Homeಅಂತರಾಷ್ಟ್ರೀಯಮೋದಿ ಗೆಲುವು ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೂ ಇದು ಕೆಟ್ಟ ಸುದ್ದಿ : ದಿ ಗಾರ್ಡಿಯನ್

ಮೋದಿ ಗೆಲುವು ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೂ ಇದು ಕೆಟ್ಟ ಸುದ್ದಿ : ದಿ ಗಾರ್ಡಿಯನ್

ಮೋದಿ ಗೆಲುವಿನಿಂದ ಭಾರತದ ಆತ್ಮ 'ಕರಾಳ ರಾಜಕೀಯ'ಕ್ಕೆ ಸೋತಿದೆ ಎಂದ 'ಗಾರ್ಡಿಯನ್' ಸಂಪಾದಕೀಯ!

- Advertisement -
- Advertisement -

ಕೃಪೆ: (ದಿ ಸ್ಕ್ರೋಲ್)

ಅನುವಾದ: ನಿಖಿಲ್ ಕೋಲ್ಪೆ

ನರೇಂದ್ರ ಮೋದಿ ಪುನರಾಯ್ಕೆಯನ್ನು ಪಾಶ್ಚಾತ್ಯ ಮಾಧ್ಯಮಗಳು ಹೊಗಳಿವೆ ಎಂದು ಭಾರತೀಯ ಹೊಗಳುಭಟ ಮಾಧ್ಯಮಗಳು ಬೂಸಿ ಬಿಡುತ್ತಿರುವಂತೆಯೇ ಪ್ರಮುಖ ಪತ್ರಿಕೆಗಳಾದ ‘ಗಾರ್ಡಿಯನ್’ ಮತ್ತು ನ್ಯೂಯಾರ್ಕ್ ಟೈಮ್ಸ್’ ಮೋದಿಗೆ ಮಂಗಳಾರತಿ ಮಾಡಿವೆ.

ರಾಷ್ಟ್ರೀಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಗೆಲುವು ಭಾರತದ ಆತ್ಮವು “ಕರಾಳ ರಾಜಕೀಯಕ್ಕೆ ಸೋಲುವುದನ್ನು” ಕಾಣಲಿದೆ ಮತ್ತು  ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೂ ಇದು ಕೆಟ್ಟ ಸುದ್ದಿ ಎಂದು ಬ್ರಿಟಿಶ್ ಪತ್ರಿಕೆ ‘ದಿ ಗಾರ್ಡಿಯನ್’ ತನ್ನ ಸಂಪಾದಕೀಯದಲ್ಲಿ ಹೇಳಿದೆ. ಮೋದಿ “ಸ್ವತಂತ್ರ ಭಾರತದ ಅತ್ಯಂತ ಅಮೂಲ್ಯ ಮುಖವಾದ ಕ್ರಿಯಾಶೀಲ ಬಹುಪಕ್ಷೀಯ ಪ್ರಜಾಪ್ರಭುತ್ವ”ಕ್ಕೆ ಬೆದರಿಕೆ ಒಡ್ಡಿದ್ದರು ಎಂದು ಸಂಪಾದಕೀಯ ಹೇಳಿದೆ.

ಪತ್ರಿಕೆಯು ತನ್ನ ಟೀಕೆಯಲ್ಲಿ ಮೋದಿಯನ್ನು “ವಿಭಾಜಕ ವ್ಯಕ್ತಿ” ಆದರೆ, “ಸಂಶಯಾತೀತವಾಗಿ ಪ್ರಭಾವಿ ಪ್ರಚಾರಕ”ಎಂದು ಬಣ್ಣಿಸಿದ್ದು, ಅವರು “ಭಯಾನಕವಾದ ಪರಿಣಾಮದೊಂದಿಗೆ ಸುಳ್ಳು ದಾವೆಗಳನ್ನು ಮತ್ತು ಪಕ್ಷಪಾತದ ವಾಸ್ತವಾಂಶಗಳನ್ನು ಬಳಸಿದರು” ಎಂದು ಗುರುತಿಸಿದೆ.

ಆತನನ್ನು ಸೋಲಿಸುವುದು ಹೇಗೆ ಎಂಬ ಬಗ್ಗೆ ಕಾಂಗ್ರೆಸ್ ಮತ್ತು ಗಾಂಧಿ-ನೆಹರೂ ಕುಟುಂಬ ಗಂಭೀರವಾದ ಮರುಚಿಂತನೆ ನಡೆಸಬೇಕಾಗಬಹುದು ಎಂದು ಸಂಪಾದಕೀಯ ಅಭಿಪ್ರಾಯಪಟ್ಟಿದೆ.

ಮೋದಿಯು ಭಾಗವಾಗಿರುವ ಹಿಂದೂ ರಾಷ್ಟ್ರೀಯವಾದವು ತನ್ನ ಮೇಲ್ಜಾತಿ ಹಿಂದೂಗಳ ಮೇಲಿನ ಗಮನ, ಕಾರ್ಪೋರೇಟ್ ಪರ ಆರ್ಥಿಕ ಬೆಳವಣಿಗೆ, ಸಾಂಸ್ಕೃತಿಕ ಸಾಂಪ್ರದಾಯಿಕತೆ, “ತೀವ್ರಗೊಂಡ” ಹೆಣ್ಣಿನ ಮೇಲಿನ ಅಸಹಿಷ್ಣುತೆ ಮತ್ತು ದಬ್ಬಾಳಿಕೆ, “ಸರಕಾರಿ ಶಕ್ತಿಯ ಸಾಧನಗಳ ಮೇಲೆ ಬಲವಾದ ಹಿಡಿತ” ಇತ್ಯಾದಿಗಳಿಂದ ಭಾರತವನ್ನು ಇನ್ನಷ್ಟು ಕೆಟ್ಟ ಸ್ಥಿತಿಗೆ ತಳ್ಳಲಿದೆ ಎಂದು ಸಂಪಾದಕೀಯವು ಹೇಳಿದೆ.

ಭಾರತದ ಮುಸ್ಲಿಮರು “ರಾಜಕೀಯ ಅನಾಥ”ರಾಗಿರುವ ಬಗ್ಗೆ ಟಿಪ್ಪಣಿ ಮಾಡಿರುವ ಸಂಪಾದಕೀಯವು, ಸಂಸತ್ತಿನಲ್ಲಿ ಅವರ ಸ್ಥಾನಗಳ ಸಂಖ್ಯೆ ಕುಸಿಯುತ್ತಿರುವ ಬಗ್ಗೆ, ಅವರನ್ನು ಹೇಗೆ ಹಿಂದೂತ್ವವಾದವು ಎರಡನೇ ದರ್ಜೆಯ ಪ್ರಜೆಗಳಾಗಿ ಕಾಣುತ್ತಿದೆ ಎಂಬ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಈ ವರ್ಷದ ಆರಂಭದಲ್ಲಿ ಮೋದಿ ಸರಕಾರವು ಭಾರತ ಮತ್ತು ಪಾಕಿಸ್ತಾನವನ್ನು ಬೇಜವಾಬ್ದಾರಿಯಿಂದ ಯುದ್ಧದ ಅಂಚಿಗೆ ತಳ್ಳಿತ್ತು ಎಂದೂ ಅದು ಹೇಳಿದೆ.

ಭಾರತದಲ್ಲಿ ಭಾರಿ ಸಂಖ್ಯೆಯ ಜನರು ಸರ್ವಾಧಿಕಾರಿ ಆಡಳಿತದ ಪರವಾಗಿದ್ದಾರೆ ಎಂದು ತೋರಿಸಿರುವ 2017ರ ಸಮೀಕ್ಷೆಯೊಂದನ್ನು ಉಲ್ಲೇಖಿಸಿರುವ ಸಂಪಾದಕೀಯವು “ತತ್ತರಿಸುತ್ತಿರುವ ಆರ್ಥಿಕತೆ”ಯ ಹೊರತಾಗಿಯೂ ಮೋದಿಯ ವಿಜಯವು ಬಹುಶಃ ಅಚ್ಚರಿದಾಯಕವಲ್ಲ ಎಂದು ಹೇಳಿದೆ.

ಭಾರತೀಯ ಜನತಾ ಪಕ್ಷದ ಬಗ್ಗೆ ಟಿಪ್ಪಣಿ ಮಾಡಿರುವ ಅದು, “ಭಾರತವನ್ನು ರೂಪುಗೆಡಿಸಿರುವ ಭಾರೀ ಅಸಮಾನತೆ ಕುರಿತು ಬರೇ ಬಾಯ್ಮಾತನಷ್ಟೇ ಆಡುತ್ತಿದೆ” ಮತ್ತು ಭಾರತದ ಪಕ್ಷ ವ್ಯವಸ್ಥೆಯಲ್ಲಿರುವ ಜಾತಿ ಮತ್ತು ಧರ್ಮ ಸಂಘರ್ಷವು ಅದಕ್ಕೆ ಸರಿಯಾಗಿ ಹೊಂದಾಣಿಕೆಯಾಗುತ್ತಿದೆ ಎಂದು ಹೇಳಿದೆ.

ಇದೇ ಹೊತ್ತಿಗೆ ಪ್ರತಿಪಕ್ಷಗಳು ಸಮಭಾವದ ವೇದಿಕೆಯ ಮೂಲಕ ನಿರ್ದಿಷ್ಟವಾದ ಅಭಿಯಾನವನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿರುವ ಅದು, ಅಸ್ಮಿತೆ ಅಥವಾ ಗುರುತನ್ನಾಧರಿಸಿದ ಸ್ಪರ್ಧೆಗೆ ಬದಲಾಗಿ  “ಎಲ್ಲಾ ಭಾರತೀಯರಿಗೆ ಲಾಭವಾಗುವಂತಹ ರಾಜಕೀಯ ಸ್ಪರ್ಧೆಯಲ್ಲಿ” ತೊಡಗಬೇಕಾಗಿದೆ ಎಂದು ಹೇಳಿದೆ. “ಅದಕ್ಕೆ ಪಕ್ಷಗಳು ಭಾರತದ ಬಡಜನರಿಗೆ ಈಗಿರುವುದಕ್ಕಿಂತ ಹೆಚ್ಚು ಹತ್ತಿರವಾಗಬೇಕಾದ ಅಗತ್ಯವಿದೆ” ಎಂದೂ ಸಂಪಾದಕೀಯವು ಸಲಹೆ ಮಾಡಿದೆ.

‘ನ್ಯೂಯಾರ್ಕ್ ಟೈಮ್ಸ್’ ಲೇಖನ

‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಬರೆದಿರುವ ಲೇಖನವೊಂದರಲ್ಲಿ ಪತ್ರಕರ್ತ ಪಂಕಜ್ ಮಿಶ್ರಾ ಅವರು, ಮೋದಿಯ “ಕಚ್ಚಾ ವಿವೇಕ”ದ ಪರಿಣಾಮವಾಗಿ ಭಾರತವು ಹೇಗೆ ಐದು ವರ್ಷಗಳ ಕಾಲ ನರಳಬೇಕಾಯಿತು ಎಂದು ಬಣ್ಣಿಸಿದ್ದಾರೆ ಮಾತ್ರವಲ್ಲ, ಆತನನ್ನು “ಅಪಾಯಕಾರಿಯಾಗುವಷ್ಟು ಅದಕ್ಷ” ಎಂದು ಕರೆದಿದ್ದಾರೆ. 

ಅಲ್ಪಸಂಖ್ಯಾತರು, ಕೆಳ ಜಾತಿಗಳ ಹಿಂದೂಗಳು, ಭಿನ್ನಮತ ಹೊಂದಿರುವ ಪತ್ರಕರ್ತರಿಗೆ ಇರುವ ಬೆದರಿಕೆಯ ಬಗ್ಗೆ ಬರೆದಿರುವ ಮಿಶ್ರಾ, ಮೋದಿಯ ಆಡಳಿತ ಕಾಲದಲ್ಲಿ ಭಾರತವು, ಕೇವಲ ಪ್ರಜಾಪ್ರಭುತ್ವದ ಸಂಸ್ಥೆಗಳು ಮತ್ತು ವಿಚಾರವಾದದ ಮೇಲೆ ಮಾತ್ರವಲ್ಲ; ಮಾನವೀಯ ಸಭ್ಯತೆಯ ಮೇಲೆಯೂ ಅಮಾನುಷ ಹಲ್ಲೆ ನಡೆದಿದೆ ಎಂದು ಹೇಳಿದ್ದಾರೆ.

‘ನರೇಂದ್ರ ಮೋದಿ ಅಸೂಯೆ ಮತ್ತು ದ್ವೇಷದ ಮೂಲಕ ಭಾರತವನ್ನು ಹೇಗೆ ವಂಚಿಸಿದರು’ ಎಂಬ ಶೀರ್ಷಿಕೆ ಇರುವ ಈ ಲೇಖನದಲ್ಲಿ ಮಿಶ್ರಾ, ಮತದಾರರು “ಈ ದುಃಸ್ವಪ್ನ”ವನ್ನು ಮುಂದುವರಿಸಲು ಬಯಸಿದ್ದಾರೆ ಎಂದು ಕಟಕಿಯಾಡಿದ್ದಾರೆ.

2014ರ ಚುನಾವಣೆಯ ವೇಳೆ ನೀಡಿದ ಭರವಸೆಗಳನ್ನು ಈಡೇರಿಸಲು ಮೋದಿ ಸಂಪೂರ್ಣವಾಗಿ ವಿಫಲವಾಗಿರುವುದನ್ನು ಪರಿಗಣಿಸಿದರೆ, ಆತನ ಅಭೇದ್ಯ ವರ್ಚಸ್ಸಿನ ಮೂಲ ಇನ್ನಷ್ಟು ನಿಗೂಢವಾಗಿ ಕಾಣಿಸುತ್ತದೆ ಎಂದು ಮಿಶ್ರಾ ಹೇಳಿದ್ದಾರೆ.

ಕಾರ್ಪೋರೇಟ್ ಒಡೆತನದ ಮಾಧ್ಯಮಗಳು “ಮೋದಿಯನ್ನು ಭಾರತದ ಸಂರಕ್ಷಕನೆಂದು ಜ್ವರಹಿಡಿದವರಂತೆ ಕಟ್ಟಿಕೊಟ್ಟವು” ಎಂದೂ ಮಿಶ್ರಾ ಹೇಳಿದ್ದಾರೆ.

2014ರಿಂದಲೂ ಆಕರ್ಷಕವಾದ ಕಟ್ಟುಕತೆಗಳನ್ನು ಹೇಳುವ ಮೋದಿಯ ಸಾಮರ್ಥ್ಯಕ್ಕೆ ಟ್ರೋಲ್ ಪ್ರಾಬಲ್ಯದ ಸಾಮಾಜಿಕ ಮಾಧ್ಯಮಗಳು, ಮತ್ತು ರಣಹದ್ದುಗಳಂತೆ ಇರುವ ಭಟ್ಟಂಗಿ ಮಾಧ್ಯಮಗಳು ಇನ್ನಷ್ಟು ಉಪ್ಪುಖಾರ ಹಚ್ಚಿದವು ಎಂದು ಹೇಳಿರುವ ‘ಏಜ್ ಆಫ್ ಏಂಗರ್’ ಪುಸ್ತಕ ಬರೆದಿರುವ ಲೇಖಕರು ಹೇಳಿದ್ದಾರೆ. ಚುನಾವಣಾ ಆಯೋಗವು “ನಾಚಿಕೆ ಇಲ್ಲದಷ್ಟು ಪಕ್ಷಪಾತಿಯಾಗಿತ್ತು”ಎಂದು ಪ್ರತಿಪಕ್ಷಗಳು ಹೇಳುವಾಗ, ನಿಜವನ್ನೇ ಹೇಳುತ್ತಿವೆ ಎಂದೂ ಮಿಶ್ರಾ ಹೇಳಿದ್ದಾರೆ.

ಮೋದಿ ಭಾರತದಲ್ಲಿ ಸ್ವಯಂ ಬೆಳೆದು ಬಂದಿದ್ದ ವಸಾತೋತ್ತರ ಆಡಳಿತದ ಬಗೆಗಿನ ದೀರ್ಘಕಾಲೀನ ಸಿಟ್ಟನ್ನು ಬಳಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ ಎಂದು ಹೇಳಿರುವ ಮಿಶ್ರಾ, ಸಮೃಧ್ಧ ಪಾಶ್ಚಾತ್ಯರ ಜೊತೆ ಸೇರಿಕೊಳ್ಳಲು ದಾಪುಗಾಲಿಟ್ಟಿರುವ ದೇವರಂತೆ ಕೈಗೆಟಕದ ಆಳುವ ವರ್ಗಗಳ ಜೊತೆಗೆ ಮಾತುಕತೆಗೆ ಹಿಂದಿನ ಸರಕಾರಗಳು ಯಾವುದೇ ದಾರಿಯನ್ನು ತೆರೆದಿಡದ ಪರಿಣಾಮವಾಗಿ ನಮ್ಮನ್ನು ಕ್ರೂರ ರೀತಿಯಿಂದ ಇತಿಹಾಸದಲ್ಲಿ ನಿಂತ ನೀರಾಗಿಸಿದಂತಾಗಿದೆ ಎಂದಿದ್ದಾರೆ.ಇದೇ ಹೊತ್ತಿಗೆ ವಿಡಂಬನೆಯನ್ನು ಆಧರಿಸಿದ ‘ದಿ ಓನಿಯನ್’ ವೆಬ್‌ಸೈಟ್ ಮೋದಿಯ ಚಿತ್ರವೊಂದನ್ನು ಪ್ರಕಟಿಸಿ, “ಜನಾಂಗೀಯವಾದಿ ಬಲಪಂಥೀಯ ಸರ್ವಾಧಿಕಾರಿಯೊಬ್ಬನನ್ನು ಆರಿಸುವ ಮೂಲಕ ಭಾರತವು ಪ್ರಥಮ ವಿಶ್ವ ಸ್ಥಾನದತ್ತ ಮುನ್ನುಗ್ಗುತ್ತಿದೆ”ಎಂದು ವ್ಯಂಗ್ಯವಾದ ಅಡಿಬರಹ ಪ್ರಕಟಿಸಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...