Homeಅಂತರಾಷ್ಟ್ರೀಯಮೋದಿ ಗೆಲುವು ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೂ ಇದು ಕೆಟ್ಟ ಸುದ್ದಿ : ದಿ ಗಾರ್ಡಿಯನ್

ಮೋದಿ ಗೆಲುವು ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೂ ಇದು ಕೆಟ್ಟ ಸುದ್ದಿ : ದಿ ಗಾರ್ಡಿಯನ್

ಮೋದಿ ಗೆಲುವಿನಿಂದ ಭಾರತದ ಆತ್ಮ 'ಕರಾಳ ರಾಜಕೀಯ'ಕ್ಕೆ ಸೋತಿದೆ ಎಂದ 'ಗಾರ್ಡಿಯನ್' ಸಂಪಾದಕೀಯ!

- Advertisement -
- Advertisement -

ಕೃಪೆ: (ದಿ ಸ್ಕ್ರೋಲ್)

ಅನುವಾದ: ನಿಖಿಲ್ ಕೋಲ್ಪೆ

ನರೇಂದ್ರ ಮೋದಿ ಪುನರಾಯ್ಕೆಯನ್ನು ಪಾಶ್ಚಾತ್ಯ ಮಾಧ್ಯಮಗಳು ಹೊಗಳಿವೆ ಎಂದು ಭಾರತೀಯ ಹೊಗಳುಭಟ ಮಾಧ್ಯಮಗಳು ಬೂಸಿ ಬಿಡುತ್ತಿರುವಂತೆಯೇ ಪ್ರಮುಖ ಪತ್ರಿಕೆಗಳಾದ ‘ಗಾರ್ಡಿಯನ್’ ಮತ್ತು ನ್ಯೂಯಾರ್ಕ್ ಟೈಮ್ಸ್’ ಮೋದಿಗೆ ಮಂಗಳಾರತಿ ಮಾಡಿವೆ.

ರಾಷ್ಟ್ರೀಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಗೆಲುವು ಭಾರತದ ಆತ್ಮವು “ಕರಾಳ ರಾಜಕೀಯಕ್ಕೆ ಸೋಲುವುದನ್ನು” ಕಾಣಲಿದೆ ಮತ್ತು  ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೂ ಇದು ಕೆಟ್ಟ ಸುದ್ದಿ ಎಂದು ಬ್ರಿಟಿಶ್ ಪತ್ರಿಕೆ ‘ದಿ ಗಾರ್ಡಿಯನ್’ ತನ್ನ ಸಂಪಾದಕೀಯದಲ್ಲಿ ಹೇಳಿದೆ. ಮೋದಿ “ಸ್ವತಂತ್ರ ಭಾರತದ ಅತ್ಯಂತ ಅಮೂಲ್ಯ ಮುಖವಾದ ಕ್ರಿಯಾಶೀಲ ಬಹುಪಕ್ಷೀಯ ಪ್ರಜಾಪ್ರಭುತ್ವ”ಕ್ಕೆ ಬೆದರಿಕೆ ಒಡ್ಡಿದ್ದರು ಎಂದು ಸಂಪಾದಕೀಯ ಹೇಳಿದೆ.

ಪತ್ರಿಕೆಯು ತನ್ನ ಟೀಕೆಯಲ್ಲಿ ಮೋದಿಯನ್ನು “ವಿಭಾಜಕ ವ್ಯಕ್ತಿ” ಆದರೆ, “ಸಂಶಯಾತೀತವಾಗಿ ಪ್ರಭಾವಿ ಪ್ರಚಾರಕ”ಎಂದು ಬಣ್ಣಿಸಿದ್ದು, ಅವರು “ಭಯಾನಕವಾದ ಪರಿಣಾಮದೊಂದಿಗೆ ಸುಳ್ಳು ದಾವೆಗಳನ್ನು ಮತ್ತು ಪಕ್ಷಪಾತದ ವಾಸ್ತವಾಂಶಗಳನ್ನು ಬಳಸಿದರು” ಎಂದು ಗುರುತಿಸಿದೆ.

ಆತನನ್ನು ಸೋಲಿಸುವುದು ಹೇಗೆ ಎಂಬ ಬಗ್ಗೆ ಕಾಂಗ್ರೆಸ್ ಮತ್ತು ಗಾಂಧಿ-ನೆಹರೂ ಕುಟುಂಬ ಗಂಭೀರವಾದ ಮರುಚಿಂತನೆ ನಡೆಸಬೇಕಾಗಬಹುದು ಎಂದು ಸಂಪಾದಕೀಯ ಅಭಿಪ್ರಾಯಪಟ್ಟಿದೆ.

ಮೋದಿಯು ಭಾಗವಾಗಿರುವ ಹಿಂದೂ ರಾಷ್ಟ್ರೀಯವಾದವು ತನ್ನ ಮೇಲ್ಜಾತಿ ಹಿಂದೂಗಳ ಮೇಲಿನ ಗಮನ, ಕಾರ್ಪೋರೇಟ್ ಪರ ಆರ್ಥಿಕ ಬೆಳವಣಿಗೆ, ಸಾಂಸ್ಕೃತಿಕ ಸಾಂಪ್ರದಾಯಿಕತೆ, “ತೀವ್ರಗೊಂಡ” ಹೆಣ್ಣಿನ ಮೇಲಿನ ಅಸಹಿಷ್ಣುತೆ ಮತ್ತು ದಬ್ಬಾಳಿಕೆ, “ಸರಕಾರಿ ಶಕ್ತಿಯ ಸಾಧನಗಳ ಮೇಲೆ ಬಲವಾದ ಹಿಡಿತ” ಇತ್ಯಾದಿಗಳಿಂದ ಭಾರತವನ್ನು ಇನ್ನಷ್ಟು ಕೆಟ್ಟ ಸ್ಥಿತಿಗೆ ತಳ್ಳಲಿದೆ ಎಂದು ಸಂಪಾದಕೀಯವು ಹೇಳಿದೆ.

ಭಾರತದ ಮುಸ್ಲಿಮರು “ರಾಜಕೀಯ ಅನಾಥ”ರಾಗಿರುವ ಬಗ್ಗೆ ಟಿಪ್ಪಣಿ ಮಾಡಿರುವ ಸಂಪಾದಕೀಯವು, ಸಂಸತ್ತಿನಲ್ಲಿ ಅವರ ಸ್ಥಾನಗಳ ಸಂಖ್ಯೆ ಕುಸಿಯುತ್ತಿರುವ ಬಗ್ಗೆ, ಅವರನ್ನು ಹೇಗೆ ಹಿಂದೂತ್ವವಾದವು ಎರಡನೇ ದರ್ಜೆಯ ಪ್ರಜೆಗಳಾಗಿ ಕಾಣುತ್ತಿದೆ ಎಂಬ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಈ ವರ್ಷದ ಆರಂಭದಲ್ಲಿ ಮೋದಿ ಸರಕಾರವು ಭಾರತ ಮತ್ತು ಪಾಕಿಸ್ತಾನವನ್ನು ಬೇಜವಾಬ್ದಾರಿಯಿಂದ ಯುದ್ಧದ ಅಂಚಿಗೆ ತಳ್ಳಿತ್ತು ಎಂದೂ ಅದು ಹೇಳಿದೆ.

ಭಾರತದಲ್ಲಿ ಭಾರಿ ಸಂಖ್ಯೆಯ ಜನರು ಸರ್ವಾಧಿಕಾರಿ ಆಡಳಿತದ ಪರವಾಗಿದ್ದಾರೆ ಎಂದು ತೋರಿಸಿರುವ 2017ರ ಸಮೀಕ್ಷೆಯೊಂದನ್ನು ಉಲ್ಲೇಖಿಸಿರುವ ಸಂಪಾದಕೀಯವು “ತತ್ತರಿಸುತ್ತಿರುವ ಆರ್ಥಿಕತೆ”ಯ ಹೊರತಾಗಿಯೂ ಮೋದಿಯ ವಿಜಯವು ಬಹುಶಃ ಅಚ್ಚರಿದಾಯಕವಲ್ಲ ಎಂದು ಹೇಳಿದೆ.

ಭಾರತೀಯ ಜನತಾ ಪಕ್ಷದ ಬಗ್ಗೆ ಟಿಪ್ಪಣಿ ಮಾಡಿರುವ ಅದು, “ಭಾರತವನ್ನು ರೂಪುಗೆಡಿಸಿರುವ ಭಾರೀ ಅಸಮಾನತೆ ಕುರಿತು ಬರೇ ಬಾಯ್ಮಾತನಷ್ಟೇ ಆಡುತ್ತಿದೆ” ಮತ್ತು ಭಾರತದ ಪಕ್ಷ ವ್ಯವಸ್ಥೆಯಲ್ಲಿರುವ ಜಾತಿ ಮತ್ತು ಧರ್ಮ ಸಂಘರ್ಷವು ಅದಕ್ಕೆ ಸರಿಯಾಗಿ ಹೊಂದಾಣಿಕೆಯಾಗುತ್ತಿದೆ ಎಂದು ಹೇಳಿದೆ.

ಇದೇ ಹೊತ್ತಿಗೆ ಪ್ರತಿಪಕ್ಷಗಳು ಸಮಭಾವದ ವೇದಿಕೆಯ ಮೂಲಕ ನಿರ್ದಿಷ್ಟವಾದ ಅಭಿಯಾನವನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿರುವ ಅದು, ಅಸ್ಮಿತೆ ಅಥವಾ ಗುರುತನ್ನಾಧರಿಸಿದ ಸ್ಪರ್ಧೆಗೆ ಬದಲಾಗಿ  “ಎಲ್ಲಾ ಭಾರತೀಯರಿಗೆ ಲಾಭವಾಗುವಂತಹ ರಾಜಕೀಯ ಸ್ಪರ್ಧೆಯಲ್ಲಿ” ತೊಡಗಬೇಕಾಗಿದೆ ಎಂದು ಹೇಳಿದೆ. “ಅದಕ್ಕೆ ಪಕ್ಷಗಳು ಭಾರತದ ಬಡಜನರಿಗೆ ಈಗಿರುವುದಕ್ಕಿಂತ ಹೆಚ್ಚು ಹತ್ತಿರವಾಗಬೇಕಾದ ಅಗತ್ಯವಿದೆ” ಎಂದೂ ಸಂಪಾದಕೀಯವು ಸಲಹೆ ಮಾಡಿದೆ.

‘ನ್ಯೂಯಾರ್ಕ್ ಟೈಮ್ಸ್’ ಲೇಖನ

‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಬರೆದಿರುವ ಲೇಖನವೊಂದರಲ್ಲಿ ಪತ್ರಕರ್ತ ಪಂಕಜ್ ಮಿಶ್ರಾ ಅವರು, ಮೋದಿಯ “ಕಚ್ಚಾ ವಿವೇಕ”ದ ಪರಿಣಾಮವಾಗಿ ಭಾರತವು ಹೇಗೆ ಐದು ವರ್ಷಗಳ ಕಾಲ ನರಳಬೇಕಾಯಿತು ಎಂದು ಬಣ್ಣಿಸಿದ್ದಾರೆ ಮಾತ್ರವಲ್ಲ, ಆತನನ್ನು “ಅಪಾಯಕಾರಿಯಾಗುವಷ್ಟು ಅದಕ್ಷ” ಎಂದು ಕರೆದಿದ್ದಾರೆ. 

ಅಲ್ಪಸಂಖ್ಯಾತರು, ಕೆಳ ಜಾತಿಗಳ ಹಿಂದೂಗಳು, ಭಿನ್ನಮತ ಹೊಂದಿರುವ ಪತ್ರಕರ್ತರಿಗೆ ಇರುವ ಬೆದರಿಕೆಯ ಬಗ್ಗೆ ಬರೆದಿರುವ ಮಿಶ್ರಾ, ಮೋದಿಯ ಆಡಳಿತ ಕಾಲದಲ್ಲಿ ಭಾರತವು, ಕೇವಲ ಪ್ರಜಾಪ್ರಭುತ್ವದ ಸಂಸ್ಥೆಗಳು ಮತ್ತು ವಿಚಾರವಾದದ ಮೇಲೆ ಮಾತ್ರವಲ್ಲ; ಮಾನವೀಯ ಸಭ್ಯತೆಯ ಮೇಲೆಯೂ ಅಮಾನುಷ ಹಲ್ಲೆ ನಡೆದಿದೆ ಎಂದು ಹೇಳಿದ್ದಾರೆ.

‘ನರೇಂದ್ರ ಮೋದಿ ಅಸೂಯೆ ಮತ್ತು ದ್ವೇಷದ ಮೂಲಕ ಭಾರತವನ್ನು ಹೇಗೆ ವಂಚಿಸಿದರು’ ಎಂಬ ಶೀರ್ಷಿಕೆ ಇರುವ ಈ ಲೇಖನದಲ್ಲಿ ಮಿಶ್ರಾ, ಮತದಾರರು “ಈ ದುಃಸ್ವಪ್ನ”ವನ್ನು ಮುಂದುವರಿಸಲು ಬಯಸಿದ್ದಾರೆ ಎಂದು ಕಟಕಿಯಾಡಿದ್ದಾರೆ.

2014ರ ಚುನಾವಣೆಯ ವೇಳೆ ನೀಡಿದ ಭರವಸೆಗಳನ್ನು ಈಡೇರಿಸಲು ಮೋದಿ ಸಂಪೂರ್ಣವಾಗಿ ವಿಫಲವಾಗಿರುವುದನ್ನು ಪರಿಗಣಿಸಿದರೆ, ಆತನ ಅಭೇದ್ಯ ವರ್ಚಸ್ಸಿನ ಮೂಲ ಇನ್ನಷ್ಟು ನಿಗೂಢವಾಗಿ ಕಾಣಿಸುತ್ತದೆ ಎಂದು ಮಿಶ್ರಾ ಹೇಳಿದ್ದಾರೆ.

ಕಾರ್ಪೋರೇಟ್ ಒಡೆತನದ ಮಾಧ್ಯಮಗಳು “ಮೋದಿಯನ್ನು ಭಾರತದ ಸಂರಕ್ಷಕನೆಂದು ಜ್ವರಹಿಡಿದವರಂತೆ ಕಟ್ಟಿಕೊಟ್ಟವು” ಎಂದೂ ಮಿಶ್ರಾ ಹೇಳಿದ್ದಾರೆ.

2014ರಿಂದಲೂ ಆಕರ್ಷಕವಾದ ಕಟ್ಟುಕತೆಗಳನ್ನು ಹೇಳುವ ಮೋದಿಯ ಸಾಮರ್ಥ್ಯಕ್ಕೆ ಟ್ರೋಲ್ ಪ್ರಾಬಲ್ಯದ ಸಾಮಾಜಿಕ ಮಾಧ್ಯಮಗಳು, ಮತ್ತು ರಣಹದ್ದುಗಳಂತೆ ಇರುವ ಭಟ್ಟಂಗಿ ಮಾಧ್ಯಮಗಳು ಇನ್ನಷ್ಟು ಉಪ್ಪುಖಾರ ಹಚ್ಚಿದವು ಎಂದು ಹೇಳಿರುವ ‘ಏಜ್ ಆಫ್ ಏಂಗರ್’ ಪುಸ್ತಕ ಬರೆದಿರುವ ಲೇಖಕರು ಹೇಳಿದ್ದಾರೆ. ಚುನಾವಣಾ ಆಯೋಗವು “ನಾಚಿಕೆ ಇಲ್ಲದಷ್ಟು ಪಕ್ಷಪಾತಿಯಾಗಿತ್ತು”ಎಂದು ಪ್ರತಿಪಕ್ಷಗಳು ಹೇಳುವಾಗ, ನಿಜವನ್ನೇ ಹೇಳುತ್ತಿವೆ ಎಂದೂ ಮಿಶ್ರಾ ಹೇಳಿದ್ದಾರೆ.

ಮೋದಿ ಭಾರತದಲ್ಲಿ ಸ್ವಯಂ ಬೆಳೆದು ಬಂದಿದ್ದ ವಸಾತೋತ್ತರ ಆಡಳಿತದ ಬಗೆಗಿನ ದೀರ್ಘಕಾಲೀನ ಸಿಟ್ಟನ್ನು ಬಳಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ ಎಂದು ಹೇಳಿರುವ ಮಿಶ್ರಾ, ಸಮೃಧ್ಧ ಪಾಶ್ಚಾತ್ಯರ ಜೊತೆ ಸೇರಿಕೊಳ್ಳಲು ದಾಪುಗಾಲಿಟ್ಟಿರುವ ದೇವರಂತೆ ಕೈಗೆಟಕದ ಆಳುವ ವರ್ಗಗಳ ಜೊತೆಗೆ ಮಾತುಕತೆಗೆ ಹಿಂದಿನ ಸರಕಾರಗಳು ಯಾವುದೇ ದಾರಿಯನ್ನು ತೆರೆದಿಡದ ಪರಿಣಾಮವಾಗಿ ನಮ್ಮನ್ನು ಕ್ರೂರ ರೀತಿಯಿಂದ ಇತಿಹಾಸದಲ್ಲಿ ನಿಂತ ನೀರಾಗಿಸಿದಂತಾಗಿದೆ ಎಂದಿದ್ದಾರೆ.ಇದೇ ಹೊತ್ತಿಗೆ ವಿಡಂಬನೆಯನ್ನು ಆಧರಿಸಿದ ‘ದಿ ಓನಿಯನ್’ ವೆಬ್‌ಸೈಟ್ ಮೋದಿಯ ಚಿತ್ರವೊಂದನ್ನು ಪ್ರಕಟಿಸಿ, “ಜನಾಂಗೀಯವಾದಿ ಬಲಪಂಥೀಯ ಸರ್ವಾಧಿಕಾರಿಯೊಬ್ಬನನ್ನು ಆರಿಸುವ ಮೂಲಕ ಭಾರತವು ಪ್ರಥಮ ವಿಶ್ವ ಸ್ಥಾನದತ್ತ ಮುನ್ನುಗ್ಗುತ್ತಿದೆ”ಎಂದು ವ್ಯಂಗ್ಯವಾದ ಅಡಿಬರಹ ಪ್ರಕಟಿಸಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಪೃಶ್ಯ ಅಲೆಮಾರಿ ಸಮುದಾಯಗಳನ್ನು ಪ್ರವರ್ಗ ಸಿಗೆ ಸೇರಿಸಿದ್ದನ್ನು ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡ ರಾಜ್ಯ ಸರ್ಕಾರ

ಆಗಸ್ಟ್‌ 18 2025ರಂದು ರಾಜ್ಯ ಸರ್ಕಾರ ಒಳಮೀಸಲಾತಿ ವರ್ಗೀಕರಣ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟವು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿಯನ್ನು ದಾಖಲಿಸಿತ್ತು. ರಾಜ್ಯ ಸರ್ಕಾರ...

ಐದು ವರ್ಷಗಳಲ್ಲಿ ಸುಮಾರು ಒಂಬತ್ತು ಲಕ್ಷ ಜನರು ಪೌರತ್ವ ತ್ಯಜಿಸಿದ್ದಾರೆ: ಎಂಇಎ

ಕಳೆದ ಐದು ವರ್ಷಗಳಲ್ಲಿ ಸುಮಾರು ಒಂಬತ್ತು ಲಕ್ಷ ಜನರು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ. ಜಾಗತಿಕ ಚಲನಶೀಲತೆ ಹೆಚ್ಚಾದಂತೆ ಮತ್ತು ವೈಯಕ್ತಿಕ ಆಯ್ಕೆಗಳು ವಲಸೆ ಪ್ರವೃತ್ತಿಯನ್ನು ರೂಪಿಸುತ್ತಿರುವುದರಿಂದ ವಾರ್ಷಿಕವಾಗಿ ಸಂಖ್ಯೆಗಳು ಗಮನಾರ್ಹವಾಗಿ ಬದಲಾಗಿವೆ...

ನಟ ದಿಲೀಪ್ ಖುಲಾಸೆ: ನ್ಯಾಯಾಲಯದ ಕಲಾಪವನ್ನು ವಿರೂಪಗೊಳಿಸಬೇಡಿ ಎಂದು ಮಾಧ್ಯಮ ಮತ್ತು ವಕೀಲರಿಗೆ ಎಚ್ಚರಿಕೆ ನೀಡಿದ ನ್ಯಾಯಾದೀಶೆ ಹನಿ ವರ್ಗೀಸ್ 

2017 ರಲ್ಲಿ ದಕ್ಷಿಣ ಭಾರತದ ನಟಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಅವರನ್ನು ಖುಲಾಸೆಗೊಳಿಸಿದ ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಧೀಶೆ ಹನಿ ಎಂ ವರ್ಗೀಸ್, ತಮ್ಮ ತೀರ್ಪಿನ...

ರಾಜ್‌ಕೋಟ್‌ ಬಾಲಕಿ ಅತ್ಯಾಚಾರ ಪ್ರಕರಣ; ಆಕ್ರೋಶ ಹೊರಹಾಕಿದ ಶಾಸಕ ಜಿಗ್ನೇಶ್‌ ಮೇವಾನಿ; ಕಠಿಣ ಶಿಕ್ಷೆಗೆ ಆಗ್ರಹ

ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಏಳು ವರ್ಷದ ಬಾಲಕಿ ಅತ್ಯಾಚಾರ ಹಾಗೂ ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಧಿಸಿದಂತೆ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್ ಶಾಸಕ ಜಿಗ್ನೇಶ್‌ ಮೇವಾನಿ; ಆರೋಪಿಯನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಘಟನೆ ಕುರಿತು...

ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ₹5 ಲಕ್ಷ ಪ್ರೋತ್ಸಾಹಧನ ನೀಡಲು BJP ಕಾರ್ಯಕರ್ತರ ಮನವಿ

ಮಂಡ್ಯ:  ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ‘ಶಾದಿ ಭಾಗ್ಯ’ದಂತೆ ರೈತರನ್ನು ಮದುವೆಯಾಗುವ ಯುವತಿಯರಿಗೆ ಸರ್ಕಾರದ ವತಿಯಿಂದ ರೂ.5ಲಕ್ಷ ಪ್ರೋತ್ಸಾಹಧನ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರ ಮೂಲಕ...

ನಿವೃತ್ತಿ ನಿರ್ಧಾರ ಹಿಂತೆಗೆದುಕೊಂಡ ವಿನೇಶ್ ಫೋಗಟ್; ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ತಯಾರಿ

ಕುಸ್ತಿಪಟು ವಿನೇಶ್ ಫೋಗಟ್ ಸ್ಪರ್ಧಾತ್ಮಕ ಕ್ರೀಡೆಗೆ ಮರಳುವುದಾಗಿ ಘೋಷಿಸುವ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದಾರೆ. 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಅನ್ನು ಗುರಿಯಾಗಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಕುರಿತ ಹೇಳಿಕೆ ಬಿಡುಗಡೆ ಮಾಡಿರುವ...

ಗುಜರಾತ್‌ನ ವಲ್ಸಾದ್‌ನಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದು ಐವರು ಕಾರ್ಮಿಕರಿಗೆ ಗಾಯ

ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಔರಂಗ ನದಿಗೆ ನಿರ್ಮಾಣ ಹಂತದಲ್ಲಿರುವ ಸೇತುವೆಯ ಮೇಲಿನ ಗಿರ್ಡರ್ ಕುಸಿದಿದ್ದು, ಐವರು ಕಾರ್ಮಿಕರು ಗಾಯಗೊಂಡಿದ್ದಾರೆ.  ಹಳೆಯ ಸೇತುವೆಗೆ ಸಮಾನಾಂತರವಾಗಿ ಹೊಸ ಸೇತುವೆಯನ್ನು ನಿರ್ಮಿಸಲಾಗುತ್ತಿರುವ ಕೈಲಾಶ್ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ 8...

ಆಮದು ಸುಂಕ ಹೆಚ್ಚಿಸಿದ ಮೆಕ್ಸಿಕೊ: ಭಾರತದ ವಾಹನ-ಉಕ್ಕು ರಫ್ತಿನ ವೆಚ್ಚ ಹೆಚ್ಚಳ ಸಾಧ್ಯತೆ

ಸ್ಥಳೀಯ ಕೈಗಾರಿಕೆಗಳನ್ನು ರಕ್ಷಿಸುವ ಗುರಿಯ ಭಾಗವಾಗಿ, ಭಾರತ, ಚೀನಾ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಏಷ್ಯಾದ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ಹೆಚ್ಚಿನ ಸುಂಕ ಹೆಚ್ಚಳ ನಿರ್ಧಾರವನ್ನು ಮೆಕ್ಸಿಕೋ ಅನುಮೋದಿಸಿದೆ. ಮೆಕ್ಸಿಕನ್...

Cognizant ಕಂಪನಿಗೆ 99 ಪೈಸೆಗೆ ಒಂದು ಎಕರೆ ಭೂಮಿ: ವಿಶಾಖಪಟ್ಟಣದಲ್ಲಿ ತಾತ್ಕಾಲಿಕ ಕಛೇರಿ ಉದ್ಘಾಟನೆ

ಕಳೆದ ಜೂನ್‌ ನಲ್ಲಿ ಸುದ್ದಿಗೆ ಗ್ರಾಸವಾಗಿದ್ದ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ Cognizant ಕಂಪನಿಯು 1582 ಕೋಟಿ ಹೂಡಿಕೆ ಮಾಡಿ 8 ಸಾವಿರ ಉದ್ಯೋಗ ಸೃಷ್ಠಿ ಮಾಡಲಾಗುವುದೆಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸರ್ಕಾರ ಘೋಷಿಸಿತ್ತು....

ಅಲ್ಪಸಂಖ್ಯಾತ ಶಾಲೆಗಳಿಗೆ ಆರ್.ಟಿ.ಇ ಕಾಯ್ದೆಯಿಂದ ವಿನಾಯಿತಿ ತೀರ್ಪಿನ ವಿರುದ್ಧ ಅರ್ಜಿ; ಎನ್.ಜಿ.ಒಗೆ ದಂಡ ವಿಧಿಸಿದ ಸುಪ್ರೀಂ  

ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ನಿಬಂಧನೆಗಳಿಂದ ಅಲ್ಪಸಂಖ್ಯಾತ ಶಾಲೆಗಳಿಗೆ ವಿನಾಯಿತಿ ನೀಡಿದ್ದ, ತನ್ನ ಹಿಂದಿನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರವಾಗಿ ಖಂಡಿಸಿದೆ.  ಜಸ್ಟೀಸ್ ಬಿ.ವಿ. ನಾಗರತ್ನ ಮತ್ತು...