಾಷೆಯನ್ನಾಡುವವರೇ ‘ಕಂದಮಿಳರು’, ದ್ರಾವಿಡ ಸಂಸ್ಕøತಿಯ ಮೂಲಿಗರಾದ ‘ಕಂದಮಿಳರು’ ಕ್ರಿಸ್ತಪೂರ್ವ ಸು.2000 ವರ್ಷಗಳ ಹಿಂದೆ ನರ್ಮದೆಯ ಪರಿಸರದಲ್ಲಿ ಅಂದರೆ ಇಂದಿನ ಗುಜರಾಥ (ಲಾಟ), ಬಂಗಾಲ, ಮಹಾರಾಷ್ಟ್ರದಲ್ಲಿ ನೆಲೆಸಿದ್ದರು ಎಂದು ಶಂಬಾ ಅವರು ನಿರ್ಣಯಕ್ಕೆ ಬರುತ್ತಾರೆ.

ದ್ರಾವಿಡಶೋಧದ ನೆಲೆಯಲ್ಲಿ ಕನ್ನಡ ಅಸ್ಮಿತೆಯನ್ನು ಕಟ್ಟಿಕೊಳ್ಳುವ ಪ್ರಯತ್ನದ ಹಿಂದಿನ ಪ್ರೇರಣೆಗಳಿಗೆ ಹಲವು ಆಯಾಮಗಳಿವೆ. ತಿಳಿವಳಿಕೆಯ ಕೊರತೆಯಿಂದ ಆಗಿರಬಹುದಾದ ಸಂಸ್ಕೃತವೇ ಕನ್ನಡದ ಮೂಲ ಎಂಬ ಸಮಾಜದಲ್ಲಿದ್ದ ನಂಬಿಕೆಯು ಸಂಶೋಧನೆಗಳು ನಡೆದು ಸತ್ಯ ತಿಳಿದ ನಂತರ ಸ್ವಲ್ಪಮಟ್ಟಿಗೆ ಬದಲಾಯಿತು. ಆದರೆ ಸಂಸ್ಕೃತವೇ ಕನ್ನಡದ ಮೂಲ ಎಂಬ ವಾದವನ್ನು ಒಂದು ವರ್ಗ ಮುಂದುವರೆಸಿದ್ದು ಇದರ ಹಿಂದೆ ನಿರ್ದಿಷ್ಠ ಉದ್ದೇಶ ಇರುವುದನ್ನು ಹೇಳಿತು. ಈ ಉದ್ದೇಶ ಭಾಷಾಮೂಲದ್ದಾಗಿರದೆ ವರ್ಗ ಹಿತಾಸಕ್ತಿಯದ್ದಾಗಿತ್ತು.

ಕನ್ನಡ ಅಸ್ಮಿತೆಯನ್ನು ದ್ರಾವಿಡ ನೆಲೆಯಿಂದ ನೋಡುವ ಚಿಂತನಾಕ್ರಮದ ಹಿಂದೆ ಭಾಷಿಕ ಕಾರಣವೂ ಇದೆ. ಈ ಭಾಷಿಕ ಕಾರಣವೂ ಸಾಮಾಜಿಕ ನೆಲೆಯಲ್ಲಿ ಅಂತರ್ಗತವಾಗಿದೆ. ಬರಹದ ಭಾಷೆ ಸಂಸ್ಕೃತದಿಂದ ಪ್ರಭಾವಿತವಾಗಿದ್ದು ಆಡುಭಾಷೆಗಿಂತ ಭಿನ್ನವಾಗಿದೆ. ಬರಹದ ಭಾಷೆಯ ಎದುರು ಆಡುಭಾಷೆ ಕೀಳರಿಮೆಯನ್ನು ಅನುಭವಿಸುತ್ತಿದ್ದು, ಮುಖ್ಯವಾಗಿ ತಳವರ್ಗದವರಿಗೆ ಇದು ಬಳಕೆಯ ಸಂದರ್ಭದಲ್ಲಿ ತೊಡಕಾಗಿ ಪರಿಣಮಿಸುತ್ತ್ತಿದೆ. ಆಡುಭಾಷೆಯ ಕನ್ನಡ ಹೆಚ್ಚು ಸಂಸ್ಕೃತ ಪದಗಳಿಲ್ಲದ ಮೂಲ ಕನ್ನಡ ಭಾಷೆಗೆ ಹತ್ತಿರವಾಗಿದೆ. ಇದು ತಳವರ್ಗದವರಿಗೆ ಬಳಸಲು ಸುಲಭವಾಗಿದೆ. ಆಡುಭಾಷೆಯ ಕನ್ನಡವನ್ನೇ ಬರಹದಲ್ಲಿಯೂ ಬಳಸುವಂತೆ ದ್ರಾವಿಡ ನೆಲೆಯ ಕನ್ನಡ ಅಸ್ಮಿತೆ ಒತ್ತಾಯಿಸುತ್ತದೆ. ಈ ಒತ್ತಾಯದ ಹಿಂದೆ ಎರಡು ಉದ್ದೇಶಗಳಿವೆ. ಮೊದಲನೆಯದು ಸಂಸ್ಕೃತದ ವಿರೋಧ. ಒಂದು ಭಾಷೆಯ ಹೇರಿಕೆಯ ವಿರೋಧ, ಆ ಸಂಸ್ಕೃತಿಯ ವಿರೋಧವೂ ಆಗಿಬಿಡುತ್ತದೆ. ಎರಡನೆಯದು ಸಂಸ್ಕೃತದ ಹಿಡಿತದಿಂದ ಹೊರಬರುವ ಮತ್ತು ತಳವರ್ಗದ ಕನ್ನಡ ಭಾಷೆಯನ್ನು ಮೇಲ್ಚಲನೆಗೊಳಪಡಿಸುವ ಉದ್ದೇಶ.

ದ್ರಾವಿಡಶೋಧದ ನೆಲೆಯ ಕನ್ನಡ ಅಸ್ಮಿತೆಯ ಮುಖ್ಯ ಚಹರೆಯೆಂದರೆ ಸ್ವವಿಮರ್ಶೆಯ ಗುಣ. ಇದು ಇಂಗ್ಲಿಶನ್ನೋ ಅಥವಾ ನೆರೆಯ ಭಾಷೆಯನ್ನೋ ಕನ್ನಡದ ವೈರಿಭಾಷೆಯೆಂದು ಪರಿಗಣಿಸುವುದಿಲ್ಲ. ಸಂಸ್ಕೃತವನ್ನು ಕನ್ನಡಕ್ಕೆ ಕಂಟಕ ತರುತ್ತಿದೆ ಎಂದು ಭಾವಿಸಿದರೂ ಅಲ್ಲಿ ಮುಖ್ಯವಾಗಿರುವುದು ಭಾಷೆಯಾಗಿ ಸಂಸ್ಕೃತಕ್ಕಿಂತಲೂ ಸಂಸ್ಕೃತದ ಮೂಲಕ ತಮ್ಮ ಶ್ರೇಷ್ಠತೆಯನ್ನು ಪ್ರತಿಷ್ಟಾಪಿಸಲು ಬಯಸುವ ಸಾಮಾಜಿಕ ವರ್ಗ. ದ್ರಾವಿಡಶೋಧದ ನೆಲೆ ಕನ್ನಡದೊಳಗೆ ಪರಿವರ್ತನೆ ಮತ್ತು ಸುಧಾರಣೆಯ ಮೂಲಕ ಕನ್ನಡವನ್ನು ಉಳಿಸಲು ಮತ್ತು ಬೆಳೆಸಲು ಪ್ರಯತ್ನಿಸುತ್ತದೆ. ಇದು ಕನ್ನಡದೊಳಗೇ ಇರುವ ವಿವಿಧ ಸಾಮಾಜಿಕ ವರ್ಗಗಳ ಹಿತಾಸಕ್ತಿಗಳು ಕನ್ನಡಕ್ಕೆ ಉಂಟು ಮಾಡುತ್ತಿರುವ ತೊಡಕುಗಳನ್ನು ಪ್ರಧಾನವಾಗಿ ಗಮನಿಸುತ್ತದೆ.

ಕನ್ನಡದಲ್ಲಿ ದ್ರಾವಿಡಶೋಧದ ನೆಲೆಯಲ್ಲಿ ಕನ್ನಡ ಅಸ್ಮಿತೆಯನ್ನು ಕಟ್ಟಿಕೊಡುತ್ತಿರುವವರಲ್ಲಿ ಡಿ.ಎನ್.ಶಂಕರಭಟ್ಟರು ಮತ್ತು ಕೆ.ವಿ.ನಾರಾಯಣ ಅವರು ಪ್ರಮುಖರು. ಡಿ.ಎನ್.ಶಂಕರಭಟ್ಟರು ದ್ರಾವಿಡಮೂಲದ ಕನ್ನಡವನ್ನು ಪುನರ್ ರೂಪಿಸುವ ಪ್ರಯತ್ನದಲ್ಲಿದ್ದಾರೆ. ಕೆ.ವಿ.ನಾರಾಯಣ ಅವರು ಜಾಗತಿಕ ಪರಿವರ್ತನೆಗಳು, ಆಧುನಿಕ ತಂತ್ರಜ್ಞಾನ, ಸಾಮಾಜಿಕ ಚಲನೆಗಳು, ವ್ಶೆಜ್ಞಾನಿಕವಾಗಿ ಕಂಡುಕೊಂಡ ಕಲಿಕೆಯ ಸಾಮಥ್ರ್ಯ, ಹೀಗೆ ಎಲ್ಲ ಆಯಾಮಗಳಿಂದಲೂ ಕನ್ನಡಕ್ಕೆ ಆಗುವ ಪರಿಣಾಮಗಳನ್ನು ಮುಕ್ತವಾಗಿ ಚಿಂತಿಸಿದರೂ ಈ ಚಿಂತನೆಗಳು ದ್ರಾವಿಡ ಮೂಲದಿಂದ ಹೊರಡುತ್ತವೆ ಎನ್ನುವುದು ಮುಖ್ಯವಾದ ಸಂಗತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...