Homeಕರ್ನಾಟಕ‘ಎದ್ದೇಳು ಕರ್ನಾಟಕ’ ಅನುಭವ ಕಥನ (ಭಾಗ -1): ಈ ಪರಿಕಲ್ಪನೆ ಹುಟ್ಟಿದ ಪರಿ

‘ಎದ್ದೇಳು ಕರ್ನಾಟಕ’ ಅನುಭವ ಕಥನ (ಭಾಗ -1): ಈ ಪರಿಕಲ್ಪನೆ ಹುಟ್ಟಿದ ಪರಿ

- Advertisement -
- Advertisement -

“ಗೆಲುವಿಗೆ ಎಲ್ಲರೂ ಅಪ್ಪ-ಅಮ್ಮ, ಸೋಲು ಅನಾಥ” ಎನ್ನುವ ಮಾತು ಕಟು ವಾಸ್ತವವೇ ಸರಿ. ಆದರೆ ಗೆಲುವನ್ನೂ ಅನಾಥಗೊಳಿಸುವ, ಬಿಜೆಪಿಯನ್ನು ಅಜೇಯಗೊಳಿಸುವ, ನಾಗರಿಕ ಸಮಾಜದ ಪ್ರಯತ್ನವನ್ನು ನಗಣ್ಯಗೊಳಿಸುವ ಕೆಲವು ಬರಹಗಳನ್ನು ನಮ್ಮ ಮಿತ್ರರೇ ಬರೆಯುತ್ತಿರುವುದನ್ನು ಕಂಡು ಸೋಜಿಗವಾಗದಿದ್ದರೂ ‘ಏಕಪ್ಪಾ ಈ ಸ್ಥಿತಿ’ ಎಂದು ಮನಸ್ಸು ಪರಿತಪಿಸಿದ್ದಂತೂ ವಾಸ್ತವ. ನಿಲ್ಲದ ಓಟದಲ್ಲಿದ್ದುದರಿಂದ ಗಮನಿಸಿದರೂ ಯಾವ ಪ್ರತಿಕ್ರಿಯೆಯೆನ್ನೂ ನೀಡಲು ಹೋಗಲಿಲ್ಲ. ಈಗಲೂ ಓಟ ನಿಂತಿಲ್ಲ. ಆದರೆ “ನಿಮ್ಮ ಅನುಭವ ಹಾಗೂ ಅಭಿಪ್ರಾಯವನ್ನು ಬರೆಯಲೇಬೇಕು” ಎಂದು ಕೆಲ ಯುವ ಸಂಗಾತಿಗಳು ಬಹಳ ಒತ್ತಡ ಹಾಕಿದ್ದರಿಂದ ನನ್ನ ಅನುಭವವನ್ನು ಇಲ್ಲಿ ದಾಖಲಿಸಿದ್ದೇನೆ. (ಒಟ್ಟು ನಾಲ್ಕು ಕಂತುಗಳಲ್ಲಿ ಈ ಅನುಭವ ಮಾಲೆ ಪ್ರಕಟಗೊಳ್ಳುತ್ತಿದೆ.)

ಮೊದಲಿಗೆ: 1. ಈ ಸಕರಾತ್ಮಕ ಫಲಿತಾಂಶಕ್ಕೆ ಎದ್ದೇಳು ಕರ್ನಾಟಕವೇ ಕಾರಣ ಅಥವಾ ಅದೇ ಪ್ರಧಾನ ಕಾರಣ ಎಂದು ನನಗೆ ತಿಳಿದ ಮಟ್ಟಿಗೆ ಯಾರೂ ಮಾತನಾಡಿಲ್ಲ ಅಥವಾ ಅಂದುಕೊಂಡಿಲ್ಲ. 2. ಸಾಮಾಜಿಕ ಶಕ್ತಿಗಳ ಮಧ್ಯಪ್ರವೇಶ ಎಂದರೆ ಎದ್ದೇಳು ಕರ್ನಾಟಕ ಮಾತ್ರವೇ ಎಂಬ ಅಹಂಕಾರವನ್ನೂ ನಾನೆಲ್ಲೂ ಕಂಡಿಲ್ಲ. 3. ಬಿಜೆಪಿ ನೆಲಕಚ್ಚಿದೆ, ಹಿಂದುತ್ವ ಹಿಮ್ಮೆಟ್ಟಿದೆ, ಫ್ಯಾಸಿಸಂ ಅಪಾಯದಿಂದ ಕರ್ನಾಟಕ ಪಾರಾಗಿದೆ ಎಂದು ಅಂದುಕೊಳ್ಳುವಷ್ಟು ಮೂರ್ಖರು ಕರ್ನಾಟಕದ ಸಾಮಾಜಿಕ ಚಳವಳಿಯಲ್ಲೆ ಯಾರೂ ಇಲ್ಲ. 4. ಕಾಂಗ್ರೆಸ್ ಈ ದೇಶಕ್ಕೆ ಪರಿಹಾರ ಅಥವಾ ಪರ್ಯಾಯ ಎಂಬ ಭ್ರಮೆಯಲ್ಲಿ ಎದ್ದೇಳು ಕರ್ನಾಟಕದ ಯಾರೊಬ್ಬರೂ ಇಲ್ಲ.

ಎರಡನೆಯದಾಗಿ: ಎದ್ದೇಳು ಕರ್ನಾಟಕದ ಎಕ್ಸಿಕ್ಯೂಟಿವ್ ಕೌನ್ಸಿಲ್ಲಿನ ಅವಲೋಕನ ಸಭೆ ಇನ್ನು ನಡೆದಿಲ್ಲ. ಹಾಗಾಗಿ ನನ್ನ ಈ ಬರಹ ನನ್ನ ವೈಯಕ್ತಿಕ ಮಧ್ಯಾಂತರಿ ಅಭಿಪ್ರಾಯ.

ಮೂರನೆಯದಾಗಿ: ಈ ಬರಹದ ಉದ್ದೇಶ ಎದ್ದೇಳು ಕರ್ನಾಟಕ ಮಾಡಿದ ಕೆಲಸವನ್ನು ಕೊಂಡಾಡುವುದು ಅಲ್ಲ. ಬದಲಿಗೆ ಈ ಒಂದು ವಿಶಿಷ್ಟ ಅನುಭವ ನೀಡಿರುವ ಕಲಿಕೆಗಳ ಅನುಭವದ ಬುತ್ತಿಯಲ್ಲಿ ಹಂಚಿಕೊಳ್ಳಲಿಕ್ಕಾಗಿ. ಈ ಅಂಧಕಾರದ ದಿನಗಳಲ್ಲಿ, ಹಣ, ಜಾತಿ, ಕೋಮು ರಾಜಕರಣದಲ್ಲಿ ಮುಳುಗಿಗೇಳುತ್ತಿರುವ ಚುನಾವಣೆಗಳಲ್ಲಿ, ಸಾಮಾಜಿಕ ಸಂಘಟನೆಗಳಿಗೆ ಅರ್ಥವತ್ತಾದದ್ದನ್ನು ಮಾಡಲೇನಾದರೂ ಉಂಟೆ? ಎಂಬ ಪ್ರಶ್ನೆಗೆ ನಿಚ್ಚಳ ಉತ್ತರ ಅಲ್ಲವಾದರೂ ದಿಕ್ಸೂಚಿ ಉತ್ತರವನ್ನಂತೂ ಎದ್ದೇಳು ಕರ್ನಾಟಕದ ಅನುಭವ ತೋರಿಸಿಕೊಟ್ಟಿದೆ. ಹಾಗಾಗಿ ದೇಶ ಉಳಿಸಲು ಕೈಕೆಸರು ಮಾಡಿಕೊಳ್ಳಲು ಸಿದ್ಧವಿರುವ ಸಾಮಾಜಿಕ ಕಾರ್ಯಕರ್ತರು ಇದನ್ನು ಗಮನಿಸುವ ಮತ್ತು ಅವಲೋಕಿಸುವ ಅಗತ್ಯವಂತೂ ಇದೆ. ಅದಕ್ಕೆ ಸಹಾಯವಾಗಲಿ ಎಂಬ ಉದ್ದೇಶದಿಂದ ಬರಹ ರೂಪದಲ್ಲಿ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ.

ಸಂಕ್ಷಿಪ್ತ ಹಿನ್ನೆಲೆ: ಕರ್ನಾಟಕದಲ್ಲಿ ಕೋಮುವಾದ ತಲೆಎತ್ತಿ ಬೆಳೆಯತೊಡಗಿದಾಗನಿಂದ ಅದನ್ನು ಪ್ರತಿರೋಧಿಸುವ ಪರಂಪರೆ ಕರ್ನಾಟಕದಲ್ಲಿ ಬಹಳ ಪ್ರಖರ ರೀತಿಯಲ್ಲೇ ಅಭಿವ್ಯಕ್ತಗೊಂಡಿದೆ. ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಅದರ ಅತಿ ಹೆಚ್ಚು ಸಂಘಟಿತ ಹಾಗೂ ಅತಿ ಹೆಚ್ಚು ಕಾಲದ ಪ್ರಯತ್ನವಾಗಿತ್ತು. ಇದಲ್ಲದೆ ಸಮಾನ ಮನಸ್ಕರ ವೇದಿಕೆ, ಸಂವಿಧಾನ ಉಳಿವಿಗಾಗಿ ಕರ್ನಾಟಕ, ದೇಶಕ್ಕಾಗಿ ನಾವು, ಸಹಮತ, ಮಾನವ ಬಂಧುತ್ವ ವೇದಿಕೆ, ಬಹುತ್ವ, ಜನಪರ ಸಂಘಟನೆಗಳ ಒಕ್ಕೂಟ, ಸಹಬಾಳ್ವೆ ಮುಂತಾದ ಹತ್ತು ಹಲವು ಪ್ರಯತ್ನಗಳು ಇದರ ಜೊತೆಜೊತೆಗೂ ನಡೆದಿವೆ. ಇದಲ್ಲದೆ ಅನೇಕ ಎಡ, ಪ್ರಜಾತಾಂತ್ರಿಕ, ದಲಿತ, ಅಲ್ಪಸಂಖ್ಯಾತ ಸಂಘಟನೆಗಳು ಫ್ಯಾಸಿಸ್ಟ್ ಶಕ್ತಿಯನ್ನು ತಮ್ಮ ತಮ್ಮದೇ ರೀತಿಯಲ್ಲಿ ಪ್ರತಿರೋಧಿಸುತ್ತಾ ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ರೈತ ಸಂಘಟನೆಗಳು, ಮಹಿಳಾ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಮುಂತಾದ ಬಹುತೇಕ ಸಾಮಾಜಿಕ ಸಂಘಟನೆಗಳು ಈ ಶಕ್ತಿಗಳನ್ನು ವಿರೋಧಿಸುವ ಖಚಿತ ನಿಲುವುಗಳಿಗೆ ತಲುಪಿದ್ದಾರೆ. ಹಾಗಾಗಿ ಬಿಜೆಪಿ ಮತ್ತು ಸಂಘಪರಿವಾರವನ್ನು ಕರ್ನಾಟಕದ ಎಲ್ಲಾ ಸಾಮಾಜಿಕ ಸಂಘಟನೆಗಳೂ ತಮ್ಮ ತಮ್ಮದೇ ರೀತಿಯಲ್ಲಿ ಪ್ರತಿರೋಧಿಸುತ್ತಿವೆ.

ಪ್ರತಿ ಚುನಾವಣೆ ಸಂದರ್ಭದಲ್ಲೂ ಸಾಮಾಜಿಕ ಸಂಘಟನೆಗಳು ಸಕ್ರಿಯವಾಗಿ ಮಧ್ಯಪ್ರವೇಶ ಮಾಡುವ ಪ್ರಯತ್ನ ಮಾಡಿವೆ ಮತ್ತು ಇದರ ಪ್ರಮಾಣ ಮತ್ತು ವೇಗ ಬಿರುಸುಪಡೆಯುತ್ತಾ ಬಂದಿದೆ. ಈ ಬಾರಿ ಇದರಲ್ಲೊಂದು ನೆಗೆತ ಸಾಧ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಶಕ್ತಿಗಳನ್ನು ಎದುರಿಸುವ ನಿಟ್ಟಿನಲ್ಲಿ ನಡೆದ ಸಂಯುಕ್ತ ಪ್ರಯತ್ನಗಳ ಪೈಕಿ ನಾಲ್ಕು ಬಹಳ ಮುಖ್ಯವಾದವು.

1. 2022 ಮೇ ತಿಂಗಳಿನಲ್ಲಿ ನಡೆದ ಉಡುಪಿ ಸಹಬಾಳ್ವೆ ಸಮಾವೇಶದಲ್ಲಿ ಸಮಾಗಮಗೊಂಡ ಜೀವಪರ ಶಕ್ತಿಗಳು “ದ್ವೇಷ ರಾಜಕಾರಣದಿಂದ ಕರ್ನಾಟಕವನ್ನು ಮುಕ್ತಗೊಳಿಸಲು ನಾವು ನಿರಂತರ ಕೆಲಸ ಮಾಡಬೇಕು” ಎಂಬ ತೀರ್ಮಾನಕ್ಕೆ ಬಂದದ್ದು.

2022, ಮೇ 14ರಂದು ಉಡುಪಿಯಲ್ಲಿ ನಡೆದ ಸಹಬಾಳ್ವೆ ಸಮಾವೇಶ
2022, ಮೇ 14ರಂದು ಉಡುಪಿಯಲ್ಲಿ ನಡೆದ ಸಹಬಾಳ್ವೆ ಸಮಾವೇಶದಲ್ಲಿ ಸೇರಿದ್ದ ಜನಸ್ತೋಮ

2. ಡಿಸೆಂಬರ್ 6 ರಂದು ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು ಕೂಡಿ ಬೃಹತ್ ಪ್ರತಿರೋಧ ಸಮಾವೇಶ ನಡೆಸಿ “ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸುವುದುದೇ ನಮ್ಮ ಪ್ರಧಾನ ಗುರಿ” ಎಂದು ಘೋಷಿಸಿದ್ದು.

2022, ಡಿಸೆಂಬರ್‌ 6ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ‘ದಲಿತರ ಸಾಂಸ್ಕೃತಿಕ ಪ್ರತಿರೋಧ’ ಕಾರ್ಯಕ್ರಮ
2022, ಡಿಸೆಂಬರ್‌ 6ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ‘ದಲಿತರ ಸಾಂಸ್ಕೃತಿಕ ಪ್ರತಿರೋಧ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನಸಾಗರ

3. ಫೆಬ್ರವರಿ 16ರಂದು ಬೆಂಗಳೂರಿನಲ್ಲಿ ಸಂಯುಕ್ತ ಹೋರಾಟದ ನೇತೃತ್ವದಲ್ಲಿ ರೈತ, ಕೃಷಿಕೂಲಿ, ದಲಿತ, ಕಾರ್ಮಿಕ ಸಂಘಟನೆಗಳು ಸೇರಿ ಜನಾಗ್ರಹ ಸಮಾವೇಶ ನಡೆಸಿ “ಜನ ವಿರೋಧಿ ಬಿಜೆಪಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸೋಣ” ಎಂಬ ನಿರ್ಣಯ ತೆಗೆದುಕೊಂಡದ್ದು.

2023, ಜನವರಿ 16ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಂಯುಕ್ತ ಹೋರಾಟದ ನೇತೃತ್ವದಲ್ಲಿ ನಡೆದ ರೈತ, ಕೃಷಿಕೂಲಿ, ದಲಿತ, ಕಾರ್ಮಿಕ ಸಂಘಟನೆ ಜನಾಗ್ರಹ ಸಮಾವೇಶದಲ್ಲಿ ರೈತ ನಾಯಕ ಡಾ.ದರ್ಶನ್ ಪಾಲ್ ಪಾಲ್ಗೊಂಡಿದ್ದರು.
2023, ಜನವರಿ 16ರಂದು ಬೆಂಗಳೂರಿನಲ್ಲಿ ನಡೆದ ರೈತ, ಕೃಷಿಕೂಲಿ, ದಲಿತ, ಕಾರ್ಮಿಕ ಸಂಘಟನೆಗಳ ಜನಾಗ್ರಹ ಸಮಾವೇಶ

4. ಮಾರ್ಚ್ 5 ರಂದು ಬೆಂಗಳೂರಿನ ಜೈ ಭೀಮ್ ಭವನದಲ್ಲಿ ನಡೆದ ಕೇಂದ್ರೀಯ ಕಾರ್ಯಾಗಾರದಲ್ಲಿ ಪಾಲ್ಗೊಂಡ 20 ಜಿಲ್ಲೆಗಳ, ಹಲವು ಗಟ್ಟಿ ಸಂಘಟನೆಗಳ 150 ಗಟ್ಟಿ ಸಂಘಟಕರುಗಳು ಕೂಡಿ “ಎದ್ದೇಳು ಕರ್ನಾಟಕ”ದ ಹೆಸರಿನಲ್ಲಿ “ಕ್ರಿಟಿಕಲ್ ಕ್ಷೇತ್ರಗಳನ್ನು ಗುರುತಿಸಿ, ಅಲ್ಲಿ ತಳಮಟ್ಟಕ್ಕೆ ಇಳಿದು ಕೆಲಸ ಮಾಡೋಣ” ಎಂಬ ತೀರ್ಮಾನಕ್ಕೆ ಬಂದಿದ್ದು ಮತ್ತು ಅದಕ್ಕಾಗಿ ಸ್ಥೂಲ ಯೋಜನೆಯೊಂದನ್ನು ಸಿದ್ಧಗೊಳಿಸಿದ್ದು.

ಮಾರ್ಚ್ 5 ರಂದು ಬೆಂಗಳೂರಿನ ಜೈ ಭೀಮ್ ಭವನದಲ್ಲಿ ನಡೆದ ಕೇಂದ್ರೀಯ ಕಾರ್ಯಾಗಾರದಲ್ಲಿ ರಾಜಕೀಯ ವಿಶ್ಲೇಷಕ ಎ.ನಾರಾಯಣ ಮಾತನಾಡಿದರು.
ಮಾರ್ಚ್ 5 ರಂದು ಬೆಂಗಳೂರಿನ ಜೈ ಭೀಮ್ ಭವನದಲ್ಲಿ ನಡೆದ ಕೇಂದ್ರೀಯ ಕಾರ್ಯಾಗಾರ

‘ಎದ್ದೇಳು’ ಯೋಜನೆ: ಮೇಲ್ಕಂಡ ಕಾರ್ಯಗಾರದಲ್ಲಿ ತಲುಪಿದ ತೀರ್ಮಾನವೆಂದರೆ “ಕೋಮುವಾದಿ ಶಕ್ತಿಗಳನ್ನು ಸೋಲಿಸಿ” ಎಂಬ ಜನರಲ್ ಪ್ರಚಾರದಿಂದ ಹೆಚ್ಚೇನೂ ಉಪಯೋಗವಿಲ್ಲ. ಬದಲಾಗಿ ಮತದಾನದ ಮೇಲೆ ನೇರ ಪರಿಣಾಮ ಬೀರುವಂತಹ ಕೆಲಸಕ್ಕೆ ಇಳಿಯಲೇಬೇಕು. ಅದಕ್ಕಾಗಿ…

ನಮ್ಮ ಶಕ್ತಿ ಸಾಮರ್ಥ್ಯವನ್ನು ಬಿಜೆಪಿಯ ಜೊತೆ ತೀವ್ರ ಸ್ಪರ್ಧೆ ಇರುವ ವಿಧಾನಸಭಾ ಕ್ಷೇತ್ರಗಳ ಮೇಲೆ ವಿನಿಯೋಗಿಸಬೇಕು. ಬಿಜೆಪಿಗೂ ಇತರೆ ಪಕ್ಷಗಳಿಗೂ ತೀವ್ರ ಹಣಾಹಣಿ ಇರುವ, ಗೆಲುವಿನ ಅಂತರ ಕಡಿಮೆ ಇರುವ, 5-10 ಸಾವಿರ ಓಟುಗಳ ಬದಲಾವಣೆಯಾದರೆ ಫಲಿತಾಂಶದಲ್ಲೇ ಬದಲಾವಣೆ ಬರುವ ಕ್ಷೇತ್ರಗಳನ್ನು ಆಯ್ದುಕೊಂಡು ಕೆಲಸ ಮಾಡಬೇಕು. ನಮ್ಮೆಲ್ಲಾ ಸಮಾಜಿಕ ಸಂಪರ್ಕ ಮತ್ತು ಸಾಮರ್ಥ್ಯ ಬಳಸಿ 5-10 ಸಾವಿರ ಮತಗಳನ್ನು ಪ್ರಭಾವಿಸುವ ಮೂಲಕ ಫಲಿತಾಂಶದ ಮೇಲೆ ಪರಿಣಾಮ ಬೀರಬೇಕು. ಇದಕ್ಕಾಗಿ ಈ ಕ್ಷೇತ್ರಗಳಲ್ಲಿ ವಾಲಂಟೀರ್ಸ್ ತಂಡಗಳನ್ನು ಕಟ್ಟಿ ಯೋಜಿತ ಕೆಲಸ ಮಾಡಬೇಕು.

ಆ ಆಯ್ದ ಕ್ಷೇತ್ರಗಳಲ್ಲಿ ತಳಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಮತದಾನದ ಪ್ರಮಾಣವನ್ನು ಹೆಚ್ಚಿಸುವ, ಮತ ವಿಭಜನೆಯನ್ನು ತಗ್ಗಿಸುವ, ಬಿಜೆಪಿಯನ್ನು ಏಕೆ ಸೋಲಿಸಲೇಬೇಕು ಎಂಬುದನ್ನು ವಿವಿಧ ಜನವರ್ಗಗಳಿಗೆ ಮನವರಿಕೆ ಮಾಡಿಸುವ ಕೆಲಸ ಮಾಡಬೇಕು.

ವೈಜ್ಞಾನಿಕ ರೀತಿಯಲ್ಲಿ ಸರ್ವೆ ನಡೆಸಿ ಜನರ ನಾಡಿಮಿಡಿತ ಅರಿಯಬೇಕು, ಜನರು ಗಾಢವಾಗಿ ಫೀಲ್ ಮಾಡುತ್ತಿರುವ ಸಮಸ್ಯೆಗಳನ್ನೇ ಫೋಕಸ್ ಮಾಡುತ್ತಾ ನೆರೇಟಿವ್ ರೂಪಿಸಬೇಕು. ಇದಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಕೆಲಸ ಮಾಡಬೇಕು ಮತ್ತು ವೈವಿಧ್ಯಮಯ ಸಾಹಿತ್ಯ ಪ್ರಕಟಿಸಬೇಕು.
ಕೊನೆಯದಾಗಿ ಮತ್ತು ಬಹುಮುಖ್ಯವಾಗಿ ಈ ಎಲ್ಲಾ ಕೆಲಸವನ್ನೂ ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯಿಂದ ಬಿಡಿಗಾಸು ಹಣವನ್ನೂ ಪಡೆಯದೆ ಮಾಡಬೇಕು. ಇದೊಂದು ಸ್ವತಂತ್ರ ಮತ್ತು ನೀತಿಬದ್ಧ ನಾಗರಿಕ ಅಭಿಯಾನವಾಗಿದ್ದಾಗ ಮಾತ್ರವೇ ಎಲ್ಲರನ್ನೂ ವಿಮರ್ಷಿಸುವ ಮತ್ತು ಜನರ ಬಳಿ ನಿಸ್ವಾರ್ಥ ದನಿಯಲ್ಲಿ ಮಾತನಾಡುವ ನೈತಿಕ ಶಕ್ತಿ ನಮಗಿರುತ್ತದೆ.

(ಮುಂದುವರಿಯುತ್ತದೆ: ಭಾಗ -2 ‘ಎದ್ದೇಳು ಕರ್ನಾಟಕ’ ಮಾಡಿದ ಕೆಲಸ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...