Homeಅಂತರಾಷ್ಟ್ರೀಯಮೋದಿ ಗೆಲುವು ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೂ ಇದು ಕೆಟ್ಟ ಸುದ್ದಿ : ದಿ ಗಾರ್ಡಿಯನ್

ಮೋದಿ ಗೆಲುವು ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೂ ಇದು ಕೆಟ್ಟ ಸುದ್ದಿ : ದಿ ಗಾರ್ಡಿಯನ್

ಮೋದಿ ಗೆಲುವಿನಿಂದ ಭಾರತದ ಆತ್ಮ 'ಕರಾಳ ರಾಜಕೀಯ'ಕ್ಕೆ ಸೋತಿದೆ ಎಂದ 'ಗಾರ್ಡಿಯನ್' ಸಂಪಾದಕೀಯ!

- Advertisement -
- Advertisement -

ಕೃಪೆ: (ದಿ ಸ್ಕ್ರೋಲ್)

ಅನುವಾದ: ನಿಖಿಲ್ ಕೋಲ್ಪೆ

ನರೇಂದ್ರ ಮೋದಿ ಪುನರಾಯ್ಕೆಯನ್ನು ಪಾಶ್ಚಾತ್ಯ ಮಾಧ್ಯಮಗಳು ಹೊಗಳಿವೆ ಎಂದು ಭಾರತೀಯ ಹೊಗಳುಭಟ ಮಾಧ್ಯಮಗಳು ಬೂಸಿ ಬಿಡುತ್ತಿರುವಂತೆಯೇ ಪ್ರಮುಖ ಪತ್ರಿಕೆಗಳಾದ ‘ಗಾರ್ಡಿಯನ್’ ಮತ್ತು ನ್ಯೂಯಾರ್ಕ್ ಟೈಮ್ಸ್’ ಮೋದಿಗೆ ಮಂಗಳಾರತಿ ಮಾಡಿವೆ.

ರಾಷ್ಟ್ರೀಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಗೆಲುವು ಭಾರತದ ಆತ್ಮವು “ಕರಾಳ ರಾಜಕೀಯಕ್ಕೆ ಸೋಲುವುದನ್ನು” ಕಾಣಲಿದೆ ಮತ್ತು  ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೂ ಇದು ಕೆಟ್ಟ ಸುದ್ದಿ ಎಂದು ಬ್ರಿಟಿಶ್ ಪತ್ರಿಕೆ ‘ದಿ ಗಾರ್ಡಿಯನ್’ ತನ್ನ ಸಂಪಾದಕೀಯದಲ್ಲಿ ಹೇಳಿದೆ. ಮೋದಿ “ಸ್ವತಂತ್ರ ಭಾರತದ ಅತ್ಯಂತ ಅಮೂಲ್ಯ ಮುಖವಾದ ಕ್ರಿಯಾಶೀಲ ಬಹುಪಕ್ಷೀಯ ಪ್ರಜಾಪ್ರಭುತ್ವ”ಕ್ಕೆ ಬೆದರಿಕೆ ಒಡ್ಡಿದ್ದರು ಎಂದು ಸಂಪಾದಕೀಯ ಹೇಳಿದೆ.

ಪತ್ರಿಕೆಯು ತನ್ನ ಟೀಕೆಯಲ್ಲಿ ಮೋದಿಯನ್ನು “ವಿಭಾಜಕ ವ್ಯಕ್ತಿ” ಆದರೆ, “ಸಂಶಯಾತೀತವಾಗಿ ಪ್ರಭಾವಿ ಪ್ರಚಾರಕ”ಎಂದು ಬಣ್ಣಿಸಿದ್ದು, ಅವರು “ಭಯಾನಕವಾದ ಪರಿಣಾಮದೊಂದಿಗೆ ಸುಳ್ಳು ದಾವೆಗಳನ್ನು ಮತ್ತು ಪಕ್ಷಪಾತದ ವಾಸ್ತವಾಂಶಗಳನ್ನು ಬಳಸಿದರು” ಎಂದು ಗುರುತಿಸಿದೆ.

ಆತನನ್ನು ಸೋಲಿಸುವುದು ಹೇಗೆ ಎಂಬ ಬಗ್ಗೆ ಕಾಂಗ್ರೆಸ್ ಮತ್ತು ಗಾಂಧಿ-ನೆಹರೂ ಕುಟುಂಬ ಗಂಭೀರವಾದ ಮರುಚಿಂತನೆ ನಡೆಸಬೇಕಾಗಬಹುದು ಎಂದು ಸಂಪಾದಕೀಯ ಅಭಿಪ್ರಾಯಪಟ್ಟಿದೆ.

ಮೋದಿಯು ಭಾಗವಾಗಿರುವ ಹಿಂದೂ ರಾಷ್ಟ್ರೀಯವಾದವು ತನ್ನ ಮೇಲ್ಜಾತಿ ಹಿಂದೂಗಳ ಮೇಲಿನ ಗಮನ, ಕಾರ್ಪೋರೇಟ್ ಪರ ಆರ್ಥಿಕ ಬೆಳವಣಿಗೆ, ಸಾಂಸ್ಕೃತಿಕ ಸಾಂಪ್ರದಾಯಿಕತೆ, “ತೀವ್ರಗೊಂಡ” ಹೆಣ್ಣಿನ ಮೇಲಿನ ಅಸಹಿಷ್ಣುತೆ ಮತ್ತು ದಬ್ಬಾಳಿಕೆ, “ಸರಕಾರಿ ಶಕ್ತಿಯ ಸಾಧನಗಳ ಮೇಲೆ ಬಲವಾದ ಹಿಡಿತ” ಇತ್ಯಾದಿಗಳಿಂದ ಭಾರತವನ್ನು ಇನ್ನಷ್ಟು ಕೆಟ್ಟ ಸ್ಥಿತಿಗೆ ತಳ್ಳಲಿದೆ ಎಂದು ಸಂಪಾದಕೀಯವು ಹೇಳಿದೆ.

ಭಾರತದ ಮುಸ್ಲಿಮರು “ರಾಜಕೀಯ ಅನಾಥ”ರಾಗಿರುವ ಬಗ್ಗೆ ಟಿಪ್ಪಣಿ ಮಾಡಿರುವ ಸಂಪಾದಕೀಯವು, ಸಂಸತ್ತಿನಲ್ಲಿ ಅವರ ಸ್ಥಾನಗಳ ಸಂಖ್ಯೆ ಕುಸಿಯುತ್ತಿರುವ ಬಗ್ಗೆ, ಅವರನ್ನು ಹೇಗೆ ಹಿಂದೂತ್ವವಾದವು ಎರಡನೇ ದರ್ಜೆಯ ಪ್ರಜೆಗಳಾಗಿ ಕಾಣುತ್ತಿದೆ ಎಂಬ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಈ ವರ್ಷದ ಆರಂಭದಲ್ಲಿ ಮೋದಿ ಸರಕಾರವು ಭಾರತ ಮತ್ತು ಪಾಕಿಸ್ತಾನವನ್ನು ಬೇಜವಾಬ್ದಾರಿಯಿಂದ ಯುದ್ಧದ ಅಂಚಿಗೆ ತಳ್ಳಿತ್ತು ಎಂದೂ ಅದು ಹೇಳಿದೆ.

ಭಾರತದಲ್ಲಿ ಭಾರಿ ಸಂಖ್ಯೆಯ ಜನರು ಸರ್ವಾಧಿಕಾರಿ ಆಡಳಿತದ ಪರವಾಗಿದ್ದಾರೆ ಎಂದು ತೋರಿಸಿರುವ 2017ರ ಸಮೀಕ್ಷೆಯೊಂದನ್ನು ಉಲ್ಲೇಖಿಸಿರುವ ಸಂಪಾದಕೀಯವು “ತತ್ತರಿಸುತ್ತಿರುವ ಆರ್ಥಿಕತೆ”ಯ ಹೊರತಾಗಿಯೂ ಮೋದಿಯ ವಿಜಯವು ಬಹುಶಃ ಅಚ್ಚರಿದಾಯಕವಲ್ಲ ಎಂದು ಹೇಳಿದೆ.

ಭಾರತೀಯ ಜನತಾ ಪಕ್ಷದ ಬಗ್ಗೆ ಟಿಪ್ಪಣಿ ಮಾಡಿರುವ ಅದು, “ಭಾರತವನ್ನು ರೂಪುಗೆಡಿಸಿರುವ ಭಾರೀ ಅಸಮಾನತೆ ಕುರಿತು ಬರೇ ಬಾಯ್ಮಾತನಷ್ಟೇ ಆಡುತ್ತಿದೆ” ಮತ್ತು ಭಾರತದ ಪಕ್ಷ ವ್ಯವಸ್ಥೆಯಲ್ಲಿರುವ ಜಾತಿ ಮತ್ತು ಧರ್ಮ ಸಂಘರ್ಷವು ಅದಕ್ಕೆ ಸರಿಯಾಗಿ ಹೊಂದಾಣಿಕೆಯಾಗುತ್ತಿದೆ ಎಂದು ಹೇಳಿದೆ.

ಇದೇ ಹೊತ್ತಿಗೆ ಪ್ರತಿಪಕ್ಷಗಳು ಸಮಭಾವದ ವೇದಿಕೆಯ ಮೂಲಕ ನಿರ್ದಿಷ್ಟವಾದ ಅಭಿಯಾನವನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿರುವ ಅದು, ಅಸ್ಮಿತೆ ಅಥವಾ ಗುರುತನ್ನಾಧರಿಸಿದ ಸ್ಪರ್ಧೆಗೆ ಬದಲಾಗಿ  “ಎಲ್ಲಾ ಭಾರತೀಯರಿಗೆ ಲಾಭವಾಗುವಂತಹ ರಾಜಕೀಯ ಸ್ಪರ್ಧೆಯಲ್ಲಿ” ತೊಡಗಬೇಕಾಗಿದೆ ಎಂದು ಹೇಳಿದೆ. “ಅದಕ್ಕೆ ಪಕ್ಷಗಳು ಭಾರತದ ಬಡಜನರಿಗೆ ಈಗಿರುವುದಕ್ಕಿಂತ ಹೆಚ್ಚು ಹತ್ತಿರವಾಗಬೇಕಾದ ಅಗತ್ಯವಿದೆ” ಎಂದೂ ಸಂಪಾದಕೀಯವು ಸಲಹೆ ಮಾಡಿದೆ.

‘ನ್ಯೂಯಾರ್ಕ್ ಟೈಮ್ಸ್’ ಲೇಖನ

‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಬರೆದಿರುವ ಲೇಖನವೊಂದರಲ್ಲಿ ಪತ್ರಕರ್ತ ಪಂಕಜ್ ಮಿಶ್ರಾ ಅವರು, ಮೋದಿಯ “ಕಚ್ಚಾ ವಿವೇಕ”ದ ಪರಿಣಾಮವಾಗಿ ಭಾರತವು ಹೇಗೆ ಐದು ವರ್ಷಗಳ ಕಾಲ ನರಳಬೇಕಾಯಿತು ಎಂದು ಬಣ್ಣಿಸಿದ್ದಾರೆ ಮಾತ್ರವಲ್ಲ, ಆತನನ್ನು “ಅಪಾಯಕಾರಿಯಾಗುವಷ್ಟು ಅದಕ್ಷ” ಎಂದು ಕರೆದಿದ್ದಾರೆ. 

ಅಲ್ಪಸಂಖ್ಯಾತರು, ಕೆಳ ಜಾತಿಗಳ ಹಿಂದೂಗಳು, ಭಿನ್ನಮತ ಹೊಂದಿರುವ ಪತ್ರಕರ್ತರಿಗೆ ಇರುವ ಬೆದರಿಕೆಯ ಬಗ್ಗೆ ಬರೆದಿರುವ ಮಿಶ್ರಾ, ಮೋದಿಯ ಆಡಳಿತ ಕಾಲದಲ್ಲಿ ಭಾರತವು, ಕೇವಲ ಪ್ರಜಾಪ್ರಭುತ್ವದ ಸಂಸ್ಥೆಗಳು ಮತ್ತು ವಿಚಾರವಾದದ ಮೇಲೆ ಮಾತ್ರವಲ್ಲ; ಮಾನವೀಯ ಸಭ್ಯತೆಯ ಮೇಲೆಯೂ ಅಮಾನುಷ ಹಲ್ಲೆ ನಡೆದಿದೆ ಎಂದು ಹೇಳಿದ್ದಾರೆ.

‘ನರೇಂದ್ರ ಮೋದಿ ಅಸೂಯೆ ಮತ್ತು ದ್ವೇಷದ ಮೂಲಕ ಭಾರತವನ್ನು ಹೇಗೆ ವಂಚಿಸಿದರು’ ಎಂಬ ಶೀರ್ಷಿಕೆ ಇರುವ ಈ ಲೇಖನದಲ್ಲಿ ಮಿಶ್ರಾ, ಮತದಾರರು “ಈ ದುಃಸ್ವಪ್ನ”ವನ್ನು ಮುಂದುವರಿಸಲು ಬಯಸಿದ್ದಾರೆ ಎಂದು ಕಟಕಿಯಾಡಿದ್ದಾರೆ.

2014ರ ಚುನಾವಣೆಯ ವೇಳೆ ನೀಡಿದ ಭರವಸೆಗಳನ್ನು ಈಡೇರಿಸಲು ಮೋದಿ ಸಂಪೂರ್ಣವಾಗಿ ವಿಫಲವಾಗಿರುವುದನ್ನು ಪರಿಗಣಿಸಿದರೆ, ಆತನ ಅಭೇದ್ಯ ವರ್ಚಸ್ಸಿನ ಮೂಲ ಇನ್ನಷ್ಟು ನಿಗೂಢವಾಗಿ ಕಾಣಿಸುತ್ತದೆ ಎಂದು ಮಿಶ್ರಾ ಹೇಳಿದ್ದಾರೆ.

ಕಾರ್ಪೋರೇಟ್ ಒಡೆತನದ ಮಾಧ್ಯಮಗಳು “ಮೋದಿಯನ್ನು ಭಾರತದ ಸಂರಕ್ಷಕನೆಂದು ಜ್ವರಹಿಡಿದವರಂತೆ ಕಟ್ಟಿಕೊಟ್ಟವು” ಎಂದೂ ಮಿಶ್ರಾ ಹೇಳಿದ್ದಾರೆ.

2014ರಿಂದಲೂ ಆಕರ್ಷಕವಾದ ಕಟ್ಟುಕತೆಗಳನ್ನು ಹೇಳುವ ಮೋದಿಯ ಸಾಮರ್ಥ್ಯಕ್ಕೆ ಟ್ರೋಲ್ ಪ್ರಾಬಲ್ಯದ ಸಾಮಾಜಿಕ ಮಾಧ್ಯಮಗಳು, ಮತ್ತು ರಣಹದ್ದುಗಳಂತೆ ಇರುವ ಭಟ್ಟಂಗಿ ಮಾಧ್ಯಮಗಳು ಇನ್ನಷ್ಟು ಉಪ್ಪುಖಾರ ಹಚ್ಚಿದವು ಎಂದು ಹೇಳಿರುವ ‘ಏಜ್ ಆಫ್ ಏಂಗರ್’ ಪುಸ್ತಕ ಬರೆದಿರುವ ಲೇಖಕರು ಹೇಳಿದ್ದಾರೆ. ಚುನಾವಣಾ ಆಯೋಗವು “ನಾಚಿಕೆ ಇಲ್ಲದಷ್ಟು ಪಕ್ಷಪಾತಿಯಾಗಿತ್ತು”ಎಂದು ಪ್ರತಿಪಕ್ಷಗಳು ಹೇಳುವಾಗ, ನಿಜವನ್ನೇ ಹೇಳುತ್ತಿವೆ ಎಂದೂ ಮಿಶ್ರಾ ಹೇಳಿದ್ದಾರೆ.

ಮೋದಿ ಭಾರತದಲ್ಲಿ ಸ್ವಯಂ ಬೆಳೆದು ಬಂದಿದ್ದ ವಸಾತೋತ್ತರ ಆಡಳಿತದ ಬಗೆಗಿನ ದೀರ್ಘಕಾಲೀನ ಸಿಟ್ಟನ್ನು ಬಳಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ ಎಂದು ಹೇಳಿರುವ ಮಿಶ್ರಾ, ಸಮೃಧ್ಧ ಪಾಶ್ಚಾತ್ಯರ ಜೊತೆ ಸೇರಿಕೊಳ್ಳಲು ದಾಪುಗಾಲಿಟ್ಟಿರುವ ದೇವರಂತೆ ಕೈಗೆಟಕದ ಆಳುವ ವರ್ಗಗಳ ಜೊತೆಗೆ ಮಾತುಕತೆಗೆ ಹಿಂದಿನ ಸರಕಾರಗಳು ಯಾವುದೇ ದಾರಿಯನ್ನು ತೆರೆದಿಡದ ಪರಿಣಾಮವಾಗಿ ನಮ್ಮನ್ನು ಕ್ರೂರ ರೀತಿಯಿಂದ ಇತಿಹಾಸದಲ್ಲಿ ನಿಂತ ನೀರಾಗಿಸಿದಂತಾಗಿದೆ ಎಂದಿದ್ದಾರೆ.ಇದೇ ಹೊತ್ತಿಗೆ ವಿಡಂಬನೆಯನ್ನು ಆಧರಿಸಿದ ‘ದಿ ಓನಿಯನ್’ ವೆಬ್‌ಸೈಟ್ ಮೋದಿಯ ಚಿತ್ರವೊಂದನ್ನು ಪ್ರಕಟಿಸಿ, “ಜನಾಂಗೀಯವಾದಿ ಬಲಪಂಥೀಯ ಸರ್ವಾಧಿಕಾರಿಯೊಬ್ಬನನ್ನು ಆರಿಸುವ ಮೂಲಕ ಭಾರತವು ಪ್ರಥಮ ವಿಶ್ವ ಸ್ಥಾನದತ್ತ ಮುನ್ನುಗ್ಗುತ್ತಿದೆ”ಎಂದು ವ್ಯಂಗ್ಯವಾದ ಅಡಿಬರಹ ಪ್ರಕಟಿಸಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...