Homeಅಂತರಾಷ್ಟ್ರೀಯಮೋದಿ ಗೆಲುವು ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೂ ಇದು ಕೆಟ್ಟ ಸುದ್ದಿ : ದಿ ಗಾರ್ಡಿಯನ್

ಮೋದಿ ಗೆಲುವು ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೂ ಇದು ಕೆಟ್ಟ ಸುದ್ದಿ : ದಿ ಗಾರ್ಡಿಯನ್

ಮೋದಿ ಗೆಲುವಿನಿಂದ ಭಾರತದ ಆತ್ಮ 'ಕರಾಳ ರಾಜಕೀಯ'ಕ್ಕೆ ಸೋತಿದೆ ಎಂದ 'ಗಾರ್ಡಿಯನ್' ಸಂಪಾದಕೀಯ!

- Advertisement -
- Advertisement -

ಕೃಪೆ: (ದಿ ಸ್ಕ್ರೋಲ್)

ಅನುವಾದ: ನಿಖಿಲ್ ಕೋಲ್ಪೆ

ನರೇಂದ್ರ ಮೋದಿ ಪುನರಾಯ್ಕೆಯನ್ನು ಪಾಶ್ಚಾತ್ಯ ಮಾಧ್ಯಮಗಳು ಹೊಗಳಿವೆ ಎಂದು ಭಾರತೀಯ ಹೊಗಳುಭಟ ಮಾಧ್ಯಮಗಳು ಬೂಸಿ ಬಿಡುತ್ತಿರುವಂತೆಯೇ ಪ್ರಮುಖ ಪತ್ರಿಕೆಗಳಾದ ‘ಗಾರ್ಡಿಯನ್’ ಮತ್ತು ನ್ಯೂಯಾರ್ಕ್ ಟೈಮ್ಸ್’ ಮೋದಿಗೆ ಮಂಗಳಾರತಿ ಮಾಡಿವೆ.

ರಾಷ್ಟ್ರೀಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಗೆಲುವು ಭಾರತದ ಆತ್ಮವು “ಕರಾಳ ರಾಜಕೀಯಕ್ಕೆ ಸೋಲುವುದನ್ನು” ಕಾಣಲಿದೆ ಮತ್ತು  ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೂ ಇದು ಕೆಟ್ಟ ಸುದ್ದಿ ಎಂದು ಬ್ರಿಟಿಶ್ ಪತ್ರಿಕೆ ‘ದಿ ಗಾರ್ಡಿಯನ್’ ತನ್ನ ಸಂಪಾದಕೀಯದಲ್ಲಿ ಹೇಳಿದೆ. ಮೋದಿ “ಸ್ವತಂತ್ರ ಭಾರತದ ಅತ್ಯಂತ ಅಮೂಲ್ಯ ಮುಖವಾದ ಕ್ರಿಯಾಶೀಲ ಬಹುಪಕ್ಷೀಯ ಪ್ರಜಾಪ್ರಭುತ್ವ”ಕ್ಕೆ ಬೆದರಿಕೆ ಒಡ್ಡಿದ್ದರು ಎಂದು ಸಂಪಾದಕೀಯ ಹೇಳಿದೆ.

ಪತ್ರಿಕೆಯು ತನ್ನ ಟೀಕೆಯಲ್ಲಿ ಮೋದಿಯನ್ನು “ವಿಭಾಜಕ ವ್ಯಕ್ತಿ” ಆದರೆ, “ಸಂಶಯಾತೀತವಾಗಿ ಪ್ರಭಾವಿ ಪ್ರಚಾರಕ”ಎಂದು ಬಣ್ಣಿಸಿದ್ದು, ಅವರು “ಭಯಾನಕವಾದ ಪರಿಣಾಮದೊಂದಿಗೆ ಸುಳ್ಳು ದಾವೆಗಳನ್ನು ಮತ್ತು ಪಕ್ಷಪಾತದ ವಾಸ್ತವಾಂಶಗಳನ್ನು ಬಳಸಿದರು” ಎಂದು ಗುರುತಿಸಿದೆ.

ಆತನನ್ನು ಸೋಲಿಸುವುದು ಹೇಗೆ ಎಂಬ ಬಗ್ಗೆ ಕಾಂಗ್ರೆಸ್ ಮತ್ತು ಗಾಂಧಿ-ನೆಹರೂ ಕುಟುಂಬ ಗಂಭೀರವಾದ ಮರುಚಿಂತನೆ ನಡೆಸಬೇಕಾಗಬಹುದು ಎಂದು ಸಂಪಾದಕೀಯ ಅಭಿಪ್ರಾಯಪಟ್ಟಿದೆ.

ಮೋದಿಯು ಭಾಗವಾಗಿರುವ ಹಿಂದೂ ರಾಷ್ಟ್ರೀಯವಾದವು ತನ್ನ ಮೇಲ್ಜಾತಿ ಹಿಂದೂಗಳ ಮೇಲಿನ ಗಮನ, ಕಾರ್ಪೋರೇಟ್ ಪರ ಆರ್ಥಿಕ ಬೆಳವಣಿಗೆ, ಸಾಂಸ್ಕೃತಿಕ ಸಾಂಪ್ರದಾಯಿಕತೆ, “ತೀವ್ರಗೊಂಡ” ಹೆಣ್ಣಿನ ಮೇಲಿನ ಅಸಹಿಷ್ಣುತೆ ಮತ್ತು ದಬ್ಬಾಳಿಕೆ, “ಸರಕಾರಿ ಶಕ್ತಿಯ ಸಾಧನಗಳ ಮೇಲೆ ಬಲವಾದ ಹಿಡಿತ” ಇತ್ಯಾದಿಗಳಿಂದ ಭಾರತವನ್ನು ಇನ್ನಷ್ಟು ಕೆಟ್ಟ ಸ್ಥಿತಿಗೆ ತಳ್ಳಲಿದೆ ಎಂದು ಸಂಪಾದಕೀಯವು ಹೇಳಿದೆ.

ಭಾರತದ ಮುಸ್ಲಿಮರು “ರಾಜಕೀಯ ಅನಾಥ”ರಾಗಿರುವ ಬಗ್ಗೆ ಟಿಪ್ಪಣಿ ಮಾಡಿರುವ ಸಂಪಾದಕೀಯವು, ಸಂಸತ್ತಿನಲ್ಲಿ ಅವರ ಸ್ಥಾನಗಳ ಸಂಖ್ಯೆ ಕುಸಿಯುತ್ತಿರುವ ಬಗ್ಗೆ, ಅವರನ್ನು ಹೇಗೆ ಹಿಂದೂತ್ವವಾದವು ಎರಡನೇ ದರ್ಜೆಯ ಪ್ರಜೆಗಳಾಗಿ ಕಾಣುತ್ತಿದೆ ಎಂಬ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಈ ವರ್ಷದ ಆರಂಭದಲ್ಲಿ ಮೋದಿ ಸರಕಾರವು ಭಾರತ ಮತ್ತು ಪಾಕಿಸ್ತಾನವನ್ನು ಬೇಜವಾಬ್ದಾರಿಯಿಂದ ಯುದ್ಧದ ಅಂಚಿಗೆ ತಳ್ಳಿತ್ತು ಎಂದೂ ಅದು ಹೇಳಿದೆ.

ಭಾರತದಲ್ಲಿ ಭಾರಿ ಸಂಖ್ಯೆಯ ಜನರು ಸರ್ವಾಧಿಕಾರಿ ಆಡಳಿತದ ಪರವಾಗಿದ್ದಾರೆ ಎಂದು ತೋರಿಸಿರುವ 2017ರ ಸಮೀಕ್ಷೆಯೊಂದನ್ನು ಉಲ್ಲೇಖಿಸಿರುವ ಸಂಪಾದಕೀಯವು “ತತ್ತರಿಸುತ್ತಿರುವ ಆರ್ಥಿಕತೆ”ಯ ಹೊರತಾಗಿಯೂ ಮೋದಿಯ ವಿಜಯವು ಬಹುಶಃ ಅಚ್ಚರಿದಾಯಕವಲ್ಲ ಎಂದು ಹೇಳಿದೆ.

ಭಾರತೀಯ ಜನತಾ ಪಕ್ಷದ ಬಗ್ಗೆ ಟಿಪ್ಪಣಿ ಮಾಡಿರುವ ಅದು, “ಭಾರತವನ್ನು ರೂಪುಗೆಡಿಸಿರುವ ಭಾರೀ ಅಸಮಾನತೆ ಕುರಿತು ಬರೇ ಬಾಯ್ಮಾತನಷ್ಟೇ ಆಡುತ್ತಿದೆ” ಮತ್ತು ಭಾರತದ ಪಕ್ಷ ವ್ಯವಸ್ಥೆಯಲ್ಲಿರುವ ಜಾತಿ ಮತ್ತು ಧರ್ಮ ಸಂಘರ್ಷವು ಅದಕ್ಕೆ ಸರಿಯಾಗಿ ಹೊಂದಾಣಿಕೆಯಾಗುತ್ತಿದೆ ಎಂದು ಹೇಳಿದೆ.

ಇದೇ ಹೊತ್ತಿಗೆ ಪ್ರತಿಪಕ್ಷಗಳು ಸಮಭಾವದ ವೇದಿಕೆಯ ಮೂಲಕ ನಿರ್ದಿಷ್ಟವಾದ ಅಭಿಯಾನವನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿರುವ ಅದು, ಅಸ್ಮಿತೆ ಅಥವಾ ಗುರುತನ್ನಾಧರಿಸಿದ ಸ್ಪರ್ಧೆಗೆ ಬದಲಾಗಿ  “ಎಲ್ಲಾ ಭಾರತೀಯರಿಗೆ ಲಾಭವಾಗುವಂತಹ ರಾಜಕೀಯ ಸ್ಪರ್ಧೆಯಲ್ಲಿ” ತೊಡಗಬೇಕಾಗಿದೆ ಎಂದು ಹೇಳಿದೆ. “ಅದಕ್ಕೆ ಪಕ್ಷಗಳು ಭಾರತದ ಬಡಜನರಿಗೆ ಈಗಿರುವುದಕ್ಕಿಂತ ಹೆಚ್ಚು ಹತ್ತಿರವಾಗಬೇಕಾದ ಅಗತ್ಯವಿದೆ” ಎಂದೂ ಸಂಪಾದಕೀಯವು ಸಲಹೆ ಮಾಡಿದೆ.

‘ನ್ಯೂಯಾರ್ಕ್ ಟೈಮ್ಸ್’ ಲೇಖನ

‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಬರೆದಿರುವ ಲೇಖನವೊಂದರಲ್ಲಿ ಪತ್ರಕರ್ತ ಪಂಕಜ್ ಮಿಶ್ರಾ ಅವರು, ಮೋದಿಯ “ಕಚ್ಚಾ ವಿವೇಕ”ದ ಪರಿಣಾಮವಾಗಿ ಭಾರತವು ಹೇಗೆ ಐದು ವರ್ಷಗಳ ಕಾಲ ನರಳಬೇಕಾಯಿತು ಎಂದು ಬಣ್ಣಿಸಿದ್ದಾರೆ ಮಾತ್ರವಲ್ಲ, ಆತನನ್ನು “ಅಪಾಯಕಾರಿಯಾಗುವಷ್ಟು ಅದಕ್ಷ” ಎಂದು ಕರೆದಿದ್ದಾರೆ. 

ಅಲ್ಪಸಂಖ್ಯಾತರು, ಕೆಳ ಜಾತಿಗಳ ಹಿಂದೂಗಳು, ಭಿನ್ನಮತ ಹೊಂದಿರುವ ಪತ್ರಕರ್ತರಿಗೆ ಇರುವ ಬೆದರಿಕೆಯ ಬಗ್ಗೆ ಬರೆದಿರುವ ಮಿಶ್ರಾ, ಮೋದಿಯ ಆಡಳಿತ ಕಾಲದಲ್ಲಿ ಭಾರತವು, ಕೇವಲ ಪ್ರಜಾಪ್ರಭುತ್ವದ ಸಂಸ್ಥೆಗಳು ಮತ್ತು ವಿಚಾರವಾದದ ಮೇಲೆ ಮಾತ್ರವಲ್ಲ; ಮಾನವೀಯ ಸಭ್ಯತೆಯ ಮೇಲೆಯೂ ಅಮಾನುಷ ಹಲ್ಲೆ ನಡೆದಿದೆ ಎಂದು ಹೇಳಿದ್ದಾರೆ.

‘ನರೇಂದ್ರ ಮೋದಿ ಅಸೂಯೆ ಮತ್ತು ದ್ವೇಷದ ಮೂಲಕ ಭಾರತವನ್ನು ಹೇಗೆ ವಂಚಿಸಿದರು’ ಎಂಬ ಶೀರ್ಷಿಕೆ ಇರುವ ಈ ಲೇಖನದಲ್ಲಿ ಮಿಶ್ರಾ, ಮತದಾರರು “ಈ ದುಃಸ್ವಪ್ನ”ವನ್ನು ಮುಂದುವರಿಸಲು ಬಯಸಿದ್ದಾರೆ ಎಂದು ಕಟಕಿಯಾಡಿದ್ದಾರೆ.

2014ರ ಚುನಾವಣೆಯ ವೇಳೆ ನೀಡಿದ ಭರವಸೆಗಳನ್ನು ಈಡೇರಿಸಲು ಮೋದಿ ಸಂಪೂರ್ಣವಾಗಿ ವಿಫಲವಾಗಿರುವುದನ್ನು ಪರಿಗಣಿಸಿದರೆ, ಆತನ ಅಭೇದ್ಯ ವರ್ಚಸ್ಸಿನ ಮೂಲ ಇನ್ನಷ್ಟು ನಿಗೂಢವಾಗಿ ಕಾಣಿಸುತ್ತದೆ ಎಂದು ಮಿಶ್ರಾ ಹೇಳಿದ್ದಾರೆ.

ಕಾರ್ಪೋರೇಟ್ ಒಡೆತನದ ಮಾಧ್ಯಮಗಳು “ಮೋದಿಯನ್ನು ಭಾರತದ ಸಂರಕ್ಷಕನೆಂದು ಜ್ವರಹಿಡಿದವರಂತೆ ಕಟ್ಟಿಕೊಟ್ಟವು” ಎಂದೂ ಮಿಶ್ರಾ ಹೇಳಿದ್ದಾರೆ.

2014ರಿಂದಲೂ ಆಕರ್ಷಕವಾದ ಕಟ್ಟುಕತೆಗಳನ್ನು ಹೇಳುವ ಮೋದಿಯ ಸಾಮರ್ಥ್ಯಕ್ಕೆ ಟ್ರೋಲ್ ಪ್ರಾಬಲ್ಯದ ಸಾಮಾಜಿಕ ಮಾಧ್ಯಮಗಳು, ಮತ್ತು ರಣಹದ್ದುಗಳಂತೆ ಇರುವ ಭಟ್ಟಂಗಿ ಮಾಧ್ಯಮಗಳು ಇನ್ನಷ್ಟು ಉಪ್ಪುಖಾರ ಹಚ್ಚಿದವು ಎಂದು ಹೇಳಿರುವ ‘ಏಜ್ ಆಫ್ ಏಂಗರ್’ ಪುಸ್ತಕ ಬರೆದಿರುವ ಲೇಖಕರು ಹೇಳಿದ್ದಾರೆ. ಚುನಾವಣಾ ಆಯೋಗವು “ನಾಚಿಕೆ ಇಲ್ಲದಷ್ಟು ಪಕ್ಷಪಾತಿಯಾಗಿತ್ತು”ಎಂದು ಪ್ರತಿಪಕ್ಷಗಳು ಹೇಳುವಾಗ, ನಿಜವನ್ನೇ ಹೇಳುತ್ತಿವೆ ಎಂದೂ ಮಿಶ್ರಾ ಹೇಳಿದ್ದಾರೆ.

ಮೋದಿ ಭಾರತದಲ್ಲಿ ಸ್ವಯಂ ಬೆಳೆದು ಬಂದಿದ್ದ ವಸಾತೋತ್ತರ ಆಡಳಿತದ ಬಗೆಗಿನ ದೀರ್ಘಕಾಲೀನ ಸಿಟ್ಟನ್ನು ಬಳಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ ಎಂದು ಹೇಳಿರುವ ಮಿಶ್ರಾ, ಸಮೃಧ್ಧ ಪಾಶ್ಚಾತ್ಯರ ಜೊತೆ ಸೇರಿಕೊಳ್ಳಲು ದಾಪುಗಾಲಿಟ್ಟಿರುವ ದೇವರಂತೆ ಕೈಗೆಟಕದ ಆಳುವ ವರ್ಗಗಳ ಜೊತೆಗೆ ಮಾತುಕತೆಗೆ ಹಿಂದಿನ ಸರಕಾರಗಳು ಯಾವುದೇ ದಾರಿಯನ್ನು ತೆರೆದಿಡದ ಪರಿಣಾಮವಾಗಿ ನಮ್ಮನ್ನು ಕ್ರೂರ ರೀತಿಯಿಂದ ಇತಿಹಾಸದಲ್ಲಿ ನಿಂತ ನೀರಾಗಿಸಿದಂತಾಗಿದೆ ಎಂದಿದ್ದಾರೆ.ಇದೇ ಹೊತ್ತಿಗೆ ವಿಡಂಬನೆಯನ್ನು ಆಧರಿಸಿದ ‘ದಿ ಓನಿಯನ್’ ವೆಬ್‌ಸೈಟ್ ಮೋದಿಯ ಚಿತ್ರವೊಂದನ್ನು ಪ್ರಕಟಿಸಿ, “ಜನಾಂಗೀಯವಾದಿ ಬಲಪಂಥೀಯ ಸರ್ವಾಧಿಕಾರಿಯೊಬ್ಬನನ್ನು ಆರಿಸುವ ಮೂಲಕ ಭಾರತವು ಪ್ರಥಮ ವಿಶ್ವ ಸ್ಥಾನದತ್ತ ಮುನ್ನುಗ್ಗುತ್ತಿದೆ”ಎಂದು ವ್ಯಂಗ್ಯವಾದ ಅಡಿಬರಹ ಪ್ರಕಟಿಸಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...